ಜುಲೈ 31
ಜೈಪುರದ ಬಳಿ ಒಂದು ವಯಕ್ತಿಕ ಫಾರ್ಮ್ ಹೌಸ್.....
ರಾಜಸ್ಥಾನದ ರಾಜಧಾನಿ ಜೈಪುರದಿಂದ 40 ಕಿಮೀ.. ದೂರ ನಿರ್ಜನ ಪ್ರದೇಶದಲ್ಲಿ ಎಕರೆಗಟ್ಟಲೆ ವಿಶಾಲವಾದ ಪ್ರದೇಶದಲ್ಲಿ ಅತ್ಯಾಧುನಿಕ ಸಾಧನಗಳೊಂದಿಗೆ ಸುಸಜ್ಜಿತವಾಗಿರುವ ಫಾರ್ಮ್ ಹೌಸಿನಲ್ಲಿಂದು ಆ ಪ್ರದೇಶದ ಗಣ್ಯಾತಿಗಣ್ಯ ವ್ಯಕ್ತಿಗಳೆಲ್ಲರೂ ಒಟ್ಟಿಗೆ ಸೇರಿಕೊಂಡು ಮೀಟಿಂಗ್ ಮಾಡುತ್ತಿದ್ದರು.
ರಾಜಸ್ಥಾನದ ಮುಖ್ಯಮಂತ್ರಿ.....ಗೃಹ ಸಚಿವನ ಜೊತೆ ಅಲ್ಲಿನ ಸರ್ಕಾರದ ಇನ್ನೂ ಏಳು ಜನ ಮಂತ್ರಿಗಳು... ಸರ್ಕಾರಿ ಸೇವೆಯಲ್ಲಿರುವ ಅತ್ಯುನ್ನತ ಅಧಿಕಾರಿಗಳು....ಎಂಟು ಜನ ....ಶಾಸಕರು....ಕೆಲವು ಬಿಝಿನೆಸ್ ಜಗತ್ತಿಗೆ ಸಂಬಂಧಿಸಿದ ಪ್ರತಿಷ್ಠಿತ ವ್ಯಕ್ತಿಗಳು ಯಾವುದೋ ಮುಖ್ಯ ವಿಷಯ ಚರ್ಚಿಸುವುದಕ್ಕಾಗಿ ಇಲ್ಲಿ ಬಂದು ಸೇರಿಕೊಂಡಿದ್ದರು.
ಸಿಎಂ.....ಏನ್ರೀ ದೊರಾಬ್ ನಾವು ಮೊದಲು ನಮ್ಮ ಜೊತೆಯಲ್ಲಿ ಸೇರಿಕೊಳ್ಳುವಂತೆ ನಿಮ್ಮನ್ನು ಆಹ್ವಾನಿಸಿದರೂ ನೀವಾಗ ನಮ್ಮನ್ನು ತಿರಸ್ಕರಿಸಿ ವಿರೋಧ ಪಕ್ಷದವರ ಜೊತೆ ಸೇರಿಕೊಂಡಿದ್ರಲ್ಲ.
ದೊರಾಬ್.....ಕ್ಷಮಿಸಿ ಸರ್ ಆಗ ಮಣ್ಣು ತಿನ್ನುವ ಕೆಲಸ ಮಾಡಿಬಿಟ್ಟೆ ಈಗ ನನಗೆ ಬುದ್ದಿ ಬಂದಿದೆ.
ಗೃಹ ಸಚಿವ......ಎಲ್ಲಿ ಕಿಶೋರಿ ಸಿಂಗ್ ಜಗಮಲ್ ಇನ್ನೂ ಬಂದಿಲ್ವಲ್ಲ ಅವರ ಜೊತೆಗಾರರೂ ಸಹ ಯಾರೊಬ್ಬರೂ ಕಾಣಿಸ್ತಿಲ್ಲ.
ಒಬ್ಬ ಅಧಿಕಾರಿ.......ಸರ್ ಅವರ ಬಗ್ಗೆ ನಿಮಗೊಂದು ವಿಷಯವನ್ನು ತಿಳಿಸಬೇಕಾಗಿತ್ತು.
ಸಿಎಂ.....ಯಾಕೆ ಏನಾಯ್ತು ?
ಅಧಿಕಾರಿ.......ಸರ್ ಕೆಲವು ದಿನಗಳಿಂದ ಕಿಶೋರಿ ಸಿಂಗ್ ಜಗಮಲ್ ಒಬ್ಬರೇ ಅಲ್ಲ ಅವರ ಜೊತೆಗಾರರು ಸೇಠ್ ಧನಿಕಲಾಲ್... ಬ್ರಿಜೇಶ್ ಮಿಶ್ರಾ.... ವಿನೋದ್ ಪಾಠಕ್ ಯಾರೊಬ್ಬರೂ ನಮ್ಮ ಜೊತೆಯಲ್ಲಿ ಸಂರ್ಪಕದಲ್ಲಿಲ್ಲ.
ಗೃಹ ಸಚಿವ........ಸಂಪರ್ಕದಲ್ಲಿಲ್ಲ ಅಂದರೇನರ್ಥ ?
ಅಧಿಕಾರಿ.......ಸರ್ ಅವರ ಫೋನ್ ಸ್ವಿಚಾಫ್ ಆಗಿದೆ ಜೊತೆಗವರು ತಮ್ಮ ಕಛೇರಿಗಳಿಗೂ ಬರ್ತಿಲ್ಲ ಮನೆಯಲ್ಲೂ ಸಿಗ್ತಿಲ್ಲ.
ಸಚಿವ4.......ಅವರ ಮನೆಯವರ ಬಳಿ ವಿಚಾರಿಸಿದ್ದೀರಾ ಅಥವ ಅವರ ಕಛೇರಿಯಲ್ಲಿ ಕೇಳಿದ್ದೀರಾ ? ಯಾವುದಾದರೂ ಕೆಲಸಕ್ಕಾಗಿ ಹೊರ ದೇಶಕ್ಕೇನಾದರೂ ಹೋಗಿರಬಹುದು.
ಅಧಿಕಾರ.......ಎಲ್ಲವನ್ನೂ ಪರಿಶೀಲಿಸಿದ್ದೀವಿ ಸರ್ ಅವರಲ್ಯಾರೂ ರಾಜಸ್ಥಾನದಿಂದ ಹೊರ ಹೋಗಿಲ್ಲ ಅವರಷ್ಟೇ ಅಲ್ಲ ಕುಟುಂಬದ ಸದಸ್ಯರುಗಳೂ ಸಹ ಕಾಣಿಸುತ್ತಿಲ್ಲ.
ಗೃಹ ಸಚಿವ......ವಾಟ್ ಏನ್ ಹೇಳ್ತಿದ್ದೀರಾ ? ನಮ್ಮ ಪ್ಲಾನ್ ಸಕ್ಸಸ್ ಆಗಬೇಕಿದ್ದರೆ ಆ ನಾಲ್ವರು ತುಂಬ ಅವಶ್ಯಕ ಅವರೇ ಕಾಣಿಸುತ್ತಿಲ್ಲ ಅಂತಿದ್ದೀರಲ್ಲ ಏನಿದರ ಅರ್ಥ ?
