Total Pageviews

Saturday, 15 February 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 281

ಮುಂಜಾನೆ ನಿಶಾ ಎಚ್ಚರಗೊಂಡಾಗ ರೂಮಲ್ಲಿ ರಜನಿ ಮಾತ್ರವಿದ್ದು ಅವಳಿಂದಲೇ ಫ್ರೆಶಾಗಿ ಸ್ನಾನ ಮಾಡಿಸಿಕೊಂಡು ಕಾಂಪ್ಲಾನ್ ಕುಡಿದು ರೆಡಿಯಾಗಿ ಹೊರಗೋಡಿ ಬಂದ ನಿಶಾ ಅಪ್ಪ..ಅಮ್ಮ...ಅಕ್ಕ..ಆಂಟಿ ಮತ್ತು ಚಿಕ್ಕಪ್ಪನಿಂದ ಮುದ್ದು ಮಾಡಿಸಿಕೊಂಡಳು. ನಿಶಾಳಿಗೆ ತಕ್ಷಣ ನೆನಪಾಗಿದ್ದು ತನ್ನ ಮುದ್ದಿನ ಕುಕ್ಕಿ ಮರಿಗಳು ಆದರೆ ತಾನೀಗ ತನ್ನ ಮನೆಯಲ್ಲಿಲ್ಲ ಎಂದರಿವಾಗುತ್ತಿದ್ದಂತೆ ಅರಮನೆಯ ಕಾವಲಿಗಿರುವ ತೋಳದಂತ ನಾಯಿಗಳನ್ನು ಮಾತನಾಡಿಸಲು ಹೊರಗೋಡಿದಳು. 

ನಿಶಾಳ ಹಿಂದೆ ನೆರಳಿನಂತೆ ವೀರ್ ಸಿಂಗ್ ಮತ್ತಿಬ್ಬರು ಕಾವಲಿಗಿದ್ದು ಅವಳನ್ನು ಪ್ರತೀಕ್ಷಣವೂ ಕಾಪಾಡುವುದಕ್ಕೆ ಸನ್ನದ್ದರಾಗಿ ನಿಂತಿದ್ದರು. ರಾತ್ರಿ " ಆ ಹೆಂಗಸು " ಬೆರೆಸಿದ್ದ ಔಷಧಿಯುಕ್ತ ನೀರು ಕುಡಿದ ಬೇಟೆ ನಾಯಿಗಳಲ್ಲಿ ರೋಷಭರಿತ ಆಕ್ರಾಮಕ ಪ್ರವೃತ್ತಿ ಮನೆಮಾಡಿದ್ದು ತಮಗೆ ಊಟ ನೀಡಿ ನೋಡಿಕೊಳ್ಳುತ್ತಿದ್ದವರ ಮೇಲೆಯೇ ಅಟ್ಯಾಕ್ ಮಾಡಲು ಹುಚ್ಚೆದ್ದಂತೆ ಬೊಗಳುತ್ತಿದ್ದವು. ಅದನ್ನು ಗಮನಿಸಿ ವೀರ್ ಸಿಂಗ್ ಅತ್ತ ಕಡೆ ನಿಶಾ ಹೋಗದಂತೆ ಅಡ್ಡಲಾಗಿ ನಿಂತರೆ ಎಚ್ಚರಿಕೆ ಕೊಡುವ ರೀತಿ ನಿಶಾ ತನ್ನ ಬೆರಳನ್ನು ತೋರಿಸುತ್ತಿದ್ದರೂ ಸಹ ವೀರ್ ಸಿಂಗ್ ಪಕ್ಕಕ್ಕೆ ಸರಿಯುತ್ತಿರಲಿಲ್ಲ. ದೂರದಿಂದ ಇದನ್ನೆಲ್ಲ ನೋಡುತ್ತ ನಿಂತಿದ್ದ ಆ ಹೆಂಗಸು ರಕ್ಷಕರಿಂದಾಗಿ ತನ್ನ ಪ್ಲಾನ್ ಹಾಳಾಗುತ್ತಿದೆಯಲ್ಲ ಎಂದವರಿಗೆ ಶಾಪ ಹಾಕುತ್ತಿದ್ದಾಗ ನೀತು ಮಗಳ ಹತ್ತಿರ ಬಂದಳು.

ನಿಶಾ ಅಮ್ಮನಿಗೆ ಕಂಪ್ಲೇಂಟ್ ಹೇಳುತ್ತ......ಮಮ್ಮ ನಾನಿ ಟಾಮಿ ಹತ್ತ ಹೋತಿನಿ ಈ ಅಂಕುಲ್ (ವೀರ್ ಸಿಂಗ್ ಕಡೆ ಕೈ ತೋರಿಸುತ್ತ ) ನನ್ನಿ ಬಿಲಲ್ಲ ಹೋಗು ಅಂತು.

ವೀರ್ ಸಿಂಗ್.....ಮಾತೆ ಏನಾಗಿದೆ ಎಂಬುದು ಗೊತ್ತಿಲ್ಲ ಆದರಿಂದು ನಾಯಿಗಳಿಗೆ ತುಂಬ ರೋಷ ಬಂದಿರುವಂತಿದೆ ಅವಕ್ಕೆ ಪ್ರತಿದಿನವೂ ಊಟ ಹಾಕಿ ನೋಡಿಕೊಳ್ಳುವವರನ್ನೇ ಕಚ್ಚಲು ಮುಂದಾಗುತ್ತಿವೆ.

ನೀತು......ಯಾವುದೇ ಪ್ರಾಣಿಗಳಿಂದಲೂ ನಿಮ್ಮ ಯುವರಾಣಿಗೆ ಅಪಾಯವಿಲ್ಲ ವೀರ್ ಸಿಂಗ್ ಮುಂದೇನಾಗುತ್ತೆ ನೋಡ್ತಿರು...ಎಂದು ಮಗಳ ಜೊತೆ ನಾಯಿಗಳ ಹತ್ತಿರ ಬಂದಳು.

ಸುಮಾರು 25 ನಾಯಿಗಳು ರೋಷಬಂದಂತೆ ಬೊಗಳುತ್ತ ಅವನ್ನು ಕಟ್ಟಿ ಹಾಕಲಾಗಿದ್ದ ಚೈನನ್ನು ಬಿಡಿಸಿಕೊಳ್ಳಲು ಶತಪ್ರಯತ್ನವನ್ನು ಮಾಡುತ್ತಿದ್ದವು.

ನಿಶಾ ಅದನ್ನು ನೋಡಿ ಕೋಪಗೊಂಡು ಜೋರಾಗಿ......ಏಯ್ ಏತ್ ಕೊತೀನಿ ಷಟಪ್......ಎಂದೊಡನೇ ಎಲ್ಲಾ ನಾಯಿಗಳ ದೃಷ್ಟಿ ನಿಶಾಳ ಕಡೆ ಹೊರಳಿತು.

