Total Pageviews

Saturday, 1 March 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 293

ಗಣೇಶ ಚತುರ್ಥಿ......
ಶುಕ್ರವಾರ ಮುಂಜಾನೆ.....

ನೀತು......ಚಿನ್ನಿ ಏದ್ದೇಳಮ್ಮ ಬಂಗಾರಿ ನೋಡು ಎಲ್ಲರೂ ಬೇಗೆದ್ದು ರೆಡಿಯಾಗಿದ್ದಾರೆ ನೀನಿನ್ನೂ ಮಲಗಿದ್ದೀಯಲ್ಲ ಕಂದ.

ನಿಶಾ ಕೊಸರಾಡುತ್ತಲೇ ಕಣ್ತೆರೆದು ಅಮ್ಮನನ್ನು ನೋಡಿ ಪುನಃ ಅತ್ತ ಕಡೆ ತಿರುಗಿ ಮಲಗಿದಾಗ ರೂಮಿನೊಳಗೆ ಬಂದ....

ಸುರೇಶ......ಚಿನ್ನಿ ಇನ್ನೂ ಏದ್ದಿಲ್ವಾ ಅಮ್ಮ ಒಳ್ಳೇದಾಯ್ತು ಗಣಪತಿ ಮಾಮಿ ಪೂಜೆ ನಾನೇ ಮಾಡ್ತೀನಿ ಚಿನ್ನಿ ಬೇಡ.

ಅಣ್ಣನ ಮಾತು ಕಿವಿಗೆ ಬಿದ್ದಿದ್ದಷ್ಟೇ ಚಕ್ಕನೆದ್ದು ಕುಳಿತ ನಿಶಾ....ಮಮ್ಮ ಮಾಮಿ ಪೂಜಿ ನಾನಿ ಮಾತೀನಿ ಅಣ್ಣ ಬೇಲ ಮಮ್ಮ.

ನೀತು......ಆಯ್ತಮ್ಮ ಕಂದ ನೀನೇ ಮಾಡುವಂತೆ ಈಗ ನಡಿ ಸ್ನಾನ ಮಾಡ್ಕೊಂಡು ರೆಡಿಯಾಗುವಂತೆ ಪಪ್ಪ ಕಾಯ್ತಿದೆ.

ಸವಿತಾ ಒಳಬರುತ್ತ......ನೀತು ನಿನ್ನ ಆಂಟಿ ಕರೀತಿದ್ದಾರೆ ನೀನೋಗು ಚಿನ್ನೀಗೆ ಸ್ನಾನ ಮಾಡಿಸಿ ನಾನು ರೆಡಿ ಮಾಡ್ತೀನಿ.

ನೀತು.......ಸವಿತಾ ವಾರ್ಡ್ರೋಬಿನಲ್ಲಿ ಇವಳ ರೇಷ್ಮೆ ಲಂಗ ಬ್ಲೌಸಿದೆ ಅದನ್ನೇ ಹಾಕಿಬಿಡು.

ಆರು ಘಂಟೆಗೆ ರಾಮಚಂದ್ರ ಗುರುಗಳ ಪೌರೋಹಿತ್ಯದಲ್ಲಿ ಗಣೇಶ ಚತುರ್ಥಿ ವ್ರತವು ಪ್ರಾರಂಭವಾಗಿದ್ದು ಮನೆಯ ಗಂಡಸರ ಜೊತೆಗೆ ವರ್ಧನ್ ಕೂಡ ರೇಷ್ಮೆ ಪಂಚೆ ಶಲ್ಯ ಉಟ್ಟು ಪಾಲ್ಗೊಂಡಿದ್ದರೆ ರಾಣಾ ವೀರ್ ಸಿಂಗ್...ಸುಮೇರ್ ಸಿಂಗ್ ಮತ್ತು ವಿಕ್ರಂ ಸಿಂಗ್ ಕೂಡ ಅಲ್ಲಿ ಉಪಸ್ಥಿತರಿದ್ದರು. ಕಡುನೀಲಿ ಬಣ್ಣದ ರೇಷ್ಮೆ ಲಂಗ ಬ್ಲೌಸ್ ತೊಟ್ಟು ರೆಡಿಯಾಗಿ ಬಂದ ನಿಶಾ ನೇರವಾಗಿ ಹೋಗಿ ಅಪ್ಪನ ಮಡಿಲನ್ನು ಸೇರಿಕೊಂಡಳು. ಪೂಜೆಯ ವಿಧಿ ವಿಧಾನಗಳನ್ನು ಶ್ರದ್ದೆಯಿಂದಲೇ ನೋಡುತ್ತಿದ್ದ ನಿಶಾ ಮಹಾ ಮಂಗಳಾರತಿ ಸಮಯದಲ್ಲಿ ಜಾಗಟೆ... ಘಂಟೆ...ಶಂಖನಾದದ ಮಧ್ಯೆ "ಗಣಪತಿ ಬಪ್ಪ ಮೋರೆಯಾ" ಎಂದು ಘೋಷಣೆ ಕೂಗತೊಡಗಿದಳು. 

ಗಣಪತಿ ಪ್ರತ ಪೂಜೆ ಸಂಪ್ಪನ್ನವಾದ ಬಳಿಕ ಎಲ್ಲರಿಗೂ ತೀರ್ಥ ಪ್ರಸಾದ ವಿನಿಯೋಗ ಮಾಡುವಷ್ಟರಲ್ಲಿ ಭಟ್ಟರ ಮನೆಯಿಂದ ಮಸಾಲೆ ಇಡ್ಲಿ ಚಟ್ನಿ ಮತ್ತು ಕೇಸರೀಬಾತ್ ತಲುಪಿತ್ತು. ನಿಶಾ ಆಟವಾಡುತ್ತಲೇ ಅಪ್ಪನಿಂದ ತಿಂಡಿ ತಿನ್ನಿಸಿಕೊಂಡೆ ಸುರೇಶಣ್ಣನನ್ನು ಗೋಳಾಡಿಸುತ್ತಿದ್ದಳು. ಕಾಲೋನಿಯಲ್ಲಿ ಮುಂಚೆ ಖರೀಧಿಸಿದ್ದ ಆರು ಸೈಟುಗಳಲ್ಲಿ ಗುದ್ದಲಿ ಪೂಜೆ ಮಾಡುವುದಕ್ಕೆಂದು ಕೆಲವರು ಮಾತ್ರ ತೆರಳಿದ್ದು ಉಳಿದವರು ಮನೆ ಪಕ್ಕದ ಸೈಟಿನಲ್ಲಿ ಪೂಜೆಯ ಸಿದ್ದತೆಯಲ್ಲಿ ತೊಡಗಿಕೊಂಡಿದ್ದರು. ಶೀಲಾ—ಅನುಷ ಇಬ್ಬರ ಹೆಸರಿನಲ್ಲಿ ಖರೀಧಿಸಿದ್ದ ಎರಡು ಸೈಟಲ್ಲಿ ಅನುಷ—ಪ್ರತಾಪ್ ಗುದ್ದಲಿ ಪೂಜೆ ಮಾಡಿದರೆ ಸುಭಾಷ್ ಮತ್ತು ಪ್ರೀತಿ ಹೆಸರಿನೆರಡು ಸೈಟುಗಳಲ್ಲಿ ಪ್ರೀತಿ—ರೇವಂತ್ ಪೂಜೆ ಮಾಡಿದರು. 

