Total Pageviews

Wednesday, 6 November 2024

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 242


ಶೃಂಗೇರಿ ತಲುಪಿ ಫ್ರೆಶಾದ ಬಳಿಕ ದೇವಸ್ಥಾನಕ್ಕೆ ಬೇಟಿ ನೀಡಿ ನಾಳೆ ಮುಂಜಾನೆಯ ಪ್ರಥಮ ಪೂಜೆಗೆ ತಮ್ಮ ಹೆಸರನ್ನು ಬರೆಸಿ ಸಂಜೆ ಆಶ್ರಮದಲ್ಲಿ ಗುರುಗಳು ದರ್ಶನ ನೀಡುವ ವಿಷಯ ತಿಳಿಯಿತು. ದೇವಸ್ಥಾನದಲ್ಲಿಯೇ ಊಟಕ್ಕೆ ಕುಳಿತರೆ ಸುಮಾಳ ತಟ್ಟೆಯಿಂದಲೇ ನಿಶಾ ಊಟ ಮಾಡಿಸಿಕೊಂಡಳು.


ರಾಜೀವ್......ಸ್ವಲ್ಪ ಹೊತ್ತು ರೆಸ್ಟ್ ಮಾಡಿ ಆಶ್ರಮಕ್ಕೆ ಹೋಗೋಣ.

ರೇವತಿ.....ರೀ ನೀವು...ವಿವೇಕ್....ವಿಕ್ರಂ ಸಂಜೆ ಮುಗುಟ ವಲ್ಲಿ ಉಟ್ಕೊಳಿ ಗುರುಗಳನ್ನು ಬೇಟಿಯಾಗಲು ಪದ್ದತಿಯ ಪ್ರಕಾರವೇ ಹೋಗುವುದು ಸೂಕ್ತ.

ವಿಕ್ರಂ.......ಆಯ್ತಮ್ಮ ಹಾಗೇ ಮಾಡ್ತೀವಿ.

ಮೂವರು ದಂಪತಿಗಳು ಒಂದೊಂದು ರೂಮಿಗೆ ಹೋದರೆ ನಿಶಾ ತನ್ನಿಬ್ಬರು ಅಕ್ಕಂದಿರ ರೂಮಿಗೋಡಿದಳು. ಸಂಜೆ ಶುಭ್ರವಾಗಿ ಆಶ್ರಮಕ್ಕೆ ತಲುಪಿ ಗುರುಗಳ ದರ್ಶನಕ್ಕಾಗಿ ನಿಂತಿರುವ ಜನರ ಜೊತೆ ತಾವೂ ಸರತಿಯಲ್ಲಿ ನಿಂತರು. ಅರ್ಧ ಘಂಟೆ ನಂತರ ಎಲ್ಲರೂ ಗುರುಗಳಿದ್ದ ಕೋಣೆಯೊಳಗೆ ಕಾಲಿಟ್ಟು ವಂಧಿಸಿದಾಗ ಮಕ್ಕಳೆಲ್ಲರ ಹೆಸರಿನಲ್ಲಿ ದೇವಸ್ಥಾನದ ಅಭಿವೃದ್ದಿಗೆಂದು ವಿಕ್ರಂ ಎರಡು ಲಕ್ಷಗಳ ಹಣವನ್ನು ಗುರುಗಳ ಮುಂದಿಟ್ಟಿದ್ದ ತಟ್ಟೆಯಲ್ಲಿಟ್ಟನು. ನಿಧಿ — ನಿಶಾ ಇಬ್ಬರನ್ನೇ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಗುರುಗಳು ಅವರ ಕತ್ತಿನಲ್ಲಿ ನೇತಾಡುತ್ತಿದ್ದ ॐ ಕಾರದ ಡಾಲರ್ ಮತ್ತು ನಿಶಾಳ ಕತ್ತಿನಲ್ಲಿರುವ ॐ ಡಾಲರಿನ ಜೊತೆ ಅಪರೂಪದ ರುದ್ರಾಕ್ಷಿಯನ್ನು ನೋಡಿ ತುಂಬಾ ವಿಸ್ಮಯಗೊಂಡರು. ಇಬ್ಬರತ್ತಲೂ ಬೆರಳು ತೋರಿಸಿ........

ಗುರುಗಳು......ಸೂರ್ಯವಂಶಿಗಳಾ ? ಎಂದು ಪ್ರಶ್ನಿಸಿದರು.

ಗುರುಗಳ ಪ್ರಶ್ನೆಗೆ ಮನೆಯವರು ಶಾಕಾದರೆ ನಿಧಿ ಕೈ ಮುಗಿಯುತ್ತ....xxxxx ಮಠದ ಶ್ಯಾಮ ವಸಿಷ್ಠ ಗುರುಗಳ ಶಿಷ್ಯೆ ನಿಧಿ ಸೂರ್ಯವಂಶಿ ಇವಳು ನನ್ನ ತಂಗಿ ನಿಶಾ ಸೂರ್ಯವಂಶಿ.

ನಿಧಿಯ ಉತ್ತರವನ್ನು ಕೇಳಿ ಪ್ರಸನ್ನ ಚಿತ್ತರಾದ ಗುರುಗಳು ತಕ್ಷಣವೇ ಉಳಿದವರಿಗೆ ಹೋರಗಿರುವಂತೇಳಿ ಆಜ್ಞಾಪಿಸಿದರು.

ಗುರುಗಳು.....ಶ್ಯಾಮ ವಸಿಷ್ಠರ ಶಿಷ್ಯೆ ಸೂರ್ಯವಂಶಿ ಸಂಸ್ಥಾನದ ರಾಜಕುಮಾರಿ ಇಲ್ಲಿ ನಮ್ಮ ಅಶ್ರಮದ್ದಲ್ಲೇಗೆ ? ನಮಗೆ ತಿಳಿದಿರುವ ಮಟ್ಟಿಗೆ ಸಂಸ್ಥಾನದ ಮಹರಾಜ ಮಹರಾಣಿ ದೈವಾದೀನರಾಗಿದ್ದಾರೆ. ಈಗ ಉತ್ತರಾಖಂಡದ ಆಶ್ರಮದ ಸಂಚಾಲಕರಾಗಿ ಇರುವವರು ಗೋವಿಂದಾಚಾರ್ಯರು ತಾನೇ.

ನಿಧಿ.......ನಿಮ್ಮ ಮಾತು ಸತ್ಯ ಗುರುಗಳೇ......ಎಂದು ಸಂಕ್ಷಿಪ್ತವಾಗಿ ತಮ್ಮ ಬಗ್ಗೆ ತಿಳಿಸಿದಳು.

