ಇಲ್ಲಿಗೆ ತಲುಪುವ ತನಕವೂ ಶಾಂತಳಾಗಿ ಅಪ್ಪನ ಭುಜವನ್ನು ಹಿಡಿದು ಹೆಲಿಕಾಪ್ಟರಿನಲ್ಲಿ ಕುಳಿತಿದ್ದ ನಿಧಿಯ ಮುಖದಲ್ಲೀಗ ಕ್ರೋದಾಗ್ನಿಯು ಪ್ರಜ್ವಲಿಸುತ್ತಿದ್ದು ಎಲ್ಲರಿಗಿಂತ ಮುಂದೆ ತಾನೇ ಕಾರಾಗೃಹದೊಳಗೆ ಪ್ರವೇಶಿಸಿದಳು. ಅಲ್ಲಾಗಲೇ ದಿಲೇರ್ ಸಿಂಗ್...ಅಜಯ್ ಸಿಂಗ್ ಮತ್ತು ಬಷೀರ್ ಖಾನ್ ಉಪಸ್ಥಿತರಿದ್ದು ರಾಜಕುಮಾರಿಗೆ ಗೌರವ ಸಲ್ಲಿಸಿದರು. ನಿಧಿ ಎಲ್ಲಾ ಖೈದಿಗಳನ್ನೂ ಒಟ್ಟಿಗೇ ಕಾರಾಗೃಹದಲ್ಲಿನ ವಿಶಾಲವಾದ ಸಭಾಂಗಣಕ್ಕೆ ಎಳೆದು ತರಲು ಆದೇಶ ನೀಡಿದಳು.
ಸಿಎಂ...ಸಚಿವರು...ಶಾಸಕರು...ಬಿಝಿನೆಸ್ ಮ್ಯಾನ್ಸ್...ಹಲವಾರು ಅಧಿಕಾರಿಗಳನ್ನು ಬಷೀರ್ ಖಾನ್ ಎಳೆದು ತಂದನು. ಚಂಚಲಾದೇವಿ ಮತ್ತವಳ ಕುಟುಂಬದ ಜೊತೆ ಭಾನುಪ್ರತಾಪನನ್ನು ದಿಲೇರ್ ಸಿಂಗ್ ತಂದು ಕೆಡವಿದನು. ಕೊನೆಯದಾಗಿ ಕಾಮಾಕ್ಷಿಪುರದಲ್ಲಿ ನಿಶಾಳನ್ನು ಅಪಹರಿಸಲು ಸಂಚು ರೂಪಿಸಿದ್ದ ನಾಲ್ಪರು ಪಾರ್ಟ್ನರುಗಳು ಮತ್ತು ಅವರ ಕುಟುಂಬದವರನ್ನು ಅಜಯ್ ಸಿಂಗ್ ಹಿಡಿದು ತಂದಿದ್ದನು. ಇವರೆಲ್ಲರಿಗಿಂತ ಪ್ರಮುಖ ಅಪರಾಧಿಯಾಗಿರುವ ಯಶೋಮತಿ ಮತ್ತವಳ ಗಂಡ ಹಾಗು ಇಬ್ಬರು ಗಂಡು ಮಕ್ಕಳನ್ನು ವೀರ್ ಸಿಂಗ್ ಕರೆತಂದರೂ ಎಲ್ಲರಿಂದ ದೂರ ನಿಲ್ಲಿಸಿದ್ದನು.
ನಿಧಿ.......ನೋಡಿ ಚಿಕ್ಕಪ್ಪ ನಿಮ್ಮದೇ ಪಕ್ಷದ ನಾಯಕರು ನಮ್ಮ ಆಸ್ತಿ ಹೊಡೆಯುವುದಕ್ಕೆ ಸಂಚು ರೂಪಿಸಿದ್ದರು ಕಂತ್ರಿ ನಾಯಿಗಳು ದಿಲೇರ್ ಸಿಂಗ್ ಭಟ್ಟಿ ರೆಡಿಯಾಗಿದೆಯಾ ?
ದಿಲೇರ್ ಸಿಂಗ್ ಹೌದೆಂದು ಒಂದು ಲಿವರ್ ಕೆಳೆಗೆಳೆದಾಗ ಏದುರಿನ ಕಬ್ಬಿಣದ ಬಾಗಿಲು ಪಕ್ಕಕ್ಕೆ ಸರಿದುಕೊಳ್ಳುತ್ತ ಅಲ್ಲಿನ ದೃಶ್ಯ ನೋಡಿ ಮನೆಯವರು ದಂಗಾದರು. 20x20 ಅಳತೆಯ ಜಾಗದಲ್ಲಿ ಸುತ್ತಲೂ ಮತ್ತು ನೆಲದ ಕಡೆಯಿಂದಲೂ ಬೆಂಕಿಯ ಜ್ವಾಲೆ ಪ್ರಜ್ವಲಿಸುತ್ತಿತ್ತು.
ನಿಧಿ......ರಾಣಾ ನನ್ನ ತಂಗಿಯನ್ನು ಅಪಹರಿಸಲು ಉದ್ದೇಶಿಸಿದ್ದ ಈ ನಾಲ್ವರ ಕುಟುಂಬದವರನ್ನು ಭಟ್ಟಿಗೆ ಹಾಕಿಬಿಡಿ.
