Total Pageviews

Monday, 4 November 2024

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 240

ತಿಂಡಿ ತಿನ್ನುತ್ತಿದ್ದರೆ ನಿಶಾ ಮಾತ್ರ ಮುಖ ಊದಿಸಿಕೊಂಡು ಲಿವಿಂಗ್ ಹಾಲ್ ಮೂಲೆಯಲ್ಲಿ ಕುಕ್ಕಿ ಮರಗಳನ್ನು ಸೇರಿಸಿಕೊಂಡು ನಿಂತಿದ್ದಳು.

ಸುಮ...ಬಾರಮ್ಮ ಚಿನ್ನಿ ಸ್ವಲ್ಪ ತಿಂಡಿ ತಿನ್ನು ತುಪ್ಪ ಹಾಕ್ತೀನಿ ಬಾರಮ್ಮ

ನಿಶಾ ತಲೆ ಅಳ್ಳಾಡಿಸಿ......ನಂಗಿ ಬೆಣ್ಣಿ ಬೇಕು.

ಸುಮ......ಆಯ್ತಮ್ಮ ಕಂದ ಈಗ ತಿಂದ್ಬಿಡು ಆಮೇಲೆ ನಿನಗೆ ಬೆಣ್ಣೆ ಹಾಕಿ ತಿನ್ನಿಸ್ತೀನಿ.

ಸುಮ ಎಷ್ಟೇ ಪೂತುಣಿಸಿದರೂ ಒಪ್ಪಿಕೊಳ್ಳದ ನಿಶಾ ಮನೆಯಿಂದ ಆಚೆಗೆ ಓಡಿಹೋದಳು.

ನೀತು ರೆಡಿಯಾಗಿ ಬಂದು......ಏನಂತೆ ಅತ್ತಿಗೆ ಇವಳದ್ದು ?

ರೇವಂತ್.....ನಿನ್ನ ಚಿಲ್ಟಾರಿ ಬೆಣ್ಣೆ ಇಲ್ಲಾಂತ ದೋಸೆ ತಿಂತಿಲ್ಲ.

ನೀತು......ಇಲ್ಕೊಡಿ ಅತ್ತಿಗೆ ನಾನು ತಿನ್ನಿಸ್ತೀನಿ ಹೆಚ್ಕೊಂಡಿದ್ದಾಳೆ ಸ್ವಲ್ಪ ಬಾಲ ಕಟ್ ಮಾಡ್ಬೇಕು.

ರೇವತಿ.......ಮಗುವಿಗೇನಾದ್ರೂ ಬೈದರೆ ನಿಂಗೆ ಗ್ರಹಚಾರ ಬಿಡಿಸ್ತೀನಿ ಪ್ರೀತಿಯಿಂದ ಬುದ್ದಿ ಹೇಳಿ ತಿನ್ನಿಸು.

ಇವರ ಮಾತು ಮುಗಿಯುವಷ್ಟರಲ್ಲೇ ನಿಶಾ ಕೂಗಿ ಕಿರುಚಾಡುತ್ತ ಒಳಗೋಡಿ ಬಂದರೆ ಅವಳ ಹಿಂದೆಯೇ ಎರಡು ಡಬ್ಬಿಗಳಲ್ಲಿ ಬೆಣ್ಣೆ ಹಿಡಿದು ಗಿರಿ ಬಂದನು.

ನೀತು......ಏಯ್ ಗಿರಿ ನೀನು ಹಾಲು ತಂದು ಕೊಡೋದು ಸ್ವಲ್ಪ ಲೇಟಾದರೂ ಸರಿ ಬೆಣ್ಣೆ ಮಾತ್ರ ಟೈಮಿಗೆ ತಂದ್ಕೊಡು ಇಲ್ಲಾಂದ್ರೆ ನನ್ನ ಲಿಲಿಪುಟ್ ಫುಲ್ ರಾಂಗಾಗಿ ಹೋಗ್ತಾಳೆ.

ಗಿರಿ......ಸಾರಿ ಆಂಟಿ ಅಮ್ಮ ಫ್ರೆಶಾಗಿ ತೆಗೆದಿಡ್ತೀನಿ ನೀನು ಹಾಲು ಕೊಟ್ಟು ಬಾ ಅಂದರು ಅದಕ್ಕೆ ಲೇಟಾಯ್ತು.

ಅಶೋಕ.....ಗಿರಿ ಬಾ ನೀನೂ ತಿಂಡಿ ತಿನ್ನುವಂತೆ.

ಗಿರಿ......ಇಲ್ಲ ಸರ್ ಮನೆಗೇ ಹೋಗ್ತೀನಲ್ಲ.

ಪ್ರೀತಿ ಅವನಿಗೂ ಒಂದು ಪ್ಲೇಟಿನಲ್ಲಿ ದೋಸೆ ತಂದುಕೊಟ್ಟು....... ದಿನಾ ಮನೆಯಲ್ಲಿ ತಿನ್ನೋದಿದ್ದೇ ಇದೆ ಇವತ್ತಿಲೇ ತಿನ್ನುವಂತೆ ಕೂರು.

