ಬುಧವಾರ.....
ಇಂದು ನೀತು ಯೋಚಿಸಿದಂತೆಯೇ ಎಲ್ಲಾ ಸೈಟುಗಳನ್ನು ಯಾರ ಹೆಸರುಗಳಿಗೆ ನೊಂದಣಿ ಮಾಡಿಸಬೇಕೆಂದುಕೊಂಡಿದ್ದಳೋ ಅದೇ ರೀತಿ ಎಲ್ಲವೂ ನಿರ್ವಿಜ್ಞವಾಗಿ ನೆರವೇರಿತು. ಸಂಜೆಯೇ ರಮೇಶನಿಗೆ ಬರಲು ಹೇಳಿದ ನೀತು ಎಲ್ಲಾ ಆರು 50x80 ಸೈಟುಗಳಲ್ಲಿ ಡುಪ್ಲೆಕ್ಸ್ ಮನೆಗಳನ್ನು ನಿರ್ಮಿಸಲು ಬೇಕಾದ ಪ್ಲಾನ್ ರೆಡಿಮಾಡಿಕೊಳ್ಳಲು ಹೇಳಿದಳು. ಮನೆ ನಕ್ಷೆಯ ಪಂಜೀಕರಣ....ಅಪ್ರೂವಲ್ ಎಲ್ಲವನ್ನೂ ನೀವೇ ಮಾಡಿಸಬೇಕೆಂದು ಆರ್ಕಿಟೆಕ್ಟ್ ರಮೇಶನಿಗೆ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಬಿಟ್ಟಳು.
ತಾವು ವಾಸಿಸುತ್ತಿರುವ ಮನೆ ಪಕ್ಕದ 80x120 ಸೈಟಿನಲ್ಲಿ ಅತ್ಯಾಧುನಿಕ ವ್ಯವಸ್ಥೆಗಳುಳ್ಳ ಸುಸಜ್ಜಿತ ನಾಲ್ಕು ಅಂತಸ್ಥಿನ ಮನೆ ನಿರ್ಮಿಸಲು ಕೆಲವು ಆರ್ಕಿಟೆಕ್ಚರಲ್ ಪ್ಲಾನ್ ಸಿದ್ದಪಡಿಸಿ ನಂತರ ಅದರಲ್ಲೇನು ಬದಲಾವಣೆ ಮಾಡಬೇಕೆಂದು ಹೇಳ್ತೀನೆಂದಳು. ಎಲ್ಲಾ ಮನೆಗಳನ್ನು ಕಟ್ಟಲು ಬೇಕಾಗಿರುವ ಹಣ ತನ್ನ ಹಾಗು ಹರೀಶನ ಜಂಟಿ ಖಾತೆಯಲ್ಲಿರುವುದಾಗಿ ತಾನೇ ಎಲ್ಲಾ ಕಟ್ಟಡಗಳ ಖರ್ಚು ವೆಚ್ಚಗಳನ್ನು ಕೊಡುವುದಾಗಿ ಇದರಲ್ಲಿ ಬೇರೆ ಯಾರೂ ತಲೆ ಹಾಕಬಾರದೆಂದು ಹೇಳಿಬಿಟ್ಟಳು.
* *
* *
ಆಗಸ್ಟ್ 24......
ಶನಿವಾರ ರಾತ್ರಿ.....
ಮನೆಯ ಲಿವಿಂಗ್ ಹಾಲಿನಲ್ಲಿ ಎಲ್ಲರೂ ಸೇರಿಕೊಂಡಿದ್ದು ನೆಲದಲ್ಲಿ ಮಲಗಿದ್ದ ಹರೀಶನ ಎದೆಯ ಮೇಲೆ ಕುಳಿತ ನಿಶಾ ಅಪ್ಪನ ಮೀಸೆ ಎಳೆದಾಡಿ ಆಟವಾಡುತ್ತ ಕಿಲಕಿಲನೇ ನಗುತ್ತಿದ್ದಳು.
ಹರೀಶ.......ಚಿನ್ನಿ ನಾಳೆ ನೀನು ಟಾಟಾ ಹೋಗ್ತಿದ್ದೀಯಲ್ಲಮ್ಮ ಕಂದ ನಿನ್ಜೊತೆ ಪಪ್ಪ ಬರೋದು ಬೇಡ್ವಾ ?
ನಿಶಾ.......ನಾನಿ ಮಮ್ಮ ತೊತೆ ಹೋತೀನಿ ಪಪ್ಪ.
