Total Pageviews

Saturday, 8 March 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 299

ನಿಧಿ ಮನೆ ತಲುಪಿದಾಗ ನಿಶಾ—ಪೂನಂ ಕೈಯಲ್ಲಿ ಒಂದೊಂದು ಪ್ಲಾಸ್ಟಿಕ್ ಬ್ಯಾಟನ್ನಿಡಿದು ಫೈಟಿಂಗ್ ಪ್ರಾಕ್ಟೀಸ್ ಮಾಡುತ್ತಿರುವುದನ್ನು ನೋಡಿ ನಿಧಿ.....ಅಮ್ಮಾ ಎಂದು ಕಿರುಚುತ್ತ ಒಳಗೆ ಕಾಲಿಟ್ಟರೆ ದೊಡ್ಡ ಎಲ್.ಇ.ಡಿ. ಪರದೆಯಲ್ಲಿ ಕಾಲೇಜಿನ ಘಟನೆಯ ವೀಡಿಯೋವನ್ನು ಮನೆಯ ಹೆಂಗಸರೆಲ್ಲರೂ ಕುಳಿತು ನೋಡುತ್ತಿದ್ದರು.

ನಿಧಿ.....ಅಮ್ಮ ಇದಕ್ಕೇನಾ ನೀವು ರಕ್ಷಕರನ್ನು ನನ್ನ ಹಿಂದೆ ಬಿಟ್ಟಿದ್ದು ಇದನ್ನು ನೋಡಿಯೇ ಆಚೆ ಚಿಲ್ಟಾರಿಗಳೆರಡೂ ಫೈಟಿಂಗ್ ಮಾಡ್ತಾ ಇರೋದು.

ನೀತು.....ಅವರಿಬ್ಬರೂ ಫೈಟಿಂಗ್ ಮಾಡ್ತಿಲ್ಲ ಕಣಮ್ಮ ಅಕ್ಕನ ರೀತಿ ಫೈಟಿಂಗ್ ಮಾಡೋದನ್ನು ಕಲಿತಿದ್ದಾರೆ.

ನಿಧಿ......ಚಿಕ್ಕಪ್ಪನಿಗೆ ನೀವು ಫೋನ್ ಮಾಡಿದ್ರಾ ?

ನೀತು.....ನಾನಲ್ಲ ಸುಮೇರ್ ಫೋನ್ ಮಾಡಿದ್ದು ಈಗೇನು ನಿಮ್ಮ ಚಾಚೂ ಈ ವಿಷಯದಲ್ಲಿ ತಲೆ ಹಾಕಲ್ಲ ನೀನೇನು ಮಾಡಬೇಕೋ ಅದನ್ನು ಮಾಡುವಂತೆ ಹೋಗಿ ಫ್ರೆಶಾಗಿ ಬಾ ಊಟ ಮಾಡೋಣ.

ಪ್ರೀತಿ......ಲೇ ನಿಧಿ ನೀನು ಜೈಸಲ್ಮೇರಿನ ರೀತಿ ರಣಚಂಡಿ ಅವತಾರ ತೋರಿಸಿ ಬಿಡ್ಬೇಡ ಆಮೇಲೆ ಕಾಲೇಜಿನ ವಿಧ್ಯಾರ್ಥಿಗಳಿಗೆ ನಾಳೆ ಚಳಿ ಜ್ವರ ಬಂದು ಬಿಡುತ್ತಷ್ಟೆ.

ನಿಧಿ ಅವಳನ್ನು ಬಿಗಿಯಾಗಿ ಅಪ್ಪಿಕೊಳ್ಳುತ್ತ.....ನೋ ಮೈ ಸ್ವೀಟ್ ಪಾರ್ಟ್ನರ್ ಅತ್ತೆ ನಾನಾಗೆ ಮಾಡಲ್ಲ ಫ್ರೆಶಾಗಿ ಬರ್ತೀನಿ.

ನಿಧಿ ತೆರಳಿದಾಗ ಸುಮ.....ನಿಧಿಯೊಬ್ಬಳೇ ಇದನ್ನು ಫೇಸ್ ಮಾಡಲಿ ಅಂತ ಬಿಡುವುದು ಸರಿಯಲ್ಲ ಕಣೆ.

ನೀತು......ಡೋಂಟ್ವರಿ ಅತ್ತಿಗೆ ನಾನದಕ್ಕೆ ಬೇಕಾದ ವ್ಯವಸ್ಥೆಗಳನ್ನೆಲ್ಲಾ ಮಾಡಿದ್ದೀನಿ ನನ್ನ ಮಗಳ ತಂಟೆಗೆ ಬಂದವನಿಗೆ ಗತಿ ಕಾಣಿಸುವುದಕ್ಕೆ ನಾಳೆ ನಾನೇ ಕಾಲೇಜಿಗೆ ಹೋಗ್ತೀನಿ.

ಸಂಜೆ ಮನೆಯ ಗಂಡಸರು ಬಂದು ವೀಡಿಯೋ ನೋಡಿ ಅದರ ಬಗ್ಗೆ ಚರ್ಚಿಸುತ್ತ ಕುಳಿತಿದ್ದರೆ ನಿಧಿ ಅಪ್ಪನ ಜೊತೆ ಪ್ರಿನ್ಸಿಪಾಲ್ ಮನೆಗೂ ಹೋಗಿ ಬಂದಳು.
* *
* *
ಇತ್ತ ನಿಧಿಯಿಂದ ಹೊಡೆತ ತಿಂದಿದ್ದ ಸೂರಜ್ ಮತ್ತವನ ಗೆಳೆಯರು ಹೇಗೋ ಕಾಲೇಜಿನಿಂದ ತಪ್ಪಿಸಿಕೊಂಡು ಒಂದು ಪಾರ್ಕಿನಲ್ಲಿ ತಮಗೆ ಬಿದ್ದ ಏಟುಗಳಿಗೆ ಪ್ರತಿಕಾರ ತೀರಿಸಿಕೊಳ್ಳಲು ಪ್ಲಾನ್ ಮಾಡುತ್ತಿದ್ದರು.

