Total Pageviews

Saturday, 15 February 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 282

ಸಂಸ್ಥಾನದ ಕಂಪನಿಯಲ್ಲಿರುವ ಪ್ರತಿಭಾನ್ವಿತ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟುಗಳ ಜೊತೆ ಒಂದೆರಡು ಘಂಟೆ ಮೂರು ಕಡೆಗಳಲ್ಲಿ ಕಟ್ಟಲು ಉದ್ದೇಶಿಸಿರುವ ವಿಶಾಲವಾದ ಹಾಗು ಸುಸಜ್ಜಿತವಾಗಿರುವ ವಿದ್ಯಾಲಯಗಳ ಬಗ್ಗೆ ಸುಧೀರ್ಘವಾಗಿ ಚರ್ಚೆ ನಡೆಸಲಾಯಿತು. ಅಲ್ಲಿ ವಿಧ್ಯಾರ್ಜನೆಗೆ ಬರುವ ವಿಧ್ಯಾರ್ಥಿಗಳಿಗೆ ಯಾವ್ಯಾವ ರೀತಿಯ ಸವಲತ್ತುಗಳು ಇರಬೇಕೆಂದು ಹರೀಶ ವಿವರವಾಗಿ ತಿಳಿಸಿದ್ದನ್ನೆಲ್ಲರೂ ಸರ್ವಸಮ್ಮತಿಯಿಂದ ಒಪ್ಪಿಕೊಂಡರು.

ವರ್ಧನ್......ಈಗ ನಾವು ಯಾವ ರೀತಿಯ ವಿದ್ಯಾಲಯಗಳನ್ನು ಕಟ್ಟಿಸಲು ಉದ್ದೇಶಿಸಿದ್ದೀವೆಂಬುದು ನಿಮ್ಮೆಲ್ಲರಿಗೂ ಒಂದು ಸ್ಪಷ್ಟತೆ ಮೂಡಿರಬೇಕಲ್ಲವಾ ?

ಸೀನಿಯರ್ ಆರ್ಕಿಟೆಕ್ಟ್.......ಹೌದು ಸರ್ ಪ್ರತಿಯೊಂದು ವಿಷಯದ ಬಗ್ಗೆಯೂ ನಮಗೆ ಫುಲ್ ಕ್ಲಾರಿಟಿ ದೊರಕಿದೆ. ಹರೀಶ್ ಸರ್ ನೀವು ಸೂಚಿಸಿರುವಂತೆ ನರ್ಸರಿಯಿಂದ ಏಳನೇ ತರಗತಿ....ಎಂಟರಿಂದ ಹನ್ನೆರಡವರೆಗೂ ಮತ್ತು ಡಿಗ್ರಿ..ಮಾಸ್ಟರ್ ಡಿಗ್ರಿ...ಇಂಜಿನೀಯರಿಂಗ್ ಮೆಡಿಕಲ್ ಇತ್ಯಾದಿ ಕೋರ್ಸುಗಳ ಕಟ್ಟಡಗಳನ್ನು ಪ್ರತ್ಯೇಕ ವಿಭಾಗ ಅಂತಲೇ ಪರಿಗಣಿಸಿ ಪ್ಲಾನ್ ಸಿದ್ದಗೊಳಿಸುತ್ತೀವಿ. ನಮಗೊಂದು ವಾರ ಕಾಲಾವಕಾಶ ನೀಡಿ ಅಷ್ಟರಲ್ಲಿ ಎರಡು ರೀತಿ ಪ್ಲಾನುಗಳನ್ನು ಸಿದ್ದಗೊಳಿಸುತ್ತೇವೆ. ನೀವು ಯಾವುದನ್ನು ಒಕೆ ಅಂತ ಹೇಳುವಿರೋ ಅದೇ ರೀತಿ ಕಟ್ಟಡಗಳನ್ನು ನಿರ್ಮಾಣ ಮಾಡೋಣ.