ಗುರುಗಳು.....ತಾಯಿ ಶಾರದಾಮಾತೆ ಕೃಪೆಯಿಂದ ಖಂಡಿತ ಎಲ್ಲವೂ ಒಳ್ಳೆಯದಾಗುತ್ತೆ. ಈ ವರ್ಷದ ನವರಾತ್ರಿಯ ಮೊದಲನೇ ದಿನವೇ ನೀವೆಲ್ಲರೂ ಸಕುಂಟುಬ ಸಮೇತರಾಗಿ ನಮ್ಮಲ್ಲಿಗೆ ಬರಬೇಕು ಅದರ ಜೊತೆ ಈ ಮಗುವಿನ ತಂದೆ ತಾಯಿ ಇರುವುದು ತುಂಬ ಅವಶ್ಯಕ. ಆ ದಿನ ನಾವೇ ಖುದ್ದಾಗಿ ಈ ಮಗುವಿನ ಅಕ್ಷರಾಭ್ಯಾಸವನ್ನು ಪ್ರಾರಂಭ ಮಾಡಿಸುತ್ತೇವೆ.

ರಾಜೀವ್.......ಧನ್ಯೋಸ್ಮಿ ಗುರುಗಳೇ ಆದರೆ ನನ್ನ ಮೊಮ್ಮಗಳಿಗೆ ಇನ್ನೂ ಎರಡು ವರ್ಷವೂ ತುಂಬಿಲ್ಲವಲ್ಲ.

ಗುರುಗಳು......ಸಾಮಾನ್ಯವಾಗಿ ಮಕ್ಕಳು ಒಂದು ನಿರ್ಧಿಷ್ಟವಾದ ವಯಸ್ಸಿಗೆ ಬಂದಾಗಲೇ ಅಕ್ಷರಾಭ್ಯಾಸ ಮಾಡಿಸುವುದಾಗಿ ಕೆಲವು ನಿಬಂಧನೆಗಳನ್ನು ನೀವು ಹೊರಗೆ ಓದಿರಬೇಕು. ಆದರೆ ಸಾಕ್ಷಾತ್ ಜಗನ್ಮಾತೆಯ ಆಶೀರ್ವಾದದಿಂದ ಜನಿಸಿರುವ ಈ ಮಗುವಿನ ಮೇಲೆ ಆ ನಿಬಂಧನೆಗಳ್ಯಾವೂ ಅನ್ವಯಿಸುವುದಿಲ್ಲ. ನಿನ್ನ ಗುರುಗಳಿಗೂ ಆ ದಿನ ನಮ್ಮಲ್ಲಿಗೆ ಬರುವಂತೆ ನಾವೇ ಆಹ್ವಾನ ಕಳಿಸಿ ಕೊಡುತ್ತೀವಿ. ಈಗ ನೀವೆಲ್ಲರೂ ಹೋಗಿ ಬನ್ನಿ ತಾಯಿ ಶಾರದಾ ಮಾತೆ ಎಲ್ಲರಿಗೂ ಒಳ್ಳೆಯದು ಮಾಡಲಿ.....ಎಂದು ಆಶೀರ್ವಧಿಸಿ ಅವರನ್ನು ತಮ್ಮ ಆಶ್ರಮದಿಂದ ಕಳುಹಿಸಿದರು.

ಸವಿತಾ.......ನಮ್ಮ ಚಿನ್ನಿ ತುಂಬ ಅದೃಷ್ಟವಂತೆ ಗುರುಗಳೇ ಸ್ವತಃ ಮುಂದೆ ನಿಂತು ಇವಳಿಗೆ ಅಕ್ಷರಾಭ್ಯಾಸ ಮಾಡಿಸಲಿದ್ದಾರೆ.

ಸುಮ......ನಿಜ ಸವಿತಾ ಇದು ನಿಜಕ್ಕೂ ಸೌಭಾಗ್ಯವೇ. ನಿಧಿ ನೀನು ಹೇಳಿದ ಶ್ಯಾಮ ವಸಿಷ್ಠ ಗುರುಗಳ್ಯಾರು. ಇದಕ್ಕೂ ಮುಂಚೆ ಅವರ ಬಗ್ಗೆ ನೀನು ಹೇಳಿರಲಿಲ್ಲ ಅಲ್ಲವಾ.

ನಿಧಿ......ಹೌದತ್ತೆ ಅಮ್ಮ ಒಬ್ಬರಿಗೆ ಮಾತ್ರ ಅವರ ಬಗ್ಗೆ ಗೊತ್ತಿರೋ ಇನ್ಯಾರಿಗೂ ತಿಳಿದಿಲ್ಲ. ಗೋವಿಂದಾಚಾರ್ಯ ಗುರುಗಳಿಗಿಂತಲೂ ಮುಂಚೆ ಅವರೇ ಆಶ್ರಮದ ಪೀಠಾಧ್ಯಕ್ಷರಾಗಿದ್ದವರೇ ಶ್ಯಾಮವಸಿಷ್ಠ ಆಚಾರ್ಯರು. ಅವರು ದೈವಾಧೀನರಾದ ನಂತರ ಗುರುಗಳಾದ ಗೋವಿಂದಾಚಾರ್ಯರು ಆಶ್ರಮದ ಉಸ್ತುವಾರಿ ವಹಿಸಿಕೊಂಡರು.

ರಾಜೀವ್.......ನೀವಿಬ್ಬರು ಸೂರ್ಯವಂಶಿ ರಾಜ ಮನೆತನದವರು ಅಂತ ಗುರುಗಳಿಗೆ ಹೇಗೆ ತಿಳಿಯಿತು ?

ರೇವತಿ.......ಗುರುಗಳು ಸದಾಕಾಲ ತಾಯಿ ಶಾರದಾ ಮಾತೆಯ ಆರಾಧನೆ ಮಾಡುವಂತ ಧೈವ ಮಾನವರು ಅವರಿಗೆ ತಿಳಿಯದೆ ಇನ್ನೇನು ನಿಮ್ಮಂತಾ ಮುಠ್ಠಾಳರಿಗೆ ತಿಳಿಯುತ್ತಾ.

ವಿವೇಕ್ ನಗುತ್ತ........ಅಂಕಲನ್ನು ರೇಗಿಸದಿದ್ದರೆ ಆಂಟಿಗೆ ಆವತ್ತು ಸಮಾಧಾನ ಆಗೋಲ್ಲ ಅನಿಸುತ್ತೆ. ನಿಶಾ ಪುಟ್ಟಿ ಏನ್ ನೋಡುತ್ತಾ ನಿಂತ್ಬಿಟ್ಟೆ ಕಂದ ?

ನಿಧಿ......ಅಂಕಲ್ ಇವಳಿಗೆ ಪ್ರಾಣಿ ಪಕ್ಷಿಗಳನ್ನು ನೋಡಿದರೆ ಸಾಕು ತಾನೆಲ್ಲಿದ್ದೀನಿ ಸುತ್ತಲ್ಯಾರಿದ್ದಾರೆ ಅನ್ನೋದೇ ಮರೆತು ಹೋಗುತ್ತೆ.

