ನೀತು.......ಈ ಕಂತ್ರಿ ನಾಯಿಗೆ ಮಂತ್ರಿ ಸ್ಥಾನ ಸಿಕ್ಕಿತೆಂದು ತಾನೇ ನೀ ಇಷ್ಟೊಂದು ಹಾರಾಡ್ತಿದ್ದೆ ? ಈಗ್ನೋಡು ನಿಮ್ಮಪ್ಪ ನನ್ನ ಚಪ್ಪಲಿಯಡಿ ಬಿದ್ದು ಒದ್ದಾಡ್ತಿದ್ದಾನೆ ಏನ್ ನಿನ್ನ ಹೆಸರು ?
ಅಪ್ಪನ ಸ್ಥಿತಿಯನ್ನು ನೋಡಿ ಭಯಭೀತನಾಗಿದ್ದ ಸೂರಜ್......ಸಾರಿ ನನ್ನ ಕ್ಷಮಿಸಿಬಿಡಿ ನನ್ನೆಸರು ಸೂರಜ್.
ನೀತು.......ಪ್ರತಾಪ್ ಇವನು ಪೋಲಿಸರ ಬಗ್ಗೆ ತುಂಬ ಕೆಟ್ಟದಾಗಿ ಮಾತಾಡಿದ ಅಂತ ಗೊತ್ತಾಯ್ತು ನಿಮ್ಮವರಿಗೆ ಕೋಪ ಬರ್ತಿಲ್ಲವಾ ?
ಪ್ರತಾಪ್.......ಅತ್ತಿಗೆ ನಾನು ಆದೇಶಿಸುವುದನ್ನು ಕಾಯ್ತಿದ್ದಾರೆ ಹೂಂ ಅಂದರೆ ಇವನನ್ನು ಸಾಕು ಸಿಗಿದು ತೋರಣ ಕಟ್ಟಿಬಿಡ್ತಾರೆ.
ನೀತು.......ಮತ್ತೇನು ಯೋಚಿಸ್ತಿದ್ದೀಯಾ ?
ಪ್ರತಾಪ್ ಸನ್ನೆ ಮಾಡಿ ಪಕ್ಕಕ್ಕೆ ಸರಿಯುತ್ತಲೇ ಹತ್ತಾರು ಪೋಲಿಸರು ತಮ್ಮ ಬೂಡ್ಸ್ ಕಾಲಿನಿಂದ ಸೂರಜ್ ಮೈಮೇಲೆ ತಾಂಡವ ನೃತ್ಯವೇ ಆಡಿಬಿಟ್ಟಿದ್ದರು. ದೇಹದ ಯಾವ ಭಾಗದಲ್ಲಿ ನೋಯುತ್ತಿದೆ ಯಾವ ಭಾಗ ನೋಯುತ್ತಿಲ್ಲವೆಂದು ತಿಳಿಯದೆ ಕರೆಂಟ್ ಹೊಡೆದ ಕಾಗೆಯ ರೀತಿ ನರಳುತ್ತ ಬಿದ್ದಿದ್ದ ಸೂರಜ್ ಸ್ಥಿತಿ ನೋಡಿ ಆತನ ಗೆಳೆಯರು ನಡುಗಿ ಹೋದರು.
ನೀತು........ಇವರ ಕಥೆ ಮುಗಿಯಿತು ಈ ಮಂತ್ರಿ ಇವನ ರೌಡಿಗಳ ಪಟಾಲಂ ಮತ್ತಿವನ ಮಗನನ್ನು ಎಳೆದೊಯ್ಯಿ ಪ್ರತಾಪ್. ಪ್ರಿನ್ಸಿಪಲ್ ಸರ್ ಈ ಮಂತ್ರಿ ಮಗನ ಸ್ನೇಹಿತರ ತಂದೆ ತಾಯಿಯರು ಬಂದಿಲ್ವಾ ? ಪ್ರತಾಪ್ ಆ ನಿಮ್ಮ ಎಸೈ ಅದೇ ಅವರ ಮಗ ನಿಧಿ ಜೊತೆ ಫ್ರೆಂಡ್ ಆಗಲು ಕೇಳ್ಕೊಂಡು ಬಂದ್ದಿದ್ನಲ್ಲ ಅವರನ್ನು ಕಳಿಸು.
ಪ್ರಿನ್ಸಿಪಾಲ್.....ಎಲ್ಲರೂ ಇಲ್ಲೇ ಬಂದು ನಿಂತಿದ್ದಾರೆ.
ಪ್ರತಾಪ್ ಕರೆದಾಗ ಎಸೈ ಮುಂದೆ ಬಂದು ನೀತುವಿಗೆ ಕೈಮುಗಿಯುತ್ತ ನಿಂತಾಗ ನೀತು.......ಪ್ರಿನ್ಸಿಪಾಲ್ ಸರ್ ಅವರಲ್ಲೇ ನಿಂತಿರಲಿ ಬಿಡಿ. ಏನ್ ಎಸೈ ಸಾಹೇಬ್ರೇ ಈ ಹುಡುಗರ ಗುಂಪಿನಲ್ಲಿ ನಿಮ್ಮ ಮಗನೂ ಇದ್ದಾನಂತಲ್ಲ ನೀವಾವತ್ತು ಸರಿಯಾಗಿ ಬುದ್ದಿ ಕಲಿಸಲಿಲ್ಲವಾ ?
ಎಸೈ ಕೋಪದಿಂದ ಮಗನನ್ನು ಗುರಾಯಿಸಿ.....ಕ್ಷಮಿಸಿ ಮೇಡಂ.
ನೀತು.......ಕಾಲೇಜಿನಲ್ಲಿ ಹುಡುಗಿಯರನ್ನು ರೇಗಿಸುವುದು....ರೌಡಿ ಗುಂಪನ್ನು ಕರೆಸಿ ಗಲಾಟೆ ಮಾಡಿಸುವುದು....ಪ್ರಿನ್ಸಿಪಾಲ್ ಅವರಿಗೆ ಗೌರವ ಕೊಡದೆ ನಡೆದುಕೊಳ್ಳುವುದೆಲ್ಲವೂ ತಪ್ಪಲ್ಲವಾ ?
ಎಸೈ.......ಹೌದು ಮೇಡಂ ಅದೆಲ್ಲ ಮಹಾಪರಾಧ ನನಗೂ ಒಬ್ಬಳು ಮಗಳಿದ್ದಾಳೆ ಹೆಣ್ಣು ಮಕ್ಕಳ ಕಷ್ಟ ನನಗೂ ಗೊತ್ತಿದೆ.
ನೀತು.....ಹಾಗೆ ಮಾಡುವವರನ್ನು ಶಿಕ್ಷಿಸಬೇಕಾ ಬೇಡವಾ ?
ಮಗನಿಂದಾಗಿ ತಾನಿಷ್ಟು ವರ್ಷಗಳಿಂದ ಸಂಪಾಸಿದ್ದ ಗೌರವವನ್ನು ಕಳೆದುಕೊಂಡಿರುವ ಕೋಪದಲ್ಲಿದ್ದ ಎಸೈ ಮಗನನ್ನು ಮುಂದಕ್ಕೆಳೆದು ತಂದು ನಿಲ್ಲಿಸಿ ಅವನ ಶರ್ಟ್ ಹರಿದಾಕಿದನು. ಎಸೈ ತನ್ನ ಪೋಲಿಸ್ ಬೆಲ್ಟ್ ತೆಗೆಯುತ್ತ ಆಗಸದಿಂದ ಮಳೆ ಭೋರ್ಘರೆಯುವಂತೆ ಮಗನ ಮೈಮೇಲೆ ಬಿಲ್ಟಿನಿಂದ ಒಂದೇ ಸಮ ಭಾರಿಸತೊಡಗಿದನು. ಎಸೈ ಮಗ ಕಿರುಚಿ ಕೂಗಾಡುತ್ತ ನೆಲದಲ್ಲಿ ಬಿದ್ದು ನರಳಾಡುತ್ತಿರುವುದನ್ನು ನೋಡುತ್ತಿದ್ದ ಆತನ ಗೆಳೆಯರು ನಿಂತಲ್ಲೇ ನಡುಗುತ್ತಿದ್ದರು.
ನೀತು.......ಸಾಕು ನಿಲ್ಲಿಸಿ ಎಸೈ ಸಾಹೇಬ್ರೇ ಇವನು ಕಲಿಯಬೇಕಿದ್ದ ಬುದ್ದಿಯನ್ನು ಸ್ವಲ್ಪ ಚೆನ್ನಾಗೇ ಕಲಿಸಿದ್ದೀರ ಮನೆಗೆ ಕರೆದೊಯ್ಯಿರಿ.
