Total Pageviews

Wednesday, 12 February 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 279

ಮಹಾರಾಜ ರಾಣಾಪ್ರತಾಪ್ ಬರೆದಿದ್ದ ಪತ್ರವನ್ನು ಓದುವಷ್ಟರಲ್ಲಿ ನೀತು ಕಂಗಳಿಂದ ಕಂಬನಿ ಝಳಝಳನೇ ಸುರಿಯುತ್ತಿದ್ದು ಅಪ್ಪನ ಎದೆಯಲ್ಲಿ ಮುಖ ಹುದುಗಿಸಿ ಬಿಗಿಯಾಗಿ ತಬ್ಬಿಕೊಂಡಿದ್ದ ನಿಧಿ ಕೂಡ ಅಳುತ್ತಿದ್ದಳು. ರಜನಿ...ಪಾವನಾ...ಅನುಷ ಮತ್ತು ಹರೀಶ ಸಹ ಕಂಬನಿ ಮಿಡಿಯುತ್ತಿದ್ದರು. ಷಂಷೇರ್ ಸಿಂಗ್ ರಾಣಾ....ಸುಮೇರ್ ಸಿಂಗ್....ವೀರ್ ಸಿಂಗ್ ರಾಣಾ ಮತ್ತು ವಿಕ್ರಂ ಸಿಂಗ್ ಮಹಾರಾಜರು ಬರೆದಿರುವುದನ್ನು ಕೇಳಿಸಿಕೊಂಡು ದುಃಖಿತರಾಗಿ ಮೌನಕ್ಕೆ ಶರಣಾಗಿ ನಿಂತು ಬಿಟ್ಟಿದ್ದರು. ಅಮ್ಮನ ಮಡಿಲಲ್ಲಿ ಕುಳಿತಿದ್ದ ನಿಶಾ ಅದಾಗಲೇ ನಿದ್ದೆಗೆ ಜಾರಿಕೊಂಡಿದ್ದು ಯಾರೊಬ್ಬರೂ ಆಳುತ್ತಿರುವ ಬಗ್ಗೆ ಅವಳಿಗೆ ತಿಳಿಯಲಿಲ್ಲ. ಕೆಲ ಹೊತ್ತಿನ ನಂತರ.......

ಆಚಾರ್ಯರು.....ಎಲ್ಲರೂ ಸಮಾಧಾನ ಮಾಡಿಕೊಳ್ಳಿ ಹಿಂದೇನೇ ನಡೆದಿದ್ದರೂ ಅದು ಜಗನ್ಮಾತೆಯ ಇಚ್ಚೆಯಿಂದ ನಡೆದಿದ್ದು ಮುಂದೆ ಏನೇ ನಡೆಯುವುದಿದ್ದರೂ ಅದು ಸಹ ತಾಯಿಯ ಇಚ್ಚೆಯಂತೆಯೇ ನಡೆಯಲಿದೆ. ಹರೀಶ ನೀನು ನಿನ್ನ ಮಡದಿ ನೀತು ಸೂರ್ಯವಂಶಿ ಸಂಸ್ಥಾನದ ಇಬ್ಬರು ಕುಡಿಗಳಿಗೆ ತಂದೆ ತಾಯಿ ಆಗುತ್ತೀರೆಂದು ನಮ್ಮ ಗುರುಗಳಾದ ಶ್ಯಾಮ ವಸಿಷ್ಠರು 18 ವರ್ಷಗಳ ಹಿಂದೆಯೇ ನಮಗೆ ತಿಳಿಸಿದ್ದರು ನಾವದನ್ನೇ ರಾಣಾಪ್ರತಾಪನಿಗೆ ತಿಳಿಸಿದ್ದೆವಷ್ಟೆ. ನಿಧಿ ಹುಟ್ಟಿದ ದಿನ ಯಾವುದೆಂದು ಗೊತ್ತ ಹರೀಶ ಅಕ್ಟೋಬರ್ ತಿಂಗಳಿನ xx ತಾರೀಖು xxxxಇಸವಿಯ ಮುಂಜಾನೆ 9:30 ಸಮಯ ಆ ದಿನ ಮತ್ತೊಂದು ಘಟನೆಯೂ ನಡೆಯಿತು ಏನೆಂದು ಹೇಳುವೆಯಾ.

ದಂಪತಿಗಳಿಬ್ಬರೂ ಶಾಕಿನಿಂದ ಒಬ್ಬರನ್ನೊಬ್ಬರು ನೋಡಿಕೊಂಡರೆ ಹರೀಶ.......ಗುರುಗಳೇ ಅದೇ ದಿನ ಅದೇ ಮುಹೂರ್ತದಲ್ಲಿ ನೀತು ಜೊತೆ ನನ್ನ ವಿವಾಹ ನೆರವೇರಿತ್ತು ಅಂದು ವಿಜಯದಶಮಿ.

ಆಚಾರ್ಯರು ಮುಗುಳ್ನಗುತ್ತ.....ಇದು ಕಾಕತಾಳೀಯವಲ್ಲ ಹರೀಶ ಮುನ್ಸೂಚನೆ. ನೀತು ನಿನಗೆ ನೆನಪಿರಬಹುದು ಎರಡು ವರ್ಷಗಳ ಹಿಂದಿನ ವಿಜಯದಶಮಿಯ ದಿನದಂದು ಏನು ನಡೆಯಿತೆಂಬುದನ್ನು ನಮಗೆ ಹೇಳ್ತೀಯ.

ನೀತು ನೆನಪು ಮಾಡಿಕೊಳ್ಳುತ್ತ.......ಗುರುಗಳೇ ಆ ದಿನ ನಾನು ಇವರು ಮಕ್ಕಳಿಬ್ಬರ ಜೊತೆ ನನ್ನ ಹುಟ್ಟಿದೂರಿನ ಮನೆಯಲ್ಲಿದ್ದೆವು. ಮಕ್ಕಳು ಕೇಳಿಕೊಂಡರೆಂದು ಇವರು ಅವರಿಬ್ಬರನ್ನು ಕರೆದುಕೊಂಡು ಯಾವುದೋ ಸರ್ಕಸ್ ತೋರಿಸುವುದಕ್ಕೆ ಹೋಗಿದ್ರು ನಾನೊಬ್ಬಳೇ ಮನೆಯಲ್ಲುಳಿದಿದ್ದೆ. ಸಮಯ ಬಹುಶಃ ಮಧ್ಯಾಹ್ನ 2:30 ಅನಿಸುತ್ತೆ ಇದ್ದಕ್ಕಿದ್ದಂತೆ ನನಗೆ ಸಹಿಸಲಸಾಧ್ಯವಾದಷ್ಟು ಮೈಕೈ ನೋವುಗಳು ಪ್ರಾರಂಭವಾಯಿತು ಎಷ್ಟರಮಟ್ಟಿಗೆ ಅಂದರೆ ನನಗೆ ತಡೆದುಕೊಳ್ಳಲು ತುಂಬಾ ಕಷ್ಟಕರವಾಗಿತ್ತು. ಆದರೆ ಆಶ್ಚರ್ಯವೆಂದಬಂತೆ ಒಂದೆರಡು ಘಂಟೆಯ ನಂತರ ನನ್ನ ನೋವೆಲ್ಲ ಶಮನವಾಗಿದ್ದು ನನಗಾ ಅಷ್ಟು ನೋವು ಬಂದಿದ್ದು ಎನ್ನುವಂತೆ ಗುಣಮುಖವಾಗಿತ್ತು.

ಆಚಾರ್ಯರು......ಅದೇ ದಿನ ಅದೇ ಸಮಯದಲ್ಲಿ ನಿಶಾ ಜನಿಸಿದ್ದು ಇದೂ ಕಾಕತಾಳೀಯವಲ್ಲ ಎಲ್ಲವೂ ಪೂರ್ವ ನಿರ್ಧಾರಿತವಾದದ್ದು. ಈ ಇಬ್ಬರು ಮಕ್ಕಳಿಗೆ ತಂದೆ ತಾಯಿಯ ಪ್ರೀತಿಯ ಜೊತೆಗೆ ಅವರ ಜವಾಬ್ದಾರಿ ಹೊತ್ತುಕೊಳ್ಳುವ ದಾಯಿತ್ವವನ್ನು ಜಗನ್ಮಾತೆ ನಿಮಗೆ ಕರುಣಿಸಲಿದ್ದಾಳೆಂಬುದರ ಬಗ್ಗೆ ಮುನ್ಸೂಚನೆಯಾಗಿತ್ತು.