ನಿಶಾ......ತಾತ ಅಲ್ಲಿ ನೋಲಿ ಪಕ್ಕಿ ಚೆನ್ನಾಗಿಲೆ.

ಸವಿತಾ ಅವಳನ್ನೆತ್ತಿಕೊಂಡು.......ಹೂಂ ಕಂದ ಪಕ್ಷಿಗಳು ಚೆನ್ನಾಗಿದೆ ಈಗ ಆಚೆ ಹೋಗೋಣ ಆಮೇಲೆ ಮತ್ತೆ ಬಂದು ನಿನ್ನ ಪಕ್ಷಿಗಳನ್ನು ನೋಡೋಣ ಆಯ್ತಾ.....ಎಂದವಳನ್ನು ಪೂತುಣಿಸಿ ಆಶ್ರಮದಿಂದ ಹೊರಗೆ ಕರೆದೊಯ್ದರು.

ಮುಂಜಾನೆಯ ಪ್ರಥಮ ಪೂಜೆ ಮುಗಿಸಿಕೊಂಡು ನಿಧಿ....ನಿಕಿತಾ ಮತ್ತು ವಿವೇಕ್ ಬೆಂಗಳೂರಿಗೆ ಹೊರಡುವುದು ಮತ್ತು ರಾಜೀವ್... ರೇವತಿ...ವಿಕ್ರಂ...ಸುಮ....ಸವಿತಾಳ ಜೊತೆ ನಿಶಾ ಹೊರನಾಡಿನ ಅನ್ಯಪೂರ್ಣೆಶ್ವರಿ ದರ್ಶನ ಮಾಡ್ಕೊಂಡು ಅಲ್ಲಿಂದ ಕಾಮಾಕ್ಷಿಪುರಕ್ಕೆ ಮರಳುವವರಿದ್ದರು.

ಮಧ್ಯಾಹ್ನ 1 ಘಂಟೆಯ ಹೊತ್ತಿಗೆ xxxx ಸಿಟಿಯೊಳಗೆ ಇವರಿದ್ದ ಕಾರು ಪ್ರವೇಶಿಸಿದಾಗ ಯಾವುದಾದರೊಂದು ಒಳ್ಳೆ ಲಾಡ್ಜಿನ ಕಡೆಗೆ ಕಾರನ್ನು ಮುನ್ನಡೆಸಲು ಬಸ್ಯನಿಗೆ ಹರೀಶ ಸೂಚಿಸಿದನು. ಹಿಂದಿನ ಸೀಟಲ್ಲಿ ಹರೀಶನ ಮಡಿಲಲ್ಲಿ ತಲೆಯಿಟ್ಟು ಕಾಲು ಚಾಚಿಕೊಂಡಿದ್ದ ನೀತು ಆರಾಮವಾಗಿ ಮಲಗಿದ್ದರೆ ಮಡದಿಯ ತಲೆ ನೇವರಿಸುತ್ತ ಅವಳ ಸುಂದರ ಮುಖವನ್ನೇ ನೋಡುತ್ತಿದ್ದನು.

ಬಸ್ಯ......ಸರ್ ಲಾಡ್ಜಿನ ಹತ್ತಿರ ಬಂದೆವು.

ಹರೀಶ......ನೀತು...ನೀತು...ಏದ್ದೇಳು ನಾವು xxx ಸಿಟಿ ತಲುಪಿದ್ವಿ ನಡಿ ಫ್ರೆಶಾಗಿ ಎಲ್ಲರೂ ಊಟ ಮಾಡೋಣ.

ಹರೀಶ ಎಲ್ಲರಿಗೂ ಲಾಡ್ಜಿನೊಳಗೆ ಯಾವುದೇ ಶಸ್ತ್ರಾಸ್ತ್ರಗಳನ್ನೂ ತರದೆ ಕಾರಿನಲ್ಲೇ ಇಟ್ಟಿರಲು ಸೂಚಿಸಿ ರೂಂ ಬುಕಿಂಗ್ ಮಾಡಿದನು. ಎಲ್ಲರೂ ಫ್ರೆಶಾಗಿ ರೂಮಿನಲ್ಲೇ ಊಟ ತರಿಸಿಕೊಂಡು ಮಾಡಿದಾಗ..

ಹರೀಶ......ನೀನಿಲ್ಲೇ ರೆಸ್ಟ್ ತೆಗೆದುಕೊಳ್ತಿರು ನಾನಾ ಸಾಹುಕಾರನ ಹೆಣ ಪಡೆದುಕೊಂಡಿದ್ದ ಜೀವನ್ ಎಂಬುವವನ ಮನೆಯ ಹತ್ತಿರ ಹೋಗಿ ಬರ್ತೀನಿ.

ನೀತು.....ರೀ ಸಾಹುಕಾರನ ಹೆಣ ಪಡೆದುಕೊಂಡ ಜೀವನ್ ಅವನೇ ನಮ್ಮನ್ನು ಬ್ಲಾಕ್ಮೇಲ್ ಮಾಡುತ್ತಿರುವವನೆಂದು ನನ್ನ ಮನಸ್ಸು ಹೇಳ್ತಾ ಇದೆ. ನೀವಲ್ಲಿಗೆ ಒಬ್ಬರೇ ಹೋಗೋದು......

ಹರೀಶ ಮಧ್ಯದಲ್ಲೇ......ನಾನಲ್ಲಿಗೆ ಒಬ್ಬನೇ ಹೋಗ್ತಿಲ್ಲ ಬಸ್ಯ..ಸೀನ ಅವರಿಬ್ಬರ ಜೊತೆ ಇನ್ನಿಬ್ಬರು ರಕ್ಷಕರನ್ನೂ ಕರೆದುಕೊಂಡು ಹೋಗ್ತಾ ಇದ್ದೀನಿ. ಅಲ್ಲಿನ ವಿಷಯ ತಿಳಿದುಕೊಂಡು ನಿನಗೆ ಫೋನ್ ಮಾಡಿ ತಿಳಿಸ್ತೀನಿ ನೀನಿಲ್ಲೇ ಇರಬೇಕಷ್ಟೆ.

ನೀತು.....ಆಯ್ತು ನನ್ನ ಪತಿದೇವರ ಆಜ್ಞೆಯಂತಾಗಲಿ.

ಹರೀಶನ ಜೊತೆ ಬಸ್ಯ..ಸೀನ ಮತ್ತಿಬ್ಬರು ರಕ್ಷಕರು ಅವರಿವರಲ್ಲಿ ಕೇಳಿಕೊಂಡು ಸಾಹುಕಾರನ ಹೆಣ ಪಡೆದಿದ್ದ ಜೀವನ್ ಎಂಬುವವನ ಮನೆಯ ಹತ್ತಿರ ತಲುಪಿದರು.

