ಬೆಳಿಗ್ಗೆ 11:00 ಘಂಟೆ.....
ನಿಶಾ—ಪೂನಂ ಇಬ್ಬರನ್ನು ಕರೆದುಕೊಂಡು ನೀತು ಬಹಳ ದಿನಗಳ ನಂತರ ಫುಡ್ ಯೂನಿಟ್ಟಿಗೆ ಹೊರಟಿದ್ದರೆ ರೇಂಜ್ ರೋವರ್ ಗಾಡಿ ಡ್ರೈವಿಂಗ್ ಸೀಟಲ್ಲಿ ವೀರ್ ಸಿಂಗ್ ಅವನ ಪಕ್ಕ ಸುಮೇರ್ ಸಿಂಗ್ ಕುಳಿತಿದ್ದನು.
ನಿಶಾ......ಮಮ್ಮ ನನ್ನ ಪೂನಿ ಐಸ್ ಬೇಕು ಮಮ್ಮ ಪೀಸ್.
ನೀತು......ಐಸ್ ಕ್ರೀಂ ಮನೆಯಲ್ಲೇ ಇದ್ಯಲ್ಲ ಕಂದ.
ನಿಶಾ.......ಆತು ಮಮ್ಮ ಐಸ್ ಬೇಡ ಚಾಕಿ ಬೇಕು.
ನೀತು......ನೀವಿಬ್ರೂ ಕೇಳಿಸಿಕೊಂಡ್ರಾ ನಿಮ್ಮ ರಾಜಕುಮಾರೀನ ಹೊರಗೆ ಕರೆತಂದರೆ ಸಾಕು ಇವಳಿಗೇನಾದ್ರೂ ಬೇಕು.
ವೀರ್ ಸಿಂಗ್......ಮಾತೆ ಒಂದು ಮಾತು ಹೇಳಲು ಅಪ್ಪಣೆಯಿದ್ಯಾ ನೀವು ಅನ್ಯತಾ ಭಾವಿಸಬಾರದು.
ನೀತು......ಹೇಳು ವೀರ್ ನೀವುಗಳೆಲ್ಲರೂ ಯಾವುದೇ ಮಾತನ್ನೂ ಸುಮ್ಮನೆ ಆಡುವುದಿಲ್ಲ ನಾನೇನೂ ಭಾವಿಸಲ್ಲ ಧೈರ್ಯವಾಗೇಳು.
ವೀರ್ ಸಿಂಗ್......ಹಿರಿಯ ರಾಜಕುಮಾರಿ ಚಿಕ್ಕವರಾಗಿದ್ದಾಗ ಅವರು ಬೆಳೆಯುವುದನ್ನು ನಾವು ಹತ್ತಿರದಿಂದ ನೋಡಿದ್ದೇವೆ. ಅರಮನೆಯ ಪರಿಸರದಲ್ಲಿ ಅವರಿಗೆ ಸರ್ವ ಸ್ವತಂತ್ರವಿದ್ದರೂ ಈಗ ನಿಮ್ಮ ಜೊತೆ ಕಿರಿಯ ರಾಜಕುಮಾರಿ ಬೆಳೆಯುತ್ತಿರುವ ಸ್ವೇಚಾಕಾರವನ್ನು ನಾವಲ್ಲಿ ನೋಡಿರಲಿಲ್ಲ ಮಾತೆ.
ಸುಮೇರ್......ಅರಮನೆಯಲ್ಲಿ ಅಲ್ಲಿಯದ್ದೇ ಆದ ಕಟ್ಟುಪಾಡುಗಳು ನಿಯಮಾವಳಿಗಳು ಇರುತ್ವೆ. ಅದರಿಂದಾಗಿ ಸಂಸ್ಥಾನದ ಮಗಳಿಗೆ ಸಾಮಾನ್ಯರ ಮಕ್ಕಳ ಜೊತೆ ಆತ್ಮೀಯವಾಗಿ ಬೆರೆಯುವ ಅವಕಾಶ ಇರುವುದಿಲ್ಲ. ಈಗ ನೋಡಿ ನಮ್ಮ ಕಿರಿಯ ರಾಜಕುಮಾರಿ ಮತ್ತು ಈ ಮಗುವಿನ ನಡುವೆ ಎಷ್ಟು ನಿಶ್ಕಲ್ಮಶವಾದ ಸ್ನೇಹ....ಪೀತಿ ಹಾಗು ಆಪ್ಯಾಯತೆಯಿದೆ. ನಿಜ ಹೇಳುವೆ ಮಾತೆ ನಮ್ಮ ರಾಜಕುಮಾರಿಯು ನಿಮ್ಮನ್ನು ತಾಯಿಯನ್ನಾಗಿ ಪಡೆಯುವುದಕ್ಕೆ ಪುಣ್ಣ ಮಾಡಿರಬೇಕು.
ನೀತು......ಸುಮೇರ್ ನೀನು ಹೇಳಿದ್ದು ತಪ್ಪು ಇವಳಲ್ಲ ನಾನಿವಳನ್ನು ಮಗಳಾಗಿ ಪಡೆಯುವುದಕ್ಕೆ ಪುಣ್ಯ ಮಾಡಿದ್ದೆ. ಇವಳು ರಾಜಕುವರಿ ಅಂತ ನಾನೀ ಮಾತನ್ನು ಹೇಳ್ತಿಲ್ಲ ಆದರೆ ಒಬ್ಬ ತಾಯಿಯಾಗಿ ಹೇಳ್ತಾ ಇದ್ದೀನಿ. ನಮ್ಮೆಜಮಾನರಿಗೆ ಹೆಣ್ಣು ಮಕ್ಕಳನ್ನು ಕಂಡರೆ ತುಂಬಾನೇ ಪ್ರೀತಿ ಆದರೆ ದೇವರಾಟ ನೋಡು ನನ್ನ ರಕ್ತ ಹಂಚಿಕೊಂಡು ಹುಟ್ಟಿದ ಇಬ್ಬರೂ ಗಂಡು ಮಕ್ಕಳೇ.
ನಮ್ಮಿಬ್ಬರ ಮದುವೆಯಾಗಿ 19 ವರ್ಷ ಆಗಿದ್ದರೂ ನಮ್ಮೆಜಮಾನರಿಗೆ ಹೆಣ್ಣು ಮಗಳಿಲ್ಲವಲ್ಲ ಎಂಬ ನೋವು ಇದ್ದರೂ ನಮ್ಮೆದುರಿಗೆ ಒಮ್ಮೆಯೂ ತೋರಿಸಿಕೊಳ್ಳುತ್ತಿರಲಿಲ್ಲ. ಈ ನನ್ನ ಬಂಗಾರಿ ನನ್ನ ಮಡಿಲಿಗೆ ಬಂದಾಗ ಅವರಿಗೆ ತುಂಬ ಸಂತೋಷ ಆಗಿದ್ದರೂ ಅವರಿಗಿಂತ ಖುಷಿಯಾಗಿದ್ದವನು ಕಿರಿಮಗ. ಇವಳಿಗೂ ಅಷ್ಟೆ ಅಣ್ಣನನ್ನು ಕಂಡರೆ ಪಂಚಪ್ರಾಣ ಅದಕ್ಕೆ ಯಾವಾಗಲೂ ಅವನನ್ನೇ ಗೋಳಾಡಿಸ್ತಾಳೆ.
