ದೀಪಾ......ಹೇಗೂ ಮುಂದಿನೆರಡು ಕ್ಲಾಸ್ ಕ್ಯಾನ್ಸಲ್ ಆಗಿದೆಯಲ್ಲ ನಾವೆಲ್ಲ ಯಾವ್ದಾದ್ರೂ ಫಿಲಿಂಗೆ ಹೋಗೋಣ್ವಾ ?
ಧೀಕ್ಷಾ......ಯಾವ ಫಿಲಂ ಚೆನ್ನಾಗಿದೆ ?
ದೀಪಾ.....ನಂಗೊತ್ತಿಲ್ಲ ರಾಣಿ ಹೇಳೇ ಯಾವುದಕ್ಕೆ ಹೋಗೋಣ.
ಅಷ್ಟರಲ್ಲಿ ಇವರ ಕಾಲೇಜಿನ ಮೇಲೆ ಹೆಲಿಕಾಪ್ಟರ್ ಹಾರಾಡುತ್ತಿರುವ ಶಬ್ದ ಕೇಳಿ.....
ಕುಸುಮ......ಇದು ನಿಮ್ಮನೇದಾ ನಿಧಿ ?
ನಿಧಿ.....ಗೊತ್ತಿಲ್ಲ ತಾಳು (ಹೊರಬಂದು ನೋಡಿ ಹೆಲಿಕಾಪ್ಟರನ್ನು ಗುರುತಿಡಿದು) ಹೌದು ಕಣ್ರೆ ನಮ್ಮದೇ ಯಾರು ಬಂದಿರಬಹುದು... ಎಂದುಕೊಂಡು ಅಮ್ಮನಿಗೆ ಫೋನ್ ಮಾಡಿದಳು.
ನೀತು......ಕ್ಲಾಸ್ ಇಲ್ವೇನಮ್ಮ ?
ನಿಧಿ......ಇಲ್ಲ ಅಮ್ಮ ಮುಂದಿನೆರಡು ಪಿರಿಯಡ್ ಕ್ಯಾನ್ಸಲಾಗಿದೆ. ಅಮ್ಮ ಹೆಲಿಕಾಪ್ಟರ್ ಬಂದಿದೆ ಯಾರು......
ನೀತು ಮಧ್ಯದಲ್ಲೇ.......ಒಳ್ಳೆದಾಯ್ತು ನಿನ್ನ ಫ್ರೆಂಡ್ಸ್ ಜೊತೆ ಜಾನಿ ಅಂಕಲ್ ತೋಟಕ್ಕೆ ಬಾರಮ್ಮ.
ಪ್ರಿಯಾ.....ಯಾರೇ ? ನಿಮ್ಮ ಚಿಕ್ಕಪ್ಪ ಬಂದಿದ್ದಾರಾ ?
ನಿಧಿ......ಅಮ್ಮ ಏನೂ ಹೇಳ್ಲಿಲ್ಲ ನಡೀರೆ ತೋಟಕ್ಕೆ ಬನ್ನಿ ಅಂದ್ರು.
ರಾಣಿ......ಅಲ್ಲಿ ಅಷ್ಟೊಂದು ನಾಯಿಗಳಿದೆ ಭಯವಾಗುತ್ತೆ ಕಣೆ.
ನಿಧಿ.......ಲೇ ನನ್ನ ತಂಗೀನೇ ಹೆದ್ರಲ್ಲ ನೀನು ಹೆದರಿಕೊಳ್ತೀಯಲ್ಲೆ.
ಪ್ರಿಯಾ......ನಿನ್ನ ತಂಗಿ ಬಿಡಮ್ಮ ಅವಳು ಸೂಪರ್ ಗರ್ಲ್ ನಾವು ಅವಳಂತೆ ಅಲ್ವಲ್ಲ ಭಯವಾಗುತ್ತೆ.
ಧೀಕ್ಷಾ.....ಅರಮನೇಲಿ ನೋಡಿಲ್ವಾ ಎಂತಾ ಭಯಂಕರ ನಾಯಿಗಳೆ ಅವಳ ಹಿಂದಿಂದೆ ನಿಮ್ಮನೇಲಿರೋ ಪುಟಾಣಿ ಕುಕ್ಕಿ ಮರಿಗಳ ರೀತಿ ಸುತ್ತಾಡ್ತಾ ಇದ್ವು ಅಂತ.
ರಾಣಿ.....ಆನೆಗೇ ಹೆದರಿಕೊಳ್ಳಲ್ಲ ಇನ್ನವಳು ನಾಯಿಗೆ ಹೆದರ್ತಾಳಾ.
