ಮಾರನೇ ದಿನ ಮನೆಯ ಗಂಡಸರೆಲ್ಲರೂ ರೇಷ್ಮೆ ಪಂಚೆ ಶಲ್ಯವನ್ನು ಧರಿಸಿದರೆ ಹೆಂಗಸರು ಕೂಡ ರೇಷ್ಮೆ ಸೀರೆಯನ್ನುಟ್ಟು ಶೃಂಗೇಯಲ್ಲಿ ಪ್ರಾರಂಭವಾಗುವ ನವರಾತ್ರಿಯ ಪ್ರಥಮ ದಿನದ ಪೂಜೆಯಲ್ಲಿ ಹಾಜರಾದರು. ಇಂದು ನಿಧಿ—ನಿಕಿತಾ ಕೂಡ ಗೌರಿ ಹಬ್ಬದಲ್ಲಿ ತಾವು ಉಟ್ಟುಕೊಂಡಿದ್ದ ಮೈಸೂರು ಸಿಲ್ಕನ್ನುಟ್ಟಿದ್ದು ರೇವತಿ ಇಬ್ಬರಿಗೆ ದೃಷ್ಟಿ ತೆಗೆದರು. ನಿಶಾ—ಪೂನಂ ಸಹ ರೇಷ್ಮೆ ಲಂಗ ಬ್ಲೌಸಿನಲ್ಲಿ ಮುದ್ದಾಗಿ ಕಾಣಿಸುತ್ತಿದ್ದು ಪರಸ್ಪರರ ಕೈ ಕೈ ಹಿಡಿದು ದೇವಸ್ಥಾಕ್ಕೆ ಹೊರಟಿದ್ದರು. ನವರಾತ್ರಿಯ ಪ್ರಥಮ ದಿನದ ಪೂಜಾ ವೈಭವವನ್ನು ಮನೆಯವರು ಕಣ್ತುಂಬಿಕೊಂಡು ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ ದೇವಸ್ಥಾನದ ಪರಾಂಗಣದಲ್ಲಿ ಕುಳಿತಿದ್ದಾಗ ದೇವಾನಂದ ಸ್ವಾಮೀಜಿಗಳು ಬಂದು ಎಲ್ಲರನ್ನೂ ಆಶ್ರಮಕ್ಕೆ ಬರುವಂತೇಳಿದರು.
ನೀತು.......ಗುರುಗಳೇ ನಿಶಾ ಜೊತೆಯಲ್ಲಿ......
ಸ್ವಾಮೀಜಿಗಳು.......ಚಿಂತೆ ಬೇಡಮ್ಮ ನಿಶಾ ಜೊತೆಯಲ್ಲಿ ಅವಳ ಸ್ನೇಹಿತೆಗೂ ಇಂದೇ ಗುರುಗಳು ಅಕ್ಷರಾಭ್ಯಾಸ ಮಾಡಿಸುತ್ತಾರೆ. ಈ ವಿಷಯವಾಗಿ ನೆನ್ನೆಯ ದಿನವೇ ಗುರುಗಳ ಬಳಿ ಆಚಾರ್ಯರು ಮಾತನಾಡಿದ್ದಾರೆˌ
ನೀತು.....ಧನ್ಯವಾದ ಗುರುಗಳೇ.
ಹರೀಶ......ನಿಮ್ಮಿಬ್ಬರಿಗೂ ಏನು ಬರೆಯಬೇಕೆಂದು ಹೇಳಿಕೊಟ್ಟಿದ್ದೆ ನೆನಪಿದೆ ತಾನೇ ?
ನಿಶಾ—ಪೂನಂ.....ಅ..ಆ..ಇ..ಈ......ನಂಗಿ ಗೊತ್ತು.
ಹರೀಶ......ವೆರಿಗುಡ್ ಅದನ್ನು ಗುರುಗಳು ಹೇಳಿದಾಗ ನೀವಿಬ್ಬರೂ ಬರೆಯಬೇಕು ಗೊತ್ತಾಯ್ತಾ.
ನಿಶಾ......ನನ್ನಿ ಐಸ್ ಕೊಲು ಪಪ್ಪ ಇಲ್ಲ ನಾನಿ ಬಲೀಲ.
ಸುರೇಶ......ಅಪ್ಪ ನಿಮ್ಮನ್ನೇ ಬ್ಲಾಕ್ಮೇಲ್ ಮಾಡ್ತಿದ್ದಾಳೆ ನೋಡಿ.
ಹರೀಶ......ಆಯ್ತು ಕಂದ ಆಮೇಲೆ ತೆಗೆದುಕೊಡ್ತೀನಿ ನಡಿ.
ನಿಶಾ.....ಇಲ್ಲ ಪಪ್ಪ ನನ್ನಿ ಈಗೇ ಬೇಕು ನಾನಿ ಅ..ಆ..ಇ ಬಲೀಲ.
ಹರೀಶ.....ಲೇ ನೀತು ಇವಳಿಗೆ ಸ್ವಲ್ಪ ಹೇಳು ಬಾ ಬರೆಯಲ್ಲ ಅಂತ ಹಠ ಮಾಡ್ತಿದ್ದಾಳೆ.
ನೀತು......ಬೇಡ ಕಣ್ರಿ ನಾನು ಮಾತಾಡಿದ್ರೆ ನನ್ನ ಬಂಗಾರಿಗೆ ನೀನು ರೇಗ್ತೀಯ ಅಂತ ನೀವು ನನಗೇ ಜೋರು ಮಾಡ್ತೀರ ನನಗೆ ಬೇಕಾ ನೀವೇ ಅದೇನೋ ಹೇಳಿ ಕರ್ಕೊಂಡ್ ಬನ್ನಿ.
ಹರೀಶ.......ಚಿನ್ನಿ ಬಾರಮ್ಮ ಆಮೇಲೆ ನಿನಗೆರಡು ಐಸ್ ಕೊಡ್ತೀನಿ ನೋಡು ಪೂನಿ ರೆಡಿಯಾಗಿದ್ದಾಳಲ್ಲ.
ನಿಶಾ......ನಾನಿ ಬರಲ್ಲ ಪಪ್ಪ ಪೂನಿ ನೀನಿ ಹೋಬೆಡ.
ನಿಧಿ......ಲೇ ಚೋಟ್ ಮೆಣಸಿನಕಾಯಿ ಸುಮ್ಮನಿದ್ರೆ ನಿಂದು ಜಾಸ್ತಿ ಆಗ್ತಿದೆ ನಡಿ ಎರಡೇಟು ಬೇಕಾ.
ನಿಶಾ ಅಕ್ಕನನ್ನು ತಲೆಯೆತ್ತಿ ಗುರಾಯಿಸುತ್ತಿದ್ದರೆ ವಿಕ್ರಂ ಅವಳನ್ನು ಎತ್ತಿಕೊಂಡು ಮುದ್ದು ಮಾಡುತ್ತ.....ಚಿನ್ನಿ ಮರಿ ಅಲ್ಲಿ ಜಿಂಕೆ ಇದೆ ಕಂದ ನಿಂಗೆ ಅದನ್ನು ತೋರಿಸ್ತೀನಿ ಬಾ.
ನಿಶಾ......ಜಿಂಕಿ ಏನು ಮಾಮ ?