ಇದೇ ರೀತಿ ಇವರು ಮಾತನಾಡುತ್ತ ಫುಡ್ ಯೂನಿಟ್ ತಲುಪಿದಾಗ ಪೂನಂ ಕೈಯನ್ನಿಡಿದ ನಿಶಾ ಎಲ್ಲಾ ಕಡೆಯೂ ಸುತ್ತಾಡತೊಡಗಿದಳು. ಅಲ್ಲಿನ ಮಾನೇಜರ್ ಜೊತೆ ಕೆಲಕಾಲ ಚರ್ಚಿಸಿ ಕೆಲಸಗಳು ಹೇಗೆ ನಡೆಯುತ್ತಿವೆ ಎಂಬುದನ್ನು ಗಮನಿಸಿದ ನೀತು ಕೆಲ ಸೂಚನೆಗಳನ್ನು ನೀಡಿದಳು. ಫುಡ್ ಯೂನಿಟ್ಟಿನ ಪಕ್ಕದಲ್ಲೇ ಚಿನ್ನಿ ಮಸಾಲೆಯ ಕಾರ್ಖಾನೆಯೂ ಇದ್ದು ಅಲ್ಲಿಗೂ ಬೇಟಿ ನೀಡಿ ಎಲ್ಲವನ್ನೂ ನೋಡಿ ರಜನಿಯ ಜೊತೆ ಕುಳಿತು ಮಾನೇಜರ್ ಚರ್ಚಿಸತೊಡಗಿದಳು.
ಮಾನೇಜರ್.....ಮೇಡಂ ನಾವೀಗ ಕರ್ನಾಟಕದ 15 ಜಿಲ್ಲೆಗಳಿಗೆ ನಮ್ಮ ಪ್ರಾಡಕ್ಟ್ ಸಪ್ಲೈ ಮಾಡ್ತಿದ್ದೀವಿ. ಇನ್ನುಳಿದ ಜಿಲ್ಲೆಗಳಿಂದ ನಮ್ಮ ಬಳಿ ಆರ್ಡರ್ಸ್ ಬರ್ತಿದೆ ಆದರಿನ್ನೂ ಸರಬರಾಜು ಮಾಡುತ್ತಿಲ್ಲ.
ನೀತು.......ಅದರ ಬಗ್ಗೆ ಗೊತ್ತಿದೆ ಸಧ್ಯಕ್ಕೀಗ ನಮ್ಮಲ್ಲಿನ ಉತ್ಪಾದನಾ ಪ್ರಮಾಣ ಕಡಿಮೆಯಿದೆ ಆದ್ದರಿಂದ ಅಲ್ಲಿಗೂ ಸಪ್ಲೈ ಮಾಡುವುದಕ್ಕೆ ಸಾಧ್ಯವಿಲ್ಲ. ಮುಂದಿನ ವಾರದಲ್ಲಿ ಇದರ ಹಿಂದೆ ಇನ್ನೊಂದು ಶೆಡ್ ರೆಡಿಯಾಗುತ್ತೆ ಜೊತೆಗೆ ಮಿಷನರೀಸ್ ಕೂಡ ಬರಲಿದೆ. ಅಲ್ಲಿ ಕೆಲಸ ಪ್ರಾರಂಭವಾದ ನಂತರ ರಾಜ್ಯದ ಯಾವುದೇ ಭಾಗದಿಂದ ಆರ್ಡರ್ ಬಂದರೂ ಸ್ವೀಕರಿಸಿ. ನಾವು ಸಪ್ಲೈ ಮಾಡುತ್ತಿರುವ ಪ್ರಾಡಕ್ಟುಗಳಿಗೆ ಪೇಮೆಂಟ್ ಯಾವ ರೀತಿ ಬರ್ತಿದೆ.
ಮಾನೇಜರ್......ಮೇಡಂ ಪೇಮೆಂಟಿನ ಚಿಂತೆಯಿಲ್ಲ 30 ದಿನಗಳು ಕ್ರೆಡಿಟ್ ಪೀರಿಯಡ್ ಇರುತ್ತೆ ಅಷ್ಟರಲ್ಲಿ ಹಳೆಯ ಪೇಮೆಂಟ್ ನೀಡಿ ಹೊಸದಾಗಿ ಎರಡು ಸಲ ಆರ್ಡರ್ಸ್ ಕೂಡ ಕೊಡ್ತಿದ್ದಾರೆ. ಎಲ್ಲರೂ ಆನ್ ಲೈನ್ ಪೇಮೆಂಟ್ ಮಾಡ್ತಾರೆ ಆದರೆ ಕೆಲವರು ಮಾತ್ರ ಕ್ಯಾಷ್ ಪೇಮೆಂಟೇ ಮಾಡೋದು ಅಂತ ಹೇಳ್ತಾರೆ.
ನೀತು.......ನಮ್ಮ ಕಂಪನಿ ಕ್ಯಾಷ್ ಪೇಮೆಂಟ್ ಒಪ್ಪಲ್ಲ ಅಂತ ನೀವು ಹೇಳಲ್ಲಿಲ್ಲವಾ ?
ಮಾನೇಜರ್.......ಹೇಳಿದರೂ ಅವರು ನಾವು ಕ್ಯಾಷೇ ಕೊಡೋದು ಆನ್ ಲೈನ್ ಮಾಡಲ್ಲ ಅಂತಾರೆ ಮೇಡಂ.
ನೀತು.......ಅವರ ಲಿಸ್ಟ್ ತೆಗೆದುಕೊಂಡು ಬನ್ನಿ.
ಮಾನೇಜರ್ ಲಿಸ್ಟ್ ತರುವಷ್ಟರಲ್ಲಿ ಸುಭಾಷ್ ಕೂಡ ಬಂದಿದ್ದು......
ನೀತು.......ನೀನು ಬಂದಿದ್ದು ಒಳ್ಳೆದಾಯ್ತು ಕಣೋ ಈ ಲಿಸ್ಟಿನಲ್ಲಿ ನಮ್ಮ ಪ್ರಾಡಕ್ಟ್ ಸ್ವೀಕರಿಸುವವರ ಹೆಸರಿದೆ ಇವರು ನಾವು ಕ್ಯಾಷಲ್ಲಿ ಮಾತ್ರ ಪೇಮೆಂಟ್ ಕೊಡೋದು ಅಂತಿದ್ದಾರಂತೆ ಇವರೊಟ್ಟಿಗೆ ಸ್ವಲ್ಪ ಮಾತನಾಡು ಒಪ್ಪಿಕೊಳ್ಳದಿದ್ರೆ ಅವರಿಗೆ ಸಪ್ಲೈ ಮಾಡಲ್ಲ ಅಂತೇಳು.
ಸುಭಾಷ್......ನಾನೆಲ್ಲ ನೋಡಿಕೊಳ್ತೀನಿ ಚಿಕ್ಕಮ್ಮ ಚಿನ್ನಿ ಎಲ್ಲಿ ?
ನೀತು.......ಇಬ್ಬರೂ ಒಳಗೆ ಭಟ್ಟರ ಜೊತೆಯಲ್ಲಿದ್ದಾರೆ ಮಾನೇಜರ್ ನನ್ನ ಮಗ ಅವರ ಜೊತೆ ಮಾತಾಡ್ತಾನೆ ನೀವು ಇವನ ಜೊತೆಯಲ್ಲೇ ಡಿಸ್ಕಸ್ ಮಾಡಿ.