ಎಸೈ........ಮೇಡಂ ಜೀವನದಲ್ಲಿ ಯಾರಿಗೂ ಅನ್ಯಾಯವಾಗದಂತೆ ನನ್ನ ಕರ್ತವ್ಯ ನಿರ್ವಹಿಸಿಕೊಂಡು ಸಂಪಾಧಿಸಿದ್ದ ಮರ್ಯಾದೆಯನ್ನು ಈ ನನ್ಮಗನಿಂದಾಗಿ ಕಳೆದುಕೊಳ್ಳುವಂತಾಯಿತು. ಇಲ್ಲೇ ಬಿದ್ದಿರಲಿ ಬಿಡಿ ಏದ್ದು ಮನೆಗೆ ಬಂದರೆ ಹುಟ್ಟಿಸಿರುವ ತಪ್ಪಿಗಾಗಿ ಎರಡು ಹೊತ್ತು ಊಟ ಹಾಕಿಬಿಡ್ತೀನಿ.......ಎಂದೇಳಿ ಮಗನನ್ನು ತಿರುಗಿಯೂ ಸಹ ನೋಡದೆ ಅಲ್ಲಿಂದ ಹೊರಟು ಹೋದನು.
ನೀತು ಅಲ್ಲುಳಿದಿದ್ದ ಸೂರಜ್ ಸ್ನೇಹಿತರ ಮುಂದೆ ನಿಲ್ಲುತ್ತ......ಪ್ರತೀ ತಂದೆ ತಾಯಾಯೂ ತಮ್ಮ ಮಕ್ಕಳು ಚೆನ್ನಾಗಿ ವಿಧ್ಯಾಭ್ಯಾಸ ಮಾಡಿ ಒಳ್ಳೆಯ ಉಧ್ಯೋಗಕ್ಕೆ ಸೇರಿ ಜೀವನದಲ್ಲಿ ಅವರಿಗೊಂದು ಒಳ್ಳೆಯ ನೆಲೆ ಸಿಗಲೆಂದು ಆಶಿಸುತ್ತಾರೆ. ಆದರೆ ನೀವುಗಳು ಮಾಡುತ್ತಿರೋದು ಮಾತ್ರ ಅವರಾಲೋಚನೆಗೆ ತದ್ವಿರುದ್ದವಾಗಿ ಇದೇನಾ ನಿಮ್ಮ ತಾಯಿ ತಂದೆ ಹೇಳಿಕೊಟ್ಟಿರುವುದು ? ನಿಮ್ಮ ಸ್ನೇಹಿತನಿಗೆ ಅವನ ತಂದೆ ಶಿಕ್ಷೆ ಕೊಟ್ಟಿದ್ದನ್ನು ನೋಡಿದ್ದೀರ ಈಗ ನಿಮ್ಮ ತಂದೆ ತಾಯಿ ನಿಮಗ್ಯಾವ ಶಿಕ್ಷೆ ಕೊಡ್ತಾರೋ ನೋಡೋಣ.
ಉಳಿದ ಹತ್ತು ಜನ ಹುಡುಗರಲ್ಲಿ ಒಬ್ಬನ ತಾಯಿ ಮುಂದೆ ಬರುತ್ತಾ ತನ್ನ ಮಗನ ಕೆನ್ನೆಗೆ ಮೆಲ್ಲನೇ ನಾಲ್ಕೇಟು ಭಾರಿಸಿ.......ನಾನೂ ನನ್ನ ಮಗನಿಗೆ ಶಿಕ್ಷಿಸಿದ್ದೀನಿ ಇನ್ಮುಂದೆ ಅವನು ಈ ರೀತಿ ಕೆಟ್ಟದಾಗಿ ಖಂಡಿತ ನಡೆದುಕೊಳ್ಳುವುದಿಲ್ಲ.
ನೀತು......ನೀವು ಶಿಕ್ಷೆ ಕೊಟ್ರಾ ? ನಾನೆಲ್ಲೋ ನಿಮ್ಮ ಮಗನ ಕನ್ನೆ ಸವರಿ ಪ್ರೀತಿ ತೋರಿಸ್ತಿದ್ದೀರ ಅಂದ್ಕೊಂಡೆ ಮಿಕ್ಕವರೇನು ಹೇಳ್ತೀರಾ.
ಎಲ್ಲರೂ ತಮ್ಮ ಮಕ್ಕಳನ್ನು ಕ್ಷಮಿಸುವಂತೆ ಕೇಳಿಕೊಳ್ಳುತ್ತ ಇನ್ಮುಂದೆ ಅವರಿಗೆ ಸರಿಯಾಗಿ ಬುದ್ದಿ ಕಲಿಸುವುದಾಗಿ ಜೊತೆಗೆ ಕಾಲೇಜಿನಲ್ಲಿ ಹುಡುಗಿಯರನ್ನು ಕೆಣಕುವಂತ ಕೀಳು ಕೆಲಸಗಳನ್ನು ಮಾಡದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡುತ್ತಿದ್ದರು.
ನೀತು......ಒಳ್ಳೆಯದೇ ಇವರು ತಪ್ಪು ದಾರಿಯಲ್ಲಿ ಹೋಗದಿದ್ದರೆ ಇವರ ಭವಿಷ್ಯಕ್ಕೇ ಒಳ್ಳೆಯದಲ್ಲವಾ. ಆದರೆ ಇಲ್ಲಿವರೆಗೂ ಇವರು ಮಾಡಿರುವ ತಪ್ಪಿಗೇನೂ ಶಿಕ್ಷೆ ನೀಡುವುದು ಬೇಕಾಗಿಲ್ಲವಾ
ತಂದೆ ತಾಯಿಯರ ಗುಂಪಿನಲ್ಲೊಬ್ಬ.......ನೋಡಿ ಈ ವಯಸ್ಸಿನಲ್ಲಿ ಇದೆಲ್ಲವೂ ಸಹಜ ನಾವು ಹಿರಿಯರಾದವರು ಇದರ ಬಗ್ಗೆ ಯೋಚಿಸಿ ಟೈಂ ವೇಸ್ಟ್ ಮಾಡಿಕೊಳ್ಳಬಾರದು ಶಿಕ್ಷಿಸುವುದರಿಂದ ಹಿಂದೆ ನಡೆದ ಘಟನೆಗಳು ಸರಿ ಹೋಗುವುದಿಲ್ಲವಲ್ಲ.
ನೀತು......ಹೌದು ನೀವು ಹೇಳ್ತಿರೋದು ಸತ್ಯವೇ ಹಿಂದೆ ಮಾಡಿರುವ ತಪ್ಪಿಗೆ ಈಗ ಶಿಕ್ಷಿಸಿದರೆಲ್ಲವೂ ಸರಿ ಹೋಗುವುದಿಲ್ಲ. ಆದರೆ ಇವರು ಮುಂದೆ ತಪ್ಪು ಮಾಡುವುದಕ್ಕೂ ಮುನ್ನ ನೂರ ಸಲ ಯೋಚಿಸುವ ರೀತಿ ಮಾಡುತ್ತೆ . ನಿಮ್ಮ ಮಕ್ಕಳು ನನ್ನ ಮಗಳನ್ನು ಕೆಣಕಿರೋದು ಈ ನೀತು ಶರ್ಮ ಮಗಳನ್ನು ಹಿಂದಿನ್ನೆಷ್ಟು ಜನ ಹುಡುಗಿಯರ ಕಣ್ಣಲ್ಲಿ ಕಣ್ಣೀರು ತರಿಸಿದ್ದಾರೋ ಯಾರಿಗೆ ಗೊತ್ತು. ಇವರು ಮಾಡಿದ ತಪ್ಪಿಗೆ ಶಿಕ್ಷಿಸದೆ ಬಿಟ್ಟರೆ ನಾವೇ ಇವರನ್ನು ಪ್ರೋತ್ಸಾಹಿಸಿದಂತಾಗುತ್ತೆ. ವೀರ್ ಸಿಂಗ್.....ಎಂದು ಘರ್ಜಿಸಿದಳು.