ಚೇಲ....ಗುರು ಅವಳನ್ನ ಮಾತ್ರ ಸುಮ್ಮನೆ ಬಿಡಬಾರದು ನಮ್ಮನ್ನೆಲ್ಲ ಹುಚ್ಚು ನಾಯಿಗಳಿಗೆ ಹೊಡೆಯುವಂತೆ ಹೊಡೆದಿದ್ದಾಳೆ.

ಚೇಲ4.....ಗುರು ಕಾಲೇಜಿನಲ್ಲಿ ನಮ್ಮ ಗ್ಯಾಂಗಿನ ಮರ್ಯಾದೆ ಫುಲ್ ಮಣ್ಣು ಪಾಲಾಗಿ ಹೋಯ್ತು.

ಸೂರಜ್.......ಆ ಚಿನಾಲಿಗೆ ಸಕತ್ ತಿಕ ಕೊಬ್ಬಿದೆ ನಾಳೆ ಕ್ಯಾಂಟೀನ್ ಟೇಬಲ್ ಮೇಲೆ ಬಗ್ಗಿಸಿಕೊಂಡು ಅವಳ ತಿಕ ಹೊಡಿತೀನಿ ಆಗವಳಿಗೆ ಬುದ್ದಿ ಬರುತ್ತೆ ನನ್ನ ಏದುರು ಹಾಕಿಕೊಂಡರೇನಾಗುತ್ತೆ ಅಂತ.

ಚೇಲ1....ಗುರು ಅವಳ ಚಿಕ್ಕಪ್ಪ ಪೋಲಿಸ್ ಡಿವೈಎಸ್ಪಿ ಗುರು ಅರೆಸ್ಟ್ ಮಾಡಿದರೇನು ಮಾಡೋದು ?

ಚೇಲ7......ಏಯ್ ಇವರಪ್ಪ ಮಂತ್ರಿ ಕಣೋ ಅವಳ ಚಿಕ್ಕಪ್ಪನ್ಯಾವ ಸೀಮೆಗಿಲ್ಲದವನಾ ಇವರಪ್ಪನ ಮುಂದೆ ಸೆಲ್ಯೂಟ್ ಮಾಡ್ಕೊಂಡು ನಿಂತಿರಬೇಕಷ್ಟೆ.

ಚೇಲ9.....ಹೂಂ ಗುರು ಇಡೀ ಕಾಲೇಜಿನ ಮುಂದೆಯೇ ಅವಳ ತಿಕ ಹೊಡೀಬೇಕು ಗುರು ಮೊದಲು ನೀನವಳ ಉದ್ಗಾಟನೆ ಮಾಡ್ಬಿಡು ಆಮೇಲೆ ನಾವೆಲ್ಲರೂ ನುಗ್ತೀವಿ ನಾಳೆ ಅವಳನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಹಾಳು ಮಾಡಿಬಿಡೋಣ.

ಸೂರಜ್....ನಾಳೆ ಅವಳಿಗಿದೆ ಮುದುಕಿ ಹಬ್ಬ ಅವಳ ಬೆತ್ತಲಾಗಿರುವ ವೀಡಿಯೋ ತೆಗೆದು ಎಲ್ಲಾ ಕಡೆಗೂ ಹಾಕಿಬಿಡ್ರೋ ತಲೆಯನ್ನೆತ್ತಲಿಕ್ಕೇ ಆಗಬಾರದು ಚಿನಾಲಿಗೆ.

ಇವರಿಲ್ಲಿ ಪ್ಲಾನಿಂಗ್ ಮಾಡ್ತಿದ್ರೆ ಇವರನ್ನು ಹಿಂಬಾಲಿಸಿಕೊಂಡು ಬಂದ ರಕ್ಷಕನೊಬ್ಬ ಇದನ್ನೆಲ್ಲಾ ವೀಡಿಯೋ ಮಾಡಿ ಸುಮೇರ್ ಕೈಗಿಟ್ಟನು. ಸುಮೇರ್ ತೋರಿಸಿದ ವೀಡಿಯೋ ಕಾಲೇಜಿನ ಹುಡುಗರ ಮಾತನ್ನು ಕೇಳಿ ನೀತುವಿನ ಕೋಪ ಮುಗಿಲು ಮುಟ್ಟಿತ್ತು.
* *
* *

ಮಾರನೇ ದಿನ ಎಂದಿನಂತೆ ನಿಧಿ ರೆಡಿಯಾಗಿ ಕೆಳಗೆ ಬಂದಾಗ ನೆನ್ನೆ ನಡೆದ ಘಟನೆಯ ಬಗ್ಗೆ ಮನೆಯಲ್ಯಾರೂ ಮಾತನಾಡುತ್ತಿರಲಿಲ್ಲ.

ಹರೀಶ......ಭಾನುವಾರ ನೀನೊಬ್ಬಳೇ ಹೃಷಿಕೇಶದಲ್ಲಿ ಕಟ್ಟಲಿರುವ ವಿದ್ಯಾದೇಗುಲದ ಶಂಕು ಸ್ಥಾಪನೆ ಮಾಡಲು ಹೋಗಬೇಕಮ್ಮ.

ನಿಧಿ......ಅಪ್ಪ ನಾನೊಬ್ಬಳೇನಾ ನೀವ್ಯಾರೂ ಬರೋಲ್ಲವಾ ?

ಪ್ರೀತಿ......ನಾನು ಬರ್ತಿದ್ದೆ ಕಣೆ ನಿಮ್ಮಮ್ಮನೇ ಬೇಡ ಅಂದ್ಬಿಟ್ಲು.

