ನಿಶಾ ಸ್ನಾನ ಮಾಡಿಕೊಂಡು ಅಪ್ಪನ ಮಡಿಲಲ್ಲಿ ಕುಳಿತಿದ್ದು ಅವಳಿಗೆ ತಿಂಡಿ ತಿನ್ನಿಸಲು ಎಲ್ಲರೂ ಹರಸಾಹಸ ಪಡುತ್ತಿದ್ದು ಅವಳು ಮಾತ್ರ ತನಗೆ ತಿಂಡಿ ಬೇಡವೆಂದು ತಲೆ ಅಳ್ಳಾಡಿಸುತ್ತಿದ್ದಳು.
ಹರೀಶ......ಚಿನ್ನಿ ಹಠ ಮಾಡಬಾರದು ಕಂದ ಮೊದಲು ತಿಂಡಿ ತಿನ್ನು ಅಮ್ಮನೂ ಬರ್ತಾಳೆ.
ನಿಶಾ.....ನನ್ನೆ ಬೇಲ ಪಪ್ಪ ನನ್ನೆ ಮಮ್ಮ ಬೇಕು.
ಹರೀಶ.....ನಿನ್ನ ಜೊತೆಗಿಲ್ಲಿ ಶೀಲಾ ಮಮ್ಮ ಇದಾಳಲ್ಲ ಚಿನ್ನಿ.
ಶೀಲಾಳ ಕಡೆ ನೋಡಿದ ನಿಶಾ......ನಿನ್ನಿ ಮಮ್ಮ ಲಿಲ್ಲ...ನಿನ್ನಿ ಮಮ್ಮ
ಎಲ್ಲಿ ? ನನ್ನೆ ನಿನ್ನಿ ಮಮ್ಮ ಬೇಕು.
ಅಶೋಕ.....ಅದ್ಯಾರು ನಿನ್ನಿ ಮಮ್ಮ ?
ಶೀಲಾ......ನಮ್ಮಮ್ಮ ಎಲ್ಲಿ ಅವಳೇ ಬೇಕೆಂದು ಕೇಳ್ತಿದ್ದಾಳೆ.
ಕೈಯಲ್ಲಿ ತಟ್ಟೆ ಹಿಡಿದು ತಿಂಡಿ ತಿನ್ನಿಸಲು ಪ್ರಯತ್ನಿಸುತ್ತಿದ್ದ ಅನು......
ಚಿನ್ನಿ ಮಮ್ಮ ಈಗ ಬರ್ತಾಳೆ ನೀನು ತಿಂಡಿ ತಿನ್ನದಿದ್ದರೆ ಅಮ್ಮ ಬರಲ್ಲ ಅದಕ್ಕೆ ಮೊದಲು ತಿಂಡಿ ತಿಂದು ನೀನು ಲಾಲಾ ಕುಡಿಯುವಷ್ಟರಲ್ಲೇ ಅಮ್ಮ ಓಡೋಡಿ ಬರ್ತಾಳೆ.
ಆಂಟಿಯ ಕೈಯನ್ನು ದೂರ ತಳ್ಳುತ್ತ ತಿಂಡಿ ಬೇಡ ನಾನು ತಿನ್ನಲ್ಲಾ ಅಂತ ನಿಶಾ ಒಂದೇ ಹಠ ಹಿಡಿದಿದ್ದಳು.
ಶೀಲಾ.....ಮಮ್ಮ ಬಂದು ತಿಂಡಿ ತಿಂದ್ಯಾ ಚಿನ್ನಿ ಅಂದರೇನು ಹೇಳ್ತಿ ?
ಶೀಲಾಳನ್ನು ಪಿಳಿಪಿಳಿ ಅಂತ ನೋಡಿದ ನಿಶಾ....ಲಿಲ್ಲ ತಿಲ್ಲಿಲ್ಲ
ಶೀಲಾ.....ಯಾಕೆ ತಿಂದಿಲ್ಲ ಅಂತ ಮಮ್ಮ ಕೇಳ್ತಾಳೆ.
ನಿಶಾ ತನ್ನ ಪುಟ್ಟ ಮೆದುಳಿನಲ್ಲಿ ಯೋಚಿಸುತ್ತ.......ಆಂತಿ ಕೊಲ್ಲಿಲ್ಲ
ಅವಳ ಉತ್ತರಕ್ಕೆ ಎಲ್ಲರ ಮುಖದಲ್ಲೂ ಮುಗುಳ್ನಗು ಮೂಡಿದರೆ ಅನುಷ ಕೂಡ ನಗುತ್ತ.......ಆಂಟಿ ನಿಂಗೆ ತಿಂಡಿ ಕೊಡ್ಲಿಲ್ವಾ ಚಿನ್ನಿ.
ನಿಶಾ ಇಲ್ಲ ಎಂದು ತಲೆಯಳ್ಳಾಡಿಸಿ ನಗುತ್ತ ಕೈಯಲ್ಲಿದ್ದ ಟೆಡ್ಡಿ ಬೇರಿಗೆ ಮುಖ ಹುದುಗಿಸಿ ಕುಳಿತಳು.
ಶೀಲಾ.....ನೀವು ಫೋನ್ ಮಾಡಿ ಇಬ್ಬರೂ ಎಷ್ಟೊತ್ತಿಗೆ ಬರುತ್ತಾರೆ ಅಂತ ಕೇಳಬಾರದ ನೀತು ಬರುವವರೆಗೂ ಚಿನ್ನಿ ತಿಂಡಿ ತಿನ್ನಲ್ಲ.
ಹರೀಶ.....ನೆನ್ನೆ ರಾತ್ರಿ ಮಾತನಾಡುವಾಗಲೇ ನನಗೆ ಭಯವಾಗ್ತಿತ್ತು ಈವತ್ತು ಬೆಳಿಗ್ಗೇನೂ ಫೋನ್ ಮಾಡಿದ್ಲು ನಾನೇ ಎತ್ತಲಿಲ್ಲ.
ರವಿ....ಇಲ್ಲಿಗೆ ಬಂದಾಗ ಅವರಿಗೂ ವಿಷಯ ಗೊತ್ತಾಗಲ್ಲವ ಅದಕ್ಕೆ ಮೊದಲೇ ನಾವು ತಿಳಿಸುವುದು ಒಳ್ಳೆಯದು.
ಅನುಷ......ಬೇಡ ಅಣ್ಣ ಮನೆಗೆ ಬಂದ ನಂತರವೇ ಹೇಳುವುದು ಒಳ್ಳೇದು ಅಷ್ಟು ದೂರದಿಂದ ಡ್ರೈವ್ ಮಾಡಿಕೊಂಡು ಬರಬೇಕಿದೆ ನಾವು ಅವರಿಗೆ ಗಾಬರಿಪಡಿಸುವುದು ಬೇಡ.