ರಜನಿ.......ಹರೀಶ್ ನೆನ್ನೆ ನೀವು ಕಳುಹಿಸಿದ್ದ ಇಬ್ಬರು ಯೂನಿಟ್ಟಿನ ಮ್ಯಾನೇಜರ್ ಹುದ್ದೆಗಾಗಿ ಬಂದಿದ್ದರು. ನೀತು ಇರಲಿಲ್ಲವಲ್ಲ ಅದಕ್ಕೆ ಅವರ ಫೋನ್ ನಂ... ಪಡೆದು ನಾವೇ ತಿಳಿಸ್ತೀವಿ ಅಂತೇಳಿ ನಾನು ಕಳಿಸಿಬಿಟ್ಟೆ.

ಪ್ರೀತಿ......ಯಾರವರಿಬ್ಬರು ? ಕೆಲಸ ಚೆನ್ನಾಗಿ ಮಾಡ್ತಾರಾ ?

ಹರೀಶ.......ಅವರಲ್ಲೊಬ್ಬ ನನ್ನ ಜೊತೆ ಅಧ್ಯಾಪಕರಾಗಿರುವವರ ಅಣ್ಣನ ಮಗ ಇನ್ನೊಬ್ಬ ನನ್ನ ಹಳೆಯ ಸ್ನೇಹಿತನ ಮಗ. ಮೊದಲು ಸಂದರ್ಶನ ಮಾಡಿ ಆಮೇಲೆ ಕೆಲಸ ಕೊಡುವುದೋ ಬೇಡವೋ ಅಂತ ನೀವೇ ಡಿಸೈಡ್ ಮಾಡಿ. ಕೆಲಸ ಕೊಡಿ ಅಂತ ನಾನ್ಯಾವುದೇ ರೀತಿಯ ಶಿಫಾರಸ್ಸನ್ನೂ ಮಾಡಲ್ಲ ಅಂತ ಅವರಿಬ್ಬರಿಗೂ ಮೊದಲೇ ಹೇಳಿ ಬಿಟ್ಟಿದ್ದೀನಿ.

ಬೆಣ್ಣೆ ಬಂದಿದ್ದೇ ತಡ ನಲಿದಾಡುತ್ತ ಸುಮ ಅತ್ತೆಯಿಂದ ದೋಸೆಯ ತಿನ್ನಿಸಿಕೊಂಡ ನಿಶಾ ಅಪ್ಪನೆದುರಿಗೆ ನಿಂತು.....ಪಪ್ಪ ಟಾಟಾ ನಲಿ.

ವಿಕ್ರಂ....ಎಲ್ಲಿಗೆ ಹೋಗ್ಬೇಕಮ್ಮ ಕಂದ ?

ನಿಶಾ......ನನ್ನಿ ತೊತ್ತಿಲ್ಲ ಮಾಮ ಪಪ್ಪ ಜೊತಿ ಹೋತೀನಿ.

ತಿಂಡಿ ಮುಗಿಸಿ ಪ್ರತಾಪ್ ತಂದುಕೊಟ್ಟ ರಂಗನ ಫೋನ್ ಪಡೆದು ಮಹಡಿಯ ರೂಮಿಗೆ ಬಂದ ನೀತು ಅದನ್ನು ಆನ್ ಮಾಡಿ ವೈಫೈಗೆ ಕನೆಕ್ಟ್ ಮಾಡಿದಳು. ಫೋನಿನ ವಾಟ್ಸಪ್ಪಿಗೆ ಎರಡು ಮೆಸೇಜ್ ಬಂದಿರುವುದನ್ನು ನೋಡಿ ಅದನ್ನು ತೆರೆದಾಗ.......

ರಂಗ ನಾವು ಮೇಷ್ಟ್ರಿಗೆ ತಲುಪಿಸಿದ್ದೆವಲ್ಲ ಬಾಕ್ಸ್ ಅದನ್ನು ನನಗೆ ಕೊಟ್ಟಿದ್ದ ವ್ಯಕ್ತಿಯ ಹೆಸರು ಜೀವನ್ ಅಂತ. ಅವನು ನೆನ್ನೆಯ ದಿನ ಮಾತನಾಡುತ್ತಿದ್ದ ರೀತಿ ನನಗೇನೋ ಅನುಮಾನ ಹುಟ್ಟಿಸುತ್ತಿದೆ. ನೀನೊಬ್ಬನೇ ಬಾಕ್ಸ್ ತಲುಪಿಸಿದೆಯಾ ಅಥವ ಜೊತೆಗ್ಯಾರಾದರೂ ಇದ್ದರಾ ಅಂತ ತುಂಬ ವರಟಾಗಿ ಕೇಳ್ತಿದ್ದ. ಎಣ್ಣೆಯ ನಶೆಯಲ್ಲಿ ಈ ವಿಷಯ ಯಾರಿಗಾದರೂ ಹೇಳಿದರೆ ಸಾಯಿಸುವುದಾಗಿ ನನ್ನನ್ನು ಹೆದರಿಸಿದ ನೀನು ಹುಷಾರಾಗಿರು ಶಾಲೆಯ ಹತ್ತಿರ ಹೋಗ್ಬೇಡ.