ಸಿಎಂ......ಅವರ ಹಿಂದೆ ಯಾವಾಗಲೂ ನಮ್ಮ ಗೂಡಚಾರಿಗಳು ಇರಲೇಬೇಕು ಅಂತ ಹೇಳಿರಲಿಲ್ವಾ.
ಅಧಿಕಾರಿ.......ಸರ್ ನಾಲ್ವರ ಹಿಂದೆಯೂ 4—4 ಜನರನ್ನು ಅವರ ಮೇಲೆ ನಿಗಾ ವಹಿಸುತ್ತಿರುವಂತೆ ನೇಮಿಸಿದ್ದೆ ಆದರೆ.......
ಗೃಹ ಸಚಿವ.......ಏನು ಆದರೆ ಮುಂದೇಳು.
ಅಧಿಕಾರಿ.......ಸರ್ ಆ ನಾಲ್ಶರು ಕಾಣೆಯಾದ ದಿನದಿಂದಲೂ ನಮ್ಮ ಜನರೂ ಸಹ ನಾಪತ್ತೆಯಾಗಿದ್ದಾರೆ ಅವರನ್ನೂ ಸಂಪರ್ಕಿಸಲಾಗಿಲ್ಲ.
ಸಿಎಂ.....ಅವರನ್ನು ಯಾರಾದರೂ ಕಿಡ್ನಾಪ್ ಮಾಡಿರುವ ಸಾಧ್ಯತೆ ?
ಗೃಹ ಸಚಿವ.......ಇಲ್ಲ ಸರ್ ಹಾಗಾಗಲಿಕ್ಕೆ ಸಾಧ್ಯವಿಲ್ಲ ರಾಜಸ್ಥಾನದ ನೆಲದಲ್ಲಿ ನಮ್ಮನ್ನು ಏದುರಿಸಿ ನಿಲ್ಲುವ ಗಂಡು ಇದ್ದಿದ್ದು ಒಬ್ಬನೇ ಆದ್ರೆ ಅವನೂ ಈಗ ಬದುಕಿಲ್ಲವಲ್ಲ.
ಮಂತ್ರಿ5.......ಯಾರ ಬಗ್ಗೆ ಹೇಳ್ತಿದೀರ ಸರ್ ?
ಗೃಹ ಸಚಿವ.......ಇನ್ಯಾರ ಬಗ್ಗೆ ಹೇಳಲಿ ಮಹರಾಜ ರಾಣಪ್ರತಾಪ್.
ಸಿಎಂ ಬೆವರು ಒರೆಸಿಕೊಳ್ಳುತ್ತ......ಈ ಸಮಯ ಅವನ ಬಗ್ಗೆ ಯಾಕೆ ನೆನೆಪು ಮಾಡಿಕೊಳ್ತೀರಾ ? ಅವನ ಕಥೆಗೆ ಅಂತ್ಯ ಹಾಡಲು ನಾವೆಲ್ಲ ಎಷ್ಟೊಂದು ಪ್ರಯಾಸ ಪಡಬೇಕಾಗಿ ಬಂದಿತ್ತು.
ಮಂತ್ರಿ6......ಹೌದು ಸರ್ ಆ ಕೆಲಸಕ್ಕೆ ಹಿಮಾಚಲದ ರಾಜ ಮನೆತನ ನಮಗೆ ತುಂಬಾನೇ ಸಹಾಯ ಮಾಡಿದ್ದರು.
ಅಧಿಕಾರಿ.......ಸರ್ ಹಿಮಾಚಲದಲ್ಲಿರುವ ಅರಮನೆಯಿಂದ ಅಲ್ಲಿನ ರಾಜ ಮನೆತನದವರ ಜೊತೆಯಲ್ಲಿ ಅಲ್ಲಿನ ಅಳುಕಾಳುಗಳೂ ಸಹ ಕಣ್ಮರೆಯಾಗಿದ್ದಾರೆ ಯಾರೊಬ್ಬರ ಸುಳಿವೂ ಸಿಗ್ತಿಲ್ಲ.
ಅಧಿಕಾರಿಯ ಮಾತನ್ನು ಕೇಳಿ ಸಿಎಂ—ಗೃಹ ಸಚಿವನ ಸಹಿತ ಅಲ್ಲಿದ್ದ 43ಜನರೂ ಗಾಬರಿ ಶಾಕಿನಿಂದ ಎದ್ದು ನಿಂತು ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿಕೊಳ್ಳುತ್ತಿದ್ದರು.
ಸಿಎಂ.......ಖಂಡಿತವಾಗಿ ಇದೆಲ್ಲದರ ಹಿಂದೆ ಯಾರದ್ದೋ ಕೈವಾಡ ಇದೆ ಬಹುಶಃ ಸೂರ್ಯವಂಶಿಗಳೇ ಇರಬಹುದಾ ?
ಶಾಸಕ4......ಸರ್ ಈಗೆಲ್ಲಿದ್ದಾರೆ ಸೂರ್ಯವಂಶಿಗಳು ಮಹರಾಜ ಮಹರಾಣಿ ಇಬ್ಬರೂ ಸ್ವರ್ಗಸ್ಥರಾಗಿದ್ದಾರೆ ಉಳಿದಿರುವುದು ಅವರ ಒಬ್ಬಳೇ ಮಗಳು ಅದುವೇ ಒಂದೋ ಎರಡೋ ವರ್ಷದ ಮಗು.
ಶಾಸಕ5......ಆದರೆ ತಲೆತಲಾಂತರಗಳಿಂದಲೂ ಸೂರ್ಯವಂಶಿಯ ಸಂಸ್ಥಾನದ ರಕ್ಷಣೆ ಮಾಡುತ್ತಿರುವ ಯೋಧರಿನ್ನೂ ಇದ್ದಾರಲ್ಲ ಅವರ ವಿಷಯ ಮರೆತು ಬಿಟ್ಟಿರಾ ?
ಗೃಹ ಸಚಿವ....ಹೌದು ಸರ್ ಏನೋ ಸರಿಬರುತ್ತಿಲ್ಲ ಇದೆಲ್ಲದರ ಹಿಂದೆ ಯಾರದ್ದೋ ಕೈವಾಡವಿದೆ ಅಂತ ನನಗೂ ಅನುಮಾನವಾಗ್ತಿದೆ.
ಸಿಎಂ......ನಮ್ಮ ಮೀಟಿಂಗ್ ಇಲ್ಲಿಗೆ ನಿಲ್ಲಿಸೋಣ ಅವರೆಲ್ಲರ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಸಿಗುವವರೆಗೂ ನಾವು ಈ ರೀತಿಯಲ್ಲಿ ಗುಪ್ತವಾಗಿ ಬೇಟಿಯಾಗುವುದು ಬೇಡ ನಡೀರಿ ಹೋಗೋಣ.
ಅದೇ ಸಮಯಕ್ಕೆ ಸರಿಯಾಗಿ.......
