Total Pageviews

Tuesday, 11 February 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 278

ವಕೀಲರನ್ನು ಬೀಳ್ಕೊಟ್ಟು....

ನೀತು......ವಿಕ್ರಂ ಸಿಂಗ್ ನಿಮ್ಮ ಯುವರಾಣಿ ಮತ್ತವಳ ತಂದೆಯ ಜೊತೆ ನನ್ನ ಗೆಳತಿಯನ್ನೂ ಇಲ್ಲಿಗೆ ಕರೆಸಿಬಿಡಿ ಅವರಿರುವಾಗಲೇ ಈ ಉಯಿಲನ್ನು ಓದುವುದು ಸೂಕ್ತ.

ವಿಕ್ರಂ ಸಿಂಗ್....ಆಗಲಿ ಮಾತೆ.....ಎಂದು ಹೊರಗೋದನು.

ಹರೀಶ—ರಜನಿ ಒಳಗೆ ಬಂದರೆ ಹರ್ಷೋಲ್ಲಾಸದಲ್ಲಿ ಕುಣಿದಾಡುತ್ತ ಒಳಗೆ ಬಂದ ನಿಶಾ ನೇರವಾಗಿ ಅಮ್ಮನ ಮಡಿಲಿಗೆ ಜಿಗಿದು ತಾನು ಅಜ್ಜಿ..ತಾತ ಅಣ್ಣನ ಜೊತೆ ಮಾತನಾಡಿದ್ದನು ಹೇಳುತ್ತಿದ್ದಳು. ನೀತು ಗಂಡ ಮತ್ತು ಗೆಳತಿಗೆ ಉಯಿಲಿನ ವಿಷಯ ಹೇಳಿದಾಗ......

ಹರೀಶ......ಸಂಸ್ಥಾನದ ಆಸ್ತಿ ನೊಂದಣಿ ಪ್ರಕ್ರಿಯೆಯಲ್ಲಿ ನಾವಿಬ್ಬರು ಹೇಗೆ ಸಹಿ ಮಾಡಲಾಗುತ್ತೆ ನೀತು ? ನಮಗ್ಯಾವ ಹಕ್ಕಿದೆ ?

ನೀತು......ಅದಕ್ಕೂ ಕಾರಣವಿದೆ ಅಂತ ವಕೀಲರು ಹೇಳಿ ಹೋದರು ಉಯಿಲನ್ನೊದಿದಾಗ ಎಲ್ಲವೂ ತಿಳಿಯುತ್ತದಂತೆ.

ಅಷ್ಟರಲ್ಲಿ ರೂಂ ಬಾಗಿಲು ಬಡಿದ ಶಬ್ದವಾಗಿ ರಾಣಾ ತೆರೆದಾಗ.....

ವೀರ್ ಸಿಂಗ್......ಆಚಾರ್ಯರು ಬಂದಿದ್ದಾರೆ.

ನೀತು ಮತ್ತವಳ ಕುಟುಂಬದವರೆಲ್ಲರೂ ಹೊರಬಂದು ಆಚಾರ್ಯರ ಕಾಲಿಗೆ ನಮಸ್ಕರಿಸಿದರೆ " ಆ ಹೆಂಗಸು " ದೂರದಿಂದಲೇ ಅವರನ್ನು ನೋಡಿ ಆಶ್ಚರ್ಯ ಮತ್ತು ಭಯದಿಂದ ಮುಖ ಬಿಳಿಚಿಕೊಂಡಿತು.

ಹೆಂಗಸು......ಈ ಮುದಿಯ ಇನ್ನೂ ಸತ್ತಿಲ್ಲವಾ ಸುಧಾಮಣಿ ಮತ್ತು ರಾಣಾಪ್ರತಾಪರ ಅತ್ಯಾಪ್ತ ಗುರು ಇವನ ಕಾರಣದಿಂದಲೇ ನಮ್ಮಮ್ಮ ಕೂಡ ಸಂಸ್ಥಾನದೊಳಗೆ ನುಸುಳುವುದಕ್ಕೆ ಸಾಧ್ಯವಾಗಲಿಲ್ಲ. ಅಂದರೆ ಆ ದಿನ ಅಮ್ಮ ಈ ಮುದಿಯನನ್ನು ಸಾಯಿಸಲಾಗಲಿಲ್ಲವಾ ?....... ಎಂದು ಯೋಚಿಸುತ್ತಿದ್ದಳು.

ರಾಣಾ......ಗುರುಗಳೇ ವರ್ಷದ ನಂತರ ನೀವು ಅರಮನೆಗೆ ಇಂದೇ ಕಾಲಿಡುತ್ತಿರುವುದಾಗಿ ತಿಳಿಯಿತು ಧನ್ಯೋಸ್ಮಿ.

ಆಚಾರ್ಯರು....ರಾಜಕುಮಾರಿಯರ ಮತ್ತು ಹರೀಶನ ಕುಟುಂಬದ ಪ್ರತಿಯಾಗಿ ನಮ್ಮದೂ ಕೆಲವು ದಾಯಿತ್ವವಿದೆ ಹಾಗಾಗಿ ನಾವಿಲ್ಲಿಗೆ ಬರದಿರುವುದಕ್ಕೆ ಸಾಧ್ಯವಿದೆಯಾ ರಾಣಾ. ನಡೆಯಿರಿ ಒಳಗೆ ಕುಳಿತು ಮಾತನಾಡೋಣ ನಾವಿಲ್ಲಿಗೆ ಬಂದಿರುವುದಕ್ಕೂ ಒಂದು ಪ್ರಮುಖ ಕಾರಣವಿದೆ.

ಆಚಾರ್ಯರ ಸಲಹೆಯ ಮೇರೆಗೆ ಎಲ್ಲರೂ ಅರಮೆನಯಲ್ಲಿ ಗೌಪ್ಯ ಸಮಾಲೋಚನೆಗಳು ನಡೆಯುವ ರೂಮಿನೊಳಗೆ ಬಂದಾಗ......

ಆಚಾರ್ಯರು....ಹರೀಶ—ನೀತು ನಿಮ್ಮಿಬ್ಬರಿಗೂ ರಾಣಾಪ್ರತಾಪನು ತನ್ನ ಉಯಿಲಿನಲ್ಲಿ ನಿಮ್ಮಿಬ್ಬರನ್ನು ಹೆಸರಿಸಿರುವ ಬಗ್ಗೆ ಹೇಗೆಂಬುದು ಎನ್ನುವ ಪ್ರಶ್ನಿಯಿದೆ ಎಂಬುದು ಗೊತ್ತು ಅದಕ್ಕೆ ಉತ್ತರ ಹೇಳವುದಕ್ಕೆ ನಾನಿರುವೆನಲ್ಲ. ನಮ್ಮ ಪರಮಾಪ್ತ ಶಿಷ್ಯೆಯಾಗಿದ್ದ ಸುಧಾಮಣಿಯ ಮರಣದ ಉಪರಾಂತ ನಾವೀ ಅರಮನೆಗಿಂದೇ ಕಾಲಿಡುತ್ತಿದ್ದೀವಿ. ಆದರೆ ರಾಣಾಪ್ರತಾಪ್ ನಮ್ಮ ಆಶ್ರಮಕ್ಕೆ ಮಡದಿಯ ಮರಣದ ನಂತರ ಹಿರಿಮಗಳನ್ನು ನೋಡಲು ಬಂದಿದ್ದಾಗ ನಾವು ಆತನಿಗೆ ಈ ಉಯಿಲನ್ನು ಬರೆಯುವಂತೆ ಸೂಚಿಸಿದ್ದೆವು. 

ಕೆಲವೊಂದು ಸಮಯ ಸಂಧರ್ಭಗಳಲ್ಲಿ ನಮಗೆ ಭವಿಷ್ಯದಲ್ಲಿ ನಡೆಯಬಹುದಾದ ಕೆಲವು ಘಟನೆಗಳ ಬಗ್ಗೆ ಸಮಯ ಪೂರ್ವವಾಗಿಯೇ ಕೆಲವು ಸೂಚನೆಗಳು ಸಿಗುತ್ತವೆ. ನಿರ್ಧಿಷ್ಟವಾಗಿ ಹೀಗೆಯೇ ನಡೆಯಲಿದೆ ಎಂದು ನಮ್ಮಿಂದ ಹೇಳಲಾಗದಿದ್ದರೂ ನಡೆಯುವ ಘಟನೆಯ ಸಾಕಷ್ಟು ಸಮೀಪದ ತನಕವೂ ನಮಗೆ ತಿಳಿಯುತ್ತದೆ. ನೀತು ಇದನ್ನು ತೆಗೆದುಕೊಳ್ಳಮ್ಮ ರಾಣಾಪ್ರತಾಪ್ ಖುದ್ದು ಬರೆದಿರುವ ಪತ್ರ ಅವನು ನಮ್ಮ ಆಶ್ರಮಕ್ಕೆ ಕೊನೆಯ ಬಾರಿ ಬೇಟಿ ನೀಡಿ ಮಗಳೊಟ್ಟಿಗೆ ಉಳಿದುಕೊಂಡಿದ್ದಾಗ ಇದನ್ನು ಬರೆದು ನಮ್ಮ ಕೈಗೆ ಕೊಟ್ಟು ಮರಳಿದ್ದ. ಈ ಪತ್ರವನ್ನು ಕೇವಲ ತನ್ನ ಜೀವನದ ಇಬ್ಬರೂ ಅತ್ಯಮೂಲ್ಯವಾದ ಸಂಪತ್ತಾದ ಮಕ್ಕಳನ್ನು ತಾನು ಹೆತ್ತಿರುವ ಮಕ್ಕಳಂತೆಯೇ ಪ್ರೀತಿಸುವ ತಾಯಿ ಆಕೆಗೋಸ್ಕರ ರಾಣಾಪ್ರತಾಪ್ ಬರೆದಿರುವುದು. ಈ ಪತ್ರ ನೀನ್ಯಾರ ಸಮ್ಮುಖದಲ್ಲಿ ಬೇಕಿದ್ದರೂ ಓದಬಹುದು ಅದಕ್ಕೆ ನಿನಗೆ ಸಂಪೂರ್ಣ ಸ್ವಾತಂತ್ರವಿದೆ ನಾವು ಹೊರಗಿರುತ್ತೇವೆ.