ನಿಧಿ......ಯಾಕಮ್ಮ ಅತ್ತೆನಾದ್ರೂ ನನ್ಜೊತೆ ಕಳುಹಿಸಿ ಕೊಡಿ.

ನೀತು ಮಗಳಿಗೆ ತಿಂಡಿ ಕೊಡುತ್ತ........ನೀನೊಬ್ಬಳೇ ಬರಬೇಕೆಂದು ಗುರುಗಳು ಹೇಳಿದ್ದಾರೆ ಶನಿವಾರ ರಾಣಾ ಬರ್ತಾನೆ ಅವನ ಜೊತೆ ಹೋಗಿ ಬಾ ಈಗ ತಿಂಡಿ ತಿನ್ನು ಕಾಲೇಜಿಗೆ ಟೈಮಾಗ್ತಿದೆ.

ನಿಧಿ......ಅಮ್ಮ ಇವತ್ತು ಕಾಲೇಜ್ ನಡೆಯುತ್ತೇನಮ್ಮ ? ಸುರಜ್ ಮತ್ತವನ ಗೆಳೆಯರು ನನ್ನನ್ನೇನು ಮಾಡ್ತಾರೆ ಅಂತಲೇ ಕಾಲೇಜಿನಲ್ಲಿ ಹುಡುಗರೆಲ್ಲರ ಮಧ್ಯೆ ಚರ್ಚೆ ನಡೆಯುತ್ತಿರುತ್ತೆ.

ನೀತು......ಆಯ್ತು ಈಗ ಮೊದಲು ತಿಂಡಿ ತಿನ್ನು ನಡಿ ನನ್ನ ಬಂಗಾರಿ ನಿನಗೂ ತಿಂಡಿ ತಿನ್ನಿಸ್ತೀನಿ.

ನಿಧಿ......ಅಮ್ಮ ಕಾಲೇಜಿನ ಬಗ್ಗೆ ಮಾತೇ ಆಡ್ತಿಲ್ಲ ಎಂದರೆ ಅವರಾಗ್ಲೆ ಎಲ್ಲವನ್ನೂ ಪ್ಲಾನ್ ಮಾಡಿಕೊಂಡಿರಬೇಕಲ್ಲವಾ ಅಪ್ಪ ?

ಅಶೋಕ.......ನಿಮ್ಮಮ್ಮನಿಗೆ ಮಗಳ ಬಗ್ಗೆ ಸ್ವಲ್ಪ ಕಾಳಜಿ ಜಾಸ್ತಿ.

ನಿಧಿ......ಹೂಂ ಅಂಕಲ್ ಅದಕ್ಕೆ ವೀರ್ ಸಿಂಗ್ ಕೂಡ ಕಾಣಿಸ್ತಿಲ್ಲ ಅಮ್ಮನೇ ಎಲ್ಲಿಗೋ ಕಳಿಸಿರಬೇಕು ಅನಿಸುತ್ತೆ.

ಹರೀಶ.....ನಿಮ್ಮಮ್ಮನಲ್ಲ ನಾನು ಕಳಿಸಿದ್ದೀನಿ ನೀನೇನು ಜಾಸ್ತಿ ತಲೆ ಕೆಡಿಸಿಕೊಳ್ಬೇಡ ಆರಾಮವಾಗಿರು.

ನಿಧಿ ತಿಂಡಿ ಮುಗಿಸಿ ಕಾಲೇಜಿಗೆ ಹೊರಟಾಗ......

ನೀತು.....ನೀನು ನಿನ್ನ ಸ್ನೇಹಿತೆಯರ ಮನೆಗಲ್ಲವಾ ಹೋಗ್ತಿರೋದು.

ನಿಧಿ.....ಹೂಂ ಅಮ್ಮ ಎಲ್ಲರೂ ಕುಸುಮ ಮನೆಯಲ್ಲಿ ಸೇರ್ತಾರೆ ಅಲ್ಲಿಂದ ಒಟ್ಟಿಗೆ ಕಾಲೇಜಿಗೆ ಹೋಗ್ತೀವಿ.

ನೀತು......ಸರಿ ಹೋಗಿ ಬಾರಮ್ಮ ಸುಮೇರ್ ಕಾಲೇಜಿನ ಹತ್ತಿರವೇ ಬರ್ತಾನೆ ಜೋಪಾನ.

ನಿಧಿ......ಆಯ್ತಮ್ಮ ಬಾಯ್ ಚಿನ್ನಿ ಮರಿ.

ನಿಶಾ......ಮಮ್ಮ ಅಕ್ಕ ಜೊತೆ ನಾನಿ ಹೋಬೆಡ ಮಮ್ಮ.

ನೀತು.......ಅಕ್ಕ ಕಾಲೇಜಿಗೆ ಹೋಗಲಿ ನಾನು ನೀನು ನಡಿ ಫೈಟಿಂಗ್ ಮಾಡೋಣ.

ನಿಶಾ.....ನಾನಿ ಪಪ್ಪ ಜೊತಿ ಫೆಟಿಂಗ್ ಮಾತೀನಿ ಮಮ್ಮ.
* *
* *
ಕುಸುಮಾಳ ಮನೆಯಲ್ಲಾಗಲೇ ನಿಧಿಯ ಗೆಳತಿಯರ ಜೊತೆ ಅವರ ತಂದೆ ತಾಯಿಯರೂ ಉಪಸ್ಥಿತರಿದ್ದರು. ನಿಧಿ ಒಳ ಬಂದಾಗ......

ಕುಸುಮ ತಂದೆ......ನಿಧಿ ನೀನ್ಯಾಕಮ್ಮ ಆ ಮಂತ್ರಿ ಮಗನ ಜೊತೆಗೆ ಜಗಳ ಮಾಡಲಿಕ್ಕೆ ಹೋದೆ ? ಈಗವರೇನು ಮಾಡ್ತಾರೋ ಏನೋ ? ನೀನು ಸ್ವಲ್ಪ ದಿನ ಕಾಲೇಜಿಗೆ ಹೋಗದಿರುವುದೇ ಒಳ್ಳೆಯದು.