ಮಾನೇಜರ್ ಜೊತೆ ರಜನಿ ಮತ್ತು ಸುಭಾಷ್ ಚರ್ಚಿಸುತ್ತ ಕುಳಿತರೆ ಭಟ್ಟರನ್ನು ಮಾತನಾಡಿಸಿಕೊಂಡು ಅಲ್ಲಿನ ಕೆಲಸಗಳನ್ನು ವೀಕ್ಷಿಸಿದ ನೀತು ಮಕ್ಕಳ ಜೊತೆ ಮನೆಗೆ ಹಿಂದಿರುಗಿದಳು.
* *
* *
ಶನಿವಾರ ಬೆಳಿಗ್ಗೆ.........
ಮನೆಯ ಮಕ್ಕಳೆಲ್ಲರೂ ಮನೆಯಂಗಳದಲ್ಲಿ ಕ್ರಿಕೆಟ್ ಆಡುತ್ತಿದ್ದರೆ ನೀತು ಸಹ ಅದನ್ನು ನೋಡುತ್ತ ಕುಳಿತಳು. ನಿಶಾ—ಪೂನಂ ಇಬ್ಬರೂ ಕ್ಷೇತ್ರ ರಕ್ಷಕರಾಗಿದ್ದು ಬಾಲ್ ಹಿಂದೆ ಓಡಿ ಅದನ್ನೆತ್ತಿಕೊಂಡು ಯಾರು ಬೌಲಿಂಗ್ ಮಾಡುತ್ತಾರೋ ಅವರತ್ತ ಎಸೆಯುತ್ತಿದ್ದರು. ಕೆಲಹೊತ್ತು ಕಳೆದಾಗ ಬಾಲ್ ಹಿಂದೆ ಓಡುತ್ತಿದ್ದ ಪೂನಂ ಮುಖದಲ್ಲಿ ಆಯಾಸ ಮತ್ತು ಆಗುತ್ತಿದ್ದ ಬದಲಾವಣೆಗಳನ್ನು ಗಮನಿಸಿದ ನೀತುಳಿಗೆ ಸ್ವಲ್ಪ ಅನುಮಾನವಾಗಿ......
ನೀತು.......ಪೂನಿ ಬಾರಮ್ಮ ಇಲ್ಲಿ ಕಂದ.
ಪೂನಂ ಏದುಸಿರು ಬಿಡುತ್ತ ಬಂದು.......ಹೂಂ ಅತ್ತೆ.
ನೀತು.......ತುಂಬ ಸುಸ್ತಾಗ್ತಿದೆಯಾ ಕಂದ.
ಪೂನಂ.....ಹೂಂ ಅತ್ತೆ ನಂಗೆ ಸುಸ್ಸಿ ಆತು.
ನೀತು.......ನಡಿ ಕಂದ ಸ್ವಲ್ಪ ಹೊತ್ತು ಆರಾಮವಾಗಿ ಮಲಗುವಂತೆ ಎಲ್ಲಾ ಸರಿ ಹೋಗುತ್ತೆ.
ಪೂನಂಳನ್ನೆತ್ತಿಕೊಂಡು ಮನೆಯೊಳಗೆ ಬಂದ ನೀತು ಅವಳನ್ನು ಸೋಫಾದಲ್ಲಿ ಮಲಗಿಸಿ ತಲೆಯನ್ನು ಮಡಿಲಲ್ಲಿಟ್ಟುಕೊಂಡು ತಟ್ಟುತ್ತ ಕುಳಿತಿದ್ದನ್ನು ನೋಡಿ........
ರೇವತಿ.......ಯಾಕಮ್ಮ ಏನಾಯ್ತು ?
ನೀತು.....ಅಮ್ಮ ಪೂನಂ ಇನ್ನೂ ಸಂಪೂರ್ಣ ಆರೋಗ್ಯವಂಳಾಗಿದ್ದ ಹಾಗೆ ಕಾಣಿಸ್ತಿಲ್ಲ.
ರಾಜೀವ್ ಗಾಬರಿಗೊಂಡು......ಯಾಕಮ್ಮ ಅಂತದ್ದೇನಾಯ್ತು ನಿನಗೆ ಹೀಗ್ಯಾಕೆ ಅನ್ನಿಸ್ತಿದೆ ?
ನೀತು........ಅಪ್ಪ ಆಟವಾಡ್ತಿದ್ದಾಗ ಇವಳ ಮುಖದಲ್ಲಿ ತುಂಬಾನೇ ಆಯಾಸವಾಗುವ ಲಕ್ಷಣ ಕಾಣಿಸ್ತಿತ್ತು. ಇವಳನ್ನು ಕೇಳಿದಾಗ ನನಗೆ ಸುಸ್ತಾಗಿದೆ ಅಂತಿದ್ದಾಳೆ ಹೀಗಾಗಬಾರದಿತ್ತು.
ಹರೀಶ......ನಡಿ ನೀತು ನಾವೀಗಲೇ ನಿಮ್ಮೂರಿನಲ್ಲಿ ಇವಳಿಗೆ ಚಿಕಿತ್ಸೆ ನೀಡಿದ ಡಾಕ್ಟರ್ ಹತ್ತಿರ ತೋರಿಸಿಕೊಂಡು ಬರೋಣ.
ನೀತು......ರೀ ಇವಳ ಅಪ್ಪ ಅಮ್ಮನಿಗೂ ಹೇಳಿಬಿಡೋಣ ತಾಳಿ.
ಹರೀಶ......ಅವರಿಗೇನೂ ಹೇಳೋದು ಬೇಡ ನಡಿ ನಂದಿನಿ ನನ್ನ ತಂಗಿ ಮಗಳ ವಿಷಯ ಕೇಳಿ ಸುಮ್ಮನೆ ಗಾಬರಿಯಾಗ್ತಾಳೆ ನೀನು ಬೇಗ ರೆಡಿಯಾಗು ಹೋಗಿ ಬರೋಣ ನಾನು ಡಾಕ್ಟರಿಗೆ ಫೋನ್ ಮಾಡಿ ಬರ್ತಿರುವ ವಿಷಯ ಹೇಳ್ತೀನಿ.
ಅಷ್ಟರಲ್ಲೇ ನಿಶಾ ಅಕ್ಕ ಬಂತು....ಅಕ್ಕ ಬಂತು....ಎಂದು ಕೂಗುತ್ತಾ ಮನೆಯೊಳಗೋಡಿ ಬಂದು ಅಮ್ಮನ ಮಡಿಲಲ್ಲಿ ಮಲಗಿದ್ದ ಪೂನಿ ಕಡೆ ನೋಡಿ ಸೈಲೆಂಟಾಗಿ ಗೆಳತಿಯನ್ನೇ ನೋಡುತ್ತ ನಿಂತು ಬಿಟ್ಟಳು.
ನಿಧಿ.....ಆಚಾರ್ಯರು ಅವರಿಬ್ಬರ ಶಿಷ್ಯರ ಜೊತೆ ರಾಣಾ ಮನೆಗೆ ಪ್ರವೇಶಿಸಿದರು.
