ಸಂಜೆ ಲವಲವಿಕೆಯಿಂದ ಏದ್ದು ರೆಡಿಯಾದ ನಿಶಾ ಆಂಟಿಯ ಜೊತೆ ಅರಮನೆಯಲ್ಲಿ ಸುತ್ತಾಡುತ್ತ ಎಲ್ಲವನ್ನು ನೋಡುತ್ತಿದ್ದಳು. ಅನುಷ ಕೂಡ ಜೀವನದಲ್ಲಿ ಮೊದಲ ಬಾರಿ ಅರಮನೆಗೆ ಬಂದಿದ್ದುಅವಳಿಗೂ ಇದೊಂದು ಹೊಸ ಅನುಭವವಾಗಿತ್ತು.
ನೀತು.....ನನ್ನ ಚಿನ್ನಿ ಮರಿ ರೆಡಿಯಾಗಿದ್ದೀಯಾ ?
ನಿಶಾ.....ಮಮ್ಮ ನಂಗಿ ಆನಿ ಬೇಕು.
ನೀತು ಮಗಳನ್ನೆತ್ತಿಕೊಂಡು.....ನನ್ನ ಕಂದನಿಗೆ ಆನೆ ಬೇಕಾ ?
ನಿಶಾ ತಲೆ ಕುಣಿಸಿ.....ಬೇಕು..ಬೇಕು...ನಾನಿ ಕೂಚಿ ಮಾತೀನಿ.
ನೀತು.....ಆಯ್ತು ಕಂದ ಇನ್ನು ಸ್ವಲ್ಪ ಹೊತ್ತಲ್ಲಿ ನಾವು ಇನ್ನೊಂದು ಅರಮನೆಗೆ ಹೋಗ್ತೀವಲ್ಲ ಅಲ್ಲಿ ನಿಂಗೆ ಆನೆ...ಕುದುರೆ ಎಲ್ಲ ಸಿಗುತ್ತೆ. ಈಗ ನನ್ನ ಜೊತೆ ಬರ್ತೀಯಾ.
ನಿಶಾ......ಆತು ಮಮ್ಮ.
ಅನುಷ......ಯಾಕೆ ನಿಧಿ ಬೇಸರದಲ್ಲಿದ್ದೀಯಾ ? ಏನಾಯ್ತಮ್ಮ ?
ನಿಧಿ......ಅದು ಚಿಕ್ಕಮ್ಮ....
ನೀತು......ಹೇಳಿಕೊಳ್ಳಮ್ಮ ಮನಸ್ಸಿನ ಭಾರ ಕಡಿಮೆಯಾಗುತ್ತೆ.
ಆರಾಧನಾ ಹೇಳಿದ್ದನ್ನೆಲ್ಲಾ ನಿಧಿ ಹೇಳಿದಾಗ ಅದನ್ನು ಕೇಳಿ ಅನುಷ ಕೂಡ ದುಃಖಿತಳಾಗಿದ್ದು.......ನೋಡು ನಿಧಿ ಇದಕ್ಕೆಲ್ಲಾ ಬೇಜಾರು ಮಾಡಿಕೊಳ್ಬೇಡ. ಮೊನ್ನೆ ದಿನ ನೀನು ಅಕ್ಕನ ಜೀವನಗಾಥೆ ಕೇಳಿದ್ದೆ ಅವರು ಕೂಡ ತಮ್ಮ ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡವರು. ಇದರಲ್ಲಿ ಅವರ ತಪ್ಪೇನಿದೆ ಹೇಳು ಅದೇ ರೀತಿ ನೀನು ಚಿನ್ನಿ ಇಬ್ಬರೂ ಹುಟ್ಟಿದಾಗಲೇ ನಿಮ್ಮಿಬ್ಬರನ್ನು ಹೆತ್ತ ತಾಯಿ ಮರಣಿಸಿದರೆ ಅದರಲ್ಲಿ ನಿಮ್ಮ ಪಾತ್ರವೇನಿದೆ. ನೀನು ಆಚಾರ್ಯರ ಕೈಗೆಳಗೆ ಆಶ್ರಮದಲ್ಲಿ ಬೆಳೆದಿರುವವಳು ಈ ರೀತಿಯ ಸಣ್ಣಪುಟ್ಟ ವಿಷಯಗಳಿಗೆಲ್ಲ ಧೃತಿಗೆಡುತ್ತಾರಾ ನಡಿ ಅಕ್ಕ ಕರೆಯುತ್ತಿದ್ದಾರಲ್ಲ ನಾವೂ ಹೋಗೋಣ.
ನೀತು ಮಗಳ ಜೊತೆ ನೆಲಮಾಳಿಗೆಗೆ ಬರುವಷ್ಟರಲ್ಲಿ ಆರಾಧನಾಳನ್ನ ಬೇರೊಂದು ಕೊಠಡಿಗೆ ಕರೆತಂದು ಕೂರಿಸಲಾಗಿತ್ತು. ಆರಾಧನಾ ತನ್ನ ಗಂಡ ಮಕ್ಕಳ ಸಾವನ್ನು ಕಣ್ಣಾರೆ ನೋಡಿ ಅತ್ತು...ಅತ್ತು... ಅವಳ ಕಣ್ಣುಗಳೆರಡೂ ಕೆಂಪಗೆ ಊದಿಕೊಂಡಿದ್ದವು.
ನೀತು......ಆರಾಧನಾ ಈ ಮಗು ಯಾರೆಂದು ಗೊತ್ತಾ ?