ಅಷ್ಟೇ ನಾಯಿಗಳೆಲ್ಲವೂ ಯಾವುದೋ ಸಮ್ಮೋಹನಕ್ಕೊಳಗಾದಂತೆ ಫುಲ್ ಸೈಲೆಂಟಾಗಿ ಸದ್ದು ಮಾಡದೆ ಸುಮ್ಮನೆ ಕುಳಿತವು. ನಿಶಾ ಒಂದೊಂದೇ ನಾಯಿ ಹತ್ತಿರ ಹೋಗಿ ಅವುಗಳ ತಲೆ ಸವರಾಡುತ್ತ ಮುದ್ದಿಸಿದಾಗ ನಾಯಿಗಳ ತಲೆಯಲ್ಲೇರಿದ್ದ ರೋಷದ ನಶೆ ಪವಾಡದ ರೀತಿ ತಣ್ಣಗಾಗಿ ಹೋಯಿತು. ಆ ಹೆಂಗಸು ಕೂಡ ನೋಡುತ್ತಿದ್ದು ಆಕೆಗೆ ಗರಬಡಿದಂತಾಗಿ ಹೋಗಿದ್ದು ಮುಂದೇನು ಮಾಡಬಹುದೆಂಬ ಬಗ್ಗೆ ಯೋಚಿಸತೊಡಗಿದಳು. ಊಟಕ್ಕೆ ವಿಷ ಹಾಕಲಾಗದು....ಈ ಕಿರಿಯ ರಾಜಕುಮಾರಿಗೆ ಪ್ರಾಣಿಗಳೇನೂ ಮಾಡಲ್ಲ ಹೊರಗಿನಿಂದ ಜನರನ್ನು ಕರೆಸುವುದಂತೂ ಅಸಾಧ್ಯವಾದ ಮಾತು ರಕ್ಷಕರು ಇರುವ ತನಕವೂ ಇವರಿಬ್ಬರತ್ತ ಹೊರಗಿನವರು ಸುಳಿಯುವುದಕ್ಕೂ ಕೂಡ ಸಾಧ್ಯವಿಲ್ಲ. 

ಈಗೇನಿದ್ದರೂ ಕಟ್ಟಕಡೆಯ ಅಸ್ತ್ರವೊಂದು ಇರುವುದು ನನಗೀ ಅರಮನೆ ಸಂಸ್ಥಾನದ ವೈಭೋಗವನ್ನು ಅನುಭವಿಸಲು ಸಾಧ್ಯವಿಲ್ಲ ಎಂದಾದರೆ ಬೇರಾರಿಗೂ ಅದನ್ನು ಅನುಭವಿಸಲಿಕ್ಕೂ ಬಿಡಬಾರದು. ಈಗಾಗಲೇ ನನ್ನ ಬೆಂಬಲಿಸುವವರೆಲ್ಲ ಇದ್ದಕ್ಕಿದ್ದಂತೆ ಕಣ್ಮರೆಯಾಗಿ ಹೋಗಿದ್ದಾರೆ ಇದರಲ್ಲೂ ರಕ್ಷಕರದ್ದೇ ಕೈವಾಡಿವಿರುತ್ತೆ. ಈಗ ಬೇರಾವುದೇ ದಾರಿಯೂ ಉಳಿದಿಲ್ಲ ಮುಖಾ ಮುಖಿಯಾಗಿ ನೇರ ದಾಳಿ ಮಾಡುವುದೊಂದೇ ನನಗಿರುವ ಕಟ್ಟಕಡೆಯ ಅಸ್ತ್ರ ಎಂದು ಅದಕ್ಕಾಗಿ ಸಿದ್ದತೆ ಮಾಡಿಕೊಳ್ಳಲು ತೆರಳಿದಳು.
* *
* *
ಮಂಗಳವಾರ ಬೆಳಿಗ್ಗೆ 10 ಘಂಟೆ....
ಜೈಸಲ್ಮೇರಿನ ಅರಮನೆ.....

ಉದಯಪುರದಲ್ಲಿ ತಿಂಡಿ ಮುಗಿಸಿಕೊಂಡು ಎಲ್ಲರೂ ಜೈಸಲ್ಲೇರಿನ ಅರಮನೆಗೆ ಆಗಮಿಸಿದರೆ ವರ್ಧನ್ ಕೂಡ ಜೊತೆಯಲ್ಲಿದ್ದನು. ದಿಲೇರ್ ಸಿಂಗ್... ಅಜಯ್ ಸಿಂಗ್ ಮತ್ತು ಬಷೀರ್ ಖಾನ್ ಮುಂದೆ ಬಂದು ಗೌರವ ಸೂಚಿಸಿ ನಿಂತರೆ.....

ವರ್ಧನ್......ಸಿಎಂ..ಮಂತ್ರಿಗಳು ಮತ್ತು ಶಾಸಕರನ್ನು ಬೇರೆಯದ್ದೇ ಕೋಣೆಗೆ ಕರೆದುಕೊಂಡು ಬನ್ನಿ.

ದಿಲೇರ್ ಸಿಂಗ್.......ರಾಜಕೀಯದವರನ್ನೆಲ್ಲಾ ಇತರರ ಜೊತೆಯಲ್ಲಿ ಇಟ್ಟಿಲ್ಲ ಅವರನ್ನೇ ಬೇರೆ ಕೋಣೆಯಲ್ಲಿರಿಸಿದ್ದೇವೆ.

ವರ್ಧನ್......ಅಕ್ಕ ನೀವು ಚಂಚಲಾದೇವಿಯ ಫ್ಯಾಮಿಲಿಯನ್ನು ಬೇಟಿಯಾಗಿ ಬನ್ನಿ ನಾನೀ ನನ್ನದೇ ಹೆಸರಿನಿಂದ ಗೆದ್ದು ಅಧಿಕಾರದ ಗದ್ದುಗೆಯಲ್ಲಿ ನಾನೇ ಕೂರಿಸಿದ್ದ ನಿಯತ್ತಿಲ್ಲದಂತ ನಾಯಿಗಳನ್ನು ನೋಡಿಕೊಳ್ತೀನಿ ನಡಿ ದಿಲೇರ್ ಅವರೆಲ್ಲಿದ್ದಾರೆ ತೋರಿಸು.

ಸಿಎಂ...ಗೃಹ ಸಚಿವ...ಮಂತ್ರಿಗಳು...ಶಾಸಕರು...ಕೆಲವು ಹಿರಿಯ ಅಧಿಕಾರಿಗಳು....ಹತ್ತಾರು ಬಿಝಿನೆಸ್ ಮ್ಯಾನ್ ಎಲ್ಲರನ್ನೂ ಒಂದೇ ಹಾಲಿನಲ್ಲಿ ಕೈ ಕಾಲುಗಳನ್ನು ಕಟ್ಟಿ ನೆಲದ ಮೇಲೆ ಕೂರಿಸಲಾಗಿತ್ತು. ವರ್ಧನ್ ಒಳಗೆ ಬಂದಾಗ.......

ಸಿಎಂ......ಸರ್ ನೀವಿಲ್ಲಿ ಇವರು ನಿಮ್ಮನ್ನೂ ಕಿಡ್ನಾಪ್ ಮಾಡಿದ್ರಾ ?