ಹರೀಶ.....ನೀವು ಜಾಸ್ತಿ ಟೈಂ ತೆಗೆದುಕೊಂಡರೂ ಪರವಾಗಿಲ್ಲ ಆದರೆ ಪ್ರತಿಯೊಂದು ಸಣ್ಣ ಪುಟ್ಟ ವಿಷಯಗಳನ್ನೂ ನಿಮ್ಮಲ್ಲೇ ಚರ್ಚಿಸಿದ ಬಳಿಕ ಕ್ಲಿಯರಾಗಿ ಪ್ಲಾನ್ ಸಿದ್ದಪಡಿಸಿ. ವಿದ್ಯಾಲಯಗಳ ಜೊತೆಗೇ ಆಯಾ ಬ್ಲಾಕಿನ ವಿಧ್ಯಾರ್ಥಿ ನಿಲಯಗಳು ಕೂಡ ಬೇರೆ ಬೇರೆಯದ್ದೇ ಆಗಿರಬೇಕು. ಒಂದು ಕಟ್ಟಡದಲ್ಲೆಷ್ಟು ರೂಮುಗಳಿರುತ್ತೆ ಗರಿಷ್ಟವಾಗಿ ಒಂದು ಬಿಲ್ಡಿಂಗಿನಲ್ಲೆಷ್ಟು ರೂಂ ಕಟ್ಟಿದರೆ ವಿಧ್ಯಾರ್ಥಿಗಳಿಗೆ ಒಳ್ಳೇದು ಎಲ್ಲದರ ಬಗ್ಗೆಯೂ ಯೋಚಿಸಿ. ಓದಿನ ಜೊತೆಗೆ ವಿಧ್ಯಾರ್ಥಿಗಳಿಗೆ ಆಟದ ಅಭಿರುಚಿ ಇರುವುದು ಸಹ ತುಂಬ ಮುಖ್ಯ ಅದಕ್ಕೆ ಆಟದ ಮೈದಾನಗಳು...ಒಳಾಂಗಣ ಕ್ರೀಡಾಂಗಣಗಳು ಹೇಗಿರಬೇಕೆಂದು ವಿವರವಾಗಿ ತೋರಿಸಬೇಕು.

ಸೀನಿಯರ್ ಆರ್ಕಿಟೆಕ್ಟ್.....ಹಾಗೇ ಮಾಡ್ತೀವಿ ಸರ್ ಈ ವಿದ್ಯಾಲಯ ಮಹಾರಾಣಿಯವರ ಕನಸಿನ ಕೂಸೆಂದು ತಿಳಿದಿರುವಾಗ ನಾವೆಲ್ಲಾ ವಿಧದಲ್ಲಿಯೂ ಯೋಚಿಸಿ ಅತ್ಯುತ್ತಮವಾದ ಪ್ಲಾನನ್ನೇ ಸಿದ್ದಪಡಿಸಿ ತರುತ್ತೇವೆ ಅದರ ಬಗ್ಗೆ ನಿಶ್ಚಿಂತರಾಗಿರಿ ಸರ್.

ಇನ್ನೂ ಕೆಲಹೊತ್ತು ಮಾತನಾಡಿದ ಬಳಿಕ ಅವರೆಲ್ಲರೂ ತೆರಳಿದಾಗ...

ವರ್ಧನ್....... ವಿದ್ಯಾಲಯಗಳನ್ನು ರಿಜಿಸ್ಟರ್ ಮಾಡಿಸಿ ಯು.ಜಿ.ಸಿ ಅನುಮೋದನೆ ಪಡೆಯುವುದೇನು ನನಗೆ ದೊಡ್ಡ ಕೆಲಸವಲ್ಲ ಆದರೆ ಯಾವ ಹೆಸರಿನಲ್ಲಿ ವಿದ್ಯಾಲಯ ಸ್ಥಾಪಿಸುವುದೆಂದು ನಮ್ಮಲ್ಯಾರು ಯೋಚಿಸಿಲ್ವಲ್ಲ ಭಾವ.

ಹರೀಶ ಮಡದಿಯತ್ತ ತಿರುಗಿದಾಗ ನೀತು.......ಇದು ಅತ್ತಿಗೆಯವರ ಕನಸಿನ ಕೂಸಾಗಿದ್ದರೂ ಅವರು ತಮ್ಮ ಹೆಸರಿನಲ್ಲಿ ಇರಬಾರದೆಂದು ಸೂಚಿಸಿದ್ದಾರೆಂದು ಅಣ್ಣ ಬರೆದಿದ್ದರಲ್ಲವಾ. ಹಾಗಾಗಿ ವಿದ್ಯಾ ದೇವಿ ತಾಯಿ ಸರಸ್ವತಿಯ ಹೆಸರಿನಲ್ಲೇ ಪ್ರಾರಂಭಿಸೋಣ. " ಸರಸ್ವತಿ ಗುರುಕುಲ ಕ್ಯಾಂಪಸ್ " ಎಂಬ ಹೆಸರನ್ನೇ ರಿಜಿಸ್ಟರ್ ಮಾಡಿಸಿಬಿಡು ಜೊತೆಗೆ ಇದು ಸೂರ್ಯವಂಶಿ ಸಂಸ್ಥಾನದ ಅಧೀನದಲ್ಲಿರುತ್ತದೆಂದು ನಮೂಧಿಸುವುದನ್ನು ಮರೆಯಬೇಡ.