ಆರಾಧನಾ ದುಃಖದಲ್ಲಿ.....ನನ್ನ ಗಂಡ ಮಕ್ಕಳನ್ಯಾಕೆ ಕೊಂದಿದ್ದು ?
ನೀತು........ಅದು ನೀನು ಮಾಡಿದ ಪಾಪ ಕರ್ಮದ ಫಲ. ನೀನು ಮಹರಾಣಿಗೆ ಆಪ್ತ ಸಹಾಯಕಿ ಆಗಿದ್ದರೂ ಅವರು ನಿನ್ನನ್ನೆಂದೂ ದಾಸಿಯಂತೆ ನೋಡುತ್ತಿರಲಿಲ್ಲ. ಅದಕ್ಕೆ ಪ್ರತಿಫಲವಾಗಿ ನೀನೇನು ಮಾಡಿದ್ದು ಹಣಕಾಸಿನ ಆಸೆಯಿಂದ ಅವರ ಗರ್ಭದೊಳಗಿರುವ ಮಗುವನ್ನೇ ಕೊಲ್ಲಲು ಊಟಕ್ಕೆ ವಿಷ ಬೆರೆಸುತ್ತಿದ್ದೆ. ಆಗ ನೀನು ಮಾಡಿದ್ದ ಕುಕೃತ್ಯದ ಫಲ ಸ್ವರೂಪದಿಂದ ನಿನ್ನ ಗಂಡ ಮಕ್ಕಳಿಬ್ಬರು ಸತ್ತು ಬಿದ್ದಿದ್ದು. ಈ ಮಗು ಸುಧಾಮಣಿಯವರು ಹೆತ್ತಿರುವ ಸ್ವಂತ ಮಗಳು ಆದರೀಗ ನನ್ನ ಮಗಳಾಗಿ ಬೆಳೆಯುತ್ತಿದ್ದಾಳೆ. ಇವಳನ್ನು ಹುಟ್ಟುವುದಕ್ಕೂ ಮುಂಚೆ ಸಾಯಿಸಲು ಯೋಚಿಸಿದ್ದೆಯಲ್ಲ ನೀನು ಅದೆಷ್ಟು ಕ್ರೂರ ಹೆಂಗಸೆಂಬುದು ಇದರಿಂದಲೇ ತಿಳಿಯುತ್ತಿದೆ.
ಅಮ್ಮನ ತೋಳಿನಲ್ಲಿದ್ದ ನಿಶಾ ತನ್ನೆದುರಿಗೆ ಕುಳಿತು ಅಳುತ್ತಿರುವ ಹೆಂಗಸನ್ನೇ ನೋಡುತ್ತಿದ್ದಳು. ನೀತು ಮಗಳ ಕೈಯಿಂದಲೇ ಒಂದು ಮಾತ್ರೆಯನ್ನು ಆರಾಧನಾಳಿಗೆ ನುಂಗಿಸಿದಳು.
ನೀತು......ನೀನೀಗಲೇ ಸಾಯುವುದಿಲ್ಲ ಆರಾಧನಾ ಇನ್ನೊಂದು ವಾರ ಹತ್ತು ದಿನಗಳ ಕಾಲ ನರಕದ ಸಮಸ್ತ ನೋವನ್ನು ಅನುಭವಿಸಿ ಆನಂತರವೇ ನಿನ್ನ ದೇಹದಿಂದ ಪ್ರಾಣ ದೂರವಾಗೋದು. ನನ್ನೀ ಮುದ್ದಾದ ಕಂದನನ್ನು ಸಾಯಿಸಲು ಯೋಚಿಸಿದ ನಿನಗಿದು ಸ್ವಲ್ಪ ಕಡಿಮೆ ಶಿಕ್ಷೆಯಾಗಿದೆ ಆದರೂ ನಿನ್ನೊಬ್ಬಳ ಹತ್ತಿರವೇ ಸಮಯ ವ್ಯರ್ಥಗೊಳಿಸಲು ನನ್ನ ಬಳಿ ಸಮಯದ ಕೊರತೆಯಿದೆ ಇನ್ನೂ ಇಲ್ಲಿ ಮಾಡಬೇಕಾಗಿರುವ ಕೆಲಸ ಬಹಳಷ್ಟಿದೆ. ರಾಣಾ ಹೊರಡುವುದಕ್ಕೆ ಎಲ್ಲಾ ಸಿದ್ದತೆಗಳು ಆಗಿದೆಯಾ ?
ರಾಣಾ.....ಎಲ್ಲವೂ ಸಿದ್ದವಾಗಿದೆ ಮಾತೆ.
ನೀತು.....ಇವಳಿಲ್ಲಿಯೇ ಕೊಳೆಯುತ್ತಿರಲಿ 10 ದಿನಗಳಲ್ಲಿ ಇವಳಿಗೆ ಸಾವು ಸಂಭವಿಸಿದಾಗ ಸಂಸ್ಕಾರ ಮಾಡಿಬಿಡುವಂತೆ ತಿಳಿಸು ಅಲ್ಲಿ ತನಕವೂ ಪ್ರತಿಕ್ಷಣ ನರಕದ ನೋವು ಅನುಭವಿಸುತ್ತಿರಲಿ.
ನೀತುವಿನ ಮಾತು ಮುಗಿಯುತ್ತಿದ್ದಂತೆ ಆರಾಧನಾಳ ದೇಹದೊಳಗೆ ಸಹಿಸಿಕೊಳ್ಳಲು ಆಸಾಧ್ಯವಾದ ನೋವು ಪ್ರಾರಭವಾಗಿ ಅವಳು ಕಿರುಚಿ ನೆಲದಲ್ಲಿ ಬಿದ್ದು ಒದ್ದಾಡತೊಡಗಿದಳು. ನೀತು ತಕ್ಷಣ ಮಗಳ ಜೊತೆ ಅಲ್ಲಿಂದ ಹೊರಬಂದು ಉದಯಪುರದ ಅರಮನೆಯತ್ತ ಹೊರಡಲು ರೆಡಿಯಾದಳು.