ನೀತು...ರಜನಿ ಮನೆಗೆ ಬಂದು ಆಗಲೇ ಹತ್ತು ನಿಮಿಷಗಳಾಗಿದ್ದು ಹೊರಗೆ ಕಿಟಕಿಯ ಪಕ್ಕ ನಿಂತು ಒಳಗೆ ಇಣುಕುತ್ತಿದ್ದರು.
ನೀತು.....ನಾನು ಹೇಳಲಿಲ್ಲವಾ ಇವರೆಲ್ಲರೂ ಯಾವುದೋ ವಿಷಯ
ನಮ್ಮಿಂದ ಮುಚ್ಚಿಡುತ್ತಿದ್ದಾರೆ ಅಂತ ನೊಡು ನಿಜವಾಯಿತು.
ರಜನಿ...ಇವತ್ತು ರವಿ..ಅಶೋಕ ಕೂಡ ಫ್ಯಾಕ್ಟರಿಗೆ ಹೋಗಿಲ್ಲ ಅವರ ಜೊತೆ ಪ್ರತಾಪ್ ಸಹ ಮನೆಯ ಡ್ರೆಸ್ಸಿನಲ್ಲೇ ಇದ್ದಾನೆ ನಡಿ ಒಳಗೋಗಿ ಏನು ವಿಷಯವೆಂದು ತಿಳಿಯೋಣ.
ಬಾಗಿಲಿನ ಕಡೆಯೇ ನೋಡುತ್ತಿದ್ದ ನಿಶಾ ಅಮ್ಮ ಮನೆಯೊಳಗೆ ಬಂದ ತಕ್ಷಣ ಸೋಫಾದಿಂದ ಕೆಳಗಡೆ ಇಳಿಯದೆ ಕುಳಿತಲ್ಲಿಂದಲೇ ಮಮ್ಮ... ಮಮ್ಮ...ಎಂದು ಕೂಗಿದರೂ ಉಳಿದವರು ಟೆನ್ಷನ್ ಆಗಿಹೋದರು.
ನಿಶಾಳ ಎಡಗೈನ ಮೊಣಕೈಗೆ ಮತ್ತು ಎಡಗಾಲಿನ ಮಂಡಿಗೆ ಪೂರ್ತಿ ಬ್ಯಾಂಡೇಜ್ ಹಾಕಲಾಗಿದ್ದು ಕುಳಿತಲ್ಲಿಂದಲೇ ತನ್ನನ್ನೆತ್ತಿಕೊಳ್ಳುವಂತೆ ಅಮ್ಮನ ಕಡೆ ಕೈ ಚಾಚುತ್ತಿದ್ದಳು. ಮಗಳ ಪಕ್ಕದಲ್ಲಿದ್ದ ಗಂಡನ ಎಡಗೈ
ಆರ್ಮ್ ರೆಸ್ಟಿನಲ್ಲಿ ಅಲುಗಾಡದಂತೆ ಕುತ್ತಿಗೆಗೆ ನೇತಾಕಿರುವುದನ್ನು ಕಂಡ ನೀತುವಿನ ಕಂಗಳಲ್ಲಿ ಕಂಬನಿ ಹರಿಯತೊಡಗಿತು. ಮಗಳಿಗೆ ಬ್ಯಾಂಡೇಜ್ ಹಾಕಿರುವುದನ್ನು ನೋಡಿ ಗಾಬರಿಗೊಂಡ ರಜನಿ ತಕ್ಷಣ ಅವಳನ್ನೂತ್ತಿಕೊಂಡು ಗಾಯ ಪರೀಕ್ಷಿಸಿ ಮುದ್ದಾಡಿದರೆ ನೀತು ನಿಂತ ಜಾಗದಲ್ಲೇ ಕಲ್ಲಾಗಿ ಹೋಗಿದ್ದಳು. ಮಗಳು ಮಮ್ಮ...ಮಮ್ಮ..... ಎಂದು ಕೂಗಿದಾಗ ಎಚ್ಚೆತ್ತ ನೀತು ಮಗಳನ್ನೆತ್ತಿಕೊಂಡು ಮುದ್ದಾಡುತ್ತ ಅವಳನ್ನು ವಿಚಾರಿಸಿಕೊಳ್ಳತೊಡಗಿದರೆ ರಜನಿ ಎಲ್ಲರಿಗೂ ಏನು ನಡೆಯಿತೆಂದು ಕೇಳುತ್ತಿದ್ದಳು. ರಜನಿಯ ಪ್ರಶ್ನೆಗಳಿಗೆ ಯಾರು ಏನೂ ಉತ್ತರಿಸದೆ ನೀತು ಮತ್ತು ನಿಶಾಳತ್ತಲೇ ದೃಷ್ಟಿ ನೆಟ್ಟಿದ್ದರು. ಅನುಷ ಕೈನಿಂದ ತಿಂಡಿಯ ಪ್ಲೇಟನ್ನು ಪಡೆದ ನೀತು ಮಗಳನ್ನು ಮನೆಯಾಚೆ ಕರೆತಂದು ಹುಲ್ಲುಹಾಸಿನ ನೆರಳಲ್ಲಿ ತನ್ನ ಮಡಿಲಿನಲ್ಲಿ ಕೂರಿಸಿಕೊಂಡೆ ತಿನ್ನಿಸತೊಡಗಿದರೆ ನಿಶಾ ಬೇಡ ಎನ್ನದೆ ತಿನ್ನತೊಡಗಿದಳು.
ನಿಶಾ.....ಮಮ್ಮ ನಾನು ಪಪ್ಪ ಅಣ್ಣ ಕಾಲು ಡಮಾಲ್ ಬಿದ್ದಿ ನಂಗಿ ಗೀಯ...ಗೀಯ...ಎಂದು ತನ್ನ ಕೈಕಾಲುಗಳನ್ನು ತೋರಿಸುತ್ತಿದ್ದಳು.
ಅಷ್ಟೂ ಸಮಯ ಮಗಳಿಗಾಗುತ್ತಿದ್ದ ನೋವನ್ನು ತಾನೇ ಅನುಭವಿಸಿ ನೊಂದುಕೊಳ್ಳುತ್ತಿದ್ದ ನೀತು ಅವಳ ಮಾತಿನಿಂದ ಘಟನೆ ಯಾವ ರೀತಿ ಸಂಭವಿಸಿತು ಮಗಳ ಜೊತೆ ಗಂಡ ಮಗನಿಗೂ ಪೆಟ್ಟಾಯಿತು ಎನ್ನುತ್ತಿರುವಳಲ್ಲ ಎಂದಾಲೋಚಿಸಿ ಮಗಳಿಗೆ ತಿಂಡಿ ತಿನ್ನಿಸಿದ ಬಳಿಕ ಮನೆಯೊಳಗೆ ಮರಳಿದಳು.