ಕೊನೆಯದಾಗಿ ಸವಿತಾ—ಸುಕನ್ಯಾ ಮತ್ತು ಸುಮಾಳ ಹೆಸರಿನೆರಡು ಸೈಟುಗಳಲ್ಲೂ ಸವಿತಾ ತನ್ನ ಗಂಡ ವಿವೇಕ್ ಜೊತೆಗೂಡಿ ಪೂಜೆ ನೆರವೇರಿಸಿದಳು. ಭಟ್ಟರ ಮನೆಯವರು ಮತ್ತು ಕಾಲೋನಿಯ ಪರಿಚಿತರು ಪಕ್ಕದ ಸೈಟಿನ ಗುದ್ದಲಿ ಪೂಜೆಗೆ ಆಗಮಿಸಿದ್ದು ನಿಶಾಳನ್ನು ತೋಳಿನಲ್ಲಿ ಎತ್ತಿ ಮುದ್ದಾಡುತ್ತ ಪೂಜೆಗೆ ಬರುತ್ತಿದ್ದ ವ್ಯಕ್ತಿಯನ್ನು ನೋಡಿ ಶಾಕಾದರು. ಭಾರತದ ಅತ್ಯುನ್ನತ ನಾಯಕ ದೇಶದ ಪವರಫುಲ್ ಉಪಪ್ರಧಾನಿ ವರ್ಧನ್ ತೋಳಿನಲ್ಲಿ ನಿಶಾ ಕಿಲಕಿಲನೇ ನಗುತ್ತ ಆತನ ಮೀಸೆಯ ಎಳೆದಾಡುವುದನ್ನು ನೋಡುತ್ತ ಎಲ್ಲರೂ ಬೆರಗಾಗಿದ್ದರು. ಎಲ್ಲರಿಗೂ ನೀತು ವರ್ಧನನನ್ನು ತನ್ನ ತಮ್ಮನೆಂದು ಪರಿಚರಿಸಿದರೆ ಪೂನಿಯನ್ನು ಕರೆತರುತ್ತ.......

ನಿಶಾ.....ಚಾಚು ಇಲ್ಲಿ ನೋಡು ನನ್ನಿ ಫೆಂಡ್ ಪೂನಿ.

ಮಕ್ಕಳಿಬ್ಬರನ್ನೂ ಆಟವಾಡಿಸುತ್ತ ತಾನೂ ಮಗುವಾಗಿದ್ದ ವರ್ಧನ್ ಕುತ್ತಿಗೆಗೆ ಕೈ ಹಾಕಿ ಬಳಸುತ್ತ.....

ನಿಧಿ.....ಬರೀ ಈ ಚಿಲ್ಟಾರಿಯ ಫ್ರೆಂಡ್ ಜೊತೆ ಮಾತಾಡೋದ ನೀವು ಚಿಕ್ಕಪ್ಪ ನಿಮಗೆ ನನ್ನ ಫ್ರೆಂಡ್ಸ್ ಪರಿಚಯ ಮಾಡಿಕೊಡ್ಬೇಕು ಏದ್ದೇಳಿ.

ನಿಧಿಯ ಗೆಳತಿಯರು ಉಪಪ್ರಧಾನಿಯನ್ನು ನೋಡಿ ಫುಲ್ ಶಾಕಾಗಿ ನಿಧಿ ಕಡೆ ತಿರುಗಿದರೆ....

ನಿಧಿ......ಇದ್ಯಾಕಿಷ್ಟೊಂದು ಶಾಕಾಗ್ತೀರ ನಮ್ಮ ಚಿಕ್ಕಪ್ಪ ಉಪಪ್ರಧಾನಿ ಅಂತಲೋ ಅಥವ ಅವರಿಲ್ಲಿಗೆ ಬಂದಿದ್ದಾರೆ ಅಂತಲೋ.

ಪಾಪ ಐವರು ಹುಡುಗಿಯರ ಬಾಯಿಂದ ಮಾತೇ ಹೊರಡುತ್ತಿರದೆ ವರ್ಧನ್ ಕಡೆ ಗೌರವ ಸೂಚಕವಾಗಿ ಕೈ ಮುಗಿದರೆ ಆತ ತುಂಬಾನೇ ಸಹಜವಾಗಿ ಎಲ್ಲರೊಟ್ಟಿಗೆ ಮಾತನಾಡಿದನು. ಈ ಸೈಟಿನ ಗುದ್ದಲಿ ಪೂಜೆಗೆ ಸುಮ—ವಿಕ್ರಂ ದಂಪತಿಗಳು ಕುಳಿತಿದ್ದು ನೀತು ಎಲ್ಲವನ್ನು ಅರೇಂಜ್ ಮಾಡುತ್ತಿದ್ದಳು.

ಆಚಾರ್ಯರು......ಹೇಗಿದೆ ವರ್ಧನ್ ಮೊದಲ ಬಾರಿ ನೀನೀ ರೀತಿ ಒಂದು ಕುಟುಂಬದ ಸದಸ್ಯನಂತೆ ಜನರ ಮಧ್ಯೆ ಸೇರಿರುವುದು.

ವರ್ಧನ್......ಗುರುಗಳೇ ನಾನು ರಾಜಕೀಯದಲ್ಲಿರುವವನು ನನ್ನ ಕಾರಣದಿಂದ ನನ್ನೀ ಕುಟುಂಬದವರಿಗ್ಯಾವುದೇ ತೊಂದರೆ ಆಗದಿದ್ರೆ ನನಗಷ್ಟೇ ಸಾಕು.