ನಿಧಿ......ನಾನಿಲ್ವ ಏನೂ ಮಾಡಲ್ಲ ಬನ್ರೇ ಸುಮ್ನೆ.
ನಿಧಿ ಗೆಳತಿಯರನ್ನು ಕರೆದುಕೊಂಡು ತೋಟಕ್ಕೆ ಬಂದಾಗ ತನ್ನನ್ನು ಅನುಭವಿಸಿದ್ದ ಇಬ್ಬರಾದ ಭಾಸ್ಕರ್—ವೀರೇಂದ್ರ ಮಾತನಾಡುತ್ತಾ ನಿಂತಿದ್ದನ್ನು ನೋಡಿ ಒಂದು ಕ್ಷಣ ಆಕೆ ಮನಸ್ಸಿನಲ್ಲಿ ಇವರಿಬ್ಬರೂ ನನ್ಮೇಲೆ ಒಟ್ಟಿಗೇ ಏರಿಕೊಂಡರೆ ಏನಾಗುತ್ತೆಂಬ ಭಾವನೆ ಮೂಡಿತು. ತಕ್ಷಣವೇ ಮನಸ್ಸಿನ ಆಲೋಚನೆ ಬದಿಗೊತ್ತಿ ಎಲ್ಲರ ಬಳಿ ಬಂದಾಗ ನಿಶಾ ಅಕ್ಕನಿಗೆ ತಾನು ಹೆಲಿಕಾಪ್ಟರ್ ರೌಂಡ್ ಹೋಗಿ ಬಂದೆ ಅಂತ ಹೇಳುತ್ತ ಖುಷಿಯಾಗಿದ್ದಳು.
ನಿಧಿ......ಅಮ್ಮ ಇವತ್ತಿನಿಂದಿಲ್ಲಿ ಆಯುರ್ವೇದದ ಕೃಷಿ ಪ್ರಾರಂಭ ಆಗ್ತಿದೆಯಾ ?
ನೀತು.......ಹೂಂ ಈಗಷ್ಟೇ ಪೂಜೆ ಮುಗೀತು ಮೊದಲನೇ ಗಿಡದ ಮೂಲಿಕೆಯನ್ನು ನಿಶಾ—ಪೂನಂ ಇಬ್ಬರೆ ನೆಟ್ಟಿದ್ದಾರೆ ಕಣಮ್ಮ.
ರೇವತಿ......ನಿಧಿ ನಾನು ಭಾಸ್ಕರ್ ಜೊತೆ ಮಾತಾಡಿದ್ದೀನಿ ನಿನಗೆ ನಾಳೆಯಿಂದ ಮೂರು ದಿನ ಹಾಲಿನೊಂದಿಗೆ ಪುಡಿಯೊಂದನ್ನು ಬೆರೆಸಿ ಕೊಡ್ತೀನಿ ಸುಮ್ಮನೇ ಮಾತಾಡ್ದೆ ಕುಡಿಬೇಕಷ್ಟೆ.
ನಿಧಿ......ಅಜ್ಜಿ ನಂಗೇನಾಗಿದೆ (ಅಜ್ಜಿ ಗುರಾಯಿಸಿದಾಗ) ಸರಿ ಅಜ್ಜಿ.
ತೋಟದಲ್ಲಿನ ಕೆಲಸ ಕಾರ್ಯಗಳೆಲ್ಲವೂ ಮುಗಿಯುವಷ್ಟರಲ್ಲಿ ಭಟ್ಟರ ಅಳಿಯನ ಕ್ಯಾಂಟೀನಿನಿಂದ ಎಲ್ಲರಿಗೂ ಊಟವನ್ನು ರವಿ ಮತ್ತು ಅಶೋಕ ತಂದಿದ್ದು ಅಲ್ಲಿಗೇ ವಿಕ್ರಂ...ರೇವಂತ್...ಸುಭಾಷ್... ಪಾವನಾ ಮತ್ತು ಪ್ರೀತಿ ಬಂದರು.
ರಜನಿ......ಲೇ ಎರಡ್ಮೂರು ವಾರ ನೀನು ಆಶ್ರಮಕ್ಕೆ ಹೋಗಿಬಿಟ್ಟರೆ ನಾವಿಲ್ಲೇಗೇ ಇರೋದು ?