ಹರೀಶ......ಪಪ್ಪ ಬೇಡ್ವಾ ಕಂದ.
ನಿಶಾ.....ಪಪ್ಪ ಬೇಕು ಪಪ್ಪ ನಂದು.
ಸುರೇಶ.....ಏಯ್ ಚಿಲ್ಟಾರಿ ನೀನು ಅಮ್ಮನ ಜೊತೆಯಲ್ಲೋಗು ಪಪ್ಪ ನಂದು ಗೊತ್ತಾಯ್ತಾ.
ನಿಶಾ.......ಪಪ್ಪ ನಂದು ನೋಲು ಪಪ್ಪ ಅಣ್ಣ ನಂಗಿ ಬೇತು. ಅಣ್ಣಗೆ ಏತ್ ಕೊಲು ಬೇಯಿ ಪಪ್ಪ.
ಅಪ್ಪ ಮಗಳಾಟ ನಡೆಯುತ್ತಿದ್ದು ಸುರೇಶ ತಂಗಿಯನ್ನು ರೇಗಿಸುತ್ತಾ ಆಡಿಸುತ್ತಿದ್ದರೆ ನಿಧಿ ಕೂಡ ಅಪ್ಪನನ್ನು ಸೇರಿಕೊಂಡು ಮಲಗಿದ್ದಳು. ನಾಳೆಯ ದಿನ ನೀತು ತನ್ನಿಬ್ಬರು ಹೆಣ್ಣು ಮಕ್ಕಳಾದ ನಿಧಿ—ನಿಶಾಳ ಜೊತೆ ತಂಗಿ ಅನುಷಾಳನ್ನೂ ಕರೆದುಕೊಂಡು ರಾಜಸ್ಥಾನದ ಕಡೆ ಹೊರಡುವವಳಿದ್ದಳು. ಇವರನ್ನು ಕರೆದೊಯ್ಯುವುದಕ್ಕಾಗಿ ರಾಣಾ ಮತ್ತು ಸುಮೇರ್ ಸಿಂಗ್ ಕಾಮಾಕ್ಷಿಪುರಕ್ಕೆ ಆಗಮಿಸಿಯಾಗಿತ್ತು.
* *
* *
ಆಗಸ್ಟ್ 25....
ಭಾನುವಾರ.....
ಬೆಳಿಗ್ಗೆ 9:00 ಘಂಟೆ.......
ಮನೆಯಲ್ಲಿ ಹಡಾವಿಡಿಯ ವಾತಾವರಣವಿದ್ದು ಸುಮ ಅತ್ತೆಯಿಂದ ತನಗಿಷ್ಟವಾದ ಇಡ್ಲಿಯನ್ನು ಬೆಣ್ಣೆಯಲ್ಲದ್ದಿ ತಿನ್ನಿಸಿಕೊಳ್ಳುತ್ತಿದ್ದ ನಿಶಾ ಅದಕ್ಕಿಂತ ಜಾಸ್ತಿ ಕ್ಯಾರೆಟ್ ಹಲ್ವಾ ಬೇಕೆನ್ನುತ್ತಿದ್ದಳು. ನಿಶಾ ಅಪ್ಪನ ಮಡಿಲಲ್ಲಿ ಕುಣಿದಾಡುತ್ತಿದ್ದರೆ ಗಿರೀಶ ತಂಗಿಯನ್ನು ಮುದ್ದಾಡುತ್ತಲೇ ಏನೇನೋ ಹೇಳುತ್ತಿದ್ದು ನಿಶಾ ಕೂಡ ತಲೆಯಾಡಿಸುತ್ತಿದ್ದಳು. ಪೂನಿ ತನ್ನ ತಂದೆ ತಾಯಿಯ ಜೊತೆ ಬಂದಾಗ......
ನಿಶಾ....ಪೂನಿ ನೀನಿ ಬಂದಿ ನಾನು ಮಮ್ಮ ತೊತೆ ಟಾಟಾ ಹೋತಿನಿ
ಪೂನಂ....ನಿಶಿ ನೀನಿ ಎಂತ ಬತೀಯ.
ನಿಶಾ......ನನ್ನಿ ತೊತಿಲ್ಲ ಮಮ್ಮ ತೊತೆ ಬತೀನಿ.
ಮಕ್ಕಳಿಬ್ಬರೂ ತಮ್ಮದೇ ಮಾತುಕತೆಯಲ್ಲಿದ್ದರೆ.......