ಪ್ರಿಯಾ......ಆ ಲೋಫರ್ ಸೂರಜ್ ನನ್ನ ರೇಗಿಸಿ ಗಲಾಟೆ ಮಾಡ್ತಿದ್ದ ನಿಧಿ ಮಧ್ಯ ಬಂದು ನನ್ನನ್ನು ಬಚಾವ್ ಮಾಡಲೋಗಿ ಈಗವಳೇ ಸಿಕ್ಕಿ ಹಾಕಿಕೊಂಡು ಬಿಟ್ಟಿದ್ದಾಳೆ.

ಪ್ರಿಯಾಳ ತಂದೆ......ಅವರೆಲ್ಲರೂ ಶ್ರೀಮಂತರು ದೊಡ್ಡ ಮನುಷ್ಯರು ಕಣಮ್ಮ ನಿಧಿ. ನಾವೆಲ್ಲರೂ ಹೋಗಿ ಅವರಲ್ಲಿ ಕ್ಷಮೆ ಕೇಳಿ ಬಿಡೋಣ ಅವರನ್ನೆದುರಿಸಿ ನಿಲ್ಲುವ ಶಕ್ತಿ ನಮ್ಮಲ್ಯಾರಿಗೂ ಇಲ್ಲ.

ನಿಧಿ....ನೀವೇನ್ ಹೇಳ್ತಿದ್ದೀರ ಅಂಕಲ್ ಆ ಲೋಫರ್ ನಿಮ್ಮ ಮಗಳ ಜೊತೆ ಕೆಟ್ಟದಾಗಿ ವರ್ತಿಸಿದರೆ ನಾವು ಅವನ ಬಳಿ ಹೋಗಿ ಕ್ಷಮಿಸು ಅಂತ ಕೇಳಿಕೊಳ್ಬೇಕಾ.

ರಾಣಿ ತಾಯಿ.......ಮತ್ತಿನ್ನೇನು ಮಾಡುವುದಕ್ಕಾಗುತ್ತಮ್ಮ ನಿಧಿ ನೆನ್ನೆ ಹತ್ತು ಜನ ಹುಡುಗರಿದ್ದರು ಅವರನ್ನು ನೀನೊಬ್ಬಳೇ ಹೊಡೆದೆಯಂತೆ ಇವತ್ತು ನೂರು ಜನ ಬರಬಹುದಲ್ಲವಾ ? ಅವನ ತಂದೆ ಮಂತ್ರಿ ನಿಧಿ ಅವರನ್ನೆದುರಿಸಿ ನಾವು ನಿಲ್ಲಲಿಕ್ಕಾಗುತ್ತಾ ?

ನಿಧಿ......ಥಾಂಕ್ಯೂ ಕಣ್ರೆ ನೀವು ನಿಜವಾಗಿಯೂ ಆಪ್ತ ಸ್ನೇಹಿತೆಯರು ನಿಮ್ಮ ಮನೆಯವರಿಗೂ ನನ್ನ ಬಗ್ಗೆ ಯಾವುದೇ ವಿಷಯವನ್ನೂ ನೀವು ಹೇಳದೆ ಗುಟ್ಟನ್ನು ಗುಟ್ಟಾಗಿಯೇ ಇಟ್ಟಿದ್ದೀರಲ್ಲ.

ಕುಸುಮ ತಾಯಿ........ಏನು ಗುಟ್ಟಮ್ಮ ? ನೀವೆಲ್ಲರೂ ನಮ್ಮಿಂದ ಯಾವ ವಿಷಯ ಮುಚ್ಚಿಟ್ಟಿದ್ದೀರ ?

ನೀತು ಒಳಬರುತ್ತ.....ನಾನು ಹೇಳ್ತೀನಿ.

ನಿಧಿ......ಅಮ್ಮ ನೀವಿಲ್ಲಿಗೇ ಬಂದ್ಬಿಟ್ರಾ ಕಾಲೇಜಿನ ಹತ್ತಿರ ಬರ್ತೀರ ಅಂತ ತಿಳಿದಿದ್ದೆ.

ನೀತು.....ಕಾಲೇಜಿನ ಹತ್ತಿರ ನಿಮ್ಮನ್ನು ಸ್ವಾಗತಿಸುವುದಕ್ಕೆ ಆ ಮಂತ್ರಿ ಕಡೆಯ ರೌಡಿಗಳಾಗಲೇ ಬಂದಿದ್ದರು ಅದನ್ನು ತಿಳಿದೇ ನಾನಿಲ್ಲಿಗೆ ಬಂದೆ. ನಮಸ್ತೆ ನನ್ನೆಸರು ನೀತು ಅಂತ ನಿಧಿಯ ತಾಯಿ ನಮ್ಮ ಯಜಮಾನರು ಹರೀಶ್ ನಿಮಗೆಲ್ಲ ಗೊತ್ತಿದ್ದಾರಲ್ಲ.

ಧೀಕ್ಷಾ ತಂದೆ.......ನಮಸ್ತೆ ಮೇಡಂ ಹರೀಶ ಸರ್ ನಮಗೆ ಚೆನ್ನಾಗಿ ಗೊತ್ತಿದ್ದಾರೆ ನಿಮ್ಮ ಪರಿಚಯವಿರಲಿಲ್ಲ ನೀವು ಬಂದಿದ್ದು ತುಂಬಾನೇ ಒಳ್ಳೆಯದಾಯಿತು. ಕಾಲೇಜಿನ ಹತ್ತಿರ ನಮ್ಮ ಮಕ್ಕಳಿಗೆ ತೊಂದರೆ ನೀಡಲು ರೌಡಿಗಳಿದ್ದಾರೆ ಅಂದ್ರೆ ಇವರುಗಳ್ಯಾರು ಹೋಗದಿರುವುದೇ ಒಳ್ಳೆಯದು.