ನಿಧಿ.......ಅಮ್ಮಈ ಚಂಚಲಾದೇವಿಯ ಮಗಳಾದ ಯಶೋಮತಿ ಇವಳನ್ನು ನನಗೊಪ್ಪಿಸಿ ಪ್ಲೀಸ್.
ನೀತು......ಯಶೋಮತಿ ನಮ್ಮ ಬಂಧಿಯಾಗಿರುವಳಾ ರಾಣಾ ?
ರಾಣಾ........ಚಂಚಲಾದೇವಿಯ ಅರಮನೆಯಿಂದ ಅವರ ಗಂಡು ಮಕ್ಕಳನ್ನು ಮಾತ್ರ ಎಳೆದು ತಂದಿದ್ದು ಅಲ್ಲಿವರ ಮಗಳು ಇರಲಿಲ್ಲ. ಅವಳ ಬಗ್ಗೆ ವಿಚಾರಿಸುವುದಕ್ಕೆ ನಾನಾಗಲೇ ದಿಲೇರ್ ಸಿಂಗ್ ಬಳಿ ಸೂಚನೆ ಕಳುಹಿಸಿದ್ದೀನಿ.
ನೀತು ತಂಗಿ ಮತ್ತು ಮಕ್ಕಳ ಜೊತೆ ಉದಯಪುರಕ್ಕೆ ತೆರಳುವುದಕ್ಕೆ ಹೆಲಿಕಾಪ್ಟರಿನಲ್ಲಿ ಕುಳಿತಾಗ ನಿಶಾ ಕುಣಿದಾಡುತ್ತ ಕಿಟಕಿಯಿಂದಾಚೆ ನೋಡುತ್ತ ನಿಂತಳು. ಉದಯಪುರದ ಅರಮನೆಯಲ್ಲಿ ಸಡಗರ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಸೂರ್ಯವಂಶಿ ಸಂಸ್ಥಾನದ ಇಬ್ಬರು ರಾಜಕುಮಾರಿಯರಿಂದು ತಮ್ಮ ಅರಮನೆಗೆ ಆಗಮಿಸುತ್ತಿದ್ದು ಅಲ್ಲಿನ ಕಂಬ ಕಮಾನುಗಳಿಗೆಲ್ಲ ಹೂವಿನ ತೋರಣ ಕಟ್ಟಿ ಭವ್ಯವಾಗಿ ಅಲಂಕರಿಸುವುದರ ಜೊತೆ ಹಣತೆಯ ದೀಪಗಳನ್ನು ಬೆಳಗಿ ಸ್ವಾಗತ ಕೋರಲು ಸಜ್ಜುಗೊಳಿಸಲಾಗಿತ್ತು.
ಹೆಲಿಕಾಪ್ಟರಿನಿಂದ ಕೆಳಗಿಳಿದಾಗ ಅಮ್ಮನ ಹೆಗಲಿನಲ್ಲಿದ್ದ ನಿಶಾ ಸುತ್ತಮುತ್ತಲೆಲ್ಲಾ ಕಡೆ ನೋಡುತ್ತಿದ್ದರೆ ತನ್ನ ಜನ್ಮರಹಸ್ಯ ತಿಳಿದು ಡಿಸ್ಟರ್ಬಾಗಿದ್ದ ನಿಧಿ ಫುಲ್ ಸೈಲೆಂಟಾಗಿ ಅನುಷ ಚಿಕ್ಕಮ್ಮನ ಕೈ ಹಿಡಿದು ಬರುತ್ತಿದ್ದಳು. ನಾಲ್ಕು ಆನೆಗಳು ತಮ್ಮ ಸೊಂಡಲಿನಲ್ಲಿ ಹೂವಿನ ಹಾರಗಳನ್ನಿಡಿದು ನಿಂತರೆ ಮಾವುತನ ಆದೇಶದಂತೆ ಇವರ ಕೊರಳಿಗೆ ಹಾರ ಹಾಕಿ ಸ್ವಾಗತ ಕೋರಿದವು.
ನಿಶಾ ಫುಲ್ ಖುಷಿಯಾಗಿ.......ಮಮ್ಮ ನೋಲು ಆನಿ ನಂದು ಆನಿ.
ನೀತು ಮುಗುಳ್ನಕ್ಕು.......ಹೂಂ ಕಂದ ಆನೆ ನಿಂದೆ ಈಗ ಒಳಗಡೆ ಹೋಗೋಣ ನಾಳೆ ಬೆಳಿಗ್ಗೆ ನೀನು ಆನೆಯ ಮೇಲೆ ಕುಳಿತು ರೌಂಡ್ ಹೋಗುವಂತೆ ಈಗ ಹೋಗ್ತೀನೀಂತ ಗಲಾಟೆ ಮಾಡಬಾರದು.
ನಿಶಾ.....ಆತು ಮಮ್ಮ ನಾನಿ ಗುಲ್ ಗಲ್.