ಎರಡನೇ ಮೆಸೇಜ್......

ಈ ಜೀವನ್ ಜೊತೆ ಇನ್ನೊಬ್ಬನಿದ್ದಾನೆ ಕಣೋ ಅವನು ಮಹಾನ್ ಖತರನಾಕ್ ಅನಿಸುತ್ತೆ ನಮ್ಮೂರಿನ ರೌಡಿ ಸಲೀಂ ಹೆಸರನ್ನು ಹೇಳಿ ನನಗೆ ಹೆದರಿಸ್ತಿದ್ದ. ಇವರಿಬ್ಬರೂ ಸೇರಿಕೊಂಡು ಆ ಮೇಷ್ಟರಿಗೇನೊ ಸ್ಕೆಚ್ ಹಾಕುತ್ತಿದ್ದಾರೆಂದು ನನಗೆ ಅನುಮಾನವಾಗ್ತಿದೆ. ಅದರಿಂದ ನಮಗೇನೂ ಆಗಬೇಕಿಲ್ಲ ನಮ್ಮ ಹುಷಾರಿನಲ್ಲಿ ನಾವಿರೋಣ.

ನೀತು ಎರಡೂ ಮೆಸೇಜನ್ನೊದಿ ಸಾಹುಕಾರನ ಹೆಣ ಪಡೆದವನೂ ಜೀವನ್ ಇಲ್ಲಿ ರಾಜುವಿನ ಕೈಗೆ ಪಾರ್ಸಲ್ ಕೊಟ್ಟವನ ಹೆಸರು ಸಹ ಜೀವನ್ ಇಬ್ಬರೂ ಒಬ್ಬರೇನಾ ? ಈ ಜೀವನ್ ಹೆಸರನ್ನು ಮುಂಚೆ ನಾನೆಲ್ಲೋ ಕೇಳಿದ ನೆನಪು ಎಲ್ಲಿ ನೆನಪಾಗ್ತಿಲ್ಲವಲ್ಲ. ನನಗೆ ಫೋನ್ ಮಾಡಿದ ಅನಾಮಿಕ ವ್ಯಕ್ತಿ ಇದೇ ಜೀವನ್ ಆಗಿರಬಹುದಾ ? ಆತ ಗುರುವಾರ xxxx ಸಿಟಿಗೆ ಬರುವಂತೆ ಹೇಳಿದ್ದಾನೆ ಆದರೆ ಸುಮ್ಮನೆ ಅಲ್ಲಿಯವರೆಗೂ ಕಾಯುವುದೇ ಬೇಡ ಅದಕ್ಕೂ ಮುಂಚೆ ನಾವೇ ಏನಾದರೂ ಮಾಡಬೇಕು.

ಹರೀಶ ಒಳಗೆ ಬರುತ್ತ........ನೀತು ಏನ್ ವಿಷಯ ತಿಳಿಯಿತು ?

ನೀತು ಗಂಡನಿಗೆಲ್ಲಾ ವಿವರಿಸಿದಾಗ ಹರೀಶ......ನಾಳೆ ಭಾನುವಾರ ರಜೆಯಿದೆ ನಾವೀಗಲೇ xxxx ಸಿಟಿಗೆ ಹೊರಡೋಣ ನಾಳೆ ಸಂಜೆ ಒಳಗೆಯೇ ಎಲ್ಲಾ ಕೆಲಸ ಮುಗಿಸಿಕೊಂಡು ಬರೋದು.

ನೀತು......ರೀ ಯಾವ ಕೆಲಸ ?

ಹರೀಶ.....ಎಲ್ಲದಕ್ಕೂ ಈ ಜೀವನ್ ಎಂಬುವವನೇ ಮೂಲ ಅಂತ ನನ್ನ ಮನಸ್ಸು ಹೇಳ್ತಿದೆ ಅವನಾಟಕ್ಕೆ ಇತಿಶ್ರೀ ಹಾಕಿ ಬರೋಣ ಬೇಗ ರೆಡಿಯಾಗು ನಾನು ಬಸ್ಯನಿಗೆ ಫೋನ್ ಮಾಡ್ತೀನಿ ಅವನೂ ಬರಲಿ.