ಇದೇ ವಿಷಯವನ್ನು ಹೇಳುತ್ತ ಐಸ್ ಕ್ರೀಂ ಮರೆಸಿದ ವಿಕ್ರಂ ಅವಳ ಜೊತೆ ಆಶ್ರಮಕ್ಕೆ ಬಂದನು. ವೆಂಕಟ್ ಮಡಿಲಲ್ಲಿ ಪೂನಂ ಮತ್ತು ಹರೀಶನ ಮಡಿಲಲ್ಲಿ ನಿಶಾ ಕುಳಿತು ಗುರುಗಳಿಗೆ ಕೈ ಮುಗಿದು ಅವರು ತಿಳಿಸಿದ ಪದ್ದತಿಯಲ್ಲಿ ಇಬ್ಬರ ಅಕ್ಷರಾಭ್ಯಾಸ ಪ್ರಾರಂಭಿಸಲಾಯಿತು. ಎಲ್ಲರಿಗೂ ಆಶೀರ್ವಧಿಸಿ ಬೀಳ್ಕೊಟ್ಟರೆ ಗೋವಿಂದಾಚಾರ್ಯರ ಜೊತೆ ನೀತು—ಹರೀಶ ಗುರುಗಳ ಸನ್ನಿಧಾನದಲ್ಲಿ ಎರಡು ಕೋಟಿ ರೂಪಾಯಿಗಳ ಚೆಕ್ಕನ್ನು ಅರ್ಪಿಸಿದರು.
ದಂಪತಿಗಳಿಗೆ ಆಶೀರ್ವಾದ ನೀಡಿದ ನೀಡಿದ ಗುರುಗಳು ಇಬ್ಬರಿಗೂ ಮಕ್ಕಳ ವಿಷಯದಲ್ಲಿ ಕೆಲ ಸೂಚನೆಗಳನ್ನು ನೀಡಿ ಮನೆಯಲ್ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸಿದರೂ ಆಗ ನಿಶಾ ಉಪಸ್ಥಿತಳಿದ್ದರೆ ಎಲ್ಲ ಕೆಲಸಗಳೂ ಸುಗಮವಾಗಿ ನೆರವೇರಲಿದೆ ಎಂದೇಳಿ ಬೀಳ್ಕೊಟ್ಟರು. ಮಧ್ಯಾಹ್ನದ ಭೋಜನವನ್ನು ಶೃಂಗೇರಿ ದೇವಸ್ಥಾನದಲ್ಲೇ ಸೇವಿಸಿ ಮೂವರು ಗುರುಗಳ ಜೊತೆ ಎಲ್ಲರೂ ಅನ್ನಪೂರ್ಣೇಶ್ವರಿಯ ದರ್ಶನಕ್ಕಾಗಿ ಹೊರನಾಡಿನತ್ತ ಪ್ರಯಾಣ ಬೆಳೆಸಿದರು. ಅಲ್ಲಿಯೂ ಆಚಾರ್ಯರು ಸೂಚಿಸಿದಂತೆ ಮಕ್ಕಳೆಲ್ಲರ ತುಲಾಭಾರ ನೆರವೇರಿಸಿ ನಿತ್ಯ ಅನ್ನದಾನ ನಡೆಯುವುದಕ್ಕೆ ಮಕ್ಕಳ ಹೆಸರಿನಲ್ಲಿ ಹಣ ಪಾವತಿಸಿದರು.
ಆಚಾರ್ಯರು.......ರಾತ್ರಿ ದೇವಿಯ ಪ್ರಸಾದ ಸ್ವೀಕರಿಸಿ ನಾವೆಲ್ಲರು ಹಿಂದಿರುಗೋಣ ಹರೀಶ ನಾಳೆ ಮುಂಜಾನೆಯೇ ನಾವು ಆಶ್ರಮಕ್ಕೆ ಹೊರಡಬೇಕಿದೆ.
ಹರೀಶ......ಆಗಲಿ ಗುರುಗಳೇ ನಾವು ಈ ವಾರ ಮುನಿವರ್ಯರನ್ನು ಬೇಟಿಯಾಗಲು ಹಿಮಾಚಲಕ್ಕೆ ಹೋಗುವಿದಿತ್ತು. ಅವರನ್ನು ನಾವು ಮೊದಲ ಸಲ ಬೇಟಿಯಾಗುತ್ತಿರುವ ಕಾರಣ ಏನಾದರು ಕಾಣಿಕೆ ತೆಗೆದುಕೊಂಡು ಹೋಗಬಹುದಾ ?
ಆಚಾರ್ಯರು.....ಖಂಢಿತವಾಗಿ ತೆಗೆದುಕೊಂಡು ಹೋಗು. ಒಂದು ಕೆಲಸ ಮಾಡಪ್ಪ ನಿಶಾಳ ಕೈಯಿಂದ ಅವರಿಗೆ ದ್ರಾಕ್ಷಿ.....ಗೋಡಂಬಿ ಈ ರೀತಿ ಡ್ರೈಫ್ರೂಟ್ಸ್ ಕೊಡಿಸಿದರೆ ಒಳ್ಳೆಯದು.
ಹರೀಶ......ಆಗಲಿ ಗುರುಗಳೇ ಹಾಗೆ ಮಾಡ್ತೀನಿ.
ರೇವಂತ್......ಭಾವ ಇಲ್ಲಿಯೇ ಫ್ರೆಶಾಗಿ ಮಾರುತ್ತಿದ್ದಾರೆ.
ರವಿ.....ಹೌದು ರೇವಂತ್ ಇಲ್ಲಿಂದಲೇ ಖರೀಧಿಸೋಣ.
ಅಶೋಕ......ಆಗಲೇ ನಮ್ಮ ಮಹಿಳಾ ಮಣಿಗಳು ಅಂಗಡಿಗಳಲ್ಲಿ ಠಿಕಾಣಿ ಹೊಡೆದಿದ್ದಾರಲ್ಲ ಅವರಿಗೇ ಹೇಳಿಬಿಡೋಣ.
ಆಚಾರ್ಯರು......ಅದರ ಜೊತೆ ಶೃಂಗೇರಿ ಹೊರನಾಡಿನ ಪ್ರಸಾದ ಕೂಡ ನೀಡುವುದು ಉತ್ತಮ ಅವರೂ ದೇವಿಯ ಆರಾಧಕರೇ.
ಮನೆಯ ಹೆಂಗಸರು ಮನೆಗೆ ಬೇಕಾದ ಮಸಾಲೆ ಪದಾರ್ಥಗಳನ್ನು ಖರೀಧಿಸುತ್ತಿದ್ದರೆ ಅಕ್ಕಂದಿರ ಜೊತೆ ನಿಶಾ—ಪೂನಂ ಅವರು ತೆಗೆದು ಕೊಡುತ್ತಿದ್ದ ವಸ್ತುಗಳನ್ನಿಡಿದು ಹಿರಿಹಿರಿ ಹಿಗ್ಗುತ್ತಿದ್ದರು.
* *
* *
ಮಂಗಳವಾರ ಮುಂಜಾನೆ ಆಚಾರ್ಯರು ತಮ್ಮ ಶಿಷ್ಯರೊಂದಿಗೆ ಆಶ್ರಮಕ್ಕೆ ಹಿಂದಿರುಗಿದರೆ ನಿಧಿ ಗೆಳತಿಯರ ಮನೆಗೆ ಪ್ರಸಾದ ನೀಡಿ ಮುಂದಿನ ಸೋಮವಾರಕ್ಕೆ ಪ್ಯಾಕಿಂಗ್ ಮಾಡ್ಕೊಂಡು ರೆಡಿಯಾಗಿರಿ ಎಂದೇಳಿ ಬರಲು ನಿಕಿತಾಳ ಜೊತೆ ಹೋಗಿದ್ದಳು. ಏದುರು ಮನೆಯ ರಕ್ಷಕರ ರೂಮಿನಲ್ಲಿ.....
ನೀತು.....ರಾಣಾ ಏನಾದರೂ ಸುಳಿವು ಸಿಕ್ಕಿತಾ ?