ಹರೀಶ......ಗುರುಗಳೇ ನಾವು ಇದನ್ನು ದಾಯಿತ್ವವೆಂದಾಗಲಿ ಅಥವ ಕರ್ತವ್ಯವೆಂದಾಗಲಿ ಭಾವಿಸುವುದಿಲ್ಲ ಏಕೆಂದರೆ ನಮ್ಮ ಮಕ್ಕಳಿಬ್ಬರು ನಮ್ಮ ಹೃದಯದ ಅವಿಭಾಜ್ಯ ಅಂಗವಾಗಿ ಬೆರೆತು ಹೋಗಿದ್ದಾರೆ. ನಾವು ದಂಪತಿಗಳಿಗೆ ಇದಕ್ಕಿಂತ ದೊಡ್ಡ ಸೌಭಾಗ್ಯ ಬೇರೇನು ತಾನೇ ಬೇಕಾಗಿದೆ ಗುರುಗಳೇ.

ನೀತು.......ಹೌದು ಗುರುಗಳೇ ಇವರು ಹೇಳುತ್ತಿರುವುದು ಸತ್ಯವೇ ಆದರೆ ಜಗನ್ಮಾತೆಯ ಸಾಕ್ಷಿಯಾಗಿ ನನ್ನನ್ನು ತಂಗಿಯನ್ನಾಗಿಸಿಕೊಂಡ ಅಣ್ಣನನ್ನೊಮ್ಮೆಯಾದರೂ ನೋಡಲಾಗಲಿಲ್ಲವಲ್ಲ ಎಂಬ ದುಃಖ ನನ್ನನ್ನು ಕಾಡುತ್ತಿದೆ.

ಆಚಾರ್ಯರು.....ಎಲ್ಲವೂ ಧೈವೇಚ್ಚೆ ನಿಧಿ ನಿನ್ನ ತಂದೆ ಹೇಳಿದಂತೆ ನೀನು ನಿಮ್ಮಪ್ಪ ಅಮ್ಮ ಮತ್ತು ಚಿಕ್ಕಪ್ಪ ಇರುವ ಫೋಟೋವನ್ನು ಅವನ ನಂಬರಿಗೆ ಕಳಿಸಮ್ಮ.

ನೀತು ಪಕ್ಕದಲ್ಲಿದ್ದ ಕವರನ್ನು ಮಗಳಿಗೆ ನೀಡಿದಾಗ ಅನುಷಾಳ ಸಹಾಯದಿಂದ ಒಂದೊಂದೇ ಫೋಟೋಗಳನ್ನು ತೆಗೆದಿಡುತ್ತಿದ್ದಾಗ ನೀತು ಕಣ್ಣಿಗೆ ಅದೊಂದು ಫೋಟೋ ಬಿದ್ದಿದ್ದು ಅದನ್ನು ಮಗಳಿಂದ ಪಡೆದು ನೋಡುತ್ತಿದ್ದಳು. ನಿಶಾ ಜನಿಸಿದ ಕ್ಷಣದಲ್ಲಿ ಮಹಾರಾಣಿ ಕಣ್ಮುಚ್ಚಿಕೊಳ್ಳುವುದಕ್ಕೂ ಮುಂಚೆ ಅಮ್ಮನ ಪಕ್ಕದಲ್ಲಿ ಮಲಗಿಸಿದ್ದ ಮಗುವನ್ನು ನೋಡುತ್ತ ತನ್ನೆಲ್ಲಾ ನೋವನ್ನು ಮರೆತಿದ್ದ ತಾಯಿಯ ಮುಖದಲ್ಲಿನ ಸಂತೋಷ ನೋಡುತ್ತ ನೀತುವಿನ ಕಣ್ಣುಗಳಿಂದ ಕಣ್ಣೀರು ಹರಿಯಿತು. ನಿಶಾ ಕೂಡ ಎಚ್ಚರಗೊಂಡಿದ್ದು ಅಮ್ಮನ ಕಣ್ಣು ಒರೆಸುತ್ತ ಅವಳ ಕೆನ್ನೆಗೆ ಮುತ್ತಿಟ್ಟು ಫೋಟೋ ಕಡೆ ನೋಡಿದಳು.

ನಿಶಾ.......ಮಮ್ಮ ನನ್ನಿ ತಮ್ಮ ನೋಲು ಮಮ್ಮ ಇದಿ ಯಾಲು ?

ನೀತು......ಇದು ನಿನ್ನ ತಮ್ಮ ಅಲ್ಲ ಕಂದ ಇದು ನೀನೇ ಪಕ್ಕದಲ್ಲಿ ಇರೋದು ಅಮ್ಮ ಕಣಮ್ಮ ಚಿನ್ನಿ.

ನಿಶಾ ತನ್ನ ಹೆತ್ತ ತಾಯಿಯನ್ನೇ ಧಿಟ್ಟಿಸಿ ನೋಡುತ್ತ ಅವಳ ಮುಖದ ಮೇಲೆ ತನ್ನ ಕೈಯಾಡಿಸಿ ಅಮ್ಮನನ್ನು ಬಿಗಿದಪ್ಪಿಕೊಂಡು ಎದೆಯಲ್ಲಿ ಮುಖವನ್ನುದುಗಿಸಿಕೊಂಡರೆ ನೀತು ಮಗಳನ್ನು ಓಲೈಸುತ್ತಿದ್ದಳು. ನಿಧಿ ತಾನು ಅಪ್ಪ ಅಮ್ಮನ ಜೊತೆ ಚಿಕ್ಕಪ್ಪನ ಹೆಗಲಿನಲ್ಲಿದ್ದ ಫೋಟೊ ಕಳುಹಿಸಿದ ಕೆಲವೇ ಕ್ಷಣಗಳಲ್ಲಿ ಅವಳ ಫೋನ್ ರಿಂಗಾಯಿತು. ಅತ್ತ ಕಡೆಯಿಂದ........

ವರ್ಧನ್........ಹಲೋ ಯಾರಿದು ?

ನಿಧಿ ಬಿಕ್ಕಳಿಸುತ್ತಲೇ......ಚಿಕ್ಕಪ್ಪ ನಾನು ನಿಧಿ.

ಅತ್ತಲಿದ್ದ ವರ್ಧನ್ ಕಣ್ಣಿನಿಂದ ಧಾರಾಕಾರವಾಗಿ ಕಣ್ಣೀರಿಡುತ್ತ ತನ್ನ ದುಃಖ ತಡೆದುಕೊಳ್ಳುವ ಪ್ರಯತ್ನ ಮಾಡಿ........ಎಲ್ಲಿದ್ದೀಯಮ್ಮ ಕಂದ ? ಆಶ್ರಮದಲ್ಲೇ ಇದ್ದೀಯಾ ?

ನಿಧಿ.........ಅರಮನೆಯಲ್ಲಿ ಚಿಕ್ಕಪ್ಪ ಈಗ ತಾನೇ ಅಪ್ಪ ಬರೆದಿಟ್ಟು ಹೋಗಿದ್ದ ಪತ್ರ ಓದಿದಾಗ ನಿಮ್ಮ ಬಗ್ಗೆ ತಿಳಿಯಿತು. ಅದಕ್ಕೆ........

ವರ್ಧನ್ ಮಧ್ಯದಲ್ಲಿಯೇ ತಡೆಯುತ್ತ.......ಇನ್ನೊಂದು ಘಂಟೆಯಲ್ಲಿ ನನ್ನ ಮಗಳ ಮುಂದಿರ್ತೀನಿ ಕಂದ.....ಎಂದೇಳಿ ಫೋನಿಟ್ಟನು.

ಹರೀಶ.....ಯಾಕಮ್ಮ ಫೋನಿಟ್ಟೆ ? ಏನಂದರು ?

ನಿಧಿ........ಚಿಕ್ಕಪ್ಪ ಇನ್ನೊಂದು ಘಂಟೆಯಲ್ಲಿ ಬರ್ತಿದ್ದಾರಂತೆ ಅಪ್ಪ.

ಆಚಾರ್ಯರು.....ಬಂದೇ ಬರ್ತಾನೆ ಕಣಮ್ಮ ನಡೀರಿ ಅಲ್ಲಿವರೆಗೂ ಎಲ್ಲರು ಸ್ವಲ್ಪ ದಣಿವಾಸಿರಿಕೊಳ್ಳಿ. ವಿಕ್ರಂ ಅರಮನೆಯಲ್ಲಿರುವ ಎಲ್ಲ ಕೆಲಸಗಾರರನ್ನು ಅವರರವರ ಜಾಗಗಳಿಗೆ ಕಳಿಸಿಬಿಡು ಅರಮನೆಯ ಸುತ್ತಮುತ್ತ ರಕ್ಷಕರನ್ನು ಬಿಟ್ಟು ಬೇರಾರೂ ಇರಬಾರದು ಹೊರಡು.