ನೀತು...ನೀವು ನಿರ್ಧರಿಸಿರುವಾಗ ನಾನು ಜೊತೆಯಾಗಿರುವೆ ಬಸ್ಯನ ಜೊತೆ ಅವನಿಬ್ಬರು ಹುಡುಗರು ನಾಲ್ಕು ಜನ ರಕ್ಷಕರನ್ನು ನಮ್ಜೊತೆ ಕರೆದುಕೊಂಡು ಹೋಗೋಣ ಕೆಲಸ ಸುಲಭವಾಗುತ್ತೆ.

ಹರೀಶ.....ಸರಿ ಏನೇ ಆಗಲಿ ನನಗೆ ಗುರುವಾರದ ತನಕ ಕಾಯಲು ತಾಳ್ಮೆಯಿಲ್ಲ ಇವತ್ತೇ ಮುಗಿದರೆ ಒಳ್ಳೆಯದು.

ಬಸ್ಯನಿಗೆ ಫೋನ್ ಮಾಡಿ ಇಬ್ಬರೂ ಕೆಳಗೆ ಬಂದಾಗ ನಿಶಾ ಅಣ್ಣನ ಹಿಂದೆ ಓಡುತ್ತ ಕಿರುಚಾಡಿ ಹಲ್ಲಾ ಮಾಡುತ್ತಿದ್ದಳು.

ನೀತು.....ಚಿನ್ನಿ ಯಾಕಮ್ಮ ಕಂದ ಏನಾಯ್ತು ? ಯಾಕೆ ಇಷ್ಟೊಂದು ಗಲಾಟೆ ಮಾಡ್ತಿದ್ದೀಯಲ್ಲ ?

ಅಮ್ಮನ ಬಳಿಗೋಡಿ ಅವಳ ಹೆಗಲಿಗೇರಿಕೊಂಡ ನಿಶಾ ಅಮ್ಮನ ಕನ್ನೆ ಸವರುತ್ತ.......ಮಮ್ಮ ನಾನಿ ಹೋತೀನಿ ಮಮ್ಮ....ಅಣ್ಣ ನನ್ನಿ ಬೇಲ ಅಂತು ಮಮ್ಮ ಪೀಚ್ ಮಮ್ಮ.

ನೀತು ಮಗಳಿಗೆ ಮುತ್ತಿಟ್ಟು.....ಎಲ್ಲಿಗೆ ಹೋಗ್ಬೇಕಮ್ಮ ಕಂದ ?

ನಿಶಾಳಿಗೇನು ಹೇಳಬೇಕೆಂದು ತೋಚದೆ ಅಜ್ಜಿಯತ್ತ ಕೈ ತೋರಿಸಿ..... ನಾನಿ ಅಜ್ಜಿ...ತಾತ ಜೊತಿ ಟಾಟಾ ಹೋತಿನಿ.

ರೇವತಿ......ಸೋಮವಾರ ನಿಕಿತಾಳ ಮೆಡಿಕಲ್ ಕೌನ್ಸಿಲಿಂಗ್ ಇದ್ಯಲ್ಲ ಅದಕ್ಕೂ ಮುಂಚೆ ಶೃಂಗೇರಿ ಶಾರದಾ ಪೀಠದಲ್ಲಿ ಪೂಜೆ ಮಾಡಿಸಿ ಅಲ್ಲಿಂದ ಬೆಂಗಳೂರಿಗೆ ಹೋಗಲಿ ಅಂತ ನಾವೆಲ್ಲರೂ ಶೃಂಗೇರಿಗೆ ಹೋಗ್ತಿದ್ದೀವಿ ಕಣಮ್ಮ.

ಹರೀಶ.....ಯಾರೆಲ್ಲ ಹೋಗ್ತಿದ್ದಾರೆ ? ಇದ್ಯಾವಾಗ ಡಿಸೈಡಾಯಿತು ?

ಸವಿತಾ.......ಈಗಷ್ಟೇ ಸರ್ ನಮ್ಮಮ್ಮ ಫೋನ್ ಮಾಡಿ ಮೊದಲು ಶೃಂಗೇರಿಯಲ್ಲಿ ಪೂಜೆ ಮಾಡಿಸಿಕೊಂಡು ಬೆಂಗಳೂರಿಗೆ ಹೋಗಲಿ ಅಂತ ಹೇಳಿದರು. ನಾನಿಲ್ಲಿ ಹೇಳಿದಾಗ ಅಂಕಲ್ ಆಂಟಿ ಜೊತೆಗೆ ಬರುವುದಾಗಿ ಹೇಳಿದರು ಅದಕ್ಕೆ ಚಿನ್ನಿನೂ ಬರ್ತೀನಿ ಅಂತಿದ್ದಾಳೆ.

ನೀತು.....ಕಂದ ನಿನ್ಜೊತೆ ಅಮ್ಮ ಬರಲ್ಲ ಕಣಮ್ಮ ನೀನೊಬ್ಬಳೇ ಅಲ್ಲಿ ಹೋಗಿ ಅಮ್ಮ ಬೇಕು ಅಂದರೆ ?

