Total Pageviews

Saturday, 8 February 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 275

ರಾಜಸ್ಥಾನ್ ಸ್ಪೆಷಲ್......

ಬೆಂಗಳೂರಿನಿಂದ ಸಂಸ್ಥಾನದ ವಿಶೇಷ ವಿಮಾನದಲ್ಲಿ ಜೋಧಪುರ ತಲುಪಿದ್ದು ಅಲ್ಲಿರುವ ಸಂಸ್ಥಾನದ ಅರಮನೆ ತಲುಪಿದರು. ಇಲ್ಲಿನ ಅರಮನೆ ಉದಯಪುರದ ಅರಮನೆಗೆ ಹೋಲಿಸಿದರೆ ವಿಶಾಲವಾಗಿ ಇಲ್ಲದಿದ್ದರೂ ಸುಸಜ್ಜಿತವಾಗಿ ಆಕರ್ಶಣೀಯವಾಗಿತ್ತು.

ನೀತು........ರಾಣಾ ಇಲ್ಲಿ ಊಟದ ವ್ಯವಸ್ಥೆ.........

ರಾಣಾ.....ಅಜಯ್ ಸಿಂಗ್ ನೆನ್ನೆಯೇ ಬಂದಿದ್ದಾನೆ ಮಾತೆ ಎಲ್ಲವೂ ಸಿದ್ದ ಮಾಡಿಸಿದ್ದಾನೆ ಅದರ ಬಗ್ಗೆ ಚಿಂತೆಬೇಡ.

ನೀತು......ಆರಾಧನ ಮತ್ತವಳ ಕುಟುಂಬವೆಲ್ಲಿ ?

ಅಜಯ್ ಸಿಂಜ್ ಹತ್ತಿರ ಬಂದು ಗೌರವ ಸೂಚಿಸಿ.....ಅವರನ್ನಿಲ್ಲೇ ನೆಲ ಮಾಳಿಗೆಯ ಕೋಣೆಯಲ್ಲಿ ಇಟ್ಟಿರುವೆ ಅಲ್ಲಿಗೆ ಹೋಗೋಣವ ಮಾತೆ ?

ನೀತು.....ಮಗಳಿಗೆ ಆಯಾಸವಾಗಿದೆ ಇವರನ್ನು ವಿಚಾರಿಸಿಕೊಳ್ತೀನಿ ನಂತರ ಹೋಗೋಣ.

ನಿಶಾ ಅರಮನೆಯಲ್ಲಿ ಗುಡುಗುಡುನೇ ಓಡಾಡುತ್ತ ಎಲ್ಲವನ್ನೂ ನೋಡಿ ಅಮ್ಮನ ಬಳಿ ಬಂದು......ಮಮ್ಮ ಆನಿ ಲಿಲ್ಲ....ಕುದ್ದಿ ಲಿಲ್ಲ ಏನಿ ಇಲ್ಲ ಮಮ್ಮ.

ನಿಧಿ ತಂಗಿಯನ್ನೆತ್ತಿಕೊಂಡು........ಅದೆಲ್ಲ ಇಲ್ಲಿಲ್ಲ ಚಿನ್ನಿ ನಾವು ದೊಡ್ಡ ಅರಮನೆಗೆ ಹೋಗ್ತೀವಲ್ಲ ಅಲ್ಲಿದೆ ಆಗ ನೋಡುವಂತೆ.

ಅನುಷ.....ನಡಿ ಕಂದ ಫ್ರೆಶಾಗಿ ಊಟ ಮಾಡಿಸ್ತೀನಿ.

ನಿಶಾ....ಆಂಟಿ ನನ್ನಿ ಐಸ್ ಬೇಕು.

ಅನುಷ......ಮಮ್ಮಂಗೆ ಹೇಳಲಾ ?

ನಿಶಾ ಅವಳ ಕೆನ್ನೆಗೆ ಮುತ್ತಿಟ್ಟು.......ಆಂಟಿ ಪೀಚ್ ತುಂಬ ಬಿಸಿ ಬಿಸಿ ಆತು ಆಂಟಿ ಪೀಚ್ ನನ್ನಿ ಐಸ್ ಕೊಲು.

ನಿಧಿ......ಒಳಗೆ ಬನ್ನಿ ಆಂಟಿ ಅಲ್ಲಿ ತಂಪಾಗಿರುತ್ತೆ.

ನೀತು.......ಅನು ನೀವ್ಮೂರು ಜನ ಊಟ ಮುಗಿಸಿ ರೆಸ್ಟ್ ಮಾಡ್ತಿರಿ ನಾನೂ ಆಮೇಲೆ ಬರ್ತೀನಿ ಸುಮೇರ್ ನೀನಿವರ ಜೊತೆಯಲ್ಲಿರು. ನಡಿ ರಾಣ ನಾವೀಗಲೇ ಆರಾಧನ ಬಳಿ ಹೋಗೋಣ.

ನಿಶಾ ಅರಮನೆಯನ್ನು ಅಚ್ಚರಿಯಿಂದ ನೋಡುತ್ತ ಎಲ್ಲಾ ಕಡೆಗೂ ಓಡಾಡುತ್ತಿದ್ದರೆ ಸಂಸ್ಥಾನದ ಯುವರಾಣಿಯರು ಬಂದಿರುವುದನ್ನು ನೋಡಿ ಅಲ್ಲಿನ ದಾಸಿಯರು ವಿನಂಮ್ರತಾ ಪೂರಕವಾಗಿ ಅವರಿಗೆ ನಮಸ್ಕರಿಸಿದರು. ಮೂವರು ರೂಮೀಗೆ ಬಂದಾಗ.......

ಅನುಷ......ಒಂದು ರೂಮೇ ಇಷ್ಟೊಂದು ದೊಡ್ಡದಾಗಿದೆಯಲ್ಲ ನಿಧಿ

ನಿಧಿ.....ಚಿಕ್ಕಮ್ಮ ಇಲ್ಲಿಯ ಅರಮನೆ ತುಂಬ ಚಿಕ್ಕದು ನಾವು ರಾತ್ರಿ ಉದಯಪುರಕ್ಕೆ ಹೋಗ್ತೀವಲ್ಲ ಅಲ್ಲಿನ ಅರಮನೆ ನೋಡಿದಾಗ ನೀವು ಇನ್ನೇನಂತೀರೋ ಅಷ್ಟು ವಿಶಾಲ ಮತ್ತು ಭವ್ಯವಾಗಿದೆ.