ವರ್ಧನ್ ಮುಗುಳ್ನಗುತ್ತ ರಕ್ಷಕನೊಬ್ಬ ತಂದಿಟ್ಟ ಚೇರಿನಲ್ಲಿ ಕೂರುತ್ತ ಕಾಲ್ಮೇಲೆ ಕಾಲನ್ನಾಕಿಕೊಂಡು.........ಏನ್ರೀ ಸಿಎಂ ಏನೋ ನಿಮಗೆ ವಯಸ್ಸಾಗಿದೆ ಮುಂದಿನ ಚುನಾವಣೆಯಲ್ಲಿ ನಿಮ್ಮ ಬದಲು ನಿಮ್ಮ ಮಗನಿಗೆ ಸ್ಥಾನ ಕಲ್ಪಿಸೋಣ ಈ ಬಾರಿ ನೀವು ಮುಖ್ಯಮಂತ್ರಿಯಾಗಿ ಕಾರ್ಯಭಾರ ಮುಗಿಸಿ ನಿವೃತ್ತಿ ಹೊಂದಲಿ ಅಂತ ನಾನು ನಿಮ್ಮನ್ನು ಕೂರಿಸಿದರೆ ನಿನ್ನ ಕಂತ್ರಿ ಸೂವರ್ ಬುದ್ದಿ ತೋರಿಸಿ ಬಿಟ್ಯಲ್ಲ. ನನ್ನ ಅಣ್ಣನ ಮಗಳನ್ನೇ ಕಿಡ್ನಾಪ್ ಮಾಡಿಸಿ ಆಸ್ತಿ ಹೊಡೆಯುವುದಕ್ಕೆ ಪ್ಲಾನ್ ಮಾಡ್ತೀಯೇನೋ ಬದ್ಮಾಷ್. ನನ್ನ ಬೆನ್ನಿಗೆ ಚೂರಿ ಹಾಕುವ ಮಟ್ಟಕ್ಕೆ ಬೆಳೆದುಬಿಟ್ಯಾ ನೀನು ಇದಕ್ಕೆ ಈ ನಮಕ್ ಹರಾಂಗಳೆಲ್ಲರೂ ನಿನಗೆ ಸಾಥ್ ಕೊಡುತ್ತಾರಾ.

ಸಿಎಂ ಗೋಳಾಡುತ್ತ......ಸರ್ ನಾನು ನಿಮ್ಮ ನಿಯತ್ತಿನ ನಾಯಿಯೇ ಸರ್ ನಿಮ್ಮ ವಿರುದ್ದ ಹೋಗಲು ಕನಸಿನಲ್ಲೂ ಯೋಚಿಸುವುದಿಲ್ಲ. ನಿಮ್ಮನ್ನೆದುರಿಸಿ ನಿಂತು ಈ ದೇಶದಲ್ಲಿ ಯಾರು ತಾನೇ ರಾಜಕೀಯ ಮಾಡುವುದಕ್ಕೆ ಸಾಧ್ಯವಿದೆ ನನಗಷ್ಟು ಧೈರ್ಯವಿದೆಯಾ ಸರ್.

ಗೃಹ ಸಚಿವ.........ಸರ್ ನಿಮ್ಮ ಅಣ್ಣ ಯಾರೆಂಬುದೇ ಗೊತ್ತಿಲ್ಲ ಇನ್ನು ನಿಮ್ಮ ಅಣ್ಣನ ಮಗಳನ್ನೇಗೆ ನಾವು ಕಿಡ್ನಾಪ್ ಮಾಡಿಸುವ ಪ್ಲಾನ್ ಮಾಡಲು ಸಾಧ್ಯ. ನಿಮ್ಮನ್ನೆದುರಿಸಿ ನಿಲ್ಲುವ ಶಕ್ತಿಯಾಗಲಿ ಅಥವ ಧೈರ್ಯವಾಗಲಿ ನಮ್ಮಲ್ಯಾರಿಗೂ ಇಲ್ಲ ಸರ್ ಪ್ಲೀಸ್ ನನ್ನ ನಂಬಿ.

ವರ್ಧನ್.......ನಿಮಗೆಲ್ಲಾ ಹೇಳುತ್ತಾ ಕೂರುವುದಕ್ಕೆ ನಾನಿಲ್ಲಿಗೆ ಬಂದಿಲ್ಲ ನಮ್ಮ ಅಣ್ಣ ಯಾರೆಂದರೆ........

ನೀತು ಅಲ್ಲಿಗೇ ಬಂದು......ವರ್ಧನ್ ಇವರಿಗೇನೂ ಹೇಳುವ ಅಗತ್ಯ ಇಲ್ಲ ಇವರೆಲ್ಲರ ಕೈವಾಡ ಅಣ್ಣನ ಸಾವಿನ ಹಿಂದೆಯೂ ಇದೆ.

ವರ್ಧನ್.........ದಿಲೇರ್ ಸಿಂಗ್ ಈ ಸೂವರುಗಳೆಲ್ಲರು ಪ್ರತಿಕ್ಷಣವೂ ಚಿತ್ರಹಿಂಸೆ ಅನುಭವಿಸಬೇಕು ಆದರೆ ಪ್ರಾಣ ಹೋಗಬಾರದು ಮುಂದೇನು ಮಾಡಬೇಕೆಂದು ಅಕ್ಕನೇ ಹೇಳ್ತಾರೆ.

ದಿಲೇರ್ ಸಿಂಗ್.....ಹಾಗೇ ಆಗಲಿ ಹುಕುಂ.

ವರ್ಧನ್......ನೀವೆಲ್ಲರೂ ಸೇರಿ ಏನು ಮಾಡಿದ್ರಿ ಅಂತ ಪ್ರತಿನಿತ್ಯ ಯೋಚಿಸ್ತಾ ನರಕದ ಯಾತನೆ ಅನುಭವಿಸುತ್ತಿರಿ.

ಸಿಎಂ ಮತ್ತಿತರರು ಅಂಗಾಲಾಚಿ ಬೇಡಿಕೊಳ್ಳುತ್ತಿದ್ದರೂ ವರ್ಧನ್ ಸ್ಮೈಲ್ ಮಾಡುತ್ತ ಅಲ್ಲಿಂದಾಚೆ ಬಂದರೆ ರಕ್ಷಕರ ಹೊಡೆತಗಳನ್ನು ಅನುಭವಿಸುತ್ತ ಅವರೆಲ್ಲರೂ ಅರಚಿಕೊಳ್ಳತೊಡಗಿದರು.

ಜೈಸಲ್ಮೇರಿನ ಭವ್ಯವಾದ ಅರಮನೆಯ ಹಿಂಭಾಗದಲ್ಲಿ ಒಂಟೆಗಳಿಗೆ ನಿರ್ಮಿಸಲಾಗಿರುವ ತಂಗುದಾಣದ ಭೂಮಿಯ ನಾಲ್ಕು ಅಂತಸ್ತಿನ ಕೆಳಗೆ ಸುವ್ಯಸ್ತಿತವಾದ ಕಾರಾಗೃಹವನ್ನು ಶತಮಾನಗಳ ಹಿಂದೆಯೇ ಸೂರ್ಯವಂಶಿ ಸಂಸ್ಥಾನದ ರಾಜರೊಬ್ಬರು ನಿರ್ಮಿಸಿದ್ದರು. ಅದೇ ಕಾರಾಗೃಹದಲ್ಲೀಗ ಮಹರಾಜ— ಮಹರಾಣಿಯ ಮತ್ತು ಹಿರಿಯ ಮಹಾರಾಜ—ರಾಣಿಯರ ಸಾವಿಗೆ ಕಾರಣರಾದವರು ಸಂಸ್ಥಾನದ ಕಿರಿಯ ರಾಜಕುಮಾರಿ ನಿಶಾಳ ಸಾವನ್ನು ಬಯಸುತ್ತಿರುವ ಎಲ್ಲಾ ವಿರೋಧಿಗಳೂ ಬಂಧಿಯಾಗಿದ್ದರು. ಹಿಮಾಚಲ ಪ್ರದೇಶದಲ್ಲಿನ ಒಂದು ಸಣ್ಣ ರಾಜಮನೆತನಕ್ಕೆ ಸೇರಿದ ಚಂಚಲಾದೇವಿ ಮತ್ತವಳ ಗಂಡ ಕೃಪಾಲ್ ಸಿಂಗ್ ಹಾಗು ಅವರ ಕುಟುಂಬದ ಸದಸ್ಯರನ್ನೆಲ್ಲಾ ಒಂದು ವಿಶಾಲವಾದ ಕೋಣೆಯಲ್ಲಿ ಕೂರಿಸಲಾಗಿತ್ತು.