ವಿಕ್ರಂ.......ಹಾಗೇನೂ ಗಲಾಟೆ ಮಾಡಲ್ಲ ನಮ್ಮ ಚಿನ್ನಿ ಗುಡ್ ಗರ್ಲ್ ನಾನು ಸುಮ ಕೂಡ ಹೋಗ್ತಿದ್ದೀವಿ ನಿಶಾಳ ಚಿಂತೆ ಬಿಡು.

ನೀತು.......ಚಿನ್ನಿ ನೀನು ಅತ್ತೆ ಆಂಟಿಯ ಜೊತೆಯಲ್ಲೇ ಇರಬೇಕು ಅಮ್ಮ ಬೇಕು ಅಂತ ಗಲಾಟೆ ಮಾಡ್ಬಾರ್ದು ಗೊತ್ತಾಯ್ತ ಕಂದ.

ನಿಶಾ ತಲೆ ಕುಣಿಸುತ್ತ.......ಆತು ಮಮ್ಮ.

ರಾಜೀವ್.......ನಾಳೆ ಪೂಜೆ ಮುಗಿಸಿಕೊಂಡು ನಾವು ಹೊರನಾಡಿನ ದೇವಸ್ಥಾನಕ್ಕೂ ಬೇಟಿ ನೀಡಿ ಬರ್ತೀವಿ.

ಹರೀಶ......ಮತ್ತೆ ಬೆಂಗಳೂರಿಗೆ ಹೋಗಲು ತಡವಾಗುವುದಿಲ್ಲವಾ ?

ವಿವೇಕ್.....ನಾಳೆ ನಿಕಿತಾ—ನಿಧಿ ಜೊತೆ ನಾವು ಶೃಂಗೇರಿಯಿಂದಲೇ ಬೆಂಗಳೂರಿಗೆ ಹೊರಡ್ತೀನಿ ಇವರು ಮಾತ್ರ ಹೋಗೋದು.

ರಾಜೀವ್...ರೇವತಿ...ವಿಕ್ರಂ...ಸುಮ...ವಿವೇಕ್...ಸವಿತಾ...ನಿಕಿತಾ ನಿಧಿಯ ಜೊತೆ ನಿಶಾ ಕೂಡ ಮೊದಲ ಸಲ ಅಮ್ಮನಿಲ್ಲದೆ ಒಬ್ಬಳೇ ಶೃಂಗೇರಿಯ ಕಡೆ ಹೊರಟಳು. ಎಲ್ಲರೂ ಇನೋವಾ ಎಸ್.ಯು.ವಿ ಎರಡರಲ್ಲೂ ಹೊರಟರೆ ಅವರ ಜೊತೆ ಮೂರು ಜೀಪಿನಲ್ಲಿ 12 ಜನ ರಕ್ಷಕರೂ ಹೊರಟರು. ನೀತು ಹರೀಶ ಅವರನ್ನು ಬೀಳ್ಕೊಟ್ಟು ತಾವು ಯೋಚಿಸಿರುವಂತೆ xxxx ಸಿಟಿಯ ಕಡೆ ಹೊರಡಲು ರೆಡಿಯಾದರು.

ನೀತು.......ನಾನು ಇವರು ಹೊರಗೆ ಹೋಗ್ತಿದ್ದೀವಿ ಬರುವುದು ನಾಳೆ ಆಗಬಹುದು. ಶೀಲಾ ಮನೆಯಲ್ಲೊಬ್ಬಳೇ ಇರ್ತಾಳೆ ಅನು ನೀನು ಮನೆಯಲ್ಲಿರು ಇವತ್ತು ಫ್ಯಾಕ್ಟರಿಗೇನು ಹೋಗ್ಬೇಡ.

ಶೀಲಾ......ಎರಡ್ಮೂರು ದಿನಗಳಿಂದ ನಾನೂ ಗಮನಿಸುತ್ತಾ ಇದ್ದೀನಿ ನೀವಿಬ್ಬರೂ ಏನೋ ಕೆಲಸ ಅಂತ ಓಡಾಡ್ತಿದ್ದೀರಲ್ಲ ? ಏನ್ ವಿಷಯ ನಮ್ಮಿಂದ ಏನೂ ಮುಚ್ಚಿಡುತ್ತಿಲ್ಲ ತಾನೇ.

ಹರೀಶ.......ಮುಚ್ಚಿಡುವುದಕ್ಕೆ ವಿಷಯವಿದ್ದರೆ ತಾನೇ ಶೀಲಾ ನೀನು ಸುಮ್ಮನೆ ಏನೇನೋ ಕಲ್ಪನೆ ಮಾಡಿಕೊಂಡು ಯೋಚಿಸುತ್ತಿರಬೇಡ ಆರೋಗ್ಯದ ಕಡೆ ಗಮನ ನೀಡು.