ನೀತು........ಗುರುಗಳೇ ದಯವಿಟ್ಟು ತಾವು ಇಲ್ಲಿಯೇ ಇರಬೇಕೆಂದು ನನ್ನ ವಿನಂತಿ ಜೊತೆಗೆ ರಾಣಾ...ವಿಕ್ರಂ ಸಿಂಗ್...ವೀರ್ ಸಿಂಗ್ ಮತ್ತು ಸುಮೇರ್ ಸಿಂಗ್ ಕೂಡ ಇರಬೇಕು ಅವರಿಗೆ ಮಾತ್ರ ಇದು ಆದೇಶ. ಇನ್ನುಳಿದಂತೆ ದಿಲೇರ್ ಸಿಂಗ್....ಅಜಯ್ ಸಿಂಗ್ ಮತ್ತು ಬಷೀರ್ ಖಾನ್ ಮೂವರೂ ಜೈಸಲ್ಮೇರಿನಲ್ಲಿದ್ದಾರೆ. ಆದರೆ ಅವರಿಗೂ ತಮ್ಮ ಮಹರಾಜರು ಬರೆದಿರುವ ಕಟ್ಟಕಡೆಯ ಪತ್ರದ ಸಾರಾಂಶಗಳೆಲ್ಲವೂ ತಿಳಿಸಬೇಕೆಂದು ರಾಣಾ ನಿನಗೆ ಆದೇಶ ನೀಡುತ್ತಿದ್ದೀನಿ.

ಆ ರೂಮಿನಾಚೆ ಕಾವಲಿಗಿದ್ದ ಸುಮೇರ್ ಸಿಂಗ್ ಮತ್ತು ವೀರ್ ಸಿಂಗ್ ರಾಣಾ ಕೂಡ ಒಳಗೆ ಬರುವ ಮುಂಚೆ ರಕ್ಷಕರಿಗೆ ಕೆಲವು ಸೂಚನೆ ನೀಡಿ ಬಂದರು. ರಾಜಮುದ್ರೆಯಿಂದ ಸೀಲಾಗಿರುವ ದೊಡ್ಡದಾಗಿದ್ದ ಮತ್ತು ಭಾರೀ ಲಕೋಟಕೆಯನ್ಮು ನೀತು ಒಡೆದಾಗ ಅದರೊಳಗಿಂದ 8x12 ಸೈಜಿ಼ನ ನೂರಾರು ಪೋಟೋಗಳು ಹೊರಗೆ ಜಾರಿಕೊಂಡರೆ 6—7 ಪುಟಗಳ ಪತ್ರವೂ ಅಲ್ಲಿತ್ತು.

ನೀತು......ಫೋಟೋಗಳನ್ನು ಆಮೇಲೆ ನೋಡೋಣ ಇದು ನನ್ನ ಮಕ್ಕಳಿಬ್ಬರ ಆಸ್ತಿ ಅಂತ ತಿಳಿಯುತ್ತಿದೆ ಈಗ ಪತ್ರ ಓದುತ್ತೀನಿ......


ಪತ್ರದ ಸಾರಾಂಶ......

ನಾನು ಸೂರ್ಯವಂಶಿ ಸಂಸ್ಥಾನದ ಮಹಾರಾಜ ರಾಣಾಪ್ರತಾಪ್ ಈ ಪತ್ರವನ್ನು ಮಹಾರಾಜನಾಗಿಯಲ್ಲ ಕೇವಲ ಒಬ್ಬ ಸಾಮಾನ್ಯ ತಂದೆ ರೂಪದಲ್ಲಿ ಬರೆಯುತ್ತಿದ್ದೀನಿ.......

ನನ್ನ ಮತ್ತು ಸುಧಾಮಣಿಯ ವಿವಾಹವಾದ ಒಂದು ವರ್ಷದ ನಂತರ ನಮ್ಮ ಜೀವನದಲ್ಲಿ ಮನಸ್ಸನ್ನೇ ಸಮ್ಮೋಹನಗೊಳಿಸುವಷ್ಟು ಶಕ್ತಿ ಇರುವ ಹೆಣ್ಣು ಮಗುವಾನ ಆಗಮನವಾಯಿತು. (ನಿಧಿ ತಮಗೆ ಹೇಗೆ ಸಿಕ್ಕಿದಳೆಂದು ವಿವರವಾಗಿ ಬರೆಯಲಾಗಿತ್ತು ಅದನ್ನಾಗಲೇ ಹಿಂದಿನ ಅಪ್ಡೇಟಿನಲ್ಲಿ ಬರೆದಿದ್ದೀನಿ) ಆ ಮಗುವನ್ನು ನಾವು ಕಾನೂನಿನ ರೀತಿ ದತ್ತು ಸ್ವೀರಿಸಿದ ನಂತರ ನಮ್ಮ ಸಂಸ್ಥಾನದ ಗುರುಗಳಾದ ಶ್ಯಾಮ ವಸಿಷ್ಠರು ಹಾಗು ಗೋವಿಂದಾರ್ಚಾಯರ ಮುಃದಾಳತ್ವದಲ್ಲಿ ಪೂಜೆ ಹೋಮಗಳನ್ನು ನೆರವೇರಿಸಿ ಮಗುವಿಗೆ ನಿಧಿ ಅಂತ ನಾಮಕರಣ ಮಾಡಲಾಯಾತು. 

ನನ್ನ ಮಗಳು...ನನ್ನ ಸರ್ವಸ್ವ...ನನ್ನ ಜೀವನದ ನಿಧಿ ಅವಳು " ನಿಧಿ ಸೂರ್ಯವಂಶಿ ". ಅವಳ ಕಿಲಕಾರಿಗಳನ್ನು ಕೇಳುತ್ತ ನಾವು ಮತ್ತು ನಮ್ಮ ಶ್ರೀಮತಿ ಇಬ್ಬರೂ ಮಂತ್ರಮುಗ್ದರಾಗಿ ಹೋಗುತ್ತಿದ್ದೆವು. ನಿಧಿ ತನ್ನ ಪುಟ್ಟ ಅಂಗೈನಲ್ಲಿ ನಮ್ಮ ಮುಖವನ್ನು ಸವರಿದಾಗಲೆಲ್ಲಾ ಪ್ರಪಂಚದಲ್ಲಿ ನಮಗಿಂತಲೂ ಅದೃಷ್ಟವಂತರು ಬೇರಾರೂ ಇಲ್ಲ ಅನಿಸುತ್ತಿತ್ತು ಆದರೆ ವಿಧಿಯಾಟ ಬೇರೆಯದ್ದಾಗಿತ್ತು. ಕೆಲವೇ ದಿನಗಳ ಅಂತರದಲ್ಲಿ ನಮ್ಮ ಪೂಜನೀಯ ತಂದೆ ಹಾಗು ತಾಯಿ ಇಬ್ಬರೂ ಸ್ವರ್ಗಸ್ಥರಾಗಿ ಹೋದರು. 

ನಿಧಿಯ ಬಾಲ ಲೀಲೆ ಮತ್ತವಳ ಕಿಲಕಾರಿಗಳಲ್ಲೇ ಮುಳುಗಿದ್ದ ನಮಗೆ ತಂದೆ ತಾಯಿ ಇಬ್ಬರ ಸಾವಿನ ಹಿಂದೆ ದೊಡ್ಡದೊಂದು ಷಡ್ಯಂತ್ರವಿದೆ ಎಂಬುದು ಗ್ರಹಿಸಲು ಸಾಧ್ಯವಾಗಲಿಲ್ಲ. ನಮ್ಮ ಇದೇ ತಪ್ಪಿನ ಕಾರಣದಿಂದ ನಿಧಿಯನ್ನೂ ಸಹ ಕೊಲ್ಲಲು ಹಲವಾರು ಪ್ರಯತ್ನಗಳು ನಡೆದವು. ಅದೆಲ್ಲವನ್ನೂ ಮೆಟ್ಟಿ ನಿಂತರೂ ನಿಧಿ ನೆತ್ತಿಯ ಮೇಲೆ ಸಾವಿನ ಕತ್ತಿ ನೇತಾಡುತ್ತಿದ್ದರ ಬಗ್ಗೆ ಗುರುಗಳು ತಿಳಿಸ ಅವಳು ತನ್ನದೇ ಅರಮನೆಯಲ್ಲಿ ಸುರಕ್ಷಿತ ಆಗಿರುವುದಿಲ್ಲ ಎಂಬುದನ್ನು ತಿಳಿಸಿ ತಮ್ಮೊಂದಿಗೆ ನನ್ನ ಐದು ವರ್ಷದ ಪುಟ್ಟ ಕಂದಮ್ಮನನ್ನು ಕರೆದೊಯ್ದರು. 