ರಾಜೀವ್.....ನೀವೆಲ್ಲ ನೇರವಾಗಿ ಅರಮನೆಗೆ ಹೋಗೋದಾ ?
ರಾಣಾ......ಇಲ್ಲ ಸರ್ ಮಾತೆಯ ಆಜ್ಞೆಯಂತೆ ಮೊದಲು ನಾವೆಲ್ಲರು ಜೋಧಪುರಕ್ಕೆ ಹೋಗುತ್ತಿದ್ದೀವಿ.
ರೇವಂತ್......ಜೋಧಪುರಕ್ಕಾ ? ಅಲ್ಲೇನಿದೆ ರಾಣಾ ?
ರಾಣಾ.....ಅಲ್ಲಿಯೂ ಸಂಸ್ಥಾನಕ್ಕೆ ಸೇರಿದ ಚಿಕ್ಕ ಅರಮನೆಯಿದೆ. ನೆನ್ನೆ ರಾತ್ರಿ ಆರಾಧನ ಮತ್ತವಳ ಕುಟುಂಬದವರನ್ನು ಪುಷ್ಕರದಿಂದ ಅಲ್ಲಿಗೆ ಕರೆತರಲಾಗಿದೆ ಅದಕ್ಕೀಗ ನಾವಲ್ಲಿಗೆ ಹೋಗ್ತಿರೋದು.
ನೀತು ಕೆಳಗೆ ಬಂದಾಗ ಹರೀಶ ಮಡದಿಯನ್ನು ತಬ್ಬಿಕೊಂಡು....... ನೀತು ಜೋಪಾನ ನಾನು ಫೋನ್ ಮಾಡ್ತಾ ಇರ್ತೀನಿ ಅಲ್ಲೇನಾದ್ರು ಸರಿ ಘಟಿಸಿದರೆ ತಕ್ಷಣ ನನಗೆ ಫೋನ್ ಮಾಡು. ನಿಧಿ ಬಾರಮ್ಮಾ ಇಲ್ಲಿ ಕಂದ ಅಮ್ಮನ ಜೊತೆಯಲ್ಲಿರು ನೀನೊಬ್ಬಳೇ ಯಾವುದೇ ರೀತಿ ಸಾಹಸಕ್ಕೂ ಕೈ ಹಾಕಲು ಹೋಗ್ಬೇಡ ಅದನ್ನೆಲ್ಲಾ ಮಾಡುವುದಕ್ಕೆಂದೆ ರಾಣಾ ಮತ್ತಿತರರಿದ್ದಾರೆ ತಿಳೀತಾ. ನೀನು ಹಾಗೆನಾದ್ರೂ ಮಾಡಿದರೆ ನಾನಲ್ಲಿಗೆ ಬಂದು ಕಪಾಳಕ್ಕೆರಡು ಭಾರಿಸ್ತೀನಿ.
ನಿಧಿ ಅಪ್ಪನನ್ನು ತಬ್ಬಿಕೊಂಡು......ಇಲ್ಲಾಪ್ಪ ನಾನೇನೂ ಮಾಡಲ್ಲ ಅಮ್ಮ ಹೇಳಿದಷ್ಟನ್ನೇ ಮಾಡೋದು ಜೊತೆಗೆ ನೀವು ನನಗ್ಯಾವತ್ತೂ ಏಟು ಭಾರಿಸುವುದಿಲ್ಲ ಅಂತಾನೂ ನನಗೆ ಗೊತ್ತಿದೆ.
ನಾಲ್ವರನ್ನು ಬೀಳ್ಕೊಡಲು ಇಡೀ ಕುಟುಂಬವೇ ನೆರೆದಿದ್ದು ನಿಧಿಯ ಐವರು ಸ್ನೇಹಿತೆಯರೂ ಬಂದಿದ್ದರು. ಎಲ್ಲರೂ ಫುಡ್ ಯೂನಿಟ್ಟಿಗೆ ತಲುಪಿದಾಗ ನಾಲ್ವರನ್ನು ಪ್ರತಿಯೊಬ್ಬರೂ ಆತ್ಮೀಯವಾಗಿ ತಬ್ಬಿ ಬೀಳ್ಕೊಟ್ಟರೆ ತಂಗಿಯನ್ನು ತಬ್ಬಿಡಿದಿದ್ದ......
ಸುಭಾಷ್.....ಅಲ್ಲೇನೇ ಸಮಸ್ಯೆಯಿದ್ದರೂ ತಕ್ಷಣ ಈ ಅಣ್ಣನನ್ನು ನೆನೆಪು ಮಾಡಿಕೋ ನಾನಲ್ಲಿಗೆ ಬಂದು ಬಿಡ್ತೀನಿ.