ರಾಣಾ....ಸಧ್ಯಕ್ಕೇನೂ ಸಿಕ್ಕಿಲ್ಲ ಮಾತೆ ಎರಡು ವರ್ಷಗಳಿಗಿಂತಲೂ ಹಿಂದಿನ ಸಿಸಿ ಕ್ಯಾಮೆರಾ ರೆಕಾರ್ಡಿಂಗ್ ಪರಿಶೀಲನೆ ನಡೆಯುತ್ತಿದೆ. ಖಂಡಿತವಾಗಿ ಏನಾದರೂ ಸಿಕ್ಕೇ ಸಿಗುತ್ತದೆ. ವರ್ಧನ್ ಸರ್ ಕೂಡ ಮಂತ್ರಿಗಳ ಫೋನ್ ಡೀಟೇಲ್ಸ್ ಮತ್ತು ಅವರ ಮನೆ ಕಛೇರಿಗಳ ಸಿಸಿ ಫುಟೇಜ್ ಕಳುಹಿಸಿದ್ದಾರೆ ಆದಷ್ಟು ಬೇಗ ಆ ವ್ಯಕ್ತಿ ಯಾರೆಂಬುದು ನಮಗೆ ತಿಳಿಯುತ್ತದೆ.
ನೀತು......ಆದಷ್ಟೂ ಬೇಗ ಇದಕ್ಕೊಂದು ತಿಲಾಂಜಲಿ ಹಾಕಬೇಕಿದೆ ರಾಣಾ ಹೀಗೇ ದಿನಗಳನ್ನು ದೂಡುತ್ತ ಕುಳಿತಿರಲು ಹಿಂಸೆಯಾಗ್ತಿದೆ.
ರಾಣಾ.....ನಾವೆಲ್ಲಾ ಪ್ರಯತ್ನವನ್ನೂ ಮಾಡ್ತಿದ್ದೀವಿ ಮಾತೆ ಆದಷ್ಟೂ ಬೇಗನೇ ಆ ವ್ಯಕ್ತಿಯನ್ನು ಪತ್ತೆ ಹಚ್ತೀವಿ.
* *
* *
ನೀತು......ಸುಭಾಷ್ ನಮ್ಮ ಚಿನ್ನಿ ಪ್ರಾಡಕ್ಟಿನ್ನು ಪಡೆದು ನಮಗೆ ಬರಿ ಕ್ಯಾಶ್ ಪೇಮೆಂಟ್ ಮಾಡುತ್ತಿದ್ದವರ ವಿಷಯ ಏನಾಯ್ತು ? ನಮ್ಮ ಮಾನೇಜರ್ ಹೇಗೆ ನಿಯತ್ತಿನಿಂದ ಕೆಲಸ ಮಾಡ್ತಿದ್ದಾನಾ ?
ಸುಭಾಷ್......ಮಾನೇಜರ್ ತುಂಬಾನೇ ನಿಯತ್ತಿನ ಮನುಷ್ಯ ಆದರೆ ತುಂಬ ಬೇಗನೇ ಹೆದರಿಕೊಳ್ಳುವ ಸ್ವಭಾವದವನು. ಬೆಂಗಳೂರಿನ ಕೆಲವು ವರ್ತಕರು ಕ್ಯಾಷ್ ಪೇಮೆಂಟೇ ಮಾಡೋದು ಬೇಕಿದ್ದರೆ ತಗೊಳ್ಳಿ ಇಲ್ಲಾಂದ್ರೆ ಬಿಡಿ ಅಂದಿದ್ದಕ್ಕೆ ಹೆದರಿ ಒಪ್ಪಿಕೊಂಡಿದ್ದಾನೆ.
ರಜನಿ......ಹಾಗಾದ್ರೆ ಮುಂದೇನು ?
ಸುಭಾಷ್......ನಾಳೆ ಬೆಂಗಳುರಿನ ವರ್ತಕರನ್ನು ಅಲ್ಲೇ ಮೀಟಿಂಗ್ ಕರೆದಿದ್ದೀನಿ ನಾನೇ ಸರಿಯಾಗಿ ಕಂಪನಿಯ ರೂಲ್ಸ್ ತಿಳಿಸಿಕೊಡ್ತೀನಿ ಒಪ್ಪಿದರೆ ಸಪ್ಲೈ ಮಾಡೋದು ಇಲ್ಲದಿದ್ದರೆ ನಮ್ಮ ಪ್ರಾಡಕ್ಟ್ ಖರೀಧಿ ಮಾಡುವುದಕ್ಕಿನ್ನೂ ಬೇಕಾದಷ್ಟು ಜನ ಕಾಯುತ್ತಿದ್ದಾರೆ. ಚಿಕ್ಕಮ್ಮ ಹೊರ ರಾಜ್ಯಗಳಿಗೂ ಸಪ್ಲೈ ಮಾಡುವುದಕ್ಕೆ ನಾನೊಂದು ಪ್ಲಾನ್ ಮಾಡಿದ್ದೀನಿ.....ಎಂದು ಪ್ಲಾನನ್ನು ವಿವರಿಸಿದನು.
ಪ್ರೀತಿ.......ಸೂಪರ್ ಕಣೋ ಆದರಿಂದ ನಾವು ಸುಲಭವಾಗಿ ಸಪ್ಲೈ ಮಾಡಬಹುದು ಟ್ರಾನ್ಸಪೋರ್ಟೇಶನ್ ಕೂಡ ಸಮಸ್ಯೆ ಆಗಲ್ಲ.
ನೀತು.......ನೀನೆಲ್ಲವನ್ನೂ ವ್ಯವಸ್ಥಿತವಾಗಿ ಮಾಡ್ಬಿಡು ಸುಭಾಷ್ ಆಮೇಲೆ ಇಬ್ಬರು ಮಾನೇಜರುಗಳಿಗೆ ಸರಿಯಾಗಿ ಸೂಚನೆ ಕೊಡು ಮಿಕ್ಕಿದ್ದು ಅವರೇ ನೋಡಿಕೊಳ್ಳಲಿ. ರಜನಿ ಹೇಗೂ ಪ್ರತಿದಿನ ಹೋಗಿ ಚೆಕಿಂಗ್ ಮಾಡ್ತಾಳೆ ಅವಳಿಗೂ ವಿವರವಾಗಿ ಹೇಳಿಕೊಟ್ಬಿಡು.
ರಜನಿ......ಲೇ ಆಯುಧ ಪೂಜೆಗೆ ನಮ್ಮ ಕೆಲಸಗಾರರಿಗೆ ನಾವೇನೂ ಕೊಡೊದು ಬೇಡವಾ ?
ಸುಭಾಷ್.....ಆಂಟಿ ಭಟ್ಟರ ಜೊತೆ ಮಾತನಾಡಿದ್ದೀನಿ ಅವರೇ ಎಲ್ಲ ಫ್ಯಾಕ್ಟರಿ ಕೆಲಸಗಾರರಿಗೂ ಸ್ಪೆಷಲ್ ಮೈಸೂರ್ ಪಾಕ್...ಬಾದುಶಹ ಎರಡನ್ನೂ ಮಾಡಿಕೊಡ್ತಾರೆ.
ನೀತು.......ದುಡ್ಡಿನ ವಿಷಯ ಕಟ್ಟುನಿಟ್ಟಾಗಿ ಮಾತನಾಡಬೇಕಿತ್ತು ಕಣೋ ಅವರಿನ್ನೂ ನಮ್ಮ ಋಣದಲ್ಲಿದ್ದೀವಿ ಅಂತಲೇ ಯೋಚಿಸಿ ಕಡಿಮೆ ಹಣ ಪಡೆದುಕೊಳ್ತಾರೆ.