ನೀತುವಿನ ಆದೇಶ ದೊರೆತಿದ್ದೇ ತಡ ರಕ್ಷಕರು ಆ ಹತ್ತು ಹುಡುಗರನ್ನು ಎತ್ತೆತ್ತಿ ನೆಲದ ಮೇಲೆ ಬಟ್ಟೆ ಒಗೆಯುವಂತೆ ಬಡಿದಾಕತೊಡಗಿದರು. ಕಾಲೇಜ್ ಕ್ಯಾಂಪಸ್ಸಿನಲ್ಲಿ ಆ ಹುಡುಗರ ನೋವಿನ ಚೀತ್ಕಾರಗಳು ಮಾತ್ರ ಕೇಳಿಸುತ್ತಿದ್ದು ಅವರ ತಂದೆ ತಾಯಿಯರು ನೀತು ಮುಂದೆ ಕೈ ಮುಗಿದು ತಮ್ಮ ಮಕ್ಕಳನ್ನು ಬಿಟ್ಟುಬಿಡುವಂತೆ ಬೇಡಿಕೊಳ್ಳುತ್ತಿದ್ದರು. ಒಬ್ಬ ಹುದುಗನೂ ತನ್ನ ಕಾಲಿನ ಮೇಲೆ ನೆಟ್ಟಗೆ ನಿಲ್ಲಲಾಗದ ರೀತಿ ಚೆನ್ನಾಗಿ ರಿಪೇರಿ ಮಾಡಿದ್ದ ರಕ್ಷಕರು ಹಿಂದೆ ಸರಿದಾಗ.....
ನೀತು....ಇನ್ನು ಕೆಲ ದಿನಗಳು ನಿಮ್ಮ ಮಕ್ಕಳಿಗೆ ಬೆಡ್ ರೆಸ್ಟ್ ಸಿಗುತ್ತೆ ಆಗ ಇವರು ಮಾಡಿರುವ ತಪ್ಪುಗಳ ಬಗ್ಗೆ ಯೋಚಿಸಿ ಅದನ್ನು ಪುನಃ ಮಡಬಾರದೆಂಬ ಬುದ್ದಿಯೂ ಬಂದಿರುತ್ತೆ ಕರೆದುಕೊಂಡು ಹೋಗಿ. ಓ ಈ ಗುಂಪಿನಲ್ಲಿ ನಾಲ್ವರು ಹುಡುಗಿಯರೂ ಇದ್ದೀರಾ ? ನಾನು ಹೆಣ್ಣು ಮಕ್ಕಳ ಮೇಲೆ ಕೈ ಮಾಡುವುದು ಸರಿಯಲ್ಲ.
ಕಾಲೇಜಿನ ಹುಡುಗಿಯರು ಮುಂದೆ ಬಂದು.....ಆಂಟಿ ಇವರುಗಳು ಆ ಪೋಲಿ ಹುಡುಗರಿಗಿಂತೇನೂ ಕಡಿಮೆಯಿಲ್ಲ ನಮ್ಮನ್ನು ತುಂಬಾ ಗೋಳು ಹುಯ್ದುಕೊಂಡಿದ್ದಾರೆ. ನೀವು ಹೂಂ ಅನ್ನಿ ಸಾಕು ಇವರಿಗೆ ಸರಿಯಾದ ಶಾಸ್ತಿ ನಾವು ಮಾಡ್ತೀವಿ.
ನೀತು ಪಕ್ಕಕ್ಕೆ ಸರಿದು.......ನಿಮ್ಮಿಷ್ಟ ಕಣ್ರಮ್ಮ.
ಕಾಲೇಜ್ ವಿಧ್ಯಾರ್ಥಿನಿಯರು ಆ ನಾಲ್ವರು ಹುಡುಗಿಯರ ಮೇಲೆ ಮುಗಿಬಿದ್ದು ಸರಿಯಾದ ಪಾಠವನ್ನೇ ಕಲಿಸಿಬಿಟ್ಟರು. ಆಗಲ್ಲಿಗೆ ಯೂನಿವರ್ಸಿಟಿಯ ವೈಸ್ ಛಾನ್ಸಿಲರ್ ಕೂಡ ಓಡೋಡಿ ಬಂದು ನೀತುಳನ್ನು ಪರಿಚಯ ಮಾಡಿಕೊಂಡನು.
ನೀತು........ನಿಮಗೀಗಾಗಲೇ ಫೋನ್ ಬಂದಿರಬೇಕಲ್ಲವಾ ಸರ್ ಇನ್ಮುಂದೆ ಕಾಲೇಜಿನಲ್ಲಿ ಹುಡುಗಿಯರು ನಿರ್ಭೀತಿಯಿಂದ ಓದಲು ಬರುವಂತೆ ನೋಡಿಕೊಳ್ಳಿ. ಯಾರೋ ಮಂತ್ರಿ...ಶಾಸಕನ ಮಗ ಅಂತೇಳಿ ಅವರನ್ನು ಸುಮ್ಮನೆ ಬಿಟ್ಟುಬಿಡ್ಬೇಡಿ.
ವೈಸ್ ಛಾನ್ಸಿಲರ್.....ಇಲ್ಲ ಮೇಡಂ ಸೆಂಟ್ರಲ್ ಮಿನಿಸ್ಟ್ರಿಯಿಂದಲೇ ಫೋನ್ ಬಂದಿತ್ತು ಇನ್ಮುಂದೆ ಇಂತಹ ಘಟನೆಗಳು ನಡೆಯದ ರೀತಿ ನಾನೇ ಕ್ರಮ ಕೈಗೊಳ್ಳುವೆ.
ಕಾಲೇಜಿನ ವಿಧ್ಯಾರ್ಥಿನಿಯರು ನೀತು ಬಳಿ ಬಂದು ಅವಳಿಗೆ ತಮ್ಮ ಕೃತಜ್ಞತೆ ತಿಳಿಸಿ ನಿಧಿಯನ್ನು ಪರಿಚಯ ಮಾಡಿಕೊಂಡು ಮಾತಾಡುತ್ತ ನಿಂತರು. ಇಷ್ಟೊತ್ಠೂ ಸುಭಾಷ್ ಅಣ್ಣನ ಹೆಗಲಿನಲ್ಲಿ ಸೈಲೆಂಟಾಗಿ ಎಲ್ಲವನ್ನು ನೋಡುತ್ತಿದ್ದ ನಿಶಾ ಕಾಲೇಜ್ ಹುಡುಗಿಯರು ಅಮ್ಮನ ಸುತ್ತಲೂ ನಿಂತಿದ್ದನ್ನು ನೋಡಿ ಅಣ್ಣನಿಂದ ಕೆಳಗಿಳಿದು ಅಮ್ಮನ ಕಡೆ ಓಡಿ ಅಮ್ಮನ ಹೆಗಲಿಗೇರಿಕೊಂಡಳು. ಎಲ್ಲರೂ ತಮ್ಮ ಮನೆಗಳತ್ತ ಹೊರಟರೆ ಸುಭಾಷ್ ಮತ್ತು ವೀರ್ ಸಿಂಗ್ ಕೆಲವು ರಕ್ಷಕರ ಜೊತೆ ಮಂತ್ರಿ ಮತ್ತವನ ಮಗ ಹಾಗು ರೌಡಿಗಳನ್ನು ಮಣ್ಣು ಮಾಡಲಿಕ್ಕೆ ಬೇರೆ ಕಡೆ ತೆರಳಿದರು.
* *
* *
ಕುಸುಮಾಳ ಮನೆ.......
ನೀತು......ಇನ್ಮುಂದೆ ಕಾಲೇಜಿನಲ್ಯಾವುದೇ ತೊಂದರೆಯೂ ಆಗಲ್ಲ ನೀವೇನೂ ಟೆನ್ಷನ್ ತೆಗೆದುಕೊಳ್ಬೇಡಿ. ನಿಮ್ಮ ಮಕ್ಕಳು ನನ್ನ ಮಗಳ ಸ್ನೇಹಿತರೆಂದ ಮೇಲೆ ನನಗೂ ಮಕ್ಕಳ ಸಮಾನರೇ ಅಲ್ಲವಾ.
ದೀಪ ತಾಯಿ.....ಆದರೂ ನಿಧಿ ನಿಮ್ಮ ಮಗಳೆಂದರೆ ನಮಗಿನ್ನೂ ನಂಬುವುದಕ್ಕೆ ಆಗ್ತಿಲ್ಲ. ನಿಮ್ಮನ್ನು ನೋಡಿದ್ರೆ ನಿಧಿಗಿಂತ ಆರೇಳು ವರ್ಷ ದೊಡ್ಡವರಂತೆ ಕಾಣಿಸ್ತೀರ. ಈ ಪುಟಾಣಿ ನಿಮ್ಮ ಮಗಳೆಂದರೆ ಒಪ್ಪಿಕೊಳ್ಳಬಹುದು ನೋಡಿ.
ಅವರ ಮಾತಿಗೆ ಉಳಿದ ಹೆಂಗಸರೂ ದನಿಗೂಡಿಸಿ ಅದೇ ವಿಷಯ ಚರ್ಚಿಸುತ್ತ ಕಾಫಿ ಕುಡಿಯುತ್ತಿದ್ದು ನಂತರ ಮಕ್ಕಳಿಬ್ಬರೊಟ್ಟಿಗೆ ಮನೆ ಕಡೆ ಹೊರಡುತ್ತ......