ಆಚಾರ್ಯರು......ರಾಣಾಪ್ರತಾಪ್ ನಿನ್ನ ಆಣನೆಂಬುದು ಯಾರಿಗೂ ಗೊತ್ತಿರಲಿಲ್ಲ ಆದರೂ ಅವನಿಬ್ಬರು ಮಕ್ಕಳು ಅನಾಥರಾಗುವುದನ್ನು ತಪ್ಪಿಸುವುದಕ್ಕೆ ನಿನ್ನಿಂದ ಸಾಧ್ಯವಾಯಿತಾ ? ಇಲ್ಲ ತಾನೇ ಹೋಗಲಿ ಆದಾದ ಮೇಲಾದರೂ ನಿನ್ನಿಂದ ಅಣ್ಣ ಅತ್ತಿಗೆಯರನ್ನು ಕಿತ್ತುಕೊಂಡ ಪಾಪಿಗಳ ವಿರುದ್ದ ನಿನ್ನಿಂದೇನಾದರೂ ಮಾಡಲು ಸಾಧ್ಯವಾಯಿತಾ ? ಇಲ್ಲ ಅದೂ ಆಗಲಿಲ್ಲ. 

ಕುಟುಂಬ ಎಂಬುದು ಯಾವುದೇ ಕಾರಣಕ್ಕೆ ಅಡಚಣೆಯಾಗುವುದಿಲ್ಲ ವರ್ಧನ್ ಕುಟುಂಬವೇ ಒಂದು ಶಕ್ತಿ ನೀತು ಎಲ್ಲರನ್ನೂ ಸೇರಿಸಿ ತನ್ನದೇ ಆದಂತ ಒಂದು ವಸುದೈವ ಕುಟುಂಬದ ನಿರ್ಮಾಣ ಮಾಡಿಕೊಂಡಿದ್ದಾಳೆ ಇಲ್ಲಿರುವುದು ಕೇವಲ ಪ್ರೀತಿಯಷ್ಟೆ. ನೀನು ನಿನ್ನಣ್ಣ ಸೇರಿ ಮಾಡಿದ ತಪ್ಪು ಮರುಕಳಿಸದಿರಲಿ ಅಂತಲೇ ನಿನ್ನನ್ನು ನಿಧಿ ಮೂಲಕ ಇಲ್ಲಿಗೆ ಬರುವಂತೆ ಮಾಡಿದೆ. ನಮ್ಮ ದೇಶದ ಸರ್ವೋಚ್ಚ ನಾಯಕ ಈ ಕುಟುಂಬದವನೆಂದರೆ ಇವರ ಕಡೆ ತಿರುಗಿ ನೋಡುವುದಕ್ಕೂ ಮುಂಚೆ ವಿರೋಧಿಗಳು ಹತ್ತು ಬಾರಿ ಯೋಚನೆ ಮಾಡ್ತಾರೆ ಅಷ್ಟು ಸಮಯ ಸಾಕು ರಾಣಾ ಮತ್ತಿತರರಿಗೆ ಅವರನ್ನು ನಿರ್ನಾಮ ಮಾಡುವುದಕ್ಕೆ ಗೊತ್ತಾಯ್ತಾ.

ವರ್ಧನ್.....ಅರ್ಥವಾಯಿತು ಗುರುಗಳೇ ನಾನು ಅಣ್ಣ ಮಾಡಿದ್ದು ತಪ್ಪೆಂದು ಈಗ ನನಗರ್ಥವಾಗ್ತಿದೆ ಇನ್ಮುಂದೆ ಹಾಗೆ ಮಾಡುವುದಿಲ್ಲ.

ಪೂನಂ ಜೊತೆಗೋಡಿ ಬಂದ ನಿಶಾ......ಪೂಜಿ ಆತು ಚಾಚು ನಡಿ ರೋಂಡ್ ಹೋಗನ.

ನಿಧಿ.....ಏನ್ ರೌಂಡ್ ಹೋಗ್ಬೇಕೆ ನೀನು ?

ನಿಶಾ.....ನಾನಿ ಪೂನಿ ಹೆಲಿಚಾಪಲ್ ರೋಂಡ್ ಹೋತಿ ಅಣ್ಣ ಬೇಡ

ಸುರೇಶ.......ನಾನು ಬೇಡ್ವಾ ಚಿನ್ನಿ ಮರಿ.

ನಿಶಾ......ಬೇಡ ಅಣ್ಣ ಬೇಡ ಅಣ್ಣಗೆ ಏಟ್ ಬೇಕು.

ನಿಧಿ(ಹಿಂದಿಯಲ್ಲಿ).....ಚಿಕ್ಕಪ್ಪ ಸುರೇಶನ ಬೆನ್ನಿಗೊಂದು ಏಟ್ ಕೊಡಿ ಆಮೇಲ್ನೋಡಿ ಮಜ.

ವರ್ಧನ್.....ಪಾಪ ಸುರೇಶ ಏನ್ ಮಾಡಿದ್ನಮ್ಮ ?

ನಿಧಿ.....ನೀವು ಏಟ್ ಕೊಡಿ ಸುರೇಶ ನೀನು ಕಿರುಚೋ.

ವರ್ಧನ್ ಸುರೇಶನಿಗೊಂದು ಗುದ್ದಿದಂತೆ ಮಾಡಿದರೆ ಅವನು ಆಹ್.. ಅಮ್ಮಾ....ಎಂದು ಕಿರುಚಿಕೊಂಡನು. ಇದನ್ನೆಲ್ಲಾ ನೋಡುತ್ತಿದ್ದ ನಿಶಾ ಮುಖದಲ್ಲಿ ಕೋಪವುಕ್ಕಿ ಬಂದಿದ್ದು ಅಣ್ಣ ಮತ್ತು ಚಿಕ್ಕಪ್ಪನ ಮಧ್ಯೆ ನಿಲ್ಲುತ್ತ ಬೆರಳನ್ನು ತೋರಿಸಿ ಎಚ್ಚರಿಸುವಂತೆ......

ನಿಶಾ.......ಅಣ್ಣಗೆ ಏಟ್ ಕೊಬೇಲ ಅಣ್ಣ ನಂದು ನನ್ನಿ ಕೋಪ ಬಂದಿ ನಾನಿ ಸೂಟ್ ಮಾತೀನಿ.....ಎಂದು ಕೋಪದಲ್ಲಿ ಚಿಕ್ಕಪ್ಪನಿಗೆ ಫುಲ್ ವಾರ್ನಿಂಗ್ ಕೊಟ್ಟಳು.