ನಿಶಾ......ಆಂಟಿ ನಿನ್ನಿ ಬಂತು ನಾನಿ ತಾಚಿ ಮಾತೀನಿ.

ಅನುಷ......ಮೊದಲು ಊಟ ಮಾಡಿ ಆಮೇಲೆ ತಾಚಿ ಮಾಡುವಂತೆ

ನಿಶಾ......ಆತು ಆಂಟಿ ನನ್ನಿ ಸೂ...ಬಂತು.

ಅನುಷ ಮುಗುಳ್ನಗುತ್ತ......ನಡಿ....ಎಂದವಳನ್ನು ಬಾತ್ರೂಮಿಗೆ ಕರೆದೊಯ್ದಳು.
* *
* *
ಅರಮನೆಯ ನೆಲಮಾಳಿಗೆಗೆ ಬಂದಾಗ 55ರ ಅಸುಪಾಸಿನಲ್ಲಿರುವ ಗಂಡ ಹೆಂಡತಿ ಹಾಗು 25ರ ಇಬ್ಬರು ಯುವಕರನ್ನು ಗೋಡೆಯಲ್ಲಿದ್ದ ಕೊಂಡಿಗಳಿಗೆ ಸರಪಳಿಯಿಂದ ಕಟ್ಟಿಹಾಕಲಾಗಿತ್ತು.

ರಾಣಾ.......ಇವಳೇ ಮಾತೆ ಆರಾಧನಾ ಈತ ಇವಳ ಗಂಡ ಮತ್ತು ಇವಳ ಇಬ್ಬರು ಮಕ್ಕಳು ಇಷ್ಟೆ ಇವರ ಕುಟುಂಬ.

ನೀತು......ಅಜಯ್ ಸಿಂಗ್ ಇವಳ ಗಂಡನ ಎರಡೂ ಕೈ ಕತ್ತರಿಸು.

ಮಾತೆಯ ಆಜ್ಞೆ ಕೇಳಿದಾಕ್ಷಣ ಅಜಯ್ ಸಿಂಗ್ ತನ್ನ ಖಡ್ಗವನ್ನಿರಿದರೆ ಆರಾಧನ ಮತ್ತವಳ ಗಂಡ ಹಾಗು ಮಕ್ಕಳ ಮುಖದಲ್ಲಿ ಭಯವು ತಾಂಡವಾಡತೊಡಗಿತು. ಖಡ್ಗವನ್ನಿಡಿದು ಗಂಡನ ಕಡೆ ಹೋಗ್ತಿದ್ದ ಅಜಯ್ ಸಿಂಗ್ ನೋಡಿ ಆರಾಧನಾ ಜೋರಾಗಿ ಚೀರುತ್ತ......

ಆರಾಧನ.....ನಮ್ಮನ್ಯಾಕೆ ಬಂಧಿಸಿ ಹಿಂಸಿಸುತ್ತಿದ್ದೀರ ? ರಾಣಾ ನಿನಗೆ ನಾನ್ಯಾರೆಂಬುದು ಮರೆತು ಹೋಯಿತಾ ? ನಾನು ಮಹರಾಣಿಯ ಆಪ್ತ ಸಹಾಯಕಿ ಆಗಿದ್ದವಳು ನೀನು ನನ್ನನ್ನು ಅರಮನೆಯಲ್ಲವರ ಜೊತೆ ನೋಡಿರುವೆಯಲ್ಲ. ನಾವೇನು ಅನ್ಯಾಯ ಮಾಡಿದ್ದೀವಿ ?

ನೀತು......ಒಂದೇ ಒಂದು ಪ್ರಶ್ನೆ ಕೇಳ್ತೀನಿ ಉತ್ತರಿಸು. ಮಹರಾಣಿ ಸುಧಾಮಣಿಯವರ ಸಾವಿನ ಹಿಂದೆ ಯಾರ ಕೈವಾಡವಿದೆ ? ಅವರ ಸಾವಿನಲ್ಲಿ ನಿನ್ನ ಪಾತ್ರವೇನು ?

ನೀತುವಿನ ಬಾಯಿಂದ ಮಹರಾಣಿಯ ಸಾವಿನ ರಹಸ್ಯದ ಬಗ್ಗೆ ಪ್ರಶ್ನೆ ಕೇಳಿ ನಡುಗಿಹೋದ ಆರಾಧನಾ ಸಾವರಿಸಿಕೊಳ್ಳುತ್ತ........ನಾನು ಮಹರಾಣಿಯವರ ಆಪ್ತ ಸಹಾಯಕಿ ಆಗಿದ್ದವಳು ಅವರ ಸಾವಿನಲ್ಲಿ ನನ್ನ ಪಾತ್ರವೇನಿದೆ ? ಅದು ಸಹಜ ಸಾವು ತಾನೇ ?

ನೀತು.....ಅಂದರೆ ನೀನು ಸತ್ಯ ಹೇಳುವುದಿಲ್ಲ ಅಂತಾಯ್ತು.

ಆರಾಧನಾ.....ನನಗೇನಾದರೂ ಗೊತ್ತಿದ್ದರೆ ತಾನೇ ಹೇಳುವುದಕ್ಕೆ...

ನೀತು ತಲೆಯಾಡಿಸಿದ ಮರುಕ್ಷಣ ಆರಾಧನಾಳ ಗಂಡನ ಹೃದಯ ವಿದ್ರಾವಕ ಚೀರಾಟ ನೆಲಮಾಳಿಗೆಯಲ್ಲಿ ಮಾರ್ಧನಿಸಿತು. ಅವಳ ಗಂಡನ ಎರಡು ಕೈಗಳೂ ಕತ್ತರಿಸಲ್ಪಟ್ಟಿದ್ದು ಅವನ ಭುಜದಿಂದ ರಕ್ತ ಕಾರಂಜಿಯಂತೆ ಚಿಮ್ಮುತ್ತಿದ್ದಾಗಲೇ ನಿಧಿ ಕೂಡ ಅಲ್ಲಿಗೆ ಬಂದಳು.