* *
* *
ಎರಡು ದಿನಗಳ ಹಿಂದೆ.....
ಜುಲೈ 29ನೇ ತಾರೀಖು.....
ರಾಣಾ......ಖಚಿತವಾದ ಮಾಹಿತಿಯಾ ಅಜಯ್ ?
ಅಜಯ್ ಸಿಂಗ್.......ಹೌದು ರಾಣಾ ಸಿಎಂ...ಗೃಹ ಸಚಿವ ಮತ್ತವರ ಜೊತೆಗಾರರೆಲ್ಲರೂ 31ನೇ ಜುಲೈ ಅಂದ್ರೆ ನಾಳಿದ್ದು ಜೈಪುರದಿಂದ ಹೊರಭಾಗದಲ್ಲಿರುವ ಫಾರ್ಮ್ ಹೌಸಿನಲ್ಲಿ ಸೇರಲಿದ್ದಾರೆ.
ವಿಕ್ರಂ ಸಿಂಗ್....ಆ ಫಾರ್ಮ್ ಹೌಸಿನ ಭದ್ರತೆಯ ಹೊಣೆಯಾರದ್ದು.
ಅಜಯ್ ಸಿಂಗ್......ಪೀಟರ್ ಅಂತ ವಿದೇಶಿ ಮಾಫಿಯಾ ತಂಡದ ಮಾಜಿ ಸದಸ್ಯನಾಗಿದ್ದ ಅಲ್ಲಿನ ಸಂಪೂರ್ಣ ಸೆಕ್ಯೂರಿಟಿ ಜವಾಬ್ದಾರಿ ಅವನದ್ದೇ.
ರಾಣಾ......ಈಗ ಫಾರ್ಮ್ ಹೌಸಿನಲ್ಲಿ ಯಾರಿರುತ್ತಾರೆ ? ಅದರ ಬಗ್ಗೆ ವಿವರಗಳೇನಾದರೂ ತಿಳಿಯಿತಾ ?
ಸುಮೇರ್ ಸಿಂಗ್.....ಎಲ್ಲವನ್ನೂ ಕಲೆ ಹಾಕಿದ್ದೀವಿ ನಾಳೆ ಮುಂಜಾನೆ ಹೊತ್ತಿಗೆ ಪೀಟರ್ ಮತ್ತವನ ಗ್ಯಾಂಗಿನವರು ಫಾರ್ಮ್ ಹೌಸಿಗೆ ಬರುತ್ತಿದ್ದಾರೆ. ಅಲ್ಲೆಲ್ಲಾ ಚೆಕ್ ಮಾಡಿ ಒಳಗೆ ಹೋಗಲು ಇರುವಂತಹ ದಾರಿಗಳನ್ನೆಲ್ಲಾ ಬ್ಲಾಕ್ ಮಾಡ್ತಾರೆ. ಈಗ ಫಾರ್ಮ್ ಹೌಸಿನಲ್ಲಿ 10 ಜನ ಕೆಲಸಗಾರರು 8—10 ಜನ ಸೆಕ್ಯೂರಿಟಿಯವರು ಮಾತ್ರ ಇದ್ದಾರೆ
ರಾಣಾ.....ಒಳಗೆ ಹೋಗುವುದಕ್ಕೆ ದಾರಿ ?
ಅಜಯ್ ಸಿಂಗ್.....ಏಳು ಕಡೆಗಳಿಂದ ಯಾರೊಬ್ಬರ ಕಣ್ಣಿಗೂ ಸಹ ಬೀಳದಂತೆ ಫಾರ್ಮ್ ಹೌಸಿನೊಳಗೆ ಹೋಗಬಹುದು ಆದರೆ ನಾಳೆ ಆ ದಾರಿಗಳೂ ಕೂಡ ಬಂದ್ ಮಾಡುವುದು ಖಚಿತ. ನಾವೇನಾದ್ರೂ ಮಾಡಬೇಕಿದ್ದರೆ ಇಂದು ರಾತ್ರಿಯೇ ಮಾಡ್ಬೇಕು.
ವಿಕ್ರಂ ಸಿಂಗ್......ಸಿಸಿ ಕ್ಯಾಮೆರಾಗಳನ್ನು ನಮ್ಮ ತಜ್ಞರು ನೋಡ್ತಾರೆ ಮುಂದೇನು ಮಾಡೋಣ ರಾಣಾ ನೇರವಾಗಿ ದಾಳಿ ಮಾಡೋದಾ ?
ರಾಣಾ.........ಅದೇ ನನಗೂ ಇಷ್ಟ ಮುಖಾಮುಖಿ ಯುದ್ದ ಆದರೆ ಮಾತೆಯ ಆದೇಶವಾಗಿದೆ ಏನೇ ಮಾಡಿದರೂ ಸರಿ ಬಲಗೈ ಸಂಗತಿ ಎಡಗೈಗೆ ತಿಳಿಯದ ರೀತಿಯಲ್ಲಿ ಮಾಡಬೇಕೆಂದು. ಅಜಯ್ ಸಿಂಗ್ ಸುಮೇರ್ ಸಿಂಗ್...ವೀರ್ ಸಿಂಗ್ ನೀವು ಮೂರು ಜನ ಒಂದೊಂದು ತಂಡಗಳಾಗಿ ನಿಮ್ಮೊಂದಿಗೆ ಕೆಲವರನ್ನು ಕರೆಡುಕೊಂಡು ಫಾರ್ಮ್ ಹೌಸಿನ ಮೂಲೆ ಮೂಲೆಗಳಲ್ಲಿಯೂ ವೀರೇಂದ್ರ ನಮಗೆ ಕೊಟ್ಟಿದ್ದ ಈ ಪುಟ್ಟ ಡಿವೈಸುಗಳನ್ನು ಫಿಟ್ ಮಾಡಿ ಬರಬೇಕು. ಯಾರಿಗೂ ಸಹ ಇದು ಕಾಣಿಸದಂತೆ ಫಿಟ್ ಮಾಡಿ ಅದರ ಬಗ್ಗೆ ಎಚ್ಚರವಿರಲಿ.
ವೀರ್ ಸಿಂಗ್......ಅಣ್ಣ ಇದರಿಂದೇನಾಗುತ್ತೆ ಅಂತ ತಿಳಿಯಲಿಲ್ಲ.