ನೀತು.......ಸಂಜೆ ನೀವೆಲ್ಲರೂ ನಮ್ಮ ಮನೆಗೆ ಬರಬೇಕು ಹೇಗೂ ನಿಮ್ಮೆಜಮಾನರೆಲ್ಲ ಇಂದು ತಮ್ಮ ಕೆಲಸಕ್ಕೆ ರಜೆ ಹಾಕಿದ್ದಾರೆ ಸಂಜೆ ಹೊತ್ತಿಗೆ ನಮ್ಮಮಯವರೂ ಬಂದಿರ್ತಾರೆ ದಯವಿಟ್ಟು ಬನ್ನಿರಿ.
ರಾಣಿ ತಾಯಿ.......ಖಂಡಿತ ಬರ್ತೀವಿ ಹರೀಶ್ ಸರ್ ನಮಗೆ ಮಕ್ಕಳ ಶಾಲಾ ದಿನಗಳಿಂದಲೂ ಗೊತ್ತಿದ್ದಾರೆ ಇಂದು ನಿಮ್ಮ ಪರಿಚಯವೂ ಆಗಿದ್ದು ತುಂಬ ಸಂತೋಷ.
ನೀತು ಅವರಿಂದ ಬೀಳ್ಗೊಂಡು ಮಕ್ಕಳ ಜೊತೆ ಮನೆಗೆ ತೆರಳಿದರೆ.....
ಧೀಕ್ಷಾ ತಾಯಿ......ಏಯ್ ನೀವೆಲ್ಲಾ ಸ್ನೇಹಿತೆಯರು ಸರಿಯಾಗಿದ್ದೀರ ನಿಧಿ ರಾಯಲ್ ಫ್ಯಾಮಿಲಿಗೆ ಸಂಬಂಧಿಸಿದವಳು ಅನ್ನೊ ವಿಷಯ ನಮ್ಮಿಂದಲೇ ಮುಚ್ಚಿಡ್ತೀರಾ ?
ಕುಸುಮ ತಾಯಿ......ಅವರು ಮನೆಗೆ ಬಂದಾಗ ನಾನೆಲ್ಲೋ ನಿಧಿಯ ಅಕ್ಕನಿರ್ಬೇಕು ಅಂದ್ಕೊಂಡೆ ನೋಡಿದ್ರೆ ನಿಧಿ ತಾಯಿ ಆದರೆ ಅಷ್ಟು ದೊಡ್ಡ ಮಗಳಿರುವಂತೆ ಕಾಣಿಸೋದೇ ಇಲ್ಲ ಅಲ್ವಾ.
ಪ್ರಿಯಾ ತಾಯಿ......ಹೌದು ಚೂಡಿದಾರ್ ಕೂಡ ಅವರಿಗೋಸ್ಕರವೇ ಅನ್ನುವ ರೀತಿ ಹೇಳಿ ಮಾಡಿಸಿದಂತಿತ್ತು.
ಪ್ರಿಯ.......ಅಮ್ಮ ನಿಧಿಯ ಮನೆ ಎಷ್ಟು ದೊಡ್ಡದು ಗೊತ್ತೇನಮ್ಮ ನಾಲ್ಕು ಫ್ಲೋರ್ ಕಟ್ಟಿಸಿದ್ದಾರೆ. ಪ್ರತಿಯೊಬ್ಬರಿಗೂ ಸಪರೇಟ್ ರೂಂ ನಿಧಿ ರೂಂ ಈ ಹಾಲಿಗಿಂತಲೂ ಎರಡರಷ್ಟು ದೊಡ್ಡದಾಗಿದೆ.
ರಾಣಿ......ಅಷ್ಟೆ ಅಲ್ಲ ಅಮ್ಮ ಈಗವರ ಮನೆಯ ಪಕ್ಕದ ಸೈಟನ್ನೂ ಖರೀಧಿಸಿ ಅಲ್ಲಿಯೂ ಮನೆ ಕಟ್ಟಿಸುತ್ತಿದ್ದಾರೆ.
ಧೀಕ್ಷಾ.......ನಮ್ಮೂರಿನಲ್ಲೊಂದು ವಿದ್ಯಾಲಯ ಕಟ್ಟಿಸುತ್ತಿದ್ದಾರೆ ಬಡ ಮಕ್ಕಳಲ್ಲಿ ಟ್ಯಾಲೆಂಟ್ ಇರುವವರೆಲ್ಲರೂ ಅಲ್ಲಿ ಒಂದು ರುಪಾಯಿ ಖರ್ಚಿಲ್ಲದೆ ಓದಲು ಅನುಕೂಲವಾಗಲಿ ಅಂತ. ಅಪ್ಪ ನೀವು ಕೇಳ್ತಾ ಇದ್ರಲ್ಲ ಇದ್ಯಾರ ಹೆಲಿಕಾಪ್ಟರ್ ನಮ್ಮೂರಿನಲ್ಲಿಷ್ಟು ಹಾರಾಡ್ತಿದೆ ಅಂತ ಅದು ಕೂಡ ಇವರದ್ದೇ ಒಂದಲ್ಲ 10—15 ಇದೆಯಂತೆ.
ಕುಸುಮ.......ನಿಧಿ ಚಿಕ್ಕಪ್ಪ ನಮ್ಮ ದೇಶದ ಉಪಪ್ರಧಾನಿ ಆವತ್ತು ವಿದ್ಯಾಲಯದ ಶಂಕು ಸ್ಥಾಪನೆಗೆ ಬಂದಿದ್ರು. ನಾವೆಲ್ಲರೂ ಅವರ ಜೊತೆ ಫೋಟೋ ಕೂಡ ತೆಗೆಸಿಕೊಂಡಿದೋದೀವಿ ನಮ್ಮನ್ನೆಷ್ಟು ಆತ್ಮೀಯವಾಗಿ ಮಾತನಾಡಿಸಿದ್ರು ಗೊತ್ತ. ಇಲ್ನೋಡಿ ಫೋಟೋ.
ದೀಪ......ಅಮ್ಮ ನಾವಿದನ್ನೆಲ್ಲಾ ಯಾಕೆ ಹೇಳಲಿಲ್ಲ ಅಂತ ನಿಮಗೆ ಬೇಸರವಿರಬಹುದು ಆದರೆ ನಿಧಿ ಹೇಳ್ಬೇಡಿ ಆಗ ನಾನೂ ನಿಮ್ಮಂತೆ ಸಾಮಾನ್ಯವಾಗಿ ಇರುವುದಕ್ಕಾಗಲ್ಲ . ನಿಮ್ಮಪ್ಪ ಅಮ್ಮ ನನ್ನ ಹರೀಶ್ ಸರ್ ಮಗಳೆಂಬುದಕ್ಕೆ ಎಷ್ಟೊಂದು ಪ್ರೀತಿಯಿಂದ ನೋಡ್ತಾರೆ ನನಗೆ ಅಷ್ಟೆ ಸಾಕು ಮನೇಲೇನೂ ಹೇಳ್ಬೇಡಿ ಅಂದಿದ್ದಕ್ಕೆ ನಾವು ಹೇಳಲಿಲ್ಲ.
ಇದೇ ರೀತಿ ಇವರ ಮಧ್ಯೆ ನಿಧಿ ಮತ್ತವಳ ಕುಟುಂಬದ ಬಗ್ಗೆ ಮಾತು ನಡೆಯುತ್ತಿತ್ತು.
* *
* *
ಸಂಜೆ ಆರು ಘಂಟೆಗೆ ನಿಧಿ ಗೆಳತಿಯರು ತಮ್ಮ ತಂದೆ ತಾಯಿಯರ ಜೊತೆ ಮನೆಗೆ ಬಂದಾಗ ಹರೀಶ ಸೋಫಾದಲ್ಲಿ ಕುಳಿತಿದ್ದು ಆತನ ಮಡಿಲಲ್ಲಿ ನಿಧಿ ತಲೆಯನ್ನಿಟ್ಟು ಮಲಗಿದ್ದಳು. ಅಪ್ಪನೆದುರಿಗೆ ನಿಂತಿದ್ದ ನಿಶಾ ಅವನಿಗೇನೇನೋ ಹೇಳುತ್ತ ತನ್ನ ಪ್ರಶ್ನೆಗಳಿಂದ ತಲೆ ತಿನ್ನುತ್ತಾ ಖುಷಿಯಾಗಿದ್ದಳು. ಎಲ್ಲರನ್ನೂ ಆತ್ಮೀಯವಾಗಿ ಬರಮಾಡಿಕೊಂಡು ಉಭಯ ಕುಶಲೋಪರಿ ವಿಚಾರಿಸಿ ಮನೆಯವರನ್ನೆಲ್ಲಾ ಅವರಿಗೆ ಪರಿಚಯ ಮಾಡಿಕೊಡಲಾಯಿತು. ಗಂಡಸರು ತಮ್ಮದೇ ಚರ್ಚೆಗಳ ವಿಷಯದಲ್ಲಿ ಮುಳುಗಿದರೆ ಹೆಂಗಸರು ಶೀಲಾ—ಸುಕನ್ಯಾ ಮಕ್ಕಳನ್ನ ನೋಡಿಕೊಂಡು ಅಲ್ಲೇ ಭಿಝಿಯಾದರು.