ಸೇಠ್ ಧನಿಕ್ಲಾಲ್...ಬ್ರಿಜೇಶ್ ಮಿಶ್ರಾ..ವಿನೋದ್ ಪಾಠಕ್ ಮತ್ತು ಕಿಶೋರಿ ಸಿಂಗ್ ಜಗಮಲ್ ತಮ್ಮ ಕಣ್ಣೆದುರಿಗೇ ಕುಟುಂಬದವರು ಜೀವಂತವಾಗಿ ಅಗ್ನಿಗೆ ಆಹುತಿಯಾಗಲಿದ್ದಾರೆಂದು ತಿಳಿದು ನಿಧಿಯ ಮುಂದೆ ಗೋಳಾಡುತ್ತ ಕ್ಷಮೆಯಾಚಿಸಿದರು. ನಿಧಿ ಮಾತ್ರ ಧೃಡವಾಗಿ ನಿಶ್ಚಯಿಸಿದ್ದು ರಕ್ಷಕರಿಗೆ ಸನ್ನೆ ಮಾಡಿದ ಮರುಕ್ಷಣವೇ ಆ ನಾಲ್ವರ ಕುಟುಂಬದವರನ್ನು ಒಬ್ಬೊಬ್ಬರಾಗಿ ಉರಿಯುತ್ತಿರುವ ಭಟ್ಟಿಯೊಳಗೆ ಏಸೆಯತೊಡಗಿದರು.
ಬೆಂಕಿಯ ಸ್ಪರ್ಶ ದೇಹಕ್ಕೆ ಆಗುತ್ತಿದ್ದಂತೆಯೇ ಅವರುಗಳ ಚೀರಾಟ ಇಡೀ ಕಾರಾಗೃಹದಲ್ಲಿ ಪ್ರತಿಧ್ವನಿಸುತ್ತಿದ್ದವು. ಹರೀಶ..ವರ್ಧನ್ ಮತ್ತು ಗಿರೀಶ ಇವರನ್ನು ಬಿಟ್ಟರೆ ಮನೆಯವರೆಲ್ಲ ನಿಧಿಯ ಕ್ರೌರ್ಯಕ್ಕೆ ನಡುಗಿ ಹೋದರು. ನಿಧಿ ಏನಾದರೂ ಆದೇಶ ನೀಡುವುದಕ್ಕೂ ಮುಂಚೆ ಸೌಮ್ಯ ಸ್ವಭಾವದ ಗಿರೀಶ ಅಕ್ಕ ಅಪ್ಪನ ಕಾಲಿಗೆ ನಮಸ್ಕರಿಸಿ ರಕ್ಷಕನೊಬ್ಬನಿಂದ ಖಡ್ಗವನ್ನು ಪಡೆದು ಧನಿಕ ಲಾಲ್ ಮತ್ತು ಬ್ರಿಜೇಶ್ ಮಿಶ್ರಾ ಇಬ್ಬರ ತಲೆಗಳನ್ನು ಕಡಿದು ಬಿಟ್ಟನು.
ನಿಧಿ ತಮ್ಮನನ್ನು ತಬ್ಬಿಕೊಂಡು.....ಗಿರೀಶ ಇದಕ್ಕೆ ನಾನಿದ್ದೀನಲ್ಲೋ ನನ್ನ ತಮ್ಮನ ಕೈಗೆ ರಕ್ತ ಅಂಟಿಕೊಳ್ಳುವುದನ್ನು ನಾನೇಗೆ ಸಹಿಸಲಿ.
ಹರೀಶ........ಇದು ಆವೇಶವಲ್ಲ ನಿಧಿ ತಂಗಿ ಮೇಲಿನ ಪ್ರೀತಿ ಕಣಮ್ಮ ಚಿನ್ನಿಯನ್ನು ಕಿಡ್ನಾಪ್ ಮಾಡಲು ಯೋಜನೆ ರೂಪಿಸಿದ್ದ ದಿನದಿಂದ ಈ ನಿನ್ನ ಶಾಂತಮೂರ್ತಿ ತಮ್ಮ ಒಳಗೊಳಗೇ ಕುದಿಯುತ್ತಿದ್ದ ಅವನ ರೋಷಾವೇಶವೂ ತಣ್ಣಗಾಗಲಿ ಬಿಡಮ್ಮ.
ಗಿರೀಶ ಕ್ಷಣಕಾಲವೂ ತಡಮಾಡದೆ ಉಳಿದವರಿಬ್ಬರ ತಲೆ ಕಡಿದಾಕಿ ರಕ್ಷಕನಿಗೆ ಖಡ್ಗ ಹಿಂದಿರುಗಿಸಿ ಅಪ್ಪನ ಹಿಂದೆ ಶಾಂತನಾಗಿ ಕೈಕಟ್ಟಿ ನಿಂತನು.
ವರ್ಧನ್......ನಿಧಿ ಈ ರಾಜಕೀಯದ ಕಜ್ಜಿ ನಾಯಿಗಳನ್ನು ಸಾಕುತ್ತ ಬೆಳೆಸಿದವನು ನಾನೇ ಅದು ಅಣ್ಣ ಇವರ ಹೆಸರನ್ನು ಶಿಫಾರಸ್ಸು ಮಾಡಿದನೆಂಬ ಕಾರಣಕ್ಕಾಗಿ. ಈಗ ಈ ನಾಯಿಗಳಿಗೆಲ್ಲಾ ರೇಬೀಸ್ ಬಂದಿದೆ ಇವುಗಳನ್ನು ನಾನೇ ಮುಗಿಸ್ತೀನಿ.
ಅಣ್ಣ ರಾಣಾಪ್ರತಾಪನ ಖಡ್ಗ ಪಡೆದುಕೊಂಡ ವರ್ಧನ್ ಸಿಎಂನನ್ನು ಬಿಟ್ಟು ಉಳಿದವರೆಲ್ಲರನ್ನು ತುಂಡುಗಳಾಗಿ ಕತ್ತರಿಸಿ ಹಾಕಿಬಿಟ್ಟನು. 40ಕ್ಕೂ ಹೆಚ್ಚು ಜನರ ರಕ್ತ ಚಿಮ್ಮಿದ್ದರಿಂದ ವರ್ಧನ್ ತಲೆಯಿಂದ ಕಾಲಿನವರೆಗೂ ರಕ್ತದ ಕಲೆಗಳು ತುಂಬಿ ಹೋಗಿತ್ತು. ಸಿಎಂ ತನ್ನನ್ನು ಉಳಿಸುವಂತೆ ಪ್ರಾಣ ಬಿಕ್ಷೆ ಬೇಡುತ್ತಿದ್ದು.......