ಆಚಾರ್ಯರು ಎಲ್ಲರಿಗೂ ಆಶೀರ್ವಧಿಸಿ........ಏನಮ್ಮ ನೀತು ನಿನ್ನ ಮಗಳು ಮನೆಗೆ ಹಿಂದಿರುಗಿದ್ದರೂ ನಿನ್ನ ಮುಖದಲ್ಲೇನೋ ಚಿಂತೆ ಮೂಡಿರುವಂತಿದೆಯಲ್ಲ ಏನಾಯ್ತು ?
ಹರೀಶ ಗುರುಗಳಿಗೆ ಪೂನಂ ಬಗ್ಗೆ ಹೇಳಿದಾಗ.....
ನಿಧಿ.......ಅಪ್ಪ ನಾನಿಲ್ಲಿಂದ ಹೊರಡುವ ಹಿಂದಿನ ದಿನವೇ ಇವಳನ್ನು ಗಮನಿಸಿದ್ದೆ ಆಗಲೇ ತುಂಬ ಆಯಾಸವಾದಂತಿದ್ದಳು. ಇವಳನ್ನೇನು ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗಬೇಕಿಲ್ಲ ಅಮ್ಮ ಇವಳಿಗೆ ನಾನೇ ಔಷಧಿ ತಂದಿದ್ದೀನಿ.
ನೀತು.......ಏನೇ ಹೇಳ್ತಿದ್ದೀಯಾ ? ನೀನಾವತ್ತೆ ಗಮನಿಸಿದರೆ ನನಗೆ ವಿಷಯವನ್ನೇಕೆ ಹೇಳಲಿಲ್ಲ. ಈಗ ಔಷಧಿ ಯಾರು ಕೊಟ್ಟಿರೋದು ?
ನಿಧಿ......ಅಮ್ಮ ಕಳೆದ ಶನಿವಾರ ಇವರಿಬ್ಬರು ಆಡುತ್ತಿದ್ದಾಗ ಪೂನಂ ಬೇಗನೇ ಸುಸ್ತಾಗಿ ಏದುಸಿರು ಬಿಡುತ್ತ ಕುಳಿತಿದ್ದನ್ನು ನಾನು ನೋಡಿದೆ ಆದರೆ ನಿಮಗೆ ಹೇಳಿರಲಿಲ್ಲ. ಶಂಕುಸ್ಥಾಪನೆ ಮುಗಿಸಿದ ನಂತರ ಮುನಿವರ್ಯರ ಶಿಷ್ಯರೊಬ್ಬರ ಜೊತೆ ನಾನು ಹೋಗಿದ್ದು ನಿಮಗೂ ಗೊತ್ತಿದೆ. ಗುರುವಾರ ನಾವಿದ್ದಲ್ಲಿಗೆ ಅವರ ಶಿಷ್ಯ ಭಾಸ್ಕರ್ ಬಂದಾಗ ಅವರಿಗೆ ಪೂನಂ ವಿಷಯ ಹೇಳಿದೆ. ಅವರ ಪ್ರಕಾರ ಹೃದಯದ ಶಸ್ತ್ರ ಚಿಕಿತ್ಯೆಯಾದ ನಂತರವೂ ಪೂನಂ ಹೃದಯ ಸಾಮಾನ್ಯ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಅದನ್ನು ಗುಣಪಡಿಸುವುದಕ್ಕಾಗಿ ನನಗೊಂದು ದ್ರವ್ಯ ನೀಡಿದ್ದಾರೆ ಇದನ್ನು ಕೆಲವು ಪದಾರ್ಥಗಳೊಟ್ಟಿಗೆ ಬೆರೆಸಿ ಪ್ರತಿದಿನ ಬೆಳಿಗ್ಗೆ ರಾತ್ರಿ ಇವಳಿಗೆ ತಿನ್ನಿಸಬೇಕಂತೆ. ಇದನ್ನೆಲ್ಲಾ ಮಾಡಿದರೆ ಒಂದು ತಿಂಗಳಿನೊಳಗೆ ಪೂನಂ ಹೃದಯವೂ ಸಾಮಾನ್ಯ ರೀತಿ ಕೆಲಸ ಮಾಡುವುದಕ್ಕೆ ಪ್ರಾರಂಭಿಸುತ್ತೆಂದು ಹೇಳಿದರು.
ನೀತು.......ದೇವರ ದಯೆ ಮುನಿವರ್ಯರು ನಮ್ಮನ್ನು ಉದ್ದರಿಸಲು ಬಂದಿರುವಂತಿದೆ. ಯಾವುದರ ಜೊತೆ ಬೆರೆಸಬೇಕಂತೆ ?
ನಿಧಿ........ಕಲ್ಲುಸಕ್ಕರೆ.....ಗೊಡಂಬಿ...ಬಾದಾಮಿ.....ಖರ್ಜೂರ.... ಒಣದ್ರಾಕ್ಷಿ......ಕೇಸರಿ......ಇನ್ನೂ ಹದಿನೈದು ಪದಾರ್ಥಗಳನ್ನು ಹುರಿದ ನಂತರ ಕುಟ್ಟಿಯೇ ಪುಡಿ ಮಾಡಬೇಕಂತೆ. ಒಂದು ಚಮಚ ಪುಡಿಯ ಜೊತೆ ಒಂದು ಚಮಚ ದ್ರವ್ಯವನ್ನು ಬೆರೆಸಿ ತಿನ್ನಿಸುವಂತೆ ಹೇಳಿದ್ದಾರೆ.
ಸುಮ......ಐದಾರು ಪದಾರ್ಥ ಬಿಟ್ಟರೆ ಉಳಿದೆಲ್ಲವೂ ಮನೆಯಲ್ಲಿದೆ
ಹರೀಶ.......ಸುಮ ಮನೆಯಲ್ಲಿರುವುದಿಲ್ಲೇ ಇರಲಿ ಗಿರೀಶ ಹೋಗಿ ಎಲ್ಲವನ್ನೂ ತಂದ್ಬಿಡು ನಿಧಿ ಇವನಿಗೆ ಲಿಸ್ಟ್ ಬರೆದುಕೊಡಮ್ಮ.
ರೇವತಿ.......ಎಲ್ಲಾ ಪನ್ಸಾರಿ ಅಂಗಡಿಯಲ್ಲಿ ಸಿಗುತ್ತೆ ಕಣಪ್ಪ ಅಲ್ಲಿಂದ ತಂದ್ಬಿಡು.
ಗಿರೀಶ ತನ್ನೊಂದಿಗೆ ತಮ್ಮನನ್ನು ಕರೆದುಕೊಂಡು ಹೋದಾಗ ಎಲ್ಲರು ಹೃಷಿಕೇಶದ ವಿದ್ಯಾಲಯದ ಬಗ್ಗೆ ಮಾತನಾಡುತ್ತಿದ್ದರೆ ಅಮ್ಮನ ಮಡಿಲಲ್ಲಿ ಕುಳಿತಿದ್ದ ಪೂನಂ ಕೆನ್ನೆ ಸವರುತ್ತ ಅವಳನ್ನುಪಚರಿಸುತ್ತಿದ್ದ ನಿಶಾ ಕಣ್ಣಿನಿಂದ ಕಂಬನಿ ಜಿನುಗಿತು.
ನಿಶಾ.......ಮಮ್ಮ ಪೂನಿ ಏನ್ ಆತು ಮಮ್ಮ.