ವಿಕ್ರಂ ಸಿಂಗ್.......ವೀರೂ ಇದು ನೋಡುವುದಕ್ಕೆ 2x2 ಇಂಚಿನಷ್ಟು ಪುಟ್ಟ ಡಿವೈಸ್ ಆದರೆ ಇದರೊಳಗೆ ಅತ್ಯಂತ ವಿನಾಶಕಾರಿ ಕೆಮಿಕಲ್ಸ್ ತುಂಬಿದೆ. ಇದನ್ನು ಫಿಟ್ ಮಾಡಿದ ನಂತರ ಮುಂದಿನ 7 ದಿನಗಳಲ್ಲಿ ನಮಗ್ಯಾವ ಸಮಯ ಸೂಕ್ತವೆನಿಸುತ್ತದೋ ಆಗ ಇದನ್ನು ಫಿಟಿಂಗ್ ಮಾಡಿರುವ ಸ್ಥಳದಿಂದ 1 ಕಿಮೀ ದೂರದಿಂದಲೇ ಆಪರೇಟ್ ಮಾಡಿ ಇದನ್ನು ಚಾಲನೆ ಮಾಡಬಹುದು. ಇದನ್ನು ಆನ್ ಮಾಡಿದ ನಂತರ ಇದರೊಳಗಿರುವ ಗಿಳಿಯಂತೆ ಪಾರದರ್ಶಕವಾದ ಕೆಮಿಕಲ್ಸ್ ಸುತ್ತ ಮುತ್ತಲಿನ ವಾತಾವರಣದಲ್ಲಿ ಬೆರೆತು ಹೋಗುತ್ತೆ. ಒಂದು ಡಿವೈಸ್ ಫಿಟ್ಟಾಗಿರುವ ಸ್ಥಳದಿಂದ ತನ್ನ ಸುತ್ತಮುತ್ತ 100 ಅಡಿಗಳಷ್ಟೂ ದೂರ ಕೆಮೆಕಲ್ಸ್ ಪಸರಿಸುತ್ತದೆ.
ಅಜಯ್ ಸಿಂಗ್......ಇದೂ ಸಹ ಪ್ರಜ್ಞೆ ತಪ್ಪಿಸುವ ಕೆಮಿಕಲ್ಲಾ ?
ರಾಣಾ.....ಹೌದು ಅಜಯ್ ಇದಕ್ಕೆ ವಾಸನೆಯಿಲ್ಲ.....ಬಣ್ಣವಿಲ್ಲ.... ಸುವಾಸನೆಯೂ ತಿಳಿಯುವುದಿಲ್ಲ ಪರಿಸರದಲ್ಲಿ ಇಂತಹ ವಿನಾಶದ ಕೆಮಿಕಲ್ ಪಸರಿಸುತ್ತಿದೆ ಎಂಬುದೇ ಯಾರಿಗೂ ತಿಳಿಯುವುದಿಲ್ಲ ಕೆಲವೇ ಕ್ಷಣಗಳಲ್ಲಿ ಎಲ್ಲರೂ ಪ್ರಜ್ಞೆ ಕಳೆದುಕೊಂಡಿರುತ್ತಾರೆ. ಇವತ್ತು ರಾತ್ರಿಯೇ ಇದನ್ನು ಫಾರ್ಮ್ ಹೌಸಿನಲ್ಲೆಲ್ಲಾ ಫಿಟ್ ಮಾಡಿ ಬಂದ್ಬಿಡಿ ಒಟ್ಟು 90 ಡಿವೈಸಿದೆ.
ಇವುಗಳನ್ನೆಲ್ಲೆಲ್ಲಿ ಫಿಟ್ ಮಾಡಿದ್ದೀವಿ ಅಂತ ನೆನಪಿರಲಿ ಅದು ತುಂಬಾನೇ ಮುಖ್ಯ. ನಾಳಿದ್ದು ಅವರನ್ನೆಲ್ಲಾ ನಾವು ಹೊತ್ತು ತರುವಾಗ ಇ ಡಿವೈಸುಗಳನ್ನು ಸಹ ಅಲ್ಲಿಂದ ತೆಗೆದುಕೊಂಡು ಬರಬೇಕಿದೆ ಯಾವ ರೀತಿಯ ಸುಳಿವನ್ನೂ ಬಿಡುವಂತಿಲ್ಲ. ನೀವೆಲ್ಲಾ ಕೈಗಳಿಗೆ ಗ್ಲೌಸ್ ಹಾಕಿಕೊಳ್ಳುವುದನ್ನು ಮರೆಯದಿರಿ ಜೊತೆಗೆ ರಕ್ಷಕರು ಉಪಯೋಗಿಸುವ ಶೂಗಳ ಬದಲು ಸಾಮಾನ್ಯ ಶೂಗಳನ್ನು ಧರಿಸಿ ಹೋಗುವುದನ್ನೂ ಮರೆಯಬಾರದು.
ಇನ್ನೂ ಕೆಲವು ವಿಷಯಗಳ ಬಗ್ಗೆ ಕೂಲಂಕುಷವಾಗಿ ಚರ್ಚೆ ನಡೆಸಿದ್ದು ಆ ದಿನ ರಾತ್ರಿಯೇ ಜೈಪುರದ ಹೊರವಲಯದಲ್ಲಿನ ಫಾರ್ಮ್ ಹೌಸ್ ಒಳಗೆ ನುಗ್ಗಿದ ವೀರ್ ಸಿಂಗ್ ರಾಣಾ.....ಸುಮೇರ್ ಮತ್ತು ಅಜಯ್ ಮೂರು ತಂಡಗಳಾಗಿ ಸೂಕ್ತವಾಗಿರುವ ಜಾಗಗಳಲ್ಲಿ ಯಾರಿಗೂ ಸಹ ಕಾಣಿಸದ ರೀತಿ ಡಿವೈಸುಗಳನ್ನು ಫಿಟ್ ಮಾಡಿ ಬಂದಿದ್ದು ಸಂಸ್ಥಾನದ ವಿರೋಧಿಗಳೆಲ್ಲರೂ ಒಟ್ಟಿಗೆ ಸೇರುವ ಸಮಯಕ್ಕೆ ಕಾಯುತ್ತಿದ್ದರು.
* *
* *
ಸಿಎಂ ಮೀಟಿಂಗ್ ಬರ್ಖಾಸ್ತ್ ಮಾಡಿ ಹೊರಡುವುದಕ್ಕೂ ಮುಂಚೆ ರಕ್ಷಕರು ಫಿಟ್ ಮಾಡಿದ್ದ ಡಿವೈಸುಗಳು ಚಾಲನೆಯಾಗಿ ಅದರಿಂದ ಗಾಳಿಯಂತಹ ದ್ರವ್ಯ ಪದಾರ್ಥವು ಅಲ್ಲಿನ ವಾತಾವರಣದಲ್ಲಿ ಸೇರ್ಪಡೆಗೊಂಡಿತ್ತು. ಗಾಳಿಯ ಜೊತೆ ದ್ರವ್ಯವನ್ನೂ ಶ್ವಾಸಕೋಶಕ್ಕೆ ಸೇವಿಸಿದಾಗ 15 ಜನ ತಕ್ಷಣವೇ ಪ್ರಜ್ಞೆತಪ್ಪಿ ಉರುಳಿದ್ದನ್ನು ನೋಡಿ ಎಚ್ಚೆತ್ತುಕೊಳ್ಳೋ ಮುನ್ನವೇ ಸಿಎಂ...ಗೃಹ ಸಚಿವನನ್ನು ಸೇರಿದಂತೆ ಮೀಟಿಂಗಿಗೆಂದು ಅಲ್ಲಿಗಾಗಮಿಸಿದ್ದ ಪ್ರತಿಯೊಬ್ಬರೂ ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲಕ್ಕುರುಳಿದರು. ಅವರಿಗೆ ರಕ್ಷಣೆ ನೀಡುವ ಜವಾಬ್ದಾರಿ ಹೊತ್ತುಕೊಂಡಿದ್ದ ಮಾಫಿಯಾ ತಂಡದ ಮಾಜಿ ಸದಸ್ಯ ಪೀಟರ್ ಮತ್ತವನ ಹಲವಾರು ಸಹಚರರೂ ಪ್ರಜ್ಞೆತಪ್ಪಿ ನೆಲದಲ್ಲಿ ಬಿದ್ದಿದ್ದರು. ಫಾರ್ಮ್ ಹೌಸಿನಿಂದ 500ಮೀ.. ದೂರದಲ್ಲಿ ರಕ್ಷಕರ ಸಮೂಹವೇ ಹೊಂಚುಹಾಕಿ ಕುಳಿತಿದ್ದು ರಾಣಾನ ಆಜ್ಞೆಗಾಗಿ ಕಾಯುತ್ತಿದ್ದರು.