ನೀತು....ಎಷ್ಟು ದಿನ ಅಂತ ಮನೆಯಲ್ಲೇ ಇಟ್ಟುಕೊಂಡಿರ್ತೀರ ಹೇಳಿ. ಕಾಲೇಜಿನ ಬಳಿ ರೌಡಿಗಳು ಬಂದಿದ್ದರು ಅಂತ ಹೇಳಿದೆನೇ ಹೊರತು ಈಗಲೂ ಅಲ್ಲೇ ಇದ್ದಾರೆಂದು ಹೇಳಲಿಲ್ವಲ್ಲ.

ದೀಪಾ ತಾಯಿ......ಅವರು ಪುನಃ ಬರಬಹುದಲ್ಲವಾ ?

ನೀತು......ಬರಬಹುದಲ್ಲಾ ಅವರಲ್ಲೇ ಇದ್ದಾರೆ ಆದರೆ ನಮ್ಮವರ ಬಂಧನದಲ್ಲಿ ನಿಮ್ಮಲ್ಯಾರಿಗೂ ನಮ್ಮ ಕುಟುಂಬದ ಹಿನ್ನೆಲೆಯ ಬಗ್ಗೆ ಗೊತ್ತಿಲ್ಲ ಹೇಳಿಬಿಡ್ತೀನಿ. ನಾನು ರಾಣಾಪ್ರತಾಪ್ ಸೂರ್ಯವಂಶಿಯ ತಂಗಿ ಅವರು ಯಾರೆಂದರೆ ಸೂರ್ಯವಂಶಿ ಗ್ರೂಪ್ ಆಫ್ ಕಂಪನಿ ಮಾಲೀಕರು ಅದರ ಬಗ್ಗೆ ನಿಮಗೆ ಗೊತ್ತೇ ಇರುತ್ತೆ ಅದರ ಜೊತೆಗೆ ಉದಯಪುರ ರಾಜಮನೆತನದ ಮಹಾರಾಜರು. ಆದರೆ ದುರಾದೃಷ್ಟ ಈಗ ನನ್ನಣ್ಣ ಅತ್ತಿಗೆ ಜೀವಂತವಾಗಿಲ್ಲ ಅಲ್ಲಿ ನಮ್ಮ ವಿರಾಸತ್ತಿಗೆ ನನ್ನ ಹಿರಿಮಗಳು ನಿಧಿ ಮುಂದಿನ ಯುವರಾಣಿ. ನಾವು ತಪ್ಪು ಮಾಡದೇ ಇರುವಾಗ ಯಾರೆದುರಿಗೂ ತಲೆತಗ್ಗಿಸುವ ಪ್ರಶ್ನೆಯೇ ಇಲ್ಲ ನಾನಿಲ್ಲಿಗೆ ಬರುವುದೇ ಬೇಕಿರಲಿಲ್ಲ ಕುಳಿತಲ್ಲಿಯೇ ಅವರನ್ನೆಲ್ಲಾ ಹೊಸಕುವಷ್ಟು ಶಕ್ತಿಯಿದೆ. ಇನ್ನೊಂದು ವಿಷಯ ನನ್ನ ತಮ್ಮ ವರ್ಧನ್ ಸಿಂಗ್ ನಮ್ಮ ದೇಶದ ಉಪಪ್ರಧಾನಿ ಅವನ ಬಗ್ಗೆ ಹೇಳಬೇಕಾಗಿಲ್ಲವಲ್ಲ.

ನೀತು ಬಾಯಿಂದ ಅವರ ನಿಜವಾದ ಪರಿಚಯವನ್ನು ಕೇಳಿ ಅಲ್ಲಿದ್ದ ನಿಧಿಯ ಗೆಳತಿಯರ ತಂದೆ ತಾಯಿಯರು ದಂಗಾಗಿ ಹೋಗಿದ್ದರು. ನಿಧಿ ಸೂರ್ಯವಂಶಿ ರಾಜಮನೆತನದ ಮುಂದಿನ ಯುವರಾಣಿ ಎಂಬ ವಿಷಯ ತಿಳಿದು ಅವಳನ್ನೇ ನೋಡುತ್ತಿದ್ದರು. ಅಷ್ಟರಲ್ಲಿ ಓಡಿ ಬಂದ ನಿಶಾ ತನ್ನ ಕೈಯಲ್ಲೊಂದು ಚಿನ್ನದ ಒರಿಗೆಯಿರುವಂತ ಕತ್ತಿ ಹಿಡಿದಿದ್ದು......

ನಿಶಾ......ಮಮ್ಮ ಬಾ ಹೋಗನ ಅಕ್ಕ ಬಾ.

ನಿಧಿ......ಲೇ ಚಿಲ್ಟಾರಿ ನೀನೆಲ್ಲಿಗೆ ಹೋಗ್ಬೇಕು ?

ನಿಶಾ ಕತ್ತಿ ತೋರಿಸುತ್ತ.......ಫೇಟಿಂಗ್ ಮಾತೀನಿ ಅಕ್ಕ ನೋಡು ನನ್ನಿ ಕತಿ.

ನಿಧಿ.....ನೀನು ಫೈಟಿಂಗ್ ಮಾಡ್ತೀಯ.

ನಿಶಾ ತಲೆ ಕುಣಿಸುತ್ತ.....ಹೂಂ ಮಮ್ಮ ನಡಿ ಹೋಗನ ಬೇಗ ಬೇಗ.

ನೀತು ಮುಗುಳ್ನಗುತ್ತ.......ನಡೀರಿ ಹೋಗೋಣ ನಮ್ಮ ಸಂಸ್ಥಾನದ ರಕ್ಷಕರು ಆಗಲೇ ಬೆಂಗಳೂರಿನಿಂದ ಮಂತ್ರಿಯನ್ನೂ ಎಳೆದುಕೊಂಡು ಬಂದಿದ್ದಾರೆ.