ನೀತು.....ಏನಿಲ್ಲ ಕಂದ ಪೂನಿಗೆ ಸುಸ್ತಾಗ್ತಿದೆ ಸ್ಶಲ್ಪ ದಿನ ನೀವಿಬ್ಬರೂ ಹೊರಗೆ ಆಟವಾಡದೆ ಮನೆಯೊಳಗೆ ಆಟವಾಡಿ.
ನಿಶಾ......ಆತು ಮಮ್ಮ.
ಪೂನಂ......ನಿಶಿ ನಂಗೆ ಸುಸಿ ಆತು.
ನಿಶಾ......ಬಾ ನಾನಿ ತಾಚಿ ಮಾಡನ ಬಾ.....ಎಂದು ಗೆಳತಿಯ ಕೈ ಹಿಡಿದು ಮಹಡಿಯ ರೂಮಿಗೆ ಕರೆತಂದು ಇಬ್ಬರೂ ಮಲಗಿಬಿಟ್ಟರು.
ಮನೆಯವರು ಗುರುಗಳ ಜೊತೆ ಮುಂದಿನ ಕಾರ್ಯದ ಬಗ್ಗೆ ಚರ್ಚೆ ನಡೆಸುತ್ತಿದ್ದಾಗ ಪೂನಂ ತಂದೆ ತಾಯಿಯರಾದ ವೆಂಕಟ್—ನಂದಿನಿ ಮನೆಗೆ ಬಂದರು. ಹರೀಶ ಅವರಿಗೆಲ್ಲಾ ವಿಷಯ ತಿಳಿಸಿದಾಗ ನಿಧಿ ಔಷಧಿಯನ್ಯಾವ ಪ್ರಮಾಣದಲ್ಲಿ ತಿನ್ನಿಸಬೇಕೆಂದು ಹೇಳಿಕೊಟ್ಟಳು.
ನಂದಿನಿ......ನಿಧಿ ನೀನವಳ ಸುಸ್ತನ್ನು ಗ್ರಹಿಸಿ ಅದಕ್ಕೆ ಬೇಕಾಗಿರುವ ಔಷಧಿಯನ್ನೂ ತಂದಿದ್ದೀಯಲ್ಲಮ್ಮ ನಿನ್ನೀ ಋಣ ತೀರಿಸಲಾಗದು.
ನಿಧಿ......ಆಂಟಿ ನಿಶಾ ನನಗೇಗೋ ಹಾಗೆಯೇ ಪೂನಂ ಕೂಡ ನನ್ನ ತಂಗಿಯೇ ಅಲ್ಲವಾ ? ಅಪ್ಪ ನಿಮ್ಮನ್ನು ತಂಗಿಯನ್ನಾಗಿ ಸ್ವೀಕರಿಸಿರುವ ಕಾರಣ ನೀವು ನನಗೆ ಅತ್ತೆಯೂ ಆಗಬೇಕಲ್ವಾ. ಧೈರ್ಯವಾಗಿರಿ ಆಂಟಿ ಪೂನಂ ಸಂಪೂರ್ಣ ಗುಣಮುಖಳಾಗಿ ನಿಶಾ ಜೊತೆಯಲ್ಲಿ ಕುಣಿದಾಡುವುದನ್ನು ನೀವು ನೋಡ್ತೀರ.
ರಾಜೀವ್.....ನಾಳೆ ಬೆಳಿಗ್ಗೆ ನೀವಿಬ್ಬರೂ ರೆಡಿಯಾಗಿ ಬಂದ್ಬಿಡಿ ನಾವು ಶೃಂಗೇರಿಗೆ ಹೋಗಿಬರೋಣ.
ರಜನಿ.......ಆದರೆ ಪೂನಂ ಇಲ್ಲೇ ಇರ್ತಾಳೆ ನೀವು ಬಟ್ಟೆಗಳನ್ನು ತನ್ನಿ ಸಾಕು ಇಲ್ಲೇ ರೆಡಿಯಾಗ್ತಾಳೆ.
ಇಬ್ಬರೂ ಸರಿಯೆಂದು ಸಂಜೆವರೆಗೂ ಮಗಳೊಟ್ಟಿಗಿದ್ದು ಮನೆಗೆ ತೆರಳಿದರು.
* *
* *
ರಾತ್ರಿ ಊಟವಾದ ನಂತರ ಅಣ್ಣಂದಿರ ಜೊತೆ ಕೀಟಲೆ ಮಾಡುತ್ತಿದ್ದ ನಿಶಾ ಗೆಳತಿ ಪೂನಂಳನ್ನು ಕರೆದುಕೊಂಡು ಅಪ್ಪ ಅಮ್ಮನ ರೂಮಿಗೆ ಬಂದು ಮಲಗಿಬಿಟ್ಟರು. ನೀತು ಕೆಲಸ ಮುಗಿಸಿ ಮೇಲೆ ಬಂದಾಗ ಹೇಗೇಗೋ ತಿರುಗಿ ಮಲಗಿದ್ದ ಮಕ್ಕಳನ್ನು ಸರಿಯಾಗಿ ಮಲಗಿಸಿ ಹೊದ್ದಿಸುತ್ತಿದ್ದಾಗ ಹರೀಶ ಮೂವರು ಮಕ್ಕಳೊಟ್ಟಿಗೆ ಬಂದನು.
ನಿಧಿ.......ಅಮ್ಮ ನಿಮಗೆ ಚಿಕಿತ್ಸೆ ನೀಡಿದ್ದ ಮುನಿವರ್ಯರು ನಮಗೆ ಸಂದೇಶ ಕಳುಹಿಸಿದ್ದಾರೆ. ವಿಜಯದಶಮಿಗೂ ಆರು ದಿನ ಮುಂಚೆ ನಾವಾರೂ ಜನ ಹಿಮಾಚಲ ಪ್ರದೇಶದ ಕಾಲ್ಪಾ ಎಂಬ ಊರಿಗೆ ಹೋಗ್ಬೇಕು. ಅಲ್ಲಿಂದ ಅವರ ಶಿಷ್ಯ ಭಾಸ್ಕರ್ ಮುನಿವರ್ಯರು ವಾಸಿಸುವ ಸ್ಥಳಕ್ಕೆ ನಮ್ಮನ್ನು ಕರೆದೊಯ್ಯುತ್ತಾರಂತೆ.
ನೀತು.....ನಾವು ಆಯುಧ ಪೂಜೆ ದಿನ ಇರಲಾಗುವುದಿಲ್ಲವಾ ?
ನಿಧಿ.......ಅಮ್ಮ ನವರಾತ್ರಿ ಪ್ರಾರಂಭವಾಗೋದು ಸೋಮವಾರ ನಾವಲ್ಲಿಗೆ ಹೋಗಬೇಕಾಗಿರುವುದು ಬುಧವಾರ ನಾವಲ್ಲಿ ತಲುಪಿ ಮುನಿವರ್ಯರನ್ನು ಬೇಟಿಯಾಗಿ ಕಿನ್ನರ್ ಕೈಲಾಶದಲ್ಲಿ ಪೂಜೆಯನ್ನು ನೆರವೇರಿಸಿ ಭಾನುವಾರ ಹಿಂದಿರುಗಬಹುದು ಆಯುಧ ಪೂಜೆಯು ಸೋಮವಾರ ತಾನೇ.
ನೀತು......ಕಿನ್ನರ್ ಕೈಲಾಶ್ ಪರ್ವತವಾ ? ಇದ್ಯಾವ ಜಾಗ ನಾನಂತು ಮುಂಚೆ ಕೇಳಿರಲಿಲ್ಲ.