ಅಜಯ್ ಸಿಂಗ್......ನಾವು ಹೋಗಬಹುದಾ ?
ರಾಣಾ......ಈಗಲೇ ಬೇಡ ಕೆಲವರು ಸೆಕ್ಯೂರಿಟಿ ನೀಡುವುದಕ್ಕಾಗಿ ಮರದ ಮೇಲೂ ಇರುವ ಸಾಧ್ಯತೆಗಳಿದೆ ಅವರೆಲ್ಲರೂ ಕೆಳಗಿಳಿದು ಬರಲಿ ಆಮೇಲೆ ನಾವು ದಾಳಿ ಮಾಡೋಣ.
ರಾತ್ರಿ 11:30ರ ಸುಮಾರಿಗೆ ರಾಣಾ—ವಿಕ್ರಂ ಸಿಂಗ್ ನೇತೃತ್ವದಲ್ಲಿ ರಕ್ಷಕರು ಫಾರ್ಮ್ ಹೌಸಿನೊಳಗೆ ನುಗ್ಗಿದರು. ಪೀಟರ್ ತಂಡದಲ್ಲಿನ ಕೆಲವರಿನ್ನೂ ಪ್ರಜ್ಞೆ ಕಳೆದುಕೊಳ್ಳದವರನ್ನು ಪರಲೋಕಕ್ಕೆ ರವಾನಿಸಿ ರಕ್ಷಕರು ಕೇವಲ 15—20 ನಿಮಿಷದೊಳಗೆ ಸಿಎಂ ಮತ್ತಿತರನ್ನೆಲ್ಲಾ ಅಲ್ಲಿಂದ ಹೊತ್ತೊಯ್ದರು. ಅವರೆಲ್ಲರ ಬಳಿಯಿದ್ದ ಫೋನ್ ಕಲೆಹಾಕಿ ರಾಜಸ್ಥಾನದಿಂದ ಹೊರಗೆ ಕೊಂಡೊಯ್ದು ನಾಶಪಡಿಸುವ ಕೆಲಸವು ಅಜಯ್ ಸಿಂಗ್ ವಹಿಸಿಕೊಂಡನು. ನಿಧಿ ಸೂರ್ಯವಂಶಿ ಪ್ರತಿಷ್ಠಿತ ಸೂರ್ಯವಂಶಿ ಸಂಸ್ಥಾನದ ಅಧಿಕಾರ ವಹಿಸಿಕೊಳ್ಳುವುದಕ್ಕಿಂತಲೂ ಮುಂಚೆ ಅತ್ಯಂತ ಉನ್ನತ ಹುದ್ದೆಯಲ್ಲಿ ವಿರಾಜಮಾನರಾಗಿರುವಂತ ಸಂಸ್ಥಾನರ ವಿರೋಧಿಗಳನ್ನೆಲ್ಲಾ ರಕ್ಷಕರು ತಮ್ಮ ವಶಕ್ಕೆ ಪಡೆದಿದ್ದು ಎಲ್ಲರನ್ನೂ ಜೈಸಲ್ಮೇರ್ ಅರಮನೆಯ ಗುಪ್ತ ನೆಲಮಾಳಿಗೆಯಲ್ಲಿದ್ದ ಕಾರಾಗೃಹಕ್ಕೆ ರವಾನಿಸಿದ್ದರು.
* *
* *
ಆಗಸ್ಟ್ 3ನೇ ತಾರೀಖು....ಶನಿವಾರ....
ಕಾಮಾಕ್ಷಿಪುರ....ಮುಂಜಾನೆ 8 ಘಂಟೆ...
ಇಂದು ಶಾಲಾ ಕಾಲೇಜುಗಳಿಗೆ ರಜೆಯ ದಿನವಾಗಿದ್ದು ನಿಧಿ ತಮ್ಮ ತಂಗಿಯರ ಜೊತೆ ಜಾಗಿಂಗ್ ಮುಗಿಸಿ ಮನೆಗೆ ಹಿಂದಿರುಗಿ ಬಂದಾಗ ಅವಳ ಐವರು ಗೆಳತಿಯರೂ ಜೊತೆಯಲ್ಲಿ ಬಂದಿದ್ದರು. ಎಲ್ಲರೂ ಮನೆ ಹೊರಗಿನ ಹುಲ್ಲುಹಾಸಿನ ಮೇಲೆ ಕುಳಿತು ಮಾತನಾಡುತ್ತಿದ್ದು ನಿಶಾ ಗುಡುಗುಡುನೇ ಒಳಗಿನಿಂದ ಓಡಿ ಬಂದು ನಿಧಿ ಅಕ್ಕನನ್ನು ಸೇರಿ ಅವಳಿಂದ ಮುದ್ದು ಮಾಡಿಸಿಕೊಂಡಳು.
ಅದೇ ಸಮಯದಲ್ಲಿ ರಕ್ಷಕರು ತೆಗೆದುಕೊಂಡು ಹೋಗಿದ್ದ ಮೂರು ಕಾರುಗಳು ಮನೆಯ ಮುಂದೆ ಬಂದು ನಿಂತರೆ ಅದರಿಂದ ಮೊದಲಿಗೆ ಆಚಾರ್ಯರು.... ಷಂಶೇರ್ ಸಿಂಗ್ ರಾಣಾ...ವೀರ್ ಸಿಂಗ್ ರಾಣಾ....ಅಜಯ್ ಸಿಂಗ್ ಮತ್ತು ಬಷೀರ್ ಖಾನ್ ಕೆಳಗಿಳಿದರು. ರಾಣಾನ ಜೊತೆ ಮೂವರು ಇಲ್ಲಿವರೆಗೆ ನೋಡಿರದಿದ್ದ ಸಂಸ್ಥಾನದ ಕಿರಿಯ ರಾಜಕುಮಾರಿಯ ದರ್ಶನ ಮತ್ತು ಮಾತೆಯ ಸಮ್ಮುಖದಲ್ಲಿ ಗೌರವ ಸಲ್ಲಿಸುವುದಕ್ಕಾಗಿ ಆಗಮಿಸಿದ್ದರು.