ಅರಮನೆಯಲ್ಲಿ ಹಲವಾರು ವರ್ಷಗಳಿಂದ ಪರಿಚಾರಕಿಯರಾಗಿ ಸೇವೆ ಸಲ್ಲಿಸುತ್ತಿದ್ದ ಕೆಲವು ಮಹಿಳೆಯರು ಇವರಿಗೆ ಆರತಿ ಬೆಳಗುತ್ತ ಸ್ವಾಗತ ಕೋರಿದರು. ನೀತು ಮಕ್ಕಳಿಬ್ಬರ ಕೈಯಿಂದ ಅವರಿಗೆಲ್ಲಾ ದುಡ್ಡು ಕೊಡಿಸಿ ಅವರ ಆಶೀರ್ವಾದ ಕೊಡಿಸಿದಳು. ಐದು ವರ್ಷದ ಮಗುವಾಗಿದ್ದಾಗ ಈ ಅರಮನೆಯಿಂದ ಆಶ್ರಮಕ್ಕೆ ತೆರಳಿದ್ದ ನಿಧಿ ಇಂದು 14 ವರ್ಷಗಳ ನಂತರ ಅರಮನೆಯಲ್ಲಿ ಕಾಲಿಟ್ಟಿದ್ದಳು. ಆದರೆ ತನ್ನನ್ನು ಈ ಅರಮನೆಯ ಮಗಳು...ಯುವರಾಣಿಯನ್ನಾಗಿಸಿದ್ದ ಅಪ್ಪ ಅಮ್ಮ ಈಗ ಬದುಕಿಲ್ಲದಿರುವುದನ್ನು ನೆನೆದು ನಿಧಿಯ ಕಂಗಳು ಕಂಬನಿ ಸುರಿಸತೊಡಗಿತು. ಅನುಷಾಳಿಗೆ ಮಗಳನ್ನು ಸಂಭಾಳಿಸಲು ಕೊಟ್ಟ ನೀತು ಹಿರಿಮಗಳನ್ನು ತನ್ನ ತೆಕ್ಕೆಯಲ್ಲಿ ತೆಗೆದುಕೊಂಡವಳೇ ಬಚ್ಚಿಟ್ಟುಕೊಳ್ಳುತ್ತ ಸಂತೈಸಿ......
ನೀತು......ನೋಡಮ್ಮ ನಿಧಿ ನಾವು ಮನುಜರಾಗಿ ಜನಿಸಿದ ಕ್ಷಣವೇ ಮುಂದೊಂದು ದಿನ ಮರಣ ಹೊಂದುತ್ತೀವೆಂಬುದು ನಮ್ಮ ಜೊತೆಗೆ ಹುಟ್ಟುವ ಕಟುಸತ್ಯ. ಆದರೆ ಈ ಜನನ ಮತ್ತು ಮರಣದ ನಡುವಿನ ನಮ್ಮ ಜೀವನವನ್ನು ಹೇಗೆ ಸಾರ್ಥಕಗೊಳಿಸುತ್ತ ಬಾಳುತ್ತೀವೆಂಬುದು ತುಂಬಾನೇ ಮುಖ್ಯವಾದದ್ದು. ನಮಗೆ ದುಃಖವಾಗುತ್ತಿದ್ದರೂ ಅದನ್ನು ಸಹಿಸಿಕೊಂಡು ನಮ್ಮ ಬಳಿಯಿರುವ ಸಿಹಿಯಾದ ನೆನಪುಗಳನ್ನೇ ನೆನೆದು ನಾವು ಜೀವನದಲ್ಲಿ ಮುಂದೆ ಸಾಗುತ್ತಿರಬೇಕು. ಅಪ್ಪ ಅಮ್ಮ ಇಬ್ಬರ ನೆನೆಪು ನಿನಗೆ ತುಂಬ ಕಾಡುತ್ತಿದೆ ಅಂತ ಗೊತ್ತಿದೆ ಆದರೆ ವಿಧಿ ಮುಂದೆ ನಾವೆಲ್ಲರೂ ಶೂನ್ಯಕ್ಕೆ ಸಮಾನರು. ಅಪ್ಪ ಅಮ್ಮನನ್ನು ನೆನೆಯಬೇಡ ಅಂತ ಹೇಳಲ್ಲ ಆದರೆ ನೀನು ದುಃಖಿಸುತ್ತಿರುವುದನ್ನು ನೋಡುತ್ತಿರುವ ಅವರ ಆತ್ಮಗಳೂ ಸಹ ದುಃಖ ಪಡುತ್ತಿರುತ್ತೆಂದು ಮಾತ್ರ ಮರೆಯಬೇಡ ಕಂದ.
ಅಮ್ಮನ ಎದೆಯಲ್ಲಿ ಮುಖ ಹುದುಗಿಸಿದ್ದ ನಿಧಿ.......14 ವರ್ಷಗಳ ನಂತರ ಮತ್ತೊಮ್ಮೆ ಅರಮನೆಗೆ ಮರಳಿರುವಾಗ ಅಪ್ಪ ಅಮ್ಮನನ್ನು ನೆನೆದು ದುಃಖವಾಗ್ತಿದೆ ಕಣಮ್ಮ ನಮ್ಮ ಜೊತೆಯಲ್ಲಿ ಅಪ್ಪ ಕೂಡ ಬಂದಿದ್ದರೆ ಚೆನ್ನಾಗಿರುತ್ತಿತ್ತು ಅವರನ್ನು ಮಿಸ್ ಮಾಡಿಕೊಳ್ತಿದ್ದೀನಿ.