ಸುರೇಶ ತಂಗಿನ್ನೆತ್ತಿಕೊಂಡಾಗ ಅಣ್ಣನ ಕೆನ್ನೆಗೆ ಮುತ್ತಿಟ್ಟು ಬಿಗಿಯಾಗಿ ತಬ್ಭಿಕೊಳ್ಳುತ್ತ ಚಿಕ್ಕಪ್ಪನ ಕಡೆ ಗುರುಯಿಸುತ್ತ ನೋಡುತ್ತಿದ್ದಳು.

ನಿಧಿ.......ನೋಡಿದ್ರಾ ಚಿಕ್ಕಪ್ಪ ಅಣ್ಣ ತಂಗಿಯ ಪ್ರೀತಿ ಹೇಗಿದೆ ಅಂತ ? ಸುರೇಶನನ್ನು ಇವಳು ಮಾತ್ರ ರೇಗಿಸಬಹುದಷ್ಟೆ ಅಪ್ಪನೂ ಇವನಿಗೆ ಏಟು ಹೊಡೆಯುವಂತಿಲ್ಲ ಅವರ ಮೇಲೂ ಜಗಳಕ್ಕೆ ನಿಂತ್ಕೊತಾಳೆ. ಆದರೂ ಯಾವಾಗ್ಲೂ ಇವನಿಗೆ ಏಟು ಕೊಡು ಬಯ್ಯಿ ಅಂತ ಅಪ್ಪನ ಬಳಿ ಕಂಪ್ಲೇಂಟ್ ಮಾತ್ರ ಮಾಡ್ತಾನೇ ಇರ್ತಾಳೆ.

ವರ್ಧನ್ ಸಾರಿ ಕೇಳಿ ಸುರೇಶನಿಂದ ನಿಶಾಳನ್ನೆತ್ತಿಕೊಂಡು ಅವಳನ್ನು ಪೂತುಣಿಸುತ್ತ ಕೋಪ ತಣ್ಣಗಾಗಿಸಿದ ಬಳಿಕ ಮೊದಲಿನಂತೆಯೇ ಕಿಲಕಾರಿ ಹಾಕತೊಡಗಿದಳು.
* *
ಹರೀಶ ಮತ್ಟು ಕುಟುಂಬದವರೆಲ್ಲರೂ ವಿದ್ಯಾಲಯ ಕಟ್ಟಿಸಲಿರುವ ಜಮೀನಿಗೆ ತೆರಳಿದರೆ ಅವರ ಕಾಲೋನಿ ಜನರು ಉಪಪ್ರಧಾನಿಯೇ ನೀತು ತಮ್ಮನೆಂಬ ವಿಷಯದ ಬಗ್ಗೆ ತಮ್ಮಲ್ಲೇ ಮಾತನಾಡಿಕೊಳ್ಳುತ್ತ ನಿಂತಿದ್ದರು. ಕಾರುಗಳು ಜಮೀನಿನ ಬಳಿ ಬಂದಾಗ ಶಂಕು ಸ್ಥಾಪನೆಗೆ ಭರ್ಜರಿ ಸಿದ್ದತೆಗಳಾಗಿದ್ದು ದೊಡ್ಡ ಶಾಮೀಯಾನ ಹಾಕಿದ್ದು ಅಲ್ಲಿನ ಎಲ್ಲಾ ಕೆಲಸಗಳನ್ನು ಬಸ್ಯ ಮತ್ತವನ ಹುಡುಗರು ಮಾಡುತ್ತಿದ್ದರು. ಮನೆಯವರು ಬರುವುದಕ್ಕೂ ಅರ್ಧ ಘಂಟೆ ಮುಂಚಿತವಾಗಿಯೇ ಜಿಲ್ಲೆಯ ಡಿಸಿ...ಎಸಿ...ತಹಶೀಲ್ದಾರ್ ಹಾಗು ಇನ್ನಿತರ ಅಧಿಕಾರಿಗಳು ಅಲ್ಲಿಗೆ ಆಗಮಿಸಿದ್ದರು.

ಎಸಿ.......ಸರ್ ನಾವಿಲ್ಲಿಗೆ ಬಂದಿರುವ ಉದ್ದೇಶವೇನು ನಮ್ಮನ್ನಿಲ್ಲಿಗೆ ಯಾರೂ ಸಹ ಆಹ್ವಾನಿಸಿಯೇ ಇಲ್ವಲ್ಲ ಜೊತೆಗಿದು ಸರ್ಕಾರದಿಂದ ನಡೆಯುತ್ತಿರುವ ಕಾರ್ಯಕ್ರಮವೂ ಅಲ್ವಲ್ಲ ಸರ್.

ಡಿಸಿ......ನೆನ್ನೆ ರಾತ್ರಿ ಸೆಂಟ್ರಲ್ ಮಿನಿಸ್ಟ್ರಿಯಿಂದ ಫೋನ್ ಬಂದಿತ್ತು ನಾಳೆ 11 ಘಂಟೆಗೆ ಜಿಲ್ಲೆಯ ಅಧಿಕಾರಿಗಳೆಲ್ಲರ ಜೊತೆಯಲ್ಲಿ ನೀವು ಜಮೀನಿನ ಹತ್ತಿರ ಹಾಜರಿರಬೇಕು ಅಂತ ಯಾಕೆಂದು ಮಾತ್ರ ನನಗೆ ಗೊತ್ತಿಲ್ಲ ಇನ್ನೇನೂ ಕೇಳ್ಬೇಡ.

ಅಷ್ಟರಲ್ಲಿ ಕುಟುಂಬದವರಿದ್ದ ಕಾರುಗಳು ಆ ಸ್ಥಳಕ್ಕೆ ಆಗಮಿಸಿದ್ದು ಕೆಳಗಿಳಿದು ನೀತು ಜೊತೆ ಮಾತನಾಡುತ್ತ ಬರುತ್ತಿರುವ ದೇಶದ ಉಪ ಪ್ರಧಾನಿಯನ್ನು ನೋಡಿದಾಗ ಅಧಿಕಾರಿಗಳು ಬೆವತು ಹೋದರು. ವರ್ಧನ್ ಸನ್ನೆ ಮಾಡಿದಾಗ ಪಿಎ ತನ್ನೊಂದಿಗೆ ಡಿಸಿಯನ್ನು ಮಾತ್ರ ವರ್ಧನ್ ಹತ್ತಿರ ಬರುವಂತೆ ಕರೆದನು.

ಡಿಸಿ......ಗುಡ್...ಗುಡ್ ಮಾರ್ನಿಂಗ್ ಸರ್.