ಆ ದಿನದಿಂದಲೇ ನಮ್ಮ ಹೃದಯದಲ್ಲಿ ಮನೆ ಮಾಡಿದ ನೋವು ಜೀವನಪೂರ್ತಿ ಇಂದಿನತನಕ ನಮ್ಮನ್ನು ಕಾಡುತ್ತಿದೆ. ಸುಧಾಮಣಿ ತನಗಿಚ್ಚಿಸಿದಾಗಲೆಲ್ಲಾ ಆಶ್ರಮಕ್ಕೆ ಹೋಗಿ ಮಗಳ ಜೊತೆ ಸಮಯ ಕಳೆಯುತ್ತಿದ್ದಳು ಆದರೆ ನಾವು ಕೆಲ ಸಂಧರ್ಭಗಳಲ್ಲಿ ಮಾತ್ರ ಆಶ್ರಮಕ್ಕೆ ಹೋಗಿದ್ದೆವು ಇದರರ್ಥ ಮಗಳ ಮೇಲಿನ ಪ್ರೀತಿ ಕಡಿಮೆಯಾಯ್ತು ಎಂಬುದಲ್ಲ. ನನ್ನ ಹೃದಯ ನನ್ನ ಜೀವನವೇ ಆಗಿದ್ದ ಮಗಳನ್ನು ಸುಖದ ಸುಪ್ಪತ್ತಿಗೆಯಲ್ಲಿ ಅವಳು ಬೆಳೆಯಬೇಕಾದವಳು ಆಶ್ರಮದ ಕಟ್ಟುನಿಟ್ಟಿನ ಜೀವನ ಶೈಲಿಯಲ್ಲಿ ಬೆಳೆಯುತ್ತಿರುವುದನ್ನು ನೋಡಲು ನಮ್ಮಿಂದ ಸಾಧ್ಯವಾಗುತ್ತಿರಲಿಲ್ಲ.

ನಾವಲ್ಲಿಗೆ ಜಾಸ್ತಿ ಹೋಗುತ್ತಿದ್ದರೆ ಮಗಳು ಪಡುತ್ತಿದ್ದ ಕಷ್ಟಗಳನ್ನು ನೋಡಿ ಗುರುಗಳನ್ನು ಕಾಡಿ ಬೇಡಿಯಾದರೂ ಮರಳಿ ಅರಮನೆಗೆ ಕರೆತಂದು ಬಿಡುತ್ತಿದ್ದೆವು ಆಗವಳ ಪ್ರಾಣಕ್ಕೆ ದೊಡ್ಡ ವಿಪ್ಪತ್ತು ಸಹ ಏದುರಾಗಿರುತ್ತಿತ್ತು. ನನ್ನ ಮಗಳು ಸದಾ ಸುಖ ಸಂತೋಷದಿಂದಲೇ ಇರಬೇಕೆಂದು ಬಯಕೆಯೇ ನಾವು ಆಶ್ರಮದ ಕಡೆ ಜಾಸ್ತಿ ಹೋಗದೆ ರೀತಿ ತಡೆಹಿಡಿಯುತ್ತಿತ್ತು.

ನಮ್ಮ ಮದುವೆಯಾದ 16 ವರ್ಷಗಳ ನಂತರ ಮಹಾರಾಣಿಯವರು ಗರ್ಭಧರಿಸಿ ತಾಯಿಯಾಗುತ್ತಿದ್ದಾರೆಂದು ತಿಳಿಯಿತು. ಇದನ್ನು ನಮ್ಮ ಮಗಳಿಗೆ ತಿಳಿಸಲು ನಾವಿಬ್ಬರೂ ಒಟ್ಟಿಗೇ ಆಶ್ರಮಕ್ಕೆ ತೆರಳಿದಾಗ ನಿಧಿಯನ್ನೂ ಮನೆಗೆ ಕಳುಹಿಸಿ ಎಂದು ನಮ್ಮ ಮಡದಿ ಗುರುಗಳಲ್ಲಿ ಎಷ್ಟೇ ವಿನಂತಿಸಿಕೊಂಡರೂ ಅದೇಕೋ ಗೊತ್ತಿಲ್ಲ ಅವರು ಸುತಾರಂ ಒಪ್ಪಿಗೆ ನೀಡಲಿಲ್ಲ. ಆದರೆ ಅದೇಕೆ ಗುರುಗಳು ಹಾಗೆ ಮಾಡಿದ್ದರು ಅಂತ ನಮಗೀಗ ಅರ್ಥವಾಗಿದೆ. ನಮ್ಮ ಸುತ್ತಲಿನ ಹಿತ ಶತೃಗಳಿಂದ ನಮ್ಮ ಯುವರಾಣಿಗೆ ಕಂಟಕವಿತ್ತು ಅಂತ ಈಗ ತಾನೇ ಗುರುಗಳು ನಮಗೆ ತಿಳಿಸಿದರು. 

ಒಂದು ವೇಳೆ ಆ ಸಮಯದಲ್ಲಿ ನಿಧಿ ನಮ್ಜೊತೆ ಮನೆಗೆ ಹಿಂದಿರುಗಿದ್ದೇ ಆಗಿದ್ದಲ್ಲಿ ಸೂರ್ಯವಂಶಿ ರಾಜಮನೆತನವೇ ಸರ್ವನಾಶ ಆಗಿ ಹೋಗುತ್ತಿತ್ತೆಂದು ಗುರುಗಳು ತಿಳಿಸಿದರು. ನಮ್ಮ ಶ್ರೀಮತಿಯವರ ಆಹಾರದಲ್ಲಿ ಪ್ರತಿನಿತ್ಯವೂ ವಿಷಪ್ರಾಶಾಣ ಕೂಡ ನಡೆಯುತ್ತಿತ್ತೆಂದು ಗುರುಗಳು ನಮಗೀಗಷ್ಟೇ ತಿಳಿಸಿದರು. ಇದನ್ನು ಮುಂಚೆಯೇ ಏಕೆ ತಿಳಿಸಲಿಲ್ಲವೆಂದು ನಾವು ಬೇಸರ ವ್ಯಕ್ತಪಡಿಸಿದರೆ ಗುರುಗಳು ಇದೆಲ್ಲವೂ ವಿಧಿ ಲಿಖಿತ ನೀಯತ್ತಿಯ ಮುಂದೆ ನಾವೆಲ್ಲ ನಿಮಿತ್ತ ಮಾತ್ರ. ಭವಿಷ್ಯದ ಕೆಲವು ಘಟನಾವಳಿಗಳ ಬಗ್ಗೆ ನಮಗೆ ಅರಿವಿದ್ದರೂ ಕೂಡ ಜಗಜ್ಜನನಿಯಾದ ಜಗನ್ಮಾಥೆಯ ಅನುಮತಿ ಇಲ್ಲದಿದ್ದ ಪಕ್ಷದಲ್ಲಿ ಅದನ್ನು ನಾವ್ಯಾರಿಗೂ ತಿಳಿಸುವಂತಿಲ್ಲ ಎಂದರು. 

ನಾವು ರಜಪೂತರು ನಮ್ಮ ಕುಲದೈವ ಬೇರೆಯಾಗಿದ್ದರೂ ನಾವೂ ಸಹ ಜಗನ್ಮಾಥೆಯ ಆರಾಧಕರೇ ಆದರೆ ಈ ಬಾರಿ ಗುರುಗಳು ನಮ್ಮನ್ನು ನಿರಾಶೆಗೊಳಿಸಲಿಲ್ಲ. ನಮ್ಮ ಜೊತೆಯಲ್ಲಿ ಹಿರಿಮಗಳನ್ನು ಕರೆದುಕೊಂಡು ಹೋಗುವುದಕ್ಕೆ ಅನುಮತಿ ನೀಡಿರೆಂದಾಗ ಅವರು ಬೇಡವೆಂದು ಅದಕ್ಕೆ ಕಾರಣವನ್ನೂ ತಿಳಿಸಿದರು. ನಾವಿನ್ನು ಕೇವಲ ಎರಡು ತಿಂಗಳಲ್ಲಿ ನಮ್ಮ ಪ್ರೀತಿಯ ಮಡದಿಯನ್ನು ಸೇರಲಿದ್ದೇವೆ ಇಂತಹ ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲಿ ನಿಧಿ ಅರಮನೆಗೆ ಬರುವುದು ಸೂಕ್ತವಲ್ಲ ಎಂದು ಹೇಳಿದರು. ನಾವು ನಮ್ಮ ಹಿರಿಮಗಳ ಜೊತೆಗೆ ನಾಲ್ಕುವರೆ ವರ್ಷ ಕಳೆದಿದ್ದೆವು ಆದರೆ ಕಿರಿಮಗಳ ಜೊತೆ ಸರಿಯಾಗಿ ಸಮಯ ಕಳೆಯುವ ಮುಂಚೆಯೇ ನಮಗಿಂದು ಕಾಲನ ಕರೆಯು ಬಂದಿರುವ ವಿಷಯ ತಿಳಿಯಿತು. 