ಆ ಹೆಂಗಸನ್ನು ಸೂಕ್ಷ್ಮವಾಗಿ ಗಮನಿಸುತ್ತ........

ನಿಧಿ......ಆರಾಧನಾ ತಾಯಿ ನೀನಾ ?

ಗಂಡನ ಕೈಗಳು ಕತ್ತರಿಸಿದ್ದ ಕಾರಣ ಆರಾಧನಾ ದುಃಖದಿ ಅಳುತ್ತಿದ್ದು ತಾನು ಮಾಡಿರುವ ಪಾಪ ಕೃತ್ಯಗಳನ್ನು ನೆನೆಯುತ್ತ ಅದಕ್ಕೀಗ ತಕ್ಕ ಪ್ರತಿಫಲ ಸಿಗುತ್ತಿದೆ ಎಂದುಕೊಂಡು ತಪ್ಪಿಗಾಗಿ ಕೊರಗುತ್ತಿದ್ದಳು.

ನೀತು......ನೀನೀಗಲೂ ಸತ್ಯ ಹೇಳದಿದ್ದರೆ ಮುಂದಿನ ಸರದಿ ಕಿರಿಯ ಮಗನದ್ದು ಬೇಗ ಯೋಚಿಸು.

ಆರಾಧನಾಳ ಕಿರಿಯ ಮಗನ ಕಡೆ ಅಜಯ್ ಸಿಂಗ್ ತಿರುಗಿದಾಗ ಆಕೆ ಬೇಡವೆಂದು ಎಲ್ಲಾ ಸತ್ಯ ಸಂಗತಿಗಳನ್ನು ಹೇಳುವೆನೆಂದಳು.

ನೀತು......ಒಂದೇ ಒಂದು ಸುಳ್ಳನ್ನೂ ಹೇಳದೆ ಎಲ್ಲಾ ನಿಜ ಸಂಗತಿ ನಿನ್ನ ಬಾಯಿಂದ ಹೊರಬರಬೇಕು ಎಚ್ಚರವಿರಲಿ.

ಆರಾಧನಾ.....ಮಹರಾಣಿಯವರ ಸಾವಿಗೆ ಕಾರಣ ಯಶೋಮತಿ.

ನೀತು......ಯಾರವಳು ?

ಆರಾಧನಾ........ಚಂಚಲಾದೇವಿಯವರ ಹಿರಿಮಗಳು ಎಲ್ಲವನ್ನೂ ಅವಳೇ ಯೋಚಿಸಿ ಪ್ಲಾನ್ ಮಾಡ್ತಿದ್ದಳು ಆದರೆ ಮುಂದ್ಯಾವತ್ತೂ ಬರುತ್ತಿರಲಿಲ್ಲ ಹಿಂದೆಯೇ ನಿಂತು ತನಗಿಷ್ಟ ಬಂದಂತೆ ಎಲ್ಲರನ್ನೂ ಆಡಿಸುತ್ತಿದ್ದಳು. ಮಹರಾಣಿಯವರಿಗೆ ಮದುವೆಯಾದ ಮೊದಲನೇ ವರ್ಷ ಕಾಶಿಯ ಸನ್ನಿಧಾನಕ್ಕೆ ಮಹರಾಜರ ಜೊತೆ ತೆರಳಿದ್ದರು ಆಗ ನಾವೂ ಕೆಲವರು ಅವರ ಜೊತೆಗಿದ್ದೆವು. ಗಂಗಾ ನದಿ ದಂಢೆಯಲ್ಲಿನ ಮಣಿಕರ್ಣಿಕಾ ಘಾಟಿಗೆ ಹೋಗಿದ್ದಾಗ ಅಲ್ಲಿ 4—5 ತಿಂಗಳಿನ ತುಂಬ ಮುದ್ದಾಗಿರುವ ಹೆಣ್ಣು ಮಗುವನ್ಯಾರೋ ಮಲಗಿಸಿ ಹೋಗಿದ್ದರು. 

ಅಲ್ಲಿ ಜಮಾಯಿಸಿದ್ದ ಜನರೆಲ್ಲರೂ ನಿಂತು ಮಗುವನ್ನು ನೋಡುತ್ತಾ ಇದ್ದರೇ ವಿನಃ ಯಾರೊಬ್ಬರೂ ಅಳುತ್ತಿರುವ ಮಗುವನ್ನೆತ್ತಿಕೊಂಡು ಸಮಾಧಾನ ಮಾಡುವ ಪ್ರಯತ್ನ ಮಾಡಲು ಮುಂದಾಗಲಿಲ್ಲ. ನಾವು ಅಲ್ಲಿಗೆ ಬಂದಾಗ ಮಹರಾಣಿಯವರ ದೃಷ್ಟಿ ಮಗುವಿನತ್ತ ಹೊರಳಿ ಅವರೇ ಖುದ್ದಾಗಿ ಮಗುವನ್ನೆತ್ತಿಕೊಂಡರು. ಮಹರಾಣಿಯವರ ಮಡಿಲಿಗೆ ಬರುತ್ತಿದ್ದ ಹಾಗೆಯೇ ಮಗು ಅಳುವುದನ್ನು ನಿಲ್ಲಿಸಿ ತನ್ನ ಪುಟ್ಟ ಕೈಗಳಿಂದ ಅವರ ಮುಖ ತಡವುತ್ತ ಮುಗುಳ್ನಗುತ್ತಿತ್ತು. ಮಗು ಜೊತೆ ನಾವು ಕಾಶಿಯಲ್ಲಿ ಉಳಿದುಕೊಂಡಿದ್ದ ಸ್ಥಳಕ್ಕೆ ಹಿಂದಿರುಗಿದ ಬಳಿಕ ಮಹರಾಜರ ಆದೇಶದಂತೆ ಆ ಮಗುವಿನ ಬಗ್ಗೆ ವಿಚಾರಿಸಲು ಕೆಲವರು ತೆರಳಿದರು. 