ವರ್ಧನ್......ಆಯ್ತು ಅಕ್ಕ ಈ ಸಂಸ್ಥೆಯ ಮುಖ್ಯಸ್ಥರನ್ನಾಗಿ ನಿಮ್ಮ ಹೆಸರಿನಲ್ಲೇ ರಿಜಿಸ್ಟರ್ ಮಾಡಿಸ್ತೀನಿ. ಎಲ್ಲಾ ದಾಖಲೆಗಳು ಮತ್ತು ಪರ್ಮಿಷನ್ ಸಂಸ್ಥಾನದ ಹೆಸರಿನಲ್ಲಿ ಜೊತೆಗೆಲ್ಲಾ ದಾಖಲೆಗಳಲ್ಲೂ ಮುಖ್ಯಸ್ಥರಾಗಿ ನಿಮ್ಮ ಹೆಸರಿರುತ್ತೆ.

ನೀತು.....ನನ್ನ ಹೆಸರಿನಲ್ಲೇಕೆ ವರ್ಧನ್ ನಿಧಿ ಅಥವ ನಿಶಾ ಇಬ್ಬರ ಹೆಸರಿನಲ್ಲಿ ಮಾಡಿಸಬಾರದಾ ?

ವರ್ಧನ್......ಅಣ್ಣ ಮೂರು ಕಡೆ ಖರೀಧಿ ಮಾಡಿರುವ ಜಾಗಗಳು ಸಂಸ್ಥಾನದ ಹೆಸರಿನಲ್ಲಿದ್ದರೂ ಅದರ ಮೇಲಿನ ಪೂರ್ತಿ ಹಕ್ಕು ನಿಮ್ಮ ಹೆಸರಿನಲ್ಲಿದೆ ಅಕ್ಕ ಅದನ್ನೇಗೆ ಮರೆತಿರಿ.

ನೀತು.....ಆಯ್ತಪ್ಪ ಹಾಗೇ ಮಾಡು ಇಲ್ಲಿನ ಕೆಲಸ ಮುಗಿಯಿತಲ್ಲವ ನಾವು ಉದಯಪುರಕ್ಕೆ ಹಿಂದಿರುಗೋಣ.

ವರ್ಧನ್.......ಅಕ್ಕ ನಾನು ಇಲ್ಲಿಂದಲೇ ದೆಹಲಿಗೆ ಹೊರಡುತ್ತೀನಿ ವಿದ್ಯಾಲಯದ ಎಲ್ಲಾ ಕಾಗದ ಪತ್ರಗಳನ್ನು ಇವತ್ತೇ ಸಿದ್ದಪಡಿಸಿ ನನ್ನ ಪಿಎ ಜೊತೆ ನಾಳೆ ಅರಮನೆಗೆ ಕಳುಸಿಕೊಡ್ತೀನಿ ನೀವೊಮ್ಮೆ ಓದಿ ಎಲ್ಲವನ್ನೂ ತಿಳಿದುಕೊಂಡು ಸಹಿ ಮಾಡಿಬಿಡಿ. ನಾನು ಶುಕ್ರವಾರದ ಮುಂಜಾನೆ ಪರ್ಮಿಷನ್ ಜೊತೆ ಉದಯಪುರಕ್ಕೆ ಬರುವೆ ನಿಧಿಯ ಹೆಸರಿಗೆ ಸಂಸ್ಥಾನದ ಅಧಿಕಾರವನ್ನು ರಿಜಿಸ್ಟರ್ ಮಾಡಿಸಿದ ಬಳಿಕ ನಾನು ಹಿಂದಿರುಗಿ ಹೋಗೋದು.