ಗುರುಗಳ ಆದೇಶ ಕೇಳಿ ರಾಣಾ ಒಬ್ಬನನ್ನು ಬಿಟ್ಟು ಮಿಕ್ಕವರೆಲ್ಲರೂ ಹೊರಗೆ ದೌಡಾಯಿಸಿದರು. ನಿಶಾ ಅಮ್ಮನ ಜೊತೆಯಲ್ಲಿ ಫ್ರೆಶಾಗಿ ಬಂದು ಹಾಯಾಗಿ ಸೋಫಾದಲ್ಲಿ ಕುಳಿತು ಜ್ಯೂಸ್ ಕುಡಿಯುತ್ತಿದ್ದಳು ಇಡೀ ಅರಮನೆಯಲ್ಲಿದ್ದ ಎಲ್ಲಾ ಪರಿಚಾರಕಿಯರು ಮತ್ತು ಸಹಾಯ ಸಿಬ್ಬಂದಿಗಳ ಜೊತೆ " ಆ ಹೆಂಗಸು " ಕೂಡ ಅರಮನೆಯಿಂದಾಚೆಗೆ ಬಂದಿದ್ದರು. ಈಗ್ಯಾಕೆ ನಮ್ಮನ್ನೆಲ್ಲಾ ಹೊರಗೆ ಕಳಿಸಿದರೆಂದು ಹೆಂಗಸು ತಿಳಿದುಕೊಳ್ಳಲು ಪ್ರಯತ್ನಪಟ್ಟರೂ ರಕ್ಷಕರು ಅವರನ್ನು ಬೇಗ ಬೇಗ ಅವರುಗಳು ವಾಸವಿದ್ದ ಹಿಂಭಾಗದ ಜಾಗಗಳಿಗೆ ಕಳಿಸಿಬಿಟ್ಟಿದ್ದರು. ಅರಮನೆಯಲ್ಲೇನು ನಡೆಯುತ್ತಿದೆ ಎಂಬುದನ್ನು ತಿಳಿಯಲಾಗದೆ ಆ ಹೆಂಗಸು ಚಡಪಡಿಸುತ್ತಿದ್ದು ಪುನಃ ಅರಮೆನೆಯತ್ತ ಹೋಗುವುದಕ್ಕೆ ಯೋಚಿಸುತ್ತಿದ್ದಾಗಲೇ ಅರಮನೆಯ ಸುತ್ತಲೂ ರಕ್ಷಕರ ಕಣ್ಗಾವಲು ತೀವ್ರವಾಗಿದ್ದು ಅತ್ತ ಸುಳಿಯುವುದಕ್ಕೂ ಅವಕಾಶವಿಲ್ಲದಂತಾಗಿತ್ತು.

ಒಂದು ಘಂಟೆ ಬಳಿಕ ಹೆಲಿಕಾಪ್ಟರೊಂದು ನಿಧಾನವಾಗಿ ಅರಮನೆ ಆವರಣದಲ್ಲಿ ಇಳಿಯುತ್ತಿದ್ದಾಗ ಹಾಯಾಗಿ ಕುಳಿತಿದ್ದ ನಿಶಾ ಶಬ್ದಕ್ಕೆ ಚಕ್ಕನೆದ್ದು ಹೊರಗೋಡಲು ರೆಡಿಯಾಗುವ ಮುನ್ನವೇ ನೀತು ತನ್ನ ಮಗಳನ್ನಿಡಿದು ತನ್ನೊಂದಿಗೆ ಸೇರಿಸಿಕೊಂಡಳು. ಅಮ್ಮ ಬಿಡುತ್ತಿಲ್ಲ ಎಂಬ ಮುನಿಸಿನಿಂದ ಅಮ್ಮನ ಮಡಿಲಲ್ಲಿದ್ದ ನಿಶಾ ಅವಳ ವೇಲ್ ಹಿಡಿದು ತನ್ನ ಮುಖದ ಮೇಲೆಳೆದುಕೊಳ್ಳುತ್ತ ಗುಮ್ಮನೆ ಕುಳಿತಳು. ಹೆಲಿಕಾಪ್ಟರಿನಿಂದಿಳಿದ ಈ ದೇಶದ ಅತ್ಯಂತ ಪವರಫುಲ್ ಪ್ರಭಾವಿ ನಾಯಕ ಮತ್ತು ದೇಶದ ಉಪಪ್ರಧಾನಿಯಾದ ವರ್ಧನ್ ಸಿಂಗ್ ರಜಪೂತ್ ಒಂದೇ ಉಸಿರಿನಲ್ಲಿ ಅರಮನೆಯೊಳಗೆ ದೌಡಾಯಿಸಿದ. ಎದುರಿಗೆ ಕೈಕಟ್ಟಿ ನಿಂತಿರುವ ರಾಣಾ ಹೆಗಲನ್ನು ತಟ್ಟುತ್ತ.......

ವರ್ಧನ್......ಕೊನೆಗೂ ನೀನು ಅರಮನೆಗೆ ಹಿಂದಿರುಗುವಂತಾಯ್ತು ಸಂತೋಷ ರಾಣಾ ಮಗಳೆಲ್ಲಿ.

ರಾಣಾ........ಹೀಗೆ ಬನ್ನಿ ಯುವರಾಣಿ ಒಳಗಿದ್ದಾರೆ.

ವರ್ಧನ್ ಒಳಗೆ ಬಂದಾಗ ಎಲ್ಲಾ ಅಪರಿಚಿತ ಮುಖಗಳೇ ಇದ್ದರೆ ಆಚಾರ್ಯರ ಸಮಕ್ಷಮ ತೆರಳಿ ಅವರಿಗೆ ವಂಧಿಸಿದನು. ದೇಶದಲ್ಲಿನ ಅತ್ಯಂತ ಪ್ರಭಾವಿ ನಾಯಕ ಬಂದಿರುವುದನ್ನು ನೋಡಿ ನೀತು ಜೊತೆ ಇತರರು ಎದ್ದು ನಿಂತರೆ ಅಮ್ಮನ ತೋಳಿನಲ್ಲಿದ್ದ ನಿಶಾ ಮಾತ್ರ ಇನ್ನೂ ತನ್ನ ಮುಖ ಮುಚ್ಚಿಕೊಂಡು ತನ್ನ ದುಃಖ ತೋರ್ಪಡಿಸುತ್ತಿದ್ದಳು.

ಆಚಾರ್ಯರು....ನಿಧಿ ಇಲ್ಲಿ ಬಾರಮ್ಮ ನೋಡು ಚಿಕ್ಕಪ್ಪ ಬಂದಿದ್ದಾನೆ.

ಹತ್ತು ವರ್ಷಗಳ ಮುಂಚೆ ಒಮ್ಮೆ ಆಶ್ರಮದಲ್ಲಿ ಚಿಕ್ಕ ಹುಡುಗಿಯಾದ ನಿಧಿಯನ್ನು ಬೇಟಿಯಾಗಿದ್ದ ವರ್ಧನ್ ಈಗ ಬೆಳೆದು ನಿಂತಿರುವ ತನ್ನ ಅಣ್ಣ ಅತ್ತಿಗೆಯ ಮಗಳನ್ನು ನೋಡಿ ಕಣ್ಣೀರಿನ ಕೋಡಿ ಹರಿಸುತ್ತ ಅವಳನ್ನು ಬಿಗಿದಪ್ಪಿಕೊಂಡು ಅಳತೊಡಗಿದನು. ಕೆಲಹೊತ್ತಿನ ಬಳಿಕ

ವರ್ಧನ್.......ನಿನ್ನನ್ನು ನಾನು ಕೊನೆಯ ಬಾರಿ ಬೇಟಿಯಾಗಿದ್ದಾಗ ನೀನಿನ್ನೂ ಚಿಕ್ಕ ಹುಡುಗಿ ಕಂದ ಎಷ್ಟು ದೊಡ್ಡವಳಾಗಿ ಬೆಳೆದಿರುವೆ ಇವತ್ತು ನನಗೆಷ್ಟು ಸಂತೋಷವಾಗ್ತಿದೆ ಅಂತ ಹೇಳಲಿಕ್ಕಾಗ್ತಿಲ್ಲ.