ನೀತು......ಇಲ್ಲಿನ ಕರ್ತವ್ಯಗಳನ್ನು ಮುಗಿಸಿ ಮನೆಗೆ ಹಿಂದಿರುಗಿದಾಗ ನಿನ್ನಿಷ್ಟ ಬಂದಷ್ಟು ದಿನ ನಿಮ್ಮಪ್ಪನ ಜೊತೆಗೇ ಇರುವಂತೆ ಆಯ್ತಾ. ಈಗ ದುಃಖ ಬದಿಗೊತ್ತು ನೋಡಲ್ಲಿ ನಿನ್ನ ಪುಟಾಣಿ ತಂಗಿ ಎಷ್ಟು ಖುಷಾಯಲ್ಲಿದ್ದಾಳೆ ನೀನು ಹಾಗೆಯೇ ಇರಬೇಕಮ್ಮ.
ಇವರು ಬಂದಾಗಿನಿಂದ ಅರಮನೆ ಮಹಡಿಯ ಕಂಬದ ಹಿಂದಿನಿಂದ ಕದ್ದು ಮುಚ್ಚಿ ಇವರನ್ನೇ ಗಮನಿಸುತ್ತಿದ್ದ ಹೆಂಗಸೊಬ್ಬಳು ಇವರಿಗೆ ಹಿಡಿ ಶಾಪ ಹಾಕುತ್ತ......ಕಳೆದ ಬಾರಿ ಈ ಮಗು ಬಂದಿದ್ದಾಗ ನಾನು ಅರಮನೆಯಲ್ಲಿ ಇರಲಿಲ್ಲ ಆದರೀಗಿಲ್ಲೇ ಇದ್ದೀನಿ. ಯಾವ ವಂಶದ ನಿರ್ವಂಶಕ್ಕಾಗಿ ಇಷ್ಟು ವರ್ಷಗಳಿಂದ ನನ್ನ ಕಾರ್ಯಗಳನ್ನು ಮಾಡುತ್ತ ಬಂದಿರುವೆನೋ ಅದೇ ವಂಶದ ಇಬ್ಬರು ಕುಡಿಗಳು ಬಂದಿದ್ದಾರೆ. ಈ ಬಾರಿ ಅರಮನೆಯಲ್ಲಿ ರಕ್ತ ಹರಿಯುವುದು ನಿಶ್ಚಿತ ಆಗಲೇ ನನಗೆ ಗೆಲುವಾಗೋದು. ಸೂರ್ಯವಂಶಿ ಸಂಸ್ಥಾನದ ಸಮಸ್ತ ಆಸ್ತಿಗಳಿಗೆ ನಾನೊಬ್ಬಳೇ ವಾರಸುದಾರಳು ನಾನೇ ಇಲ್ಲಿನ ಏಕೈಕ ಮಹಾರಾಣಿ ನನ್ನೀ ಕನಸು ಅಲ್ಲಲ್ಲ ನನ್ನೀ ಉದ್ದೇಶ ಮತ್ತು ಆಶಯ ನೆರವೇರುವ ಸಮಯ ಸಮೀಪಿಸಿದೆ.......ಎಂದು ತನ್ನಲ್ಲೇ ಹೇಳಿಕೊಳ್ಳುತ್ತ ತುಂಬ ಕ್ರೂರವಾದ ನಗೆ ಬೀರುತ್ತಿದ್ದಳು.
* *
* *
ಯುವರಾಣಿಯರು ಅರಮನೆಗೆ ಆಗಮಿಸಿರುವುದರಿಂದ ವಿಶೇಷ ಅಡುಗೆಗಳನ್ನು ಸಿದ್ದಪಡಿಸಲಾಗಿದ್ದು ಪ್ರತಿಯೊಂದನ್ನೂ ಸುಮೇರ್ ಸಿಂಗ್ ಮುಂದಾಳತ್ವದಲ್ಲಿ ಅವನ ತಂಡದವರು ಪರೀಕ್ಷಿಸಿಯಾದ ನಂತರ ಅದನ್ನು ಡೈನಿಂಗ್ ಟೇಬಲ್ಲಿಗೆ ಕಳುಹಿಸಿಕೊಡಲಾಗುತ್ತಿತ್ತು. ಇದನ್ನೂ ಸಹ ಗಮನಿಸಿದ್ದ ಆ ಹೆಂಗಸು ಊಟದಲ್ಲಿ ವಿಷ ಬೆರೆಸುವ ತನ್ನ ಯೋಜನೆ ವಿಫಲವಾಗುತ್ತೆಂದು ಅರ್ಥವಾಗಿದ್ದು ಆ ಯೋಚನೆ ತ್ಯಜಿಸಿ ಬೇರೆ ಯೋಜನೆಗಳನ್ನು ರೂಪಿಸುವ ಬಗ್ಗೆ ಚಿಂತಿಸುತ್ತಿದ್ದಳು.
ನಿಶಾ ವಿವಿಧ ವ್ಯಂಜನಗಳನ್ನು ನೋಡಿ ಖುಷಿಯಿಂದ ಊಟ ಮಾಡಿ ತನಗಿಷ್ಟವಾದ ಐಸ್ ಕ್ರೀಂ ಕೂಡ ಸೇವಿಸಿದಳು. ನಾಲ್ವರು ನಿಕಟ ಪೂರ್ವ ಮಹಾರಾಜ—ಮಹಾರಾಣಿಯವರ ಕೊಠಡಿಯಲ್ಲಿದ್ದು ನಿಶಾ ತನಗೆ ಜನ್ಮ ನೀಡಿದ ತಂದೆ ತಾಯಿಯ ಮಂಚದಲ್ಲಿ ಹಾಕಲಾಗಿರುವ ಮೆತ್ತನೆಯ ಹಾಸಿಗೆ ಮೇಲೆ ಕುಣಿದಾಡುತ್ತ ತನಗಾಗುತ್ತಿದ್ದ ಸಂತೋಷ ವ್ಯಕ್ತಪಡಿಸುತ್ತಿದ್ದಳು.