ಹರೀಶ......ಇದ್ಯಾವುದೋ ಚಿಕ್ಕ ಮನೆಯಿಂದ್ದಂತಿದೆ ಅಡ್ರೆಸ್ ಸರಿ ಇದೆ ತಾನೇ ಅಥವ ನಾವು ಬೇರೆ ಮನೆಗೆ ಬಂದ್ಬಿಟ್ಟೆವಾ.

ಸೀನ......ಸರ್ ನಾನೋಗಿ ಎಲ್ಲ ವಿಚಾರಿಸಿಕೊಂಡು ಬರ್ತೀನಿ ಅಣ್ಣ ನೀವು ಕಾರ್ ಸ್ವಲ್ಪ ಹಿಂದಕ್ಕೆ ನಿಲ್ಲಿಸಿಕೊಂಡಿರಿ ನೋಡಿದವರಿಗೆ ಸಣ್ಣ ಅನುಮಾನ ಬಂದರೂ ಬರಬಹುದು.

ಹರೀಶ.....ಹುಷಾರಾಗಿ ಕಣೋ ಸೀನ.

ಸೀನ......ಚಿಂತಿಸಬೇಡಿ ಸರ್ ನನ್ನ ಟ್ಯಾಲೆಂಟ್ ತೋರಿಸುವಂತಹ ಅವಕಾಶ ಈಗ ಸಿಕ್ಕಿದೆ ನೀವು ಆರಾಮಾಗಿರಿ.

ಸೀನ ಮನೆ ಹತ್ತಿರಕ್ಕೋಗಿ ಬಾಗಿಲು ತಟ್ಟಿದಾಗ ಸುಮಾರು 40 ವರ್ಷ ವಯಸ್ಸಿನ ವ್ಯಕ್ತಿ ಬಾಗಿಲು ತೆರೆದು......ಯಾರು ಬೇಕು ?

ಸೀನ.......ನೀವು ಜೀವನ್ ಅಣ್ಣ ತಾನೇ ನಮ್ಮ xxx ಸಾಹುಕಾರರ ಮಗ ನಾನಲ್ಲಿಂದಲೇ ಬಂದಿರೋದು.

ವ್ಯಕ್ತಿ.....ನೀನ್ಯಾರು ? ಇಲ್ಲಿ ಜೀವನ್ ಅನ್ನೋರು ಯಾರೂ ಇಲ್ಲ.

ಸೀನ......ಏನಣ್ಣ ನಮ್ಮ ಸಾಹುಕಾರರ ಮಗನ ಬಗ್ಗೆ ನನಗೆ ಗೊತ್ತಿಲ್ವ ನಿಮ್ಮ ಬಗ್ಗೆ ಯಜಮಾನರು ಆಗಾಗ ಹೇಳ್ತಿದ್ದರು.

ವ್ಯಕ್ತಿ......ನೀನ್ಯಾರೆಂದು ಹೇಳಲಿಲ್ಲ.

ಸೀನ.....ಅಣ್ಣ ನಾನು ಸಾಹುಕಾರರು ಅಂದರೆ ನಿಮ್ಮ ತಂದೆಯವರ xxxx ಹಳ್ಳಿ ಮನೆಯಲ್ಲಿ ಅವರಾಗೆ ಬಲಗೈ ಬಂಟನಾಗಿದ್ದೆ. ಆವತ್ತು ನಡೆದ ಗಲಾಟೆಯಲ್ಲಿ ನಾನೇ ಸಾಹುಕಾರರನ್ನು ತಪ್ಪಿಸಿ ಹಳ್ಳಿಯಿಂದ ಹೊರಗೆ ಸೇಫಾಗಿ ಕಳಿಸಿದೆ ಆದರೆ ನಾನು ಆಸ್ಪತ್ರೆಗೆ ಸೇರಿದ್ದಾಯ್ತು.

ವ್ಯಕ್ತಿ......ಏನ್ ವಿಷಯ ನನಗೆ ಪೂರ್ತಿ ಹೇಳು.

ಸೀನ....ಅಣ್ಣ ಒಳಗೋಗಿ ಮಾತಾಡೋಣ ನಡೀರಿ ನೀವು ಜೀವನ್ ತಾನೇ ಅಥವ ಇನ್ನೂ........

ವ್ಯಕ್ತಿ.....ಹೌದು ಕಣೋ ನಾನೇ ಜೀವನ್ xxxx ಸಾಹುಕಾರರ ಮಗ ಅಲ್ಲದಿದ್ದರೂ ಅವರಿಗೆ ಮಗನಂತೆಯೇ ಇದೆ.

ಸೀನ......ನಮ್ಮೆಜಮಾನರು ಜೀವನ್ ಅಂತ ನನ್ನ ಮಗ xxxxxxx ಸಿಟಿಯಲ್ಲಿದ್ದಾನೆ ಅಂತ ಹೇಳ್ತಿದ್ರು ಆದರೆ ನೀವೊಮ್ಮೆಯೂ ಹಳ್ಳಿಗೆ ಬಂದೇ ಇದ್ದಂಗಿಲ್ಲ ಯಾಕಣ್ಣ ?

ಜೀವನ್......ಅದೆಲ್ಲ ಆಮೇಲೆ ಹೇಳ್ತೀನಿ ಅದೇನೋ ಗಲಾಟೆ ಬಗ್ಗೆ ಹೇಳ್ತಿದ್ದೆ ಅಪ್ಪನನ್ನು ಕಾಪಾಡಿದೆ ಅಂತ ಮೊದಲು ಅದನ್ನೇಳು.

ಸೀನ........ಅಣ್ಣ ಅದರ ಬಗ್ಗೆ ಯಾಕೆ ಕೇಳ್ತೀರಾ ಹಳ್ಳಿಯ ಸಮೀಪ ಒಂದು ಫ್ಯಾಕ್ಟರಿ ಕಟ್ಟಲು ಪ್ರಾರಂಭಿಸಿದ್ದರು ಆದರೆ ನಮ್ಮೆಜಮಾನ್ರು ಅದಕ್ಕೆ ವಿರೋಧಿಸಿದರು. ಆ ಫ್ಯಾಕ್ಟರಿ ಮಾಲೀಕರು ಒಬ್ಬಳು ಲೇಡಿ ಹೆಸರು ಸರಿಯಾಗಿ ನೆನಪಿಲ್ಲ ಆದರೆ ಸಾಹುಕಾರರನ್ನು ಆಮೇಲಿದೆ ನಿನಗೆ ಮಾರಿ ಹಬ್ಬ ನೋಡ್ಕೋತೀನಿ ಅಂತ ಎಚ್ಚರಿಕೆ ನೀಡಿದ್ದರು.

ಜೀವನ್.......ಆ ಹೆಂಗಸಿನ ಹೆಸರು ನೀತು ಅಂತ ತಾನೇ.