ಒಂದು ದಿನದ ನಂತರ ಮಗುವಿನ ವಿಷಯದ ಬಗ್ಗೆ ಎಲ್ಲವನ್ನೂ ತಿಳಿದುಕೊಂಡು ಬಂದಿದ್ದರು. ಶ್ರೀನಾಥ ವಸಿಷ್ಠ ಮತ್ತು ರಾಜಲಕ್ಷ್ಮಿ ವಸಿಷ್ಠ ಎಂಬ ದಂಪತಿಗಳಿಗೆ ಜನಿಸಿದ ಮಗಳು ಈ ಹಸುಗೂಸಾಗಿದ್ದಳು. ಆದರೆ ಮಗುವಿನ ಜನನದ ಸಮಯದಲ್ಲಿ ಅತೀವ ರಕ್ತಸ್ರಾವದಿಂದ ರಾಜಲಕ್ಷ್ಮಿಯವರು ಮರಣ ಹೊಂದಿದ್ದು ಆ ಆಘಾತವನ್ನು ಸಹಿಸಲಾರದೆ ಶ್ರೀನಾಥ ವಸಿಷ್ಠರಿಗೆ ಹೃದಯಾಘಾತ ಸಂಭವಿಸಿ ಅವರೂ ಮರಣಿಸಿದ್ದರೆಂದು ತಿಳಿಯಿತು. ಕಾಶಿಯಲ್ಲಿ ಆ ಇಬ್ಬರು ದಂಪತಿಗಳು ಸತ್ಯ....ನಿಷ್ಠೆ...ಧರ್ಮ ಮತ್ತು ಪ್ರಾಮಾಣಿಕತೆಗೆ ತುಂಬ ಹೆಸರುವಾಸಿಯಾಗಿದ್ದು ಜನರಿಗೆ ತಮ್ಮಿಂದಾಗುವ ಎಲ್ಲಾ ರೀತಿ ಸಹಾಯ ಮಾಡುತ್ತಿದ್ದರೆಂದು ತಿಳಿಯಿತು. 

ಅವರಿಗ್ಯಾರೂ ಬಂಧು ಭಾಂಧವರಿಲ್ಲದೆ ದಂಪತಿಗಳ ಮರಣದ ಬಳಿಕ ಮಗುವಿನ ಲಾಲನೆ ಪೋಷಣೆ ಮಾಡಲು ಕೆಲವರು ಮುಂದೆ ಬಂದಿದ್ದರೂ ಅವರಲ್ಯಾರೂ ಸಹ ಮಗುವಿನ ಪೂರ್ಣ ಪ್ರಮಾಣದಲ್ಲಿ ಜವಾಬ್ದಾರಿ ಹೊರುವುದಕ್ಕೆ ಸಿದ್ದರಾಗಿರಲಿಲ್ಲ. ಕಷ್ಟವೆಂದು ಮನೆ ಬಾಗಿಲಿಗೆ ಬಂದವರನ್ನೆಂದೂ ಬರಿಗೈಯಲ್ಲಿ ಹಿಂದಿರುಗಿಸಿರದ ದಂಪತಿಗಳು ಮರಣ ಹೊಂದಿದಾಗ ಅವರ ಮಗಳನ್ನು ನೋಡಿಕೊಳ್ಳಲು ಯಾರೂ ಮುಂದೆ ಬರಲಿಲ್ಲ. ಎಲ್ಲಾ ವಿಷಯ ತಿಳಿದ ಬಳಿಕ ಮಹರಾಣಿಯವರು ಆ ಮಗುವನ್ನು ತಾವೇ ದತ್ತು ಸ್ವೀಕರಿಸುವುದಾಗಿ ತೀರ್ಮಾನಿಸಿದರೆ ಮಹರಾಜರೂ ಸಹ ಸಂತೋಷದಿಂದ ಸಮ್ಮತಿಸಿದರು.

ಆರಾಧನ......ಉದಯಪುರ ಅರಮನೆಯಲ್ಲಿ ಅದ್ದೂರಿಯಾಗಿ ಹೋಮ ಹವನಗಳನ್ನು ಆಯೋಜಿಸಿ ಮಗುವಿಗೆ ನಿಧಿ ಎಂಬುದಾಗಿ ನಾಮಕರಣ ಮಾಡಿದ ಮಹರಾಜರು ಅವಳನ್ನು ಸೂರ್ಯವಂಶಿ ಸಂಸ್ಥಾನದ ಯುವರಾಣಿ ಎಂದು ಘೋಷಿಸಿದರು. ಶ್ರೀನಾಥ್ ವಸಿಷ್ಠ ಅವರಿಗೆ ಸೇರಿದ್ದ ಮನೆ ಮತ್ತು ಕೆಲವು ಆಸ್ತಿಗಳನ್ನು ಕೂಡ ನಿಧಿಯ ಹೆಸರಿಗೆ ವರ್ಗಾವಣೆ ಮಾಡಿ ಅದನ್ನೆಲ್ಲಾ ಸಂಸ್ಥಾನದ ಅಧೀನದಲ್ಲಿ ತೆಗೆದುಕೊಂಡು ಸುರಕ್ಷಿತವಾಗಿ ನೋಡಿಕೊಳ್ಳುತ್ತಿದ್ದರು. ಮಹರಾಣಿ ಪ್ರಕಾರ ನಿಧಿ ವಯಸ್ಕಳಾಗಿ ತಿಳುವಳಿಕೆ ಬಂದಾಗ ಅವಳಿಗೆ ತನ್ನ ಜನ್ಮಕ್ಕೆ ಕಾರಣರಾದ ತಂದೆ ತಾಯಿಯರ ಬಗ್ಗೆ ತಿಳಿಸಿ ಜನಿಸಿರುವ ಮನೆಗೆ ಕರೆದೊಯ್ಯುವ ಯೋಚನೆ ಅವರದಾಗಿತ್ತು. ಈ ಸತ್ಯವನ್ನು ತಿಳಿದವರಲ್ಲಿ ನನ್ನನ್ನು ಬಿಟ್ಟರೆ ಬಹುಶಃ ಬೇರಾರೂ ಈಗ ಬದುಕಿಲ್ಲ ಅಂದುಕೊಳ್ತೀನಿ.