ನೀತು......ನಾಲ್ಕು ಜನರೂ ಇಲ್ಲಿಯೇ ಆರಾಮವಾಗಿ ಮಲಗೋಣ ಮಂಚವೂ ತುಂಬ ದೊಡ್ಡದಾಗಿದೆ.
ಅನುಷ.......ಹೌದಕ್ಕ ಇಷ್ಟು ದೊಡ್ಡ ಮಂಚವನ್ನು ನಾನಿದೇ ಮೊದಲ ಸಲ ನೋಡ್ತಿರೋದು.
ನಿಧಿ ಮುಗುಳ್ನಕ್ಕು.......ಚಿಕ್ಕಮ್ಮ ನಾನಿದೇ ಮಂಚದ ಮೇಲೆ ನಿಶಾಳ ರೀತಿ ಕುಣಿದಾಡುತ್ತ ಬೆಳಿದಿದ್ದು ಈಗಿವಳು ಕುಣಿಯುತ್ತಿದ್ದಾಳೆ.
ಅನುಷ.......ಅರಮನೆ ತುಂಬ ಭವ್ಯವಾಗಿದೆ ಕಣಮ್ಮ ನಿಧಿ.
ನಿಧಿ......ನಾವು ಬಂದಾಗ ಕತ್ತಲಾಗಿ ಹೋಗಿತ್ತಲ್ವಾ ನಾಳೆಯ ಬೆಳಿಗ್ಗೆ ನಿಮಗೆಲ್ಲಾ ಕಡೆ ತೋರಿಸ್ತೀನಿ ಚಿಕ್ಕಮ್ಮ. ಅಮ್ಮ ನೀವು ಚಿನ್ನಿ ಇಲ್ಲೇ ಮಲಗಿ ನಾವು ಪಕ್ಕದ ರೂಮಿನಲ್ಲಿರ್ತೀವಿ.
ನೀತು......ಇಲ್ಲೇ ಮಲಗಮ್ಮ ಕಂದ.
ನಿಧಿ.......ಬೇಡಮ್ಮ ನೀವು ಚಿನ್ನಿ ಮಲಗಿ ಈ ಚಿಲ್ಟಾರಿ ಚೆನ್ನಾಗಿಯೇ ಕುಣಿದು ಕುಪ್ಪಳಿಸಲಿ ನಾಳೆ ಒಟ್ಟಿಗೆ ಮಲಗೋಣ.
ನಿಧಿ—ಅನುಷ ಪಕ್ಕದ ರೂಮಿಗೆ ತೆರಳಿದರೆ ಇನ್ನೂ ಕುಣಿದಾಡುತ್ತಿದ್ದ ಮಗಳನ್ನಿಡಿದು ಮಲಗಿಸುವುದೇ ನೀತುಳಿಗೆ ದೊಡ್ಡ ಕೆಲಸವಾಯ್ತು.
ರಾತ್ರಿ 11ರ ಸುಮಾರಿಗೆ ಹರೀಶ—ರಜನಿ ಅರಮನೆಗೆ ಆಗಮಿಸಿದ್ದು ವಿಕ್ರಂ ಸಿಂಗ್ ತುಂಬ ಆಗ್ರಹಿಸಿಕೊಂಡಾಗ ಇಬ್ಬರೂ ಊಟ ಮುಗಿಸಿ ಹಿರಿ ಮಗಳಿರುವ ಕೋಣೆಯ ಬಾಗಿಲು ತಟ್ಟಿದರು. ಈ ರಾತ್ರಿಯಲ್ಲಿ ಯಾರು ಬಂದಿರಬಹುದೆಂದು ಯೋಚಿಸುತ್ತಲೇ ಅನುಷ ಬಾಗಿಲನ್ನು ತೆರೆದಾಗ ಅವರಿಬ್ಬರನ್ನು ನೋಡಿ.....
ಅನುಷ......ಅಕ್ಕ ಭಾವ ನೀವಿಲ್ಲಿ ಯಾವಾಗ ಬಂದ್ರಿ ಬೆಳಿಗ್ಗೆ ನಮ್ಮ ಜೊತೆಯಲ್ಲೇ ಬರಬಹುದಿತ್ತಲ್ವಾ ?
ರಜನಿ.....ನೀನು ಬಾ ನಾವಿಬ್ಬರು ಏದುರಿನ ರೂಮಲ್ಲಿ ಮಲಗೋಣ ನಿಧಿಯ ಜೊತೆ ಅವಳಪ್ಪ ಇರಲಿ.
ಅನುಷ.......ಹೌದು ಭಾವ ಹೆತ್ತ ತಂದೆ ತಾಯಿ ಬಗ್ಗೆ ತಿಳಿದಾಗಿನಿಂದ ನಿಧಿ ತುಂಬ ಸೈಲೆಂಟಾಗಿ ಹೋಗಿದ್ದಾಳೆ. ನಮ್ಮ ಮುಂದೆ ಏನನ್ನೂ ತೋರ್ಪಡಿಸಿಕೊಳ್ಳದಿದ್ದರೂ ಅವಳ ಮನಸ್ಸಿನಲ್ಲಿ ನೋವಿದೆ.