ನೀತು.....ರೀ ನಾನು ಪಪ್ಪ ಅಣ್ಣ ಬಿದ್ದೆವು ಅನ್ನುತ್ತಿದ್ದಾಳೆ ಏನಾಯಿತು ಅಂತ ನೀವು ಹೇಳಿ ? ಗಾಡಿಯಿಂದ ಬಿದ್ದಿರಾ ? ಗಿರೀಶ ಸುರೇಶನಿಗೆ ಏನಾಗಿದೆ ? ಹೇಳ್ರಿ ಸುಮ್ಮನಿದ್ದೀರಲ್ಲ .
ಹರೀಶ....ನೆನ್ನೆ ಸಂಜೆ ನಾನು...ಚಿನ್ನಿ ಮತ್ತು ಸುರೇಶ ಟೌನಿನ ಕಡೆ ಹೋಗಿದ್ದೆವು. ಅಲ್ಲಿವಳಿಗೆ ಐಸ್ ಕ್ರೀಂ ತೆಗೆದುಕೊಟ್ಟು ಬರುತ್ತಿದ್ದಾಗ ಒಂದು ಕಾರು ಸ್ಪೀಡಾಗಿ ಬಂದು ನಮ್ಮ ಬೈಕಿಗೆ ಹಿಂದಿನಿಂದ ಗುದ್ದಿತು. ಕಾರು ಗುದ್ದಿದ ರಭಸಕ್ಕೆ ನಾವು ಗಾಡಿ ಸಮೇತ ಕೆಳಗೆ ಬಿದ್ದ ಕಾರಣ ಗಾಯಗಳಾಗಿದೆ. ಸುರೇಶ ತಂಗಿಗೆ ಪೆಟ್ಟಾಗದಂತೆ ತಬ್ಬಿಕೊಂಡಿದ್ದಕ್ಕೇ ಚಿನ್ನಿಗೆ ಜಾಸ್ತಿ ಗಾಯಗಳಾಗಿಲ್ಲ ತರಚಿದ ಗಾಯವಿದೆ ಅಷ್ಟೆ.
ರಜನಿ.....ಕಾರಿನವನು ನಿಲ್ಲಿಸದೆ ಓಡಿಹೋದನಾ ?
ಹರೀಶ.......ಇಲ್ಲ ನಮಗೆ ಗುದ್ದಿದ ನಂತರ ಮುಂದೆ ಹೋಗುತ್ತಿದ್ದ ಇನ್ನೊಂದು ಫ್ಯಾಮಿಲಿಯವರಿಗೂ ಗುದ್ದಿ ಬೀಳಿಸಿ ಮರವೊಂದಕ್ಕೆ ಕಾರನ್ನು ಡಿಕ್ಕಿ ಹೊಡೆಸಿ ನಿಂತ.
ರಜನಿ.....ಅವನು ಅರೆಸ್ಟಾದ ತಾನೇ ?
ಅಶೋಕ.....ಅದೇ ಕಾರಣದಿಂದ ಬೇಸರವಾಗಿ ಪ್ರತಾಪ್ ಠಾಣೆಗೂ ಹೋಗದೆ ಮನೇಲಿದ್ದಾನೆ.
ಹರೀಶ......ನೀನೇ ಇವನಿಗೆ ಬುದ್ದಿ ಹೇಳು ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಿಡ್ತೀನಿ ಅಂತಿದ್ದಾನೆ.
ನೀತು.....ಸುರೇಶ ಎಲ್ಲಿ ? ಅವನಿಗೇನಾಯಿತು ? ನಿಮ್ಮ ಗಾಯ....
ಹರೀಶ...ನನ್ನ ಎಡಗೈನ ಮೊಣಕೈಯಿಗೆ ಏಟಾಗಿದೆ ಅದಕ್ಕೆ ಆಡಿಸದೆ ಇರಲಿ ಅಂತ ಆರ್ಮ್ ರೆಸ್ಟ್ ಹಾಕಿದ್ದಾರೆ ಜೊತೆಗೆ ಕಾಲಾಗೂ ಸ್ವಲ್ಪ ಪೆಟ್ಟಾಗಿದೆ ಮೂರ್ನಾಲ್ಕು ದಿನಗಳಲ್ಲಿ ಸರಿ ಹೋಗುತ್ತೆ ಅಂದಿದ್ದಾರೆ.
ನೀತು.....ಸುರೇಶ.....?
ಹರೀಶ...ಚಿನ್ನಿ ನಮ್ಮಿಬ್ಬರ ಮಧ್ಯೆ ಕೂತಿದ್ದಳಲ್ಲ ಅವಳಿಗೇನು ಆಗದೆ ಇರಲೆಂದು ಸುರೇಶ ಇವಳನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದ. ನಾವು ಕೆಳಗೆ ಬಿದ್ದಾಗ ಅವನ ಎಡಗೈ ಫ್ರಾಕ್ಚರ್ ಆಗಿದೆ ಜೊತೆಗೆ ಕಾಲುಗಳಿಗೆ ಸ್ವಲ್ಪ ಪೆಟ್ಟಾಗಿದೆ ಕೆಳಗೆ ಅವನ ಹಳೇ ರೂಮಲ್ಲೇ ಮಲಗಿದ್ದಾನೆ.
ನೀತು ಮಗಳನ್ನೆತ್ತಿಕೊಂಡು ಕಣ್ಣೀರಿನೊಂದಿಗೆ ಮಕ್ಕಳ ಹಳೇ ರೂಂ ಒಳಗೆ ಹೋದರೆ ಮಿಕ್ಕವರೂ ಅವಳನ್ನು ಹಿಂಬಾಲಿಸಿದರು. ಸುರೇಶ ತನ್ನ ಎಡಗೈಯಿಗೆ ಪ್ಲಾಸ್ಟರ್ ಜೊತೆ ಆರ್ಮ್ ರೆಸ್ಟ್ ಹಾಕಿಸಿಕೊಂಡಿದ್ದು ಎಡಗಾಲಿಗೂ ಬ್ಯಾಂಡೇಜ್ ಹಾಕಿಸಿಕೊಂಡು ಮಂಚದಲ್ಲಿ ಒರಗಿ ಕುಳಿತಿದ್ದರೆ ರಶ್ಮಿ ಅವನಿಗೆ ತಿಂಡಿ ತಿನ್ನಿಸುತ್ತಿದ್ದಳು.
ಸುರೇಶ.....ಯಾವಾಗ ಬಂದೆ ಅಮ್ಮ ?