ಹರೀಶ.....ನಿಮ್ಮೊಟ್ಟಿಗೆ ಒಂದು ವಿಷಯ ಹೇಳುವುದಕ್ಕಾಗಿ ಮನೆಗೆ ಬರುವಂತೆ ಕೇಳಿಕೊಂಡಿದ್ದು. ಸಧ್ಯದಲ್ಲೇ ದಸರಾ ಹಬ್ಬ ಬರ್ತಿದೆ ಆಗ ನನ್ನಿ ಮುದ್ದಿನ ಕಂದನಿಗೆ ವಿಜಯದಶಮಿ ದಿನದಂದು ಎರಡು ವರ್ಷ ತುಂಬಲಾದೆ ಜೊತೆಗೆ ನಿಧಿ ಕೂಡ ವಿಜಯದಶಮಿ ದಿನವೇ ಹುಟ್ಟಿದ್ದು ಆ ದಿನ ಇಬ್ಬರ ಹುಟ್ಟುಹಬ್ಬವನ್ನು ನಾವು ಗ್ರಾಂಡಾಗಿ ಆಚರಿಸೋಣ ಅಂತ ತೀರ್ಮಾನಿಸಿದ್ದೀವಿ ನೀವೆಲ್ಲರೂ ಬರಬೇಕು.
ದೀಪ ತಂದೆ......ಖಂಡಿತವಾಗಿಯೂ ಬರ್ತೀವಿ ಸರ್.
ಹರೀಶ.......ಪದ್ದತಿಯ ಪ್ರಕಾರ ಆಹ್ವಾನ ನೀಡುವುದಕ್ಕೆ ನಾವು ನಿಮ್ಮ ಮನೆಗೆ ಬರಬೇಕು ಆದರೆ ಅದಕ್ಕೂ ಮುಂಚೆ ನಿಮಗೊಂದು ವಿಷಯ ಒಟ್ಟಿಗೇ ಹೇಳಿದರೆ ಉತ್ತಮ ಅಂತ ಕರೆಸಿಕೊಂಡ್ವಿ. ನಾವು ಹುಟ್ಟುಹಬ್ಬದ ಆಚರಣೆ ನಮ್ಮ ಮನೇಲಿ ಮಾಡ್ತಿಲ್ಲ ರಾಜಸ್ಥಾನದಲ್ಲಿ ಮಾಡುತ್ತಿದ್ದೇವೆ. ಅಲ್ಲಿಗೆ ಹೇಗೆ ಬರುವುದೆಂಬ ಚಿಂತೆಯನ್ನೇ ನೀವು ಮಾಡಬೇಕಿಲ್ಲ ಅದಕ್ಕೆಲ್ಲಾ ವ್ಯವಸ್ಥೆಗಳನ್ನು ನಾವು ಮಾಡ್ತೀವಿ ಆದರೆ ನೀವು ಸಮಯ ಹೊಂದಿಸಿಕೊಂಡು ನಮ್ಮ ಜೊತೆಯಲ್ಲಿ ಬರಬೇಕು.
ಕೆಲಹೊತ್ತು ಇದರ ಬಗ್ಗೆಯೇ ಚರ್ಚೆ ನಡೆಯುತ್ತಿದ್ದು ಕೊನೆಗೆ ನಿಧಿಯ ಸ್ನೇಹಿತೆಯರು ತಮ್ಮ ಕುಟುಂಬದ ಜೊತೆ ರಾಜಸ್ಥಾನಕ್ಕೆ ಹೋಗುವ ತೀರ್ಮಾನವೂ ಆಯಿತು.
ಭಾನುವಾರ...
ಹಿಂದಿನ ರಾತ್ರಿಯೇ ರಾಣಾ ಆಗಮಿಸಿದ್ದು ಮುಂಜಾನೆ ನಿಧಿ ಆತನ ಜೊತೆ ಹೃಷಿಕೇಶಕ್ಕೆ ತೆರಳುವವಳಿದ್ದಳು. ನೀತು ಮಗಳಿಗೆ ಕೆಲವು ಸೂಚನೆಗಳನ್ನು ನೀಡುತ್ತ ಫೋನ್ ಮತ್ತು ಹಣ ಮರೆಯದೆ ಈ ಸಲ ತೆಗೆದುಕೊಂಡು ಹೋಗುವುದಕ್ಕೂ ತಿಳಿಸಿದಳು. ಬೆಳಿಗ್ಗೆ ಎಲ್ಲರಿಂದ ಬೀಳ್ಗೊಂಡು ರಾಣಾ ಜೊತೆಯಲ್ಲಿ ನಿಧಿ ಹೃಷಿಕೇಶದತ್ತ ಪ್ರಯಾಣ ಬೆಳೆಸಿದಳು. ಮಧ್ಯಾಹ್ನದ ಸಮಯ ಹೃಷಿಕೇಶದಲ್ಲಿರುವ ಒಂದು ಗುರುಕುಲ ತಲುಪಿದರೆ ಅಲ್ಲಿಗಾಗಲೇ ಆಗಮಿಸಿದ್ದ ಆಚಾರ್ಯರ ಆಶೀರ್ವಾದ ಪಡೆದರು.
ಆಚಾರ್ಯರು.....ನಿಧಿ ಇಲ್ಲಿನ ಭೂಮಿ ಪೂಜೆಗೆ ನಿನ್ನೊಬ್ಬಳನ್ನೇ ಬರುವುದಕ್ಕೆ ಹೇಳಿದ್ಯಾಕೆಂಬ ಪ್ರಶ್ನೆ ನಿನಗಿರಬೇಕಲ್ಲವಾ ?
ನಿಧಿ.......ಹೌದು ಗುರುಗಳೇ ಮುಂದಿನವಾರ ಎಲ್ಲರೂ ರಾಜಸ್ಥಾನಕ್ಕೆ ಬರ್ತಿದ್ವಿ ಆಗಲೇ ಇಲ್ಲಿನ ಪೂಜೆ ಮಾಡಬಹುದಿತ್ತಲ್ವಾ ಅಂದ್ಕೊಂಡೆ.
ಆಚಾರ್ಯರು......ರಾಣಾಪ್ರತಾಪ್ ಮತ್ತು ಸುಧಾಮಣಿ ಇವರಿಬ್ಬರೇ ನಿನಗೆ ಮೊದಲ ಬಾರಿ ತಂದೆ ತಾಯಿಯ ಪ್ರೀತಿ ನೀಡಿದವರು. ನೀನು ಸುಧಾಮಣಿಯ ಹಿರಿಮಗಳು ಅವಳಿಗೆ ತಾಯ್ತತನದ ಭಾಗ್ಯವನ್ನು ಕಲ್ಪಿಸಿಕೊಟ್ಟವಳು ನೀನು. ಇಲ್ಲಿನ ಭೂಮಿಯನ್ನು ಹತ್ತು ವರ್ಷಗಳ ಹಿಂದೆಯೇ ಖರೀಧಿ ಮಾಡಲಾಗಿತ್ತು ಜೊತೆಗೆ ನೀನು ಆಶ್ರಮದಿಂದ ಅರಮನೆಗೆ ಹಿಂದಿರುಗಿದಾಗ ನಿನ್ನಿಂದಲೇ ಇಲ್ಲಿ ಪೂಜೆ ಮಾಡಿಸಿ ಕೆಲಸ ಪ್ರಾರಂಭಿಸಬೇಕೆಂಬಾಸೆ ಸುಧಾಮಣಿಗಿತ್ತು. ಆದರೆ ಎಲ್ಲವೂ ಅಂದುಕೊಂಡಂತೆ ನಡೆಯಲಿಲ್ಲ ತಾಯಿಯ ಕನಸನ್ನು ನನಸಾಗಿಸಲು ನೀನೊಬ್ಬಳೇ ಬರಬೇಕೆಂದು ನಾವು ಹೇಳಿದ್ವಿ ನಿನ್ನ ತಾಯಿಗಿದೆಲ್ಲವೂ ಗೊತ್ತಿದೆ.
ನಿಧಿ.......ಆದರೆ ಅಮ್ಮ ನನಗಿದೆಲ್ಲ ಹೇಳಲಿಲ್ಲ ಗುರುಗಳೇ.