ನಿಧಿ.......ಅಮ್ಮ ನೀವು ಆಶ್ರಮಕ್ಕೆ ಹೋಗ್ತಿದ್ದೀರಾ ? ಯಾಕೆ ? ಅದು ಎರಡ್ಮೂರು ವಾರಗಳಿಗೆ ?
ನೀತು ಅವಳ ಪ್ರಶ್ನೆಗಳಿಗೆ ಉತ್ತರಿಸಿದಾಗ ನಿಧಿ ಇಬ್ರು ಚಿಲ್ಟಾರಿಗಳನ್ನು ಮುಂದೆ ನಿಲ್ಲಿಸಿಕೊಂಡು........
ನಿಧಿ.....ನೀವಿಬ್ರೂ ಆಶ್ರಮದಲ್ಲಿ ಗುರುಗಳೇನು ಹೇಳಿಕೊಡುತ್ತಾರೊ ಅದನ್ನು ಚೆನ್ನಾಗಿ ಕಲಿಯಬೇಕು ಅಲ್ಲೇನೂ ತಂಟೆ ಮಾಡ್ಬಾರ್ದು.
ಪೂನಿ.....ಆತು ಅಕ್ಕ.
ನಿಶಾ......ನಾನಿ ವೆರಿ ಗುಡ್ ಗಲ್ ಅಕ್ಕ.
ನಿಧಿ.....ನೀನೆಷ್ಟು ಗುಡ್ ಗರ್ಲ್ ಅಂತ ಗೊತ್ತಿದೆ ನಡಿ.
ರೇವಂತ್.......ಭಾಸ್ಕರ್ ಮತ್ತವನ ಜನರಿಗೆ ಉಳಿದುಕೊಳ್ಳುವುದಕ್ಕೆ ನಾವೇನೂ ವ್ಯವಸ್ಥೆಯೇ ಮಾಡಿಲ್ವಲ್ಲ.
ಜಾನಿ.....ರೇವಂತ್ ಎಲ್ಲವೂ ರೆಡಿಯಾಗಿದೆ ಅವರೆಲ್ಲರಿಲ್ಲೇ ನನ್ಜೊತೆ ತೋಟದಲ್ಲಿ ಉಳಿದುಕೊಳ್ತಾರೆ. ಇಷ್ಟು ದೊಡ್ಡ ಮನೆಯಿರುವಾಗ ಇವರಿಲ್ಲೇ ಉಳಿದುಕೊಳ್ಳೋದು ಸರಿಯಲ್ವ.
ತೋಟದಿಂದ ಎಲ್ಲರೂ ಮನೆಗೆ ಹೊರಡುವಷ್ಟರಲ್ಲಿ ಭಾಸ್ಕರ್ ಪುಡಿ ತಯಾರಿಸಿದ್ದು ರೇವತಿಯವರ ಕೈಗೆ ನೀಡಿದನು. ರಾಮಚಂದ್ರ ಗುರುಗಳ ಆಶೀರ್ವಾದ ಪಡೆದು ಅವರನ್ನು ರಾಣಾ ಜೊತೆಯಲ್ಲಿ ಕಳಿಸಿಕೊಟ್ಟರೆ ಅಜಯ್ ಸಿಂಗ್ ಇಲ್ಲೇ ಉಳಿದು ನೀತು ಜೊತೆಯಲ್ಲಿ ಶುಕ್ರವಾರ ಹೊರಡುವವನಿದ್ದನು.
* *
* *
ಸಂಜೆ ಮನೆಯಲ್ಲಿ.......
ಹರೀಶ.....ಮೂರು ವಾರ ಆಶ್ರಮದಲ್ಲಿ ಇರ್ಬೇಕಾ ? ಅಂದ್ರೆ ನೀವು ಹೊಸ ವರ್ಷಕ್ಕೇ ಹಿಂದಿರುಗಿ ಬರೋದಾ ?
ನಿಧಿ......ಅಪ್ಪ ಜನವರಿ 1 ಶನಿವಾರ ಡಿಸೆಂಬರ್ 27 ರಿಂದ 5 ದಿನ ಅಂದ್ರೆ 31 ರವರೆಗೂ ನೀವು ಶಾಲೆಗೆ ರಜೆ ಹಾಕ್ಬಿಡಿ.
ಹರೀಶ......ಯಾಕಮ್ಮ ಕಂದ ?
ನಿಧಿ......ಏನಪ್ಪ ಪ್ರಶ್ನೆ ಮಾಡ್ತೀರಲ್ಲ ಮಗಳಿಗೋಸ್ಕರ ನೀವೊಂದು ವಾರ ರಜೆ ಹಾಕಕ್ಕಾಗಲ್ವಾ ?