ವರ್ಧನ್......ಡಿಸಿ ಸಾಹೇಬ್ರೇ ಗುಡ್ ಜಾಬ್ ಜಮೀನಿನ ಕೆಲಸವನ್ನು ನೀಟಾಗಿ ಮಾಡಿಸಿಕೊಟ್ಟಿದ್ದೀರ ಇದರ ಬೌಂಡರಿ ಮಾರ್ಕಿಂಗನ್ನು ಮಾಡಿಸುವುದಕ್ಕೆ ನನ್ನ ಕಡೆಯಿಂದಲೇ ನಿಮಗೆ ಫೋನ್ ಬಂದಿದ್ದು. ಇವರು ನಮ್ಮಕ್ಕ ನೀತು ಶರ್ಮ ಅಂತ ಯಾವುದೇ ಕೆಲಸವಿದ್ದರೂ ಸರಿ ತಕ್ಷಣ ಮಾಡಿ ಕೊಡಿ.

ಡಿಸಿ.......ಖಂಡಿತ ಸರ್ ಮೇಡಂ ನಿಮ್ಮ ಅಕ್ಕ ಅನ್ನುವ ವಿಷಯವೇ ಗೊತ್ತಿರಲಿಲ್ಲ ಸರ್ ಮೇಡಂ ಇದು ನನ್ನ ಕಾರ್ಡ್ ಏನೇ ಕೆಲಸವಿದ್ದರೂ ಒಂದು ಫೋನ್ ಮಾಡಿ ಮೇಡಂ ಸಾಕು.

ನೀತು.......ವರ್ಧನ್ ಡಿಸಿ ಸಾಹೇಬ್ರು ತುಂಬ ಚೆನ್ನಾಗಿ ಇಲ್ಲಿನ ಕೆಲಸ ಮಾಡಿಸಿಕೊಟ್ಟಿದ್ದಾರೆ ಮಾರ್ಕಿಂಗ್ ದಿನ ಇವರೇ ಬಂದಿದ್ರು.

ವರ್ಧನ್......ನಡೀರಿ ಅಕ್ಕ ಭಾವ ಕಾಯ್ತಿದ್ದಾರೆ ಪೂಜೆ ಶುರುಮಾಡಿ ನೀವೂ ನಿಮ್ಮ ಅಧಿಕಾರಗಳನ್ನೂ ಕರೆದುಕೊಂಡು ಬನ್ನಿ.

ಡಿಸಿ.....ಎಸ್ ಸರ್.

ಆಚಾರ್ಯರ ಮುಂದಾಳತ್ವದಲ್ಲಿ ಶಂಕುಸ್ಥಾಪನೆ ನೆರವೇರಿದ್ದು ನಿಶಾ ಕೈಯಿಂದಲೇ ಮೊದಲನೇ ಇಟ್ಟಿಗೆಯನ್ನು ಇರಿಸಲಾಯಿತು. ಹರೀಶನ ಶಾಲೆಯ ಸ್ಟಾಫ್ ಮತ್ತು ನಿಧಿ ಕಾಲೇಜಿನ ಪ್ರಿನ್ಸಿಪಾಲ್ ಎಲ್ಲರು ತಮ್ಮ ಕುಟುಂಬಗಳೊಂದಿಗೆ ಆಗಮಿಸಿದ್ದರು. ನಿಧಿ ಅವರೆಲ್ಲರಿಗೂ ಚಿಕ್ಕಪ್ಪ ಎಂದು ವರ್ಧನ್ ಸಿಂಗನನ್ನು ಪರಿಚಯಿಸಿದರೆ ದೇಶದ ಉಪಪ್ರಧಾನಿ ಕೈಕುಲುಕಿ ಮಾತನಾಡಿಸಿದ್ದೇ ಎಲ್ಲರಿಗೂ ಸಂಭ್ರಮದ ಕ್ಷಣವಾಗಿತ್ತು.

ನೀತು ಅಲ್ಲಿಗೆ ಬಂದು ಅವರಿಗೆ ಕೈಮುಗಿದು.....ಕ್ಷಮಿಸಿ ಸರ್ ನಾವು ಪೂಜೆಗೆ ಕುಳಿತಿದ್ವಿ ಅದಕ್ಕೇ ನಿಮ್ಮನ್ನು ಮಾತನಾಡಿಸುವುದು ಸ್ವಲ್ಪ ತಡವಾಯಿತು. ಹಬ್ಬದ ಬಿಝಿಯಲ್ಲೂ ನೀವುಗಳು ಬಂದಿದ್ದು ತುಂಬ ಸಂತೋಷವಾಯಿತು ಸರ್.

ಮುಖ್ಯೋಪಾಧ್ಯಾಯರು..ನಮ್ಮನ್ನು ಆಹ್ವಾನಿಸಿದ್ದಕ್ಕೆ ನಾವೇ ನಿಮಗೆ ಧನ್ಯವಾದ ಹೇಳ್ಬೇಕು. ನಾವಿಲ್ಲಿಗೆ ಬಂದಿದ್ದಕ್ಕೇ ತಾನೇ ದೇಶದಲ್ಲಿನ ಸರ್ವೋಚ್ಚ ನಾಯಕರನ್ನು ಬೇಟಿಯಾಗಲು ಸಾಧ್ಯವಾಯಿತು.

ವರ್ಧನ್.......ಸರ್ ನೀವೆಲ್ಲರೂ ವಿದ್ಯಾದಾನ ಮಾಡುವ ಗುರುಗಳು ಹಾಗಾಗಿ ನೀವು ಪೂಜನೀಯರು ನಾನಿಲ್ಲಿಗೆ ನಾಯಕ ದೇಶದ ಉಪ ಪ್ರಧಾನಿಯಾಗಿ ಬಂದಿಲ್ಲ ನಮ್ಮ ಅಕ್ಕ ಭಾವನ ಕುಟುಂಬದಲ್ಲೊಬ್ಬ ಸದಸ್ಯನಾಗಿ ಬಂದಿರುವೆ ಅಷ್ಟೆ.