ನಿಧಿ.....ವೀರ್ ಸಿಂಗ್ ಅದಕ್ಕಾ ಹೋಗಿದ್ದು ?

ನೀತು......ಮತ್ತಿನ್ನೇನು ನನ್ನ ಮಗಳು ಅವಳ ಸ್ನೇಹಿತೆಯರ ಕಡೆ ಕೆಟ್ಟ ದೃಷ್ಟಿ ಬೀರಿದರೆ ಸುಮ್ಮನೆ ಬಿಡುವುದಕ್ಕಾಗುತ್ತ ನಡಿ ನನ್ನೀ ಚೋಟಾ ಭೀಮ್ ತುಂಬಾನೇ ಆತುರ ಮಾಡ್ತಿದ್ದಾಳೆ.

ನಿಧಿ ಕಾರಿನಲ್ಲಿ ಅವಳ ಗೆಳತಿಯರು ಕುಳಿತರೆ ನೀತು ಅವರೆಲ್ಲರ ತಾಯಂದಿರನ್ನು ತನ್ನದರಲ್ಲಿ ಕೂರಿಸಿಕೊಂಡಿದ್ದು ಅಪ್ಪಂದಿರು ತಮ್ಮ ಗಾಡಿಗಳಲ್ಲಿ ಹಿಂಭಾಲಿಸುತ್ತ ಹೊರಟರು.
* *
* *
ಅರ್ಧ ಘಂಟೆಗೂ ಮುಂಚೆ.......
ಕಾಲೇಜಿನ ಆವರಣ......

ಸೂರಜ್ ತನ್ನ ಗೆಳೆಯರ ಪಟಾಲಂ ಜೊತೆಯಲ್ಲಿ ಕಾಲೇಜಿಗೆ ಬಂದರೆ ಅವನ ಹಿಂದೆಯೇ ಮಂತ್ರಿಯಾಗಿರುವ ಆತನ ತಂದೆ ಕಡೆಯ 40ಕ್ಕೂ ಹೆಚ್ಚು ಗುಂಡಾಗಳು ಬಂದಿದ್ದರು. ಪ್ರಿನ್ಸಿಪಾಲ್ ಇದನ್ನು ನೋಡಿದಾಗ ಪೋಲಿಸರಿಗೆ ಫೋನ್ ಮಾಡಿ ಕರೆಸಿಕೊಂಡಿದ್ದರೂ ಸೂರಜ್ ತನ್ನ ತಂದೆಯ ಹೆಸರನ್ನೇಳಿ ಅವರನ್ನು ಕಾಲೇಜಿನೊಳಗೆ ಬಾರದಿರುವಂತೆ ಹೊರಗೇ ನಿಲ್ಲುವಂತೆ ಮಾಡಿದ್ದನು. ಪೋಲಿಸರ ಮುಂದಾಳತ್ವವನ್ನು ಪ್ರತಾಪ್ ಖುದ್ದಾಗಿ ವಹಿಸಿಕೊಂಡಿದ್ದರೂ ತಾನು ಬರುವ ತನಕವೇನು ಮಾಡದಿರುವಂತೆ ನೀತು ಹೇಳಿದ್ದರಿಂದ ಸುಮ್ಮನೆ ನಿಂತಿದ್ದನು.

ಸೂರಜ್.....ಏಯ್ ಬೋಳಿ ಮಗನೇ ಪ್ರಿನ್ಸಿ ನಿನ್ನ ನಾಯಿ ಬುದ್ದೀನ ತೋರಿಸಿ ಬಿಟ್ಯಲ್ಲ ಪೋಲಿಸರಿಗೆ ಫೋನ್ ಮಾಡ್ತೀಯಾ ನೋಡಲ್ಲಿ ನಮ್ಮಪ್ಪನ ಹೆಸರು ಹೇಳ್ತಿದ್ದಂತೆ ಹೇಗೆ ನಾಯಿಗಳ ರೀತಿಯಲ್ಲಿ ಗೇಟ್ ಕಾಯುತ್ತ ಹೊರಗೇ ನಿಂತಿದ್ದಾರೆ. ಮೊದಲು ಆ ಲೌಡೀನ ನೋಡ್ತೀನಿ ಆಮೇಲೆ ನಿನಗೂ ಇದೆ ಕಣೋ ಹಬ್ಬ. ಎಲ್ಲೋ ಆ ಲೌಡಿ ಡಗಾರ್ ಮುಂಡೆ ಆ ಸೂಳೆ ಮು........

ಅವನ ಬಾಯಿಂದ ಅಷ್ಟು ಮಾತು ಬಂದಿದ್ದಷ್ಟೇ ಸೂರಜ್ ಮುಸುಡಿ ಮೇಲೆ ಬಲಿಷ್ಟವಾದ ಮುಷ್ಠಿಯ ಪ್ರಹಾರವಾಗಿ ನೆಲದಲ್ಲಿ ಚಿತ್ತಾಗಿ ಬಿದ್ದಿದ್ದನು.

ಸುಭಾಷ್.......ನನ್ನ ತಂಗಿ ಬಗ್ಗೇನೇ ಕೆಟ್ಟದಾಗಿ ಮಾತಾಡ್ತೀಯೆನೋ ಕಜ್ಜಿ ನಾಯಿ.

ಸೂರಜ್ ತನ್ನ ತಂದೆಯ ಗೂಂಡಾಗಳತ್ತ ತಿರುಗಿದರೆ ಅವರನ್ನಾಗಲೇ ರಕ್ಷಕರು ಬಡಿದು ಕೆಡವಿಕೊಂಡಿದ್ದರು. ಇದನ್ನು ನೋಡಿ ಸೂರಜ್ ಎದೆಯಲ್ಲಿ ಭಯ ಮೂಡಿದ್ದರೆ ಅವನ ಜೊತೆಯಲ್ಲಿದ್ದ ಸ್ನೇಹಿತರು ನಿಂತಲ್ಲೇ ನಡುಗುತ್ತಿದ್ದರು.