ಶೀಲಾ......ಆದರೂ ನನಗೇನೋ ಅನುಮಾನವಿದೆ.

ನೀತು....ಅದಕ್ಕೇನೂ ಪರಿಹಾರವಿಲ್ಲ ಸುಮ್ಮನೆ ಯೋಚಿಸುವುದನ್ನು ಬಿಟ್ಟು ರೆಸ್ಟ್ ತೆಗೆದುಕೋ.

ಹರೀಶ......ಅಶೋಕ ನಾವು ನಿನ್ನ ಕಾರಿನಲ್ಲಿ ಹೋಗ್ತೀವಿ ನೀನು....

ಅಶೋಕ.....ಅದರ ಬಗ್ಗೆ ಚಿಂತೆ ಬಿಡ್ಬಿಡು ನಾನು ರೇವಂತ್ ಇವತ್ತು ಬುಲೆಟ್ ಸವಾರಿ ಮಾಡೋಣ ಅಂತಿದ್ದೀವಿ.

ರೇವಂತ್......ಹುಷಾರಾಗಿ ಹೋಗಿ ಬಾರಮ್ಮ ಏನೇ ಅವಶ್ಯಕತೆಯು ಇದ್ದರೆ ತಕ್ಷಣ ಫೋನ್ ಮಾಡು.

ನೀತು......ಸರಿಯಣ್ಣ ನಿಮಗೆಲ್ಲ ಫೋನ್ ಮಾಡದೆ ಇನ್ಯಾರಿಗೆ ತಾನೇ ಮಾಡಲಿ.

ನೀತು—ಹರೀಶ ಹೊರಟರೆ ಅವರಿಂದೆ ನಾಲ್ವರು ರಕ್ಷಕರಿದ್ದ ಜೀಪು ಸಹ ಹೊರಟಿತು.

ಶೀಲಾ......ಇಬ್ಬರೂ ಏನೋ ಮರೆಮಾಚುತ್ತಿದ್ದಾರೆ ಅಂತ ನನಗಂತು ಪಕ್ಕಾ ಗ್ಯಾರೆಂಟಿಯಿದೆ.

ರವಿ.....ಹಾಗೇನೂ ಇಲ್ಲ ಅವರು ನಮ್ಮಿಂದ ಮುಚ್ಚಿಡುವಂತ ಯಾವ ವಿಷಯವಿರುತ್ತೆ ನೀನು ಏನೇನೋ ಯೋಚಿಸ್ತಿದ್ದೀಯಷ್ಟೆ.

ರಜನಿ......ಇಲ್ಲ ರವಿ ಶೀಲಾ ಹೇಳ್ತಿರೋದು ಸರಿಯಂತ ನನಗೂ ಅನ್ನಿತ್ತಿದೆ ಆದರೇನೆಂದು ಗೊತ್ತಿಲ್ಲ.

ಅಶೋಕ......ಇವರ ಜೊತೆಯಲ್ಲಿ ರಕ್ಷಕರೂ ಹೋದರು ನೆನ್ನೆ ದಿನ ಬಸ್ಯ ಮತ್ತವನ ನಾಲ್ವರು ಹುಡುಗರನ್ನು ನೀತು ಕೆಲಸದ ಮೇಲೆ ಎಲ್ಲಿಗೋ ಕಳಿಸಿದ್ದಳು ಆದರೆಲ್ಲಿಗೆ ಅಂತ ಗೊತ್ತಿಲ್ಲ.

ಪ್ರೀತಿ......ಶಾಲೆಯ ಸಮಸ್ಯೆ ಇರಬಹುದಾ ?

ರೇವಂತ್......ಶಾಲೆ ಸಮಸ್ಯೆ ಆಗಿದ್ದರೆ ಇವರು ರಕ್ಷಕರನ್ನು ಜೊತೆಗೆ ಕರೆದುಕೊಂಡು ಹೋಗ್ತಿದ್ರಾ ಸ್ವಲ್ಪ ಯೋಚಿಸಿ ಮಾತಾಡು.

ಪ್ರೀತಿ......ಹಾಗಲ್ಲ ರೀ ಶಾಲೆಯಲ್ಲಿ ಹೊರಗಿವನವರು ಹರೀಶರನ್ನು ಬೇಟಿಯಾಗಿ ಏನಾದರೂ ಹೇಳಿರಬಹುದಾ ಅಂತ ಸಣ್ಣ ಅನುಮಾನ ಬಂತು. ನೀತು ನನ್ನ ರಜನಿ ಜೊತೆಯಲ್ಲಿ ಇರ್ತಾಳೆ ಮೊನ್ನೆ ಸಂಜೆ ಹರೀಶ ಶಾಲೆಯಿಂದ ಹಿಂದಿರುಗಿ ಎಲ್ಲಿಗೊ ಹೋಗಿದ್ರು ನೀತು ಕೂಡ ಹಿಂದೆಯೇ ಹೋದಳುಕೇಳಿದ್ದಕ್ಕೆ ಫ್ರೆಂಡ್ ಮಗನ ಸಮಸ್ಯೆ ಅಂದರು. ಸುರೇಶ ಶಾಲೆಯಲ್ಲಿ ಅಪ್ಪನನ್ನು ಬೇಟಿಯಾಗಲು ಯಾರಾದರೂ ಬಂದಿದ್ದರಾ ?