ವರ್ಧನ್.....ನನಗೆ ಹಣದ ವ್ಯಾಮೋಹವಿಲ್ಲ ನಾನು ಹುಟ್ಟಿನಿಂದಲೇ ರಾಜವಂಶಸ್ಥ ನನ್ನ ತಂದೆ ಮತ್ತು ರಾಮನಂತ ಅಣ್ಣನಿಂದ ನನಗೆ ಬೇಕಾದಷ್ಟು ಐಶ್ವರ್ಯವಿದೆ. ಅದನ್ನು ಅನುಭವಿಸುವವರು ಯಾರು ಸಹ ಇಲ್ಲವಲ್ಲ ಎಂಬ ಕೊರಗಿತ್ತು ಆದರೀಗ ನನ್ನ ಅಣ್ಣನ ಮಕ್ಕಳಿಬ್ಬರ ಜೊತೆ ನನ್ನ ಅಕ್ಕನ ಮಕ್ಕಳೂ ನನಗೆ ವಾರಸುದಾರರಾಗಿದ್ದಾರೆ. ಆದರೆ ನೀನು ಮತ್ತೀ ನಿನ್ನ ನಾಯಿಗಳೆಲ್ಲರೂ ಸೇರಿ ಲೂಟಿ ಮಾಡಿದ್ದ ಹಣ ನಮ್ಮ ದೇಶದ ಅಭಿವೃದ್ದಿಗೆ ಅವಶ್ಯಕ ಅದನ್ನೆಲ್ಲಿ ಬಚ್ಚಿಟ್ಟಿರುವೆ ಅಂತ ಹೇಳ್ಬಿಡು ಬಿಟ್ಟು ಬಿಡ್ತೀನಿ.
ಸಿಎಂ......ನಿಜವಾಗಿಯೂ ಬಿಟ್ಟು ಬಿಡ್ತೀರಾ ತಾನೇ ?
ವರ್ಧನ್......ನಾವು ರಜಪೂತರು ಒಮ್ಮೆ ಮಾತು ನೀಡಿದರಾಯಿತು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾನು ನಿನ್ನನ್ನೇನೂ ಮಾಡಲ್ಲ ಅಂತ ಮಾತು ಕೊಡ್ತಿದ್ದೀನಿ.
ಸಿಎಂ ತಕ್ಷಣವೇ ವಿದೇಶಿ ಬ್ಯಾಂಕಿನ ಎಲ್ಲಾ ವಿವರಗಳನ್ನು ಹೇಳುತ್ತ ಇತರೆ ಮಂತ್ರಿಗಳ ವಿವರಗಳು ತನ್ನ ಫೋನಿನಲ್ಲಿರುವುದಾಗಿ ಹೇಳಿದ.
ಹರೀಶ......ಇವರ ಫೋನುಗಳನ್ನೆಲ್ಲಾ ನಾಶ ಮಾಡಿರಬೇಕಲ್ಲವಾ ?
ರಾಣಾ ಹತ್ತಿರ ಬಂದು ಮೆಲ್ಲಗೆ......ಇಲ್ಲ ಸರ್ ಮಾತೆ ನಾವು ಫೋನ್ ನಾಶ ಮಾಡುವುದಕ್ಕೂ ಮುನ್ನ ಹಾಗೆ ಮಾಡದಂತೆ ಹೇಳಿದ್ದರು ಏಕೆ ಅಂತ ಗೊತ್ತಿಲ್ಲ ಎಲ್ಲವನ್ನೂ ಆಫ್ ಮಾಡಿ ಇಟ್ಟಿದ್ದೀವಿ.
ಸಿಎಂ......ಫೋನ್ ಇಲ್ಲದಿದ್ದರೆ ಒಂದು ಲ್ಯಾಪ್ಟಾಪ್ ಕೊಡಿ ನಾನು ನನ್ನ ಪರ್ಸನಲ್ ಡೇಟಾದಿಂದ ಎಲ್ಲರ ಅಕೌಂಟ್ ವಿವರ ತೆಗೆದು ನಿಮಗೆ ನೀಡುವೆ.
ವರ್ಧನ್......ನೀನು ಅಕೌಂಟಿನ ವಿವರ ಹೇಳು ನಾವೇ ತೆಗೀತೀವಿ.
ಸಿಎಂ ಹೇಳುತ್ತಿದ್ದ ವಿವರಗಳನ್ನು ಲ್ಯಾಪ್ಟಾಪಿನಲ್ಲಿ ಗಿರೀಶ ಫೀಡ್ ಮಾಡಿದಾಗ ಅದರಲ್ಲಿ ಸಿಎಂ ಸೇರಿ ಆತನ ಜೊತೆಗಾರರೆಲ್ಲರ ವಿದೇಶಿ ಅಕೌಂಟಿನ ವಿವರಗಳೂ ಪಾಸ್ವರ್ಡಿನ ಸಮೇತ ತೆರೆದುಕೊಂಡಿತು. ಒಟ್ಟು 29000 ಸಾವಿರ ಕೋಟಿಗಳಷ್ಟು ಹಣವಿದ್ದು ಎಲ್ಲರ ವಿದೇಶಿ ಅಕೌಂಟುಗಳನ್ನು ಖಾಲಿ ಮಾಡಿ ಭಾರತ ಸರ್ಕಾರದ ಟ್ರೆಷರಿಗೆ ಹಣ ವರ್ಗಾವಣೆ ಮಾಡಲಾಯಿತು.