ಜಗತ್ತಿನಲ್ಲಿ ನಮಗಿಂತಲೂ ಅದೃಷ್ಟ ಮಾಡಿರುವವರಾರೂ ಇಲ್ಲವೆಂದು ತಿಳಿದಿದ್ದ ನಮಗೆ ಈಗ ನಮಗಿಂತ ದುರಾದೃಷ್ಟ ತಂದೆ ಮತ್ತೊಬ್ಬರಿಲ್ಲ ಎಂದು ಅರ್ಥವಾಗಿದೆ. ಇಬ್ಬರು ಮುದ್ದಾದ ಹೆಣ್ಣುಮಕ್ಕಳ ತಂದೆಗೆ ತನ್ನ ಮಕ್ಕಳ ಜೊತೆ ಪ್ರೀತಿಯಿಂದ ಸಮಯವನ್ನೂ ಕಳೆಯೀವ ಅವಕಾಶ ಇಲ್ಲದಂತಾಗುವುದಕ್ಕಿಂತ ಬೇರೊಂದು ಶಿಕ್ಷೆ ಇರುವುದಕ್ಕೆ ಸಾಧ್ಯವೇ ಇಲ್ಲ. ಹಿರಿಮಗಳು ನಮ್ಮ ಗುರುಗಳ ಆಶ್ರಯದಲ್ಲಿದ್ದಾಳೆ ಆದರೆ ನಾವು ಮರಣ ಹೊಂದಿದರೆ ನಮ್ಮ ಹಸುಗೂಸಿನ ಕಥೆ ಏನೆಂದು ಗುರುಗಳನ್ನು ಕೇಳಿದಾಗ ಅದಕ್ಕೆ ಅವರು ಪರಿಹಾರವನ್ನೂ ತಿಳಿಸಿದ್ದಾರೆ ಅದನ್ನು ತಿಳಿದ ನಂತರ ನಾವು ಈ ಪತ್ರ ಬರೆಯುವುದಕ್ಕೆ ತೀರ್ಮಾನಿಸಿದೆವು.

ನಮ್ಮ ಸಾವು ಸಮೀಪಿಸುತ್ತಿದೆ ಎಂಬುದರ ಬಗ್ಗೆ ನಮಗೆ ಮುಂಚೆಯೆ ಸೂಚನೆ ಸಿಗಲಿದೆ ಅಂತ ಗುರುಗಳು ನಮಗೆ ತಿಳಿಸಾದ್ದಾರೆ. ಅದಕ್ಕೇ ನಮ್ಮ ಕಿರಿಮಗಳನ್ನು ವಿಕ್ರಂ ಸಿಂಗ್ ಮೂಲಕ ಕರ್ನಾಟಕದ xxxx ಊರಿನಲ್ಲಿರುವ ಅನಾಥಾಶ್ರಮಕ್ಕೆ ಕಳಿಸುವಂತೆ ಗುರುಗಳು ನಮಗೆ ಸೂಚಿಸಿದ್ದಾರೆ. ಆ ಆಶ್ರಮದಿಂದ ನಮ್ಮ ಕಿರಿಮಗಳೆಲ್ಲಿಗೆ ಸೇರಬೇಕು ಅಂತ ಜಗನ್ಮಾತೆಯ ಆಶಯವಿದೆಯೋ ಅದೇ ತಾಯಿಯ ಮಡಿಲಿಗೆ ಮತ್ತು ತಂದೆ ತೋಳಿಗೆ ಸೇರಲಿದ್ದಾಳೆಂದು ಗುರುಗಳು ಹೇಳಿದ್ದಾರೆ. ಕೆಲವು ದಿನಗಳ ನಂತರ ನಮ್ಮ ಹಿರಿಮಗಳು ನಿಧಿ ಕೂಡ ಅದೇ ಮನೆಯ ಹಿರಿಮಗಳಾಗಿ ತಂಗಿಗೆ ಜೊತೆಯಾಗಲಿದ್ದಾಳೆಂಬ ವಿಷಯ ತಿಳಿದು ನಮಗೀಗ ನಮ್ಮ ಮಕ್ಕಳ ಬಗ್ಗೆಗಿದ್ದ ಚಿಂತೆ ಇಲ್ಲದಂತಾಗಿದೆ. 

ಗುರುಗಳ ಪ್ರಕಾರ ನಮ್ಮ ಮಕ್ಕಳಿಬ್ಬರು ಯಾವ ತಂದೆ ತಾಯಿಯ ಮಡಿಲಿಗೆ ಮಕ್ಕಳಾಗಿ ಸೇರುವರೋ ಅವರಿಂದ ನಾವು ಮತ್ತು ನಮ್ಮ ಶ್ರೀಮತಿಯವರೂ ಸಹ ನೀಡಲಾಗದಷ್ಟು ಪ್ರೀತಿ...ವಾತ್ಸಲ್ಯ ಮಮತೆ ಪಡೆದುಕೊಳ್ಳಲಿದ್ದಾರೆಂದು ತಿಳಿಸಿದರು. ನಿಮ್ಮಲ್ಲಿ ನನ್ನದು ಒಂದೇ ಒಂದು ನಿವೇದನೆ ನೀವು ನಮ್ಮ ಮಕ್ಕಳಿಗೆ ತಂದೆ ತಾಯಿಯ ಸ್ಥಾನ ತುಂಬುವಿರಿ ತಿಳಿಯದೆ ಏನಾದರೂ ನಮ್ಮ ಮಕ್ಕಳಿಂದ ತಪ್ಪುಗಳು ಜರುಗಿದರೂ ಅವರನ್ನು ಬೈಯಲು ಹೋಗ್ಬೇಡಿ ಆದರೆ ತಿಳಿದೂ ತಪ್ಪು ಮಾಡಿದರೆ ತಿದ್ದಿ ಬುದ್ದಿ ಹೇಳಲು ಶಿಕ್ಷಿಸಬೇಕಾದ್ದು ತಾಯಿಯ ಕರ್ತವ್ಯವೂ ಹೌದು ತಂದೆಯ ಜವಾಬ್ದಾರಿ ಕೂಡ.

ತಾಯಿ ನೀವ್ಯಾರೋ ನನಗೆ ತಿಳಿದಿಲ್ಲ ಆದರೆ ಗುರುಗಳ ಪ್ರಕಾರ ಮುಂದೆ ಭವಿಷ್ಯದಲ್ಲಿ ನೀವು ನಮ್ ಮಕ್ಕಳಿಗೆ ತಾಯಿಯಾಗುವಿರಿ ಹಾಗಾಗಿ ತಾಯಿ ಜಗನ್ಮಾತೆಯ ಸಾಕ್ಷಿಯಾಗಿ ನಾವು ನಿಮ್ಮನ್ನು ನಮ್ಮ ತಂಗಿಯಾಗಿ ಸ್ವೀಕರಿಸುತ್ತಿದ್ದೀವಿ. ಅಣ್ಣನಾಗಿ ತಂಗಿಗೆ ಪ್ರೀತಿ ನೀಡಲು ಸಾಧ್ಯವಿಲ್ಲದ ಅಸಹಾಯಕನಾಗಿರುವ ಈ ಅಣ್ಣ ನಿಮಗೆ ಒಂದು ಜವಾಬ್ದಾರಿ ನೀಡುತ್ತಿದ್ದಾನೆ ದಯವಿಟ್ಟು ನೆರವೇರಿಸಿ. ಇದನ್ನು ಈ ಅಣ್ಣನ ಕಟ್ಟಕಡೆಯ ಆಸೂ ಎಂದುಕೊಂಡರೂ ಸರಿಯೇ. 

ನಾವು ವಹಿಸಲಿರುವ ಜವಾಬ್ದಾರಿಗಳ ಬಗ್ಗೆ ಹೇಳುವುದಕ್ಕೂ ಮುಂಚೆ ನಿಮಗೆ ಕೆಲವು ವಿಷಯಗಳನ್ನು ತಿಳಿಸಬೇಕಿದೆ. ಮೊದಲನೆಯದಾಗಿ ಸೂರ್ಯವಂಶಿ ಸಂಸ್ಥಾನಕ್ಕೆ ಸೇರಿದ ಸಮಸ್ತ ಆಸ್ತಿಗಳಿಗೂ ನಮ್ಮ ಯುವರಾಣಿಯರೇ ಯಜಮಾನಿಯರಾಗಿದ್ದರೂ ನಿಮ್ಮನ್ನು ಕೇಳದೆ ನಿಮ್ಮ ಒಪ್ಪಿಗೆಯಿಲ್ಲದೆ ಅವರು ಯಾವುದೇ ನಿರ್ಧಾರಗಳನ್ನೂ ಸಹ ತೆಗೆದುಕೊಳ್ಳುವುದಕ್ಕೆ ಸಾಧ್ಯವಿರುವುದಿಲ್ಲ. ನಮ್ಮ ಕಂಪನಿಗಳಲ್ಲಿನ ಯಾವುದೇ ವ್ಯವಹಾರಗಳಲ್ಲಾಗಲಿ ಸೂರ್ಯವಂಶಿ ಸಂಸ್ಥಾನಕ್ಕೆ ಸಂಬಂಧಿಸಿದಂತೆ ಎಂತಹುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ನಾವು ನಿಮಗೆ ನೀಡುತ್ತಿದ್ದೇವೆ. 