" ಸರಸ್ವತಿ ಗುರುಕುಲ "ದ ಶಂಕುಸ್ಥಾಪನಾ ಪೂಜೆ ಸಮಾಪ್ತಿಯಾದ ನಂತರ ಅತಿಥಿಗಳಿಗೆ ಪಲಾಹಾರ ವ್ಯವಸ್ಥೆಯನ್ನೂ ಮಾಡಲಾಗಿದ್ದು ಎಲ್ಲರನ್ನು ಬೀಳ್ಕೊಟ್ಟು ಮನೆಗೆ ಹಿಂದಿರುಗಿದರು ಎದುರು ಮನೆಯ ಮಹಡಿಯಲ್ಲಿ ರಕ್ಷಕರಿಗೆ ಬಿಟ್ಟುಕೊಡಲಾಗಿದ್ದ ರೂಮಿನಲ್ಲಿ ನೀತು.. ವರ್ಧನ್... ರಾಣಾ... ವಿಕ್ರಂ ಸಿಂಗ್ ಮತ್ತು ಆಚಾರ್ಯರು ಸೇರಿದ್ದು ಅವರ ಮಧ್ಯೆ ಗುಪ್ತ ಸಮಾಲೋಚನೆ ನಡೆಯುತ್ತಿತ್ತು

ಆಚಾರ್ಯರು.......ನೀತು ಏದುರಾಗಿದ್ದ ಸಮಸ್ಯೆಗಳು ಮತ್ತದನ್ನು ಸೃಷ್ಟಿಸಿದ್ದವರೆಲ್ಲರೂ ನಿರ್ನಾಮಗೊಂಡಿದ್ದಾರೆ ಆದರೂ ನಿನ್ನಲ್ಲೇನೋ ಅಸಹಜತೆ ಕಾಣುತ್ತಿದೆ ಕಾರಣವೇನಮ್ಮ ಮಗಳೇ ?

ವರ್ಧನ್......ಈಗೇನೂ ಆತಂಕವಿಲ್ಲ ಅಕ್ಕ ಎಲ್ಲವೂ ಬಗೆಹರಿದಿದೆ.

ನೀತು.....ಹೌದು ಗುರುಗಳೇ ಅದಕ್ಕೂ ಕಾರಣವಿದೆ ಏಕೆಂದರಿನ್ನೂ ನಮ್ಮ ಕೈ ಎಲ್ಲಾ ಷಡ್ಯಂತ್ರಗಳನ್ನು ರೂಪಿಸಿದ ಮುಖ್ಯ ಆರೋಪಿಯ ತನಕ ತಲುಪಿಲ್ಲ ಅದೇ ನನ್ನ ಆತಂಕಕ್ಕೆ ಕಾರಣ.

ವರ್ಧನ್......ಅಕ್ಕ ಮುಖ್ಯ ಆರೋಪಿ ಅಂದರೆ ಇನ್ಯಾರಿದ್ದಾರೆ ?

ವಿಕ್ರಂ ಸಿಂಗ್.....ಮಾತೆ ಯಾರೆಂದು ಹೇಳಿ ಎಲ್ಲೇ ಅಡಗಿದ್ದರೂ ಸರಿ ಹುಡುಕಿ ಎಳೆದು ತರುತ್ತೀವಿ.

ಆಚಾರ್ಯರು....ನೀನ್ಯಾರ ಬಗ್ಗೆ ಹೇಳುತ್ತಿದ್ದೀಯಮ್ಮ ?

ನೀತು.......ಗೊತ್ತಿಲ್ಲ ಗುರುಗಳೇ ಅವರು ಯಾರೆಂಬುದು ಗೊತ್ತಿಲ್ಲ ಆದರೆ ಆ ವ್ಯಕ್ತಿ ಇರುವುದಂತೂ ಖಚಿತ. ನನಗೆ ಗುಂಡೇಟು ಬಿದ್ದು ಪ್ರಜ್ಞೆ ಮರುಕಳಿಸುವುದಕ್ಕೂ ಮುನ್ನ ನನ್ನ ಮನಸ್ಸು ಸ್ತುಪ್ತವಾದಂತ ಸ್ಥಿತಿಯಲ್ಲಿದ್ದಾಗ ನಾನು ಅಣ್ಣ ಅತ್ತಿಗೆಯರ ಆತ್ಮವನ್ನು ಬೇಟಿಯಾದೆ. ನೀವಂದು ಹೇಳಿದ್ರಲ್ಲ ಗುರುಗಳೇ ನಿಶಾಳ ಮನಸ್ಸಿನಲ್ಲಿ ತಾಯಿಯು ನೆಲೆಯೂರಿ ಯಾವುದೋ ಮಹತ್ಕಾರ್ಯ ಮಾಡಿಸಬೇಕೆಂದಿದ್ದಾರೆ ಅಂತ ಆ ಕೆಲಸ ಬೇರಾವುದೂ ಅಲ್ಲ ನನ್ನ ಪ್ರಾಣ ಉಳಿಸುವುದಕ್ಕಾಗಿ ಮುನಿವರ್ಯರಿಗೆ ನಿಶಾಳ ಮನಸ್ಸಿನ ಮೂಲಕ ನನ್ನ ಸ್ಥಿತಿ ವಿವರಿಸಿ ನನ್ನ ಪ್ರಾಣ ಉಳಿಸುವಂತೆ ಕೇಳಿಕೊಳ್ಳಲು ಅತ್ತಿಗೆ ಮಗಳ ಮನಸಲ್ಲಿ ನೆಲೆಯೂರಿದ್ದು. 

ಚಂಚಲಾದೇವಿ ಮತ್ತವಳ ಪರಿವಾರದವರಿಗೂ ರಾಜಸ್ಥಾನದ ಸಿಎಂ ಮತ್ತಿತರರಿಗೂ ಎಲ್ಲಿಂದೆಲ್ಲಿಯ ಸಂಬಂಧವಿದೆ ಗುರುಗಳೇ. ಇವರೆಲ್ಲರ ಜೊತೆ ಕೆಲವು ಖ್ಯಾತನಾಮ ಬಿಝಿನೆಸ್ ಲೋಕದವರೂ ಶಾಮೀಲಾಗಿದ್ದರು ಹೇಗೆ ? ಇವರೆಲ್ಲರನ್ನೂ ಒಂದೇ ವೇದಿಕೆಗೆ ಕರೆತಂದು ಸಂಸ್ಥಾನದ ವಿರುದ್ದ ನಿಲ್ಲುವುದಕ್ಕೆ ಪ್ರೇರೇಪಣೆ ನೀಡಿದ ವ್ಯಕ್ತಿ ಇನ್ನೂ ತೆರೆಮರೆಯಲ್ಲೇ ಅಡಗಿದ್ದಾನೆ. ಅವನ ಸುಳಿವು ಸಿಗುವುದು ನಮಗೆ ತುಂಬ ಮುಖ್ಯ ಇದೆಲ್ಲದರ ಹಿಂದೆ ಆತನದ್ದೇ ಮಾಸ್ಟರ್ ಮೈಂಡಿರುವುದು. ಇದರ ಬಗ್ಗೆ ಅಣ್ಣನ ಆತ್ಮ ಸೂಕ್ಷ್ಮವಾಗಿ ನನಗೆ ಸಂಕೇತವನ್ನೂ ನೀಡಿತು ಆದರೆ ವ್ಯಕ್ತಿಯ ಹೆಸರನ್ನೇಳುವುದಕ್ಕೆ ತನಗೆ ಅನುಮತಿಯಿಲ್ಲ ಆದಷ್ಟು ಬೇಗ ಅವನನ್ನು ಹುಡುಕುವಂತೆ ಮಾತ್ರ ಹೇಳಿದರು.