ನಿಧಿ......ನೀ ಸುಮ್ನಿರಮ್ಮ ಮಧ್ಯ ಬರ್ಬೇಡಿ ಇದು ಅಪ್ಪ ಮಗಳ ನಡುವಿನ ಮಾತು ನೀವ್ಯಾಕೆ ತಲೆ ಹಾಕ್ತೀರ. ಅಪ್ಪ ಇವರೆಲ್ಲ ಅಂದ್ರೆ ಗಿರೀಶ...ಸುರೇಶ..ರಶ್ಮಿ...ದೃಷ್ಟಿ...ನಯನ...ನಿಕಿತಾ...ನಮಿತ ಎಲ್ಲರೂ ಅವರವರ ತಂದೆಯ ಪ್ರೀತಿ ಪಾಲನ್ನು ಪಡೆದುಕೊಂಡಿದ್ದಾರೆ ನನ್ನೊಬ್ಬಳಿಗೇ ಅಪ್ಪನ ಪ್ರೀತಿ ಸಿಕ್ಕಿಲ್ಲ. 14 ವರ್ಷ ವನವಾಸದ ರೀತಿ ಆಶ್ರಮದಲ್ಲಿದ್ದೆ ಈಗಲೂ ನನಗೆ ಅಪ್ಪನ ಪ್ರೀತಿ ಸಿಗಬೇಡ್ವಾ ?
ನೀತು......ಏಮೋಷನಲ್ಲಾಗಿ ಹೊಡಿತಿದ್ದೀಯ ಇರಲಿ ಕಂಟಿನ್ಯೂ.
ನಿಧಿ.....ಅಮ್ಮ ನೀವು ಪುನಃ ಮಧ್ಯೆ ಬಾಯಿ ಹಾಕ್ತಿದ್ದೀರ ಸುಮ್ನಿರಿ.
ಹರೀಶ......ನಿಮ್ಮಮ್ಮನ ವಿಷ್ಯ ಬಿಡಮ್ಮ ನಾಳೆಯಿಂದಲೇ ಶಾಲೆಗೆ ರಜೆ ಹಾಕಿಬಿಡ್ತೀನಿ ಬಿಡು. ನನ್ನ ಮಗಳು ಅಪ್ಪನ ಪ್ರೀತಿ ಬಯಸಿದ್ರೂ ನಾನು ಕೊಡದಿರಲು ಸಾಧ್ಯವಾ.
ನಿಧಿ......ನಾಳೆಯಿಂದೇನೂ ಬೇಡಾಪ್ಪ ಈ ತಿಂಗಳ ಕೊನೆಯ ವಾರ ರಜೆ ಹಾಕ್ಬಿಡಿ ಸಾಕು.
ರಜನಿ......ಎಲ್ಲಿಗೋಗುವ ಪ್ಲಾನು ?
ನಿಧಿ.....ಸಾರಿ ಆಂಟಿ ನಾವು ಹೋಗಿ ಬರೋವರೆಗೂ ಅದನ್ಯಾರಿಗೂ ಹೇಳಲ್ಲ ಬಂದ್ಮೇಲೆ ಎಲ್ಲರಿಗೂ ವೀಡಿಯೋ ತೋರಿಸ್ತೀಲ್ಲ ಆಗಲೇ ಗೊತ್ತಾಗೋದು. ಅಪ್ಪ ಇನ್ನೊಂದು ಬೇಕಾಗಿತ್ತು ?
ಹರೀಶ.......ಕೇಳಮ್ಮ ಕಂದ.
ನಿಧಿ.......ನಾಲ್ಕು ಡ್ರೋನ್ ಕ್ಯಾಮೆರಾ ಬೇಕಿತ್ತು.
ಹರೀಶ.......ಸುಭಾಷ್ ಬೆಂಗಳೂರಲ್ಲಿ ಡ್ರೋನ್ ಕ್ಯಾಮೆರ ಡೀಲರ್ ಯಾರೆಂದು ಗೊತ್ತಿದ್ಯಾ ?
ಸುಭಾಷ್.....ಗೊತ್ತು ಸರ್ ತರಿಸಿಬಿಡಲಾ ? ನಿಧಿ ಫೋನ್ ಮಾಡಿದ್ರೆ ಸಾಕು ಮನೆಗೆ ತಲುಪಿಸ್ತಾರೆ.