ಇದು ಕೇವಲ ಬಾಯಿ ಮಾತಿನಲ್ಲಿ ಹೇಳುತ್ತಿರುವುದಲ್ಲ ನಾವು ಅರಮನೆಗೆ ಮರಳಿದ ನಂತರ ಇದನ್ನು ನಮ್ವ ಸಂಸ್ಥಾನದ ಆಸ್ತಿಗಳಿಗೆ ಸಂಬಂಧಿಸಿದಂತೆ ಮಾಡಿಸಲಿರುವ ಉಯಿಲಿನಲ್ಲೂ ನಮೂದಿಸುತ್ತಿರುವೆವು. ನಮ್ವ ಪೂಜನೀಯ ಗುರುಗಳು ಈಗ ಕೆಲ ಹೊತ್ತಿಗೂ ಮುಂಚೆ ನಮ್ಮಿಬ್ಬರು ಯುವರಾಣಿಯರಿಗೆ ತಂದೆ ತಾಯಿಯ ಪ್ರೀತಿ ನೀಡಲಿರುವ ಇಬ್ಬರು ದಂಪತಿಗಳ ಹೆಸರನ್ನೂ ಸಹ ನಮಗೆ ತಿಳಿಸಿದ್ದಾರೆ ಅದೇ ಹೆಸರಿನ ಪ್ರಕಾರವೇ ನಾವು ವಿಲ್ ಮಾಡಿಸಲಿದ್ದೇವೆ. ಈಹಲೋಕದ ಯಾತ್ರೆ ಮುಗಿಸಿ ತೆರಳುತ್ತಿರುವ ನಾವು ಜೀವನದಲ್ಲಿ ಎಂದೆಂದಿಗೂ ಒಮ್ಮೆ ಕೂಡ ಬೇಟಿಯಾಗದಿರುವ ತಂಗಿಯ ನಾಮಧೇಯ ಶ್ರೀಮತಿ ನೀತು ಮತ್ತು ನಮ್ಮ ಭಾವ ಅಂದರೆ ನೀತುವಾನ ಯಜಮಾನರ ಹೆಸರು ಶ್ರೀಯುತ ಹರೀಶ ಅಂತ ಇದು ಗುರುಗಳಿಂದ ತಿಳಿಯಿತು.

ನೀತು ಇದನ್ನೋದಿ ಶಾಕಾಗಿ ಗಂಡನನ್ನು ನೋಡಿದರೆ ಆತನಿಗೂ ಸಹ ತುಂಬಾನೇ ಶಾಕಾಗಿದ್ದು ಹೆಂಡತಿಯತ್ತ ನೋಡಿ ಇಬ್ಬರೂ ಗುರುಗಳ ಕಡೆ ತಿರುಗಿದರು. ಮುಂದೆ ಓದಮ್ಮ ಮನಸ್ಸಿನಲ್ಲಿರುವ ಪ್ರಶ್ನೆಗಳಿಗೆ ನಂತರ ಉತ್ತರಿಸುವುದಾಗಿ ಹೇಳಿದರು.

ಪತ್ರದ ಸಾರಾಂಶ ಮುಂದುವರಿಯುತ್ತ.......

ನಮ್ಮಿಬ್ಬರ ಸಂಬಂಧವೇ ಎಷ್ಟು ವಿಚಿತ್ರವಾಗಿದೆ ಅಲ್ಲವೇನಮ್ಮ ನೀತು ನಿನ್ನನ್ನು ನಾವು ತಂಗಿಯೆಂದು ಜಗನ್ಮಾತೆ ಆಧಿಶಕ್ತಿಯ ಸಮಕ್ಷಮ ಸ್ವೀಕರಿಸಿದ್ದರೂ ನಾವಿಬ್ಬರೂ ಒಬ್ಬರನ್ನೊಬ್ಬರು ನೋಡಿಯೇ ಇಲ್ಲ. ಮುಂದೊಂದು ದಿನ ನೀನು ಅಣ್ಣನ ಫೋಟೋ ನೋಡುವೆ ಆದರೆ ನಿನ್ನ ಫೋಟೋ ನೋಡುವ ಸೌಭಾಗ್ಯವೂ ನಮಗಿಲ್ಲ. ನಮ್ಮಂತಹ ನತದೃಷ್ಟ ತಂದೆ..ಅಣ್ಣ ಈ ಪ್ರಪಂಚದಲ್ಲಿ ಇನ್ನೊಬ್ಬರಿರಲು ಸಾಧ್ಯವಾ. ಇದರ ಬಗ್ಗೆ ಬರೆಯುತ್ತಾ ಹೋದರೆ ಒಂದು ಗ್ರಂಥವೇ ಆಗಬಹುದು ಇದನ್ನೆಲ್ಲಾ ಬದಿಗೊತ್ತಿ ಮುಖ್ಯ ವಿಷಯದ ಕಡೆ ಗಮನವಿಡೋಣ.

ಸೂರ್ಯವಂಶಿ ಸಂಸ್ಥಾನ...ಸೂರ್ಯವಂಶಿ ಕಂಪನಿಗಳಿಗೆ ಸಂಬಂಧ ಪಟ್ಟಿರುವಂತೆ ನೀನ್ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಹಕ್ಕುದಾರಳಾಗಿರುತ್ತೀಯ. ನಮ್ಮ ಯುವರಾಣಿಯರೇ ಸಮಸ್ತ ಆಸ್ತಿ ಪಾಸ್ತಿಗಳಿಗೆ ಒಡತಿಯರಾಗಿದ್ದರೂ ಅದನ್ನು ಪರಭಾರೆ ಮಾಡುವ ಅಥವ ಮಾರಾಟ ಮಾಡುವುದಕ್ಕಾಗಲಿ ನಿನ್ನ ಹಾಗು ಹರೀಶ ಇಬ್ಬರ ಒಪ್ಪಿಗೆಯಿಲ್ಲದೆ ಸಾಧ್ಯವಾಗುವುದಿಲ್ಲ. ಸೂರ್ಯವಂಶಿಗಳ ಸಮಸ್ತ ಆಸ್ತಿಯನ್ನು ನಾವು ನಮ್ಮ ಮಕ್ಕಳಿಬಬರ ಹೆಸರಿಗೆ ವರ್ಗಾಯಿಸಲು ಅನುಕೂಲವಾಗುವಂತೆ ಉಯಿಲು ಬರೆಸುತ್ತಿದ್ದರೂ ಅವರಿಗೆ 25 ವರ್ಷ ತುಂಬುವವರೆಗೂ ಸಮಸ್ತ ಆಸ್ತಿಗಳು ಹಾಗು ಕಂಪನಿಗಳಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಕ್ಕೆ ನೀನು ಹಕ್ಕುದಾರಳು ಎಂಬುದಕ್ಕೆ ಬೇಕಾಗಿರುವ ಪವರ್ ಆಫ್ ಅರ್ಟಾನಿ ಬರೆಸಿ ರಿಜಿಸ್ಟರ್ ಕೂಡ ಮಾಡಿಸಲಿದ್ದೀವಿ. 

ನಿಧಿಗೆ 25 ವರ್ಷಗಳಾದ ನಂತರ ಅವಳಿಗೆ ಯಾವ್ಯಾವ ಅಧಿಕಾರಗಳು ಸಿಗುತ್ತೆಂಬುದರ ಬಗ್ಗೆ ಉಯಿಲಿನಲ್ಲಿ ವಿವರವಾಗಿ ಬರೆಸುತ್ತೇವೆ. ಆದರೆ ನಮ್ಮ ಹಿರಿಮಗಳು ಸಾತ್ವಿಕ ಪ್ರವೃತ್ತಿಯವಳು ತುಂಬಾ ಕೋಪಾವೇಶವೂ ಇದೆ ಆದರೆ ಅದನ್ನೆಲ್ಲ ನಿಯಂತ್ರಿಸಿಕೊಳ್ಳುವ ಕಲೆಯೂ ಅವಳಿಗೆ ಒಲಿದಿದೆ. ಇನ್ನು ನಮ್ಶ ಕಿರಿಯ ಮಗಳ ಬಗ್ಗೆ ಹೇಳುವುದಾದರೂ ಏನು ಅವಳಿಗಿನ್ನೂ ನಾವೇ ಅವಳ ತಂದೆ ಎಂಬುದೂ ಸಹ ತಿಳಿಯದಿರುವ ಹಸುಗೂಸು ನಮ್ಮ ಕಂದಮ್ಮ. ನೀತು—ಹರೀಶ ನಮ್ಮಿಬ್ಬರು ಮಕ್ಕಳನ್ನು ನಾವು ನಿಮ್ಮ ಮಡಿಲಿನಲ್ಲಿ ಬಿಟ್ಟು ನೀವು ಅವರಿಬ್ಬರನ್ನೂ ಜೀವನ ಪರ್ಯಂತವೂ ಕಾಪಾಡುವಿರೆಂಬ ನಂಬಿಕೆ ಹೊತ್ತು ನಾವೀ ಸಾವಿನ ಲೋಕದಿಂದ ಹೋಗುತ್ತಿದ್ದೇವೆ. ನಮ್ಮ ಸಾವು ಸನಿಹದಲ್ಲಿದೆ ಎಂಬುದನ್ನು ನಮ್ಮ ಗುರುಗಳು ತಿಳಿಸಿ ದೊಡ್ಡ ಉಪಕಾರವನ್ನೇ ಮಾಡಿದ್ದಾರೆˌ ಅದನ್ನು ತಿಳಿದುಕೊಂಡಿರುವುದರಿಂದಲೇ ನಾವು ನಮ್ಮ ಸಮಸ್ತ ಆಸ್ತಿಗಳನ್ನು ಸುಭದ್ರವಾಗಿ ನಮ್ಮ ಮಕ್ಕಳಿಬ್ಬರಿಗೂ ಸೇರಿವಂತೆ ಉಯಿಲನ್ನು ಬರೆಸಲು ಸಹಕಾರಿಯಾಗುತ್ತಿದೆ.