ನಿಧಿ......ಜ್ಞಾಪಕವಿದೆ ಚಿಕ್ಕಪ್ಪ ಅಮ್ಮನ ಜೊತೆ ನೀವು ಒಂದು ಬಾರಿ ಆಶ್ರಮಕ್ಕೆ ಬಂದಿದ್ರಿ ಆದರೆ ನೀವು ನನಗೆ ಚಿಕ್ಕಪ್ಪ ಆಗಬೇಕೆಂದು ಮಾತ್ರ ಅಮ್ಮ ಹೇಳಿರಲಿಲ್ಲ. ನಿಮಗಿನ್ನೊಂದು ಸರ್ಪ್ರೈಸ್ ಕಾದಿದೆ.

ವರ್ಧನ್......ನೀನು ಸಕುಶಲವಾಗಿ ಹಿಂದಿರುಗಿದ್ದೇ ಸಾಕಮ್ಮ ಕಂದ ನನಗಿನ್ಯಾವುದೇ ಸರ್ಪ್ರೈಸ್ ಬೇಕಾಗಿಲ್ಲ. ನೀನು ನನಗೆ ಅಣ್ಣ ಅತ್ತಿಗೆ ಇಬ್ಬರ ಕಡೆಯಿಂದ ದೊರೆತಿರುವ ಅಮೂಲ್ಯವಾದ ಕೊಡುಗೆ.

ನಿಧಿ........ನಾನು ನಿಮಗೆ ಅಮೂಲ್ಯಳಾಗಿದ್ದರೆ ಈ ಕೊಡುಗೆ ನಿಮಗೆ ಅಧ್ವಿತೀಯವಾದದ್ದು ಚಿಕ್ಕಪ್ಪ ಚಿನ್ನಿ ಮರಿ ಈ ಕಡೆ ನೋಡಮ್ಮ.

ಅಮ್ಮನ ಹೆಗಲಿನಲ್ಲಿ ಮುಖ ಹುದುಗಿಸಿಕೊಂಡು ತನ್ನ ಪ್ರತಿಭಟನೆ ಮುಂದುವರಿಸಿದ್ದ ನಿಶಾ ತಿರುಗಲ್ಲ ಎಂದು ತಲೆ ಅಳ್ಳಾಡಿಸಿಬಿಟ್ಟಳು.

ನಿಶಾ.......ಹಾಗೆಲ್ಲ ಹಠ ಮಾಡಬಾರದು ಕಂದ ನೋಡು ಚಿಕ್ಕಪ್ಪ ಬಂದಿದ್ದಾರೆ .

ನಿಶಾ ಅನ್ಯಮನಸ್ಕಳಾಗಿ ತಿರುಗಿದಾಗ ಅವಳ ಮುಖವನ್ನು ನೋಡಿ ವರ್ಧನ್ ಶಾಕ್ ಮತ್ತು ಸಂತೋಷ ಎರಡರ ಸಂಗಮದಿಂದ ನಿಂತಲ್ಲೇ ಮಂಡಿಯೂರಿ ಕುಸಿದು ಜೋರಾಗಿ ಅಳುತ್ತ ನಿಶಾಳನ್ನು ಹತ್ತಿರಕ್ಕೆ ಕರೆದನು. ಇದ್ಯಾರಪ್ಪ ಇದು ಇಷ್ಟು ಜೋರಾಗಿ ಅಳುತ್ತಿರುವುದು ಎಂದು ಅಚ್ಚರಿಯಿಂದ ಚಿಕ್ಕಪ್ಪನನ್ನು ನೋಡುತ್ತಿದ್ದ ನಿಶಾ ಅಮ್ಮನ ಕೆನ್ನೆ ಸವರಿ ಯಾರೆಂದಳು.

ನೀತು......ಹೋಗಮ್ಮ ಕಂದ ಚಿಕ್ಕಪ್ಪ ನಿನಗೆ ಗುಡುಗುಡು ರೌಂಡ್ ಹೊಡಿಸ್ತಾರೆ ಹೋಗು.

ನಿಶಾ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ವರ್ಧನ್ ಮುಂದೆ ಬಂದಾಗ ಅವಳ ಮುದ್ದಾದ ಮುಖವನ್ನು ಬೊಗಸೆಯಲ್ಲಿಡಿದು.....ಗುರುಗಳೇ ನನ್ನ ತಾಯಿ.....ನನ್ನ ಅತ್ತಿಗೆಯ ಸಾಕ್ಷಾತ್ ಪ್ರತಿರೂಪ ಇವಳು....

ಆಚಾರ್ಯರು......ರಾಣಾಪ್ರತಾಪ್..ಸುಧಾಮಣಿಯ ರಕ್ತವನ್ನು ಹಂಚಿಕೊಂಡು ಹುಟ್ಟಿರುವ ಕಿರಿಯ ರಾಜಕುಮಾರಿ ನಿಶಾ.

ನಿಶಾಳನ್ನೆತ್ತಿ ಬಿಗಿದಪ್ಪಿಕೊಂಡ ವರ್ಧನ್ ಆಳುತ್ತ ಅವಳನ್ನು ಮುದ್ದು ಮಾಡುತ್ತಿದ್ದರೆ ನಿಶಾ ಇದ್ಯಾರಪ್ಪ ಹೀಗೆ ಅಳ್ತಿರೋದು ಅಮ್ಮ ನನ್ನನ್ನು ಗುಡುಗುಡು ರೌಂಡ್ ಕರೆದುಕೊಂಡು ಹೋಗ್ತಾರೆ ಹೋಗು ಅಂತೇಳಿ ಕಳಿಸಿದಳು. ಈ ಪ್ರಜೆ ನೋಡಿದ್ರೆ ಅದರ ಬಗ್ಗೆ ಚಕಾರವೆತ್ತದೆ ನನ್ನನ್ನು ತಬ್ಬಿಕೊಂಡು ಗೊಳೋ ನಮ್ಮಪ್ನೆ ಅಂತ ಅಳ್ತಿದ್ದಾನಲ್ಲ ಯಾರಿವನು ಪುಣ್ಯಾತ್ಮ.......ಎನ್ನುವ ರೀತಿ ತಲೆ ಕೆರೆದುಕೊಳ್ಳುತ್ತ ಎಲ್ಲರ ಕಡೆಗೂ ಪಿಳಿಪಿಳಿ ಕಣ್ಣರಳಿಸಿ ನೋಡುತ್ತಿದ್ದಳು.

ಹತ್ತು ನಿಮಿಷಗಳ ನಂತರ ವರ್ಧನ್ ನೆಲದ ಮೇಲೆ ಕೂರುತ್ತ ತನ್ನ ಮಡಿಲಿನಲ್ಲಿ ನಿಶಾಳನ್ನು ಕೂರಿಸಿಕೊಂಡು ಏನೇನೋ ಕೇಳುತ್ತಿದ್ದರೆ ಆತ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದು ಏನೊಂದೂ ಕೂಡ ಅರ್ಥವಾಗದೆ ನಿಶಾ ಅಮ್ಮನ ಕಡೆ ನೋಡಿದಳು.

ನೀತು.......ಇವಳಿಗೆ ಹಿಂದಿ ಅರ್ಥವಾಗುವುದಿಲ್ಲ ಕೇವಲ ನಾವೆಲ್ಲ ಮಾತನಾಡುವ ನಮ್ಮ ಮಾತೃಭಾಷೆ ಕನ್ನಡ ಮಾತ್ರ ಅರ್ಥವಾಗುತ್ತೆ.

ನೀತು ಮತ್ತಿತರರನ್ನು ಈಗ ಸರಿಯಾಗಿ ಗಮನಿಸಿದ ವರ್ಧನ್..... ಕ್ಷಮಿಸಿ ನೀವ್ಯಾರೆಂಬುದು ಗೊತ್ತಾಗಲಿಲ್ಲ.

ಆಚಾರ್ಯರು.....ನಾನು ಹೇಳ್ತೀನಿ ಕೇಳು......ಎಂದು ವಿವರವಾಗಿ ಪ್ರತಿಯೊಂದನ್ನೂ ತಿಳಿಸಿದ ನಂತರ ರಾಣಾಪ್ರತಾಪ್ ತಂಗಿಯನ್ನಾಗಿ ಸ್ವೀಕರಿಸಿರುವ ನೀತುವಿಗೆ ಬರೆದಿದ್ದ ಪತ್ರವನ್ನು ಆತನಿಗೆ ಕೊಟ್ಟರು.