ಸುಭಾಷ್.......ಪ್ರಿನ್ಸಿಪಾಲ್ ಸರ್ ಈ ಕಂತ್ರಿ ನಾಯಿ ಜೊತೆಗಿರುವ ಇವನ ಸ್ನೇಹಿತರ ತಂದೆ ತಾಯಿಗೆ ಬರುವಂತೆ ಹೇಳಿದ್ದೀರಾ ?

ಪ್ರಿನ್ಸಿಪಾಲ್......ನಾನಾಗಲೇ ಫೋನ್ ಮಾಡಿರುವೆ ಇನ್ನೇನು ಎಲ್ಲ ಬರಬಹುದು ಸುಭಾಷ್.

ಸುಭಾಷ್.......ಇವರ ಅಪ್ಪ ಅಮ್ಮಂದಿರಿಗೂ ತಿಳಿಯಲು ಕಾಲೇಜಿಗೆ ಬಂದು ಮಕ್ಕಳು ಏನು ಘನಂಧಾರಿ ಕೆಲಸ ಮಾಡ್ತಾರೆ ಅಂತ ಅವರ ಏದುರಿಗೇ ಸರಿಯಾಗಿ ಬುದ್ದಿ ಕಲಿಸೋಣ.

ಸೂರಜ್ ಗ್ಯಾಂಗಿನ ಗೆಳೆಯರು ತಮ್ಮ ತಂದೆ ತಾಯಿಯರು ಕಾಲೇಜ್ ಕಡೆ ಬರುತ್ತಿದ್ದಾರೆಂಬ ವಿಷಯ ತಿಳಿದು ಒಬ್ಬರನ್ನೊಬ್ಬರು ಮುಂದೆ ಏನು ನಡೆಯುತ್ತೋ ಎಂಬ ಭಯದಿಂದ ನೋಡುತ್ತ ನಿಂತಿದ್ದರು.

ಸುಭಾಷ್......ಡಿಯರ್ ಸ್ಟೂಡೆಂಟ್ಸ್ ನಿಮ್ಮಲ್ಲಿ ಕೆಲವರ ಮನಸ್ಥಿತಿ ಹೇಗಿದೆಯಂತ ಗೊತ್ತಿದೆ. ತಮ್ಮೆದುರಿಗೇನೇ ನಡೆಯುತ್ತಿರಲಿ ಒಳ್ಳೆದು ಕೆಟ್ಟದ್ದೆಂದು ಯೋಚಿಸದೆ ಮೊಬೈಲಿನಲ್ಲಿ ವೀಡಿಯೋ ತೆಗೆಯುವ ಚಟವಿರುತ್ತೆ. ನಿಮ್ಮಲ್ಲಿ ಯಾರೆಲ್ಲ ವೀಡಿಯೋ ತೆಗೆಯುತ್ತಿರುವಿರೋ ಅದನ್ನು ನಿಲ್ಲಿಸಿ ನನಗೆ ತಂದು ತೋರಿಸಿ ಡಿಲೀಟ್ ಮಾಡ್ಬಿಡಿ ನಾನು ನಿಮಗೇನೂ ಮಾಡುವುದಿಲ್ಲ. ಅಕಸ್ಮಾತ್ ಆಮೇಲೆ ಚೆಕ್ ಮಾಡಿ ನಿಮ್ಮ ಮೊಬೈಲಲ್ಲಿ ಇಲ್ಲಿನ ವೀಡಿಯೋ ದೊರೆತರೆ ನಿಮ್ಮ ಮೊಬೈಲ್ ಕೂಡ ಸಿಗಲ್ಲ ಇನ್ಮುಂದೆ ಮೊಬೈಲ್ ಹಿಡಿದುಕೊಳ್ಳಲು ನಿಮ್ಮ ಬೆರಳೂ ನೆಟ್ಟಗಿರೋದಿಲ್ಲ.....ಎಂದು ಜೋರಾಗಿ ಘರ್ಜಿಸಿದನು.

ಅವನ ಕೋಪ ನೋಡಿ ಹೆದರಿದ ಕೆಲವು ವಿಧ್ಯಾರ್ಥಿಗಳು ಓಡೋಡಿ ಬಂದು ತಮ್ತಮ್ಮ ಮೊಬೈಲ್ ತೋರಿಸಿ ಇಲ್ಲಿವರೆಗೂ ತೆಗೆದಿದ್ದನ್ನೆಲ್ಲಾ ಡಿಲೀಟ್ ಮಾಡಿದರು.

ಸುಭಾಷ್....ಇನ್ಯಾರಾದರೂ ಇದ್ದರೆ ಈಗಲೇ ಬಂದ್ಬಿಡಿ ಇದೇ ನಿಮ್ಮ ಕೊನೆಯ ಅವಕಾಶ ಅಮೇಲೆ ಮೊಬೈಲು ಬೆರಳು ಎರಡೂ ಇರಲ್ಲ.

ಅವನು ಪುನಃ ಎಚ್ಚರಿಸಿದಾಗ ಇನ್ನಿಬ್ಬರು ಹುಡುಗರು ಮತ್ತು ಮೂರು ಜನ ಹುಡುಗಿಯರು ಬಂದು ತಾವು ಚಿತ್ರಿಸಿದ್ದ ವೀಡಿಯೋ ಡಿಲೀಟ್ ಮಾಡಿ ಸಾರಿ ಕೇಳಿದರು. ಹುಡುಗಿಯರಿಗೇನೂ ಹೇಳದೆ ಕಳುಹಿಸಿದ ಸುಭಾಷ್ ಇಬ್ಬರು ಹುಡುಗರ ಕಪಾಳಕ್ಕೆ ಬಲವಾಗಿ ಭಾರಿಸಿದನು.