ಈಗ ಮತ್ತೊಂದು ಮುಖ್ಯವಾದ ವಿಷಯ ಅದೇನೆಂದರೆ ಸಂಸ್ಥಾನಕ್ಕೆ ವಿರೋಧಿಗಳಿಗೇನೂ ಕಡಿಮೆಯಿಲ್ಲ ಹಾಗೆಯೇ ನಮಗೆ ನಿಷ್ಠಾವಂತ ರಕ್ಷಕರೂ ಅವರೆಲ್ಲರನ್ನೂ ಏದುರಿಸಲು ಸಮರ್ಥರಾಗಿರುವವರು. ಷಂಷೇರ್ ಸಿಂಗ್ ರಾಣಾ ಹೆಸರಿನಲ್ಲೇ ಯಾರೋ ದೊಡ್ಡ ಯೋಧ ಅನಿಸುತ್ತಲ್ಲವಾ ಅವನು ನಿಜವಾಗಿಯೂ ಯೋಧನೇ ಆದರೆ ನಮ್ಮ ಮಹಾರಾಣಿಯ ಮುಂದೆ ಬೆದರಿದ ಬೆಕ್ಕಿನ ಮರಿಯಂತೆ ಇರುತ್ತಾನೆ ಅವರಿಬ್ಬರದ್ದು ತಾಯಿ ಮಗನಂತಾ ಅವಿನಾಭಾವ ಸಂಬಂಧವೇ. 

ಅವನ ಜೊತೆಗಾರರ ಗುಂಪು ಕೂಡ ತುಂಬ ದೊಡ್ಡದೇ ಅವನ ತಮ್ಮ ವೀರ್ ಸಿಂಗ್ ರಾಣಾ...ಅಜಯ್ ಸಿಂಗ್..ಬಷೀರ್ ಖಾನ್ ಇವರೇ ಪ್ರಮುಖರು. ಕೆಲವು ವರ್ಷಗಳ ಹಿಂದೆ ಅದೇನು ನಡೆಯಿತೆಂಬುದು ನಮಗೆ ತಿಳಿದಿಲ್ಲ ಆದರೆ ರಾಣಾನಿಗೆ ಅವನ ತಾಯಿ ಸ್ಥಾನದಲ್ಲಿರುವ ಮಹಾರಾಣಿ ಅಜ್ಞಾತವಾಸಕ್ಕೆ ತೆರಳುವಂತೆ ಆದೇಶ ನೀಡಿ ಕಳಿಸುವ ಮುಂಚೆ ತಾವೇ ಕರೆಸಿಕೊಳ್ಳುವುದಾಗಿ ಹೇಳಿದ್ದರು. ಆದರೆ ನಮಗೆ ಅವನ ಅವಶ್ಯಕತೆ ಅತ್ಯಧಿಕವಾಗಿದ್ದ ಸಮಯದಲ್ಲಿ ನಾವವನನ್ನು ಕರೆಸಿಕೊಂಡಿರಲಿಲ್ಲ ಆದರೆ ನೀತು ಮುಂದಿನ ಹಾದಿಯುದ್ದಕೂ ಬರಿ ಮುಳ್ಳುಗಳಿವೆ ನಾವು ಮಾಡಿದ ತಪ್ಪನ್ನು ಮಾಡದೆ ಆದಷ್ಟು ಬೇಗನೇ ರಾಣಾ ಅರಮನೆಗೆ ಮರಳುವಂತೆ ಮಾಡು ಅದಕ್ಕೆ ನಿಧಿ ಸಹಾಯ ಮಾಡಬಲ್ಲಳು. 

ವಿಕ್ರಂ ಸಿಂಗ್ ಅವನ ತಮ್ಮ ಸುಮೇರ್ ಸಿಂಗ್ ಮತ್ತು ದಿಲೇರ್ ಸಿಂಗ್ ಅತ್ಯಂತ ಸಾಹಸಿ ಮತ್ತು ತುಂಬ ವಿಶ್ವಾಸಪಾತ್ರರಾದ ನಮ್ಮವರು. ಈ ಏಳು ಜನರಿಗೂ ನಮಗೂ ಯಾವುದೇ ರೀತಿಯ ರಕ್ತ ಸಂಬಂಧವೇ ಇಲ್ಲದಿದ್ದರೂ ನಾವು ಅವರನ್ನೆಲ್ಲಾ ನಮ್ಮ ಒಡ ಹುಟ್ಟಿರುವ ತಮ್ಮಂದಿರೆಂದೇ ಭಾವಿಸಿದ್ದೇವೆ ಆದರೆ ಅವರೆದುರಿಗೆ ಇದನ್ನು ತೋರ್ಪಡಿಸುತ್ತಿರಲಿಲ್ಲ ಏಕೆಂದರೆ ಮಹಾರಾಜನಾಗಿರುವ ವ್ಯಕ್ತಿಗೆ ತನ್ನದೇ ಆದ ಕಟ್ಟುಪಾಡುಗಳಿರುತ್ತವೆ. ಆದರೆ ನೀನು ಈ ಎಲ್ಲಾ ಪರಂಅರೆಗಳನ್ನು ಮುರಿದು ನಮ್ಶ ಯುವರಾಣಿಯರಿಬ್ಬರೂ ಜನ ಸಾಮಾನ್ಯರಲ್ಲಿ ತಮ್ಮನ್ನೂ ಒಬ್ಬರನ್ನಾಗಿ ಗುರುತಿಸಿಕೊಳ್ಳುವ ರೀತಿ ಬೆಳೆಸಬೇಕೆಂಬುದು ನಮ್ಶ ಕೋರಿಕೆ.

ಸೂರ್ಯವಂಶಿ ಸಂಸ್ಥಾನವನ್ನು ಮುಂದಿನಿಂದ ಏದುರಿಸಿ ನಿಲ್ಲಲು ಯಾರಿಗೂ ಸಾಧ್ಯವಿಲ್ಲ ಆದರೆ ನಮ್ಮ ಜೊತೆಯಲ್ಲಿ ಇದ್ದುಕೊಂಡೇ ಹಿಂದಿನಿಃದ ಪ್ರಹಾರ ಮಾಡುವವರ ಸಂಖ್ಯೆ ಕಡಿಮೆಯೇನಿಲ್ಲ. ಇದೆಲ್ಲ ಗೊತ್ತಿದ್ದರೂ ಸಹ ಅವರುಗಳನ್ನು ಗುರುತಿಸಲು ನಮ್ಮಿಂದ ಯಾಕೋ ಸಾಧ್ಯವಾಗಲಿಲ್ಲ. ನಮ್ಮ ರಾಜ್ಯದ ಅಧಿಕಾರ ಚುಕ್ಕಾಣಿಯಲ್ಲಿರುವ ಕೆಲವರು ಇದರಲ್ಲಿ ಶಾಮೀಲಾಗಿದ್ದಾರೆಂದು ಗೊತ್ತಿದೆ ಅವರಿಗೆ ಇನ್ನು ಕೆಲವರು ಬೆಂಬಲಿಸುತ್ತಿದ್ದಾರೆಂದೂ ಗೊತ್ತು ಆದರೆ ಖಚಿತವಾಗಿಯೂ ಇವರೇ ಎಂದು ಗುರುತಿಸಲು ಸಾಧ್ಯವಾಗುತ್ತಿಲ್ಲ. ನೀನು ಮಾತ್ರ ಅವರನ್ನು ಗುರುತಿಸುವುದಷ್ಟೆ ಅಲ್ಲ ಅವರೆಲ್ಲರಿಗೂ ಶಿಕ್ಷೆ ನೀಡುವೆ ಅಂತ ಗುರುಗಳು ತಿಳಿಸಿದ್ದಾರೆ. ಇಲ್ಲಿಯೂ ನನ್ನದೊಂದು ಕೋರಿಕೆ ಅವರಲ್ಯಾರನ್ನೂ ಜೀವಂತವಾಗಿ ಉಳಿಸಬೇಡ ಇದರ ಬಗ್ಗೆ ನಿನಗೆ ಎಚಚರವಿರಲಿ. ಇದನ್ನೆಲ್ಲಾ ಕಾರ್ಯರೂಪಕ್ಕೆ ತರಲು ಏಳು ಜನ ಯಮಕಿಂಕರರನ್ನು ಮೊದಲೇ ಹೆಸರಿಸಿದ್ದೀನಿ ಅವರಲ್ಲಿ ರಾಣಾನೇ ದೊಡ್ಡ ಯಮರಾಕ್ಷಸ.

ಸೂರ್ಯವಂಶಿ ಸಂಸ್ಥಾನದ ಅತ್ಯಂತ ದೊಡ್ಡ ಶತ್ರು ಎಂದರೆ ಅದು ಯಶೋಮತಿ. ಇವಳ ಜನನವೇ ಒಂದು ಅಸಹ್ಯಕರ ಅನೈತಿಕವಾದ ಸಂಬಂಧದ ಪ್ರತಿರೂಪ. ನಮ್ಮ ತಂದೆಯವರ ತಂಗಿ ಚಂಚಲಾದೇವಿ ಮತ್ತು ತಮ್ಮನಾದ ಭಾನುಪ್ರತಾಪ್ ಅಂದರೆ ನಮ್ಮ ಚಿಕ್ಕಪ್ಪ ಮತ್ತು ಸೋದರತ್ತೆ. ಸ್ವಂತ ಅಕ್ಕ ತಮ್ಮನ ನಡುವಿನ ಅನೈತಿಕ ಸಂಬಂಧದ ಪ್ರತಿಫಲವಾಗಿ ಜನಿಸಿದವಳೇ ಈ ಯಶೋಮತಿ ಅತ್ಯಂತ ನಿರ್ದಯಿ ಮತ್ತು ಕ್ರೂರಿ ಹೆಣ್ಣು. ಬಹುಶಃ ಇತಿಹಾಸದಲ್ಲೂ ಇವಳಷ್ಟು ನಿಕೃಷ್ಟ ಮತ್ತು ಕ್ರೂರಿ ಹೆಣ್ಣಿನ ಉಲ್ಲೇಖವಿಲ್ಲ ಅಂದುಕೊಳ್ತೀನಿ. ನಾವು ಸಾಯುವ ಮುನ್ನ ಇವಳನ್ನೇ ಬೇಟೆಯಾಡಲು ತೆರಳಬೇಕು ಅಂತ ಅಂದುಕೊಂಡಿದ್ದೆವು ಆದರೆ ಹಸುಗೂಸೊಬ್ಬಳನ್ನೇ ಅರಮನೆಯಲ್ಲಿ ಬಿಟ್ಟು ಹಿರಿಯ ಮಗಳನ್ನು ನೋಡಲು ಆಮ್ರಕ್ಕೆ ಬಂದಿರುವುದಕ್ಕೇ ನಾವು ನೊಂದುಕೊಳ್ಳುತ್ತಿದ್ದೇವೆ ಇನ್ನು ಯಶೋಮತಿಯ ಹಿಂದೆ ಹೋಗಲಾರೆವು. 