ಸುಭಾಷ್.....ನೀವೇಳಿದ್ದು ನಿಜ ಚಿಕ್ಕಮ್ಮ ಅವರು ಕಡಿಮೆ ಲೆಕ್ಕವೇ ಹೇಳ್ತಿದ್ರು ನಾನೆಲ್ಲ ಲೆಕ್ಕ ಮಾಡಿದಾಗ ಅಷ್ಟೊಂದು ಬೇಡ ಅಂತಿದ್ರು. ಕೊನೆಗೆ ನೀವು ಇದೇ ರೀತಿ ಹೇಳಿದ್ರೆ ನಾನು ಬೇರೆಯವರಿಗೆ ಸ್ವೀಟ್ ಆರ್ಡರ್ ಕೊಡ್ತೀನಿ ಅಂದ್ಮೇಲೆ ಒಪ್ಪಿಕೊಂಡರು.
ಸುಮ......ಬರೀ ಸ್ವೀಟ್ ಕೊಟ್ರೆ ಸಾಕೆನೇ ?
ಪ್ರೀತಿ....ಅಕ್ಕ ನಮ್ಮ ಫ್ಯಾಕ್ಟರಿಗಳು ಈಗಷ್ಟೇ ಪ್ರಾರಂಭವಾಗಿರೋದು ಅದಕ್ಕೆ ಎಲ್ಲರಿಗೊಂದು ತಿಂಗಳಿನ ಸಂಬಳವನ್ನೇ ಬೋನಸ್ ರೀತಿ ಕೊಡೋಣ ಸಾಕು.
ಸುಭಾಷ್......ಕರೆಕ್ಟ್ ಆಂಟಿ ಪ್ರಾರಂಭದಲ್ಲೇ ನಾವು ಧಾರಾಳವಾಗಿ ಹಣ ನೀಡಿದರೆ ಕೆಲಸಗಾರರೂ ಅದಕ್ಕೆ ಒಗ್ಗಿಕೊಳ್ತಾರೆ ಹಾಗಾದಲ್ಲಿ ಮೈಗಳ್ಳತನ ಬಂದು ಬಿಡುತ್ತೆ ಮುಂದಿನ ವರ್ಷ ಜಾಸ್ತಿ ಮಾಡೋಣ.
ಶೀಲಾ.....ಲೇ ನೀವು ಹಿಮಾಚಲದಿಂದ ಹಿಂದಿರುಗಿ ಬರೋದು ಯಾವಾಗ ?
ಸುಮ.....ಹೌದು ಕಣೆ ಸೋಮವಾರ ಇಲ್ಲಿ ಆಯುಧ ಪೂಜೆಯನ್ನು ಮುಗಿಸಿಕೊಂಡು ಆವತ್ತೇ ರಾಜಸ್ಥಾನಕ್ಕೂ ಹೊರಬೇಕಲ್ಲವಾ ?
ನೀತು......ನಾವು ಇಂದು ರಾತ್ರಿಯೇ ಹೊರಡ್ತೀವಿ ಅತ್ತಿಗೆ ನಾಳೆ ಮುನಿಗಳನ್ನು ಬೇಟಿಯಾಗಿ ಭಾನುವಾರದೊಳಗೆ ಇಲ್ಲಿಗೆ ಬರ್ತೀವಿ. ರಾಜಸ್ಥಾನಕ್ಕೆ ಬರುತ್ತಿರುವವರಿಗೆ ಸೋಮವಾರ ಮಧ್ಯಾಹ್ನ ನಾವು ಇಲ್ಲಿಂದ ಹೊರಡುವುದೆಂದು ತಿಳಿಸಿಯಾಗಿದೆ.
ಸುಭಾಷ್.......ಚಿಕ್ಕಮ್ಮ ಎರಡು ಲಕ್ಷುರಿ ಬಸ್ ಕೂಡ ಬುಕ್ಕಾಗಿದೆ.
ಅಷ್ಟರಲ್ಲೇ ನಿಧಿ—ನಿಕಿತಾರ ಹಿಂದೆ ಹರೀಶನೂ ಮನೆಗೆ ಬಂದಿದ್ದು....
ಹರೀಶ.......ನಮ್ಮ ಶಾಲೆಯ ಎಲ್ಲಾ ಸ್ಟಾಫ್ ಅವರ ಫ್ಯಾಮಿಲಿಯ ಸಮೇತ ಬರ್ತಿದ್ದಾರೆ ಜೊತೆಗೆ ನಿಧಿಯ ಐವರು ಗೆಳತಿಯರ ಮನೆಗೆ ಇವರೂ ತಿಳಿಸಿ ಬಂದಿದ್ದಾರೆ.
ಸುಭಾಷ್.......ಸರ್ ಒಟ್ಟೆಷ್ಟು ಜನರಾಗ್ತಾರೆ ?
ಹರೀಶ.....ಏಯ್ ನಿನಗೆ ಭಾರಿಸ್ತೀನಿ ಕಣೋ ನನ್ನ ಹೆಂಡ್ತೀನ ನೀನು ಚಿಕ್ಕಮ್ಮ ಅಂತ ಕರಿತೀಯ ನನ್ನನ್ನು ಮಾತ್ರ ಸರ್ ಅಂತ ಯಾಕೆ ?
ಸುಭಾಷ್......ಸರ್ ನೀವು ಬೈದರೂ ಅಷ್ಟೆ ನನಗೆ ಹೊಡೆದರೂ ಸರಿ ಅದೆಲ್ಲದಕ್ಕೂ ನಿಮಗೆ ಸಂಪೂರ್ಣ ಹಕ್ಕಿದೆ. ಆದರೆ ನೀವು ನನಗೆ ವಿದ್ಯೆ ಕಲಿಸಿದ ಗುರುಗಳು ಅದಕ್ಕೆ ನಾನ್ಯಾವತ್ತಿಗೂ ನಿಮ್ಮನ್ನು ಸರ್ ಅಂತಲೇ ಕರೆಯೋದು.
ಸೌಭಾಗ್ಯ(ಸುಭಾಷ್ ತಾಯಿ)....ಇವನ ತಂದೆ ಬದುಕಿದ್ದರೂ ಇವನಿಗೆ ಇಂತಹ ಬಂಗಿರದಂತ ಜೀವನವನ್ನು ಕಲ್ಪಿಸಿಕೊಡಲು ಆಗುತ್ತಿರಲಿಲ್ಲ. ಹರೀಶ ಒಬ್ಬ ತಂದೆ ತನ್ನ ಮಗನಿಗೇನು ಮಾಡಬಹುದೋ ನೀನು ಅದಕ್ಕಿಂತಲೂ ಹೆಚ್ಚಾಗಿಯೇ ಮಾಡಿರುವೆ ಆದರೆ ನಿನ್ನನ್ನು ಇವನು ಏನೆಂದು ಕರೆಯಬೇಕು ಅನ್ನೋದು ಮಾತ್ರ ನಿಮ್ಮಿಬ್ಬರಿಗೆ ಸಂಬಂಧ ಪಟ್ಟಿರುವ ವಿಷಯ ನಾನು ನಿಮ್ಮಿಬ್ಬರ ಮಧ್ಯೆ ಬರಲ್ಲ.
ಹರೀಶ.......ಆಯ್ತು ಬಿಡಪ್ಪ ನೀನೆಷ್ಟೆ ಆದರೂ ನನಗೆ ಹಿರಿಮಗನೇ ಈ ವಿಷಯದಲ್ಲಿ ನಾನೇ ಸೋಲ್ತೀನಿ. ಎಲ್ಲರನ್ನೂ ಲೆಕ್ಕ ಹಾಕಿದರೆ ಒಟ್ಟು 85 ಜನರಾಗ್ತಾರೆ ಕಣೋ ಇನ್ಯಾರಾದರೂ ಬರುವವರಿದ್ದಾರಾ.