ನಿಧಿ ತನ್ನ ಜನ್ಮರಹಸ್ಯ ಮತ್ತು ಇಷ್ಟು ವರ್ಷಗಳ ಬಳಿಕ ತನ್ನ ಜನ್ಮಕ್ಕೆ ಕಾರಣರಾದ ತಂದೆ ತಾಯಿಯ ಬಗ್ಗೆ ತಿಳಿದು ಕಣ್ಣೀರು ಸುರಿಸುತ್ತಿದ್ದರೆ ನೀತು ಮಗಳನ್ನು ತಬ್ಬಿಕೊಂಡು ಸಮಾಧಾನ ಮಾಡುತ್ತಿದ್ದಳು.

ಆರಾಧನಾ......ಸೂರ್ಯವಂಶಿ ಸಂಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಯಾವಾಗ ನಿಧಿಯ ಆಗಮನವಾಯಿತೋ ಆಗಿನಿಂದ ಯಶೋಮತಿ ತನ್ನ ಕುಕೃತ್ಯಗಳನ್ನು ಪ್ರಾರಂಭಿಸಿದಳು. ನಿಧಿಗೆ ಐದು ವರ್ಷಗಳಾಗುವ ತನಕ ಅವಳನ್ನು ಸಾಯಿಸುವುದಕ್ಕೆ ಹಲವಾ ಪ್ರಯತ್ನ ನಡೆದಿದ್ದರೂ ಯಾವುದೂ ಫಲಿಸಲಿಲ್ಲ. ನಿಧಿಯ ಪ್ರಾಣ ಅರಮನೆಯಲ್ಲೆಂದೂ ಸುರಕ್ಷಿತವಲ್ಲ ಎಂಬುದನ್ನು ತಿಳಿದೇ ಗುರುಗಳಾದ ಶ್ಯಾಮ ವಸಿಷ್ಠರು ತಮ್ಮೊಂದಿಗೆ ನಿಧಿಯನ್ನು ಆಶ್ರಮಕ್ಕೆ ಕರೆಯೊದ್ದರು. 

ಆದರೆ ಆಶ್ರಮ ಎಲ್ಲಿದೆ ಎಂಬುದು ಮಾತ್ರ ನನಗೆ ತಿಳಿದಿಲ್ಲ. ಆದಾದ ಬಳಿಕ ಹಲವು ವರ್ಷಗಳ್ಯಾವುದೇ ಚಟುವಟಿಕೆಗಳು ನಡೆದಿರಲಿಲ್ಲ ಆದರೆ ನಮ್ಮ ಮಹರಾಣಿಯವರು ಮದುವೆಯಾಗಿ 18 ವರ್ಷಗಳ ನಂತರ ಗರ್ಭ ಧರಿಸಿದಾಗ ಸಂಸ್ಥಾನದ ಎಲ್ಲಾ ವಿರೋಧಿಗಳೂ ಒಂದಾಗಿದ್ದು ಆ ಮಗು ಜನಿಸುವುದಕ್ಕೂ ಮುಂಚೆಯೇ ಕೊಲ್ಲುವ ಸಂಚುಗಳನ್ನು ರೂಪಿಸತೊಡಗಿದರು. ಯಶೋಮತಿ ನನ್ನನ್ನು ಸಂಪರ್ಕಿಸಿ ನನ್ನಿಂದ ಮಹರಾಣಿಯವರ ಊಟದಲ್ಲಿ ಪ್ರತಿನಿತ್ಯವೂ ವಿಶಿಷ್ಟವಾದ ಒಂದು ವಿಷವನ್ನು ಬೆರೆಸುವ ಉಪಾಯ ಹೇಳಿ ಅದಕ್ಕೆ ಪ್ರತಿಫಲವಾಗಿ ಕೆಲ ಕೋಟಿ ರೂಪಾಯಿಗಳನ್ನು ನೀಡುವ ಅಮಿಷವನ್ನೊಡ್ಡಿದರು. 

ನಾನು ನನ್ನ ಗಂಡ ಮಕ್ಕಳ ಜೊತೆ ಚರ್ಚಿಸಿದ ನಂತರ ಆ ಕೆಲಸ ಮಾಡಲು ಸಮ್ಮತಿಸಿ ಮುಂಗಡ ಹಣವನ್ನೂ ಪಡೆದುಕೊಂಡೆ. ಪ್ರತಿನಿತ್ಯವೂ ಮಹರಾಣಿಯವರಿಗೆ ನಾನೇ ಊಟ ತೆಗೆದುಕೊಂಡು ಹೋಗುತ್ತಿದ್ದ ಕಾರಣ ಅದಕ್ಕೆ ವಿಷ ಬೆರೆಸುವುದು ಕಷ್ಟದ ಕೆಲಸವಾಗಿರಲಿಲ್ಲ. ಹುಟ್ಟುವುದಕ್ಕೂ ಮುಂಚೆಯೇ ಮಹರಾಣಿಯವರ ಗರ್ಭದಲ್ಲಿರುವ ಮಗುವನ್ನು ಸಾಯಿಸುವುದು ಪಾಪದ ಕೃತ್ಯವೆಂದು ತಿಳಿದಿದ್ದರೂ ಸಹ ಹಣದ ಮೇಲಿನ ವ್ಯಾಮೋಹಕ್ಕೆ ನಾನು ದುಶ್ಕೃತ್ಯ ಮಾಡುತ್ತಲಿದ್ದೆ. ಮಹರಾಣಿಯವರಿಗೆ ಏಳನೇ ತಿಂಗಳು ನಡೆಯುತ್ತಿದ್ದಾಗ ಅವರ ಆರೋಗ್ಯದಲ್ಲಿ ತೀರ ಏರುಪೇರಾದಾಗ ಮಹರಾಜರ ಆದೇಶದಿಂದ ಎಲ್ಲಾ ಆಪ್ತ ಸಹಾಯಕ ಸಿಬ್ಬಂದಿಗಳನ್ನು ಬದಲಾಯಿಸಲಾಯಿತು. 