ಚಂಚಲಾದೇವಿ ಕಿರಿಮಗ.......ಅಮ್ಮ ನಮ್ಮನ್ನೆಲ್ಲಾ ಅಪಹರಿಸಿದ ಬಳಿಕ ಇವತ್ತೇ ನಿಮ್ಮನ್ನು ನೋಡುವಂತಾಗಿದ್ದು ಹೇಗಿದ್ದೀರ ? ಇಲ್ಲಿ ನಮ್ಮನ್ನು ಅಪಹರಿಸಿ ತಂದಿರುವವರು ಯಾರು ? ನಮ್ಮ ಮೇಲೆಯೇ ಕೈ ಹಾಕುವಷ್ಟು ಧೈರ್ಯ ಯಾರಿಗೆ ಬಂತು ?

ಚಂಚಲಾದೇವಿ ಹಿರಿಮಗ.......ಒಂದು ಸಲ ಇಲ್ಲಿಂದ ಬಿಡುಗಡೆ ಆಗಿ ಹೊರಬಂದಾಗ ಇವರೆಲ್ಲರಿಗೂ ಯಮನ ದರ್ಶನ ಮಾಡಿಸುವೆ.

ಚಂಚಲಾದೇವಿ......ನಮ್ಮನ್ನಿಲ್ಲಿಗೆ ಕರೆತಂದಿರುವವರೇ ಒಂದು ರೀತಿ ಯಮಕಿಂಕರರು ಕಣಪ್ಪ ಬಹುಶಃ ನಮಗಿಲ್ಲಿಂದ ಬಿಡುಗಡೆಯೇ ಆಗುವುದಿಲ್ಲ ಅಂತ ಅನಿಸುತ್ತಿದೆ.

ರಾಣಾ ಕೋಣೆಯೊಳಗೆ ಬರುತ್ತ.....ಎಷ್ಟು ಚೆನ್ನಾಗಿ ನಿಮಗೆ ಸತ್ಯದ ಅರಿವಾಗಿದೆ ಚಂಚಲಾದೇವಿಯವರೇ ಹೇಗಿದ್ದೀರಾ ? ನಿಮ್ಮನ್ನೋಡಿ ಬಹಳ ವರ್ಷಗಳೇ ಆಗೋಗಿದೆ ನಾನು ನೆನಪಿರಬೇಕಲ್ಲವಾ ?

ಚಂಚಲಾದೇವಿ ಒಂದುಕ್ಷಣ ನಡುಗಿ ಹೋಗಿ......ಷಂಷೇರ್ ಸಿಂಗ್ ರಾಣಾ ನೀನಿಲ್ಲಿ...ನೀನು ಅರಮನೆಯಿಂದ ಬೇರೆಲ್ಲಿಗೋ ಹೋಗಿದ್ದೆ ಈಗಿಲ್ಲಿಗೆ ಹೇಗೆ ಬರಲು ಸಾಧ್ಯ ?

ರಾಣಾ.......ನಾನು ನೆನಪಿದ್ದೇನೆಂದಾಯ್ತು ಯುವರಾಣಿಯವರ ಆದೇಶದ ಮೇರೆಗೆ ನಾನು ಅಜ್ಞಾತವಾಸದಿಂದ ಅರಮನೆಗೆ ಪುನಃ ಹಿಂದಿರುಗಿ ನನ್ನ ರಕ್ಷಣೆಯ ಕಾರ್ಯಾಭಾರ ನಿರ್ವಹಿಸುವಂತಾಗಿದೆ.

ಚಂಚಲಾದೇವಿ........ನೋಡು ರಾಣಾ ನಾನು ಹಿರಿಯ ಮಹರಾಜ ಆಗಿದ್ದಂತ ಸೂರ್ಯಪ್ರತಾಪರ ತಂಗಿ ನನ್ನ ಮತ್ತು ನನ್ನ ಕುಟುಂಬದ ಸದಸ್ಯರನ್ನು ಹೀಗೆ ಬಂಧಿಸಿಟ್ಟಿರುವುದು ನ್ಯಾಯೋಚಿತವಲ್ಲ.

ರಾಣಾ.....ಅದೇ ಮಹಾರಾಜರ ಮಗ ಮತ್ತು ಸೊಸೆಯನ್ನು ಸಾವಿನ ದವಡೆಗೆ ತಳ್ಳುವ ಷಡ್ಯಂತ್ರ ರೂಪಿಸಿದ್ದು ನ್ಯಾಯವಾ ?

ಕೃಪಾಲ್ ಸಿಂಗ್......ನಿನಗೆ ನಮ್ಮ ಮೇಲೆ ದ್ವೇಶವಿದ್ದರೆ ಅಥವ ಅಂತ ಷಡ್ಯಂತ್ರದಲ್ಲಿ ನಮ್ಮ ಪಾತ್ರವಿದೆ ಎನ್ನುವ ಅನುಮಾನವಿದ್ದರೆ ನಾವು ಕುಳಿತು ಮಾತನಾಡೋಣ ಅಗೆಲ್ಲಾ ಅನುಮಾನಗಳು ಪರಿಹಾರ ಆಗುತ್ತವೆ. ಈ ರೀತಿ ನಮ್ಮನ್ನು ಅಪಹರಿಸಿ ಬಂಧನದಲ್ಲಿಡುವುದಕ್ಕೆ ಈಗಲೂ ರಾಜಪರಂಪರೆ ನಮ್ಮ ದೇಶದಲ್ಲಿದೆ ಅಂದುಕೊಂಡಿದ್ದೀಯˌ ನಮ್ಮ ಬೆನ್ನೆಲುಬಾಗಿ ಉನ್ನತ ಹುದ್ದೆಗಳಲ್ಲಿರುವ ಹಲವು ರಾಜಕೀಯ ನಾಯಕರಿದ್ದಾರೆ ಅವರು ಸುಮ್ಮನಿರುತ್ತಾರೆಂದು ಭಾವಿಸಬೇಡ. ಒಮ್ಮೆ ನಮ್ಮ ಸುಳಿವು ಅವರಿಗೆ ದೊರೆತರೆ ಅವರುಗಳು ಸರ್ಕಾರಿ ಆದೇಶದಿಂದ ನಿಮ್ಮೆಲ್ಲರನ್ನೂ ಬಂಧಿಸಿ ಈ ಅರಮನೆಯನ್ನೂ ಸಹ ಕೆಡವಿ ಹಾಕುತ್ತಾರೆ.

ವರ್ಧನ್ ಒಳಬರುತ್ತ.....ಅಂತ ಕೆಲಸ ಮಾಡುವ ಗಂಡಸರು ಇನ್ನೂ ಈ ಭೂಮಿ ಮೇಲೆ ಹುಟ್ಟಿಲ್ಲ ಹುಟ್ಟುವುದೂ ಇಲ್ಲ ಸೂರ್ಯವಂಶಿ ಸಂಸ್ಥಾನದ ವಿರುದ್ದ ಯಾರೇ ಆಗಲಿ ನಿಲ್ಲಲು ಬಿಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ. ನಿಮ್ಮ ಆತ್ಮೀಯ ರಾಜಕೀಯ ನಾಯಕರು ಸಹ ಈಗ ಇದೇ ಕಾರಾಗೃಹದ ಬಂಧಿಗಳು.