ಹರೀಶ ಅವರಿಬ್ಬರನ್ನು ಕಳುಹಿಸಿ ಮಂಚವನ್ನೊರಗಿ ಕೂರುತ್ತ ಕಣ್ಣು ಮುಚ್ಚಿ ಮಲಗಿದ್ದ ಹಿರಿಮಗಳ ತಲೆಯನ್ನು ನೇವರಿಸಿದನು. ನಿಧಿ ಅನ್ಯಮನಸ್ಕಳಾಗಿಯೇ ಕಣ್ತೆರೆದಾಗ ಪಕ್ಕದಲ್ಲಿ ಅಪ್ಪ ಕುಳಿತಿದ್ದನ್ನು ನೋಡಿ ತಾನೂ ಏದ್ದು ಕುಳಿತಳು.
ನಿಧಿ......ಅಪ್ಪ ನೀವಾ ? ಯಾವಾಗ ಬಂದ್ರಿ ?
ಹರೀಶ......ಮಗಳಿಲ್ಲಿ ದುಃಖಿಸುತ್ತಿರುವಾಗ ಅಪ್ಪನಾದವನು ಹೇಗೆ ದೂರದಲ್ಲಿ ಸಂತೋಷವಾಗಿರಲು ಸಾಧ್ಯ ಅದಕ್ಕೆ ರಜೆ ಹಾಕಿ ಬಂದೆ.
ನಿಧಿ......ಥಾಂಕ್ಸ್ ಅಪ್ಪ ಈ ಕೆಲವು ಘಂಟೆಗಳಲ್ಲೇ ನಿಮ್ಮನ್ನು ನಾನು ತುಂಬ ಮಿಸ್ ಮಾಡ್ಕೊಳ್ತಿದ್ದೆ ಅಷ್ಟರಲ್ಲಿ ನೀವೇ ಬಂದ್ಬಿಟ್ರಿ.
ಹರೀಶ.......ಹುಚ್ಚುಡುಗಿ ಅಪ್ಪನಿಗೆ ಮಗಳು ಥಾಂಕ್ಸ್ ಹೇಳ್ತಾರಾ ಕಂದ ಬಾ ಆರಾಮವಾಗಿ ಮಲಗು ನಾನು ನಿನ್ನ ಜೊತೆಯಲ್ಲಿದ್ದೀನಲ್ಲ ಯಾವುದಕ್ಕೂ ಬೇಸರ ಮಾಡಿಕೊಳ್ಬೇಡ.
ಅಪ್ಪನ ಎದೆಯಲ್ಲಿ ತಲೆಯಿಟ್ಟ ನಿಧಿ ತನ್ನ ಮನಸ್ಸಿನ ನೋವನ್ನೆಲ್ಲಾ ಮರೆತು ನಿದ್ದೆಗೆ ಜಾರಿಕೊಂಡರೆ ಹರೀಶ ಮಗಳ ತಲೆ ನೇವರಿಸುತ್ತ ತಾನೂ ಕಣ್ಮುಚ್ಚಿಕೊಂಡನು.
* *
* *
ಮುಂಜಾನೆ ಬೆಗನೆದ್ದ ನೀತು ಹೇಗೇಗೋ ಮಲಗಿದ್ದ ಮಗಳನ್ನೆತ್ತಿ ಸರಿಯಾಗಿ ಮಲಗಿಸಿ ಫ್ರೆಶಾಗುತ್ತ ಹಿರಿಮಗಳ ರೂಮಿಗೆ ಅವಳನ್ನು ವಿಚಾರಿಸಿಕೊಳ್ಳಲು ಹೋದಳು. ನಿಧಿ ಜೊತೆ ಗಂಡ ಇರುವುದನ್ನು ನೋಡಿ ಆಶ್ಚರ್ಯಗೊಂಡು........
ನೀತು.......ರೀ ನೀವ್ಯಾವಾಗ ಬಂದ್ರಿ ?
ಹರೀಶ.....ನಾನು ರಜನಿ ರಾತ್ರಿಯೇ ಬಂದ್ವಿ ನೀನು ಚಿನ್ನಿ ಮಲಗಿರಲಿ ಅಂತ ಡಿಸ್ಟರ್ಬ್ ಮಾಡದೆ ನನ್ನೀ ಮಗಳ ಹತ್ತಿರ ಬಂದ್ಬಿಟ್ಟೆ.
ಅಷ್ಟರಲ್ಲಿ ರಜನಿ—ಅನುಷ ಕೂಡ ಫ್ರೆಶಾಗಿ ಬಂದಿದ್ದು......
ರಜನಿ.....ನನ್ನ ಕಂದ ಎಲ್ಲೆ ?
ನೀತು.....ಅವಳಿನ್ನೂ ಮಲಗಿದ್ದಾಳೆ.
ರಜನಿ.....ಸರಿ ನಾನು ನನ್ನ ಬಂಗಾರಿಯ ಹತ್ತಿರ ಹೋಗ್ತೀನಿ.
ನೀತು.....ತಾಳು ನಾನೇ ಬರ್ತೀನಿ ಹೊರಗೆ ಕಾವಲಿರುವವರಿಗೆ ನೀನ್ಯಾರೆಂದು ಗೊತ್ತಿಲ್ಲ ಅದಕ್ಕೆ ನಿನ್ನ ಒಳಗೆ ಬಿಡಲ್ಲ.
ನೀತು—ರಜನಿ ಮಹಾರಾಣಿಯ ಕೊಣೆಯೊಳಗೆ ಕಾಲಿಟ್ಟಾಗ ಅದೇ ಸಮಯಕ್ಕೆ ನಿಶಾ ಎಚ್ಚಗೊಂಡು ರಜನಿಯನ್ನು ನೋಡಿ.......
ನಿಶಾ.....ಮಮ್ಮ ಸೂ... ಬಂತು.