ನಿಧಿ......ಹೂಂ ಅಣ್ಣ ತರಿಸಿಬಿಡಿ ವೀರೂ ಅದ್ಯಾವ ಮಾಡಲ್ ಅಂತ ಅಣ್ಣನಿಗೆ ಹೇಳ್ಬಿಡು.
ವೀರೇಂದ್ರ ಮೇಕ್ ಮತ್ತು ಮಾಡಲ್ ಹೇಳಿದ್ರೆ ಸುಭಾಷ್ ತನಗೆ ಪರಿಚಯವಿದ್ದ ಅಂಗಡಿಯವನಿಗೆ ಫೋನ್ ಮಾಡಿ ಆರ್ಡರ್ ನೀಡಿ ತಾನೀಗಲೇ ಪೇಮೆಂಟ್ ಮಾಡುವುದಾಗಿ ಹೇಳಿದನು. ನಿಧಿ ಅಪ್ಪನ ಪರ್ಸಿನಿಂದ ಕಾರ್ಡ್ ತೆಗೆದುಕೊಟ್ಟು ಇದರಿಂದಲೇ ಪೇಮೆಂಟ್ ಮಾಡುವಂತೆ ಅಣ್ಣನಲ್ಲಿ ಕೇಳಿಕೊಂಡಳು.
ನೀತು......ಯಾವ್ದೋ ಭರ್ಜರಿ ಪ್ಲಾನಿಂಗ್ ನಡಿತಿದೆ ಅದರೆ ಮಗಳು ಮಾತ್ರ ನಮಗೇನೂ ಹೇಳ್ತಿಲ್ಲ.
ನಿಧಿ.....ಬಂದ್ಮೇಲೆ ಗೊತ್ತೇ ಆಗುತ್ತಲ್ಲಮ್ಮ ಅಲ್ಲಿವರೆಗೂ ಕೇಳ್ಬೇಡಿ. ಇದನ್ನು ಬಿಟ್ಟಾಕಿ ನಾನಂತೂ ಹೇಳಲ್ಲ ಆದ್ರೆ ನೀವು ಚಿನ್ನಿ...ಪೂನಂ ಜೊತೆ ಡಿಸೆಂಬರ್ ತಿಂಗಳಲ್ಲಿ ಆಶ್ರಮಕ್ಕೆ ಹೋಗ್ತಿದ್ದೀರಲ್ಲ ಅಲ್ಲಿ ತುಂಬ ಹಿಮ ಬೀಳುತ್ತೆ ಕಣಮ್ಮ.
ನೀತು......ನೀನು ವಿದ್ಯೆ ಕಲಿತು ಬೆಳೆದ ಆಶ್ರಮಕ್ಕೆ ಹೋಗ್ತಿಲ್ಲ ನಿಧಿ ಹೃಷಿಕೇಶದಲ್ಲಿ ವಿದ್ಯಾ ಮಂದಿರದ ಶಂಕು ಸ್ಥಾಪನೆ ಮಾಡುವುದಕ್ಕೆ ಹೋಗಿದ್ದಾಗ ನೀನು ಉಳಿದುಕೊಂಡಿದ್ಯಲ್ಲ ಅದೇ ಆಶ್ರಮಕ್ಕೀಗ ನಾವು ಹೋಗೋದು ಅಲ್ಲೇನೂ ಹಿಮ ಬೀಳಲ್ವಲ್ಲ.
ನಿಧಿ.....ಅಮ್ಮ ಹಾಗಿದ್ರೆ ಒಂದು ಕೆಲಸ ಮಾಡಿ ಡಿಸೆಂಬರ್ 30 ರ ತನಕ ನೀವಲ್ಲೇ ಉಳಿಯಿರಿ ನಾನು ಅಪ್ಪ ಅಲ್ಲಿಗೇ ಬರ್ತೀವಿ.
ನೀತು.....ನೀನಿಷ್ಟೊತ್ತೂ ಹೇಳಿದ್ದೆಲ್ಲ ಆಶ್ರಮಕ್ಕೆ ಬರುವುದಕ್ಕಾ ?
ನಿಧಿ......ನೋ..ನೋ..ಅಪ್ಪನ ಜೊತೆ ನನ್ನದೇ ಬೇರೆಯ ಪ್ಲಾನಿದೆ 30ರ ಬೆಳಿಗ್ಗೆ ನಾವಲ್ಲಿಗೆ ಬರ್ತೀವಿ ಅಲ್ಲಿಂದ ಮನೆಗೆ ಹಿಂದಿರುಗೋಣ. 31ರ ನೈಟ್ ಪಾರ್ಟಿ ಜಾನಿ ಅಂಕಲ್ ತೋಟದಲ್ಲಿ ಎಲ್ಲರನ್ನು ಸೇರಿಸಿ ಅರೇಂಜ್ ಮಾಡೋಣ.