ಭಾರತದ ಉಪಪ್ರಧಾನಿ...ಅತ್ಯಂತ ಜನಪ್ರಿಯ ಮತ್ತು ದೇಶದಲ್ಲಿನ ಮೋಸ್ಟ್ ಪವರಫುಲ್ ನಾಯಕನಾಗಿರುವ ವರ್ಧನನನ್ನು ಇಲ್ನೋಡಿ ಚಂಚಲಾದೇವಿಯ ಕುಟುಂಬದವರಿಗೆ ಸಿಡಿಲು ಬಡಿದಂತಾಗಿತ್ತು.

ಕೃಪಾಲ್ ಸಿಂಗ್ ತಡವರಿಸುತ್ತಲೇ.......ಸರ್ ನೀವು....ನೀವಿಲ್ಲಿ.....

ವರ್ಧನ್......ನನ್ನ ಅಣ್ಣ ಅತ್ತಿಗೆಯರ ಸಾವಿಗೆ ಕಾರಣರಾದವರು ಎಂತಹ ರಾಕ್ಷಸರೆಂದು ನೋಡಲು ಬಂದಿರುವೆ.

ಚಂಚಲಾದೇವಿ......ನಿಮ್ಮ ಅಣ್ಞ ಅತ್ತಿಗೆಯಾ ? ಅವರು ಯಾರೆಂದೇ ನಮಗೆ ಗೊತ್ತಿಲ್ಲದಿರುವಾಗ ಅವರ ಸಾವಿಗೆ ನಾವೇಗೆ ಕಾರಣ ?

ವರ್ಧನ್......ನನ್ನ ಅಣ್ಣ ಅತ್ತಿಗೆ ಯಾರೆಂದು ಗೊತ್ತಿಲ್ಲವಾ ಅತ್ತೆ ?

ಚಂಚಲಾದೇವಿ ಅಚ್ಚರಿಗೊಂಡು....ನನ್ನನ್ನು ಅತ್ತೆ ಅಂತಿದ್ದೀರಲ್ಲ ಸರ್

ವರ್ಧನ್.....ಅತ್ತೆಯೇ ಆಗಬೇಕಲ್ಲವಾ ನೀವು ನನ್ನ ತಂದೆಯವರ ಒಡಹುಟ್ಟಿದ ತಂಗಿಯಲ್ಲವಾ. ನಾನು ಸೂರ್ಯಪ್ರತಾಪರ ರಕ್ತವನ್ನು ಹಂಚಿಕೊಂಡು ಹುಟ್ಟಿದ ಅವರ ಕಿರಿಯ ಮಗ ನನ್ನ ಅಣ್ಣ ಅತ್ತಿಗೆಯ ಸಾವಿನ ಪ್ರತಿಷೋಧಕ್ಕಾಗಿ ಬಂದಿರುವೆ (ಅಲ್ಲಿದ್ದವರು ಶಾಕಾಗಿದ್ದರೆ) ಇಷ್ಟಕ್ಕೇ ಶಾಕಾಗ್ಬೇಡಿ ನಿಮ್ಮೆಲ್ಲರ ಷಡ್ಯಂತ್ರಕ್ಕೆ ಬಲಿಯಾಗದೆ ಇನ್ನೂ ಉಳಿದುಕೊಂಡಿರುವ ರಾಜಕುಮಾರಿ ಖುದ್ದಾಗಿ ಬಂದಿದ್ದಾರೆ.

ನೀತು ಮಗಳನ್ನೆತ್ತಿಕೊಂಡು ಒಳಗೆ ಬಂದರೆ ಅವಳ ಜೊತೆಯಲ್ಲಿ ನಿಧಿ ಹರೀಶ...ರಜನಿ...ಅನುಷ ಕೂಡ ಬಂದರು. ಅಮ್ಮನ ತೋಳಿನಲ್ಲಿದ್ದ ನಿಶಾ ಬಂಧಿಯಾಗಿರುವವರನ್ನು ನೋಡುತ್ತಿದ್ದರೆ ಸುಧಾಮಣಿಯ ಪ್ರತಿರೂಪದಂತಿರುವ ನಿಶಾಳನ್ನು ನೋಡಿ ಚಂಚಲಾದೇವಿಗೆ ತನ್ನ ಹೃದಯ ಸ್ಥಂಭನವಾದಂತೆ ಅನುಭವವಾಯಿತುˌ ನೀತು ಅವರಲ್ಲಿ ಯಾರು ಯಾರೆಂದು ರಾಣಾನಿಂದ ಕೇಳುತ್ತ ಮಗಳನ್ನೆತ್ತಿಕೊಂಡು ಚಂಚಲಾದೇವಿ ಮುಂದೆ ನಿಲ್ಲುತ್ತ.....

ನೀತು......ನೋಡಿದ್ಯಾ ಸಾಯುವ ವಯಸ್ಸಿನಲ್ಲಿ ನೀನು ಮಾಡಿರುವ ಪಾಪದ ಕೆಲಸದ ಪರಿಣಾಮ ಎಷ್ಟು ಭೀಕರವಾಗಿದೆ ಅಂತ. ಅಂದಾಗೆ ಮುಖ ನೋಡಿದಾಗಲೇ ಈ ನನ್ನ ಕಂದ ಯಾರೆಂದು ಗೊತ್ತಾಗಿರುತ್ತೆ ಅಲ್ಲವಾ ? ನಿನ್ನ ಅನುಮಾನ ನಿಜ ಯಾವ ಮಗುವನ್ನು ನೀನು ನಿನ್ನ ಅನೈತಿಕ ಮಗಳು ಸೇರಿ ತಾಯಿಯ ಗರ್ಭದಲ್ಲಿಯೇ ಸಾಯಿಸುವ ಯೋಜನೆ ರೂಪಿಸಿದ್ದಿರೋ ಅದೇ ಮಹಾರಾಣಿ ಸುಧಾಮಣಿಯವರ ಮಗಳು ಸೂರ್ಯವಂಶಿ ಸಂಸ್ಥಾನದ ಕಿರಿಯ ರಾಜಕುಮಾರಿ ಇವಳೆ.

16—17 ವರ್ಷಗಳ ಹಿಂದೆ ಅವರ ಹಿರಿಯ ಮಗಳನ್ನು ಸಾಯಿಸಲು ಹಲವಾರು ಪ್ರಯತ್ನ ಮಾಡಿದರೂ ಅದು ಸಫಲವಾಗಿರಲಿಲ್ಲ. ಈಗ ಅವಳೊಬ್ಬಳೇ ನಿಮ್ಮೆಲ್ಲರನ್ನು ಮರಣದ ಶಯ್ಯೆಯಲ್ಲಿ ಮಲಗಿಸಲು ಸಕ್ಷಮಳಾಗಿ ಬೆಳೆದಿದ್ದಾಳೆ ನೋಡ್ತೀಯಾ ಬಾರಮ್ಮ ನಿಧಿ ನಿನ್ನಜ್ಜಿಗೆ ನಿನ್ನ ಪರಿಚಯ ಮಾಡಿಸಬೇಕಿದೆ.

ಇಬ್ಬರು ರಾಜಕುಮಾರಿಯರೂ ಸುರಕ್ಷಿತ ಮತ್ತು ಆರೋಗ್ಯವಂತರಾಗಿ ಇರುವುದನ್ನು ನೋಡಿ ಚಂಚಲಾದೇವಿ ಭಯಭೀತಳಾಗಿದ್ದರೆ ಅವಳ ಗಂಡ ಕೃಪಾಲ್ ಸಿಂಗ್ ಬೇರೇನನ್ನೋ ಯೋಚಿಸುತ್ತಿದ್ದನು.