ವರ್ಧನ್.......ನೋಡು ಕೊಟ್ಟ ಮಾತಿನಂತೆ ನಾನು ನಿನಗೇನನ್ನೂ ಮಾಡ್ತಿಲ್ಲ ಆದರೆ ತಂದೆಯ ಸಾವಿನಲ್ಲಿ ನಿನ್ನ ಕೈವಾಡ ಇರುವುದಕ್ಕೆ ಅಣ್ಣನ ಮಗಳು ನಿನ್ನನ್ನು ಉಳಿಸುತ್ತಿಲ್ಲ ನಿಧಿ.
ನಿಧಿ ಮುಂದೆ ಬಂದು ಸಿಎಂ ಹೊಟ್ಟೆಯನ್ನು ಎಂಟಿಂಚಿನಷ್ಟುದ್ದಕ್ಕೂ ಸೀಳಿ ಹಾಕಿ ಆತ ಬಿದ್ದು ನರಳಾಡುವಂತೆ ಮಾಡಿ ಚಂಚಲಾದೇವಿಯ ಕಡೆ ಮುನ್ನಡೆದಳು.
ಪ್ರೀತಿ........ಹರೀಶ್ ನೀವೇ ಹೋಗಿ ನಿಧಿಯನ್ನು ತಡೆಯಿರಿ ಅವಳು ಅಪ್ಪನ ಮಾತನ್ನು ಮೀರುವುದಿಲ್ಲ ಅವಳ ಕ್ರೋದಾಗ್ನಿ ನೋಡಲಿಕ್ಕೂ ಆಗದಷ್ಟು ಭಯಾನಕವಾಗಿದೆ.
ಹರೀಶ........ಪ್ರೀತಿ ಜೀವನವನ್ನೇ ನೀಡಿದ ತಂದೆ ತಾಯಿ ಇಬ್ಬರನ್ನು ನಿರ್ಧಾಕ್ಷಿಣ್ಯವಾಗಿ ಕೇವಲ ಹಣಕ್ಕೋಸ್ಕರ ಸಾಯಿಸಿರುವಾಗ ನಿಧಿ ಹೃದಯದಲ್ಲಿನೆಂತಾ ಕೋಪ ಇರಬೇಕೆಂದು ಊಹೆ ಮಾಡಿ ನೋಡು. ನೀತು ಬರುವಾಗಲೇ ಹೇಳಿದ್ದಾಳೆ ನಿಧಿ ಏನೇ ಮಾಡಲಿ ಅವಳನ್ನು ಯಾರೂ ತಡೆಯಬೇಡಿ ಅಂತ ಇವತ್ತೇ ಅವಳೊಳಗೆ ಕುದಿಯುತ್ತಾ ಇರುವಂತ ಕೋಪಾವೇಶ ತಣ್ಣಗಾಗಿ ನಮ್ಮ ಮನೆಯ ಹಿರಿಮಗಳಾಗಿ ಹಿಂದಿರುಗಲಿ ಪ್ರೀತಿ ನೀನು ಸುಮ್ಮನಿದ್ದು ಬಿಡು.
ನಿಧಿಯನ್ನು ತನ್ನೆದುರು ನೋಡಿ ಚಂಚಲಾದೇವಿ........ನಿಧಿ ನಾನು ನಿನಗೆ ಅಜ್ಜಿಯಾಗಬೇಕು ಕಣಮ್ಮ ಇಷ್ಟು ವಯಸ್ಸಾಗಿರುವ ಅಜ್ಜಿಯ ಮೇಲೆ ನಿನಗೇಕೆ ಕೋಪ ಮಗಳೇ.
ನಿಧಿ ಕೋಪದಿಂದ......ಮಗಳೇ ಅಂತ ಕರೀಬೇಡ ನನ್ನ ಮುದುಕಿ. ನಿನಗಿಷ್ಟು ವಯಸ್ಸಾಗಿದ್ದರೂ ನಿನ್ನಂತ ಪಾಪಿ ಇನ್ನೂ ಈ ಭೂಮಿಯ ಮೇಲೆ ಬದುಕಿದ್ದೀಯಲ್ಲ ಅದಕ್ಕೆ ಕೋಪ ಬರ್ತಿದೆ. ನೀನು ಸ್ವಲ್ಪವೂ ಚಿಂತಿಸಬೇಡ ನಿನಗೆ ದುಃಖ...ನನ್ಮೇಲೆ ಕೋಪ....ನೀನು ಮಾಡಿದ ಅಧರ್ಮ ಅನೀತಿಯ ಕಾರ್ಯಗಳಿಗೆ ಪ್ರಾಯಶ್ಚಿತ್ತದ ಜೊತೆಗೆ ನೀನು ಇದನ್ನೆಲ್ಲಾ ಯಾಕಾದರೂ ಮಾಡಿದೆನೋ ಎನ್ನುವುದಕ್ಕೆ ಪಶ್ಚಾತ್ತಾಪ ಎಲ್ಲವೂ ಆಗುವಂತೆ ನೋಡಿಕೊಳ್ತೀನಿ.