ಅಷ್ಟರಲ್ಲಿ ಒಳಗೋಡಿ ಬಂದ ನಿಶಾ ಅಮ್ಮನನ್ನು ಸೇರಿಕೊಂಡು..... ಮಮ್ಮ ನನ್ನಿ ಸುಸಿ ಆತು ದೂಸ್ ಕೊಲು.

ವಿಕ್ರಂ ಸಿಂಗ್ ಸೂಚನೆಯ ಮೇರೆಗೆ ಅರಮನೆಯ ಸಹಾಯಕಿಯರು ಮೂರು ರೀತಿ ಹಣ್ಣಿನ ಜ್ಯೂಸ್ ಮತ್ತು ಹಲವು ರೀತಿ ತಿನಿಸುಗಳನ್ನು ತಂದಿಟ್ಟರು. ಸಿಹಿ ತಿಂಡಿಯನ್ನು ನೋಡುತ್ತಿದ್ದಂತೆ ಕೈ ಹಾಕಲು ನಿಶಾ ಮುಂದಾಗುವ ಮುಂಚೆಯೇ ಅನುಷ ಅವಳನ್ನೆತ್ತಿಕೊಂಡು ಫ್ರೆಶ್ ಮಾಡಿಸಿ ಕೈಕಾಲು ತೊಳೆಯಲು ಹೊತ್ತೊಯ್ದಳು. ಎಲ್ಲರೂ ಜ್ಸೂಸ್ ಮತ್ತು ತಿನಿಸಿಗಳನ್ನು ಸೇವಿಸುತ್ತ ಮಾತನಾಡುತ್ತಿದ್ದರೆ ವರ್ಧನ್ ಪಕ್ಕ ನಿಧಿ ಕುಳಿತಿದ್ದು ಅವನ ಮಡಿಲಲ್ಲಿ ನಿಶಾ ಹಾಯಾಗಿ ಪವಡಿಸಿದ್ದಳು. ವರ್ಧನ್ ಹೊರಡುವ ಮುಂಚೆ ಹರೀಶ—ನೀತು ಇಬ್ಬರ ಕಾಲಿಗೂ ನಮಸ್ಕರಿಸಿ ಆಶೀರ್ವಾದ ಪಡೆದಾಗ.......

ಹರೀಶ......ಏನಿದು ವರ್ಧನ್ ಭಾರತದ ಉಪ ಪ್ರಧಾನಿಯಾದವನು ನಮ್ಮ ಕಾಲಿಗೆ ನಮಸ್ಕರಿಸುವುದಾ ?

ವರ್ಧನ್......ನನ್ನ ಹುದ್ದೆ ನನ್ನ ಅಕ್ಕ ಭಾವನ ಕಾಲಿಗೆ ನಮಸ್ಕರಿಸಲು ಹೇಗೆ ಅಡ್ಡಿಯಾಗುತ್ತೆ ಭಾವ ಇದು ನಮ್ಮ ಸಂಪ್ರದಾಯ ಇದನ್ನೆಲ್ಲಾ ನಾವೆಂದಿಗೂ ಮರೆಯಬಾರದು.

ನಿಧಿಯನ್ನು ತಬ್ಬಿಕೊಂಡು ನಿಶಾಳನ್ನೆತ್ತಿ ಚೆನ್ನಾಗಿ ಮುದ್ದಾಡಿದ ಬಳಿಕ ಅನುಷಾಳಿಗೆ ಆಶೀರ್ವಧಿಸಿ ರಜನಿಗೆ ಗೌರವ ಸೂಚಕ ನಮಸ್ಕರಿಸಿದ ನಂತರ ಅವರೆಲ್ಲರಿಂದ ಬೀಳ್ಗೊಂಡ ವರ್ಧನ್ ಶುಕ್ರವಾರ ಮುಂಜಾನೆ ಅರಮನೆಗೆ ಬರುವುದಾಗಿ ತಿಳಿಸಿ ದೆಹಲಿಯತ್ತ ಹೊರಟನು. ಹರೀಶ ಮತ್ತು ಕುಟುಂಬದವರು ಕೂಡ ಉದಯಪುರದ ಕಡೆ ಹೊರಟರೆ ಇಬ್ಬರು ರಾಜಕುಮಾರಿಯ ಸಾವಿನ ಷಡ್ಯಂತ್ರವೊಂದು ಕಟ್ಟಕಡೆಯ ಬಾರಿ ಅರಮನೆ ಆವರಣದಲ್ಲೇ ಹೆಣೆಯಲಾಗಿತ್ತು.
* *
* *

ಕಾಮಾಕ್ಷಿಪುರ......