ಶೀಲಾ.......ಹಾಗಾದ್ರೆ ಎರಡು ಬಸ್ ಸಾಕಾಗಲ್ಲ ಕಣಪ್ಪ ಸುಭಾಷ್.
ಸುಭಾಷ್.....ಹೌದಾಂಟಿ ಇನ್ನೂ ಮನೆಯವರನ್ನು ಲೆಕ್ಕ ಹಾಕಿಲ್ವಲ್ಲ ಇನ್ನೊಂದು ಬಸ್ ಬುಕ್ ಮಾಡಿಬಿಡ್ತೀನಿ. ಅರಮನೆಯಲ್ಲಿ ಎಲ್ಲರೂ ಉಳಿದುಕೊಳ್ಳಲು ಸಾಧ್ಯವಾಗುತ್ತಾ ?
ನಿಧಿ.......ಅಣ್ಣ ನೀವಲ್ಲಿದ್ದಾಗ ಅರಮನೆ ತೋರಿಸ್ತೀನಿ ನಡೀರಿ ಅಂತ ಹೇಳಿದ್ರೂ ಅಮ್ಮನ ಹಿಂದೆಯೇ ಇದ್ಬಿಟ್ರಿ ಈ ಸಲ ನನ್ಜೊತೆ ಅರಮನೆ ಪೂರ್ತಿ ಸುತ್ತಾಡಲೇಬೇಕು.
ರಾಣಾ.....ಅರಮನೆಯಲ್ಲೊಟ್ಟು 240 ರೂಮಿದೆ ಎಲ್ಲರೂ ಅಲ್ಲೇ ಆರಾಮವಾಗಿರಬಹುದು.
ನಿಧಿ......ಅಮ್ಮ ಅಣ್ಣನ ಮದುವೆ ಅಲ್ಲೇ ಮಾಡಿದರೇಗಮ್ಮ ?
ನೀತು......ಅವನನ್ನೇ ಕೇಳ್ನೋಡು ಏನ್ ಹೇಳ್ತಾನೋ ?
ಸುಭಾಷ್.......ನನಗೆ ಆಡಂಬರದ ಮದುವೆ ಇಷ್ಟವಿಲ್ಲ ಶೃಂಗೇರಿ ಅಥವ ಯಾವಾದಾದರೂ ದೇವಸ್ಥಾನದಲ್ಲಿ ಮದುವೆಯಾಗಲು ನಾನು ನಿರ್ಧರಿಸಿ ಚಿಕ್ಕಮ್ಮನಿಗೂ ಹೇಳ್ಬಿಟ್ಟಿದ್ದೀನಿ. ರಿಸೆಪ್ಷನ್ ಕೂಡ ಬೇಕಾಗಿಲ್ಲ ಅನಿಸುತ್ತೆ.
ಸುಮ.....ನಿನ್ನ ಸ್ನೇಹಿತರು ಹಳೆಯ ಸಹಪಾಠಿಗಳಿಗಾದರೂ ಒಂದು ಫಂಕ್ಷನ್ ಅರೇಂಜ್ ಮಾಡಬೇಕಲ್ಲವಾ ಸುಭಾಷ್.
ಪ್ರೀತಿ......ಅದರ ಬಗ್ಗೆ ನಾವಾಗಲೇ ಎಲ್ಲವನ್ನೂ ಯೋಚಿಸಿದ್ದೀವಿ ಅಕ್ಕ ಚಿಂತೆ ಮಾಡ್ಬೇಡಿ ಮದುವೆಯಾಗ್ಲಿ ಆಮೇಲೆ ಇವನಿಂದಲೇ ಎಲ್ಲರನ್ನೂ ಕರೆಸ್ತೀವಿ ಫಂಕ್ಷನ್ ಎಲ್ಲಿ ಅಂತ ಆಮೇಲೆ ಹೇಳ್ತೀನಿ.
ಸುಭಾಷ್......ನೋಡಿ ಚಿಕ್ಕಮ್ಮ ಬೇಡ ಅಂದರೂ ಆಂಟಿ ಬಿಡ್ತಿಲ್ಲ.
ಪ್ರೀತಿ.....ಬೇಡ ಗೀಡ ಅಂದ್ರೆ ನಿನ್ನ ಬುರುಡೆ ಒಡೆದಾಕ್ತೀನಿ ಅಷ್ಟೆ ನಡಿ ರಾಜಸ್ಥಾನಕ್ಕೆ ಅಲ್ಲಿ ಪಾವನಾ ಇರ್ತಾಳಲ್ಲ ಅವಳಿಂದಲೇ ನಿನಗೆ ಸರಿಯಾಗಿ ಮಾಡಿಸ್ತೀನಿ.
ನಿಧಿ........ಅಣ್ಣ ಹೀಗಾದರೂ ಅತ್ತಿಗೆ ಇನ್ನೂ ಕೊಲೇ ಬಸವ ಅತ್ತೆ ಅವರೇನೂ ಮಾಡಲ್ಲ ನೀವೇ ನೋಡ್ಕೊಬೇಕು.
ಪ್ರೀತಿ.....ಡೋಂಟ್ವರಿ ಪಾರ್ಟನರ್ ನಾನಿದ್ದೀನಲ್ಲ.
ರಜನಿ......ಪಾರ್ಟನರ್ರಾ ? ನೀವಿಬ್ರೂ ಯಾವಾಗಾದ್ರಿ ?
ನಿಧಿ......ಆಂಟಿ ನಾನು ಅತ್ತೆ ಇಬ್ಬರೂ ಲಡಾಖಿಗೆ ಹೋಗಿದ್ದಾಗಿನಿಂದ ನಾನು ಅತ್ತೆ ಪಾರ್ಟನರ್ಸ್ ಅಲ್ಲವಾ ಅತ್ತೆ.
ಹರೀಶ......ಏನಾದ್ರೂ ಮಾಡ್ಕೊಳ್ಳಿ ನನ್ನ ಕಂದ ಎಲ್ಲಿ ಸದ್ದೇ ಇಲ್ವಲ್ಲ.
ಸುಮ......ಇಬ್ಬರೂ ಅಜ್ಜಿಯ ಹತ್ತಿರ ಕಥೆ ಕೇಳ್ತಾ ಕೂತಿದ್ದಾರೆ.
ನೀತು......ನಿಧಿ ರಾತ್ರಿಗೆ ಬಟ್ಟೆ ಪ್ಯಾಕ್ ಮಾಡಿಕೊಳ್ಳಮ್ಮ.
ನಿಧಿ......ಅಮ್ಮ ನಂದಾಗಿದೆ ಸುರೇಶ—ಗಿರೀಶ ಇಬ್ಬರ ಬಟ್ಟೆಗಳನ್ನೂ ತೆಗೆದಿಟ್ಟಿದ್ದೀನಿ ಈಗೋಗಿ ಅವರದ್ದೂ ಪ್ಯಾಕ್ ಮಾಡಿಬಿಡ್ತೀನಿ .......... ಎಂದೇಳಿ ಮಹಡಿಗೆ ಓಡಿದಳು.
**
**
ಮಂಗಳವಾರ ಮಧ್ಯಾಹ್ನ ಊಟ ಮುಗಿಸಿಕೊಂಡು ನೀತು—ಹರೀಶ ತಮ್ಮ ನಾಲ್ವರು ಮಕ್ಕಳೊಂದಿಗೆ ರೆಡಿಯಾಗಿ ಹಿರಿಯರ ಆಶೀರ್ವಾದ ಪಡೆದರು. ನಿಶಾಳನ್ನೆತ್ತಿಕೊಂಡು ಎಲ್ಲರೂ ಮುದ್ದಾಡಿದರೆ ನಿಧಿಯನ್ನು ತಂಗಿಯರೆಲ್ಲ ತಬ್ಬಿಕೊಂಡು ಆತ್ಮೀಯವಾಗಿ ಬೀಳ್ಕೊಟ್ಟರು. ನಿಶಾ ತನ್ನ ಮೊಟ್ಟಮೊದಲ ಪ್ರಾಣ ಸ್ನೇಹಿತೆಯನ್ನು ಅಪ್ಪಿಕೊಂಡು.....