ನಿಧಿ.....ಆಯ್ತಣ್ಣ ಫೋನ್ ಮಾಡ್ತೀನಿ.
ನಿಶಾಳನ್ನು ಎಲ್ಲರೂ ಎತ್ತಿ ಮುದ್ದಾಡುತ್ತಿದ್ದರೆ ನೀತು—ಅನುಷಾಳನ್ನು ಎಲ್ಲರು ಬೇಟಿಯಾಗುತ್ತಿದ್ದು ಕೊನೆಯದಾಗಿ ನೀತು ತನ್ನ ಆಜ್ಞೆಯ ಪಾಲಕರಾದ ಮಕ್ಕಳಿಬ್ಬರನ್ನು ತಬ್ಬಿಕೊಂಡು ಕೆನ್ನೆಗೆ ಮುತ್ತಿಟ್ಟಳು.
ಸುರೇಶ......ಅಮ್ಮ ಚಿನ್ನಿ ಹುಷಾರು ತುಂಬ ತಂಟೆ ಮಾಡ್ತಾಳೆ ಬೇಗ ವಾಪಸ್ ಬಂದ್ಬಿಡಮ್ಮ ನೀನಿಲ್ಲದಿದ್ದರೆ ನನಗೇನೂ ಇಷ್ಟವಾಗಲ್ಲ.
ನೀತು ಕಿರಿ ಮಗನನ್ನು ಬಿಗಿದಪ್ಪಿಕೊಂಡು....ಆಯ್ತು ಕಣಪ್ಪ ಆದಷ್ಟು ಬೇಗ ಬಂದು ಬಿಡ್ತೀನಿ.
ನಾಲ್ವರೂ ಹೆಲಿಕಾಪ್ಟರ್ ಹತ್ತಿದರೆ ರಾಣಾ ಮತ್ತು ಸುಮೇರ್ ಸಿಂಗ್ ಕೂಡ ಅದರಲ್ಲೇ ಸವಾರರಾಗಿದ್ದು ಅವರ ಜೊತೆಯಲ್ಲಿ ಬಂದಿದ್ದಂತ ಹತ್ತು ಜನ ರಕ್ಷಕರು ಮತ್ತೊಂದರಲ್ಲಿ ಏರಿಕೊಂಡರು. ಹೆಲಿಕಾಪ್ಟರ್ ಕಣ್ಮರೆಯಾಗುವ ತನಕ ಮನೆಯವರು ಅಲ್ಲೇ ನಿಂತಿದ್ದು ಹರೀಶನ ಕಂಗಳಿಂದ ಕಂಬನಿ ಸುರಿಯತೊಡಗಿತು.
ಪ್ರೀತಿ ಸಮಾಧಾನಿಸುತ್ತ.........ಒಂದು ವಾರ ಅಥವ ಹತ್ತು ದಿನಗಳು ಅಷ್ಟರೊಳಗೆ ವಾಪಸ್ ಬಂದು ಬಿಡ್ತಾರೆ ಚಿಂತಿಸಬೇಡಿ.
ಶೀಲಾ.....ಹೌದು ರೀ ನೀವು ಧೈರ್ಯದಿಂದಿರಿ ಏನೂ ನಡೆಯೋಲ್ಲ ಆವತ್ತು ರಾತ್ರಿ ನೀತು ಹೇಳಿದ್ದನ್ನು ಕೇಳಿ ನಿಮಗೆ ಭಯವಾಗುತ್ತಿದೆ ಅಂತ ಗೊತ್ತು ನನ್ನ ಗೆಳತಿಯ ಮೇಲೆ ನಂಬಿಕೆಯಿಡಿ ಅವಳೆಂತದ್ದೇ ಪರೀಕ್ಷೆಯನ್ನಾದರೂ ಏದುರಿಸಿ ಗೆದ್ದೇ ಬರುತ್ತಾಳೆ.
ಅಶೋಕ......ಹೌದು ಹರೀಶ ನೀನೇ ಹೀಗೆ ಧೈರ್ಯಗೆಟ್ಟರೆ ನಾವೆಲ್ಲ ಕೂಡ ಅಧೀರರಾಗಿ ಹೋಗ್ತೀವಿ.