ನಿಧಿ...ನಿಕಿತಾ ಮತ್ತು ತಮ್ಮ ತಂಗಿಯರು ಮೇಲೆದ್ದು ಆಚಾರ್ಯರಿಗೆ ನಮಿಸಿ ಅವರಿಂದ ಆಶೀರ್ವಾದ ಪಡೆದುಕೊಂಡರೆ ಅವರನ್ನೇ ಅನುಸರಿಸುತ್ತ ನಿಧಿಯ ಗೆಳತಿಯರೂ ಆಚಾರ್ಯರಿಗೆ ವಂಧಿಸಿದರು. ಆಚಾರ್ಯರ ಬಳಿಗೋಡಿ ಬಂದ ನಿಶಾ ಕೈಯನ್ನೆತ್ತಿ ಹಾಯ್... ಎಂಬಂತೆ ಬೀಸಿ ವಿಶ್ ಮಾಡುತ್ತ ಅವರ ಹಿಂದೆ ನಿಂತಿದ್ದ ರಾಣಾನನ್ನೇ ಗುರಾಯಿಸುತ್ತಿದ್ದಳು.
ಅಜಯ್ ಸಿಂಗ್.....ಸಾಕ್ಷಾತ್ ಮಾತೆ ಮಹರಾಣಿಯವರ ಪ್ರತಿರೂಪ ......ಎಂದೇಳಿ ರಾಣಾ ತಡೆಯುವ ಮುಂಚೆಯೇ ನಿಶಾಳ ಮುಂದೆ ಮಂಡಿಯೂರಿ ಅವಳ ಪಾದದ ಬಳಿ ತಲೆಯನ್ನಿಟ್ಟು ಗೌರವವನ್ನು ಸೂಚಿಸಿದನು. ಅವನನ್ನೇ ಅನುಸರಿಸುತ್ತ ವೀರ್ ಸಿಂಗ್ ಹಾಗು ಬಷೀರ್ ಖಾನ್ ಕೂಡ ನಿಶಾಳ ಮುಂದೆ ನಟಮಸ್ತಕರಾದರೆ ನಿಶಾ ಅವರೆಲ್ಲರನ್ನೂ ಅಚ್ಚರಿಯಿಂದ ನೋಡುತ್ತಿದ್ದಳು. ನಿಧಿಯ ಮುಂದೆ ಮೂವರು ಗೌರವ ಸೂಚಿಸುವಷ್ಟರಲ್ಲಿ ಹರೀಶ...ವಿಕ್ರಂ ಮಿಕ್ಕವರು ಹೊರಬಂದು ಆಚಾರ್ಯರಿಗೆ ನಮಸ್ಕರಿಸಿ ಅವರನ್ನು ಗೌರವದಿಂದ ಮನೆಯೊಳಗೆ ಕರೆದೊಯ್ದರೆ ನಿಧಿ ಕೂಡ ಒಳಗೆ ಹೋದಳು.
ದೀಪ.......ನಿಕ್ಕಿ ಇವರೆಲ್ಲರೂ ಯಾರು ?
ನಿಕಿತಾ.....ಅವರು ಆಚಾರ್ಯರು ನಿಧಿಯ ಗುರುಗಳು ಇನ್ನುಳಿದಿದ್ದ ನಾಲ್ವರು ಸೂರ್ಯವಂಶಿ ಸಂಸ್ಥಾನದ ರಕ್ಷಕರಲ್ಲಿ ಪ್ರಮುಖರಾದವರು ಬನ್ನಿ ನಾವೂ ಒಳಗೆ ಹೋಗೋಣ.
ಆಚಾರ್ಯರು......ನಿಮ್ಮಮ್ಮ ಎಲ್ಲಿ ನಿಧಿ ?
ಹರೀಶ......ಅಮ್ಮ ಮೇಲಿದ್ದಾಳೆ ಹೋಗಿ ಕರೆದು ಬಾರಮ್ಮ.
ನಿಶಾ.....ಪಪ್ಪ ಗುಡುಗುಡು ಬಂತು ನಾನಿ ಲೋಂಡ್ ಹೋಗನ ಬಾ.
ಹರೀಶ.......ನಿನಗೆ ಆಮೇಲೆ ರೌಂಡ್ ಕರ್ಕೊಂಡ್ ಹೋಗ್ತೀನಿ ಕಂದ ಮೊದಲು ಗುರುಗಳಿಗೆ ನಮಸ್ಕಾರ ಮಾಡು.
ಆಚಾರ್ಯರು ಮುಗುಳ್ನಗುತ್ತ.........ಯುವರಾಣಿ ಆಗಲೇ ನಮ್ಮ ಪಾಲಿನ ಸೂಚಿಸಿದ್ದಾಗಿದೆ ಹರೀಶ. ನೀವು ಮೂವರು ನಿಮ್ಮ ಕಿರಿಯ ಯುವರಾಣಿಯನ್ನು ನೋಡಬೇಕೆಂದು ಬಂದ್ರಲ್ಲ ನೋಡಿದ್ದಾಯ್ತಾ ?
ನೀತು ಕೆಳಗಿಳಿದು ಆಚಾರ್ಯರಿಗೆ ನಮಸ್ಕರಿಸಿ.....ಕ್ಷಮಿಸಿ ಗುರುಗಳೆ ನಿಮ್ಮ ಆಗಮನಕ್ಕೂ ಮುನ್ನ ನಾನು ಉಪಸ್ಥಿತಳಿರಲಿಲ್ಲ.
ಆಚಾರ್ಯರು.....ಇದರಲ್ಲಿ ಕ್ಷಮೆ ಕೇಳುವಂತದ್ದೇನಿದೆಯಮ್ಮ ನಿನ್ನ ಮತ್ತು ಹರೀಶನ ಜೊತೆ ಏಕಾಂತದಲ್ಲಿ ಮಾತನಾಡಬೇಕಿದೆ ಅದಕ್ಕೇ ಬಂದಿರುವುದು ಬಾ ರಾಣಾ.
ರಾಣಾ ಗೌರವ ಸೂಚಿಸಿದ ಬಳಿಕ..... ಮಾತೆ ಇವನು ವೀರ್ ಸಿಂಗ್.. ಅಜಯ್ ಸಿಂಗ್ ಮತ್ತು ಬಷೀರ್ ಖಾನ್ ನನ್ನ ಜೊತೆಗಾರರು.
ಮೂವರೂ ನೀತುವಿನ ಮುಂದೆಯೂ ನಟಮಸ್ತಕರಾದರೆ ಅವರನ್ನು ಮೇಲೇಳುವಂತೆ ಸೂಚಿಸಿದ ನೀತು ಇನ್ನೆಂದೂ ಸಂಸ್ಥಾನದಲ್ಲಿರುವ ರಕ್ಷಕರು ಈ ರೀತಿ ಗೌರವ ಸೂಚಿಸಬಾರದೆಂದು ಆಜ್ಞಾಪಿಸಿದಳು.