ಸೀನ......ಇರಬಹುದಣ್ಣ ನನಗೆ ಸರಿಯಾಗಿ ನೆನಪಿಲ್ಲ ಒಂದೇ ಸಲ ನಾನವರ ಹೆಸರು ಕೇಳಿದ್ದು. ಆ ಹೆಂಗಸು ಎಚ್ಚರಿಕೆ ಕೊಟ್ಟ ರಾತ್ರಿಯೇ ಹತ್ತಾರು ಜನ ರೌಡಿಗಳು ನಮ್ಮೆಜಮಾನರ ಮನೆ ಮೇಲೆ ಕಗ್ಗತ್ತಲಿನ ಸಮಯದಲ್ಲಿ ದಾಳಿ ಮಾಡ್ಬಿಟ್ರು. ದೇವರ ದಯೆ ನಾನು ಅಲ್ಲಿಯೇ ಇದ್ದೆ ಹೇಗೋ ಯಜಮಾನರನ್ನು ಅಲ್ಲಿಂದ ಪಾರು ಮಾಡಿ ಇದೇ ಸಿಟಿಗೆ ಕಳಿಸಿಬಿಟ್ಟೆ. ಆದರೆ ನಮ್ಮವರಲ್ಲಿ ನನ್ನನ್ನೊಬ್ಬನನ್ನು ಬಿಟ್ಟರೆ ಉಳಿದವರಲ್ಲಿ ಯಾರೊಬ್ಬರೂ ಬದುಕಿಲ್ಲ ಎಲ್ಲರೂ ಸತ್ತೋದರು. 

ನನ್ನ ಹೊಟ್ಟೆಗೂ ನಾಲ್ಕು ಸಲ ಕತ್ತಿಯಿಂದ ಚುಚ್ಚಿದ್ದರು ಆದರೆ ನಾನು ಗಟ್ಟಿಪಿಂಡ ಬದುಕುಳಿದು ಬಿಟ್ಟೆ. ಅಣ್ಣ ಯಜಮಾನರು ಇದೇ ಸಿಟಿ ಮನೆಯಲ್ಲಿ ಬೆಂಕಿಗೆ ಆಹುತಿಯಾಗಿ ಸತ್ತು ಹೋದರೆಂದು ಕೇಳಿದೆ. ನನಗೆ ಪಕ್ಕಾ ಗ್ಯಾರೆಂಟಿಯಿದೆ ಅಣ್ಣ ಆ ಹೆಂಗಸೇ ಯಜಮಾನರನ್ನು ಸಾಯಿಸಿದ್ದಾರೆ ಅಂತ. ನಾನೂ ಎರಡ್ಮೂರು ತಿಂಗಳಿನಿಂದ ಅವರ ಬಗ್ಗೆ ಮಾಹಿತಿ ಕಲೆ ಹಾಕಲು ಪ್ರಯತ್ನಿಸಿದೆ ಆದರೇನೂ ತಿಳಿಯಲಿಲ್ಲ ಅದಕ್ಕೆ ನಿಮ್ಮ ಜೊತೆ ಸೇರಿ ಏನಾದರೂ ಮಾಡೋಣವೆಂದು ಇಲ್ಲಿಗೆ ಬಂದೆ. ನಾನೊಬ್ಬನೇ ಏನೂ ಮಾಡಲು ಸಾಧ್ಯವಿಲ್ಲ ಯಜಮಾನರ ಮಗ ನೀವೂ ಜೊತೆಯಾದರೆ ಅವರ ಸಾವಿಗೆ ಕಾರಣವಾಗಿರುವ ಆ ಹೆಂಗಸಿನ ವಿರುದ್ದ ಸೇಡು ತೀರಿಸಿಕೊಳ್ಳಬಹುದಣ್ಣ.

ಜೀವನ್ ಕ್ರೂರವಾಗಿ ನಗುತ್ತ ಮೊಬೈಲಿನಲ್ಲೊಂದು ಫೋಟೋವನ್ನು ತೆಗೆದು ತೋರಿಸಿ.......ಇವಳೇ ತಾನೇ ಆ ಹೆಂಗಸು.

ಮೊಬೈಲಿನಲ್ಲಿ ನೀತು ಅಕ್ಕನ ಫೋಟೋ ನೋಡಿ ಒಂದು ಕ್ಷಣ ಶಾಕ್ ಆಗಿದ್ದ ಸೀನ ಸಾವರಿಸಿಕೊಂಡು.....ಹೌದಣ್ಣ ಇವರೇ ಇವರೇ ನಮ್ಮ ಸಾಹುಕಾರರನ್ನು ಸಾಯಿಸಿದ್ದು ಬಿಡಬಾರದಣ್ಣ ನಾವೇನಾದರೂ ಸರಿ ಮಾಡಲೇಬೇಕು ಇವರಿಗೊಂದು ಗತಿ ಕಾಣಿಸಬೇಕಿದೆ.

ಜೀವನ್......ನಾನಾಗಲೇ ಮಾಡಿದ್ದಾಗಿದೆ ಮುಂದಿನ ಗುರುವಾರದ ದಿನ ನಾವೆಲ್ಲರೂ ಸೇರಿಕೊಂಡು ಇವಳ ಕಥೆ ಮುಗಿಸೋಣ. ಆದರೆ ಒಳ್ಳೆ ರಸಪೂರಿ ಮಾವಿನ ಹಣ್ಣಿನಂತಿದ್ದಾಳಲ್ಲ ಮೊದಲು ಇವಳಲ್ಲಿನ ರಸ ಹೀರಿ ಆಮೇಲೆ ಮುಗಿಸೋದು.

ದೈವ ಸಮಾನಳಾಗಿದ್ದ ಅಕ್ಕನ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ಅಸಾಧ್ಯ ಕೋಪ ಬಂದರೂ ತಾಳ್ಮೆಯಿಂದಿದ್ದ ಸೀನ.....ನಾವೆಲ್ಲರೂ ಅಂದರೆ ಸಾಹುಕಾರರಿಗೆ ಸಂಬಂಧಪಟ್ಟಂತೆ ಈಗ ಉಳಿದಿರುವವರು ನಾವಿಬ್ಬರು ಮಾತ್ರ ಇನ್ಯಾರಿದ್ದಾರೆ ?

ಜೀವನ್......ನಾವಿಬ್ಬರೇ ಕಣೋ ಆದರೆ ಇವಳ ವಿರುದ್ದ ಸೇಡಿಗಾಗಿ ಇನ್ನೊಬ್ಬ ಕಾಯುತ್ತಿದ್ದಾನೆ.

ಸೀನ......ಅವರಿಗೂ ಈ ಹೆಂಗಸಿಗೂ ಏನು ಸಂಬಂಧ ?