ನನ್ನ ಮೇಲೆ ಅನುಮಾನ ಬರುವುದಕ್ಕೂ ಮುಂಚೆ ನಾನು ಮಾಡುವ ಕೆಲಸವನ್ನು ಮಾಡಿದ್ದರಿಂದ ಅರಮನೆಯಿಂದೇಗೋ ಹೊರಬಂದು ಯಶೋಮತಿ ಬಳಿ ಉಳಿದ ಹಣವನ್ನು ಪಡೆದು ಕುಟುಂಬದವರ ಜೊತೆ ಕೇರಳಕ್ಕೆ ಹೋಗಿ ನೆಲೆಸಿದೆ. ಕೆಲವು ದಿನಗಳಾದ ನಂತರವೇ ಮಹರಾಣಿ ಮತ್ತು ಮಗು ಮರಣ ಹೊಂದಿದರೆಂಬ ಸುದ್ದಿ ನನಗೂ ತಿಳಿಯಿತು ಆದರೆ ನಿಧಿ ಬಗ್ಗೆ ನನಗೇನೂ ಗೊತ್ತಿಲ್ಲ. ನನಗೆ ಗೊತ್ತಿದ್ದ ಎಲ್ಲವನ್ನೂ ಹೇಳಿರುವೆ ಮಾಡಿದ ತಪ್ಪನ್ನೂ ಒಪ್ಪಿಕೊಂಡಿದ್ದೀನಿ ಶಿಕ್ಷೆ ನೀಡುವುದಾದರೆ ನನಗೆ ನೀಡಿ ನನ್ನ ಮಕ್ಕಳಿಗೇನೂ ಮಾಡ್ಬೇಡಿ.

ನೀತು.......ಹುಟ್ಟುವುದಕ್ಕೂ ಮುಂಚೆಯೇ ತಾಯಿಯ ಗರ್ಭದಲ್ಲೇ ಮಗುವನ್ನು ಸಾಯಿಸುವ ಪ್ರಯತ್ನ ಮಾಡಿದ ನೀನು ನಿನ್ನ ಮಕ್ಕಳ ಜೀವದಾನ ಬೇಡಿಕೊಳ್ಳುತ್ತಿದ್ದೀಯ ಇದೊಂದು ರೀತಿ ತಮಾಷೆಯೇ ಅಲ್ಲವಾ. ನಿನಗೊಂದು ವಿಷಯ ಹೇಳುವುದಿತ್ತು ನೀನು ತಿಳಿದಂತೆ ಮಹರಾಣಿಯವರು ಸಾಯುವ ಮುನ್ನ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿ ಮರಣ ಹೊಂದಿದರು ಆದರೆ ಮಗುವಿಗೆ ಏನೊಂದೂ ತೊಂದರೆಯಾಗಲಿಲ್ಲ ಈಗವಳು ಆರೋಗ್ಯವಂತಳಾಗಿ ಇದ್ದಾಳೆ. ನಿಧಿ ಬಗ್ಗೆ ನಿನಗೇನೂ ಗೊತ್ತಿಲ್ಲವಲ್ಲವಾ ಇವಳೇ ಮಹರಾಣಿಯ ಹಿರಿಯ ಮಗಳು ನಿಧಿ ಸೂರ್ಯವಂಶಿ. ರಾಣಾ ಈ ಹೆಂಗಸು ಮಾಡಿರುವುದು ಘನಘೋರವಾದ ದುಶ್ಕೃತ್ಯ ಅದಕ್ಕಾಗಿ ಇವಳ ಗಂಡ ಮಕ್ಕಳಿಬ್ಬರ ತಲೆಕಡಿದು ಇವಳ ಮಡಿಲಲ್ಲಿಡಿ.....ಎಂದು ಘರ್ಜಿಸಿದಳು.

ಆರಾಧನಾ ಗೋಳಾಡುತ್ತ ಬೇಡಿಕೊಂಡರೂ ಅವಳ ಗಂಡ ಮತ್ತು ಗಂಡು ಮಕ್ಕಳಿಬ್ಬರ ತಲೆಗಳನ್ನು ಕಡಿದು ಅವಳ ಮಡಿಲಲ್ಲಿ ಇಟ್ಟರು.

ನೀತು......ಸಂಜೆವರೆಗೂ ನೀನೀ ದುಃಖವನ್ನು ಸಹಿಸಿಕೊಂಡಿದ್ದರೆ ನಿನಗೆ ಮುಕ್ತಿ ನೀಡುವುದಕ್ಕೆ ನೀನ್ಯಾವ ಮಗುವನ್ನು ಗರ್ಭದಲ್ಲಿಯೇ ಕೊಲ್ಲಲು ಮಹರಾಣಿಯವರಿಗೆ ವಿಷ ನೀಡುತ್ತಿದ್ದೆಯೇ ಅವಳೇ ಖುದ್ದು ಬರುತ್ತಾಳೆ ನಡಿಯಮ್ಮ ನಿಧಿ ಮೇಲೆ ಹೋಗೋಣ.
* *
* *
ಅನುಷಾ ಆಂಟಿಯಿಂದ ಊಟ ಮಾಡಿಸಿಕೊಂಡ ನಿಶಾ ಅವಳ್ಜೊತೆ ಸೇರಿಕೊಂಡು ನಿದ್ರಾದೇವಿಗೆ ಶರಣಾಗಿದ್ದಳು.

ನೀತು......ಏನು ಚಿಂತೆಯಮ್ಮ ? ಯಾಕಿಷ್ಟು ಬೇಸರವಾಗಿರುವೆ ?