ನೀತು ಮಗನ ತಲೆ ಸವರಿ ಹಣೆಗೆ ಮುತ್ತಿಟ್ಟರೆ ನಿಶಾ ಅಣ್ಣನ ಕೈಯಿಗೆ ಆಗಿರುವ ಗಾಯವನ್ನು ಪುಟ್ಟ ಕೈಗಳಿಂದ ಮುಟ್ಟಿ ನೋಡುತ್ತಿದ್ದಳು.
ನೀತು......ತಂಗಿಗೆ ಪೆಟ್ಟಾಗದಿರಲಿ ಅಂತ ನೀನು ಕೈ ಮುರಿದುಕೊಂಡೆ ತುಂಬ ದೊಡ್ಡವನಾಗಿ ಬಿಟ್ಟೆ ಕಣೋ.
ಸುರೇಶ.....ಅಮ್ಮ ಅಣ್ಣನಿದ್ದೂ ನನ್ನ ಮುದ್ದಿನ ತಂಗಿಗೆ ಪೆಟ್ಟಾಗದೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ ಅಲ್ಲವ. ಅವಳಿಗೆ ಪೆಟ್ಟಾದರೆ ನೋವು ನನಗೆ ತಾನೇ ಆಗುವುದು. ನನಗೇನಂತ ದೊಡ್ಡ ಪೆಟ್ಟಾಗಿಲ್ಲ ಅಮ್ಮ ಆದರೆ ಎದ್ದು ಓಡಾಡಬೇಡ ಅಂತ ಹೇಳಿ ನನ್ನನ್ನು ಇಲ್ಲಿಯೇ ಮಲಗಿಸಿಬಿಟ್ಟಿದ್ದಾರೆ.
ನೀತು....ನೀನಿಲ್ಲೇ ಮಲಗಿರು ಕಂದ ಏನೇ ಬೇಕಿದ್ದರೂ ನಮ್ಮನ್ನು ಕೂಗು ಆದರೂ ಮಂಚದಿಂದ ಕೆಳಗಿಳಿಯದೆ ರೆಸ್ಟ್ ತೆಗೆದುಕೋ.
ಸುರೇಶ....ಅಮ್ಮ ಸುಮ್ಮನೆ ಮಲಗಿರಲು ಬೇಸರವಾಗುತ್ತೆ ಹೊರಗೆ ಬಂದರೆ ಟಿವಿ ನೋಡಿಯಾದರೂ ಟೈಂ ಪಾಸಾಗುತ್ತೆ.
ನೀತು.......ಅಶೋಕ ನೀವು ಪ್ರತಾಪನ ಜೊತೆ ಇವನನ್ನು ಮೇಲಿನ ರೂಮಿಗೆ ಶಿಫ್ಟ್ ಮಾಡಿ ಅಲ್ಲಿ ಟಿವಿಯೂ ಇದೆಯಲ್ಲ.
ರವಿ.ಮೊದಲು ತಿಂಡಿ ತಿಂದು ಮಾತ್ರೆ ತೆಗೆದುಕೋ ಆಮೇಲೆ ನಿನ್ನನ್ನು ಮೇಲಿನ ಮನೆಗೆ ಕರೆದೊಯ್ಯೋದು.
ಅಣ್ಣನ ಪಕ್ಕದಲ್ಲಿದ್ದ ನಿಶಾ ಅವನ ಗಾಯಗಳನ್ನು ಮುಟ್ಟಿ ನೋಡುತ್ತ ಉಫ್....ಉಫ್....ಎಂದು ಊದುತ್ತಿರುವುದಕ್ಕೆ ಸುರೇಶ ನಗುತ್ತ.....
ಚಿನ್ನಿ ಅಣ್ಣ ನಿನ್ಜೊತೆ ಸ್ವಲ್ಪ ದಿನ ಆಟ ಆಡಲಾಗುವುದಿಲ್ಲ ನೀನೊಬ್ಳೇ ಆಡಿಕೊಳ್ಳಬೇಕು.
ನಿಶಾ ತೊದಲು ನುಡಿಯಲ್ಲಿ.....ಆಟ ಬೇಲ ಅಣ್ಣ....ಆಟ ಬೇಲ ನಿನ್ನಿ ಗೀಯ ಆಟ ಬೇಲ....ಎಂದು ತಲೆ ಅಳ್ಳಾಡಿಸುತ್ತಿದ್ದಳು.
ಸುರೇಶನ ತಿಂಡಿಯಾದ ಬಳಿಕ ಅವನನ್ನು ಮೇಲಿನ ರೂಮಿಗೆ ಶಿಫ್ಟ್ ಮಾಡಿದರೆ ನೀತು ನಾಲ್ವರು ಮಕ್ಕಳೊಟ್ಟಿಗೆ ಅಲ್ಲಿಯೇ ಉಳಿದಳು. ಮಧ್ಯಾಹ್ನದ ಊಟವನ್ನು ಸುರೇಶ ಮತ್ತು ನಿಶಾಳಿಗೆ ತಾನೇ ಮಾಡಿಸಿ ಇಬ್ಬರನ್ನು ಮಲಗಿಸಿದ ನೀತು ಪಕ್ಕದಲ್ಲಿ ದಿಂಬಿಟ್ಟು ಕೆಳಗೆ ಬಂದಳು.
ರವಿ......ಇಬ್ಬರೂ ಮಲಗಿಕೊಂಡರಾ ನೀತು ?
ನೀತು.....ಹೂಂ ಅಣ್ಣ ಊಟ ಮಾಡಿಸಿ ಮಲಗಿಸಿ ಬಂದೆ. ರೀ ಈಗ ಹೇಳಿ ಏನಾಯಿತು ? ಪ್ರತಾಪ್ ಯಾಕೆ ರಾಜೀನಾಮೆ ಕೊಡ್ತೀನೆಂದು ಹೇಳುತ್ತಿದ್ದಾನೆ ?