ಪ್ರೀತಿ......ಇಲ್ನೋಡಿ ಮಾವ ಚಿನ್ನಿ ಯಾರ ತೋಳಿನಲ್ಲಿದ್ದಾಳೆ ಅಂತ.

ರಾಜೀವ್ ಫೋಟೋ ನೋಡುತ್ತ......ಇವರನ್ನೆಲ್ಲೋ ನೋಡಿದಂತೆ ಅನಿಸ್ತಿದೆ ಯಾರು.....ಅರರೆ ಇವರು ನಮ್ಮ ದೇಶದ ಉಪಪ್ರಧಾನಿ ವರ್ಧನ್ ಸಿಂಗ್ ರಜಪೂತ್ ಅಲ್ಲವಾ ? ಚಿನ್ನಿ ಇವರ ಜೊತೆಯಲ್ಲಿ ಹೇಗೆ ಹೋದಳಮ್ಮ ಪ್ರೀತಿ ?

ಪ್ರೀತಿ.......ಚಿನ್ನಿ ಜೊತೆ ಇದೊಂದೇ ಫೋಟೋ ಅಲ್ಲ ಮಾವ ಇಲ್ಲಿ ನೋಡಿ ನಿಧಿ..ನೀತು...ಅನು ಎಲ್ಲರೂ ಇದ್ದಾರೆ. ಇನ್ನೂ ಹತ್ತಿಪ್ಪತ್ತು ಫೋಟೋಗಳನ್ನು ನಿಧಿ ಈಗಷ್ಟೇ ವಾಟ್ಸಪ್ಪಿನಲ್ಲಿ ನನಗೆ ಕಳಿಸಿದಳು. ವರ್ಧನ್ ಯಾರೆಂಬುದು ಗೊತ್ತಾ ?

ರೇವಂತ್......ಅವರು ನಮ್ಮ ದೇಶದ ಅತ್ಯುನ್ನತ ಜನಪ್ರಿಯರಾದ ನಾಯಕರು ದೇಶದ ಉಪಪ್ರಧಾನಿ ಅಂತ ನಮಗೆ ಗೊತ್ತಿದೆಯಲ್ಲ.

ಪ್ರೀತಿ......ಅವರು ಚಿನ್ನೀನ ಯಾಕೆ ಎತ್ತಿಕೊಂಡಿರೋದು ಹೇಳಿ.

ವಿಕ್ರಂ....ಅದು ನಮಗೇಗಮ್ಮ ಗೊತ್ತಿರುತ್ತೆ ನಾವು ರಾಜಸ್ಥಾನದಲ್ಲಿ ಇಲ್ವಲ್ಲ ನೀನೇ ಹೇಳ್ಬಿಡು.

ಸುಮ.....ಅವರು ದೇಶದ ಉಪಪ್ರಧಾನಿ ಅಷ್ಟೇ ಅಲ್ಲ ನಿಶಾ— ನಿಧಿ ಇಬ್ಬರಿಗೂ ಸ್ವಂತ ಚಿಕ್ಕಪ್ಪ ಆಗ್ಬೇಕು ಮಹಾರಾಜ ರಾಣಾಪ್ರತಾಪರ ಒಡಹುಟ್ಟಿದ ತಮ್ಮ ಈ ವರ್ಧನ್ ರಜಪೂತ್.