ನೀತು ಹೇಳಿದ್ದನ್ನು ಕೇಳಿ ಎಲ್ಲರ ಮುಖದಲ್ಲೂ ಟೆನ್ಷನ್ ಬಂದಿದ್ದು ಇದಕ್ಕೇನು ಪರಿಹಾರವೆಂದು ಯೋಚಿಸತೊಡಗಿದರು.

ನೀತು......ಅದಕ್ಕಿಷ್ಟು ದಿನ ಯೋಚಿಸಿದಾಗ ನನಗೊಂದು ಪರಿಹಾರ ಹೊಳೆಯಿತು ಗುರುಗಳೇ.

ವರ್ಧನ್......ಏನಕ್ಕ ಅದು ಹೇಳಿ.

ನೀತು......ರಾಣಾ ವಿರೋಧಿಗಳಿಂದ ವಶಪಡಿಸಿಕೊಂಡಿದ್ದ ಅವರ ಮೊಬೈಲುಗಳನ್ನು ನಾಶ ಪಡಿಸಿಲ್ಲ ತಾನೇ.

ರಾಣಾ......ಇಲ್ಲ ಮಾತೆ ಕೊನೇ ಕ್ಷಣದಲ್ಲಿ ನೀವು ಮೊಬೈಲುಗಳನ್ನು ಸ್ವಿಚಾಫ್ ಮಾಡಿ ಸುರಕ್ಷಿತವಾಗಿ ಎತ್ತಿಟ್ಟಿರಿ ಅಂತ ಹೇಳಿದಂತೆ ನಾವು ಅವನ್ನೆಲ್ಲಾ ಆಫ್ ಮಾಡಿ ನಮ್ಮ ಹತ್ತಿರ ಇಟ್ಟುಕೊಂಡಿದ್ದೀವಿ.

ನೀತು.....ರಾಣಾ ರಾಜಸ್ಥಾನಕ್ಕೆ ಹಿಂದಿರುಗಿದ ತಕ್ಷಣ ನೀವೆಲ್ಲ ಒಂದು ಕೆಲಸ ಮಾಡ್ಬೇಕು. ಆ ಮೊಬೈಲುಗಳಲ್ಲಿರುವ ಸಿಮ್ ಕಾರ್ಡ್ ನಂ... ತೆಗೆದುಕೊಂಡು ವರ್ಧನ್ ಬಳಿ ತಲುಪಿಸಿ ಆದರೆ ಅರಮನೆ ಒಳಗಡೆ ಅಥವ ಹತ್ತಿರದಲ್ಲೆಲ್ಲೂ ಆನ್ ಮಾಡಬಾರದು ಎಚ್ಚರವಿರಲಿ. ಈಗ ವರ್ಧನ್ ನಿನ್ನ ಕೆಲಸವೇ ಬಹಳ ಮುಖ್ಯವಾದದ್ದು ಆ ನಂಬರುಗಳ ಕಾಲ್ ಡೀಟೇಲ್ಸ್ ಅದ್ಯಾರ ಹೆಸರಿನಲ್ಲಿದೆ ಎಂಬುದನ್ನು ಪತ್ತೆಹಚ್ಚಿಸು.

ವರ್ಧನ್.....ಆಯ್ತು ಅಕ್ಕ ಇಂಟಲಿಜೆನ್ಸ್ ಕಡೆಯಿಂದ ಎಲ್ಲಾ ವಿವರ ತರಿಸಿಕೊಳ್ಳುವೆ.

ನೀತು.....ಆದರೆ ಪ್ರತಿಯೊಂದು ವಿವರಗಳೂ ಬೇಕು ವರ್ಧನ್ ಎಷ್ಟು ಹಿಂದಿನವರೆಗೆ ಸಿಗುತ್ತೋ ಅಷ್ಟೂ ಒಳ್ಳೆಯದೆ. ಆ ನಂಬರಿಗೆ ಒಳ ಬಂದಿರುವ....ಹೊರಗೆ ಹೋಗಿರುವ ಕರೆಗಳ ಜೊತೆ ಮಿಸ್ಡ್ ಕಾಲ್ಸ್ ಮತ್ತು ಯಾವ್ಯಾವ ನಂಬರಿನಿಂದ ಮೆಸೇಜ್ ಬಂದಿತ್ತು ಎಂಬುದರ ಸಂಪೂರ್ಣ ವಿವರ ಕಲೆಹಾಕು. ಇದರ ಜೊತೆಗೆ ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಸ್ಯಾಟಲೈಟ್ ಫೋನಿನ ಉಪಯೋಗಗಳು ಏನಾದರೂ ಆಗಿತ್ತಾ ಎಂಬುದನ್ನೂ ಪತ್ತೆ ಹಚ್ಚಿಸು ಜೊತೆಗೆ ಈಗಲೂ ಅವು ಚಾಲ್ತಿಯಲ್ಲಿದ್ದಾವಾ ಎಂಬುದನ್ನೂ ತಿಳಿದುಕೋ ನಮ್ಮ ಬೇಟೆ ಯಾರೆಂಬುದನ್ನು ನಾವು ಕಂಡು ಹಿಡಿಯಲೇಬೇಕು. ವಿಕ್ರಂ ಸಿಂಗ್ ಅರಮನೆ ಮತ್ತು ಸಂಸ್ಥಾನದ ಮುಖ್ಯ ಕಛೇರಿಗಳ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ನಮಗೆ ಎಷ್ಟು ದಿನ ಹಳೆಯದ್ದು ಸಿಗಬಹುದು.

ವಿಕ್ರಂ ಸಿಂಗ್......ಮಾತೆ ಸಿಸಿ ಕ್ಯಾಮೆರಾ ಅಳವಡಿಸಿದ ದಿನದಿಂದ ಈ ಕ್ಷಣದವರೆಗಿನ ಎಲ್ಲಾ ದೃಶ್ಯಾವಳಿಗಳ ಹಾರ್ಡ್ ಡಿಸ್ಕ್ ರೂಪದಲ್ಲಿ ನಮ್ಮ ಬಳಿ ಲಭ್ಯವಿದೆ.