ಕೆಲ ಹೊತ್ತು ಗುರುಶಿಷ್ಯೆಯ ನಡುವೆ ವಾರ್ತಾಲಾಪ ನಡೆಯುತ್ತಿದ್ದು ಅಂದಿನ ದಿನ ಕಳೆದು ಸೋಮವಾರ ಮುಂಜಾನೆ 8:30ರ ಶುಭವಾದ ಮುಹೂರ್ತದಲ್ಲಿ ಹೃಷಿಕೇಶದ ಭೂಮಿಯಲ್ಲಿ ಸಂಸ್ಥಾನ ವತಿಯಿಂದ ಕಟ್ಟಲುದ್ದೇಶಿಸಿದ್ದ ವಿದ್ಯಾಲಯದ ಭೂಮಿಪೂಜಾ ಕಾರ್ಯಕ್ರಮವು ಸಂಪನ್ನಗೊಂಡಿದ್ದು ಅಲ್ಲಿನ ಶಂಕುಸ್ಥಾಪನೆಯನ್ನು ನಿಧಿ ನೆರವೇರಿಸಿ ತನ್ನ ತಾಯಿಯ ಕನಸನ್ನು ಈಡೇರಿಸಿದಳು. ಅಲ್ಲಿಂದ ತಾವುಳಿದಿದ್ದ ಗುರುಕುಲಕ್ಕೆ ಮರಳಿದಾಗ ಅಲ್ಲಿಗೊಬ್ಬರು ಋಷಿ ಮುನಿಗಳು ಬಂದಿದ್ದು ನಿಧಿಯನ್ನು ಆಶೀರ್ವಧಿಸುತ್ತ........
ಋಷಿ......ಮಗು xxxx ಮುನಿವರ್ಯರು ಕೆಲವು ದಿನಗಳ ಹಿಂದಷ್ಟೆ ನಿನ್ನ ತಾಯಿಯನ್ನು ಮೃತ್ಯುಕೂಪದಿಂದ ಕಾಪಾಡಿದ್ದರು. ಈಗ ಅವರ ಆದೇಶದನ್ವಯ ನಿನಗೆ ಕೆಲವು ಆಯುರ್ವೇದದ ಬಗ್ಗೆ ಜ್ಞಾನವನ್ನು ನೀಡುವುದಕ್ಕಾಗಿ ನಾವಿಲ್ಲಿಗೆ ಆಗಮಿಸಿದ್ದೇವೆ.
ನಿಧಿ.......ಪೂಜ್ಯರೇ ಇದು ನನ್ನ ಪಾಲಿಗೆ ಸೌಭಾಗ್ಯವೇ. ಮುನಿಗಳು ನಮ್ಮನ್ನು ಸಪರಿವಾರವಾಗಿ ತಾವಿರುವಲ್ಲಿಗೆ ಬರುವಂತೆ ಆದೇಶವನ್ನು ನೀಡಿದ್ದರೆ ಅದರ ಬಗ್ಛೆ ಏನಾದರೂ ಸೂಚನೆ ನೀಡಿರುವರಾ ?
ಋಷಿ.......ಆ ವಿಷಯದ ಬಗ್ಗೆ ನಿನಗೆ ಮುಂದೆ ತಿಳಿಯಿತ್ತೆ ಆದರಿನ್ನು ಎರಡ್ಮೂರು ದಿನ ನೀನು ನಮ್ಮೊಂದಿಗೆ ಕಾಡಿನಲ್ಲಿ ವಾಸಿಸಬೇಕಾಗಿದೆ ಏಕೆಂದರೆ ಆಯುರ್ವೇದದ ಜ್ಞಾನ ಇಂತಹ ಸ್ಥಳಗಳಲ್ಲಿ ನೀಡುವುದಕ್ಕೆ ಸಾಧ್ಯವಿಲ್ಲ ಅದಕ್ಕೆ ನೀನು ಸಿದ್ದಳಿರುವೆಯಾ ?
ನಿಧಿ.......ಪೂಜ್ಯರೇ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಾನು ಸಮರ್ಥಳಲ್ಲ. ನನಗೆ ನನ್ನ ಗುರುಗಳ...ತಂದೆ ತಾಯಿಯ ಅನುಮತಿ ಪಡೆದುಕೊಳ್ಳುವುದು ಅವಶ್ಯಕ ಅವರೊಪ್ಪಿಗೆಯಿಲ್ಲದೆ ನಾನು ಏನೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ.
ಋಷಿ......ನಿನ್ನ ಮಾತಿನಿಂದ ನಾನು ತುಂಬ ಪ್ರಸನ್ನರಾದೆವು ಮಗು ತಂದೆ ತಾಯಿ ಮತ್ತು ಗುರುಗಳ ಅನುಮತಿ ಅಗತ್ಯವಾಗಿ ಬೇಕು.
ಆಚಾರ್ಯರು.....ನಿಧಿ ನೀನು ಋಷಿವರ್ಯರ ಜೊತೆ ಹೋಗುವುದು ಉತ್ತಮ ಏಕೆಂದರೆ ಇವರು ನಿನಗೆ ನೀಡಲಿರುವ ಜ್ಞಾನ ಭಂಡಾರದ ಮಾಹಿತಿಗಳನ್ನು ನಾವೂ ಸಹ ನೀಡಲಾಗುವುದಿಲ್ಲ. ಇದರ ವಿಷಯ ನಿನ್ನ ತಂದೆ ತಾಯಿಗೆ ತಿಳಿಸು.
ನಿಧಿ ಅಮ್ಮನಿಗೆ ಫೋನ್ ಮಾಡಿ ಪೂರ್ತಿ ವಿಷಯ ತಿಳಿಸಿದರೆ ನೀತು ಗುರುಗಳ ಜೊತೆಯೂ ಮಾತನಾಡಿದಳು.
ನೀತು.....ಭಾನುವಾರ ನಾವೆಲ್ಲರೂ ಶೃಂಗೇರಿಗೆ ಹೋಗಬೇಕಲ್ಲಮ್ಮ ಚಿನ್ನಿಯ ಅಕ್ಷರಾಭ್ಯಾಸವನ್ನು ಪ್ರಾರಂಭ ಮಾಡಿಸಲು ಅಷ್ಟರಲ್ಲಿ....
ನಿಧಿ.......ಅಮ್ಮ ನಾನು...ರಾಣಾ ಮತ್ತು ಗುರುಗಳು ಶನಿವಾರವೇ ಊರಿಗೆ ಹಿಂದಿರುತ್ತೇವೆ.
ನೀತು.....ಆಯ್ತಮ್ಮ ನನ್ನ ಕಡೆಯಿಂದ ಒಪ್ಪಿಗೆಯಿದೆ ನಿಮ್ಮಪ್ಪನಿಗೂ ವಿಷಯ ತಿಳಿಸಿಬಿಡು.
ನಿಧಿ......ಆಯ್ತಮ್ಮ ಈಗಲೇ ಫೋನ್ ಮಾಡ್ತೀನಿ ಶಾಲೆಗೆ ಊಟದ ಬ್ರೇಕ್ ಸಮಯವೂ ಆಗಿದೆ......ಎಂದು ಅಪ್ಪನಿಗೂ ಫೋನ್ ಮಾಡಿ ಸವಿಸ್ತಾರವಾಗಿ ವಿಷಯವನ್ನು ತಿಳಿಸಿ ಒಪ್ಪಿಗೆ ಪಡೆದುಕೊಂಡಳು.
ಋಷಿ.......ಗೋವಿoದಾಚಾರ್ಯ ನಿನ್ನ ಶಿಷ್ಯೆಯನ್ನು ಶನಿವಾರದ ದಿನ ಸೂರ್ಯೋದಯದ ಹೊತ್ತಿಗೆ ನಿನ್ನ ಆಶ್ರಮಕ್ಕೆ ತಲುಪಿಸುವ ಭಾರ ನಮ್ಮದು. ಮಗು ಇಲ್ಲಿಂದ ನೀನೊಬ್ಬಳೇ ನಮ್ಮೊಡನೆ ಬರಬೇಕು.