ಅಣ್ಣನ ಪತ್ರವನ್ನೊದುತ್ತ ಕಣ್ಣೀರಿನ ಕೋಡಿಯನ್ನೇ ಹರಿಸುತ್ತಿದ್ದ ವರ್ಧನ್ ಅದನ್ನೋದಿ ಲಕೋಟೆಯೊಳಗಿಟ್ಟು ಮೇಲೆದ್ದವನೇ ನೀತು ಮತ್ತು ಹರೀಶರ ಮುಂದು ನಿಲ್ಲುತ್ತ ಇಬ್ಬರ ಪಾದಗಳಿಗೂ ಧೀರ್ಘ ದಂಡವನ್ನಾಕಿ ನಮಸ್ಕಾರ ಮಾಡಿಬಿಟ್ಟನು. ದಂಪತಿಗಳಿಬ್ಬರಿಗೂ ಶಾಕಾಗಿ ಒಬ್ಬರನ್ನೊಬ್ಬರು ನೋಡಿದ ಬಳಿಕ ಹರೀಶ ಅವನನ್ನೆತ್ತಿ ನಿಲ್ಲಿಸಿ.......

ಹರೀಶ.......ಇದೇನು ಸರ್ ನೀವು ಹೀಗೆಲ್ಲಾ ಮಾಡಬಾರದು ನಮ್ಮ ದೇಶದ ಗೌರವಯುತ ಸ್ಥಾನದಲ್ಲಿರುವ ನೀವು ನನ್ನಂತ ಸಾಮಾನ್ಯನ ಕಾಲಿಗೆ ಬೀಳುವುದು ನಿಮಗೆ ಶೋಭೆಯಲ್ಲ.

ವರ್ಧನ್......ಸರ್ ನಿಮ್ಮನ್ನು ನೀವು ಚಿಕ್ಕವರೆಂದು ತೀರ್ಮಾನಿಸಿ ಕೊಳ್ಳಬೇಡಿ ಹುದ್ದೆಯಲ್ಲಿ ನಾನು ದೊಡ್ಡವನಿರಬಹುದು ಆದರೆ ಕರ್ಮಾನುಸಾರ ಮತ್ತು ವಯಸ್ಸಿನಲ್ಲೂ ನೀವು ನನಗಿಂತ ಹಿರಿಯರೆ ನೀವು ತುಂಬ ದೊಡ್ಡ ವ್ಯಕ್ತಿ ಸರ್. ನನ್ನ ತಾಯಿ ನಾನು ಜನಿಸಿದ ಕೆಲ ವರ್ಷಗಳ ನಂತರ ಮರಣಿಸಿದರು ಹಾಗೆಯೇ ತಂದೆ ಮತ್ತು ನಮ್ಮ ದೊಡ್ಡಮ್ಮ ಕೂಡ. ನನ್ನ ಪಾಲಿಗೆ ಉಳಿದಿದ್ದು ಅಣ್ಣ ಅತ್ತಿಗೆಯಿಬ್ಬರು ಮಾತ್ರ ಈಗವರೂ ನಮ್ಜೊತೆಯಿಲ್ಲ ಆದರೆ ಅವರ ಜೀವಮಾನದ ಪೂಂಜಿಯಾಗಿರುವ ಈ ಇಬ್ಬರು ಮಕ್ಕಳು ನಮ್ಮೊಂದಿಗೆ ಇದ್ದಾರಲ್ಲ. ನಿಶಾಳ ಬಗ್ಗೆ ಏನೂ ತಿಳಿಯದಿದ್ದರೂ ಅವಳನ್ನು ಸ್ವಂತ ಮಗಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಿರುವ ನೀವು ನಮಗೆ ಆದರ್ಶಪ್ರಾಯರು.

ನೀತು......ಸರ್ ಸ್ವಂತ ಮಗಳಿಗಿಂತಲೂ ಹೆಚ್ಚಾಗಿ ಅಂತ ಹೇಳ್ಬೇಡಿ ಇವಳು ನನ್ನ ಸ್ವಂತ ಮಗಳೇ ಹಾಗೆಯೇ ನಿಧಿ ನಮ್ಮ ಹಿರಿಮಗಳು ಅದನ್ನೆಂದಿಗೂ ಬದಲಾಯಿಸಲಾಗದು. ಅವರಿಬ್ಬರು ಸಂಸ್ಥಾನದ ಯುವರಾಣಿಯರೇ ಆಗಿರಬಹುದು ಅವರ ಮುಂದೆ ಸಾವಿರಾರು ಜನ ತಲೆಯೆತ್ತಲು ಹೆದರಬಹುದು ಆದರೆ ನಾನು ಇವರಿಬ್ಬರ ತಾಯಿ. ತಾಯಿಯಾದವಳಿಗೆ ಅರಸನಾದರೂ ಸರಿ ಆಳಾದರೂ ಸರಿ ತಮ್ಮ ಮಕ್ಕಳಲ್ಲಿ ಇಬ್ಬರು ಸಮಾನರೇ ಅಲ್ಲವಾ.

ವರ್ಧನ್.....ನಮ್ಮ ಅತ್ತಿಗೆಯ ಬಾಯಿಂದ ನಿಮ್ಮಂತ ಮಾತುಗಳನ್ನು ಕೇಳುತ್ತಿದ್ದೆ ಈಗ ನಿಮ್ಮಿಂದ ಅಂತಹುದೇ ಮಾತುಗಳನ್ನು ಕೇಳಿ ನನಗೆ ತುಂಬಾ ಸಂತೋಷವಾಗುತ್ತಿದೆ. ಅಣ್ಣ ನಿಮ್ಮನ್ನು ಜಗನ್ಮಾತೆ ತಾಯಿ ಆಧಿಶಕ್ತಿಯ ಸಾಕ್ಷಿಯಾಗಿ ಸೋದರಿ...ತಂಗಿ ಅಂತ ಸ್ವೀಕರಿಸಿರುವಾಗ ನೀವು ನನಗೆ ಅಕ್ಕನ ಸಮಾನರು. ಈ ನಿಮ್ಮ ತಮ್ಮ ಯಾವುದೇ ಕ್ಷಣದಲ್ಲಾದರೂ ಸರಿ ನಿಮ್ಮ ಸೇವೆಗೆ ಸದಾ ಸಿದ್ದ.

ಹರೀಶ....ದೇಶದ ಜವಾಬ್ದಾರಿಯೂ ನಿಮ್ಮ ಮೇಲಿದೆ ಅದು ಮುಖ್ಯ.

ವರ್ಧನ್.......ಅದನ್ನು ನಿಭಾಯಿಸುವುದು ನನ್ನ ಕರ್ತವ್ಯ ಆದರಿದು ನನ್ನ ಧರ್ಮ. ನನ್ನವರೆಂದು ಯಾರು ಇಲ್ಲದೆ ಒಂದುವರೆ ವರ್ಷದಿಂದ ಒಂಟಿಯಾಗಿ ಹೋಗಿದ್ದೆ ಈಗ ನನ್ನವರು ಎಂದೇಳಿಕೊಳ್ಳುವುದಕ್ಕೆ ಒಂದು ಕುಟುಂಬವಿದೆ ಎಂಬುದೇ ನನಗೆ ಸಂತೋಷದ ವಿಷಯ. ನೀವು ನನಗೆ ಅಕ್ಕ ಆಗಿರುವಾಗ ಇವರು ನನಗೆ ಭಾವನಾಗಬೇಕಲ್ವ ನಿಮಗಿಂತ ಚಿಕ್ಕವನಾಗಿ ಸಂಬಂಧದಲ್ಲಿ ಮೈದುನನಾಗಿರುವಾಗ ನನ್ನನ್ನು ಸರ್ ಎಂದು ಸಂಭೋಧಿಸದೆ ಹೆಸರಿಡಿದು ಕರೆದರೆ ನಾನು ನಿಮ್ಮಲ್ಲೊಬ್ಬ ಎನ್ನುವ ಸಂತೋಷ ಮನಸ್ಸಿಗೆ ನೆಮ್ಮದಿ ತರುತ್ತೆˌ. ಈ ಹಿಂದೆ ಅಣ್ಣನ ಆಜ್ಞೆಯಂತೆಯೇ ನಾನು ಸಾರ್ವಜನಿಕವಾಗಿ ಅಣ್ಣನ ಜೊತೆಗೂ ತಮ್ಮನಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ ಹಾಗೆಯೇ ಈಗಲೂ ಸಹ ಕುಟುಂಬದಲ್ಲಿ ಶಾಮೀಲಾಗದೆ ಇರಬಹುದು. ಆದರೆ ಅಕ್ಕ ಪ್ರತಿಯೊಂದು ಸುಖ ದುಃಖಗಳಲ್ಲಿಯೂ ಈ ನಿಮ್ಮ ತಮ್ಮ ನಿಮಗೆ ಬೆನ್ನೆಲುಬಾಗಿ ನಿಂತಿರುತ್ತಾನೆ.