ನಿಧಿ ಅಮ್ಮನ ಮಡಿಲಲ್ಲಿ ತಲೆಯಿಟ್ಟು........ಅಮ್ಮ ನಾನು ನಿಶಾ ಇಬ್ಬರೆಷ್ಟು ನತದೃಷ್ಟರಲ್ಲವಾ ಅಮ್ಮ. ನಾವಿಬ್ಬರೂ ಜನಿದಾಗಲೇ ನಮ್ಮಿಬ್ಬರನ್ನೂ ಹೆತ್ತ ತಾಯಂದಿರು ಈ ಲೋಕವನ್ನು ತ್ಯಜಿಸಿದರು. ಅಮ್ಮ ಹೆತ್ತ ತಾಯಿಯ ಮಡಿಲಿನ ಮಮತೆಯನ್ನು ನಾನು ಸುಧಾ ಅಮ್ಮನಿಂದ ಪಡೆದುಕೊಂಡಿದ್ದರೆ ನಿಶಾ ನಿಮ್ಮಿಂದ ಪಡೆದಿದ್ದಾಳೆ. ಈಗ ನಾವಿಬ್ಬರೂ ನಿಮ್ಮ ಪ್ರೀತಿ..ಮಮತೆಯ ಆಶ್ರಯದಲ್ಲಿದ್ದೀವಿ ಅಕಸ್ಮಾತ್ ನಿಮಗೇನಾದರೂ ಸಂಭವಿಸಿದರೆ ಅಮ್ಮ ನಿಮಗಿದೆಲ್ಲಾ ಜಂಜಾಟಳೇ ಬೇಡಾಮ್ಮ ದಯವಿಟ್ಟು ಇಲ್ಲಿಂದ ಹೊರಟುಬಿಡಿ. ಇಲ್ಲಿ ಎಂತಹುದೇ ಸಂಕಷ್ಟಳು ಏದುರಾದರೂ ಅದನ್ನು ನಾನೆದುರಿಸುತ್ತೀನಿ ನಿಮಗೇನಾದ್ರೂ ಆದರೆ ಮಾತ್ರ ನಾನು ಜೀವಂತ ಶವವಾಗಿರ್ತೀನಿ.

ನೀತು ಮಗಳ ತಲೆ ನೇವರಿಸುತ್ತ.......ನನಗೇನೂ ಆಗುವುದಿಲ್ಲಮ್ಮ ನಾನು ಜೀವಂತವಾಗಿರುವಾಗ ನನ್ನ ಮಗಳನ್ನು ಕಷ್ಟಕೂಪದೊಳಗೆ ತಳ್ಳಿ ಇಲ್ಲಿಂದ ಪಲಾಯನ ಮಾಡುವುದಾ ಅದು ಸಾಧ್ಯವೇ ಇಲ್ಲ.

ನೀತು ಮಗಳಿಗೆ ಸಮಾಧಾನ ಮಾಡುತ್ತ ಅವಳನ್ನು ತಟ್ಟುತ್ತ ನಿದ್ದೆಗೆ ಶರಣಾಗಿಸಿ ತಾನೊಬ್ಬಳೇ ಯೋಚಿಸುತ್ತ ಹೊರಗಿನ ಉದ್ಯಾನದಲ್ಲಿ ಕುಳಿತಳು. ಅಪ್ಪ..ಅಮ್ಮ..ಅತ್ತಿಗೆಯರು..ಶೀಲಾ..ರಜನಿ....ಸವಿತಾ ಮತ್ತು ಸುಕನ್ಯಾರೆಲ್ಲರ ಜೊತೆಗೂ ಮಾತನಾಡಿ ಇಲ್ಲಿನ ಸಂಪೂರ್ಣ ಸಂಗತಿಗಳನ್ನು ತಿಳಿಸಿದಳು.

ರೇವತಿ........ನಿಧಿ ಬಗ್ಗೆ ಎಚ್ಚರ ವಹಿಸಿರಮ್ಮ ಅವಳು ತುಂಬಾನೇ ಸಂವೇಧನಾಶೀಲತೆಯುಳ್ಳ ಹುಡುಗಿ ನೀನ್ಯಾವಗಲೂ ಅವಳ್ಜೊತೆಗೆ ಇರಬೇಕು. ಈಗ ತಾನೇ ಅವಳಿಗೆ ತನ್ನ ಹೆತ್ತ ತಂದೆ ತಾಯಿಯ ಬಗ್ಗೆ ತಿಳಿದಿದೆ ಮನಸ್ಸು ಡೋಲಾಯಮಾನ ಸ್ಥಿತಿಯಲ್ಲಿರುತ್ತೆ ಅದನ್ನು ನೀನೇ ಸಂಭಾಳಿಸಬೇಕು ಕಣಮ್ಮ.

ನೀತು.....ಆಯ್ತಮ್ಮ ನಾನೆಲ್ಲ ನೋಡಿಕೊಳ್ತೀನಿ....ಎಂದು ಫೋನ್ ಕಟ್ ಮಾಡಿದಳು.

ಸುಮ......ನಿಧಿ ಮನಸ್ಥಿತಿಯ ಬಗ್ಗೆ ಹರೀಶರಿಗೆ ಹೇಳುವುದಾ ಬೇಡ್ವಾ ನೀತು ಸಹ ಈಗ ಗಂಡನಿಗೆ ಫೋನ್ ಮಾಡಲ್ಲ ಅಂತೇಳಿದ್ದಾಳೆ.