ಗುರುಗಳ ಆಶೀರ್ವಾದ ಪಡೆದು ಋಷಿಗಳ ಜೊತೆ ಹೊಸತೊಂದು ಜ್ಞಾನ ಪಡೆದುಕೊಳ್ಳಲು ನಿಧಿ ತೆರಳಿದರೆ ಯುವರಾಣಿ ಹಿಂದಿರುಗಿ ಬರುವ ತನಕ ರಾಣಾ ಕೂಡ ಆಚಾರ್ಯರ ಆಶ್ರಮದಲ್ಲಿರುವುದಕ್ಕೆ ನಿರ್ಧರಿಸಿದನು. ಸಂಜೆ ಹೊತ್ತಿಗೆ ಘರವಾಲ್ ಹಿಮಾಲಯದ ಪಾವನ ಪ್ರದೇಶದ ಕಾಡಿನೊಳಗೆ ಪ್ರವೇಶಿಸಿದ ಋಷಿ ಮತ್ತು ನಿಧಿ ಅಲ್ಲಿರುವ ಪುಟ್ಟ ಕುಟೀರವನ್ನು ತಲುಪಿದರು. ಸೋಮವಾರ ಸಂಜೆಯಿಂದಲೇ ಬುಧವಾರ ರಾತ್ರಿವರೆಗೂ ಅತ್ಯಂತ ಪುರಾತನ ಮತ್ತು ದುರ್ಲಭವಾದ ಆಯುರ್ವೇದ ಗಿಡಮೂಲಿಕೆಗಳ ಬಗ್ಗೆ ಸವಿವರವಾಗಿ ಬರೆದಿರುವಂತ ತಾಳೆಗರಿಗಳನ್ನು ಓದುವುದನ್ನು ಮಾತ್ರ ತಿಳಿಸಿಕೊಡಲಾಯಿತು.
ಋಷಿ........ಏನಿದು ಆಯುರ್ವೇದದ ಜ್ಞಾನ ನೀಡುವೆಂದು ನಿನ್ನನ್ನು ಕರೆತಂದು ಇಲ್ಲಿ ಪುರಾತನ ಲಿಪಿ ಓದುವುದನ್ನೇ ಕಲಿಸುತ್ತಿದ್ದಾರೆಂದು ಯೋಚಿಸುತ್ತಿರುವೆಯಾ ಮಗು ? ಆದರೆ ಈ ತಾಳೆಗರಿಗಳನ್ನು ಕೆಲವು ನೂರಾರು ವರ್ಷಗಳ ಹಿಂದೆ ಬರೆಯಲಾಗಿದ್ದು ಇದನ್ನು ಆ ಕಾಲದಲ್ಲಿ ಇದ್ದಂತ ಸೂರ್ಯವಂಶಿ ಸಂಸ್ಥಾನದ xxxx ಮಹಾರಾಜರೇ ಖುದ್ದು ಸರ್ಮಪಿಸಿದ್ದರಂತೆ. ಈಗ ಈ ಲಿಪಿಗಳಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಅನುವಾಧಿಸಿ ಈ ಪುಸ್ತಕದಲ್ಲಿ ಬರೆಯಲಾಗಿದೆ ಮಗು ಈಗ ಎರಡೂ ಧರೋಹರಗಳನ್ನೂ ನಾವು ನಿನಗೆ ಮರಳಿಸುತ್ತಿದ್ದೇವೆ. ನೀನಿದನ್ನು ಲೋಕಕಲ್ಯಾಣಕ್ಕೆ ಮಾತ್ರ ಉಪಯೋಗಿಸಬೇಕೆಂದಿಲ್ಲ ಇದನ್ನು ನಿನ್ನ ಕುಟುಂಬದ ಶತ್ರುಗಳವಿನಾಶಕ್ಕೂ ಬಳಸಬಹುದು. ಆಚಾರ್ಯರು ನಿನಗೆ ಒಳ್ಳೆಯ ವಿಧ್ಯಾಭ್ಯಾಸವನ್ನೇ ನೀಡಿದ್ದಾನೆ ಹಾಗಾಗಿ ಇದನ್ನೆಲ್ಲಾ ಓದುವುದು ಕಲಿಯುವುದಕ್ಕೆ ನಿನಗೆ ಕೇವಲ ಎರಡು ದಿನಗಳಷ್ಟೇ ಸಾಕಾಯಿತು.
ನಿಧಿ......ಆದರೆ ಪೂಜ್ಯರೇ ಇದನ್ನು ನನಗ್ಯಾಕೆ ಹಿಂದಿರುಗಿಸುತ್ತಿದ್ದೀರ ಅಂತ ನನಗೆ ಅರ್ಥವಾಗಲಿಲ್ಲ.
ಋಷಿ.......ಈ ಲಿಪಿಗಳಲ್ಲಿರುವ ಔಷಧಿ ಪ್ರಕ್ರಿಯೆಗಳನ್ನು ನಾವೆಲ್ಲರೂ ಮುಂಚೆಯೇ ಕಲಿತಿದ್ದೇವೆ ಇನ್ನಿದನ್ನು ಹಿಂದಿರುಗಿಸುವುದೇ ಉತ್ತಮ. ಇದರಿಂದ ನಿನಗೆ ಬಹಳಷ್ಟು ಉಪಯೋಗಗಳಾಗುತ್ತವೆ ಜೊತೆಗಿದು ನಿನ್ನ ವಂಶದ ಧರೋಹರ ಅದನ್ನು ಮರಳಿಸುವುದು ನಮ್ಮ ಕರ್ತವ್ಯ.
ನಾಳೆ ಮುಂಜಾನೆ ನಾವು ನಿನ್ನ ಗೋವಿಂದಾಚಾರ್ಯನ ಆಶ್ರಮಕ್ಕೆ ಹಿಂದಿರುಗೋಣ.
ಮುಂಜಾನೆ ಇಬ್ಬರೂ ಶುಚಿರ್ಭೂತರಾದಾಗ ಕುಟೀರಕ್ಕೆ ನೀತುವಿನ ಪ್ರಾಣವನ್ನು ರಕ್ಷಿಸಿದ್ದ ಋಷಿ ಮುನಿಗಳ ಶಿಷ್ಯ ಭಾಸ್ಕರ್ ಆಗಮಿಸಿದ. ಆತನನ್ನು ನೋಡಿ ಒಂದು ಕ್ಷಣ ನಿಧಿಗೂ ಏನೋ ಒಂದು ಅವ್ಯಕ್ತ ಮಧುರವಾದ ಅನುಭವವಾದರೆ ಅವಳ ದೇಹದಲ್ಲಿ ಮಿಂಚೊಂದು ಸಂಚರಿಸಿದಂತಾಯಿತು. ಭಾಸ್ಕರ್ ಋಷಿಗಳ ಆಶೀರ್ವಾದ ಪಡೆದು..
ಭಾಸ್ಕರ್......ಮುನಿವರ್ಯರೇ ನನ್ನನ್ನು ಗುರುಗಳು ಈ ಕನ್ಯೆಯನ್ನು ಇವಳ ಗುರುಗಳ ಆಶ್ರಮಕ್ಕೆ ತಲುಪಿಸುವುದಕ್ಕೆ ಕಳುಹಿಸಿದ್ದಾರೆ ಅದರ ಜೊತೆಗೆ ಈ ಕನ್ಯೆಯ ಕುಟುಂಬಕ್ಕೆ ಗುರುಗಳು ಸಂದೇಶವನ್ನು ನನ್ನೊಂದಿಗೆ ಕಳುಹಿಸಿದ್ದಾರೆ.
ಋಷಿ.......ಮುನಿವರ್ಯರು ನಿನ್ನನ್ನಿಲ್ಲಿಗೆ ಕಳುಹಿಸಿರುವುದು ಏನೋ ಮಹತ್ತರವಾದ ಸಂದೇಶವೇ ಇರಬೇಕು. ಮಗು ಈ ಕಾಡಿನಿಂದ ನಿನ್ನ ಗುರುಗಳ ಆಶ್ರಮಕ್ಕೆ ಭಾಸ್ಕರ್ ಕರೆದೊಯ್ಯುತ್ತಾನೆ ಕೀರ್ತಿವಂತಳಾಗಿ ಬಾಳ್ವೆ ಮಾಡಮ್ಮ. ಇದನ್ನು ತೆಗೆದುಕೋ ಮಗು ಇದರಲ್ಲಿ ತೈಲವಿದೆ ಅದನ್ನೇಗೆ ಉಪಯೋಗಿಸಬೇಕೆಂದು ಪುಸ್ತಕದ ಕೊನೆಯ ಪುಟ್ಟದಲ್ಲಿ ವಿವರವಾಗಿ ಬರೆಯಲಾಗಿದೆ ಅದರಂತೆಯೇ ಉಪಯೋಗಿಸು.
ಋಷಿಗಳ ಆಶೀರ್ವಾದ ಪಡೆದು ಭಾಸ್ಕರ್ ಮತ್ತು ನಿಧಿ ಕಾಡಿನೊಳಗೆ ಸಂಚರಿಸುತ್ತ ಮುನ್ನಡೆದರೆ ಭಾಸ್ಕರ್ ಅವಳಿಗೆ ಗಿಡಮೂಲಿಕೆಗಳ ಬಗ್ಗೆ ವಿಶಿಷ್ಟ ಜ್ಞಾನವನ್ನೂ ನೀಡುತ್ತ ಸಾಗಿದನು. ಭಾಸ್ಕರ್ ಅವಳಿಗೆ ತನ್ನ ಜೋಳಿಗೆಯಿಂದ ಒಂದು ತೈಲದ ಬಾಟಲ್ ನೀಡಿ....