ಹರೀಶ....ನಮ್ಮ ಅಪಘಾತವಾದಾಗ ಅಲ್ಲಿದ್ದವರು ಪೋಲಿಸರಿಗೆ ಫೋನ್ ಮಾಡಿದರು. ಪ್ರತಾಪ್ ಬಂದು ನಮ್ಮನ್ನೆಲ್ಲಾ ಆಸ್ಪತ್ರೆಯತ್ತ ಕಳುಹಿಸಿ ಕಾರು ಓಡಿಸುತ್ತಿದ್ದವನನ್ನು ಅರೆಸ್ಟ್ ಮಾಡಿ ಕರೆದೊಯ್ದ. ನಾವು ಆಸ್ಪತ್ರೆ ತಲುಪುವಷ್ಟರಲ್ಲಿ ಪ್ರತಾಪ್ ರವಿ ಮತ್ತು ಅಶೋಕನಿಗೆ ಫೋನ್ ಮಾಡಿ ತಿಳಿಸಿದ್ದು ಇಬ್ಬರೂ ಅಲ್ಲಿಗೆ ಬಂದಿದ್ದರು. ನಮಗೆ ಚಿಕಿತ್ಸೆ ಕೊಡಿಸಿದ ನಂತರ ಕಂಪ್ಲೇಂಟ್ ಕೊಡೋಣವೆಂದು ನಾವೆಲ್ಲ ಠಾಣೆಗೆ ಹೋದೆವು. ಅಷ್ಟರಲ್ಲೇ ಅಲ್ಲಿಗೆ ಎಸ್ಪಿ ಬಂದಿದ್ದು ಅಪಘಾತ ಮಾಡಿದ್ದ ಹುಡುಗನನ್ನು ಸೆಲ್ಲಿನಿಂದ ಹೊರಗೆ ಕಳಿಸುತ್ತಿದ್ದ. ಅದನ್ನು ಪ್ರಶ್ನಿಸಿದ್ದಕ್ಕೆ ಎಸ್ಪಿ ನಮಗೆ ಜೋರು ಮಾಡುತ್ತ ಇವನು ನಮ್ಮ ನೆಚ್ಚಿನ ಶಾಸಕರ ಮಗ ಅವನ ವಿರುದ್ದ ನಾವು ಕ್ರಮ ತೆಗೆದುಕೊಳ್ಳುವುದಿಲ್ಲ. ಪ್ರತಾಪ್ ನೀನು ಇವನನ್ನು ಅರೆಸ್ಟ್ ಮಾಡಿರುವುದಕ್ಕೆ ಶಾಸಕರ ಬಳಿ ಕ್ಷಮೆ ಕೇಳಬೇಕು ಇಲ್ಲದಿದ್ದರೆ ನಿನ್ನನ್ನು ಸಸ್ಪೆಂಡ್ ಮಾಡುತ್ತೀನಿ ಅಂತ ಹೆದರಿಸಿದ. ನಮ್ಮ ಮನೆಯವರಿಗೆ ಗುದ್ದಿದ ಹುಡುಗನಿಗೇ ನನ್ನಿಂದ ಶಿಕ್ಷೆ ಕೊಡಿಸಲಾಗದೆ ತಪ್ಪು ಮಾಡಿದವರ ಬಳಿಯೇ ನಾನು ತಲೆಬಾಗಿ ಕ್ಷಮೆ ಕೇಳಬೇಕೇ ಎಂದು ಪ್ರತಾಪ್ ಕೆಲಸಕ್ಕೆ ರಾಜೀನಾಮೆ ಕೊಡ್ತೀನಿ ಅಂತಿದ್ದಾನೆ. ಅದನ್ನೇ ನೆನೆದು ರಾತ್ರಿಯಿಂದ ಊಟಾನೂ ಮಾಡಿಲ್ಲ ನಾವೆಷ್ಟೇ ಹೇಳಿದರೂ ಕೇಳುತ್ತಿಲ್ಲ ನೀನೇ ವಿಚಾರಿಸು.
ನೀತು ಸ್ವಲ್ಪ ಹೊತ್ತು ಯೋಚಿಸಿ.....ಅನುಷ ನಿನ್ನ ಗಂಡನಿಗೆ ಊಟ ತೆಗೆದುಕೊಂಡು ಬಾ. ಪ್ರತಾಪ್ ಊಟ ಮಾಡಿ ಇಲ್ಲಿಂದ ನೇರವಾಗಿ ಶಾಸಕನ ಮನೆಗೆ ಹೋಗಿ ಅವನ ಹತ್ತಿರ ಕ್ಷಮೆ ಕೇಳು.
ಪ್ರತಾಪ್ ಅಚ್ಚರಿಯಿಂದ.....ಅತ್ತಿಗೆ ನೀವು ಹೇಳ್ತಿರೋದು.....
ಅವನನ್ನು ಅರ್ಧಕ್ಕೇ ತಡೆದ ನೀತು.....ಇದು ಜೋಶಿನಲ್ಲಿ ಮಾಡುವ ಕೆಲಸವಲ್ಲ ಆಲೋಚಿಸಿ ನಿರ್ಣಯ ತೆಗೆದುಕೊಳ್ಳಬೇಕಾಗಿದ್ದು ನಾವು ಹರಿದ್ವಾರದಿಂದ ಹಿಂದಿರುಗಿದ ನಂತರ ಇವರಿಗೊಂದು ವ್ಯವಸ್ಥೆಯ ಮಾಡೋಣ. ನನ್ನ ಗಂಡ...ಮಗಳು...ಮಗನನ್ನು ನೋಯಿಸಿರುವ ಹುಡುಗನನ್ನು ಅವನಿಗೆ ಸಪೋರ್ಟ್ ಮಾಡಿದವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಆದರೆ ನೀನು ಪೋಲಿಸ್ ಇಲಾಖೆಯಲ್ಲಿ ಇರಬೇಕಾದ್ದು ತುಂಬ ಮುಖ್ಯ ಸುಮ್ಮನೆ ನಾನು ಹೇಳಿದಷ್ಟು ಮಾಡು ಜಾಸ್ತಿ ಯೋಚಿಸಬೇಡ.
ಪ್ರತಾಪ್ ಸರಿ ಎಂದೇಳಿ ಊಟ ಮಾಡಿಕೊಂಡು ಹೊರಟರೆ....
ರಜನಿ.....ಪ್ರತಾಪ್ ಯಾಕೆ ಕ್ಷಮೆ ಕೇಳಬೇಕು ಅವನದ್ದೇನೇ ತಪ್ಪು ?
ಶೀಲಾ.....ನಿನ್ನ ಮನಸ್ಸಿಲ್ಲೇನು ಓಡುತ್ತಿದೆ ಅದನ್ನೇ ಹೇಳು ?
ನೀತು....ಈಗೇನೂ ಕೇಳಬೇಡಿ ನಾನೂ ಹೇಳಲ್ಲ ಸಮಯ ಬಂದಾಗ
ನಿಮಗೆ ತಿಳಿಯುತ್ತದೆ. ರೀ ನಿಮಗೆ ನೋವಾಗ್ತಿದೆಯಾ ?
ಹರೀಶ.....ಇಲ್ಲ ನೋವೇನೂ ಇಲ್ಲವೇ ಇಲ್ಲ. ಸ್ವಾಮೀಜಿಗಳ ದ್ರವ್ಯದ ಪರಿಣಾಮ ನನಗೆ ನೋವಿನ ಅನುಭವ ಆಗುತ್ತಿಲ್ಲ ಸುರೇಶನಿಗೂ ನೋವಿಲ್ಲ ಅಂತ ಹೇಳುತ್ತಿದ್ದ.