ಸುಭಾಷ್......ನಾನಿಲ್ಲೇನು ತಮಾಷೆ ಮಾಡ್ತಿದ್ದೆ ಅಂದ್ಕೊಡ್ರಾ ಬ್ಲಡಿ ಐಡಿಯಟ್ಸ್ ಇನ್ಯಾರಾದರೂ ಮೊಬೈಲ್ ತೆಗೀಬೇಕಲ್ಲ ಆಗಿದೆ.

ನಾಲ್ಕು ಕಾರುಗಳು ಕಾಲೇಜಿನ ಗೇಟಿನೊಳಗೆ ಬಂದರೂ ಅದರಿಂದ ಕೇವಲ ವೀರ್ ಸಿಂಗ್ ಮಾತ್ರ ಹೊರಗಿಳಿದು ಸುಭಾಷ್ ಜೊತೆಯಲ್ಲಿ ಮಾತನಾಡುತ್ತ ನಿಂತನು. ಕಪ್ಪು ಮತ್ತು ಬಿಳೀ ಬಣ್ಣದ ರೇಂಜ್ ರೋವರ್ ಪ್ರವೇಶಿಸಿದ್ದು ಅಕ್ಕನ ಜೊತೆಯಲ್ಲಿ ಬಂದಿದ್ದ ನಿಶಾ ತಾನೇ ಕೆಳಗಿಳಿದು ಅಣ್ಣನ ಬಳಿಗೋಡಿ ಬಂದು ಅವನ ಹೆಗಲಿಗೇರಿದಳು.

ಸುಭಾಷ್.....ಏನಮ್ಮ ಚಿನ್ನಿ ಮರಿ ಕತ್ತಿ ತಂದಿದ್ದೀಯಲ್ಲ.

ನಿಶಾ ಖುಷಿಯಿಂದ.....ನಾನಿ ಫೇಟಿಂಗ್ ಮಾತೀನಿ ಅಣ್ಣ.

ಸುಭಾಷ್ ತಂಗಿಯನ್ನು ಮುದ್ದಾಡುತ್ತಿದ್ದಾಗ ನಿಧಿ ಕೂಡ ಬಂದವಳೇ ಅಣ್ಣನನ್ನು ತಬ್ಬಿಕೊಂಡರೆ ಅವಳ ಗೆಳತಿಯರು ವಿಷ್ ಮಾಡಿದರು. ಸುಭಾಷ್ ಮುಂದೋಗಿ ಚಿಕ್ಕಮ್ಮ ನೀತುವಿನ ಕಾಲಿಗೆ ನಮಸ್ಕರಿಸಿದ್ರೆ ನೀತು ಅವನ ಕೆನ್ನೆ ಸವರಿ.....

ನೀತು......ನೀನೆರಡೇ ದಿನದಲ್ಲಿ ಹಿಂದಿರುಗಿ ಬಂದ್ಬಿಟ್ಟೆ ಲೇಟಾಗುತ್ತೆ ಅಂತ ಹೇಳ್ತಿದ್ಯಲ್ವಾ ?

ಸುಭಾಷ್......ಕೆಲಸ ನೆನ್ನೆಯೇ ಮುಗಿದಿತ್ತು ವೀರ್ ಸಿಂಗ್ ಬಂದಾಗ ಫೋನ್ ಮಾಡಿದ್ದಕ್ಕೆ ನಾನೂ ಅವನ ಜೊತೆಯಲ್ಲೇ ಬಂದ್ಬಿಟ್ಟೆ.

ನೀತು......ಇವರೆಲ್ಲ ನಿಧಿ ಸ್ನೇಹಿತೆಯರ ತಂದೆ ತಾಯಿ ಇವನು ನನ್ನ ಹಿರಿಮಗ ಸುಭಾಷ್ ಅಂತ. ನಮಸ್ತೆ ಪ್ರಿನ್ಸಿಪಾಲ್ ಸರ್ ಈ ರಾಸ್ಕಲ್ ಇವತ್ತೂ ನಿಮ್ಜೊತೆ ಕೆಟ್ಟದಾಗಿ ಬಿಹೇವ್ ಮಾಡಿದ್ನಾ ?

ಬಸ್ಯನ ಹುಡುಗರಿಬ್ಬರು ಬೆಳಿಗ್ಗೆಯೇ ಕಾಲೇಜಿಗೆ ಬಂದು ಅಲ್ಲೇನು ನಡೆಯುತ್ತಿದೆ ಅಂತ ಗಮನಿಸುತ್ತಿದ್ದು ಈಗ ನೀತು ಹತ್ತಿರ ಬಂದು ನಡೆದಿದ್ದನ್ನೆಲ್ಲಾ ವರದಿಯೊಪ್ಪಿಸಿದರು.

ನೀತು......ವಿದ್ಯೆ ಕಲಿಸುವ ಗುರುಗಳು ದೇವರಿಗೆ ಸಮಾನ ನಿಮ್ಮಪ್ಪ ಮಂತ್ರಿ ಆಗೋದ ಅಂತ ನೀನೇನಾದ್ರೂ ಮಾಡಬಹುದು ಅಂತಲೇ ತಿಳಿದುಕೊಂಡಿದ್ದೀಯಾ ? ವೀರ್ ಸಿಂಗ್ ಇವನಪ್ಪ ಆ ನಾಯಿಯನ್ನು ಎಳ್ಕೊಂಡ್ ಬಾ ಪ್ರತಾಪ್ ನಿನ್ನ ಸಿಬ್ಬಂದಿಗಳನ್ನೂ ಒಳಗೆ ಕರೆಸು ಇವತ್ತೇ ಇದಕ್ಕೆ ಶುಭಂ ಹೇಳಿಬಿಡೋಣ.
***

No comments:

Post a Comment