ನಿಧಿ ಮುಂದೊಂದೂ ಮಾತನ್ನಾಡದೆ ಮೊದಲಿಗೆ ಚಂಚಲಾದೇವಿಯ ನಾಲ್ವರು ಮೊಮ್ಮಕ್ಕಳನ್ನು ಯಮಪುರಿಗೆ ಕಳುಹಿಸಿದಳು. ನಾಲ್ವರು ಮೊಮ್ಮಕ್ಕಳ ಸಾವನ್ನು ಕಣ್ಣೆದುರಿಗೇ ನೋಡಿ ಚಂಚಲಾದೇವಿ ಮತ್ತು ಆಕೆಯ ಗಂಡ ದುಃಖಿಸುತ್ತಿದ್ದರೆ ಅಳಿದುಳಿದಿದ್ದ ಇನ್ನಿಬ್ಬರು ಮಕ್ಕಳು ಮತ್ತವರ ಹೆಂಡತಿಯರು ನಿಧಿ ಹಿಡಿದಿದ್ದ ಖಡ್ಗಕ್ಕೆ ಬಲಿಯಾದರು. ಚಂಚಲಾದೇವಿಯ ಗಂಡನ ತಲೆ ಕಡಿದ ನಿಧಿ ಹಣೆ ಚಚ್ಚಿಕೊಳ್ಳುತ್ತ ತನ್ನ ವಂಶದ ಸರ್ವನಾಶಕ್ಕೆ ರೋಧಿಸುತ್ತಿದ್ದವಳ ಮಡಿಲಿನಲ್ಲಿಟ್ಟು ಯಶೋಮತಿಯ ಕಡೆ ದೃಷ್ಟಿ ಹಾಯಿಸಿದಳು
ನಿಧಿ......ಹುಟ್ಟಿದಾಕ್ಷಣವೇ ಅನಾಥೆಯಾಗಿದ್ದ ನನ್ನನ್ನು ಮಡಿಲಿನಲ್ಲಿ ಮಲಗಿಸಿಕೊಂಡು ತಾಯಿಯ ಮಮತೆ ಪ್ರೀತಿಯನ್ನು ಧಾರೆಯೆರೆದ ನನ್ನ ತಾಯಿಗೆ ನೀನು ವಿಷಪ್ರಾಶಾಣ ಮಾಡಿಸುತ್ತ ನನ್ನ ತಂಗಿಯನ್ನು ಜನಿಸುವುದಕ್ಕೂ ಮುನ್ನವೇ ಕೊಲ್ಲಿಸಲು ಪ್ರಯತ್ನಿಸಿದ್ದೆ. ಈಗ ನಿನ್ನೀ ಮಕ್ಕಳಿಬ್ಬರ ತಲೆ ತೆಗೆದರೆ ನಿನಗೆ ಹೇಗನ್ನಿಸಬಹುದು.
ಯಶೋಮತಿ.......ಯುದ್ದಕ್ಕೆ ಸಿದ್ದರಾದಾಗ ಯಾರು ಸಾಯುತ್ತಾರೆ ಯಾರು ಬದುಕಿರುತ್ತಾರೆಂದು ಯೋಚಿಸುತ್ತ ಕೂರಲಾಗುವುದಿಲ್ಲ ಆಗ ಒಂದೇ ಒಂದು ಧ್ಯೇಯವನ್ನಿಟ್ಟುಕೊಂಡಿರಬೇಕು ಅದೇ ಜಯವನ್ನು ಸಾಧಿಸುವುದು. ಮೋಸ...ವಂಚನೆ....ಕಪಟ ಹೇಗಾದರೂ ಸರಿಯೇ ಗೆಲ್ಲಲೇಬೇಕು ಇದೊಂದೇ ನನಗೆ ಗೊತ್ತಿರುವುದು. ನೀನು ನಮ್ಮನ್ನು ಕೊಲ್ಲಬಹುದು ಏಕೆಂದರೆ ಈ ಯುದ್ದದಲ್ಲಿ ಇಂದಿನವರೆಗೂ ನಾನು ಯೋಜನೆ ರೂಪಿಸಿದ್ದಂತೆಯೇ ಎಲ್ಲವೂ ನಡೆಯಿತು ಆದರೆ ಕೊನೇ ಕ್ಷಣದಲ್ಲಿ ನಾನೇ ದುಡುಕಿನ ದುಡುಕಿನ ನಿರ್ಧಾರ ಮಾಡಿ ಎಲ್ಲರ ಮುಂದೆಯೇ ನಿನ್ನಾ ಆ ನಿನ್ನ ತಂಗಿಯನ್ನು ಸಾಯಿಸಲು ತೀರ್ಮಾನ ಮಾಡಿ ಸಿಕ್ಕಿಬಿದ್ದೆ.
ನನ್ನ ಕೈಯಿಂದಲೇ ನಿಮ್ಮಿಬ್ಬರ ಅಂತ್ಯವಾಗುತ್ತಿತ್ತು ಆದರೆ ಕೊನೇ ಕ್ಷಣದಲ್ಲಿ ಆ ಹೆಂಗಸು ನಿಮ್ಮಿಬ್ಬರಿಗೂ ಕವಚವಾಗಿ ಅಡ್ಡಿ ಬಂದಳು ಇಲ್ಲದಿದ್ದರೆ ಇಂದು ನಾನು ಜಯಿಸಿರುತ್ತಿದ್ದೆ. ನಾನು ಮಾಡಿರುವುದು ಕೇವಲ ಯುದ್ದ ಗೆಲ್ಲುವುದಕ್ಕಾಗಿ ಮಾಡುವಂತಹ ರಣನೀತಿಗಳೇ ಅದಕ್ಕಾಗಿ ನನಗೆ ಕಿಂಚಿತ್ತೂ ಪ್ರಾಯಶ್ಚಿತ್ತವಿಲ್ಲ.
ನಿಧಿ.......ಪಾಪಿ ನಮ್ಮನ್ನುಳಿಸಲು ಬಂದಿದ್ದವರನ್ನು ಆ ಹೆಂಗಸೆಂದು ಕರಿಬೇಡ ಅವರು ನನ್ನ ತಾಯಿ.
ಹರೀಶ ಮಗಳನ್ನು ತಬ್ಬಿಕೊಂಡು.....ನಿಧಿ ಈ ಹೆಂಗಸಿನ ಜೊತೆಯಲ್ಲಿ ವಾಧಿಸುತ್ತ ಸಮಯ ವ್ಯರ್ಥ ಮಾಡಬೇಡಮ್ಮ ಇವಳು ಮಾಡಿರುವ ಪಾಪಗಳಿಗೆ ಶಿಕ್ಷೆ ನೀಡಿ ಇಲ್ಲಿಂದ ಹೊರಡೋಣ ಅಲ್ಲಿ ನಿಮ್ಮಮ್ಮ ನಿನ್ನ ದಾರಿ ಕಾಯುತ್ತಿರುತ್ತಾಳೆ.