ನಿಶಾ.....ಪೂನಿ ನಾನಿ ಮಮ್ಮ ಜೊತಿ ಹೋಗಿ ಬತೀನಿ ಆಟ ಅಡನ.
ಪೂನಂ......ಆತು ನಿಶಿ ಬೇಗ ಬಾ
ನಿಶಾ......ಆತು ನಾನಿ ನಾಳೆ ಬತೀನಿ ಅಜ್ಜಿ ತಾತ ಟಾಟಾ ಅತ್ತೆ ಅಕ್ಕ ಮಾಮ ಆಂಟಿ ಟಾಟಾ...ಟಾಟಾ....
ಇವರೊಟ್ಟಿಗೆ ರಾಣಾ ಮತ್ತಿಲ್ಲಿಗೆ ಹೆಲಿಕಾಪ್ಟರ್ ತಂದಿದ್ದ ವಿಕ್ರಂ ಸಿಂಗ್ ಕೂಡ ಹಿಮಾಚಲ ಪ್ರದೇಶದ ಕಾಲ್ಪಾ ತನಕವೂ ಬರುವವರಿದ್ದರು. ಹೆಲಿಕಾಪ್ಟರಿನಲ್ಲಿ ಬೆಂಗಳೂರಿಗೆ ತಲುಪಿದಾಗ ಅಲ್ಲಿ ಸಂಸ್ಥಾನದ ವಿಮಾನ ಇವರಿಗೆ ಮೊದಲೇ ಸಿದ್ದವಾಗಿದ್ದು ಎ.ಟಿ.ಸಿ. ಯಿಂದ ಗೋ ಅಹೆಡ್ ಸಿಗುತ್ತಿದ್ದಂತೆ ವಿಮಾನ ದೆಹಲಿಯ ಕಡೆ ಪ್ರಯಾಣವನ್ನು ಬೆಳೆಸಿತು.
ಸಂಜೆ ಹೊತ್ತಿಗೆ ದೆಹಲಿ ತಲುಪಿದ್ದು ಅಲ್ಲಿಯೇ ಈ ರಾತ್ರಿ ವಾಸ್ತವ್ಯ ಹೂಡುವವರಿದ್ದರು. ವಿಮಾನ ನಿಲ್ದಾಣಕ್ಕೆ ವರ್ಧನ್ ಪಿಎ ಬಂದು ಕಾಯುತ್ತಿದ್ದು ಇವರನ್ನು ಕರೆದುಕೊಂಡು ವರ್ಧನ್ ನಿವಾಸದ ಕಡೆ ತೆರಳಿದನು. ವರ್ಧನ್ ಕೂಡ ಮನೆಯಲ್ಲೇ ಕಾಯುತ್ತಿದ್ದು ನಿಧಿ..ಗಿರೀಶ ಮತ್ತು ಸುರೇಶನನ್ನು ಆಲಂಗಿಸಿಕೊಂಡು ಸ್ವಾಗತಿಸುತ್ತ ಅಕ್ಕ ಭಾವನ ಆಶೀರ್ವಾದ ಪಡೆದರೆ ನಿಶಾ ಚಾಚೂ.....ಎಂದಗರಿ ಅವನ ಮೇಲೇರಿಕೊಂಡಳು. ರಾಣಾ ಮತ್ತು ವಿಕ್ರಂ ಸಿಂಗ್ ಕೂಡ ವರ್ಧನ್ ಸಮಕ್ಷಮ ಗೌರವ ಸಲ್ಲಿಸಿದರು.
ನೀತು......ನೀನೀವತ್ತು ಕಛೇರಿಗೇ ಹೋಗಿಲ್ಲವಾ ?
ವರ್ಧನ್.....ಅಕ್ಕ ನನ್ನ ಕುಟುಂಬ ಮೊದಲನೇ ಸಲ ಮನೆಗೆ ಬರ್ತಾ ಇರುವಾಗಲೂ ನಾನು ಕಛೇರಿಯಲ್ಲಿರಬೇಕಾ ? ಭಾವ ಇದು ನನ್ನ ಖಾಸಗಿ ನಿವಾಸ ಇಲ್ಯಾರಿಗೂ ಪ್ರವೇಶವಿಲ್ಲ ಒಂದರ್ಥದಲ್ಲಿ ಇದನ್ನು ಅತ್ತಿಗೆಯೇ ನನಗಾಗಿ ಕಟ್ಟಿಸಿಕೊಟ್ಟಿದ್ದು ಅದಕ್ಕೆ ನಾನು ಸಾಧ್ಯವಿದ್ದಾಗ ಇಲ್ಲಿಯೇ ಬಂದು ಉಳಿದುಕೊಳ್ತೀನಿ ಒಂದು ರೀತಿ ನೆಮ್ಮದಿ ಸಿಗುತ್ತೆ.
ಹರೀಶ......ಹೌದು ಕಣೋ ಇದಂತೂ ಸತ್ಯವಾದ ಮಾತು ನಿಶಾ ನಿಧಿ ಇಬ್ಬರೂ ಅರಮನೆಯ ಯುವರಾಣಿಯರಾಗಿದ್ದರೂ ನಮ್ಮೂರಿನ ಮನೆ ತಲುಪಿದಾಗ ಇವರ ಮುಖದಲ್ಲೊಂದು ರೀತಿ ನೆಮ್ಮದಿಯ ಕಳೆ ಬರುವುದನ್ನು ನಾನೂ ಗಮನಿಸಿದ್ದೀನಿ.
ನಿಧಿ.......ಅಪ್ಪ ಅರಮನೆಯಲ್ಲಿಲ್ಲದ ಸ್ವಾತಂತ್ರ ಮತ್ತು ಆಪ್ಯಾಯತೆ ನನಗೆ ನನ್ನ ಮನೆಯಲ್ಲಿ ಸಿಗುತ್ತೆ ಅದು ತಪ್ಪಾ ?
ಹರೀಶ......ತಪ್ಪಲ್ಲ ಕಣಮ್ಮ ನಾನು ಮಾತಿಗೆ ಹೇಳಿದ್ದಷ್ಟೆ ನೀನಿಷ್ಟಕ್ಕೆ ಕೋಪ ಮಾಡಿಕೊಳ್ಳೋದಾ ?
ನಿಶಾ......ಏಟ್ ಕೊಲು ಪಪ್ಪ ಅಕ್ಕ ನಿನ್ನಿ ಬೇತು ಪಪ್ಪ ನನ್ನಿ ಕೋಪ ಬಂತು ಏಟ್ ಕೊಲು.
ಸುರೇಶ......ಲೇ ಚಿಲ್ಟಾರಿ ಇಷ್ಟು ದಿನ ಅಣ್ಣನಿಗೇಟು ಕೊಡು ಅಂತ ಹೇಳ್ತಿದ್ದೆ ಇವತ್ತು ಅಕ್ಕನಿಗಾ ? ಅಕ್ಕ ಮೂಲೆಗೆ ಸೇರಿಸ್ಕೊಳ್ಳಿ ಚೆನ್ನಾಗಿ ತಟ್ಟಿ ಬಿಡೋಣ.
ನಿಧಿ......ಹೂಂ ಕಣೋ ಎಳ್ಕೊಂಡ್ ಬಾಯಿಲ್ಲಿ.