ರಜನಿ.....ನಡಿ ಕಂದ ನಿನ್ನ ಫ್ರೆಶಾಗಿಸಿ ಸ್ನಾನ ಮಾಡಿಸಿ ಬಿಡ್ತೀನಿ.
ಎಲ್ಲರೂ ರೆಡಿಯಾಗಿ ತಿಂಡಿ ತಿನ್ನುತ್ತಿದ್ದಾಗ ಪಾವನ ಕೂಡ ಆಗಮಿಸಿ ಎಲ್ಲರಿಗೂ ವಿಷ್ ಮಾಡಿದಳು.
ಪಾವನ.......ಅಕ್ಕ ರಾವ್ ಸರ್ ಮತ್ತು ಬೋರ್ಡ್ ಮೆಂಮಬರ್ಸ್ ಬರುವುದಕ್ಕೆ ನಿಮ್ಮ ಅನುಮತಿ ಕೇಳ್ತಿದ್ದರು.
ನೀತು ಫೋನ್ ಮಾಡಿ.....ರಾವ್ ಸರ್ ನಾನೇ ಅಲ್ಲಿಗೆ ಬರ್ತಿದ್ದೀನಿ ಎಲ್ಲರಿಗೂ ಅಲ್ಲಿಯೇ ಇರುವುದಕ್ಕೆ ತಿಳಿಸಿಬಿಡಿ (ಫೋನಿಟ್ಟು) ಪಾವನ ಕಂಪನಿ ಒಳಗಿರುವ ದ್ರೋಹಿಗಳ ಪತ್ತೆಯಾಗಿದೆಯಾ ?
ಪಾವನ......ಹುಂ ಅಕ್ಕ ನಾಲ್ವರು ಮಾನೇಜರ್ ಹುದ್ದೆಯಲ್ಲಿರುವವರ ಜೊತೆ ಇನ್ನೂ ಐವರು ಸಿಬ್ಬಂದಿಗಳು ಸೇರಿ ಕಂಪನಿಯಲ್ಲಿ ಗಫಲಾ ಮಾಡಿ ಹಣ ಲೂಟಿ ಮಾಡುತ್ತಿರುವ ಬಗ್ಗೆ ಸಾಕ್ಷಿ ದೊರೆಯಿತು. ರಾಣಾ ಅಣ್ಣನಿಗೆ ವಿಷಯ ತಿಳಿದು ಅವರೆಲ್ಲರನ್ನಾಗಲೇ ಹಿಡಿದೊಯ್ದರು ನಂತರ ಅವರುಔಮೋಸ ಮಾಡಿದ್ದ ಹಣವನ್ನೂ ವಸೂಲಿ ಮಾಡಿ ಕಂಪನಿಯ ಅಕೌಂಟಿಗೆ ಜಮೆ ಮಾಡಲಾಗಿದೆ.
ನಿಶಾ......ಪಪ್ಪ ನಾನಿ ಆನಿ ಮೇಲೆ ಕೂಚಿ ಮಾತೀನಿ ಆನಿ ನಂದು.
ಹರೀಶ ಮಗಳಿಗೆ ತಿಂಡಿ ತಿನ್ನಿಸುತ್ತ........ನನ್ನ ಕಂದನಿಗೆ ಆನೆ ಮೇಲೆ ಸವಾರಿ ಮಾಡುವಾಸೆಯಾ ಆಯ್ತಮ್ಮ ಈಗ ತಿಂಡಿ ತಿನ್ನು.
ನಿಶಾ.......ಹೂಂ ಪಪ್ಪ ಆನಿ ನಂದು ನಾನಿ ಲೋಂಡ್ ಹೋತಿನಿ.
ಇದನ್ನೆಲ್ಲಾ ದೂರದಿಂದ ನೋಡುತ್ತಿದ್ದ ಆ ಹೆಂಗಸು ಈ ಕುಟುಂಬದ ಜನರುಗಳು ಯಾರು ? ಇವರಿಗೂ ರಾಜಕುಮಾರಾಗಳಿಗೂ ಎಲ್ಲಿಯ ಸಂಬಂಧ ? ವಿಕ್ರಂ ಸಿಂಗ್....ರಾಣಾ ಕೂಡ ಇವಳೆದುರು (ನೀತು ) ಗೌರವದಿಂದ ನಡೆದುಕೊಳ್ತಾರೆ ಎಲ್ಲಿಯದ್ದೋ ಮಹಾರಾಣಿ ಎನ್ನುವ ರೀತಿಯಲ್ಲಿ. ಯಾರಾದರೆ ನನಗೇನಾಗ್ಬೇಕು ಈ ರಾಜಕುಮಾರಿಯರ ಚಟ್ಟ ಮಾತ್ರ ನಾನೇ ಕಟ್ಟೋದು. ಈ ಸಮಸ್ತ ಸಾಮ್ರಾಜ್ಯಕ್ಕೆ ಆಗಲೇ ನಾನು ಒಡತಿಯಾಗುವುದಕ್ಕೆ ಸಾಧ್ಯ.
ಅರಮನೆಯಲ್ಲೇ ತನ್ನಿಬ್ಬರು ಮಕ್ಕಳ ಜೀವಕ್ಕೆ ಅಪಾಯವಿದೆ ಅದು ಕೂಡ ತುಂಬ ಸನಿಹದಲ್ಲೇ ಎಂಬುದರ ಬಗ್ಗೆ ಸುಳಿವೇ ಇರದಿದ್ದ ನೀತು ಹೊರಗೆ ರಾಣಾ....ವಿಕ್ರಂ ಸಿಂಗ್ ಜೊತೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದಳು.
No comments:
Post a Comment