ನೀತು.....ಅತ್ತಿಗೆಯವರ ಇಚ್ಚೆಯಂತೆ ಮೂರು ಕಡೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಬೇಕೆಂಬ ಉದ್ದೆಶ ಅಣ್ಣನವರಿಗಿತ್ತು ಈಗದನ್ನು ನಾವೆಲ್ಲರೂ ಸೇರಿ ಸಾಕಾರಗೊಳಿಸಬೇಕು ಅದಕ್ಕೆ ನೀನು ಸಹಾಯ ಮಾಡಬೇಕಾಗಿದೆ.

ವರ್ಧನ್........ಅಕ್ಕ ಸಹಾಯ ಅನ್ಬೇಡಿ ನೀವು ನನಗೆ ಹಿರಿಯವರು ತಮ್ಮನಿಗೆ ಹೀಗೆ ಮಾಡಬೇಕೆಂದು ಆದೇಶಿಸುವ ಹಕ್ಕು ನಿಮಗಿದೆ. ಅದರ ಬಗ್ಗೆ ನೀವು ಚಿಂತಿಸುವ ಅಗತ್ಯವಿಲ್ಲ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಬೇಕಾಗುವ ಎಲ್ಲಾ ರೀತಿಯ ಅನುಮತಿ ಪತ್ರಗಳು ಶುಕ್ರವಾರದಂದು ನಿಮ್ಮ ಕೈಯಲ್ಲಿರುತ್ತೆ. ಹೇಗೂ ಸಂಸ್ಥಾನದ ಅಧೀನದಲ್ಲೇ ನಿರ್ಮಾಣ ಸಂಸ್ಥೆಯೂ ಇದೆ ಕಟ್ಟಡದ ಡಿಸೈನ್ ಮತ್ತು ಕಾಮಗಿರಿಗಳನ್ನೆಲ್ಲಾ ಅವರೇ ನಿರ್ವಹಿಸುತ್ತಾರೆ. 

ಶುಕ್ರವಾರ ನಿಧಿ ಅಧಿಕಾರ ವಹಿಸಿಕೊಂಡ ಸಮಯದಿಂದಲೇ ಸಂಸ್ಥಾನದ ವಿಷಯವಾಗಿ ಎಲ್ಲಾ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವೂ ನಿಮಗೆ ದೊರೆಯುತ್ತದೆ. ನಿಮ್ಮನ್ನು ನೋಡಿದಾಗಲೇ ಮಾತೃ ಹೃದಯದ ಕಪಟ...ಮೋಸ....ವಂಚನೆ ತಿಳಿಯದಿರುವ ನಿಷ್ಕಲ್ಮಶವಾದವರೆಂದು ತಿಳಿಯುತ್ತದೆ ಆದ್ದರಿಂದಲೇ ಅಣ್ಣ ಸಂಸ್ಥಾನದ ಸಂಪೂರ್ಣ ಜವಾಬ್ದಾರಿಯನ್ನು ನಿಮ್ಮ ಹೆಗಲಿಗೆ ಹೊರಿಸಿರುವುದು. ಇದರಲ್ಲಿ ನೀವು ಒಬ್ಬೊಂಟಿಯಲ್ಲ ಅಕ್ಕ ನಿಮ್ಮೀ ತಮ್ಮ ಪ್ರತೀ ಹೆಜ್ಜೆಯಲ್ಲೂ ನಿಮ್ಮ ಜೊತೆಗಿರುತ್ತಾನೆ.

ಗುಡುಗುಡು ರೌಂಡ್ ಹೋಗಬಹುದೆಂದು ಆಸೆಯಲ್ಲಿದ್ದ ನಿಶಾ ಎಲ್ಲ ಕುಳಿತು ಮಾತನಾಡುತ್ತಿದ್ದು ಅದುವೇ ತನಗರ್ಥವಾಗದ ಭಾಷೆಯಲ್ಲಿ ಎಂದು ಮುನಿಸಿಕೊಂಡು ರಜನಿಯ ಮಡಿಲನ್ನು ಸೇರಿಕೊಂಡಳು.

ವರ್ಧನ್.....ನಿಶಾ ಯಾಕಮ್ಮ ಕಂದ ಸಪ್ಪಗಾಗಿ ಹೋದೆಯಲ್ಲ.

ಅನುಷ.......ಅಣ್ಣ ಇವಳಿಗೆ ಕ್ಷಮಿಸಿ....ಸರ್ ಇವಳಿಗೆ....

ವರ್ಧನ್ ಅರ್ಧದಲ್ಲೇ ತಡೆಯುತ್ತ.......ಇವರಿಬ್ಬರನ್ನು ಮಾತ್ರ ನಾನು ಅಕ್ಕ ಭಾವನೆಂದು ಸ್ವೀಕರಿಸಿದ್ದಲ್ಲಮ್ಮ ಇಡೀ ಕುಟುಂಬದವರನ್ನೆಲ್ಲಾ ನನ್ನವರೆಂದು ಸ್ವೀಕರಿಸಿದ್ದೀನಿ. ನೀನು ಅಕ್ಕನ ತಂಗಿಯಾಗಿರುವಾಗ ನನಗೂ ನೀನು ತಂಗಿಯೇ ಆಗಬೇಕಲ್ಲವಾ ನನ್ನನ್ನು ಅಣ್ಣನೆಂದು ಕರೆದು ನಂತರವೇಕೆ ಕ್ಷಮೆ ಕೋರುತ್ತಿರುವೆ.

ಅನುಷಾಳಿಗೆ ಏನು ಹೇಳಬೇಕೆಂದು ತಿಳಿಯದೆ ಅಕ್ಕನತ್ತ ನೋಡಿದರೆ ನೀತು ಕಣ್ಣಿನಲ್ಲೇ ಮುಂದುವರಿಸುವಂತೆ ಸೂಚಿಸಿದಾಗ ಅನುಷ..... ಅಣ್ಣ ಇವಳಿಗೆ ಹೆಲಿಕಾಪ್ಟರಿನಲ್ಲಿ ರೌಂಡ್ ಹೋಗುವುದು ತುಂಬಾನೇ ಇಷ್ಟ. ನಮ್ಮೂರಿಗೆ ಇಲ್ಲಿಂದ ಯಾರಾದರೂ ಬಂದಾಗಲೆಲ್ಲಾ ಅಪ್ಪನ ಮೇಲೆ ರೌಂಡ್ ಕರೆದೊಯ್ಯುವಂತೆ ದಂಬಾಲು ಬೀಳ್ತಾಳೆ.

ವರ್ಧನ್ ನಗುತ್ತ.......ಹೆಲಿಕಾಪ್ಟರಿನಲ್ಲಿ ರೌಂಡ್ ಹೋಗಬೇಕ ಕಂದ ನಡಿ ಮೊದಲು ನಿನಗೆ ರೌಂಡ್ ಹಾಕಿಸಿಕೊಂಡು ಬರೋಣ.

ರಜನಿ.....ಇವಳಿಗೆ ಹಿಂದಿಯ ಒಂದಕ್ಷರವೂ ಅರ್ಥವಾಗುವುದಿಲ್ಲ ನಾವೂ ಕಲಿಸುವ ಪ್ರಯತ್ನವನ್ನೂ ಮಾಡಿಲ್ಲ.

ವರ್ಧನ್.......ಕ್ಷಮಿಸಿ ನೀವೂ ನನಗೆ ಅಕ್ಕನೇ ಆಗಬೇಕಲ್ಲವಾ ಇದು ದೊಡ್ಡ ಸಮಸ್ಯೆ ಆಗೋಯ್ತು ನನ್ನ ಮಗಳ ಜೊತೆಯಲ್ಲೇ ನಾನು ಮಾತನಾಡುವ ಹಾಗಿಲ್ಲದಂತಾಗಿ ಹೋಗಿದೆ. ಆದರೂ ಚಿಂತೆಯಿಲ್ಲ ನಾನೇ ಕನ್ನಡ ಕಲಿಯಲು ಪ್ರಾರಂಭಿಸುವೆ ನನ್ನ ಕಂದನ ಜೊತೆಯಲ್ಲಿ ಮಾತನಾಡಲು ಅವಳಿಗರ್ಥವಾಗುವ ಭಾಷೆಯನ್ನು ನಾನೇ ಕಲಿತರೆ ತುಂಬ ಸರಳವಾಗುತ್ತೆ.