ಸುಮ ಹೇಳಿದ್ದನ್ನು ಕೇಳಿ ಮನೆಯ ಗಂಡಸರೆಲ್ಲರೂ ಶಾಕಾಗಿ ಅವಳ ಕಡೆಯೇ ನೋಡುತ್ತಿದ್ದರೆ ಸುಮ—ಪ್ರೀತಿ ರಾಜಸ್ಥಾನದ ಸಂಪೂರ್ಣ ವಿವರಗಳನ್ನು ಮನೆಯವರಿಗೆ ನೀಡಿದರು. ಅದನ್ನು ಕೇಳಿ ಎಲ್ಲರಿಗೂ ತುಂಬ ಸಂತೋಷವಾಗಿದ್ದು ತಕ್ಷಣವೇ ಫೋನ್ ಮಾಡಿ ನೀತು ನಿಧಿ ಜೊತೆ ಮಾತನಾಡಿದರು.
* *
* *
ಅರಮನೆಯಲ್ಲಿ ಮಹಾರಾಜ—ಮಹಾರಾಣಿಯ ನಿಧನವಾದ ಬಳಿಕ ಕೆಲವೇ ದಿನಗಳಲ್ಲಿ ಚಂಚಲಾದೇವಿ ಮತ್ತು ಭಾನುಪ್ರತಾಪ್ ಇಬ್ಬರ ಅನೈತಿಕ ಸಂಬಂಧದಿಂದ ಜನಿಸಿದ್ದ ಮಗಳು ಯಶೋಮತಿ ತನ್ನ ಅನೈತಿಕ ತಂದೆಯ ಸಹಾಯದಿಂದ ಉದಯಪುರದ ಅರಮನೆಯಲ್ಲಿ ತಾನೂ ಸೇವಕಿಯಾಗಿ ನೇಮಕಗೊಂಡಳು. ಆದರೆ ಇವಳೇ ತನ್ನ ಮಗಳು ಯಶೋಮತಿ ಎಂಬುದರ ಬಗ್ಗೆ ಭಾನುಪ್ರತಾಪನಿಗೂ ಸಹ ತಿಳಿಯದಂತೆ ಆಕೆ ಎಚ್ಚರಿಕೆ ವಹಿಸಿದ್ದಳು. ನಾಲ್ಕೈದು ಸಲ ಅರಮನೆ ಹೊರಗೆ ಭಾನುಪ್ರತಾಪರ ಜೊತೆ ಹೋಗಿ ಬಂದಿದ್ದ ಯಶೋಮತಿ ಬರುವಾಗಲೆಲ್ಲಾ ಒಂದು ಗನ್ನನ್ನು ಬಿಡಿ ಬಿಡಿಯಾಗಿ ಅರಮನೆಯ ಆವರಣದೊಳಗೆ ತರುತ್ತಿದ್ದು ತನಗೆ ಉಳಿದುಕೊಳ್ಳಲು ನೀಡಿರುವ ರೂಮಿನಲ್ಲಿ ಬಚ್ಚಿಟ್ಟಿದ್ದಳು. 

ನಿಶಾಳನ್ನು ಅರಮನೆಯಲ್ಲಿ ಕಾವಲಿದ್ದ ನಾಯಿಗಳ ಮೂಲಕ ಸಾಯಿಸುವ ಪ್ಲಾನ್ ಮಾಡಿದ್ದ ಯಶೋಮತಿ ಅದರಲ್ಲಿ ವಿಫಲಳಾದಾಗ ಅವಳಿಗೆ ತಲೆ ಕೆಟ್ಟಂತಾಗಿ ಹೋಗಿತ್ತು. ಯಾರೆಷ್ಟೇ ಚಾಲಾಕಿತವನ್ನು ಪ್ರದರ್ಶಿಸುತ್ತ ಬಂದಿದ್ದರೂ ಇನ್ನೇನು ಗೆಲುವಿನ ಪಥದತ್ತ ಹೆಜ್ಜೆಯಿಡಬೇಕೆನ್ನುವಷ್ಟರಲ್ಲಿ ಬೇರೊಬ್ಬರಲ್ಲಿಗೆ ಬಂದು ಸೋಲುಣಿಸಿದಾಗ ಬುದ್ದಿಗೆ ಮತಿಭ್ರಮಣೆಯಾಗುವುದಂತೂ ಸಹಜವಾದ ಪ್ರಕ್ರಿಯೆಯೇ. ಈಗಿಲ್ಲಿಯೂ ಸಹ ಅದೇ ನಡೆಯುತ್ತಿದ್ದು ಮಹಾರಾಜ ಮತ್ತು ಮಹಾರಾಣಿಯರನ್ನು ಸಾಯಿಸಿದ ನಂತರ ತನ್ನ ಷಡ್ಯಂತ್ರ ಫಲಿಸುತ್ತಿದೆ ಇನ್ನೇನಿದ್ದರೂ ತಂದೆ ಮೂಲಕ ಸಂಸ್ಥಾನದ ದಾಖಲೆ ಪತ್ರಗಳನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಯಶೋಮತಿ ಚಿಂತಿಸುತ್ತಿದ್ದಳು. 