ಸುರೇಶನಿಗೆ ಸೂಕ್ಷ್ಮತೆ ಅರಿವಾಗಿದ್ದು.......ಇಲ್ಲ ಅತ್ತೆ ಯಾರೂ ಸಹ ಬಂದಿಲ್ಲ ಅಕಸ್ಮಾತ್ ಬಂದಿದ್ದರೂ ನಮಗೆಲ್ಲಿ ಗೊತ್ತಾಗುತ್ತೆ.

ನಯನ ಯೋಚಿಸುತ್ತ........ಅಮ್ಮ ಬುಧವಾರ ಮಧ್ಯಾಹ್ನ ಊಟದ ಸಮಯದಲ್ಯಾರೋ ಸುರೇಶನ ಹತ್ತಿರ ಬಂದು ಒಂದು ಪುಟ್ಟ ಬಾಕ್ಸ್ ಕೊಟ್ಟರು ಅದನ್ನು ಸುರೇಶ ಮಾವನಿಗೆ ಕೊಡುವುದಕ್ಕೆ ಹೋಗಿದ್ದನ್ನು ನಾನು ನೋಡಿದೆ.

ಅಶೋಕ......ಸುರೇಶ ಏನದು ಬಾಕ್ಸಿನ ಸಮಾಚಾರ ನಿಜ ಹೇಳು.

ಅನುಷ.....ಸುರೇಶ ಬಾಕ್ಸಿನೊಳಗೇನಿತ್ತು ?

ಶೀಲಾ......ಸುಳ್ಳು ಹೇಳಲು ಪ್ರಯತ್ನಿಸಬೇಡ ನಿಜ ಹೇಳು.

ಸುರೇಶ ಅಡಕತ್ತರಿಯಲ್ಲಿ ಸಿಲುಕಿದ್ದು ನಿಜ ಹೇಳುವುದಾಗಿ ಡಿಸೈಡ್ ಮಾಡಿ.......ಅಮ್ಮ ಅವನ್ಯಾರೆಂದು ಗೊತ್ತಿಲ್ಲ ನನಗೆ ನಿಮ್ಮಪ್ಪನ ಪರಿಚಯವಿದೆ ಈ ಬಾಕ್ಸ್ ನಿಮ್ಮಪ್ಪನಿಗೆ ತಲುಪಿಸು ಅಂದ ನಾನೂ ಅದನ್ನು ಅಪ್ಪನಿಗೆ ಕೊಟ್ಟೆ. ಆವತ್ತು ರಾತ್ರಿ ಆ ವ್ಯಕ್ತಿ ಹೇಗಿ ಕಾಣಿಸ್ತಿದ್ದ ಅಂತ ಅಮ್ಮ ವಿವರವಾಗಿ ಕೇಳಿ ಅವನ ಚಿತ್ರ ಬಿಡಿಸಿದರು ನನಗಿಷ್ಟೆ ಗೊತ್ತಿರೋದು ಇನ್ನೇನೂ ಗೊತ್ತಿಲ್ಲ.

ಶೀಲಾ......ನೀತು ಇಷ್ಟು ವರ್ಷಗಳಾದ ಮೇಲೆ ಚಿತ್ರ ಬಿಡಿಸಿದಳಾ ?

ಸುರೇಶ......ಆ ವ್ಯಕ್ತಿ ಹೇಗೆ ಕಾಣ್ತಿದ್ದ ಅಂತ ಕೇಳಿ ಪೋಲಿಸ್ ಹತ್ತಿರ ಇರ್ತಾರಲ್ಲ ಚಿತ್ರ ಬರೆಯುವವರು ಅವರಂತೆಯೇ ನಾನು ಹೇಳಿದ್ದು ಕೇಳಿಯೇ ಅವನನ್ನೇ 90% ಹೋಲುವ ರೀತಿ ಬಿಡಿಸಿದ್ರು.

ಶೀಲಾ......ಯಾರೇನೇ ಹೇಳಿದರೂ ಅದನ್ನು ಕೇಳಿಸಿಕೊಂಡೇ ಚಿತ್ರ ಬಿಡಿಸುವಂತ ಟ್ಯಾಲೆಂಟ್ ನಿಮ್ಮಮ್ಮನಿಗಿದೆ ಕಣೋ.