ನೀತು......ಚಿನ್ನಿ ನೀನಿಲ್ಲೇ ಆಟವಾಡ್ತಿರು ಕಂದ ಪೂನಿ ಬರ್ತಾಳಲ್ಲ ನಿಮ್ಮಿಬ್ಬರನ್ನೂ ಗುಡುಗುಡು ರೌಂಡಿಗೆ ಕರೆದುಕೊಂಡು ಹೋಗುವೆ.
ನಿಶಾ......ಆತು ಮಮ್ಮ.
ಮಹಡಿ ಮನೆಯಲ್ಲಿ......
ಆಚಾರ್ಯರು......ಸಂಸ್ಥಾನದ ವಿರೋಧಿಗಳೆಲ್ಲರೂ ಈಗ ನಮ್ಮ ಬಂಧನದಲ್ಲಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿಯ ಜೊತೆ ಕೆಲವು ಸಚಿವರೂ ಕಾಣೆಯಾಗಿರುವ ಕಾರಣ ಇನ್ನೂ ಕೆಲವು ದಿನಗಳು ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿರುತ್ತೆ. ಹಾಗಾಗಿ ಈ ತಿಂಗಳ 10ನೇ ತಾರೀಖಿನ ಬದಲು ನೀವು 25ನೇ ತಾರೀಖಿನಂದು ಅಲ್ಲಿಗೆ ಹೋಗುವುದು ಸೂಕ್ತವಾಗಿರುತ್ತೆ.
ನೀತು....ಗುರುಗಳೇ ನಿಮ್ಮ ಮಾತನ್ನು ನಾವೆಂದಿಗೂ ಮೀರುವುದಿಲ್ಲ ನೀವು ಹೇಳಿದಂತೆಯೇ ನಡೆದುಕೊಳ್ತೀವಿ. ರಾಣಾ ನಿಮ್ಮ ಮೇಲೆ ಯಾರಿಗೂ ಅನುಮಾನ ಬರುವಂತ ಸಾಕ್ಷಿಗಳನ್ನು ಬಿಟ್ಟಿಲ್ಲ ತಾನೇ ?
ರಾಣಾ.....ಇಲ್ಲ ಮಾತೆ ಪ್ರತಿಯೊಂದು ಕೆಲಸವೂ ಯೋಜನೆಯಂತೆ ಕಾರ್ಯರೂಪಕ್ಕೆ ತಂದಿದ್ದೀವಿ ಸಣ್ಣ ಸುಳಿವೂ ಸಿಗುವುದಿಲ್ಲ.
ಇದೇ ವಿಷಯವಾಗಿ ಇನ್ನರ್ಧ ಘಂಟೆಗಳ ಕಾಲ ಚರ್ಚಿಸಿದ ನಂತರ...
ರಾಣಾ.....ಮಾತೆ ಮಹರಾಣಿಯವರಿಗೆ ಆಪ್ತ ಸಹಾಯಕಿಯಾಗಿದ್ದ ಆರಾಧನಾ ಮತ್ತವಳ ಕುಟುಂಬದವರೀಗ ನಮ್ಮ ವಶದಲ್ಲಿದ್ದಾರೆ. ರಾಜಸ್ಥಾನದಿಂದ ಕೇರಳಕ್ಕೆ ತಲೆ ಮರೆಸಿಕೊಂಡು ತೆರೆಳಿ ಅಲ್ಲಿಯೇ ವಾಸಿಸುತ್ತಿದ್ದರು.
ನೀತು.......ಅವರನ್ನು ಬೇರೆಯವರ ಜೊತೆಯಲ್ಲಿ ಇಡಬಾರದಿತ್ತು.
ರಾಣಾ......ಇಲ್ಲ ಮಾತೆ ನೀವು ಮೊದಲೇ ಹೇಳಿದ್ದಕ್ಕೆ ಅವರನ್ನೆಲ್ಲಾ ನಾನು ಪುಷ್ಕರದಲ್ಲಿ ಇರಿಸಿದ್ದೀನಿ.
ಆಚಾರ್ಯರು......ಎಲ್ಲಾ ವಿಷಯವನ್ನೂ ಚರ್ಚಿಸಿದ್ದಾಗಿದೆ ನಡೀರಿ ಕೆಳಗೆ ಹೋಗೋಣ ಹರೀಶ ನಿನ್ನ ಕಂದಮ್ಮ ನಿನ್ನನ್ನೇ ಏದುರು ನೋಡ್ತಾ ನಿಂತಿರುತ್ತಾಳೆ.
ಹರೀಶ......ಅದು ನಿಜವೇ ಗುರುಗಳೇ ಅವಳಿಗೆ ಹೆಲಿಕಾಪ್ಟರಿನಲ್ಲಿ ಸುತ್ತಾಡುವುದಕ್ಕೆ ತುಂಬಾ ಇಷ್ಟ.
ರಾಣಾ....ನಿಮ್ಮ ಆಜ್ಞೆಯಾದರೆ ಒಂದು ಹೆಲಿಕಾಪ್ಟರ್ ಈ ಊರಿನಲ್ಲಿ ಇರುವುದಕ್ಕೆ ಏರ್ಪಾಡು ಮಾಡಿಸುವೆ.
ಹರೀಶ.....ಬೇಡ ರಾಣಾ ರಾಜಸ್ಥಾನಕ್ಕೆ ಇನ್ನು ಮುಂದೆ ಆಗಾಗಲೆಲ್ಲಾ ಬಂದು ಹೋಗಿ ಮಾಡುತ್ತಿರಬೇಕಲ್ಲವಾ ಅಲ್ಲಿಗೆ ಬಂದಾಗಲೇ ಸುತ್ತಲಿ ಇಲ್ಲೇನೂ ಬೇಡ.
ನಾಲ್ವರೂ ಕೆಳಗೆ ಬಂದಾಗ ಪೂನಂ ಜೊತೆ ಆಡುತ್ತ ಕುಳಿತಿದ್ದ ನಿಶಾ ಅಪ್ಪನ ಬಳಿಗೋಡಿ ಬಂದು......ಪಪ್ಪ ನಲಿ ಗುಡುಗುಡು ಲೋಂಡ್ ಹೋಗನ ನನ್ನಿ ಫೆಂಡ್ ಪೂನಿ ಬಂತು.
ಹರೀಶ......ಆಯ್ತು ನಡಿಯಮ್ಮ ಕಂದ ನಿಮ್ಮಿಬ್ಬರನ್ನೂ ಹೆಲಿಕಾಪ್ಟರ್ ರೌಂಡ್ ಹೊಡೆಸೋಣ ವೀರ್ ಸಿಂಗ್ ನೀನೇ ನಮ್ಮ ಜೊತೆಯಲ್ಲಿರು.
ವೀರ್ ಸಿಂಗ್......ನಿಮ್ಮಾಜ್ಞೆ ಸರ್ ನಡೆಯಿರಿ.