ಗಿರೀಶ.......ಅಮ್ಮ ಇಲ್ನೋಡಿ ವೀಡಿಯೊ ಬೆಟ್ಟದ ಮೇಲಿರುವ ಶಿವ ಲಿಂಗ ಆದರೆ ಅಲ್ಲಿಗೆ ತಲುಪುವುದಕ್ಕೆ ಬೆಟ್ಟ ಹತ್ತಬೇಕು ಸ್ವಲ್ಪ ಕಷ್ಟ.
ವೀಡಿಯೋ ನೋಡಿ ಹರೀಶ........ಚಿನ್ನೀನ ನಾನೆತ್ತಿಕೊಳ್ತೀನಿ ನೀತು ನಿನಗೆ ಹತ್ತುವುದಕ್ಕೇನೂ ಶ್ರಮವಾಗಲ್ಲ ತಾನೇ ?
ನೀತು.....ರೀ ನನ್ನ ಬಗ್ಗೆ ಯೋಚಿಸಬೇಡಿ ನಾನು ಹತ್ತುತ್ತೀನಿ.
ಗಿರೀಶ........ಅಪ್ಪ ಒಂದು ಬ್ಯಾಕ್ ಪ್ಯಾಕ್ ತೆಗೆದುಕೊಳ್ಳೋಣ ಅದೇ ಮಕ್ಕಳನ್ನು ಕೂರಿಸಿಕೊಳ್ತಾರಲ್ಲ ಆ ರೀತಿಯದ್ದು ಅದರಲ್ಲಿ ಚಿನ್ನೀನ ಕೂರಿಸಿ ನಾನು ಬೆನ್ನಿಗೆ ನೇತಾಕಿಕೊಂಡು ಬೆಟ್ಟ ಹತ್ತುತ್ತೀನಿ.
ಹರೀಶ.....ಆಯ್ತು ಕಣಪ್ಪ ನಾಳೆಯೇ ತರೋಣ ಚಿನ್ನೀನ ನಾನು ಎತ್ತಿಕೊಳ್ತೀನಿ ನಿನಗೆ ಕಷ್ಟವಾಗುತ್ತೆ.
ಗಿರೀಶ......ಏನೂ ಆಗಲ್ಲ ಅಪ್ಪ ಚಿನ್ನಿ ಹೂವಿನಷ್ಟೇ ಭಾರವಿರೋದು ಆರಾಮವಾಗಿ ಎತ್ತಿಕೊಳ್ತೀನಿ ಆಗದಿದ್ದಾಗ ನೀವೆತ್ತುಕೊಳ್ಳಿ ಅಷ್ಟೆ.
ನೀತು......ಆಯ್ತು ಕಣಪ್ಪ ನೀನೇ ಎತ್ಕೊ ನಿಂದೇನಪ್ಪ ಸುರೇಶ ?
ನಿಧಿ ನಗುತ್ತ.......ಅಮ್ಮ ಸುರೇಶ ಆಗಲೇ ಡಿಸೈಡ್ ಮಾಡಿದ್ದಾನೆ ನನ್ನನ್ನು ಹೊತ್ಕೊಂಡು ಬೆಟ್ಟ ಹತ್ತುತ್ತಾನಂತೆ.
ಸುರೇಶ ಗಾಬರಿಯಾಗಿ.....ಅಕ್ಕ ತಮಾಷೆ ಮಾಡ್ತಿದ್ದೀರ ತಾನೇ.
ನಿಧಿ......ಇಲ್ಲ ಕಣೋ.
ಸುರೇಶ......ಹಾಗಾದ್ರೆ ಎರಡು ವಾರಕ್ಕಾಗುವಷ್ಟು ಊಟ ಮಲಗಲು ಟೆಂಟ್ ಎಲ್ಲವನ್ನೂ ತೆಗೆದುಕೊಳ್ಳಬೇಕಲ್ಲ ಅದನ್ಯಾರು ಹೊರ್ತಾರೆ ?
ನಿಧಿ.......ಅದೆಲ್ಲ ಯಾಕೆ ಬೇಕೋ ?
ಸುರೇಶ.....ಮತ್ತಿನೇನಕ್ಕ ನಿಮ್ಮನ್ನ ಹೊತ್ಕೊಂಡು ಬೆಟ್ಟ ಹತ್ತುವುದಕ್ಕೆ ನನಗಷ್ಟು ಟೈಮಾದರೂ ಬೇಕಲ್ಲವಾ.
ನಿಧಿ.......ನಡಿ ತರ್ಲೆ ಮಲಕ್ಕೊ ಬೆಳಿಗ್ಗೆ ಬೇಗ ಏಳ್ಬೇಕು.
ಸುರೇಶ....ನಡೀರಿ ಅಕ್ಕ ಇವತ್ತು ನಿಮ್ಜೊತೆಯೇ ಮಲಗ್ತೀನಿ.
ಮಕ್ಕಳು ತೆರಳಿದ ನಂತರ ದಂಪತಿಗಳು ಒಬ್ಬರೊಬ್ಬರ ಕೈಯನ್ನಿಡಿದು ಹಾಯಾಗಿ ಮಲಗಿದ್ದ ನಿಶಾ—ಪೂನಂರನ್ನು ನೋಡುತ್ತ ಅವರ ಬಗ್ಗೆ ಮಾತನಾಡಿ ತಾವೂ ಮಲಗಿಕೊಂಡರು.
* *
* *
ಭಾನುವಾರ........
ಮನೆಯವರೆಲ್ಲರೂ ಬೇಗನೆದ್ದು ರೆಡಿಯಾಗಿ 7 ಘಂಟೆಯ ಹೊತ್ತಿಗೆ ತಿಂಡಿಯನ್ಶ ಸಿದ್ದಪಡಿಸಿದ್ದರು. ಮೂವರು ಗುರುಗಳು ಕೇವಲ ಹಣ್ಣು ಹಾಲನ್ನು ಮಾತ್ರ ಸೇವಿಸಿದರೆ ಮನೆಯವರು ತಿಂಡಿ ಮುಗಿಸಿದರು. ಎಲ್ಲರೂ ಒಟ್ಟಿಗೆ ಶೃಂಗೇರಿ ಹೋಗಲಿಕ್ಕೆ ಅನುಕೂಲವಾಗುವಂತೆ ಸುಸಜ್ಜಿತವಾದ ಬಸ್ಸಿನ ವ್ಯವಸ್ಥೆ ಮಾಡಲಾಗಿದ್ದು ಅದರಲ್ಲೆ ಎಲ್ಲರೂ ಪ್ರಯಾಣ ಬೆಳೆಸಿದರು. ಶೃಂಗೇರಿ ತಲುಪಿದಾಗ.......
ಆಚಾರ್ಯರು........ಹರೀಶ ನಾವ್ಮೂರು ಜನ ಆಶ್ರಮದಲ್ಲೇ ರಾತ್ರಿ ಉಳಿಯಬೇಕೆಂದು ನಮಗೆ ಆಹ್ವಾನ ಬಂದಿದೆ ಮಧ್ಯಾಹ್ನದ ಬಳಿಕ ನೀವೆಲ್ಲರೂ ಆಶ್ರಮಕ್ಕೆ ಬನ್ನಿ ಅಲ್ಲಿಯೇ ಗುರುಗಳನ್ನು ಬೇಟಿಯಾಗಿ.