ಜೀವನ್......ನಾವಿಬ್ಬರೂ xxxx ಪಟ್ಟಣದ ಕಾಲೇಜಿನಲ್ಲಿ ಓದುತ್ತಾ ಇದ್ದಾಗ ಇವಳೂ ಅದೇ ಕಾಲೇಜಿನಲ್ಲಿದ್ದಳು. ಏನೋ ನೋಡಲಿಕ್ಕೆ ತುಂಬ ಸುಂದರವಾಗಿದ್ದಾಳೆ ಅಂತ ನಾವೂ ಹಿಂದಿಂದೆ ಸುತ್ತಾಡ್ತಿದ್ವಿ. ಒಂದಿನ ನನ್ನ ಸ್ನೇಹಿತ ಇವಳ ಕೈ ಹಿಡಿದು ಲವ್ ಅಂದ ಅಷ್ಟೇ ಪಾಪ ಅವನ ಕೈ ತಿರುಗಿಸಿ ಮೋರಿಯೊಳಗೆ ಎಸೆದುಬಿಟ್ಟಳು. ಆವತ್ತಿನಿಂದ ಕಾಲೇಜಿನಲ್ಲಿ ನಮ್ಮ ಮಾನ ಮರ್ಯಾದೆ ಎಲ್ಲವೂ ಹರಾಜಾಗಿತ್ತು ನಮ್ಮ ಜೊತೆಗಿನ್ನೊಬ್ಬ ಕೂಡ ಇದ್ದ ಆವತ್ತಿನಿಂದ ಅವನೂ ನಮ್ಶಿಂದ ದೂರವಾಗಿ ಹೋದ. 

ಆವತ್ತೇ ನಿರ್ಧರಿಸಿದ್ವಿ ಹೇಗಿದರೂ ಸರಿ ಇವಳ ಜೀವನ ಹಾಳು ಮಾಡಬೇಕೆಂದು ಆದರೆ ನಾವು ಪ್ಲಾನ್ ಮಾಡುವ ಮುಂಚೆಯೇ ಇವಳಿಗೆ ಮದುವೆಯಾಗಿ ಅಲ್ಲಿಂದ ಬೇರೆ ಊರಿಗೆ ಹೋಗಿದ್ದಳು ನಾವೂ ತುಂಬ ಹುಡುಕಾಡಿದೆವು ಆದರೆ ಸಿಗಲೇ ಇಲ್ಲ. ಈಗ ನನ್ನ ತಂದೆಯ ಸಾವಿಗೆ ಕಾರಣವಾಗಿದ್ದಾಳೆ ಸುಮ್ಮನೆ ಬಿಡ್ತೀನಾ ಅದಕ್ಕೂ ಮಿಗಿಲಾಗಿ ಇವಳ ವಿರುದ್ದ ನನ್ನ ಹತ್ತಿರ ಬ್ರಹ್ಮಾಸ್ತ್ರವಿದೆ ನೋಡ್ತಿರು ಹೇಗೆ ಆಟವಾಡಿಸ್ತೀನಿ ಅಂತ.

ಸೀನ......ಅಣ್ಣ ಏನಾ ಬ್ರಹ್ಮಾಸ್ತ್ರ ?

ಜೀವನ್.....ತುಂಬ ವರ್ಷಗಳಿಂದ ಸ್ನೇಹಿತನಾಗಿರುವವನಿಗೇ ಅದರ ಬಗ್ಗೆ ಹೇಳಿಲ್ಲ ನೀನು ಇವತ್ತು ತಾನೇ ಬಂದಿದ್ದೀಯ ನಿನಗೆ ಹೇಳ್ತೀನ. ಆದರೆ ಚಿಂತಿಸಬೇಡ ಕಣೋ ಗುರುವಾರದವರೆಗೆ ಕಾಯಿ ಅದೇನು ಅಂತ ಹೇಳಲ್ಲ ಎಲ್ಲರಿಗೂ ತೋರಿಸ್ತೀನಿ ಅದರ ಜೊತೆ ಈ ಕೊಬ್ಬಿದ ಹಸುವಿನ ಮೇಲೇರಿ ಸುಖ ಅನುಭವಿಸುವ ಅವಕಾಶವನ್ನು ನಿನಗೆ ಕೊಡ್ತೀನಿ.

ಸೀನನ ಕೋಪ ಮಿತಿಮೀರುತ್ತಿದ್ದರೂ ಕಷ್ಟಪಟ್ಟು ತಡೆದುಕೊಳ್ಳುತ್ತ... ಅಣ್ಣ ಏನೇ ಮಾಡಿದರೂ ಪಕ್ಕಾ ಪ್ಲಾನ್ ಮಾಡಿಕೊಂಡು ಮಾಡ್ಬೇಕು ಅವರ ಹಿಂದೆ ತುಂಬ ಜನರಿದ್ದಾರೆ ಸಾಯಿಸುವುದಕ್ಕೂ ಹೇಸುವುದಿಲ್ಲ ಅವರಿಗಾಗಿ ಪ್ರಾಣ ನೀಡಲೂ ಹಿಂಜರಿಯುವುದಿಲ್ಲ ಅಂತ ಕೇಳಿದ್ದೀನಿ

ಜೀವನ್......ನೀನು ಬಂದಿದ್ದು ಒಳ್ಳೆಯದಾಯ್ತು ಕಣೋ ನನಗೆ ಅವಳ ಬಗ್ಗೆ ಜಾಸ್ತಿ ವಿಷಯ ತಿಳಿದಿಲ್ಲ ಅವಳ ಗಂಡನ ಯಾರೆಂಬುದು ಮಾತ್ರ ಗೊತ್ತಿದೆ ಅಷ್ಟೆ. ಅವಳ ಫ್ಯಾಮಿಲಿಯಲ್ಯಾರಿದ್ದಾರೆ ಅವಳಿಂದೆ ಎಷ್ಟು ಜನರಿದ್ದಾರೆ ಅಂತ ನಿನಗೆ ಗೊತ್ತಿರುತ್ತೆ ಸ್ವಲ್ಪ ತಾಳು ನನ್ನಿಬ್ಬರು ಸ್ನೇಹಿತರು ಬರ್ತಾರೆ ನಾಲ್ಕೂ ಜನ ಸೇರಿ ಎಣ್ಣೆ ಹೊಡೆಯುತ್ತ ಪ್ಲಾನ್ ರೂಪಿಸೋಣ.