ಆದರಿಲ್ಲೇ ಅವಳೆಲ್ಲಾ ಭಾಜಿಯೂ ಉಲ್ಟಾಪಲ್ಟಾ ಅಗತೊಡಗಿ ರಾಣಾ ಮತ್ತವನ ಸಂಗಡಿಗರು ಅರಮನೆಯೊಳಗೆ ಪ್ರವೇಶಿಸಿದ್ದು ಭಾನುಪ್ರತಾಪನನ್ನೂ ತಮ್ಮ ಬಂಧನದಲ್ಲಿರಿಸಿದರು. ಯಶೋಮತಿಗೆ ಹೊರಗಿನಿಂದ ಸಹಾಯ ಮಾಡುತ್ತಿದ್ದಂತ ಅವಳ ತಾಯಿ ಮತ್ತವಳ ಕುಟುಂಬದವರೂ ಇದ್ದಕ್ಕಿದ್ದಂತೆ ಹಿಮಾಚಲದ ಅರಮನೆಯಿಂದ ಕಣ್ಮರೆಯಾದ ವಿಷಯ ತಿಳಿಯುತ್ತಲೇ ಇಲ್ಲೇನೋ ನಡೆಯುತ್ತಿದೆ ಎಂಬುದನ್ನು ಚಾಲಾಕಿಯಾಗಿದ್ದ ಯಶೋಮತಿಯು ತಕ್ಷಣವೇ ಗ್ರಹಿಸಿದಳು. 

ಅವಳು ಮುಂದಿನ ಪ್ಲಾನ್ ಬಗ್ಗೆ ಯೋಚನೆ ಮಾಡುವುದಕ್ಕೂ ಮುಂಚೆಯೇ ನೀತು ತನ್ನಿಬ್ಬರು ಮಕ್ಕಳೊಂದಿಗೆ ಆಗಮಿಸಿದ್ದು ರಾಜಮನೆತನದ ರಾಜಕುಮಾರಿಯರು ಬರುತ್ತಿರುವ ವಿಷಯ ತಿಳಿದು ಕೊನೆಯ ಹಂತದಲ್ಲಿ ತಾನು ಸೋಲುವ ಪರಿಸ್ಥಿತಿ ಬಂದಿತೆಂದು ಯೋಶಮತಿ ತನ್ನ ಯೋಚಿಸುವ ಚಾಲಾಕಿತನವನ್ನೆಲ್ಲಾ ಮರೆತು ಆತ್ಮಹತ್ಯೆಯ ಮಾರ್ಗ ಅನುಸರಿಸಲು ಮುಂದಾದಳು. ಆಕೆ ತಾನು ಆತ್ಶಹತ್ಯೆ ಮಾಡಿಕೊಳ್ಳುವ ಬಗ್ಗೆ ಯೋಚಿಸದೆ ಎಲ್ಲರೆದುರಿಗೇ ಯುವರಾಣಿಯರ ಎದೆಯಲ್ಲಿ ಗುಂಡು ಹಾರಿಸಿ ಅವರಿಬ್ಬರನ್ನೂ ಈ ಲೋಕದಿಂದಲೇ ಅಪ್ಪ ಅಮ್ಮನ ಬಳಿ ಕಳುಹಿಸುವುದಕ್ಕೆ ಹುನ್ನಾರ ಮಾಡಿಕೊಂಡಿದ್ದಳು. 