ಭಾಸ್ಕರ್.....ಇದು ಅತ್ಯಂತ ದುರ್ಲಭವಾಗಿ ಸಿಗುವ ಬೇರುಗಳಿಂದ ಸಿದ್ದಪಡಿಸಿರುವ ವಿಶಿಷ್ಟವಾದ ತೈಲ. ಇದರ ನಾಲ್ಕು ಹನಿಗಳನ್ನು ಒಂದು ಬಟ್ಟಲಿನಷ್ಟು ಹರಳೆಣ್ಣೆಯ ಜೊತೆ ಬೆರೆಸಿ ಅದನ್ನು ದೇಹದ ಪ್ರತೀ ಅಂಗಗಳಿಗೂ ಸವರಿಕೊಂಡು ಸೂರ್ಯನ ಕಿರಣಗಳು ಮೈ ಮೇಲೆ ಬೀಳುವ ರೀತಿ ಒಂದು ಘಂಟೆ ಕಾಲ ಮೈ ಕಾಯಿಸಿಕೊಂಡು ನಂತರ ತಣ್ಣೀರಿನಲ್ಲಿ ಸ್ನಾನ ಮಾಡಿದರೆ ಇದರ ಫಲ ದೊರೆಯುತ್ತದೆ
ನಿಧಿ.....ಈ ತೈಲದಿಂದಾಗುವ ಲಾಭವೇನು ?
ಭಾಸ್ಕರ್........ದೇಹದ ಚರ್ಮ ಕಾಂತಿಯು ಇಮ್ಮಡಿಗೊಳ್ಳುವುದರ ಜೊತೆಗೆ ದೇಹದೊಳಗಿನ ಮೂಳೆ ಮಾಂಸಗಳು ಬಲಿಷ್ಟಗೊಳ್ಳುತ್ತದೆ. ಯಾವುದೇ ರೀತಿಯ ಚರ್ಮ ರೋಗಗಳೂ ಸಹ ಅಂಟುವುದಿಲ್ಲ. ನಿಮ್ಮ ಮನೆಯಲ್ಲಿ ಮೂವರು ಚಿಕ್ಕ ಮಕ್ಕಳಿದ್ದಾರಲ್ಲ ಅವರಿಗೆ ತೈಲ ಹಚ್ಚುವಾಗ ಕೇವಲ ಒಂದು ತೊಟ್ಟನ್ನು ಹರಳೆಣ್ಣೆ ಜೊತೆ ಬೆರೆಸಿದರೆ ಸಾಕು. ಈ ತೈಲವನ್ನು ಸಿದ್ದಪಡಿಸಲು ಬೇಕಾಗಿರುವ ಸಾಮಾಗ್ರಿಗಳು ಮತ್ತು ಸಿದ್ದಪಡಿಸುವ ವಿಧಾನಗಳೆಲ್ಲವೂ ಋಷಿಗಳು ನಿನಗೆ ನೀಡಿದ ಪುಸ್ತಕದಲ್ಲಿ ನಮೂಧಿಸಲಾಗಿದೆ.
ನಿಧಿ.......ಪುಸ್ತಕದಲ್ಲಿ ಸಾಮಾಗ್ರಿಗಳ ವಿವರವಿರುತ್ತೆ ಆದರೆ ಇದೇ ನನಗೆ ಬೇಕಿರುವ ಬೇರೆಂಬುದನ್ನು ತಿಳಿದುಕೊಳ್ಳುವುದಾದರೂ ಹೇಗೆ ಅದರ ಬಗ್ಗೆ ನನಗೇನೂ ಅನುಭವವಿಲ್ಲವಲ್ಲ. ನಾರು ಬೇರು ಅಥವ ಗಿಡ ಮೂಲಿಕೆಗಳನ್ನು ನೋಡಿದಾಗ ಇದಿಂತಹುದೇ ಗಿಡ ಮೂಲಿಕೆ ಎಂದು ಗುರುತಿಸುವ ವಿದ್ಯೆ ನನಗೆ ಗೊತ್ತಿಲ್ಲ.
ಭಾಸ್ಕರ್......ಆ ಪುಸ್ತಕದಲ್ಲಿ ಪ್ರತಿಯೊಂದರ ವಿವರಣೆಯೂ ಮತ್ತು ಅವುಗಳ ಚಿತ್ರಗಳೂ ಇವೆ ಹಾಗಿದ್ದೂ ಸಮಸ್ಯೆಯಾದಲ್ಲಿ ನಿನ್ನೆಲ್ಲಾ ಅನುಮಾನಗಳನ್ನು ಪರಿಹರಿಸಲು ನಾನಿದ್ದೀನಲ್ಲ.
ನಿಧಿ.....ಪರಿಹರಿಸಲು ನೀವಿರುವಿರಿ ನಿಜ ಆದರೆ ನೀವು ವಾಸಿಸುವ ಸ್ಥಳ ಎಲ್ಲಿದೆ ? ನಿಮ್ಮನ್ನು ಬೇಟಿಯಾಗ ಬೇಕಿದ್ದರೆ ನಾನು ನಿಮ್ಮನ್ನೆಲ್ಲಿ ಹುಡುಕಿಕೊಂಡು ತಿರುಗಾಡಲಿ ?
ಭಾಸ್ಕರ್......ಗುರುಗಳು ನಿಮಗೊಂದು ಸಂದೇಶವನ್ನು ನೀಡಿದ್ದಾರೆ. ನವರಾತ್ರಿಯ ವಿಜಯದಶಮಿ ದಿನಕ್ಕಿಂತ ಆರು ದಿನ ಮುಂಚಿತವಾಗಿ ನೀನು ನಿಮ್ಮ ತಂದೆ..ತಾಯಿ..ತಂಗಿ ಮತ್ತು ತಮ್ಮಂದಿರ ಜೊತೆಯಲ್ಲಿ ಹಿಮಾಚಲ ಪ್ರದೇಶದ ಕಾಲ್ದಾ ಎಂಬ ಊರಿಗೆ ಬರಬೇಕು. ಊರಿನ ಕೊನೆಯಲ್ಲೊಂದು ಶಿವನ ದೇವಾಲಯವಿದೆ ಅಲ್ಲಿಂದ ಮುಂದೆ ಕಾಡು ಪ್ರಾರಂಭವಾಗುತ್ತೆ. ಆ ದೇವಸ್ಥಾನದ ಬಳಿ ಮುಂಜಾನೆಯೇ ಸೂರ್ಯೋದಯದ ಸಮಯಕ್ಕೆ ನಾನು ನಿಮ್ಮೆಲ್ಲರನ್ನು ಗುರುಗಳ ಕುಟೀರಕ್ಕೆ ಕರೆದೊಯ್ಯುವುದಕ್ಕೆ ಬಂದಿರ್ತೀನಿ. ಅಲ್ಲಿಂದ ನಿಮ್ಮನ್ನು ಕಾಡಿನೊಳಗೆ ನಮ್ಮ ಕುಟೀರಕ್ಕೆ ಕರೆದುಕೊಂಡು ಹೋಗುವೆ ನಾವು ವಾಸ ಮಾಡುವ ಸ್ಥಳ ಅದೇ.
ನಿಧಿ......ಈ ಒಂದು ಸಂದೇಶವನ್ನು ನೀಡುವುದಕ್ಕಾಗಿ ನೀವಲ್ಲಿಂದ ಇಲ್ಲಿಯವರೆಗೂ ಪ್ರಯಾಣಿಸಿ ಬಂದಿಲ್ಲವೆಂಬುದು ತಿಳಿಯುತ್ತೆ. ನೀವು ನನ್ನನ್ನು ಬೇಟಿಯಾಗಲು ಬಂದಿರುವ ನಿಜವಾದ ಕಾರಣದ ಬಗ್ಗೆ ತಿಳಿದುಕೊಳ್ಳಲು ನಾನು ಉತ್ಸುಕಳಾಗಿದ್ದೀನಿ ಹೇಳುವಿರಾ.
Story thumbha chanagi de.dina 5 sala andru hosa story ge nodtha erthene
ReplyDeleteಕಥೆ ಬಂದು ಖುಷಿ ಆಯಿತು, ತಡ ಮಾಡಬೇಡಿ, ನನ್ನ ಮನವಿ
ReplyDeleteನಾನು ನೀತು ಕಥೆ ಓದುತಿದ್ದು, ಕಥೆ ತಡವಾದರೆ ಏನೋ ಕಳೆದುಕೊಂಡ ಹಾಗೆ,
ReplyDeleteHii
ReplyDelete