ಇವಳು ಮಹಾನ್ ಚತುರೆ ಯಾವ ವೇಷದಲ್ಲಿ ಯಾವಾಗ ಎಲ್ಲಿರುತ್ತಾಳೆಂದು ಯಾರಿಗೂ ತಿಳಿಯಲಾಗುವುದೇ ಇಲ್ಲ ಅಂತಹ ಚಾಲಾಕಿ ಹೆಣ್ಣು. ಇವಳ ಬಗ್ಗೆ ನಮಗೊಂದು ಸುಳಿವು ಸಿಕ್ಕಿದೆ ಅದನ್ನೇ ನಾವಿಲ್ಲ ಉಲ್ಲೇಖಿಸುತ್ತಿದ್ದೇವೆ. ಹಿಮಾಚಲ ಪ್ರದೇಶದಲ್ಲಿನ ಮನಾಲಿ ಎಂಬ ಊರಿನಲ್ಲಿರುವ ಹಿಡಂಬಾ ದೇವಿ ಮಂದಿರದ ಅರ್ಚಕರನ್ನು ವಿಚಾರಿಸಾದರೆ ಇವಳ ವಿಳಾಸ ಗೊತ್ತಾಲಿದೆ ಎಂದು ಮಾಹಿತಿ ಮೂರು ದಿನಗಳ ಹಿಂದಷ್ಟೇ ತಿಳಿಯಿತು. ಇವಳನ್ನು ಮಾತ್ರ ಜೀವಂತವಾಗಿ ಉಳಿಸಲೇಬಾರದು ಇವಳು ಬದುಕಿರುವವರೆಗೂ ನಮ್ಮ ಮಕ್ಕಳಿಗೆ ಅಪಾಯ ತಪ್ಪಿದ್ದಲ್ಲ.

ಈಗ ಯಾರಿಗೂ ತಿಳಿಯದಿರುವ ಒಂದು ರಹಸ್ಯ ಬರೆಯುತ್ತಿರುವೆ ಇದರ ಬಗ್ಗೆ ಗುರುಗಳಿಗೂ ತಿಳಿದಿದೆ ಆದರೆ ಅವರಿದ್ದನ್ನು ನಿನಗೆಂದೂ ಸಹ ತಿಳಿಸುವುದಿಲ್ಲವೆಂಬುದೂ ನಮಗೆ ಗೊತ್ತಿದೆ. ನಮ್ಮ ತಂದೆಗೆ ನಾವು ಏಕೈಕ ಸಂತಾನ ಎಂದೇ ಎಲ್ಲರೂ ತಿಳಿದಿರುತ್ತಾರೆ ಬಾಗಶಃ ಅದು ಸತ್ಯವೂ ಹೌದು ಏಕೆಂದರೆ ನಮ್ಮ ತಾಯಿಗೆ ಜನಿಸಿದ ಏಕೈಕ ಸುಪುತ್ರರು ನಾವೇ. ಆದರೆ ನಮ್ಮ ತಂದೆಯವರಿಗೆ ಮತ್ತೊಬ್ಬರ ಜೊತೆ ಪ್ರೀತಿಯ ಬೆಸುಗೆಯಿತ್ತು ಅವರಿಂದಲೂ ಒಬ್ಬ ಮಗನಿರುವ ವಿಷಯದ ಬಗ್ಗೆ ಬೇರಾರಿಗೂ ಗೊತ್ತಿಲ್ಲ. 

ನಾನು ರಾಮನಲ್ಲದಿದ್ದರೂ ಅವನು ಮಾತ್ರ ನನ್ನ ಲಕ್ಷ್ಮಣನೇ ನಾನೆಂದರೆ ಅಷ್ಟು ಗೌರವ ಪ್ರೀತಿ ಇನ್ನು ನಮ್ಮ ಮಡದಿಯನ್ನು ಕಂಡರೆ ಸ್ವಂತ ತಾಯಿಯ ರೀತಿಯೇ ನೋಡಿಕೊಳ್ಳುತ್ತಿದ್ದ. ಈ ಪ್ರಪಂಚದಲ್ಲಿ ಹಣ ಮತ್ತು ಜನ ಇವೆರಡು ನಮ್ಮ ಬಳಿಯಿದ್ದರೆ ಏನನ್ನಾದರೂ ಸಾಧಿಸಬಹುದೆಂದು ನಾವೆಲ್ಲರು ತಿಳಿದುಕೊಂಡಿರುತ್ತೇವೆ. ಆದರೆ ಇವೆರಡಕ್ಕಿಂತ ಎತ್ತರದಲ್ಲಿರುವುದೇ ಅಧಿಕಾರ ರಾಜಸ್ವ ನಮಗೆ ನೀಡುವ ಅಧಿಕಾರ ಅದೊಂದು ನಮ್ಮ ಬಳಿಯಿದ್ದರೆ ಹಣವೂ ದೊರಕುತ್ತೆ ಜೊತೆಗೆ ಜನರೂ ಇರುತ್ತಾರೆ. ನನ್ನ ತಮ್ಮ ಈ ದೇಶದ ಅತ್ಯಂತ ಪ್ರಭಾವಿ ಹಾಗು ಅಧಿಕಾರ ಶಾಹಿಯಲ್ಲಿ ಅತ್ಯುನ್ನತವಾದ ಸ್ಥಾನದಲ್ಲಿ ಕುಳಿತಿದ್ದಾನೆ. 

ಅವನ ಹೆಸರೇ ನಿನಗೆ ಹೇಳಿಲ್ಲವಾ " ವರ್ಧನ್ ಸಿಂಗ್ ರಜಪೂತ್ " ಊಹೆ ನಿಜವೇ ಈ ದೇಶದಲ್ಲಿರುವ ಕೇಂದ್ರ ಸರ್ಕಾರದ ಅತ್ಯಂತ ಪ್ರಭಾವಿ ನಾಯಕ ಮತ್ತು ನಮ್ಮ ದೇಶದ ಉಪಪ್ರಧಾನಿ ಹಾಗು ಗೃಹ ಸಚಿವ ನನ್ನ ತಮ್ಮ ನನ್ನ ಲಕ್ಷ್ಮಣ ನನ್ನ ಮಡದಿಯ ಪ್ರೀತಿಯ ವರ್ಧಿ. ಆತ ಹಲವಾರು ಸಲ ಅರಮನೆಗೆ ಬಂದಿದ್ದಾನೆ ಆದರೆ ಯಾರೊಬ್ಬರಿಗೂ ನಮ್ಮಿಬ್ಬರ ನಡುವಿನ ಸಂಬಂಧವೇನೆಂದು ತಿಳಿದಿಲ್ಲ. ಈ ಕವರಿನಲ್ಲಿ ಅವನು ನಮ್ಮ ಜೊತೆ ನಮ್ಮ ಮಡದಿಯೂ ಇದ್ದು ಪುಟಾಣಿ ನಿಧಿ ಆತನೇ ಎತ್ತಿಕೊಂಡಿರುವ ಫೋಟೋ ಸಹ ಇದೆ. ನಮ್ಮ ತಮ್ಮನ ಬಳಿ ಒಂದು ಫೋನಿದೆ ಅದರ ನಂ..xxx.... ಇದ್ಯಾವತ್ತಿಗೂ ಆಫ್ ಆಗಿರುವುದಿಲ್ಲ ಜೊತೆಗೆ ಇದರ ನಂ...ನಮಗೆ ನಮ್ಮ ಮಡದಿಗೆ ಬಿಟ್ಟರೆ ಮೂರನೇ ವ್ಯಕ್ತಿಗೆ ಗೊತ್ತಿಲ್ಲ. 