ರವಿ....ಮತ್ತೆ ಸುರೇಶನ ಮೂಳೆ ಹೇಗೆ ಮುರಿಯುತು ? ದ್ರವ್ಯ ಅವನ ಮೇಲೆ ಪರಿಣಾಮ ಬೀರುತ್ತಿಲ್ಲವಾ ?
ನೀತು.....ಅಣ್ಣ ದ್ರವ್ಯದ ಪರಿಣಾಮ ಇಲ್ಲದೆ ಹೋಗಿದ್ದರೆ ನೋವಿಂದ ಅವನು ನರಳಾಡುತ್ತಿದ್ದ ಮೂಳೆ ಮುರಿದಿರುವುದರ ಬಗ್ಗೆ ನನಗೂ ಅರ್ಥವಾಗುತ್ತಿಲ್ಲ ಗುರುಗಳ ಬಳಿಯೇ ಕೇಳಬೇಕು.
ಅಶೋಕ.....ಮಾನೇಜರ್ ಯಾವುದೋ ಬಾಕ್ಸ್ ಬಗ್ಗೆ ಹೇಳಿದೆ ಅಂದೆ ಅದನ್ನು ಪಡೆದುಕೊಂಡೆಯಾ ?
ನೀತು....ಹೂಂ ತಂದಿದ್ದೀನಿ ಆದರೆ ಅದನ್ನು ತೆಗೆಯುವುದೇಗೇ ಅಂತ ಎಷ್ಟೇ ಪ್ರಯತ್ನಿಸಿದರೂ ನಮಗೆ ತಿಳಿಯುತ್ತಿಲ್ಲ.
ರವಿ....ಅದನ್ನು ತೆಗೆದುಕೊಂಡು ಬಾ ನಾವೂ ಪ್ರಯತ್ನ ಮಾಡೋಣ.
ರವಿ....ಅಶೋಕ...ಹರೀಶ...ಅನುಷ ಎಲ್ಲರೂ ಪ್ರಯತ್ನಿಸಿದರೂ ಆ ಪುಟ್ಟ ಮರದ ಪೆಟ್ಟಿಗೆಯನ್ನು ಅವರಿಂದ ತೆಗೆಯಲಾಗಲಿಲ್ಲ.
ಶೀಲಾ....ಇದನ್ನು ನಾವು ಹರಿದ್ವಾರಕ್ಕೆ ತೆಗೆದುಕೊಂಡು ಹೋಗೋಣ ಗುರುಗಳೇ ಇದನ್ನು ತೆರೆಯಲು ಸಹಾಯ ಮಾಡಬಹುದು.
ರಜನಿ.....ನಾವೂ ಅದನ್ನೇ ಯೋಚಿಸಿದ್ದೀವಿ.
ನೀತು.....ಸರಿ ನಾನು ಚಿನ್ನಿ ಸುರೇಶನ ಜೊತೆಗಿರುತ್ತೀನಿ.
ನೀತು ರೂಮಿಗೆ ಬಂದಾಗ ಮಗಳು ಹಾಸಿಗೆಯಲ್ಲಿ ತಿರುಗ ಉರುಗ ಮಲಗಿರುವುದನ್ನು ನೋಡಿ ನಗುತ್ತ ಅವಳನ್ನೆತ್ತಿ ಸರಿಯಾದ ರೀತಿ ಮಲಗಿಸಿ ತಾನೂ ದಿಂಬಿಗೆ ಒರಗಿಕೊಂಡು ಯೋಚಿಸತೊಡಗಿದಳು.
* *
* *
ಮೂರು ದಿನಗಳಲ್ಲೇ ಹರೀಶ ಮತ್ತು ನಿಶಾಳ ಗಾಯ ವಾಸಿಯಾದರೆ ಸುರೇಶನ ಕಾಲಿನ ಗಾಯ ಗುಣಮುಖವಾಗಿದ್ದು ಕೈಗೆ ಹಾಕಲಾಗಿದ್ದ ಪ್ಲಾಸ್ಟರನ್ನು 15 ದಿನಗಳ ನಂತರ ಬಿಚ್ಚಬೇಕೆಂದು ಡಾಕ್ಟರ್ ಹೇಳಿದ್ದ ಕಾರಣ ಅದರ ತಂಟೆಗೇ ಯಾರೂ ಹೋಗಲಿಲ್ಲ. ಮೂರು ದಿನದಿಂದ ಅಮ್ಮನನ್ನು ಸೇರಿಕೊಂಡಿದ್ದ ನಿಶಾ ಇಂದೂ ಸಹ ಊಟವಾದ ಬಳಿಕ ಅಮ್ಮನ ಜೊತೆಗೇ ಮಂಚದಲ್ಲಿ ಮಲಗುವ ಬದಲು ಟೆಡ್ಡಿ ಹಿಡಿದು ಆಡುತ್ತ ಕುಳಿತಿದ್ದಳು.
ನೀತು....ಚಿನ್ನಿ ಮಲಗಿಕೋ ಪುಟ್ಟಿ ನಿನಗೆ ಸಂಜೆ ಐಸ್ ಕ್ರೀಂ ಬೇಕೋ ಬೇಡವೋ.
ನಿಶಾ...ಐಚೀಂ ಬೇಕು....ಬೇಕು....ಎಂದರೂ ಟೆಡ್ಡಿ ಜೊತೆ ಆಡುವ ಕೆಲಸ ಮಾತ್ರ ನಿಲ್ಲಿಸಲಿಲ್ಲ.