ಅನುಷ........ಅಂದರೆ ಅಕ್ಕ ಬಿಡಿಸಿದ್ದ ಚಿತ್ರದಲ್ಲಿನ ವ್ಯಕ್ತಿ ಯಾರೆಂದು ಅಕ್ಕ ಭಾವನಿಗೆ ಗೊತ್ತಾಗಿದೆ. ರೀ ನೀವು ಅಕ್ಕ ಮೊನ್ನೆ ಮಾತಾಡ್ತಿದ್ದ ವಿಷಯ ಆ ಚಿತ್ರದಲ್ಲಿದ್ದ ವ್ಯಕ್ತಿಯ ಬಗ್ಗೆಯಾ ?

ಪ್ರತಾಪ್ ಗಾಬರಿಯಿಂದ.......ನನಗೇನೂ ಗೊತ್ತಿಲ್ಲ ಕಣೆ.

ಅನುಷ.......ರೀ ನೀವು ಸುಳ್ಳು ಹೇಳ್ತಿರೋದು ಮುಖದಲ್ಲೇ ಕಾಣ್ತಿದೆ ನಿಜ ಹೇಳಿದ್ರೋ ಸರಿ.

ಪ್ರತಾಪ್......ಹೌದು ಮೊನ್ನೆ ಅತ್ತಿಗೆ ಅದೇ ಚಿತ್ರ ಕೊಟ್ಟು ಪೋಲಿಸ್ ಫೈಲಲ್ಲಿ ಅವನ ಬಗ್ಗೆ ತಿಳಿಯುತ್ತಾ ನೋಡೆಂದಿದ್ದರು.

ರವಿ......ಏನಾದರೂ ಗೊತ್ತಾಯ್ತಾ ?

ಪ್ರತಾಪ್....ಹೌದಣ್ಣ ಆ ವ್ಯಕ್ತಿ ಇದೇ ಊರಿನವನು ಸಣ್ಣ ಪುಣ್ಣ ಕಳ್ಳ ಹೆಸರು ರಂಗ ಅಂತ. ಅವನನ್ನು ಸ್ಟೇಷನ್ನಿಗೆ ಕರೆಸಿ ನಾನು ಅತ್ತಿಗೆಗೆ ತಿಳಿಸಿದೆ ಅದಕ್ಕವರು ಅವನನ್ನು ಬಸ್ಯನ ಹತ್ತಿರ ತಲುಪಿಸು ಅಂದರು ನಾನೂ ಹಾಗೇ ಮಾಡಿದೆ.

ಅಶೋಕ......ಇಷ್ಟೆಲ್ಲಾ ನಡೆಯುತ್ತಿದೆ ಆದರೆ ಅವರಿಬ್ಬರು ನಮಗೆ ಒಂದು ಮಾತೂ ಹೇಳಲಿಲ್ಲ ಬಸ್ಯನೂ ನಮಗೇನೂ ಹೇಳಲ್ಲ ಪಕ್ಕಾ ನೀತು ಚಮಚಾ ಅವನು.

ಅನುಷ......ಭಾವ ಬಸ್ಯ ಮತ್ತವನ ಹುಡುಗರಿಗೆ ಅಕ್ಕ ದೇವರಿದ್ದಂತೆ ಅವರು ಹೇಳ್ಬೇಡ ಅಂದಿದ್ದರೆ ಸಾಕು ಪ್ರಾಣ ಹೋದರೂ ಹೇಳಲ್ಲ.

ಪ್ರೀತಿ......ನಮಗ್ಯಾರಿಗೂ ಟೆನ್ಷನ್ ಆಗದಿರಲಿ ಅಂತ ಏನೂ ಹೇಳಿಲ್ಲ ಅನ್ನಿಸುತ್ತೆ. ಅವರಿಬ್ಬರೂ ಏನೇ ಮಾಡುತ್ತಿದ್ದರೂ ಅದರಲ್ಲಿ ಅವರಿಗೆ ಯಶಸ್ಸು ಕೊಡಪ್ಪ ದೇವರೆ ಏನೇ ಕಷ್ಟವಿದ್ದರೂ ನಿವಾರಣೆ ಆಗಲಿ.
ಅವರಾಗಿ ಹೇಳಿದರೆ ಮಾತ್ರ ತಿಳಿದುಕೊಳ್ಳೋಣ ನಾವಾಗಿ ಯಾವ ವಿಷಯವನ್ನೂ ಕೆಣಕುವುದು ಬೇಡ.

ಎಲ್ಲರೂ ಮನಸ್ಸಿನಿಂದ ನೀತು—ಹರೀಶರ ಕೆಲಸ ಸುಗಮವಾಗಿ ನೆರವೇರಲೆಂದು ದೇವರಲ್ಲಿ ಪ್ರಾರ್ಥನೆ ಮಾಡಿ ಒಲ್ಲದ ಮನಸ್ಸಿನಿಂದ ತಮ್ಮ ಕೆಲಸಗಳಿಗೆ ಹೊರಟರು.
* *
* *

No comments:

Post a Comment