ಕೃಪಾಲ್ ಸಿಂಗ್.......ಚಂಚಲಾದೇವಿ ಮತ್ತವಳ ಮಗಳು ಇಬ್ಬರೂ ಸೇರಿ ಷಡ್ಯಂತ್ರ ಮಾಡಿದ್ದಾರೆಂದು ಹೇಳುತ್ತಿರುವ ನಿನಗೆ ಬ್ರಾಂತು ಅನಿಸುತ್ತೆ ನಮಗೆ ಕೇವಲ ಮೂವರು ಗಂಡು ಮಕ್ಕಳೇ ಇರೋದು ಹೆಣ್ಣು ಮಗಳಿಲ್ಲ.

ನೀತು ನಗುತ್ತ........ಓ ಈ ಸತ್ಯ ನಿನ್ನ ಗಂಡನಿಗೂ ಗೊತ್ತಿಲ್ವಾ ಎಲ್ಲಾ ನಿನ್ನ ಪ್ರಿಯಕರ ಕಾಣಿಸ್ತಿಲ್ವಲ್ಲ. ಭಾನುಪ್ರತಾಪ್ ಎಲ್ಲಿ ಬಷೀರ್ ?

ನೀತು ಪ್ರಶ್ನಿಸಿದ ತಕ್ಷಣವೇ ಪಕ್ಕದ ಕೊಠಡಿಯಲ್ಲಿ ಬಂಧಿಯಾಗಿದ್ದ ಭಾನುಪ್ರತಾಪನನ್ನು ಇಬ್ಬರು ರಕ್ಷಕರು ಎಳೆತಂದರು.

ನೀತು.....ಈ ಮಹಾಶಯನೇ ನಿನ್ನ ಮಡದಿಯ ಪ್ರಿಯಕರ ಇವರ ಅನೈತಿಕ ಸಂಬಂಧದ ಪ್ರತಿಫಲವಾಗಿ ಜನಿಸಿದವಳೇ ಚಂಚಲಾದೇವಿ ಹಿರಿಯ ಮಗಳು ಯಶೋಮತಿ. ನನ್ನದೊಂದೇ ಒಂದು ಪ್ರಶ್ನೆ ನಿನ್ನ ಮಗಳೆಲ್ಲಿ ? ಯಶೋಮತಿ ಎಲ್ಲಿದ್ದಾಳೆಂದು ಹೇಳಿದರೆ ನಿನ್ನ ಮೂರು ಜನ ಮಕ್ಕಳನ್ನು ಜೀವಂತವಾಗಿ ಉಳಿಸ್ತೀನಿ ಒಂದು ನಿಮಿಷ ನಿನಗೆ ಯೋಚಿಸಲು ಕಾಲಾವಕಾಶ ನೀಡುವೆ ಹೇಳ್ಬಿಡು.

ಚಂಚಲಾದೇವಿ......ನಿನಗಿಷ್ಟೆಲ್ಲಾ ಸತ್ಯ ಗೊತ್ತಿರುವಾಗ ನನ್ನ ಮಗಳು ಎಲ್ಲಿದ್ದಾಳೆಂದು ಗೊತ್ತಿಲ್ವಾ ? ಹಿಮಾಚಲದ ಮನಾಲಿಯಲ್ಲಿ.......

ನೀತು......ಅಲ್ಲವಳ ಗಂಡ ಮತ್ತಿಬ್ಬರು ಮಕ್ಕಳಷ್ಟೇ ಸಿಕ್ಕಿ ಬಿದ್ದಿದ್ದಾರೆ ಅವರ ಪ್ರಕಾರ ಯಶೋಮತಿ ನಿನ್ನನ್ನು ಬೇಟಿಯಾಗಲು ಬಂದ್ದಿದ್ಳು ಅದುವೇ ಒಂದುವರೆ ವರ್ಷದ ಹಿಂದೆ ಅಂದಿನಿಂದ ಅವಳು ಮನೆಗೆ ಹಿಂದಿರುಗಿಲ್ಲ. ನಿನ್ನ ಮಗಳೆಲ್ಲಿದ್ದಾಳೆ ಅಂತ ಹೇಳ್ತೀಯಾ ?

ಚಂಚಲಾದೇವಿ ಕೋಪದಿಂದ.....ನನಗೆ ಗೊತ್ತಿಲ್ಲ....ಎಂದು ತುಂಬ ಜೋರಾಗಿ ಕಿರುಚಿಕೊಂಡಳು.

ನೀತು......ಅದಕ್ಯಾಕಿಷ್ಟು ಜೋರಾಗಿ ಕಿರುಚಿಕೊಳ್ಳುವೆ ಅನು ಇಲ್ಲಿ ಬಾರಮ್ಮ ಚಿನ್ನಿ ಇಲ್ಲಿರುವುದು ಸರಿಯಲ್ಲ ನೀವಿಬ್ಬರೂ ಮೇಲೋಗಿ. ಕಂದ ನೀನು ಆಂಟಿ ಜೊತೆ ಮೇಲಿರು ನಾನು ಆಮೇಲೆ ಬರ್ತೀನಿ.

ಅನುಷಾಳ ಕುತ್ತಿಗೆಗೆ ನೇತಾಕಿಕೊಂಡ ನಿಶಾ......ಆಂಟಿ ಲಿಲ್ಲಿ ಕುದ್ದಿ ಇದೆ ನಲಿ ನಾನಿ ಕುದ್ದಿ ಮೇಲೆ ಕೂಚಿ ಮಾತೀನಿ.

ಅನುಷ ಹೊರಬರುತ್ತ.......ನಡಿ ನಿನಗಿನ್ನೊಂದು ಪ್ರಾಣಿಯನ್ನು ತೋರಿಸ್ತೀನಿ......ಎಂದು ವೀರ್ ಸಿಂಗ್ ಬಳಿ ಒಂಟೆಗಳ ಬಗ್ಗೆ ಕೇಳಿ ಅವುಗಳತ್ತಲೇ ಹೆಜ್ಜೆ ಹಾಕಿದರು.

ಬಷೀರ್ ಖಾನ್ ಕಿವಿಯಲ್ಲೇ ಸೂಚನೆ ಕೊಟ್ಟು ಹಿಂದೆ ಸರಿದು ನೀತು ಸಿಗ್ನಲ್ ನೀಡಿದ ಮರುಗಳಿಗೆಯೇ ಚಂಚಲಾದೇವಿ ಹಿರಿಮಗನನ್ನು ಎಳೆತಂದು ಅವರೆಲ್ಲರ ಮಧ್ಯ ಕೆಡವಿದನು. ಆತನ ಜುಟ್ಟನ್ನು ತನ್ನ ಕೈಯಲ್ಲಿಡಿದ ಬಷೀರ್ ಖಾನ್ ಡ್ಯಾಗರ್ ಹೊರತೆಗೆದು ಅವನ ಕತ್ತಿನ ಮುಂದಿಟ್ಟು ಕುಯ್ಯಲಾರಂಭಿಸಿದನು. ಡ್ಯಾಗರ್ ಹರಿತವಾಗಿದ್ದು ಚಂಚಲಾದೇವಿಯ ಮಗನ ಕತ್ತಿನ ಚರ್ಮ ಸೀಳಿ ಒಳಗಿಳಿದಾಗಲೇ ಆತನ ಬಾಯಿಂದ ಹೃದಯ ವಿದ್ರಾವಕ ಚೀರಾಟ ಹೊರಬರುತ್ತಿದ್ದು ಕಣ್ಮುಚ್ಚಿ ಬಿಡುವಷ್ಟರಲ್ಲಿ ಕತ್ತಿನ ನರಗಳು ಕತ್ತರಿಸಿ ಹೋಗಿದ್ದು ಆತನ ಚೀರಾಟವೂ ನಿಂತಿತು. 