ಮುಂದಿನ ಐದೇ ನಿಮಿಷದಲ್ಲಿ ಸೂರ್ಯವಂಶಿ ಸಂಸ್ಥಾನವನ್ನು ಸರ್ವ ನಾಶವಾಗಿಸಲು ಷಡ್ಯಂತ್ರ ರೂಪಿಸಿದ್ದ ಎಲ್ಲಾ ವಿರೋಧಿಗಳನ್ನೂ ನಿರ್ನಾಮ ಮಾಡಲಾಯಿತು. ನಿಧಿ....ವರ್ಧನ್ ಮತ್ತು ಗಿರೀಶ ಅಲ್ಲೇ ಫ್ರೆಶಾಗಿ ಉದಯಪುರಕ್ಕೆ ಹಿಂದಿರುಗಿ ಬಂದರು. ಅಂದು ರಾತ್ರಿ ಅಪ್ಪ.. ಅಮ್ಮ...ಅಕ್ಕ ಮತ್ತು ಅಣ್ಣಂದಿರ ಜೊತೆ ತನ್ನನ್ನು ಹೆತ್ತ ತಂದೆ ತಾಯಿ ರೂಮಿನಲ್ಲಿ ಮಲಗಿದ್ದ ನಿಶಾ ಯಾರೊಬ್ಬರನ್ನೂ ಅಮ್ಮನ ಹತ್ತಿರವೂ ಸುಳಿಯಲು ಬಿಡದೆ ತಾನೇ ಅಮ್ಮನನ್ನು ಸೇರಿಕೊಂಡಿದ್ದಳು.
**
ಶುಕ್ರವಾರದ ಮುಂಜಾನೆ ಆಚಾರ್ಯರು ಮತ್ತವರ ಶಿಷ್ಯರು ಸಕಲ ಸಿದ್ದತೆಗಳನ್ನು ರಾಣಾ ಮತ್ತಿತರರಿಂದ ಮಾಡಿಸಿದ್ದು ಶುಭವಾಗಿರುವ ಮುಹೂರ್ತದಲ್ಲಿ ಸೂರ್ಯವಂಶಿ ಸಂಸ್ಥಾನದ ಯುವರಾಣಿಯರಾಗಿ ನಿಧಿ ಮತ್ತು ನಿಶಾ ಇಬ್ಬರಿಗೂ ಪಟ್ಟ ಕಟ್ಟಿದರೆ ಮನೆಯ ಹೆಂಗಸರು ಇಬ್ಬರಿಗೂ ಆರತಿ ಬೆಳಗಿದರು. ಅಮ್ಮನ ಪ್ರೀತಿಯ ಅಪ್ಪುಗೆ ಮರಳಿ ದೊರೆತಿರುವ ಖುಷಿಯಲ್ಲಿ ನಿಶಾ ಪುನಃ ಮೊದಲಿನಂತೆ ಲವಲವಿಕೆ ಮತ್ತು ತುಂಟಾಟದ ಕಿಲಕಾರಿಗಳನ್ನು ಹಾಕುತ್ತ ಎಲ್ಲರ ಜೊತೆಯಲ್ಲೂ ಕೀಟಲೆ ಮಾಡುತ್ತ ಖುಷಿಯಾಗಿದ್ದಳು.
ನೀತು..ಹರೀಶ ತಮ್ಮ ಮಕ್ಕಳ ಹಾಗು ಮನೆಯವರೆಲ್ಲರ ಸಂತೋಷವನ್ನು ನೋಡಿ ಆನಂದಬಾಷ್ಪ ಸುರಿಸುತ್ತ ತಾವೂ ಖುಷಿಯಾಗಿದ್ದರು. ನಿಧಿ—ನಿಶಾ ಇಬ್ಬರಿಂದಲೂ ಸೂರ್ಯವಂಶಿ ರಾಜಮನೆತನದ ಸಾಂಕೇತಿಕ ವಸ್ತುಗಳಿಗೆ ಪೂಜೆ ಮಾಡಿಸಿ ಹಿರಿಯ ತಲೆಮಾರುಗಳ ಚಿತ್ರಪಟಗಳನ್ನು ಹಾಕಲಾಗಿದ್ದ ಕೊಠಡಿಗೆ ಕರೆತಂದು ಹಿರಿಯರಿಂದ ಇಬ್ಬರು ರಾಜಕುಮಾರಿಯರಿಗೆ ಆಶೀರ್ವಾದ ಕೊಡಿಸಲಾಯಿತು. ನಿಶಾ ತನ್ನ ತಲೆ ಮೇಲಿಟ್ಟುರುವ ಪುಟ್ಟ ಕಿರೀಟವನ್ನು ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತ ಎಲ್ಲರಿಗೂ ಅದನ್ನು ತೋರಿಸುತ್ತ ಅವರಿಂದ ಮುದ್ದು ಮಾಡಿಸಿಕೊಳ್ಳುತ್ತಿದ್ದಳು.
ಮಧ್ಯಾಹ್ನದವರೆಗೂ ಸೂರ್ಯವಂಶಿ ಪರಂಪರೆ ನಿಯಮಾವಳಿಗಳ ಅನುಸಾರ ರಾಜಕುಮಾರಿಯರಿಗೆ ವಿಧಿ ಭೋಧಿಸುತ್ತಿದ್ದ ಗುರುಗಳು ಅವರಿಬ್ಬರಿಂದ ಸೂರ್ಯವಂಶಿ ಕುಲದೇವರ ಪೂಜೆ ಮಾಡಿಸಿದರು. ನಿಶಾಳಿಂಗತೂ ಬೆಳಿಗ್ಗೆಯಿಂದಲೂ ಅದು ಮಾಡು ಇದು ಮಾಡೆಂದು ಹೇಳಿಸಿಕೊಂಡು ಚಿಟ್ಟಾಗಿ ಹೋಗಿದ್ದು ಕೊನೆಗೆ ಆಚಾರ್ಯರು ಏನು ಬೇಕಾದರೂ ಹೇಳಿಕೊಳ್ಳಲೆಂದು ತಲೆಯೇ ಕೆಡಿಸಿಕೊಳ್ಳದೆ ಅಲ್ಲಿಂದ ಏದ್ದು ಬಂದು ಅಮ್ಮನನ್ನು ಸೇರಿಕೊಂಡಳು.