ಸೀನ......ಅಣ್ಣ ನನ್ನ ಕರುಳಿಗೇ ಚಾಕು ಚುಚ್ಚಿದ್ದರು ಅದಕ್ಕೆ ಡಾಕ್ಟರ್ ಇನ್ನೂ ಎರಡ್ಮೂರು ವರ್ಷ ಒಳಗಿನ ಗಾಯಗಳು ಮಾಗುವುದಿಲ್ಲ ನೀನು ಖಾರ...ಹೆಂಡ ಇವುಗಳಿಂದ ದೂರವಿರು ಇಲ್ಲದಿದ್ದರೆ ಶಿವನ ಪಾದ ಸೇರುವುದು ಗ್ಯಾರೆಂಟಿ ಅಂದಿದ್ದಾರೆ. ಆದರೆ ಆ ಹೆಂಗಸಿನ ವಿರುದ್ದ ಸೇಡು ತೀರಿಸಿಕೊಂಡ ದಿನ ಕಂಠಪೂರ್ತಿ ಕುಡಿಯುತ್ತೀನಿ ಆಮೇಲೆ ಸತ್ತರೂ ಚಿಂತೆಯಿಲ್ಲ ನಮ್ಮೆಜಮಾನರ ಸೇಡು ತೀರಿಸಿದೆ ಅನ್ನೋ ಆತ್ಮತೃಪ್ತಿಯಾದರೂ ಇರುತ್ತೆ ಅಲ್ಲಿವರೆಗೂ ಮುಟ್ಟಲ್ಲ.

ಜೀವನ್ ಅವನ ಬೆನ್ನು ತಟ್ಟಿ......ಶಭಾಷ್ ಕಣೋ ಇದೇ ಸ್ವಾಮಿ ನಿಷ್ಠೆ ಅಂದರೆ ತಗೋ ದುಡ್ಡು ಮೇಯಿನ್ ರೋಡಲ್ಲಿ ಒಂದು ಬಾರಿದೆ ಅಲ್ಲಿಂದ xxxx ಬ್ರಾಂಡಿನ ಎರಡು ಫುಲ್ ಬಾಟಲ್ ತಗೆದುಕೊಂಡು ಬಾ ಇನ್ನೇನು ನನ್ನ ಸ್ನೇಹಿತರು ಬರಬಹುದು.

ಸೀನ......ಅಣ್ಣ ಯಾವ ಬ್ರಾಂಡ್ ಅಂತ ಒಂದು ಚೀಟಿಯಲ್ಲಿ ಬರೆದು ಕೊಡಿ ಬಾರಿಗೆ ಹೋಗುವವರೆಗೇ ನನಗೆ ಮರೆತೋಗುತ್ತೆ.

ಜೀವನ್ ನಗುತ್ತ ಒಂದು ಚೀಟಿಯಲ್ಲಿ ಬ್ರಾಂಡ್ ಹೆಸರನ್ನು ಬರೆದು ಕೊಟ್ಟಾಗ ಸೀನ ಮನೆಯಿಂದ ಹೊರಬಂದು ಅಲ್ಲಿಂದ ದೂರದಲ್ಲಿ ನಿಂತಿದ್ದ ಕಾರಿನ ಹತ್ತಿರ ನಿಂತು.......

ಸೀನ......ಸರ್ ಇವನೇ ಮೇಡಂನ ಟಾರ್ಗೆಟ್ ಮಾಡ್ತಿರೋದು ಈಗ ಅವನ ಜೊತೆಗಿರುವ ಇನ್ನಿಬ್ಬರು ಗೆಳೆಯರು ಬರುತ್ತಿದ್ದಾರಂತೆ ಎಲ್ಲಾ ಸೇರಲಿ ಇವತ್ತು ರಾತ್ರಿ ಅವರನ್ನೆಲ್ಲಾ ಹೊತ್ಕೊಂಡು ಬರ್ತೀವಿ.

ಹರೀಶ......ಇದು ಸಣ್ಣ ಏರಿಯಾ ಕಣೋ ಅವರನ್ನು ಸುಲಭವಾಗಿ ಎತ್ತಿಕೊಂಡು ಬರಲಾಗುವುದಿಲ್ಲ. ಸೀನ ನೀನೊಂದು ಕೆಲಸ ಮಾಡು ಈಗವರಿಗೆ ಹೆಂಡ ತೆಗೆದುಕೊಂಡು ಹೋಗ್ತಿದ್ದೀನಿ ಅಂತ ಹೇಳಿದ್ಯಲ್ಲ ಈ ಔಷಧಿ ಇಟ್ಟುಕೊಂಡಿರು ಸಮಯ ನೋಡಿ ಮೂವರ ಗ್ಲಾಸಿನಲ್ಲಿ ಇದನ್ನು ಮಿಕ್ಸ್ ಮಾಡ್ಬಿಡು ಅವರಿಗೆ 12—15 ಘಂಟೆಗಳ ತನಕವೂ ಜ್ಞಾನವಿರಲ್ಲ ಮುಂದಿನ ಕೆಲಸ ಸಲೀಸಾಗಿರುತ್ತೆ.

ಸೀನ......ಸರಿ ಸರ್ ಅವರಿಗೆ ಪ್ರಜ್ಞೆ ತಪ್ಪಿದಾಗ ನಾನು ಬಸ್ಯ ಅಣ್ಣನಿಗೆ ಫೋನ್ ಮಾಡ್ತೀನಿ.......ಎಂದೇಳಿ ಅಲ್ಲಿಂದ ತೆರಳಿದನು.

ರಕ್ಷಕರಲ್ಲೊಬ್ಬ.......ಸರ್ ನೀವು ಮಾತೆ ಇಬ್ಬರು ಊರಿಗೆ ಹೊರಡಿ ಇಲ್ಲಿನ ಕೆಲಸ ನಾವೆಲ್ಲರೂ ಸೇರಿ ಮುಗಿಸಿಕೊಂಡು ಬರ್ತೀವಿ.

ಬಸ್ಯ......ಹೌದು ಸರ್ ನಡೀರಿ ಲಾಡ್ಜಿನಲ್ಲಿ ಅಕ್ಕ ಒಬ್ಬರೇ ಇದ್ದಾರೆ ನಾವೆಲ್ಲರೂ ಸೇರಿ ಈ ಮೂವರನ್ನು ಹೊತ್ಕೊಂಡ್ ಬರ್ತೀವಿ ನೀವು ಊರಿಗೆ ಹೋಗುವುದೇ ಒಳ್ಳೆಯದು ಇಲ್ಲ ಅನ್ಬೇಡಿ ನಮ್ಮ ನಿಷ್ಠೆ ತೋರಿಸಲು ಅವಕಾಶ ನೀಡಿ.

ಹರೀಶನಿಗೇನೂ ಮಾತನಾಡಲಾಗದೆ ಸರಿಯೆಂದು ಲಾಡ್ಜಿಗೆ ಬಂದು ನೀತುವಿಗೆ ಎಲ್ಲವನ್ನೂ ತಿಳಿಸಿದನು.

ಹರೀಶ....ನಾನು ನಿನ್ನನ್ನು ಮುಂದೆ ಬರಬೇಡ ಅಂದಿದ್ದೆ ಆದರಿಲ್ಲಿ ನಿನ್ನ ಭಕ್ತರು ನನ್ನನ್ನೇ ಹಿಂದಕ್ಕೆ ಕಳುಹಿಸಿದ್ದಾರೆ.