ವರ್ಧನ್ ಕುತ್ತಿಗೆಗೆ ಬಿಗಿಯಾಗಿ ನೇತಾಕಿಕೊಂಡ ನಿಶಾ.....ಚಾಚೂ ನೋಡು ಅಣ್ಣ ಅಕ್ಕ ನನ್ನಿ ಏಟ್ ಕೊಲುತ್ತೆ.
ಇದೇ ರೀತಿ ಖುಷಿಖುಷಿಯಿಂದ ರಾತ್ರಿಯವರೆಗೂ ಮಾತನಾಡುತ್ತ ಭೋಜವಾದ ನಂತರ.......
ವರ್ಧನ್......ಭಾವ ಇಲ್ಲಿಂದ ನಾಳೆ ನೀವು ಕುಲ್ಲುವಿನಲ್ಲಿನ ವಿಮಾನ ನಿಲ್ದಾಣವರೆಗೆ ಹೋಗಬಹುದು ಅಲ್ಲಿ ಹೆಲಿಕಾಪ್ಟರ್ ರೆಡಿಯಾಗಿದೆ. ವಿಕ್ರಂ ಸಿಂಗ್ ಕಾಲ್ಪಾದಲ್ಲಿ ಉಳಿದುಕೊಳ್ಳೋ ವ್ಯವಸ್ಥೆಯಾಗಿದ್ಯಾ ?
ವಿಕ್ರಂ ಸಿಂಗ್......ಜೀ ಹುಕುಂ ಅಲ್ಲಿನ ಪಂಚಾಯಿತಿ ಅಧ್ಯಕ್ಷರು ತಮ್ಮ ಇನ್ನೊಂದು ಮನೆಯನ್ನು ಬಿಟ್ಟುಕೊಟ್ಟಿದ್ದಾರೆ ಅವರೇ ನಾಳೆ ಊಟದ ವ್ಯವಸ್ಥೆಯನ್ನೂ ಮಾಡಿಸುತ್ತಾರಂತೆ.
ನೀತು......ಇಷ್ಟೊಂದೆಲ್ಲಾ ರಿಸ್ಕ್ ಯಾಕೋ ತಗೊಂಡೆ ? ನಿನಗೇನು ಕಡಿಮೆ ಕೆಲಸದ ವತ್ತಡಗಳಿರುತ್ತಾ ?
ವರ್ಧನ್......ಏನಕ್ಕ ನನ್ನ ಅಕ್ಕ ಭಾವನ ಯೋಗಕ್ಷೇಮ ಸರಿಯಾಗಿ ನೋಡಿಕೊಳ್ಳುವುದು ನನ್ನ ಕರ್ತವ್ಯವಲ್ಲವಾ ನೀವೇನೂ ಚಿಂತೆ ಮಾಡಲು ಹೋಗ್ಬೇಡಿ ಎಲ್ಲಾ ವ್ಯವಸ್ಥೆಯೂ ಆಗಿದೆ. ನನ್ನ ಮುಂದಿನ ರಾಜಕೀಯ ವಾರಸುದಾರರು ಈ ನಾಲ್ವರಲ್ಲೇ ಒಬ್ಬರು ತಾನೇ ?
ನಿಧಿ.......ನಾನಂತೂ ಆಗಲ್ಲ ಚಿಕ್ಕಪ್ಪ ಈಗಲೇ ಹೇಳಿಬಿಡ್ತೀನಿ ನಾನು ಅಪ್ಪ ಅಮ್ಮನ ಜೊತೆಗೇ ಇರೋದು ದೇಶದ ಚಿಂತೆ ನನಗೆ ಬೇಡ.
ನೀತು.....ಇವರು ಮೂರು ಜನರನ್ನು ಬಿಟ್ಬಿಡಪ್ಪ ಇನ್ನೂ ಹೇಗಿದ್ರೂ ನೀನು 25 ವರ್ಷಗಳಂತೂ ರಾಜಕೀಯದಲ್ಲಿ ಇರ್ತೀಯಲ್ಲ ಅಷ್ಟು ಸಮಯದಲ್ಲಿ ನನ್ನೀ ಚಿಲ್ಟಾರೀನ ರೆಡಿ ಮಾಡ್ತೀನಿ. ನಿನ್ನ ರಾಜಕೀಯ ವಾರಸುದಾರಳಾಗಲು ಇವಳೇ ಸರಿಯಾದವಳು.
ಹರೀಶ......ನನ್ನ ಕಂದನ್ನ ನನ್ನಿಂದ ದೂರ ಮಾಡ್ತಿದ್ದೀಯಾ ?
ನೀತು......ಹೂಂ ನಾಳೆಯೇ ಪ್ರಧಾನಿಯಾಗಿ ಇಲ್ಲಿಗೆ ಬಂದ್ಬಿಡ್ತಾಳೆ ಇನ್ನೂ ಎಲ್.ಕೆ.ಜಿ ಮೆಟ್ಟಿಲನ್ನೇ ಹತ್ತಿಲ್ಲ ನೀವೇನ್ರೀ ಅಷ್ಟರಲ್ಲಾಗಲೇ ಏನೇನೋ ಮಾತಾಡ್ತೀರಲ್ಲ ಅದಕ್ಕಿನ್ನೂ 20—25 ವರ್ಷ ಸಮಯ ಬೇಕಾಗುತ್ತೆ. ನೀವೂ ಅಷ್ಟರಲ್ಲಿ ಮುದಿ ಬಿದ್ದೋಗಿರ್ತೀರ ಮಗಳ ಜೊತೆ ಹಾಯಾಗಿ ದೆಹಲಿಯಲ್ಲಿ ಬಂದು ಕೂತ್ಕೊಳ್ಳಿ.
ಹರೀಶ......ನೀನು ಬರಲ್ವಾ ?
ನೀತು......ನಾನಲ್ಲಿ ನನ್ನ ಮಗ...ಮಗಳು ಮೊಮ್ಮಕ್ಕಳ ಜೊತೆಗೇ ಹಾಯಾಗಿರ್ತೀನಿ ನೀವೊಬ್ಬರೇ ಈ ಲಿಲಿಪುಟ್ ಜೊತೆಗಿರಿ ಸಾಕು.
ವರ್ಧನ್.......ಹೂಂ ಅಕ್ಕ ಎಲ್ಲವನ್ನೂ ಇವಳಿಗೆ ವಹಿಸಿ ನಾನಲ್ಲಿಗೇ ಬಂದು ನಿಮ್ಜೊತೆ ಸೆಟಲ್ ಆಗಿಬಿಡ್ತೀನಿ.
ಹರೀಶ....ಬಾ ಕಂದ ಇವರೆಲ್ಲ ಸರಿಯಿಲ್ಲ ನಾನು ನೀನು ಹೋಗಿ ತಾಚಿ ಮಾಡಣ.
ವರ್ಧನ್......ಇವತ್ತು ನಾಲ್ಕೂ ಜನ ನನ್ಜೊತೆಯಲ್ಲಿ ಮಲಗ್ತಾರೆ ಭಾವ ನೀವು ಅಕ್ಕನಿಂದ ಬೈಸಿಕೊಳ್ಳುತ್ತ ಮಲಗಿ ನಡೀರಿ ಮಕ್ಳಾ.