ಚಂಚಲಾದೇವಿ ಆಕೆ ಗಂಡ ಮತ್ತವಳ ಇಡೀ ಕುಟುಂಬದವರು ನೋಡುತ್ತಿದ್ದಂತೆಯೇ ಕುಟುಂಬದ ಹಿರಿ ಮಗನ ತಲೆಯನ್ನು ಅವನ ದೇಹದಿಂದ ಬೇರ್ಪಡಿಸಿದ ಬಷೀರ್ ಖಾನ್ ಅದನ್ನೆತ್ತಿ ಚಂಚಲಾದೇವಿಯ ಮುಂದಿಟ್ಟನು. ಆಕೆಯ ಮಗನ ದೇಹ ಕೆಲವು ಕ್ಷಣ ಒದ್ದಾಡಿ ನಿಸ್ತೇಜವಾಗಿ ಬಿದ್ದಿರುವುದನ್ನು ನೋಡಿ ಇಡೀ ಕುಟುಂಬ ಕಣ್ಣೀರಿಡುತ್ತ ಅಳುತ್ತಿದ್ದರೆ ಮಗನ ಮೃತ ದೇಹವನ್ನು ಸಹ ಮುಟ್ಟಲಾಗದ ಪರಿಸ್ಥಿತಿಯಲ್ಲಿದ್ದ ಚಂಚಲಾದೇವಿಯ ರೋಧನವು ಮುಗಿಲು ಮುಟ್ಟಿತ್ತು. ಹತ್ತು ನಿಮಿಷಗಳ ನಂತರ....

ನೀತು......ತಾಯಿಯ ಗರ್ಭದಲ್ಲಿ ಜನಿಸುವುದಕ್ಕೂ ಮುಂಚೆಯೇ ಮಗುವಿನ ಹತ್ಯೆ ಮಾಡಲು ಷಡ್ಯಂತ್ರ ರೂಪಿಸಿದವರು ಮೊದಲೇ ಅದರ ಪ್ರತಿಫಲವನ್ನು ಅನುಭವಿಸಲಿಕ್ಕೂ ಸಿದ್ದರಾಗಿರಬೇಕು ಅಂತ ನಿನಗೆ ಗೊತ್ತಿಲ್ಲವಾ ಚೆಂಚಲಾದೇವಿ ? ಈಗೇಳು ನಿನ್ನ ಮಗಳೆಲ್ಲಿ ?

ಚಂಚಲಾದೇವಿ ಅಳುತ್ತಲೇ.......ಅವಳ ಬಗ್ಗೆ ನನಗೇನೂ ಗೊತ್ತಿಲ್ಲ ಅವಳ್ಯಾವಾಗ ಎಲ್ಲಿರುತ್ತಾಳೆಂಬುದು ಅವಳೊಬ್ಬನ್ನು ಬಿಟ್ಟರೆ ಬೇರೆ ಯಾರಿಗೂ ತಿಳಿಯುವುದಿಲ್ಲ.

ನೀತು.......ನಡೀರಿ ಇಲ್ಲಿದ್ದೇನೂ ಪ್ರಯೋಜನವಿಲ್ಲ ಬಷೀರ್ ಖಾನ್ ಇವರೆಲ್ಲರೂ ಇಲ್ಲಿಯೇ ಬಿದ್ದಿರಲಿ ಈ ಪಾಪಿಯ ಹೆಣವೂ ಆದರೆ ಈ ಹೆಣವನ್ಯಾರೂ ಮುಟ್ಟುವುದಕ್ಕೂ ಬಿಡಬೇಡ.

ಬಷೀರ್ ಖಾನ್.....ನಿಮ್ಮಾಜ್ಞೆ ಮಾತೆ.

ಅನುಷಾಳ ಜೊತೆ ಒಂಟೆಗಳ ಗುಂಪಿನ ಹತ್ತಿರ ಬಂದ ನಿಶಾ ಅವನ್ನು ನೋಡಿ ತುಂಬ ಅಚ್ಚರಿಗೊಳ್ಳುತ್ತ ಇದ್ಯಾವ ಪ್ರಾಣಿಯಪ್ಪ ಎಂದು ತಲೆ ಕೆರೆದುಕೊಳ್ಳುತ್ತ ನೋಡುತ್ತಿದ್ದಳು.

ನಿಶಾ......ಆಂಟಿ ಇದಿ ಏನಿ ?

ಅನುಷ......ಇದು ಒಂಟೆ ಅಂತ ಕಂದ ನೀನು ಆನೆ...ಕುದುರೆಯ ಮೇಲೆ ಕೂತಿದ್ಯಲ್ಲ ಈಗ ಇದರ ಮೇಲೂ ಕೂರ್ತೀಯಾ.

ನಿಶಾ ಖುಷಿಯಿಂದ......ನಾನಿ ಕೂಚಿ ಮಾತೀನಿ ನಲಿ ಆಂಟಿ.

ವೀರ್ ಸಿಂಗ್ ಇಬ್ಬರಿಗೂ ಒಂಟೆಯ ಮೇಲೇರಿ ಕೂರುವ ವ್ಯವಸ್ಥೆ ಮಾಡಿಸಿ ಅದರ ಜೊತೆಯಲ್ಲೇ ತಾನೂ ಹೊರಟನು. ಅತ್ತಿಂದಿತ್ತ ಓಲಾಡುತ್ತ ನಡೆಯುತ್ತಿದ್ದ ಒಂಟೆಯ ಮೇಲೆ ಕುಳಿತಿದ್ದ ನಿಶಾ ತುಂಬ ಖುಷಿಯಿಂದ ಕಿರುಚುತ್ತಿದ್ದಳು. ನೀತು ಮತ್ತಿತರರು ಮೇಲೆ ಬಂದಾಗ ಒಂಟೆಯ ಸವಾರಿ ಮಾಡುತ್ತಿದ್ದ ನಿಶಾ ಅವರತ್ತ ಕೈಬೀಸಿ ಸವಾರಿಯ ಸಂತೋಷದಲ್ಲಿ ತೇಲಾಡುತ್ತಿದ್ದಳು.

ವರ್ಧನ್.....ಅಕ್ಕ ಮುಂದೇನು ಮಾಡೋದು ?

ನೀತು......ಯಶೋಮತಿಯ ಬಗ್ಗೆ ಅವಳ ತಾಯಿ ಹೇಳುತ್ತಿರುವುದು ಸತ್ಯ ಮಗಳ ಬಗ್ಗೆ ಅವಳಿಗೇನೂ ಗೊತ್ತಿಲ್ಲ ನಾನವಳ ಕಣ್ಣಿನಿಂದಲೇ ಅದನ್ನು ಗ್ರಹಿಸಿದೆ. ರಾಣಾ ಇವರೆಲ್ಲರಿಗಿಂತ ತುಂಬ ಅಪಾಯಕಾರಿ ಈ ಯಶೋಮತಿ ಅಂತ ಮಹಾರಾಜರೇ ಬರೆದಿದ್ದರು ಹೇಗಾದರೂ ಅವಳನ್ನು ಹುಡುಕಿಸು ಅವಳು ಬದುಕಿರುವ ತನಕ ನನ್ನ ಮಕ್ಕಳು ಸುರಕ್ಷಿತರಾಗಿ ಇರಲಾಗುವುದಿಲ್ಲ.