ನಿಶಾ—ನಿಧಿ ಇಬ್ಬರನ್ನು ಕರೆದುಕೊಂಡು ಹೆಲಿಕಾಪ್ಟರಿನಲ್ಲೊಂದು ಚಿಕ್ಕ ರೌಂಡ್ ಸುತ್ತಿಸಿಕೊಂಡು ಬಂದ ವರ್ಧನ್ ರಾತ್ರಿ ಊಟದವರೆಗೂ ಹಲವು ವಿಷಯಗಳ ಬಗ್ಗೆ ಎಲ್ಲರೊಂದಿಗೆ ಸುಧೀರ್ಘವಾಗಿ ಚರ್ಚಿಸಿ ಕೆಲವು ನಿರ್ಧಾರಗಳನ್ನೂ ತೆಗೆದುಕೊಳ್ಳಲಾಯಿತು. ರಾಜಸ್ಥಾನದ ಸಿಎಂ....ಕೆಲವು ಮಂತ್ರಿಗಳು ನಿಶಾಳ ಹಿಂದೆ ಬಿದ್ದಿದ್ದ ಬಗ್ಗೆ ತಿಳಿದಾಗ ತುಂಬ ಆಕ್ರೋಶಗೊಂಡ ವರ್ಧನ್ ಮುಂಜಾನೆ ಎಲ್ಲರೊಂದಿಗೆ ತಾನೂ ಜೈಸಲ್ಮೇರಿಗೆ ಬರುವುದಾಗಿ ನಿರ್ಣಯಿಸಿದನು. ಊಟವಾದ ನಂತರ.......

ವರ್ಧನ್........ಗುರುಗಳೇ ನಿಮ್ಮ ಅನುಮತಿಯಿದ್ದರೆ ಇವರಿಗೆ......

ಆಚಾರ್ಯರು......ಅದು ರಾಜಕುಮಾರಿಯರ ಮತ್ತು ನೀತುವಿನ ಹಕ್ಕು ವರ್ಧನ್ ಅದರ ಬಗ್ಗೆ ನಾವೇ ನಿನಗೆ ಸೂಚಿಸಬೇಕೆಂದಿದ್ದೆವು ಈಗ ನೀನೇ ಪ್ರಸ್ತಾಪಿಸಿರುವಾಗ ಇವರನ್ನು ಕರೆದುಕೊಂಡು ಹೋಗಿ ಎಲ್ಲವನ್ನು ತೋರಿಸುವುದು ನಿನ್ನ ಕರ್ತವ್ಯ

ರಜನಿ......ಏನನ್ನು ತೋರಿಸಬೇಕಿದೆ ಗುರುಗಳೇ ?

ವರ್ಧನ್......ಅಕ್ಕ ಪ್ರತೀ ಅರಮನೆ ಮತ್ತು ರಾಜಮನೆತನಗಳಲ್ಲೂ ಒಂದು ರಹಸ್ಯವಿರುತ್ತದೆ ಅದನ್ನು ಕೇವಲ ಅದರ ವಂಶಸ್ಥರು ಮಾತ್ರ ತಿಳಿದುಕೊಂಡಿರುತ್ತಾರೆ.

ನೀತು........ಹಾಗಿದ್ದರೆ ಅದನ್ನು ತಿಳಿದುಕೊಳ್ಳುವ ಹಕ್ಕು ನಿಧಿ ಮತ್ತು ನಿಶಾ ಇಬ್ಬರಿಗೆ ಮಾತ್ರ ಇರುವುದು ಗುರುಗಳೇ ನನಗೇಗೆ ಹಕ್ಕಿರುತ್ತದೆ.

ಆಚಾರ್ಯರು......ನೀತು ನಿನ್ನ ಅವಿಭಕ್ತ ಕುಟುಂಬದವರು ಬೇರೆ ಯಾರಿಗೂ ಯಾವುದೇ ರೀತಿಯ ಕೇಡನ್ನೂ ಬಯಸುವವರಲ್ಲಮ್ಮ ಕೇವಲ ಏದುರಾಳಿಗಳು ಮಾತ್ರ ಇದಕ್ಕೆ ಹೊರತಾಗಿರುತ್ತಾರೆ ಅಷ್ಟೆ. ಇನ್ನು ಮುಂದೇನೂ ಮಾತನಾಡಬೇಡ ವರ್ಧನ್ ಇವರೆಲ್ಲರನ್ನೂ ಕರೆದುಕೊಂಡೋಗಿ ತೋರಿಸು....ಎಂದು ಆದೇಶಿಸಿಬಿಟ್ಟರು.

ಎಲ್ಲರೂ ರಾಣಾಪ್ರತಾಪ್ ಹಾಗು ಸುಧಾಮಣಿಯ ಖಾಸಗಿ ರೂಂ ಹತ್ತಿರ ಬಂದಾಗ......

ವರ್ಧನ್......ಅಕ್ಕ ನೀವಿದೇ ರೂಮಿನಲ್ಲಿ ಉಳಿದುಕೊಂಡಿದ್ದೀರಲ್ವ ಅದಕ್ಕೆ ನೀವು ಮೊದಲು ಒಳಗೆ ನಡೆಯಿರಿ ನಾವು ಹಿಂಬಾಲಿಸುತ್ತೇವೆ ರೂಮಿನಲ್ಲೇ ಸಂಸ್ಥಾನದ ರಹಸ್ಯ ಅಡಗಿರುವುದು.

ಬಾಗಿಲು ತೆಗೆಯುತ್ತಿದ್ದಂತೆ ಅಮ್ಮನಿಗಿಂತ ಮುಂಚೆ ಒಳಗೋಡಿದ ನಿಶಾ ಮಂಚವನ್ನೇರಿ ಕುಣಿಯತೊಡಗಿದರೆ ನೀತು ಮುಗುಳ್ನಗುತ್ತ ಒಳಗಡಿಯಿಟ್ಟಳು. ಹರೀಶ—ನಿಧಿ ಕೂಡ ಒಳಗೆ ಹೋದರೆ ತಾವು ಹೋಗಬಹುದೋ ಇಲ್ಲವೋ ಎಂಬ ಜಿಜ್ಞಾಸೆಯಲ್ಲಿದ್ದ ಅನುಷ ಅಕ್ಕ ರಜನಿಯ ಕೈಯನ್ನಿಡಿದು ಹೊರಗೇ ನಿಂತಿದ್ದರು. ಇದನ್ನು ಗಮನಿಸಿ...

ವರ್ಧನ್......ಬಾರಮ್ಮ ಅನು ನೀವೂ ನಡೀರಿ ರಜನಿ ಅಕ್ಕ ನೀವೂ ಕುಟುಂಬದ ಅವಿಭಾಜ್ಯ ಸದಸ್ಯರಾಗಿರುವಾಗ ನೀವು ಬರಲಾಗಲ್ಲ ಅಂತ ಯಾರು ತಾನೇ ಹೇಳ್ತಾರೆ ಅಂತ ಯೋಚನೆಗಳಿದ್ದರೆ ಈಗಲೇ ಅದನ್ನೆಲ್ಲಾ ತ್ಯಜಿಸಿಬಿಡಿ.

ನಿಧಿ.....ಹೌದು ಆಂಟಿ ನೀವಿಬ್ಬರು ಹೊರಗೆ ನಿಲ್ಲುವುದಾದರೆ ನಿಮ್ಮ ಜೊತೆಯಲ್ಲಿ ನಾನೂ ಇಲ್ಲೇ ಇರ್ತೀನಿ. ನನಗೀ ಅರಮನೆಯಲ್ಲಿನ ವೈಭೋಗಕ್ಕಿಂತ ನಿಮ್ಮೆಲ್ಲರ ಪ್ರೀತಿ ಮುಖ್ಯ ನನಗಷ್ಟೇ ಸಾಕು.

ರಜನಿ ಅವಳನ್ನು ತಬ್ಬಿಕೊಂಡು.....ಸಾರಿ ಕಣಮ್ಮ ಅದು ಸಂಸ್ಥಾನದ ಮತ್ತು ಸೂರ್ಯವಂಶಿ ರಾಜಮನೆತನದ ತಲೆತಲಾಂತರದಿಂದ ಬಂದ ರಹಸ್ಯ ಅಂತ ಹೇಳಿದ್ರಲ್ಲ ಅದಕ್ಕೆ ಸ್ವಲ್ಪ ಹಿಂಜರಿದು ನಿಂತಿಬಿಟ್ವಿ.

ನೀತು....ಲೇ ಆ ರೀತಿಯಲ್ಲೇನೂ ಯೋಚಿಸಬೇಡ ಚಿನ್ನಿ ನಿಮಗೂ ಮಗಳೇ ಅಲ್ಲವಾ.