ನೀತು......ಎಲ್ಲವೂ ನನ್ನ ಕಂದನ ಕಾಲ್ಗುಣ ಕಣ್ರಿ ಮುಂಚೆ ನಾನು ನೀವು..ಸುರೇಶ ಮತ್ತು ಗಿರೀಶ ನಾವು ನಾಲ್ಕು ಜನರಷ್ಟೇ ನಮ್ಮ ಪ್ರಪಂಚವಾಗಿತ್ತು. ಈಗ ನೋಡಿ ತುಂಬಿದ ಮನೆ ಒಟ್ಟು ಕುಟುಂಬ ಅಲ್ಲಿಂದ ಹೊರಗೂ ನಮಗೋಸ್ಕರ ಏನನ್ನಾದರೂ ಮಾಡಲು ಸಿದ್ದ ಇರುವಂತಹ ಜನರು ಜೊತೆಯಾಗಿದ್ದಾರೆ.

ಹರೀಶ.....ಹೌದು ಕಣೆ ಎಲ್ಲವೂ ನನ್ನ ಮುದ್ದಿನ ಕಂದನಿಂದಲೇ. ಹೆಣ್ಣು ಮಕ್ಕಳನ್ನು ಹೊರೆ ಅಂತ ಭಾವಿಸುವವರು ಬಂದು ನಮ್ಮ ಮನೆಯನ್ನೊಮ್ಮೆ ನೋಡ್ಬೇಕು ಹೆಣ್ಣು ಮಕ್ಕಳು ಮನೆಯನ್ನು ಹೇಗೆ ಸಂವೃದ್ದಿಯನ್ನಾಗಿಸುತ್ತಾರೆ ಅಂತ. ಅವರೆಲ್ಲರೂ ಶೃಂಗೇರಿ ತಲುಪಿದ್ರಾ

ನೀತು......ನಾನು ಫೋನ್ ಮಾಡಿದ್ದೆ ಆಗವರು ಗುರುಗಳನ್ನು ಬೇಟಿ ಮಾಡಲು ರೆಡಿಯಾಗುತ್ತಿದ್ದರು ಆಮೇಲೆ ಮಾಡ್ತಾರೆ.

ಒಂದು ಘಂಟೆಯ ನಂತರ ಬಸ್ಯ ಫೋನ್ ಮಾಡಿ.......

ಬಸ್ಯ....ಸರ್ ಸೀನ ಅವರೆಲ್ಲರನ್ನು ಜ್ಞಾನ ತಪ್ಪಿಸಿದ್ದಾನೆ ಈಗ ನೀವು ಊರಿಗೆ ಹೊರಟುಬಿಡಿ ನಾವಿಲ್ಲೇ ಕಾದು ಸಮಯ ನೋಡಿಕೊಂಡು ಮೂವರನ್ನೂ ಹೊತ್ತೊಂಡ್ ಬರ್ತೀವಿ.

ಹರೀಶ......ಅದು ಹಾಗಲ್ಲ ಕಣೋ......

ನೀತು ಗಂಡನನ್ನು ತಡೆಯುತ್ತ......ಸರಿ ಬಸ್ಯ ನಮ್ಮ ಜೊತೆಗಿಬ್ಬರು ರಕ್ಷಕರಿದ್ದಾರೆ ನಾವು ಅವರ ಜೊತೆ ಹಿಂದಿರುಗಿ ಹೋಗ್ತೀವಿ. ಬಸ್ಯ ಮುಖ್ಯವಾದ ವಿಷಯ ಆ ಮನೆಯಲ್ಲಿ ಮೊಬೈಲ್....ಪೆನ್ ಡ್ರೈವ್.. ಕಂಪ್ಯೂಟರ್....ಲ್ಯಾಪ್ಟಾಪ್ ಆ ರೀತಿಯ ಯಾವುದೇ ವಸ್ತುಗಳಿದ್ರೂ ಸರಿ ಏನನ್ನೂ ಬಿಡದೆ ತೆಗೆದುಕೊಂಡು ಬಾ. ನೀವೆಲ್ಲರೂ ಕೈಗಳಿಗೆ ಗ್ಲೌಸ್ ಹಾಕಿಕೊಳ್ಳೋದನ್ನು ಮರೆಯದಿರಿ ಮನೆಯಲ್ಯಾವುದೇ ರೀತಿ ಸಾಕ್ಷಿಗಳನ್ನೂ ಬಿಡಬಾರದು.

ಬಸ್ಯ......ಸರಿ ಅಕ್ಕ ನಾವೆಲ್ಲದರ ಬಗ್ಗೆ ಎಚ್ಚರಿಕೆ ವಹಿಸ್ತೀವಿ.

ಹರೀಶ.......ಏನೇ ಇದು ಇದಕ್ಯಾಕೆ ನಾವು ಬರಬೇಕಿತ್ತು ಇವರನ್ನೇ ಕಳುಹಿಸಿದ್ದರೆ ಸರಿ ಹೋಗ್ತಿತ್ತು.

ನೀತು ನಗುತ್ತ.......ನಡೀರಿ ಈ ಸಿಟಿಯಲ್ಲಿ ಒಳ್ಳೊಳ್ಳೆ ಬಟ್ಟೆಗಳು ದೊರೆಯುತ್ತೆ ಎಲ್ಲರಿಗಾಗಿ ಪರ್ಚೇಸ್ ಮಾಡ್ಕೊಂಡು ಹೋಗೋಣ.

ಹರೀಶ......ನಡಿ ಇನ್ನೇನು ಮಾಡಕ್ಕಾಗುತ್ತೆ ಅದನ್ನೇ ಮಾಡೋಣ.

ಹೋಟೆಲ್ಲಿನ ರೂಮುಗಳನ್ನು ಚೆಕ್ವೌಟ್ ಮಾಡಿ ಇಬ್ಬರು ರಕ್ಷಕರನ್ನು ಕರೆದುಕೊಂಡು ಸಿಟಿಯಲ್ಲಿ ಸುತ್ತಾಡುತ್ತ ಎಲ್ಲರಿಗೂ ಬಟ್ಟೆಗಳನ್ನು ಪರ್ಚೇಸ್ ಮಾಡಿಕೊಂಡು ಕಾಮಾಕ್ಷಿಪುರದತ್ತ ಹಿಂದಿರುಗಿದರು.
* *
* *

2 comments:

  1. Super story changide. Egene bega bega story akutha eri.dina 3 /4 adru hosa story badideyantha check madtha ertheve

    ReplyDelete
  2. ಕತೆ ಬಹಳ ಮಸ್ತ್ ಐತೆ, ಒಳ್ಳೆ ಕಾಮ ಮತ್ತು ಪತ್ತೇದಾರಿ. ದಯಮಾಡಿ ಕತೆ ಮುಂದುವರೆಸಿ

    ReplyDelete