ನೀತು ಮಗಳಾಟ ನೋಡುತ್ತಿದ್ದಾಗ ಮರದ ಬಾಕ್ಸಿನ ನೆನಪಾಗಿ ತನ್ನ ಲಾಕರನಲ್ಲಿಟ್ಟಿದ್ದನ್ನು ಹೊರತೆಗೆದು ಅದನ್ನು ತೆರೆಯುವ ವಿಧಾನದ ಬಗ್ಗೆ ಯೋಚಿಸತೊಡಗಿದಳು. ಸವಿತಾಳ ಫೋನ್ ಬಂದಾಗ ಬಾಕ್ಸ್ ಪಕ್ಕಕ್ಕಿಟ್ಟು ಅವಳೊಡನೆ ಮಾತನಾಡುತ್ತಿದ್ದಾಗ ನಿಶಾಳ ದೃಷ್ಟಿ ಬಾಕ್ಸ್ ಮೇಲೆ ಬಿತ್ತು. ಟೆಡ್ಡಿಯನ್ನು ಪಕ್ಕಕ್ಕೆ ತಳ್ಳಿ ಬಾಕ್ಸ್ ಎತ್ತಿಕೊಂಡ ನಿಶಾ ಅದನ್ನು ತಿರುಗಿಸಿ ಉರುಗಿಸಿ ನೋಡತೊಡಗಿದಳು. ಐದು ನಿಮಿಷದ ನಂತರ ನಿಶಾ ಮಮ್ಮ....ಮಮ್ಮ.....ಎಂದು ಜೋರಾಗಿ ಕೂಗಿದಾಗ ಗಾಬರಿಗೊಂಡ ನೀತು ಮಗಳತ್ತ ತಿರುಗಿದಾಗ ಅವಳ ಕಣ್ಣುಗಳು ಅಚ್ಚರಿಯಿಂದ ಅಗಲವಾಯಿತು. ನಿಶಾ ತನ್ನ ಕೈಲಿದ್ದ ಬಾಕ್ಸ್ ಓಪನ್ ಮಾಡಿದ್ದು ಅದರೊಳಗಿನಿಂದ ಎರಡು ಪತ್ರಗಳ ಜೊತೆ ಎರಡು ಪುಟ್ಟ
ಬ್ರೇಸ್ಲೆಟ್ ಹೊರಗೆ ಬಿದ್ದಿತ್ತು. ನೀತು ತಕ್ಷಣ ಫೋನಿಟ್ಟು ಮಗಳಿಂದ ಬಾಕ್ಸ್ ಪಡೆದು ಒಳಗೆಲ್ಲಾ ನೋಡಿದರೆ ಅದರಲ್ಲಿ ಪತ್ರ ಬ್ರೇಸ್ಲೆಟ್ಟನ್ನು ಬಿಟ್ಟರೆ ಮತ್ತೇನೂ ಇರಲಿಲ್ಲ. ಮಗಳನ್ನು ತಟ್ಟಿ ಮಲಗಿಸಿದ ನಂತರ ಬ್ರೇಸ್ಲೆಟ್ ತೆಗೆದುಕೊಂಡು ನೋಡಿದ ನೀತು ಪ್ರತಗಳನ್ನು ತೆಗೆದಾಗ ಅವುಗಳಲ್ಲಿ 1 — 2 ಎಂದು ನಮೂದಿಸಲಾಗಿತ್ತು. ಮೊದಲಿಗೆ 1 ಎಂದು ಬರೆದಿದ್ದ ಪತ್ರ ತೆರೆದಾಗ ಅದನ್ನು ಹಿಂದಿಯಲ್ಲಿ ಸ್ವತಃ ರಾಣಾ ಪ್ರತಾಪರೇ ಬರೆದಿರುವುದು ತಿಳಿಯಿತು. ಪತ್ರದ ಸಾರಾಂಶ......
" ನೀವೀ ಪತ್ರ ಓದುತ್ತಿರುವಿರಿ ಎಂದರೆ ನನ್ನ ಕರುಳಿನ ಬಳ್ಳಿ ನನ್ನಯ ಸರ್ವಸ್ವಳಾದ ಮಗಳು ನಿಮ್ಮ ಮಡಿಲಿಗೆ ಸೇರಿರುತ್ತಾಳೆ. ನಾನೀಗ ಬರೆದಿರುವ ಎರಡನೇ ಪತ್ರವನ್ನು ನನ್ನ ಮಗಳನ್ನು ತಾನು ಹೆತ್ತಿರುವ ಮಗಳೆಂದೇ ಭಾವಿಸುವ ತಾಯಿಯೇ ಓದಬೇಕೆಂದು ನನ್ನ ಮನದ ಅಭಿಲಾಶೆ ಮತ್ತು ಕೋರಿಕೆ. ಅದರಲ್ಲಿ ಬರೆದಿರುವ ವಿಷಯ ಅವರಿಗೆ ತಿಳಿಯಲೇಬೇಕಾದ್ದು ತುಂಬ ಅವಶ್ಯಕ ದಯವಿಟ್ಟು ಬೇರೆ ಯಾರೂ ಸಹ ಅದನ್ನು ಓದದೆ ಅವರೊಬ್ಬರಿಗೆ ಹಸ್ತಾಂತರಿಸಲು ಕಳಕಳಿಯ ಮನವಿ ಮಾಡಿಕೊಳ್ಳುವೆ "
ರಾಣಾಪ್ರತಾಪ್ ಸೂರ್ಯವಂಶಿ.
ನೀತು ಎರಡನೇ ಪತ್ರ ತೆರೆದು ಓದತೊಡಗಿದಾಗ ಅವಳ ಕಣ್ಣಿನಿಂದ ಕಂಬನಿ....ದುಃಖ....ಆಶ್ಚರ್ಯದ ಮಿಶ್ರ ಭಾವನೆಗಳು ಮೂಡುತ್ತಾ ಕೊನೆಯಲ್ಲಿ ಅವಳ ತುಟಿಗಳಲ್ಲಿ ಮುಗುಳ್ನಗೆ ಮೂಡಿತು. ಎರಡೂ ಪತ್ರಗಳನ್ನು ಜೋಪಾನವಾಗಿ ತನ್ನ ಲಾಕರಿನಲ್ಲಿಟ್ಟು ಅದರ ಜೊತೆಗೇ ಬ್ರೇಸ್ಲೆಟ್ಟನ್ನೂ ತೆಗೆದಿಟ್ಟಳು. ನೀತು ಮನದಲ್ಲೇ " ರಾಣಾಪ್ರತಾಪರೇ ನಾನು ನಿಮ್ಮನ್ನು ಅಣ್ಣನೆಂದೇ ಪರಿಗಣಿಸಿರುವೆ ನಿಮ್ಮ ಮನಸ್ಸಿನ ಇಚ್ಚೆಯನ್ನು ನಾನು ಖಂಡಿತವಾಗಿಯೂ ನೆರವೇರಿಸುತ್ತೀನಿ. ನಿಧಿ ಆದಷ್ಟು ಬೇಗ ನಾನು ನಿನ್ನ ಹತ್ತಿರ ಬರುತ್ತಿರುವೆ ಇನ್ನು ಒಂಟಿತನದ ಬದುಕು ಸಾಕು ಅಮ್ಮ ಬರುತ್ತಿದ್ದಾಳೆ " .
* *
* *
ಮೇ 8ರ ಮುಂಜಾನೆ 8 ಘಂಟೆ
ಸ್ಥಳ.....ಬೆಂಗಳೂರಿನ ವಿಮಾನ ನಿಲ್ದಾಣ.
ರಜನಿ.....ಯಾಕಮ್ಮ ಬೆವರುತ್ತಿರುವೆ ಏನಾಯ್ತು ?
ನಿಕಿತಾ.....ಆಂಟಿ ನಾನು ಜೀವನದಲ್ಲಿ ಮೊದಲನೇ ಸಲ ವಿಮಾನ ಏರುತ್ತಿರುವುದು ಅದಕ್ಕೆ ಸ್ವಲ್ಪ ನರ್ವಸ್ ಆಗುತ್ತಿದೆ.