ನೀತು.....ಯಾಕಮ್ಮ ಬಂದೆ ಚಿನ್ನಿ ಹೋಗಮ್ಮ ಇನ್ನು ಸ್ವಲ್ಪ ಹೊತ್ತು ಅಕ್ಕನ ಪಕ್ಕ ಕೂತಿರು ಆಮೇಲೆ ಊಟ ಮಾಡಿ ತಾಚಿ ಮಾಡುವಂತೆ.
ನಿಶಾ.....ನಾನಿ ಹೋಲಲ್ಲ ಮಮ್ಮ ನನ್ನಿ ಸುಸಿ ಆತು.
ನೀತು......ನೀನು ಜಾಣೆ ಅಲ್ವಾ ಕಂದ ಅಮ್ಮ ಹೇಳಿದಂತೆ ಕೇಳ್ತಿಯಾ ಅಲ್ವಾ ನೀನು ಗುಡ್ ಗರ್ಲ್ ತಾನೇ ಹೋಗಮ್ಮ ಕಂದ.
ನಿಶಾ.....ಮಮ್ಮ ನೀನಿ ಬಾ.
ಹರೀಶ........ಅಮ್ಮನ ಕೈ ನೋಡು ಡಾಕ್ಟರ್ ಆಂಟಿ ಬ್ಯಾಂಡೇಜ್ ಹಾಕಿದ್ದಾರಲ್ಲಮ್ಮ ಇನು ಸ್ವಲ್ಪ ಹೊತ್ತು ಅಕ್ಕನ ಜೊತೆ ಪೂಜೆ ಮಾಡು ಆಮೇಲೆ ಕುದುರೆ ರೌಂಡ್ ಹೋಗುವಂತೆ.
ಕುದುರೆಯ ಸವಾರಿ ಎನ್ನುತ್ತಿದ್ದಂತೆ ಖುಷಿಯಾದ ನಿಶಾ ಅಕ್ಕನ ಪಕ್ಕ ಕುಳಿತು ಪೂಜೆಯಲ್ಲಿ ಪಾಲ್ಗೊಂಡು ಆಚಾರ್ಯರು...ಅಪ್ಪ...ಅಮ್ಮ ಚಿಕ್ಕಪ್ಪ ಮತ್ತು ಮನೆಯವರೆಲ್ಲರ ಆಶೀರ್ವಾದ ಪಡೆದುಕೊಂಡರು. ನಿಶಾ ಅಕ್ಕನ ಕೈ ಹಿಡಿದೆಳೆಯುತ್ತ ಅವಳನ್ನು ಕುದುರೆ ಸವಾರಿಯನ್ನು ಮಾಡಿಸೆಂದು ಎಳೆದೊಯ್ಯುತ್ತ......
ನಿಶಾ.......ಅಜ್ಜಿ ತಾತ ಬಾ ನಾನಿ ಕುದ್ದಿ ಮೇಲೆ ಕೂಚಿ ಮಾತೀನಿ ನೋಲು ಬಾ ಅಣ್ಣ ಅಕ್ಕ ಬಾ...ಎಂದೆಲ್ಲರನ್ನೂ ಕರೆಯುತ್ತಿದ್ದಳು.
ನಿಧಿಯ ಮುಂದೆ ಕುದುರೆಯ ಮೇಲೇರಿ ಕುಳಿತಾಗ ನಿಧಿ ಇಂದಿನ ಪೂಜಾ ವಿಧಿಗಳಿಗಾಗಿ ರಾಜಪರಂಪರೆಯ ವೇಶ ಭೂಷದಲ್ಲಿದ್ದು ನಿಕಿತಾಳಿಂದ ಒಂದು ದುಪ್ಪಟ್ಟ ತರಿಸಿ ತಂಗಿಯನ್ನು ಬೀಳದಿರುವಂತೆ ತನ್ನೊಂದಿಗೆ ಕಟ್ಟಿಕೊಂಡಳು. ಕುದುರೆ ನಿಧಾನವಾಗಿ ಚಲಿಸುವುದಕ್ಕೆ ಪ್ರಾರಂಭಿಸಿ ಶರವೇಗದಲ್ಲಿ ದೌಡಾಯಿಸಲು ಶುರುವಾದಾಗ ನಿಶಾ ಫುಲ್ ಖುಷಿಯಿಂದ ಕಿರುಚಾಡತೊಡಗಿದಳು.
ಸವಿತಾ......ನಿಧಿಗೆ ಸ್ವಲ್ಪ ನಿಧಾನವಾಗಿ ಹೋಗುವುದಕ್ಕೆ ಹೇಳೆ ನೀತು ಇಷ್ಟು ಸ್ಪೀಡಾಗಿ ಹೋಗುವುದು ಬೇಡ ಕಣೆ.
ರೇವತಿ.....ಹೌದು ಕಣಮ್ಮ ನಿಧಿಗೆ ನಿಧಾನವಾಗಿ ಹೋಗುವುದಕ್ಕೆ ಹೇಳ್ಬೇಕು ಆದರೆ ಹೇಳುವುದೇಗೆ ?