ರೇವತಿ.....ಆಯ್ತಮ್ಮ ಕೂಸೇ ನೀನೇಳಿದಂತೆ ಮಾಡೋಣ ಆದರೆ ನೀನು ಹೊಟ್ಟೆ ತುಂಬ ಊಟ ಮಾಡಿದ್ರೆ ನನಗಷ್ಟೇ ಸಾಕು.
ನಿಧಿ.....ನಾಳೆಯಿಂದ ಔಷಧಿ ಕೊಡ್ತೀರಲ್ಲ ಅಜ್ಜಿ ಅದೇಗೆ ಕೆಲಸವನ್ನು ಮಾಡುತ್ತೆಂದು ನಿಮಗೂ ಗೊತ್ತಿದೆ. ನೋಡ್ತಿರಿ ಅಜ್ಜಿ ತಿಂದಿದ್ದು ಸಾಕು ಅಂತ ನೀವೇ ಹೇಳ್ಬೇಕು ಅತ್ತೆ ಸಾಕು..ಸಾಕು ನನ್ನಿಂದಿನ್ನು ಬೇಯಿಸಿ ಹಾಕಲಿಕ್ಕಾಗಲ್ಲ ಅಂತಾರೆ.
ಸುಮ ಅವಳ ಕೆನ್ನೆ ಹಿಂಡುತ್ತ.......ನೀನೆಷ್ಟಾದ್ರೂ ತಿನ್ನಮ್ಮ ಮಾಡಿ ಹಾಕುವುದಕ್ಕೆ ನನಗೆ ಖುಷಿಯಾಗುತ್ತೆ.
ಸುರೇಶ.....ಅಕ್ಕ ನೀವು ಮಾತ್ರ ಅಪ್ಪನ ಜೊತೆ ಟೂರಿಗೆ ಹೋಗ್ತೀರ ನಾವ್ಯಾರೂ ಬೇಡ್ವಾ ?
ನಿಧಿ.....ಇದು ಕೇವಲ ಅಪ್ಪ ಮಗಳ ಟ್ರಿಪ್ ಅಮ್ಮನೂ ಇಲ್ಲ ಚಿನ್ನಿ ಮರಿನೂ ಇಲ್ಲ. ಮುಂದೊಂದು ಸಲ ನೀನೂ ಹೋಗುವಂತೆ ಆದರೆ ಈಗ ಓದುವ ಕಡೆಗಷ್ಟೇ ನಿನ್ನ ಗಮನವಿರಬೇಕು ಗೊತ್ತಾಯ್ತಾ.
ಸುಭಾಷ್......ವೀರೂ ಏನೀ ಡ್ರೋನ್ ಕ್ಯಾಮೆರಾ ಇಷ್ಟು ದುಬಾರಿ ಒಂದು ಪೀಸಿಗೆ 16 ಲಕ್ಷವಿದೆಯಲ್ಲ.
ವೀರೇಂದ್ರ.......ಹೌದಣ್ಣ ಸ್ವಲ್ಪ ದುಬಾರಿ ಆದ್ರೆ ಕ್ವಾಲಿಟಿಯೂ ಸಹ ಸೂಪರಾಗಿದೆ ಬಂದ್ಮೇಲೆ ಅದರ ಸಾಫ್ಟ್ ವೇರಲ್ಲಿ ಕೆಲ ಬದಲಾವಣೆ ಮಾಡಿಕೊಡ್ತೀನಿ.
ಸುಭಾಷ್......ಯಾವ ರೀತಿ ಬದಲಾವಣೆ ?
ವೀರೇಂದ್ರ.......ಅಣ್ಣ ಅದನ್ನು ಹೇಳಿದ್ರೂ ಗೊತ್ತಾಗಲ್ಲ ಅದು ಬರಲಿ ಮಾಡಿಯೇ ತೋರಿಸ್ತೀನಿ.
ರಾತ್ರಿ ಊಟವಾದ ನಂತರವೂ ಬಹಳ ಹೊತ್ತಿನವರೆಗೆ ಮನೆಯಾಚೆ ಹುಲ್ಲಿನ ಮೇಲೆ ಕುಳಿತು ಮಾತನಾಡುತ್ತಿದ್ದರೂ ನಿಧಿ ಅಪ್ಪನ ಜೊತೆ ಏನು ಪ್ಲಾನ್ ಮಾಡಿಕೊಂಡಿದ್ದಾಳೆಂಬ ಸಂಗತಿ ಎಲ್ಲರ ತಲೆಯಲ್ಲೂ ಕೊರೆಯುತ್ತಿದ್ದರೂ ಉತ್ತರ ಮಾತ್ರ ಹೊಳೆಯಲಿಲ್ಲ.