ಭಾನುವಾರವಾಗಿದ್ದರಿಂದ ಗಂಡಸರೆಲ್ಲರೂ ಏದುರು ಮನೆಯಲ್ಲಿದ್ದು ತಮ್ಮದೇ ಚರ್ಚೆಯಲ್ಲಿ ನಿರತರಾಗಿದ್ದರು. ರಜನಿ ಅಲ್ಲಿಗೆ ಬಂದು ಎಲ್ಲ ವಿಷಯವನ್ನೂ ಹೇಳಿದಾಗ ಹರೀಶ ತಕ್ಷಣ ಮುಖ್ಯೋಪಾಧ್ಯಾಯರ ನಂಬರಿಗೆ ಕರೆ ಮಾಡಿ ಎರಡು ವಾರಗಳ ರಜೆ ಕೋರಿಕೊಂಡನು. ಹರೀಶನ ಕಾರ್ಯಕ್ಷಮತೆ ಬಗ್ಗೆ ಚೆನ್ನಾಗಿ ತಿಳಿದಿದ್ದು ಅವನ ವ್ಯಕ್ತಿತ್ವದ ಬಗ್ಗೆಯೂ ಚಿರಪರಿಚಿತರಾಗಿದ್ದ ಮುಖ್ಯೋಪಾಧ್ಯಾಯರು ತಮ್ಮ ಸಹಮತಿ ನೀಡಿ ರಜೆ ಮಂಜೂರು ಮಾಡುವುದಾಗಿ ಹೇಳಿಬಿಟ್ಟರು. ಆನಂತರ ರಾಣಾನಿಗೆ ಫೋನ್ ಮಾಡಿದ ಹರೀಶ ತಕ್ಷಣ ಊರಿಗೆ ಹೆಲಿಕಾಪ್ಟರ್ ಕಳಿಸುವಂತೇಳಿ ನೀತು ಬಳಿ ಇದ್ಯಾವುದನ್ನೂ ಪ್ರಸ್ತಾಪ ಮಾಡದಂತೆ ತಿಳಿಸಿದನು.

ಅಶೋಕ........ನೀನೊಬ್ಬನೇ ಹೋಗುವೆಯಾ ?

ರಜನಿ......ನಾನೂ ಬರ್ತೀನಿ ನಡೀರಿ ಅಲ್ಲಿ ನೀತುವಿನ ಜೊತೆಯಲ್ಲಿ ನಾವಿರಬೇಕಾದ್ದು ತುಂಬ ಅವಶ್ಯಕ. ಅಪ್ಪ ಅಮ್ಮನ ಬಗ್ಗೆ ತಿಳಿದಿರುವ ನಿಧಿ ಕೂಡ ಅಪ್ಸೆಟ್ ಆಗಿರುತ್ತಾಳೆ.

ಪ್ರೀತಿ......ಹೌದು ಕಣೆ ನೀನೂ ಹರೀಶರ ಜೊತೆ ಹೋಗುವುದೇ ಸರಿ.

ಅಲ್ಲಿಂದ ಮನೆಗೆ ವಾಪಸ್ ಬಂದು ಅತ್ತೆ ಮಾವನಿಗೆ ವಿಷಯ ತಿಳಿಸಿ ಶಾಲೆಯಲ್ಲಿ ಮಕ್ಕಳ ಪಾಠದ ಬಗ್ಗೆ ನಿಗಾ ವಹಿಸಿಕೊಳ್ಳುವಂತೆ ಸವಿತ ಹತ್ತಿರ ತಿಳಿಸಿದನು. ರಕ್ಷಕರಲ್ಲಿ ಒಬ್ಬನಿಗೆ ಸವಿತಾ...ಸುಕನ್ಯಾ..ಸುರೇಶ ಮತ್ತು ನಯನಾಳನ್ನು ಶಾಲೆಗೆ ಕರೆದೊಯ್ದು ಕರೆತರುವ ಕಾರ್ಯ ವಹಿಸಿದನು. ಬಟ್ಟೆ ಪ್ಯಾಕಿಂಗ್ ಮಾಡಿಕೊಳ್ಳಲು ಹೋದರೆ ಸುಮ ಆಗಲೇ ಆ ಕೆಲಸ ಮಾಡುತ್ತಿದ್ದು ಮಕ್ಕಳಿಬ್ಬರು ರೂಮಿಗೆ ಬಂದು.....

ಗಿರೀಶ......ಅಮ್ಮ ಇವತ್ತು ಬೆಳಿಗ್ಗೆ ತಾನೇ ಹೋದರಲ್ಲ ನೀವಾಗಲೇ ಹೋಗುವ ಬದಲು ಇದ್ದಕ್ಕಿದ್ದಂತೆ ಹೊರಟಿದ್ದೀರ ಅಲ್ಲೇನಾಯ್ತಪ್ಪ.

ಹರೀಶ ಮಗನಿಗೆ ಸಂಕ್ಷಿಪ್ತವಾಗಿ ತಿಳಿಸಿ.......ಅದಕ್ಕೆ ನಾನು ನಿಮ್ಮ ಅಕ್ಕನ ಜೊತೆಗಿರಲು ಹೋಗ್ತಿದ್ದೀನಿ ಕಣಪ್ಪ ಗಾಬರಿ ಪಡುವಂತದ್ದು ಏನೂ ಆಗಿಲ್ಲ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಓದಿನ ಕಡೆಯೇ ನಿಮ್ಮ ಗಮನವಿರಬೇಕು.
* *
* *

3 comments:

  1. ಕತೆಯ ಕುತೂಹಲ ಬಹಳ ಚೆನ್ನಾಗಿದೆ

    ReplyDelete
  2. Mind-blowing story please don't stop the story please continue next part please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏


    Please don't stop the story please continue the next part please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    Daily daily story upload mada ri please my humble request ri please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    ReplyDelete
  3. ಕತೆ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ಮುಂದೆ ಏನು ಆಗುತ್ತದೆ ಎನ್ನುವ ಕಾತುರ ಆದಷ್ಟು ಬೇಗ ಬೇಗ ಸ್ಟೋರಿ ಅಪ್ಲೋಡ್ ಮಾಡ ರೀ ಕತೆ ತುಂಬಾ ಸ್ವಾರಸ್ಯಕರವಾಗಿದೆ ಆದಷ್ಟು ದಿನಕ್ಕೆ 3, 4, ಸ್ಟೋರಿ ಅಪ್ಲೋಡ್ ಮಾಡ ರೀ ನಾನು ಕೇಳಿ ಕೊಳ್ಳುವುದು ಇಷ್ಟೇ ದಯವಿಟ್ಟು ದಿನೇ ದಿನೇ ಸ್ಟೋರಿ ಅಪ್ಲೋಡ್ ಮಾಡ ರೀ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    ದಯವಿಟ್ಟು ಸ್ಟೋರಿ daily ಮಿಸ್ ಮಾಡದೆ ಅಪ್ಲೋಡ್ ಮಾಡ ರೀ please my personal humble request ri please 🙏🙏🙏🙏🙏

    ReplyDelete