ನೀತು.......ಅಮ್ಮ ಹೆದರುವ ಅಗತ್ಯವಿಲ್ಲ ನಿಧಿಗೆ ಅಭ್ಯಾಸವಾಗಿದೆ ಜೊತೆಗೆ ಇಲ್ಲಿಗೆ ಬಂದಾಗಿನಿಂದ ನಿಶಾ ಲೆಕ್ಕವಿಲ್ಲದಷ್ಟು ಕುದುರೆಯ ಸವಾರಿಯಲ್ಲಿ ಜೊತೆಗಿದ್ದಳು ಅವಳಿಗೂ ಆಭ್ಯಾಸವಾಗಿ ಹೋಗಿದೆ.
ಅರಮನೆಯನ್ನು ಮೂರು ರೌಂಡ್ ಸುತ್ತಿಕೊಂಡು ಬಂದ ನಂತರ ನಿಶಾ ಫುಲ್ ಖುಷಿಯಾಗಿ ಕುಣಿದಾಡುತ್ತ ಸೀಮ ಅತ್ತೆಯಿಂದಲೇ ಊಟ ಮಾಡಿಸಿಕೊಂಡು ಶೀಲಾ ಉಳಿದಿರುವ ರೂಮನ್ನು ಸೇರಿ ತಮ್ಮನನ್ನು ನೋಡುತ್ತ ನಿದ್ರೆಗೆ ಜಾರಿಕೊಂಡಳು. ಇತ್ತ ಹೊರಗೆ.....
ವರ್ಧನ್.......ಅಕ್ಕ ನಾನಿನ್ನು ಹೊರಡ್ತೀನಿ ಇಲ್ಲಿನ ಕೆಲಸಗಳೆಲ್ಲವೂ ಸಧ್ಯಕ್ಕೆ ಮುಗಿದಿದೆ ಮುಂದಿನ ಬಾರಿ ಕಾಮಾಕ್ಷಿಪುರಕ್ಕೆ ಬರ್ತೀನಿ.
ನೀತು.......ವರ್ಧನ್ ಅಣ್ಣ ಬರೆದಿದ್ದ ವಿದೇಶಗಳಲ್ಲಿನ ಹೋಟೆಲ್ ಮತ್ತು ರೆಸಾರ್ಟಿನ ವಿವರಗಳು ನನಗೆ ನಾಳೆ ಕೈ ಸೇರಲಿದೆ. ಅದನ್ನು ಪೂರ್ತಿ ಸ್ಟಡಿ ಮಾಡಿ ಯಾವ್ಯಾವುದನ್ನು ಮಾರಾಟ ಮಾಡಬೇಕಿದೆ ಅಥವ ಇಂತಿಷ್ಟು ವರ್ಷಗಳಿಗೆ ಪರಭಾರೆ ನೀಡುವುದೆಂಬುದರ ಬಗ್ಗೆ ನಿನಗೆ ವಿವರವಾಗಿ ಮೇಲ್ ಮಾಡ್ತೀನಿ.
ವರ್ಧನ್.......ಆಯ್ತಕ್ಕ ನೀವು ವಿವರಗಳನ್ನು ನನಗೆ ಕಳಿಸಿ ಕೊಡಿ ಮಿಕ್ಕಿದ್ದೆಲ್ಲವನ್ನು ನಾನು ನೋಡಿಕೊಳ್ತೀನಿ ಆದರೆ ಸೈನ್ ಮಾಡಲು ನೀವೇ ಅಲ್ಲಿಗೆ ಹೋಗಬೇಕು.
ರಜನಿ......ಈ ಕೆಲಸದಿಂದಾದರೂ ಸರಿ ನಾನು ನೀತು ವಿದೇಶವನ್ನು ಸುತ್ತಾಡಿಕೊಂಡು ಬರ್ತೀವಿ.
ರಶ್ಮಿ......ಅಮ್ಮ ನಮ್ಮೆಲ್ಲರ ಕಥೆಯೇನು ?
ನಯನ.......ಹೂಂ ಆಂಟಿ ನಾವೇನು ಪಾಪ ಮಾಡಿದ್ವಿ ನೀವಿಬ್ಬರೂ ನಮ್ಮನ್ನು ಕರೆದುಕೊಂಡು ಹೋಗುವುದಿಲ್ಲವಾ ?
ಪ್ರೀತಿ.....ಸಧ್ಯಕ್ಕೆ ನಿಮ್ಮ ಕೆಲಸವೇನಿದ್ದರೂ ಓದುವುದು ಮುಂದಿನ ವಾರ್ಷಿಕ ಪರೀಕ್ಷೆಯಲ್ಲಿ ಒಳ್ಳೆಯ ನಂಬರ್ ತೆಗೆದುಕೊಂಡು ಬನ್ನಿರಿ ನಿಮ್ಮೆಲ್ಲರಿಗೂ ಫಾರಿನ್ ಟೂರ್ ಗ್ಯಾರೆಂಟಿ.
ವರ್ಧನ್ ಪ್ರತಿಯೊಬ್ಬರನ್ನೂ ವಯಕ್ತಿಕವಾಗಿ ಬೇಟಿಯಾಗಿ ಅಕ್ಕ ಮತ್ತು ನಿಧಿಯನ್ನು ತಬ್ಬಿಕೊಂಡು ನಿಶಾ ಮಲಗಿದ್ದ ರೂಮಿಗೋದನು. ಅಲ್ಲಿ ಶೀಲಾಳ ಮಗುವನ್ನೆತ್ತಾಡಿಸಿದ ಬಳಿಕ ನಿಶಾಳನ್ನು ಮುದ್ದಾಡಿ ಗುರುಗಳ ಆಶೀರ್ವಾದ ಪಡೆದು ಎಲ್ಲರಿಂದ ಬೀಳ್ಗೊಂಡು ಕರ್ತವ್ಯದ ಪಥದತ್ತ ಮರಳಿದನು.
* *
* *



No comments:
Post a Comment