ನೀತು ನೀನೊಂದು ಕೆಲಸ ಮಾಡಬೇಕಮ್ಮ ನಮ್ಮ ತಮ್ಮನ ನಂಬರಿಗೆ ಆ ಫೋಟೋ ಕಳುಹಿಸಿಕೊಡು ಅವನಾಗಿಯೇ ನಿಮ್ಮನ್ನು ಸಂಪರ್ಕಿಸುತ್ತಾನೆ ಯಾವುದೇ ಸರ್ಕಾರಿ ಕೆಲಸಗಳಿದ್ದರೂ ಆತ ನೊಡಿಕೊಳ್ತಾನೆ ಆದರೆ ಪ್ರಪಂಚದೆದುರಿಗೆ ನಿಮ್ಮೊಂದಿಗೆ ಆತ ಎಂದಿಗೂ ಕಾಣಿಸಿಕೊಳ್ಳುವುದಿಲ್ಲ ಇದು ಅಣ್ಣ ತಮ್ಮನ ನಡುವಿನ ಅಲಿಖಿತವಾದ ರಹಸ್ಯ ಒಪ್ಪಂದ ಅಂತಲೇ ತಿಳಿದುಕೋ. ನಮ್ಮಿಬ್ಬರು ರಾಜಕುಮಾರಿಯರಿಗೆ ತಂದೆಯಾಗಿ ನಾವು ಪ್ರೀತಿಸಲಾಗಲಿಲ್ಲ ಕಡೇ ಪಕ್ಷ ನಮ್ಮ ತಮ್ಮನಿಗಾದರೂ ತಾನು ಚಿಕ್ಕಪ್ಪನಾಗಿರುವ ಪ್ರೀತಿಯನ್ನು ಅವರಿಬ್ಬರಿಗೂ ನೀಡುವಂತಾಗಲಿ ಎಂಬುದೇ ನಮ್ಮಾಸೆ.

ಕೊನೆಯದಾಗಿ ನೀವು ದಂಪತಿಗಳು ಕಾಮಾಕ್ಷಿಪುರದಲ್ಲಿ ವಾಸಿಸುವ ಬಗ್ಗೆಯೂ ಗುರುಗಳು ಹೇಳಿದ್ದಾರೆ ಜೊತೆಗೆ ಊರನ್ನು ವಿದ್ಯಾದೇವಿ ಸರಸ್ಪತಿಯ ಆಲಯವೆಂದೂ ಕರೆಯುತ್ತಾರೆಂಬುದು ಸಹ ತಿಳಿಯಿತು. ನಮ್ಮ ಮಹಾರಾಣಿಯವರಿಗೊಂದು ಮಹತ್ವಾಕಾಂಕ್ಷೆಯಿತ್ತು ದೇಶದ ತುಂಬ ಬಡವರಾಗಿದ್ದರೂ ಪ್ರತಿಭಾವಂತ ವಿಧ್ಯಾರ್ಥಿಗಳು ಯಾವುದೇ ರೀತಿ ಶುಲ್ಕವನ್ನೂ ಭರಿಸದೆ ಒಂದನೇ ತರಗತಿಯಿಂದ ಅತ್ಯುನ್ನತ ಪದವಿ ತನಕವೂ ಓದಲು ಅನುಕೂಲವಾಗುವಂತಹ ವಿದ್ಯಾದಾನ ಮಾಡುವ ಮಂದಿರಗಳನ್ನು ಸ್ಥಾಪನೆ ಮಾಡಬೇಕೆಂದು. 

ಅವರಾಸೆ ನೆರವೇರಿಸಲು ನಮ್ಮಿಂದಾಗ ಸಾಧ್ಯವಾಗಿರಲಿಲ್ಲ ಆದರೆ ಅದಕ್ಕಾಗೇ ದೇಶದ ಮೂರು ಕಡೆ ಜಾಗಗಳನ್ನು ಖರೀಧಿ ಮಾಡಿದ್ದೇವೆ. ನಮ್ಮ ಸ್ವಂತ ಊರು ಉದಯಪುರ....ಹೃಷಿಕೇಶ ಮತ್ತು ನಿಮ್ಮ ಊರಾದ ಕಾಮಾಕ್ಷಿಪುರದಲ್ಲಿ ತಲಾ 900 ಎಕರೆಗಳಷ್ಟು ಜಾಗಗಳನ್ನು ನಮ್ಮ ಸಂಸ್ಥಾನದ ಹೆಸರಿನಲ್ಲಿ ಖರೀಧಿಸಿ ನೊಂದಣಿ ಮಾಡಿಸಿರುತ್ತೇವೆ. ಆ ಜಾಗಗಳಲ್ಲಿ ವಿದ್ಯಾ ಮಂದಿರಗಳನ್ನು ಸ್ಥಾಪಿಸಬೇಕೆಂಬುದೇ ನಮ್ಮ ಉದ್ದೇಶ ಅದನ್ನು ನೀನು ನೆರವೇರಿಸುತ್ತೀಯೆಂಬ ಭರವಸೆ ನನಗಿದೆ. ಅದಕ್ಕಾಗಿ ಸರ್ಕಾರದಿಂದ ಆಗಬೇಕಿರುವ ಎಲ್ಲಾ ಕೆಲಸಗಳನ್ನು ನಮ್ಮ ತಮ್ಮ ನೋಡಿಕೊಳ್ತಾನೆ ಅವನಿಗೂ ಈ ಪತ್ರ ಓದಲು ನೀಡಬೇಕು ಎಂದು ನಿನ್ನಲ್ಲಿ ವಿನಂತಿಸಿಕೊಳ್ಳುತ್ತೇವೆ. 

10—15 ತರೆಮಾರಿನವರು ಕುಳಿತು ರಾಜವೈಭೋಗದಿಂದ ಬಾಳ್ವೆ ಮಾಡಿದರೂ ಕರಗದಷ್ಟು ಸಂಪತ್ತಿನ ಒಡೆಯರು ನಾವು ಸೂರ್ಯವಂಶಿಗಳು ಆದರೆ ನಮ್ಮಷ್ಟು ಬಡವ ಬೇರಾರೂ ಇಲ್ಲ ಅಂತ ನಮ್ಮ ಭಾವನೆ. ನಾವು ತಂಗಿಯಾಗಿ ಸ್ವೀಕರಿಸಿದವಳನ್ನು ನೋಡಲಾಗ್ತಿಲ್ಲ ಮಕ್ಕಳ ಜೊತೆ ಸಂತೋಷದ ಸಮಯವನ್ನೂ ಕಳೆಯಲೂ ಆಗದಿರುವಷ್ಟು ನತದೃಷ್ಟರು ನಾವು ಹೋಗಲಿ ಬಿಡಮ್ಮ.

ಇನ್ನೊಂದು ಮುಖ್ಯವಾದ ವಿಷಯ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಹೊರ ದೇಶಗಳಲ್ಲಿಯೂ ನಮ್ಮ ಸಂಸ್ಥಾನದ ಅಧೀನದಲ್ಲಿರುವ ಹಲವಾರು ಐಷಾರಾಮಿ ಹೋಟೆಲ್ ಮತ್ತು ರೆಸಾರ್ಟುಗಳಿವೆ ಎಲ್ಲಾ ಒಟ್ಟಾಗಿ ಹೇಳಬೇಕೆಂದರೆ 760 ಕಡೆಗಳಲ್ಲಿವೆ. ಅವುಗಳನ್ನೆಲ್ಲಾ ನಿಭಾಯಿಸುವುದೇ ಒಂದು ದೊಡ್ಡ ತಲೆನೋವು ಅದಕ್ಕಾಗಿಯೇ ಅವುಗಳಲ್ಲಿ ಕೆಲವನ್ನು ಮಾತ್ರ ಉಳಿಸಿಕೊಂಡು ಮಿಕ್ಕಿದವುಗಳನ್ನು ಮಾರಾಟ ಮಾಡಿಬಿಡುವುದು ಒಳ್ಳೆಯದೆಂದು ನನ್ನ ಸಲಹೆ ಇದರ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಮುಂದಿನ ನಿರ್ಧಾರ ನೀನೇ ಮಾಡು.

ನಮ್ಮಿಬ್ಬರು ಮಕ್ಕಳನ್ನು ನಿಮ್ಶ ಮಡಿಲಿನಲ್ಲಿಟ್ಟು ನೀವಿಬ್ಬರು ಸಹ ಅವರನ್ನು ನಿಮ್ಮ ರಕ್ತ ಹಂಚಿಕೊಂಡು ಹುಟ್ಟಿರುವ ನಮ್ಮ ಸೋದರ ಅಳಿಯಂದಿರಂತೆಯೇ ಸಲಹುತ್ತೀರೆಂಬ ನಂಬಿಕೆಯಿಂದಲೇ ನಾವು ಪರಲೋಕಕ್ಕೆ ಪ್ರಾಸ್ತಾವನೆ ಮಾಡುತ್ತಿದ್ದೇವೆ. ಅವರು ನಮ್ಮ ಮಕ್ಕಳೇ ಆಗಿದ್ದರೂ ಅವರಿಗೆ ನಿಜವಾದ ತಂದೆ ತಾಯಿಯರು ನೀವಿಬ್ಬರೇ ಆಗಿರುತ್ತೀರಾ. ನಮ್ಮ ಕಿರಿಯ ರಾಜಕುಮಾರಿಗೆ ನಿಶಾ ಎಂಬುದಾಗಿ ಹೆಸರಿಡಬೆಕೆಂದು ನಾವು ಮಹಾರಾಣಿ ಇಬ್ಬರೂ ಯೋಚಿಸಿದ್ದೆವು ಅದೇ ಹೆಸರಿನಲ್ಲಿ ನಾಮಕರಣ ಮಾಡಬೇಕೆಂದು ಕೋರಿಕೊಳ್ಳುವ ನತದೃಷ್ಟ ತಂದೆ ಹಾಗು ಅಣ್ಣನಾದ......

ರಾಣಾ ಪ್ರತಾಪ್ ಸೂರ್ಯವಂಶಿ.

1 comment:

  1. ಅಬ್ಬಾ, ಕತೆಯಂತೂ ಅಧ್ಭುತವಾಗಿ ಸಾಗುತ್ತಿದೆ

    ReplyDelete