ನೀತು......ಗುರುಗಳೇ ಮನೆಮಕ್ಕಳ ಹೆಸರಿನಲ್ಲಿ ತುಲಾಭಾರವನ್ನು ಮಾಡಿಸುವುದಕ್ಕೇನೂ ಅಡ್ಡಿಯಿಲ್ಲವಲ್ಲ.
ಆಚಾರ್ಯರು......ಖಂಡಿತ ಮಾಡಿಸಮ್ಮ ಅದು ಒಳ್ಳೆಯದೇ ಅಲ್ವಾ. ನೀನು ಹರೀಶ ನಮ್ಜೊತೆ ಬನ್ನಿ ಗುರುಗಳೇ ಯಾವ ಮಕ್ಕಳಿಗೆ ಯಾವ ವಸ್ತುವಿನ ತುಲಾಭಾರ ಮಾಡಿಸಿದರೆ ಒಳ್ಳೆಯದೆಂದು ಹೇಳ್ತಾರೆ.
ಆಚಾರ್ಯರು ಮತ್ತಿಬ್ಬರು ಶಿಷ್ಯರ ಜೊತೆ ನೀತು—ಹರೀಶ ಆಶ್ರಮಕ್ಕೆ ತೆರಳಿದರೆ ಉಳಿದವರು ತಮಗಾಗಿ ಕಾದಿರಿಸಲಾಗಿದ್ದ ರೂಮಿನ ಕಡೆ ಹೋದರು. ಆಶ್ರಮದಲ್ಲಿ ಗುರುಗಳನ್ನು ಬೇಟಿಯಾದ ಆಚಾರ್ಯರು ಉಭಯ ಕುಶಲೋಪರಿ ವಿಚಾರಿಸಿಕೊಂಡ ನಂತರ ಹರೀಶ ನೀತು ಇಬ್ಬರನ್ನೂ ಅವರಿಗೆ ಪರಿಚಯಿಸಿದರು.
ಶೃಂಗೇರಿ ಗುರುಗಳು ಆಶೀರ್ವಧಿಸಿ......ನಾಳೆಯಿಂದ ನವರಾತ್ರಿಯು ಪ್ರಾರಂಭವಾಗಲಿದೆ ನಾಳಿನ ಮುಂಜಾನೆ ಶಾರದಾಂಭೆಯ ಪೂಜಾ ವಿಧಿವಿಧಾನ ಮತ್ತು ನವರಾತ್ರಿಯ ಶುಭಾರಂಭವಾದ ನಂತರ ತಾಯಿ ಜಗಜ್ಜನನಿಯ ಶ್ರೀರಕ್ಷೆಯಿಂದ ಜನಿಸಿದ ಮಗುವಿಗೆ ನಾವಿಲ್ಲೇ ನಮ್ಮ ಆಶ್ರಮದಲ್ಲಿ ಅಕ್ಷರದ ಅಭ್ಯಾಸವನ್ನು ಪ್ರಾರಂಭ ಮಾಡಿಸುತ್ತೇವೆ. (ಶಿಷ್ಯನೊಬ್ಬನತ್ತ ಕೈ ತೋರಿಸಿ) ನಿಮ್ಮ ಮನೆಯ ಮಕ್ಕಳ ರಾಶಿ ಮತ್ತು ನಕ್ಷತ್ರ ಯಾವುದೆಂದು ತಿಳಿಸಿ ಅವರು ಯಾವುದರಿಂದ ಮಕ್ಕಳಿಗೆ ತುಲಾಭಾರ ಮಾಡಿಸಿದರೆ ಉತ್ತಮವೆಂದು ತಿಳಿಸುತ್ತಾರೆ. ನಾವು ಮುಂಜಾನೆ ಆಶ್ರಮದಲ್ಲೇ ಬೇಟಿಯಾಗೋಣ ಆದರೆ ಮುಂಜಾನೆ ನಡೆಯೀವ ಪೂಜೆಗೆ ತಪ್ಪದೆ ಬನ್ನಿ.
ದಂಪತಿಗಳು......ಖಂಡಿತವಾಗಿ ಗುರುಗಳೇ.......ಎಂದು ನಮಸ್ಕರಿಸಿ ಅವರ ಶಿಷ್ಯನ ಬಳಿ ಮನೆಮಕ್ಕಳ ಜನ್ಮದಿನ...ರಾಶಿ...ನಕ್ಷತ್ರಗಳನ್ನು ಹೇಳಿ ಅವರು ಯಾರಿಗೆ ಯಾವ ವಸ್ತುವಿನ ತುಲಾಭಾರ ಮಾಡಿಸಿ ಎಂದು ಸೂಚಿಸಿದರೋ ಅದನ್ನು ನೋಟ್ ಮಾಡಿಕೊಂಡರು.
ದಂಪತಿಗಳಿಬ್ಬರೂ ದೇವಸ್ಥಾನದ ಆಫೀಸಿಗೆ ತೆರಳಿ ತುಲಾಭಾರವನ್ನು ಮಾಡಿಸುವುದಕ್ಕೆ ಮಕ್ಕಳ ಹೆಸರಿನಲ್ಲಿ ಚೀಟಿ ಬರೆಸುತ್ತಿದ್ದಾಗ......
ನೀತು.....ರೀ ನೀವು ಹೋಗಿ ಎಲ್ಲರನ್ನೂ ಕರೆದುಕೊಂಡು ಬಂಡ್ಬಿಡಿ ನಾನಿಲ್ಲಿ ಚೀಟಿ ಬರೆಸ್ತೀನಿ.
ಹರೀಶ ಲಾಡ್ಜಿಗೆ ಬಂದಾಗ.....
ರಾಜೀವ್.......ಗುರುಗಳ ಬೇಟಿಯಾಯ್ತಾ ಹರೀಶ ?
ಹರೀಶ.......ಹೂಂ ಮಾವ ನಾಳಿನ ನವರಾತ್ರಿ ಪ್ರಾರಂಭೋತ್ಸವದ ಪೂಜೆಗಳು ಮುಗಿದ ನಂತರ ಆಶ್ರಮದಲ್ಲೇ ಅಕ್ಷರಾಭ್ಯಾಸವನ್ನು ಗುರುಗಳೇ ಮಾಡಿಸುತ್ತಾರಂತೆ.
ವಿಕ್ರಂ......ತುಲಾಭಾರದ ವಿಷಯವೇನು ಹೇಳಿದ್ರು ?
ಹರೀಶ......ಎಲ್ಲಾ ಮಕ್ಕಳಿಗೂ ಅವರವರ ರಾಶಿ...ನಕ್ಷತ್ರಗಳಿಗೆ ತಕ್ಕ ಹಾಗೆಯೇ ಯಾವುದರಿಂದ ತುಲಾಭಾರ ಮಾಡಿಸಬೇಕೆಂದು ಎಲ್ಲಾ ವಿವರಗಳನ್ನು ಕೊಟ್ಟಿದ್ದಾರೆ.
ರೇವಂತ್......ಭಾವ ನಾವೀಗ ಅದನ್ನೆಲ್ಲಾ ಹೋಗಿ ತರಬೇಕಲ್ಲವಾ ?