ಎಲ್ಲರೂ ಮನೆ ತಲುಪಿದರೂ ಲವಲವಿಕೆಯಿಲ್ಲದೆ ಮಾತನಾಡುತ್ತಾ ಕುಳಿತಿದ್ದರೆ ರಜನಿ ಏಕಾಂಗಿಯಾಗಿ ತಾರಸಿಯಲ್ಲಿ ನಿಂತಿದ್ದಳು. ಆಗ ಅಲ್ಲಿಗೆ ಬಂದ.......
ಸುಮ......ನೀನ್ಯಾಕೆ ಇಲ್ಲಿ ಒಬ್ಬಳೇ ನಿಂತಿದ್ದೀಯಲ್ಲ ?
ರಜನಿ......ಹೆಲಿಕಾಪ್ಟರ್ ಹತ್ತುವುದಕ್ಕೂ ಮುಂಚೆ ನೀತು ಹೇಳಿದ್ದನ್ನು ಯೋಚಿಸುತ್ತಿದ್ದೆ ಕಣೆ.
ಸುಮ.....ಅಂಥದ್ದೇನು ಹೇಳಿ ಹೋದಳು ?
ರಜನಿ......ಅಕಸ್ಮಾತ್ತಾಗಿ ನನಗೇನಾದರೂ ಆಗೋದರೆ ನಾಲ್ಕು ಜನ ಮಕ್ಕಳ ಜವಾಬ್ದಾರಿ ನೀನು ಸುಮ ನೋಡಿಕೊಳ್ಳಬೇಕೆಂದಳು. ಅದರಲ್ಲಿಯೂ ವಿಶೇಷವಾಗಿ ನಿಶಾ ಮತ್ತು ಸುರೇಶ ಅವರಿಬ್ಬರೂ ಅಮ್ಮನಿಲ್ಲದೆ ಇರುವುದಿಲ್ಲ ಅಂತ ಹೇಳಿದ್ದು ಆಗಿನಂದಲೂ ತಲೇಲಿ ಅದೇ ಕೊರೆಯುತ್ತಿದೆ ಕಣೆ.
ಸುಮ ಆಕಾಶದ ಕಡೆ ಕೈ ಮುಗಿದು ದೇವರಿಗೆ ಎಲ್ಲರನ್ನು ರಕ್ಷಿಸೆಂದು ಬೇಡಿಕೊಂಡರೂ ಇಬ್ಬರ ಮನಸ್ಸಿನಲ್ಲೂ ನಾನಾ ರೀತಿಯ ವಿಚಾರ ಮನೆಮಾಡಿದ್ದವು.
ಉದಯಪುರದ ತಲೆತಲಾಂತರದ ಅರಮನೆ ಆಚಾರ್ಯರ ಪ್ರಕಾರ ನೀತುವಿನ ರಕ್ತಕ್ಕಾಗಿ ಹಂಬಲಿಸುತ್ತಿದ್ದು ಇಂದು ನೀತು ತನ್ನ ಇಬ್ಬರು ಮಕ್ಕಳೊಂದಿಗೆ ಅಲ್ಲಿಗೇ ಹೊರಟಿದ್ದಳು. ಚಿಕ್ಕ ವಯಸ್ಸಿನಲ್ಲಿ ಒಬ್ಬ ಯೋಗಿಗಳು ಹೇಳಿದ್ದ ಗಂಡಾಂತರದ ಬಗ್ಗೆ ನೀತುವಿಗೂ ಭಯವಿದ್ದು ತನಗೇನಾದರೂ ಸಂಭವಿಸಿದರೆ ನಿಶಾಳನ್ಯಾರು ಸಂಭಾಳಿಸುತ್ತಾರೆ ಎಂದವಳ ಮನಸ್ಸಿನಲ್ಲಿ ಚಿಂತೆ ಮನೆಮಾಡಿತ್ತು.
ಒಟ್ಟಿನಲ್ಲಿ ಅರಿತೋ ಅಥವ ಅರಿಯದೆಯೋ ನೀತು ತನ್ನ ಸಾವಿನ ಕಡೆ ತಾನೇ ತನ್ನ ಹೆಜ್ಜೆ ಮುಂದಿಟ್ಟು ಹೊರಟಿದ್ದಳು....
ಅಬ್ಬಾ, ಕತೆ ಅಧ್ಭುತವಾಗಿದೆ, ಮುಂದೆ ಏನು ಆಗಬಹುದು ಎನ್ನುವ ಕುತೂಹಲ
ReplyDeleteWonderfully story
ReplyDeleteNimma kathe yavaga upload aguthe antha kayitha erthene.. romantic suspense yella ede
ReplyDelete