ರಜನಿ...ಹೌದು ಕಣೆ ಅವಳ ಮನೆಯಲ್ಲೇ ಅವಳದ್ದು ಒಂದೇ ಒಂದು ಫೋಟೋ ಸಹ ಇರಲಿಲ್ಲವೆಂದು ರಕ್ಷಕರು ಹೇಳಿದ್ದಾರೆಂದರೆ ಅವಳು ಅದೆಷ್ಟು ಚಾಲಾಕಿ ಅಂತ ತಿಳಿಯುತ್ತದೆ.

ನಿಧಿ.....ಅಮ್ಮ ನಾನೊಂದು ಮಾತು ಹೇಳಲಾ.

ಹರೀಶ......ಹೇಳಮ್ಮ ಕಂದ ಅಮ್ಮನ ಜೊತೆ ಮಾತನಾಡಲಿಕ್ಕೂ ಮಗಳಿಗೆ ಪರ್ಮಿಷನ್ ಬೇಕಾ.

ನಿಧಿ......ಅಪ್ಪ ನಾವೂ ಕೂಡ ಅಪ್ಪ ಮಾಡಿದ್ದ ತಪ್ಪನ್ನೇ ಮಾಡುತ್ತಾ ಹೋಗಬಾರದು. ಇವರೆಲ್ಲರ ಬಗ್ಗೆ ಅನುಮಾನವಿದ್ದರೂ ಸಹ ಅಪ್ಪ ಯಾವುದೇ ರೀತಿ ನಿರ್ಧಾರಕ್ಕೆ ಬಾರದಿರುವುದೇ ಅವರ ಮತ್ತು ಅಮ್ಮ ಇಬ್ಬರ ಸಾವಿಗೂ ಕಾರಣವಾಯ್ತು. ಇವರನ್ನೆಲ್ಲಾ ನವರಾತ್ರಿಯಂತ ಪುಣ್ಯಪಾವನ ಪವಿತ್ರವಾದ ಆಚರಣೆವರೆಗೂ ಯಾಕಮ್ಮ ಜೀವಂತ ಉಳಿಸಬೇಕು ಈಗಲೇ ಎಲ್ಲರಿಗೂ ಮುಕ್ತಿ ಕೊಟ್ಟರೆ ಒಳ್ಳೆಯದಲ್ಲವ.

ಹರೀಶ......ಹೌದು ನೀತು ಈಗಾಗಲೇ 15—20 ದಿನಗಳಿಂದ ಅವರು ಮಾಡಿರುವ ತಪ್ಪಿನ ಅರಿವಾಗಿಲ್ಲ ಅಂದರೆ ಇನ್ನು 15 ವರ್ಷಗಳೇ ಬಿಟ್ಟರೂ ಸಹ ಅವರಿಗೆ ತಾವು ಮಾಡಿದ್ದು ತಪ್ಪೇ ಅನಿಸುವುದಿಲ್ಲ. ಇನ್ನಿವರನ್ನು ಜೀವಂತವಾಗಿ ಇಡುವುದರಲ್ಲೇನೂ ಪ್ರಯೋಜನವಿಲ್ಲ ಎಲ್ಲಾ ಶತ್ರುಗಳನ್ನು ನಿರ್ನಾಮ ಮಾಡುವುದೇ ಉತ್ತಮ.

ನೀತು ಯೋಚಿಸಿದ ಬಳಿಕ.......ಆಯ್ತಮ್ಮ ನಿಧಿ ಆದರೆ ಶುಕ್ರವಾರ ಸಂಸ್ಥಾನದ ಉತ್ತರಾಧಿಕಾರಿಯಾಗಿ ಅಧಿಕೃತವಾಗಿ ನೀನು ಆಡಳಿತ ವಹಿಸಿಕೊಂಡ ನಂತರ ಇದೇ ನಿನ್ನ ಮೊದಲ ಆದೇಶವಾಗಲಿ. ನೀನು ಹೇಳಿದ್ದು ಸರಿಯೇ ಕಂದ ಪವಿತ್ರವಾದ ನವರಾತ್ರಿ ಸಮಯದಲ್ಲೇ ನನ್ನಿಬ್ಬರೂ ಮಕ್ಕಳ ಜನ್ಮ ದಿನವಿರುವಾಗ ಈ ಪಾಪಿಗಳನ್ನು ಆ ದಿನ ಸಾಯಿಸುವುದೂ ಒಳ್ಳೆಯದಲ್ಲ.

ವರ್ಧನ್.....ನಡೀರಿ ಅಕ್ಕ ಇದೇ ಅರಮನೆಗೆ ನಮ್ಮ ಸಂಸ್ಥಾನದ ಪ್ರಮುಖ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟುಗಳೆಲ್ಲರೂ ಬಂದಿದ್ದಾರೆ ಅವರ ಜೊತೆ ಮೂರು ವಿದ್ಯಾಲಯಗಳ ರೂಪರೇಷ ಚರ್ಚಿಸೋಣ ಅದರ ಅನುಮತಿಗಾಗಿ ಆಗಲೇ ನನ್ನ ಪಿಎ ಪ್ರಕ್ರಿಯೆಗಳನ್ನು ಶುರು ಮಾಡಿದ್ದಾಗಿದೆ ಶುಕ್ರವಾರ ಮುಂಜಾನೆ ನಿಮ್ಮ ಕೈಯಲ್ಲಿರುತ್ತದೆ. ನೀವು ಯಾವುದೇ ಪ್ಲಾನನ್ನಾದರೂ ಒಕೆ ಮಾಡಿ ಅದೇ ಅಪ್ರೂವಲ್ ಆಗುತ್ತೆ. ನಿಮಗಿಂತಲೂ ವಿದ್ಯಾಲಯಗಳ ಬಗ್ಗೆ ಭಾವನವರಿಗೇ ಚೆನ್ನಾಗಿ ತಿಳಿದಿರುತ್ತೆ ಅವರೇ ಉತ್ತಮ ನಿರ್ಣಯ ತೆಗೆದುಕೊಳ್ಳಲಿಕ್ಕೆ ಸಾಧ್ಯ. ಅವರಿಗೇ ವಿಧ್ಯಾರ್ಥಿಗಳಿಗೇನು ಬೇಕೆಂಬುದರ ಬಗ್ಗೆ ಜಾಸ್ತಿ ಗೊತ್ತಿರುತ್ತೆ ನಡೀರಿ ಭಾವ.

ನಿಧಿ.....ಅಮ್ಮ ನಾನು ಚಿನ್ನಿ ಜೊತೆಯಲ್ಲಿರ್ತೀನಿ.

ನೀತು.......ಆಯ್ತಮ್ಮ ಅನು ಜೊತೆ ಅವಳಾಟ ಎಲ್ಲವೂ ನಡೆಯುತ್ತೆ ಪಾಪ ಅವಳಂತೂ ಬೇಡ ಅಂತ ತಡೆಯಲ್ಲ ತಂಟೆ ಮಾಡಿದ್ರೆ ಎರಡು ಕೊಡು ಗೊತ್ತಾಯ್ತಾ.

ನಿಧಿ ನಗುತ್ತ.......ಆಯ್ತಮ್ಮ.

* *
* *

No comments:

Post a Comment