* *
* *
ಗುರುವಾರ.......
ನೆನ್ನೆಯಿಂದಲೇ ಭಾಸ್ಕರ್ ತಯಾರಿಸಿ ಕೊಟ್ಟಿದ್ದ ಪುಡಿಯನ್ನು ಅಜ್ಜಿ ಹಾಲಿನೊಂದಿಗೆ ಬೆರೆಸಿ ನಿಧಿಗೆ ಕುಡಿಸುತ್ತಿದ್ದು ಅದು ತನ್ನ ಕೆಲಸವನ್ನು ಮೊದಲನೇ ದಿನದಿಂದಲೇ ಮಾಡತೊಡಗಿತ್ತು. ಈ ದಿನ ನಿಧಿ ತಾನೇ ಕೇಳಿ ನಾಲ್ಕು ಇಡ್ಲಿ ಜಾಸ್ತಿ ಹಾಕಿಸಿಕೊಂಡು ತಿನ್ನುತ್ತಿದ್ದರೆ ಮಗಳನ್ನು ನೋಡುತ್ತಿದ್ದ ನೀತುವಿನ ಕಣ್ಣಾಲಿಗಳು ಆನಂದದಿಂದ ಕಂಬನಿ ಮಿಡಿದವು.
ಹರೀಶ......ನೀತು ನಾಳೆ ನೀವೆಷ್ಟೊತ್ತಿಗೆ ಹೊರಡೋದು.
ನೀತು.......ಬೆಳಿಗ್ಗೆ ಹೊರಡೋಣ ಅಂತ ಮೊದಲು ಉದಯಪುರಕ್ಕೆ ಹೋಗಿ ಅಲ್ಲಿಂದ ಹೃಷಿಕೇಶಕ್ಕೆ ಹೋಗ್ತೀವಿ.
ಹರೀಶ......ಬೆಳಿಗ್ಗೆ ಬೇಡ ನಾನು ಶಾಲೆಯಿಂದ ಬಂದ್ಮೇಲೆ ಹೊರಡಿ ನಾಳೆ ರಾತ್ರಿ ಅರಮನೆಲ್ಲುಳಿದು ಶನಿವಾರ ಹೃಷಿಕೇಶಕ್ಕೆ ಹೊರಡಿ. ಚಿನ್ನಿ ಮರಿ ನೀನು ಪಪ್ಪನ್ನ ಬಿಟ್ಟು ಆಶ್ರಮಕ್ಕೆ ಹೋಗ್ತೀಯ ಕಂದ.
ನಿಶಾ ಅಪ್ಪನ ಮಡಿಲಲ್ಲಿ ನಿಂತು.......ನಾನಿ ಮಮ್ಮ ಜೊತೆ ಹೋತಿನಿ ಪಪ್ಪ ನೀನಿ ಬಾ.
ಹರೀಶ.......ಆಶ್ರಮದಲ್ಲಿ ತಂಟೆ ಮಾಡ್ಬಾರ್ದು ಕಂದ ಗುರುಗಳು ಏನು ಹೇಳಿಕೊಡ್ತಾರೋ ಅದನ್ನ ಚೆನ್ನಾಗಿ ಕಲಿಬೇಕು ತಿಳೀತಾ.
ನಿಶಾ.......ಆತು ಪಪ್ಪ ನಾನಿ ಗುಡ್ ಗಲ್.
ಅಷ್ಟರಲ್ಲಿ ಶಾಲೆಗೆ ಹೊರಡುವ ಟೈಮಾಗಿದ್ದು ಮಗಳನ್ನು ಮುದ್ದಾಡಿ ಸವಿತಾ ಹಾಗು ಮಕ್ಕಳಿಬ್ಬರೊಟ್ಟಿಗೆ ಹರೀಶ ತೆರಳಿದರೆ ಗಂಡಸರು ಫ್ಯಾಕ್ಟರಿಯತ್ತ ಹೊರಟರು.
ಸೌಭಾಗ್ಯ.......ನೀನೇನೋ ಆರಾಮಾಗಿ ಕೂತಿದ್ದೀಯ ನಿನಗೇನೂ ಕೆಲಸ ಇಲ್ವಾ ?