ಸುಕನ್ಯಾ.....ನನಗೂ ಅದೇ ರೀತಿಯ ಅನುಭವ ಆಗುತ್ತಿದೆ.
ರಜನಿ.....ಶೀಲಾಳಿಗೂ ಇದು ಮೊದಲ ವಿಮಾನಯಾನ ಜೊತೆಗೆ ನಮಿತಾಳಿಗೂ ನೋಡಿ ಅವರಿಬ್ಬರೂ ಎಷ್ಟು ಆರಾಮವಾಗಿದ್ದಾರೆ. ಏನೂ ಆಗಲ್ಲ ಧೈರ್ಯವಾಗಿರಿ.
ಸವಿತಾ....ಸುಕನ್ಯಾ ನೀನು ನನ್ನ ಪಕ್ಕದಲ್ಲೇ ಕುಳಿತುಕೋ ನನಗೂ ಸ್ವಲ್ಪ ಭಯವಾಗುತ್ತಿದೆ.
ನೀತು.....ನೀವಿಬ್ರೂ ಚಿಂತೆ ಮಾಡಬೇಡಿ ನಿಮ್ಮ ಮಧ್ಯೆ ನಿಮ್ಮ ಸರ್ ಕೂರುತ್ತಾರೆ ಆಗ ಭಯವೂ ಆಗಲ್ಲ. ನಿಕಿತಾ ನೀನು ನನ್ನ ಜೊತೆಗೇ ಕುಳಿತುಕೊಳ್ಳಮ್ಮ ನನ್ನ ಮಗಳಿಗಂತೂ ಕಿಟಕಿಯಾಚೆ ನೋಡುವುದೇ ಒಂದು ಸಂತೋಷ.
ಫ್ಲೈಟ್ ಅನೌನ್ಸಾದಾಗ ಎಲ್ಲರೂ ವಿಮಾನವೇರಿ ತಮ್ಮ ಟಿಕೆಟ್ಟುಗಳ ನಂಬರಿನ ಪ್ರಕಾರ ಕೂರದೆ ತಮ್ಮ ತಮ್ಮಲ್ಲೇ ಅನುಕೂಲಕರವಾದ ಸ್ಥಾನಗಳನ್ನು ಅಲಂಕರಿಸಿದರು. ಮಗಳಿಗಾಗಿ ನೀತು ಕಿಟಕಿಯ ಪಕ್ಕ ಕುಳಿತು ತನ್ನ ಪಕ್ಕದಲ್ಲಿ ನಿಕಿತಾಳನ್ನು ಕೂರಿಸಿಕೊಂಡರೆ ಗಿರೀಶನೂ ಅವಳ ಪಕ್ಕ ಆಸೀನನಾದನು. ರವಿ ಮತ್ತು ಶೀಲಾಳಿಗೆ ಇದೇ ಫಸ್ಟ್ ಅನುಭವವಾಗಿದ್ದು ಆಕೆ ಜೊತೆಯಲ್ಲಿ ರಜನಿ ಕುಳಿತಿದ್ದರೆ ಅಶೋಕ ಮತ್ತು ಪ್ರತಾಪನ ಜೊತೆ ಅನುಷ ಕುಳಿತಿದ್ದಳು. ಹರೀಶ ತನ್ನ ಇಬ್ಬರು ಪ್ರೇಯಸಿಯರ ನಡುವೆ ಕುಳಿತು ಅವರಿಬ್ಬರ ಕೈ ಹಿಡಿದುಕೊಂಡಿದ್ದರೆ ನಮಿತಾಳನ್ನು ಕಿಟಕಿಯ ಪಕ್ಕ ಕೂರಿಸಿ ಅವಳ ಪಕ್ಕ ರಶ್ಮಿ ಸುರೇಶ ಕುಳಿತಿದ್ದರು. ವಿಮಾನ ಮೇಲೇರಲು ಪ್ರಾರಂಭಿಸಿದರೂ ಅಮ್ಮನ ಮಡಿಲಿನಲ್ಲಿ ನಿಂತಿದ್ದ ನಿಶಾ ಕಿಟಕಿಯಾಚೆ ನೋಡುತ್ತ ನಿಕಿತಾಳಿಗೂ ತೋರಿಸುತ್ತ ನಗುತ್ತಿದ್ದು ವಿಮಾನ ದೆಹಲಿ ಕಡೆ ಹೊರಟಿತು.
ಅಬ್ಬಾ, ಅಂತೂ ಬಹಳ ದಿನಗಳ ನಂತರ ನೀತು ಬಂದಿದ್ದು ಖುಷಿಯಾಯಿತು
ReplyDeleteNim nom kalsi
ReplyDeleteತುಂಬಾ ಚೆನ್ನಾಗಿ ಬರೆದಿದ್ದೀರಿ ಮುಂದಿನ ಕತೆ ಗಾಗಿ ಕಾಯ್ತಾ ಇದಿವಿ
ReplyDeleteತುಂಬಾ ಆದ್ಭುತವಾಗಿ ಪದಗಳನ್ನು ಬಳಸಿ ಕತೆ ಬರಿದಿದ್ದೀರಾ. ಕೌಟುಂಬಿಕತೆ, ಶೃಂಗಾರದ ದೃಶ್ಯ, ತಾಯಿಯ ಪ್ರೀತಿ, ತುಂಬು ಕುಟುಂಬದ ಐಕ್ಯತೆ, ಎಲ್ಲವನ್ನೂ ಅಳೆದು ತೂಗಿ ಕತೆ ಬರೆದ ನಿಮ್ಮ ಕಲ್ಪನೆಯ ಮನಸ್ಸಿಗೆ ನನ್ನ ಆಭಿನಂದನೆಗಳು.
ReplyDeleteಸೂಪರ್
ReplyDeleteಅಬ್ಬಾ....!
ReplyDeleteತುಂಬಾ ಒಳ್ಳೆ ಕಥೆ ಆದ್ರೆ ಒಂದು ಪ್ರಾಬ್ಲಂ ಆಗ್ತಿದೆ ನಿಮ್ಮ ಕಥೆ ಇಂದ
ಏನು ಅಂದ್ರೆ ನಿಮ್ಮ ಕಥೆಗಳನ್ನ ಓದಿಲ್ಲ ಅಂದ್ರೆ ನಿದ್ದೆ ನೆ ಬರ್ತಿಲ್ಲ...😥
ನೀತು ಮತ್ತೆ ಮ್ಯಾನೇಜರ್ ಕಾಮದ ಆಟದ ಬಗ್ಗೆ ಇನ್ನೂ ಹೆಚ್ಚಾಗಿ ವಿವರಿಸಿ plzzz....🙏
ReplyDelete