ಹರೀಶ—ನೀತು ನಗುತ್ತಿದ್ದರೆ ವರ್ಧನ್ ನಾಲ್ವರನ್ನೂ ತನ್ನೊಂದಿಗೆ ಕರೆದುಕೊಂಡು ಮಹಡಿಗೆ ತೆರಳಿದನು. ಮಾರನೇ ಮುಂಜಾನೆಯೇ ಬೇಗನೆದ್ದು ಎಲ್ಲರೂ ರೆಡಿಯಾದಾಗ ರಾಣಾ ಮತ್ತು ವಿಕ್ರಂ ಸಿಂಗ್ ಇಬ್ಬರಿಗೂ ಕೆಲವು ಸೂಚನೆಗಳನ್ನು ನೀಡಿದ ವರ್ಧನ್ ಎಲ್ಲರನ್ನೂ ಬೀಳ್ಕೊಟ್ಟು ಕಳುಹಿಸಿದನು. ದೆಹಲಿಯಿಂದ ವಿಮಾನದಲ್ಲಿ ಕುಲ್ಲು ತಲುಪಿ ಅಲ್ಲಿಂದ ಹೆಲಿಕಾಪ್ಟರಿನ ಮೂಲಕ ಕಾಲ್ಪಾದಲ್ಲಿ ಬಂದಿಳಿದ ಕುಟುಂಬವನ್ನು ಸ್ವಾಗತಿಸಲು ವರ್ಧನ್ ಪಕ್ಷದ ಆ ಹಳ್ಳಿಯ ಗ್ರಾಮ ಪಂಚಾಯಾತಿ ಅಧ್ಯಕ್ಷ ಹಾಜರಿದ್ದನು. ಒಂದು ಹೆಲಿಕಾಪ್ಟರಿನಲ್ಲಿ ಕುಟುಂದವರ ಜೊತೆ ರಾಣಾ—ವಿಕ್ರಂ ಸಿಂಗ್ ಬಂದರೆ ಇನ್ನೊಂದರಲ್ಲಿ ಹದಿನೈದು ಜನ ರಕ್ಷಕರು ಶಸ್ತ್ರಧಾರಿಗಳಾಗಿ ಬಂದಿದ್ದರು. ಎಲ್ಲರೂ ಅಧ್ಯಕ್ಷನ ಮನೆಯತ್ತ ತೆರಳಿ ಅಲ್ಲಿಯೇ ಈ ದಿನ ವಿಶ್ರಾಂತಿಯನ್ನು ತೆಗೆದುಕೊಳ್ಳುವ ಕಾರ್ಯಕ್ರಮವಿತ್ತು.
ಸುರೇಶ.......ಅಕ್ಕ ಮಧ್ಯಾಹ್ನವೇ ಇಷ್ಟೊಂದು ಛಳಿಯಿದೆಯಲ್ಲ ಇನ್ನು ರಾತ್ರಿಯ ಕಥೆಯೇನು ?
ನಿಧಿ......ಅದಕ್ಕೇ ಅಲ್ವೇನೋ ಥರ್ಮಲ್ ವಾರ್ಮಿಂಗ್ ಬಟ್ಟೆಗಳನ್ನು ತಂದಿರೋದು ನಡಿ ಅದನ್ನು ಹಾಕಿಕೋ ಬೆಚ್ಚಗಿರ್ತೀಯ ಗಿರೀಶ ನಡಿ ನೀನೂ ಡ್ರೆಸ್ ಚೇಂಜ್ ಮಾಡಿಕೋ.
ನಿಶಾ.......ಮಮ್ಮ ನನ್ನಿ ಕುಳುಕುಳು ಆತು ಮಮ್ಮ ಬೇಗ ಟೋಪಿ ಹಾಕು ತುಂಬ ಕುಳುಕುಳು.
ನೀತು......ಬಾರಮ್ಮ ಬಂಗಾರಿ ನಿನ್ನ ಫುಲ್ ಪ್ಯಾಕಾ ಮಾಡಿಬಿಡ್ತೀನಿ.
ಎಲ್ಲರೂ ರಾಣಾ—ವಿಕ್ರಂ ಸಿಂಗ್ ಜೊತೆ ಮಾತನಾಡುತ್ತ ಬಿಸಿಬಿಸಿ ಕಾಫಿ ಕುಡಿಯುತ್ತ ಕುಳಿತಿದ್ದರೆ ಕಣ್ಣು..ಮೂಗು...ಬಾಯನ್ನು ಬಿಟ್ಟು ಉಳಿದೆಲ್ಲ ಫುಲ್ ಪ್ಯಾಕ್ ಮಾಡಿಕೊಂಡಿದ್ದ ನಿಶಾ ಅಣ್ಣ ಅಕ್ಕನ ಮಧ್ಯೆ ಕುಳಿತು ವೀಡಿಯೋ ಕಾಲ್ ಮೂಲಕ ಮನೆಯವರೊಟ್ಟಿಗೆ ಮಾತನಾಡುತ್ತ ಇಲ್ಲಿ ಛಳಿಯಾಗ್ತಿದೆ ಅಂತ ಹೇಳುತ್ತಿದ್ದಳು. ರಾತ್ರಿಯ ಹೊತ್ತಿಗೆ ಮನೆಯಾಚೆ ಚಳಿ ವಿಪರೀತವಾಗಿ ಏರಿಕೆಯಾಗಿದ್ದು ನಿಶಾ ಹೊರಗಡೆ ಕಾಲೇಯಿಡಲಿಲ್ಲ.
ಮನೆಯೊಳಗೆ ಎರಡು ಕಡೆ ಕಟ್ಟಿಗೆ ಜೋಡಿಸಿ ಬೆಂಕಿ ಹಚ್ಚಲಾಗಿದ್ದು ಅದರ ಹತ್ತಿರವೇ ಅಪ್ಪನ ಮಡಿಲಲ್ಲಿ ಪಟ್ಟಾಗಿ ಕುಳಿತು ಬೆಂಕಿ ಕಾಯಿಸಿಕೊಳ್ಳುತ್ತ ಹಾಯಾಗಿ ಕುಳಿತು ತನ್ನ ಪ್ರಶ್ನೆಗಳಿಂದ ಅಪ್ಪನ ತಲೆ ತಿನ್ನುತ್ತಿದ್ದಳು. ರಾಣಾ—ವಿಕ್ರಂ ಸಿಂಗ್ ಜೊತೆ ನೀತು ಗುಟ್ಟಾಗಿ ಸಂಸ್ಥಾನದ ವಿರೋಧಿಯ ಬಗ್ಗೆ ಮಾತಾಡಿ ಅವನನ್ನು ಕಂಡು ಹಿಡಿಯುವುದಕ್ಕೆ ಉಪಾಯಗಳನ್ನು ಹುಡುಕುತ್ತ ಕುಳಿತಿದ್ದರು. ಊಟ ಮಾಡಿದ ತಕ್ಷಣ ಅಮ್ಮನ ಜೊತೆ ಸೇರಿಕೊಂಡ ನಿಶಾ ಬೆಚ್ಚಗೆ ಮಲಗಿದರೆ ಪಕ್ಕದ ರೂಮಿನಲ್ಲಿ ತಮ್ಮಂದಿರ ಜೊತೆಗೆ ನಿಧಿ ಕೂಡ ನಿದ್ರೆಗೆ ಶರಣಾದಳು.
* *
* *
Thumbha chanagide.. sadyavadre daily post madi.. kelasada jothe bareyalu time saludila antha gothu adru daily upload ge try madi.. request
ReplyDelete4 ದಿನ ಆಯಿತು ಸ್ಟೋರಿ ಬರೆದು ನನಗೆ ಓದುವ ಕಾತುರ ಹೆಚ್ಚಾಗುತ್ತಿದೆ ದಯವಿಟ್ಟು ಸ್ಟೋರಿ ಮದ್ಯ ಮದ್ಯ ಸ್ಟೋರಿ ಯಾಕೆ ಸ್ಟಾಪ್ ಮಾಡಕತ್ತಿರಿ ದಯವಿಟ್ಟು ಸ್ಟೋರಿ ಮಿಸ್ ಮಾಡದೆ daily daily 1, 2, 3, 4, 5, part upload mada ri please my personal humble request ri 🙏🙏🙏🙏🙏
ReplyDelete