ಸುಭಾಷ್....ಅಮ್ಮ ನನ್ನ ಕೆಲಸವೆಲ್ಲ ಕಂಪ್ಯೂಟರಿನಲ್ಲಿ ಮಾಡೋದು ಎದುರುಮನೆ ಮಹಡಿ ರೂಮಲ್ಲಿ ಪಾವನ...ಪ್ರೀತಿ ಆಂಟಿ...ಪ್ರತಾಪ್ ಅಣ್ಣ ಮಾಡ್ತಿದ್ದಾರೆ. ಈಗೊಂದು ಪಾರ್ಸಲ್ ಬರುತ್ತೆ ಅದನ್ನು ಪಡೆದ ನಂತರ ನಾನೂ ಹೋಗ್ತೀನಿ.
ಶೀಲಾ.....ಡ್ರೋನ್ ಬರ್ತಿರೋದಾ ಸುಭಾಷ್ ?
ಸುಭಾಷ್.....ಹೌದಾಂಟಿ ನೆನ್ನೆಯೇ ಬರ್ಬೇಕಿತ್ತು ಇವತ್ತು ಬರ್ತಿದೆ.
ಕೆಲ ಹೊತ್ತಿನಲ್ಲಿ ನಾಲ್ಕು ಡ್ರೋನ್ ಕ್ಯಾಮೆರಾಗಳನ್ನು ಡೆಲವರಿ ನೀಡಲು ಬಂದಿದ್ದ ವ್ಯಕ್ತಿಗಳಿಬ್ಬರು ಅದನ್ನು ಆಪರೇಟ್ ಮಾಡುವ ಬಗ್ಗೆಯೂ ತಿಳಿಸಿಕೊಡುತ್ತಿದ್ದರು. ನಿಶಾ—ಪೂನಂ ಇಬ್ಬರೂ ಅದನ್ನೇ ಕುತೂಹಲದಿಂದ ನೋಡುತ್ತಿದ್ದರೆ ಇಬ್ಬರನ್ನೆತ್ತಿ ಕಾರಿನಲ್ಲಿ ಕೂರಿಸಿ....
ವೀರೇಂದ್ರ.......ಆಂಟಿ ಇಷ್ಟೊತ್ತಿಗೆ ನಿಧಿ ಕ್ಯಾಂಟೀನಲ್ಲಿ ಇರ್ತಾಳಲ್ವ ?
ಸುಮ.......11 ಘಂಟೆಗೆ ಅವಳ ಕ್ಲಾಸಿನ ಫ್ರೀ ಟೈಂ ಇರೋದು ಈಗ ಹತ್ತುವರೆ ಇನ್ನರ್ಧ ಘಂಟೆಯಿದೆ.
ವೀರೇಂದ್ರ.....ನಾವು ಹೋಗೋವರೆಗೆ ಆಗುತ್ತೆ ಬಿಡಿ ನಡೀರಿ ನನ್ನ ಪುಟಾಣೀಸ್ ಅಕ್ಕನ ಕಾಲೇಜಿಗೆ ಹೋಗಿ ಬರೋಣ. ಸುಮೇರ್ ಸರ್ ನೀವೇ ಬನ್ನಿ.
ಸುಮೇರ್ ಹಾಗು ಅಜಯ್ ಸಿಂಗ್ ಇಬ್ಬರೂ ತೆರಳಿದ್ದು ಎಲ್ಲರು ಡಿಗ್ರಿ ಕಾಲೇಜಿನ ಕ್ಯಾಂಟೀನ್ ಬಳಿ ತಲುಪಿ ಕಾರನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿಕೊಂಡು ಕಾಯತೊಡಗಿದರು. ನಿಧಿ ಗೆಳತಿಯರ ಜೊತೆಯಲ್ಲಿ ಕ್ಯಾಂಟೀನಿನತ್ತ ಹೋಗುತ್ತಿರುವುದನ್ನು ನೋಡಿ ನಿಶಾ—ಪೂನಂ ಅಕ್ಕ ಅಕ್ಕ.....ಎಂದು ಕೂಗಲು ಹೊರಟಾಗ ವೀರೇಂದ್ರ ಇಬ್ಬರನ್ನಿಡಿದು ಕೂರಿಸಿ ಸೈಲೆಂಟಾಗಿರುವಂತೆ ಹೇಳುತ್ತ ಡ್ರೋನ್ ಹೊರತೆಗೆದಿಟ್ಟು ಹಾರಿಸಲು ಶುರುವಾದನು.