ನೀತು......ಹಾಗಿದ್ದರೆ ಒಳ್ಳೆಯದೇ ಪ್ರತಿಯೊಂದು ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅಣ್ಣನನ್ನು ಬೇಟಿಯಾಗಲು ಯಾರೆಲ್ಲಾ ಬಂದಿದ್ದರು ? ಅವರುಗಳು ಈಗೆಲ್ಲಿದ್ದಾರೆ ? ಅಣ್ಣನ ಜೊತೆ ಅವರಿಗೆ ಯಾವ ರೀತಿಯ ಸಂಬಂಧವಿತ್ತು ಪ್ರತೀ ಸಣ್ಣ ಪುಟ್ಟ ವಿವರಗಳನ್ನೂ ಕಲೆಹಾಕಿ. ವರ್ಧನ್ ಈ ಸಿಎಂ ಹಾಗು ಸಚಿವರ ಮನೆ ಮತ್ತು ಅವರ ಕಛೇರಿಗಳ ಸಿಸಿ ರೆಕಾರ್ಡಿಂಗನ್ನು ಹೇಗಾದರೂ ಪಡೆದುಕೋ ನಮ್ಮ ಹತ್ತಿರ ಈಗಾಗಲೇ ಚಂಚಲಾದೇವಿಯ ಅರಮನೆ ರೆಕಾರ್ಡಿಂಗುಗಳು ಲಭ್ಯವಿದೆ. ಯಾರಾದರೊಬ್ಬ ವ್ಯಕ್ತಿ ಈ ಎಲ್ಲಾ ಜಾಗಗಳಲ್ಲೂ ಇದ್ದೇ ಇರುತ್ತಾನೆ ಅವನೇ ನಮ್ಮ ಗುರಿ.

ರಾಣಾ....ಸರಿ ಮಾತೆ ನಾವೀಗಲೇ ಹೊರಡುತ್ತೀವಿ ಇವತ್ತಿನಿಂದಲೇ ಕಾರ್ಯ ಪ್ರಾರಂಭಿಸ್ತೀವಿ.

ನೀತು......ಆತುರಪಡುವ ಅಗತ್ಯವಿಲ್ಲ ರಾಣಾ ಸಧ್ಯಕ್ಕೆ ನಮ್ಮ ಬಳಿ ಸಾಕಷ್ಟು ಸಮಯವಿದೆ. ಅವನ್ಯಾರೇ ಆಗಿದ್ದರೂ ತನ್ನ ಜೊತೆಗಾರರು ಕಣ್ಮರೆಯಾಗಿರುವಾಗ ಮುಂದಿನ ಹೆಜ್ಜೆಯಿಡುವುದಕ್ಕೂ ಮುಂಚೆ ನೂರು ಬಾರಿ ಯೋಚಿಸ್ತಾನೆ. ಸಂಜೆ ಗಣೇಶನ ವಿಸರ್ಜನೆ ಕಾರ್ಯ ಮುಗಿಸಿಕೊಂಡು ನಾಳೆ ಬೆಳಿಗ್ಗೆ ಹೊರಡಿ ಆದರೆ ಈ ವಿಷಯವನ್ನು ಮನೆಯಲ್ಯಾರ ಹತ್ತಿರವೂ ಪ್ರಸ್ತಾಪಿಸಬಾರದು ಎಚ್ಚರ. ಇದರ ಬಗ್ಗೆ ಮಕ್ಕಳಿಬ್ಬರ ಹುಟ್ಟಿದ ಹಬ್ಬಕ್ಕೆಂದು ರಾಜಸ್ಥಾನಕ್ಕೆ ಬಂದಾಗ ನಾವು ಅಲ್ಲಿಯೇ ಚರ್ಚಿಸೋಣ ಅಲ್ಲಿವರೆಗೆ ಮಾಹಿತಿ ಕಲೆ ಹಾಕುತ್ತಿರಿ.

ರಾಣಾ......ಹಾಗೇ ಆಗಲಿ ಮಾತೆ.

ಆಚಾರ್ಯರು.......ಸುಮೇರ್—ವೀರ್ ಸಿಂಗ್ ಇಲ್ಲೇ ಇರಲಿ ರಾಣಾ ಅರಮನೆಯ ಸುರಕ್ಷತೆಯನ್ನು ಅಜಯ್ ಸಿಂಗ್ ನೋಡಿಕೊಳ್ಳಲಿ ನೀವೆಲ್ಲರೂ ಈ ಅಜ್ಞಾತ ವ್ಯಕ್ತಿಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿಕೊಳ್ಳಿ. ಅವನನ್ನು ಹುಡುಕುವುದರ ಜೊತೆ ಯುವರಾಣಿ ಮತ್ತು ನೀತು ಕುಟುಂಬದವರನ್ನು ಸುರಕ್ಷಿತರನ್ನಾಗಿ ಕಾಪಾಡುವುದು ಕೂಡ ನಿಮ್ಮ ಹೊಣೆಗಾರಿಕೆ.

ನೀತು.......ವರ್ಧನ್ ಜಾಸ್ತಿ ಯೋಚಿಸಬೇಡ ಕಣೋ ಸ್ವಲ್ಪ ಹೊತ್ತು ಮಕ್ಕಳ ಜೊತೆಯಲ್ಲಿರು ಮನಸ್ಸು ರಿಲಾಕ್ಸಾಗುತ್ತೆ.

ವರ್ಧನ್ ನಗುತ್ತ.......ಆಯ್ತಕ್ಕ ಹಾಗೇ ಮಾಡ್ತೀನಿ.

ಆಚಾರ್ಯರು......ತಾಯಿ ಜಗನ್ಮಾತೆ ಈ ಕಾರ್ಯಕ್ಕೆ ನಿನ್ನನ್ನೇ ಯಾಕೆ ಆಯ್ಕೆ ಮಾಡಿದಳೆಂಬುದು ನಮಗೀಗ ಅರಿವಾಗ್ತಿದೆ ಕಣಮ್ಮ ನೀತು. ನೀನ್ಯಾವಗಲೂ ಎಲ್ಲರಿಗಿಂತ ಹತ್ತು ಹೆಜ್ಜೆ ಮುಂದಿನದ್ದು ಯೋಚಿಸಿ ತೀರ್ಮಾನ ತೆಗೆದುಕೊಳ್ತೀಯ.

ನೀತು.....ಎಲ್ಲವೂ ಮಾತೆಯ ಕೃಪೆ ನಿಮ್ಮ ಆಶೀರ್ವಾದ ಗುರುಗಳೇ.
* *
* *

No comments:

Post a Comment