ವರ್ಧನ್.......ನಿಧಿ ನಿನಗೆ ಅತ್ತಿಗೆಯ ಖಾಸಗಿ ಬೀರುವನ್ನು ಹೇಗೆ ತೆಗೆಯುವುದೆಂದು ಕಲಿಸಿಕೊಡ್ತೀನಿ ಇದರಲ್ಲಿ ಅತ್ತಿಗೆಯ ವಯಕ್ತಿಕ ವಸ್ತುಗಳಿದೆ ಅಂತ ಅವರೇ ಹೇಳಿದ್ದರು ಆದರೆ ಕಾಗದ ಪತ್ರಗಳಷ್ಟೆˌ

ನೀತು......ನಾವಿಲ್ಲಿಗೆ ಮೊದಲ ಬಾರಿ ಬಂದಿದ್ದಾಗ ಚಿನ್ನಿ ಬೀರುವನ್ನು ಸ್ವಲ್ಪ ಸಮಯದಲ್ಲೇ ತೆಗೆದಿದ್ದಳೆಂದು.....ಆ ದಿನದ ಘಟನೆಗಳನ್ನು ಹೇಳಿದರೆ ವರ್ಧನ್ ತುಂಬ ಅಚ್ಚರಿಗೊಂಡನು.

ನಿಧಿ.......ಅಮ್ಮ ಇದು ಸಾಮಾನ್ಯವಾದ ಬೀರುವಲ್ಲ ಅಂತ ಅಮ್ಮ ಹೇಳಿದ್ದು ನೆನಪಿದೆ ಇದನ್ನೇಗೆ ತೆಗೆಯಬೇಕೆಂದು ಅಮ್ಮ ನನಗೆ ಕೆಲವು ಬಾರಿ ಹೇಳಿಕೊಟ್ಟಿದ್ದರು ಅದನ್ನೇ ನೆನಪು ಮಾಡಿಕೊಳ್ತಿದ್ದೆ ಆದರೆ ಚಿನ್ನಿ ಇದನ್ನೇಗೆ ತೆಗೆದಳು ಇದು ಆಶ್ಚರ್ಯದ ವಿಷಯ ಕಣಮ್ಮ.

ನೀತು......ನೀನೇ ನೋಡುವಂತೆ ತಾಳು ಈ ಮಹರಾಣೀನ ಕೇಳ್ತಿನಿ ಮೂಡ್ ಇದೆಯೋ ಇಲ್ವೋ ಯಾರಿಗೆ ಗೊತ್ತು. ಚಿನ್ನಿ ಆ ಬೀರು ತೆಗಿ ಕಂದ ನಿಂಗೆ ಚಾಕಿ ಕೊಡ್ತೀನಿ.

ನಿಶಾ ಅಮ್ಮನೆದುರು ಕೈ ಚಾಚುತ್ತ.........ಚಾಕಿ ಕೊಲು ಮಮ್ಮ.

ನೀತು.......ಚಾಕಿ ಕೊಡ್ತೀನಿ ಮೊದಲು ಆ ಬೀರು ತೆಗಿ ಬಾ.

ನಿಶಾ ಮಂಚದಿಂದ ಕೆಳಗೆ ಜಾರಿಕೊಂಡು ಬೀರುವಿನತ್ತ ತೆರಳಿ ಅದರ ಬಾಗಿಲನ್ನಿಡಿದು ಜಗ್ಗಿ ತೆಗೆಯುವ ಪ್ರಯತ್ನ ಮಾಡಿ ವಿಫಲಳಾದಳು. ಅಮ್ಮನ ಮುಖವನ್ನೊಮ್ಮೆ ನೋಡಿ ಏನೋ ಯೋಚಿಸುತ್ತ ತನ್ನ ತಲೆ ಕೆರೆದುಕೊಳ್ಳುತ್ತ ನೆಲದಲ್ಲಿ ಕುಳಿತಳು. ಬೀರುವಿನ ಕೆಳಭಾಗದಲ್ಲಿನ ಸಂಧಿಯಲ್ಲಿ ಕೈ ತೂರಿಸಿ ಅಲ್ಲೇನೋ ತಡಕಾಡುತ್ತ ಎಳೆದಾಡಿದ ಕೆಲ ಹೊತ್ತಿನಲ್ಲೇ ಬೀರು ಬಾಗಿಲಿನ ಲಾಕ್ ಟಕ್...ಎಂಬ ಶಬ್ದದೊಂದಿಗೆ ಒಪನ್ ಆಗಿದ್ದನ್ನು ನೋಡಿ ವರ್ಧನ್ ಮತ್ತು ನಿಧಿ ಅಚ್ಚರಿಯಿಂದ ನಿಶಾಳನ್ನೇ ನೋಡುತ್ತ ನಿಂತುಬಿಟ್ಟರು.


ನಿಶಾ......ಮಮ್ಮ ನಾನಿ ತೆಗಿ ಚಾಕಿ ಕೊಲು.

ನೀತು ಅವಳಿಗೊಂದು ಚಾಕ್ಲೇಟ್ ನೀಡಿ.....ನೋಡಿದ್ಯೇನಮ್ಮ ನಿಧಿ ಚಿನ್ನಿ ಮರಿ ಹೇಗೆ ತೆಗೆದಳು ಅಂತ.

ವರ್ಧನ್.....ಇದು ನಿಜಕ್ಕೂ ಅಚ್ಚರಿಯ ಸಂಗತಿ ಅಕ್ಕ ಬೀರುವಿನ ಲಾಕ್ ತೆಗೆಯುವುದೆಂದರೆ ಸಾಮಾನ್ಯದ ವಿಷಯವಲ್ಲ ಆದರೆ ನಿಶಾ ಇದನ್ನೇಗೆ ತೆಗೆದಳೆಂಬುದೇ ಅರ್ಥವಾಗ್ತಿಲ್ಲ.

ನಿಧಿ........ಚಿನ್ನಿ ನಿನಗೆ ಬೀರು ತೆಗೆಯಲು ಯಾರು ಹೇಳಿಕೊಟ್ಟರು.

ನಿಶಾ ಚಾಕ್ಲೇಟ್ ಚಪ್ಪರಿಸುತ್ತಲೇ.......ಮಮ್ಮ.

ನೀತು ಮಗಳ ಪಕ್ಕದಲ್ಲಿ ಕುಳಿತು....ನಾನ್ಯಾವಾಗಮ್ಮ ಹೇಳಿಕೊಟ್ಟೆ ?

ನಿಶಾ......ನೀನಿ ಲಿಲ್ಲ ಮಮ್ಮ ಆ ಮಮ್ಮ ಹೇಳಿ ನಾನಿ ತೆಗ್ದಿ.

ಮಗಳ ಬಾಯಿಂದ " ಆ ಮಮ್ಮ " ಎಂಬ ವಾಕ್ಯವನ್ನು ಕೇಳಿ ನೀತು ಮಂಚದಿಂದೆದ್ದು ಮಗಳತ್ತ ಆಶ್ಚರ್ಯದಿಂದ ನೋಡುತ್ತಿದ್ದಳು.

ಹರೀಶನೇ ಶಾಕಿನಿಂದ ಮೊದಲು ಸಾವರಿಸಿಕೊಂಡು......ಇದರ ಬಗ್ಗೆ ಗುರುಗಳನ್ನೇ ಕೇಳಬೇಕು ಈಗ ಮುಂದೇನು ವರ್ಧನ್.
***

2 comments:

  1. ಕತೆಯಂತೂ ಬಹಳ ಕುತೂಹಲವನ್ನು ಹೆಚ್ಚಿಸುತ್ತಿದೆ, ಧನ್ಯವಾದಗಳು12 February 2025 at 19:50

    ಕತೆಯಂತೂ ಬಹಳ ಕುತೂಹಲ ಹೆಚ್ಚಿಸುತ್ತದೆ

    ReplyDelete
  2. ಕತೆ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ದಯವಿಟ್ಟು ನಂದು ಒಂದು ವಿನಂತಿ ಆದಷ್ಟು ರಶ್ಮಿ, ನಿಕಿತಾ, ದೃಷ್ಟಿ, ಗಿರೀಶ, ನಿಧಿ-ವಿರೇಂದ್ರ ಅನುಷ, ಪ್ರೀತಿ, ಸುಮಾ threesom or foursome ಇವರ ಬಗ್ಗೆ ಆದಷ್ಟು ಹೆಚ್ಚಾಗಿ ಸ್ಟೋರಿ ಬರೆಯಿರಿ ಆದಷ್ಟು ಹೆಚ್ಚಾಗಿ Romance ಮಾಡುವ ಸ್ಟೋರಿ ಬರೆಯಿರಿ please my personal humble request ri please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 🙏🙏🙏🙏🙏🙏🙏🙏🙏🙏🙏🙏🙏

    ReplyDelete