ನಿಧಿ.......ಅಪ್ಪ ನಾನೂ ಬರ್ತೀನಿ ನನ್ನ ಸ್ನೇಹಿತೆಯರಿಗೂ ಒಂದು ರೌಂಡ್ ಸುತ್ತಿಸಿ ಬರೋಣ ಅಂತ.
ಹರೀಶ......ಎಲ್ಲಾ ಮಕ್ಕಳೂ ನಡೀರಪ್ಪ ಹೋಗಿ ಬರೋಣ.
ಮನೆ ಮಕ್ಕಳ ಜೊತೆಯಲ್ಲಿ ನಿಧಿಯ ಐವರು ಸ್ನೇಹಿತೆಯರು ಪೂನಂ ಮತ್ತವಳ ಇಬ್ಬರು ಅಣ್ಣಂದಿರು ಹೆಲಿಕಾಪ್ಟರ್ ರಂಡಿಗೆ ತೆರಳಿದರು.
ವಿಕ್ರಂ.....ಗುರುಗಳೇ ಈಗ ನನ್ನ ತಂಗಿ ಮತ್ತು ಮಕ್ಕಳು ಅರಮನೆಗೆ ಬಂದರೆ ಅಲ್ಲಿ ಅವರಿಗ್ಯಾವುದೇ ತೊಂದರೆ ಆಗುವುದಿಲ್ಲ ತಾನೇ.
ಆಚಾರ್ಯರು......ಹೆದರಬೇಡ ವಿಕ್ರಂ ಯಾವುದೇ ರೀತಿ ಅಪಾಯ ಸಧ್ಯಕ್ಕಂತೂ ಕಾಣಿಸುತ್ತಿಲ್ಲ ಎಂದು ಮಾತ್ರ ಹೇಳಬಲ್ಲೆ ಭವಿಷ್ಯದಲ್ಲಿ ಏನಡಗಿದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ.
ರೇವತಿ.......ಗುರುಗಳೇ ನೀವೇ ಹೀಗೆ ಹೇಳಿದರೆ.....
ಆಚಾರ್ಯರು.....ಭಯಪಡುವ ಅಗತ್ಯವಿಲ್ಲ ತಾಯಿ ಮಾತೆ ಆದಿಶಕ್ತಿ ಎಲ್ಲರಿಗೂ ಒಳ್ಳೆಯದನ್ನೇ ಮಾಡ್ತಾಳೆ. ಶೀಲಾ ನಿನನ ಮಗುವನ್ನು ಕರೆದುಕೊಂಡು ಬಾರಮ್ಮ.
ಶೀಲಾಳ ಮಗುವಿನ ತಲೆ ನೇವರಿಸಿದ ಆಚಾರ್ಯರು......ಅಕ್ಕನ ಆಜ್ಞಾ ಪಾಲಕನಾದ ಪ್ರೀತಿಯ ತಮ್ಮ ನಿಶಾಳ ಸರ್ವಸ್ವವೇ ಇವನು ಆಗಿರುತ್ತಾನೆ ಕಣಮ್ಮ ಹಾಗಾಗಿ ಇವನ ಹೆಸರು ಕೂಡ " ನಿಶ್ಚಲ್ " ಅಂತ ಇಡುವುದು ಒಳ್ಳೆಯದು.
ರವಿ......ಗುರುಗಳೇ ಇದು ನಮ್ಮ ಸೌಭಾಗ್ಯ ನೀವೇ ಖುದ್ದಾಗಿ ನಮ್ಮ ಮಗುವಿಗೆ ಹೆಸರನ್ನು ಸೂಚಿಸಿರುವುದು ದೇವರೇ ಪ್ರಸಾದ ನೀಡಿದ ರೀತಿ ಸಂತೋಷವಾಗುತ್ತಿದೆ.
ಸುಮ......ನಿಮ್ಮ ಮಾತು ನಿಜ ಗುರುಗಳೇ ನಿಶಾ ಯಾವಾಗಲೂ ತಮ್ಮನ ಬಳಿಗೇ ಓಡುತ್ತಾ ಇರ್ತಾಳೆ.
ಎಲ್ಲರೂ ಗುರುಗಳ ಜೊತೆ ಚರ್ಚಿಸುತ್ತಿದ್ದರೆ ಅಜಯ್ ಸಿಂಗ್ ಮತ್ತು ಬಷೀರ್ ಖಾನ್ ಹಾಗು ರಾಣಾನ ಜೊತೆಯಲ್ಲಿದ್ದ ನೀತು ಅಲ್ಲಿನ ವಿಷಯಗಳನ್ನೆಲ್ಲಾ ತಿಳಿದುಕೊಳ್ಳುತ್ತಿದ್ದಳು. ರೌಂಡ್ ಮುಗಿಸಿಕೊಂಡು ಮನೆಗೆ ಹಿಂದಿರುಗಿದ ನಿಶಾ ಕಿರುಚಿ ಕೂಗಾಡುತ್ತ ಅಮ್ಮನ ಮಡಿಲಿಗೆ ಜಂಪ್ ಮಾಡಿ ತಾನು ರೌಂಡ್ ಹೋಗಿದ್ದರ ಬಗ್ಗೆ ಹೇಳುತ್ತಿದ್ದರೆ ಪೂನಿ ಸಹ ಅವಳಿಗೆ ಜೊತೆಯಾಗಿದ್ದಳು. ವೀರ್ ಸಿಂಗ್ ರಾಣಾ...ಅಜಯ್ ಸಿಂಗ್ ಮತ್ತು ಬಷೀರ್ ಖಾನ್ ತಮ್ಮ ಕಿರಿಯ ರಾಜಕುಮಾರಿಯ ಸಂತೋಷ ನೋಡಿ ತಾವೂ ಆನಂದದ ಭಾಷ್ಪ ಸುರಿಸುತ್ತಿದ್ದರು. ಮಧ್ಯಾಹ್ನದ ಭೋಜನವಾದ ನಂತರ ಎಲ್ಲರನ್ನೂ ಆಶೀರ್ವಧಿಸಿದ ಆಚಾರ್ಯರು ರಾಣಾ ಮತ್ತವನ ಸಂಗಡಿಗರ ಜೊತೆ ತೆರಳಿದರು.
ಬೊಂಬಾಟ್ ಕತೆ, ಮುಂದೆ ಏನು ಆಗುತ್ತದೆ ಎನ್ನುವ ಕೌತುಕ
ReplyDeleteMind-blowing story please don't stop the story please continue next part please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ReplyDeletePlease don't stop the story please continue the next part please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Daily daily story upload mada ri please my humble request ri please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
3 ದಿನ ಆಯಿತು ರೀ ಸ್ಟೋರಿ upload ಮಾಡಿಲ್ಲ ರೀ ನಿಧಿ, ರಶ್ಮಿ , ನಿಕಿತಾ, ಪ್ರೀತಿ ಎಲ್ಲರೂ ಬಗ್ಗೆ ಸ್ಟೋರಿ ಬರೆಯಿರಿ please my humble request ri please 🙏🙏🙏🙏🙏
ReplyDelete