ವಿವೇಕ್......ಹರೀಶ್ ನೀವು ರೆಸ್ಟ್ ಮಾಡಿ ನಾವು ಹೋಗಿ ಅವರು ತಿಳಿಸಿರುವ ಸಾಮಾಗ್ರಿಗಳನ್ನು ತರ್ತೀವಿ.
ರವಿ......ನೀತು ಎಲ್ಲಿ ನೀನೊಬ್ಬನೇ ಬಂದಿದ್ದೀಯಲ್ಲ ?
ಹರೀಶ.....ನಾವೇನನ್ನೂ ತರಬೇಕಾಗಿಲ್ಲ ಎಲ್ಲವೂ ದೇವಸ್ಥಾನದಲ್ಲಿನ ಭಂಡಾರದಲ್ಲೇ ದೊರೆಯುತ್ತೆ ನಾವು ಹಣ ಪಾವತಿಸಬೇಕಷ್ಟೆ ನೀತು ಅಲ್ಲೇ ಎಲ್ಲಾ ಮಕ್ಕಳ ವಿವರಗಳನ್ನು ಬರೆಸ್ತಿದ್ದಾಳೆ ಬನ್ನಿ ಹೋಗೋಣ
ಅಶೋಕ.......ನೀನು ಫೋನ್ ಮಾಡಬಾರದಿತ್ತಾ ನಾವೇ ಬರ್ತಿದ್ವಿ ಅವಳೊಬ್ಬಳನ್ನೇ ಬಿಟ್ಟು ಬಂದಿದ್ದೀಯಲ್ಲ.
ನಿಧಿ.......ಅಪ್ಪ ಅಮ್ಮ ಫೋನ್ ನನಗೆ ಕೊಟ್ಟು ಹೋಗಿದ್ರು ಅಂಕಲ್ ನಡಿ ಚಿನ್ನಿ ಮರಿ ಪೂನಿ ಕೈ ಹಿಡಿದುಕೋ.
ದೇವಸ್ಥಾನದಲ್ಲಿ ಮನೆಯ ಹಿರಿಮಗಳು ನಿಧಿ... ಗಿರೀಶ.... ಸುರೇಶ... ದೃಷ್ಟಿ... ರಶ್ಮಿ.... ನಿಕಿತಾ... ನಯನ... ನಮಿತ.... ಪೂನಂ ಮತ್ತು ನಿಶಾ ಎಲ್ಲರ ಹೆಸರನ್ನೂ ಅವರಿಗೆ ತುಲಾಭಾರ ಮಾಡಿಸಬೇಕಾಗಿರುವ ವಸ್ತುಗಳನ್ನು ಲಿಸ್ಟ್ ಮಾಡಿಸುತ್ತಿದ್ದ ನೀತು ಬಳಿ ಎಲ್ಲರೂ ಬಂದರು. ವಿಕ್ರಂ ತಾನೇ ಎಲ್ಲರ ತುಲಾಭಾರಕ್ಕೆ ಖರ್ಚಾಗುವ ಹಣ ಪಾವತಿಸಿದ ಬಳಿಕ ತುಲಾಭಾರ ನಡೆಯುವ ಸ್ಥಳವನ್ನು ತಲುಪಿದರು.
ಸುರೇಶ.....ನೋಡಕ್ಕೆ ಮಾತ್ರ ಲಿಲಿಪುಟ್ ಕಣೆ ನೀನು ಚಿಲ್ಟಾರಿ ಆದ್ರೆ ಎಲ್ಲರಿಗಿಂತಲೂ ನೀನೇ ಸಿಕ್ಕಾಪಟ್ಟೆ ದುಬಾರಿ.
ರಜನಿ.......ಪಾಪ ಯಾಕೋ ರೇಗಿಸ್ತೀಯಾ ?
ಸುರೇಶ........ನಮ್ಮನ್ನೆಲ್ಲಾ ಅಕ್ಕಿ....ಬೆಲ್ಲ....ಕೊಬ್ಬರಿ ಇವುಗಳಿಂದಷ್ಟೆ ತುಲಾಭಾರ ಮಾಡಿಸೋದು ಆದರೀ ಚೊಟ್ ಮೆಣಸಿನಕಾಯನ್ನು ಒಣದ್ರಾಕ್ಷಿ.....ಗೋಡಂಬಿ ಮತ್ತು ಬಾದಾಮಿಗಳಿಂದ ಮಾಡಿಸ್ಬೇಕು ಅದಕ್ಕೆ ತುಂಬಾ ಕಾಸ್ಟ್ಲಿ ಅಂದಿದ್ದು ಅಲ್ವಾ ಚಿಲ್ಟಾರಿ.
ನಿಶಾ.....ಮಮ್ಮ ನೋಡು ಅಣ್ಣ ನನ್ನಿ ಬೇತು ಏಟ್ ಕೊಲು ಮಮ್ಮ.
ಮನೆಯವರೆಲ್ಲರೂ ಸೇರಿ ಮಕ್ಕಳ ತುಲಾಭಾರ ನೆರವೇರಿಸಿದರೆ ನಿಶಾಳನ್ನು ಮೂರು ಸಲ ತಕ್ಕಡಿಯಲ್ಲಿ ಕೂರಿಸಿ ತೂಗಲಾಯಿತು. ದೇವಸ್ಥಾನದಲ್ಲಿಯೇ ಊಟದ ಪ್ರಸಾದ ಸ್ವೀಕರಿಸಿ ಎಲ್ಲರೂ ನದಿಯ ಬಳಿ ಬಂದಾಗ ಅಲ್ಲಿದ್ದ ಮೀನುಗಳನ್ನು ನೋಡಿ ನಿಶಾ—ಪೂನಂ ಕುಣಿದಾಡಿದರು. ರಾಣಾ ಜೊತೆ ಬೇರೆ ಕುಳಿತಿದ್ದ ನೀತು ಸಂಸ್ಥಾನದ ವಿರುದ್ದದ ಷಡ್ಯಂತ್ರದಲ್ಲಿ ಎಲ್ಲಾ ವಿರೋಧಿಗಳನ್ನೂ ಒಗ್ಗೂಡಿಸಿದ್ದ ಅಜ್ಞಾತ ವ್ಯಕ್ತಿಯ ಬಗ್ಗೆ ಚರ್ಚಿಸುತ್ತಿದ್ದರು.
* *
* *
ಕತೆ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ 2 ದಿನ ಆಯಿತು ಸ್ಟೋರಿ ಅಪ್ಲೋಡ್ ಮಾಡಿಲ್ಲ ರೀ
ReplyDeleteದಯವಿಟ್ಟು ದಿನ ದಿನ ಮಿಸ್ ಮಾಡದೆ ಸ್ಟೋರಿ ಅಪ್ಲೋಡ್ ಮಾಡ ರೀ please my personal humble request ri please 🙏🙏🙏🙏🙏
ಕತೆ ಓದುವ ಕಾತುರ ಹೆಚ್ಚಾಗುತ್ತಿದೆ ದಯವಿಟ್ಟು ಆದಷ್ಟು ಬೇಗ ಬೇಗ ದಿನಕ್ಕೆ 2, 3, 4, 5, ಸ್ಟೋರಿ ಬರೆಯಿರಿ ದಯವಿಟ್ಟು ಸ್ಟೋರಿ ಮಿಸ್ ಮಾಡದೆ ಅಪ್ಲೋಡ್ ಮಾಡ ರೀ please my personal humble request ri please 🙏🙏🙏🙏🙏
ReplyDelete