ಇದರಲ್ಲಿ ತನ್ನ ಪ್ರಾಣ ಖಂಡಿತವಾಗಿ ಹೋಗುತ್ತೆ ಎಂಬುದನ್ನು ತಿಳಿದಿದ್ದರೂ ತನಗೆ ಸಿಗದಿರುವ ಸಂಸ್ಥಾನದಲ್ಲಿನ ಯಜಮಾನಿಕೆಯನ್ನು ಬೇರಾರೂ ಅನುಭವಿಸಬಾರದೆಂಬ ಅತ್ಯಂತ ನೀಚ ಮನಸ್ಥಿತಿಗೆ ಯಶೋಮತಿ ಬಂದಿದ್ದಳು ಮತ್ತಿದೇ ಆಕೆಯ ಕಟ್ಟ ಕಡೆಯ ಅಪರಾಧವೂ ಆಗುವುದಿತ್ತು. ಇದರ ಬಗ್ಗೆ ಸಣ್ಣನೇ ಸುಳಿವು ಸಹ ಇರದೆ ತನ್ನ ಪಕ್ಕದಲ್ಲಿ ಮಲಗಿದ್ದ ಗಂಡನನ್ನು ಸೇರಿಕೊಂಡಿದ್ದ ಹಿರಿ ಮಗಳು ನಿಧಿ ಮತ್ತು ಅಪ್ಪನೆದೆಯ ಮೇಲೆ ಕುಳಿತು ಆತನಿಗೆ ತನ್ನ ಪ್ರಶ್ನೆಗಳಿಂದ ತಲೆ ತಿನ್ನುತ್ತಿದ್ದ ಕಿರಿಮಗಳು ನಿಶಾಳ ಆಟಗಳನ್ನು ನೋಡುತ್ತ ನೀತು ಮುಗುಳ್ನಗುತ್ತ ಮಲಗಿದ್ದಳು.

* *
* *

ಶುಕ್ರವಾರ.......

ಮುಂಜಾನೆಯೇ ವರ್ಧನ್ ಉದಯಪುರದ ಅರಮನೆಗೆ ಬಂದಿದ್ದು ನೀತು ಕೈಯಲ್ಲಿ ಎರಡು ದೊಡ್ಡ ಕವರುಗಳನ್ನು ಕೊಟ್ಟನು.

ನೀತು....ವಿಧ್ಯಾಲಯಕ್ಕೆ ಸರ್ಕಾರದಿಂದ ಅನುಮತಿ ದೊರೆಯಿತಾ ?

ನಿಧ.....ಏನಮ್ಮ ನೀವು ಹೀಗೆ ಕೇಳ್ತಿದ್ದೀರಲ್ಲ ಚಿಕ್ಕಪ್ಪನದ್ದೇ ಸರ್ಕಾರ ನಮಗೆ ಪರ್ಮಿಷನ್ ಸಿಗುವುದಿಲ್ಲವಾ ಅಲ್ವಾ ಚಿಕ್ಕಪ್ಪ.

ವರ್ಧನ್ ನಗುತ್ತ ಅವಳನ್ನು ತಬ್ಬಿಕೊಂಡು......ಅಕ್ಕ ಇವೆರಡರಲ್ಲಿ ಸರ್ಕಾರದ ಯಾವ್ಯಾವ ವಿಭಾಗಗಳಿಂದ ನೋ ಅಬ್ಜೆಕ್ಷನ್ನುಗಳು ಬೇಕಾಗಿದೆಯೋ ಅವುಗಳೆಲ್ಲವೂ ಇದೆ. ಅದರ ಜೊತೆ ಯು.ಜಿ.ಸಿ ಮತ್ತು ಸರ್ಕಾರದಿಂದ ಅವಶ್ಯಕತೆಯಿರುವ ಅನುಮತಿ ಪತ್ರಗಳೂ ಸಹ ಇದರೊಳಗಿದೆ. ಇನ್ನೊಂದರಲ್ಲಿ ನಿಮ್ಮ ಹೆಸರಿನಲ್ಲಿ ಆರ್.ಬಿ.ಐ ಬ್ಯಾಂಕಿನಲ್ಲಿ ವಿಶೇಷ ಖಾತೆ ತೆರೆದಿರುವ ಬಗ್ಗೆ ದಾಖಲೆಗಳಿದೆ ಅದರ ಮೂಲಕ ನೀವು ಯಾವುದೇ ಊರು...ದೇಶದಲ್ಲಿದ್ದರೂ ಅಲ್ಲಿನ ಯಾವುದೇ ಬ್ಯಾಂಕಿನ ಮೂಲಕ ಬೇಕಿದ್ದರೂ ಹಣದ ವ್ಯವಹಾರ ನಡೆಸಲು ಅನುಕೂಲವಾಗುತ್ತೆ.

ತಿಜೋರಿಯಲ್ಲಿದ್ದ ಅಣ್ಣನ ವಯಕ್ತಿಕ ಬ್ರೀಫ್ಕೇಸಿನಲ್ಲಿದ್ದ ಸೂಚನೆಗಳ ಪ್ರಕಾರವಾಗಿ ಅಣ್ಣನ ಖಾತೆಯಲ್ಲಿದ್ದ ಹಣವನ್ನೆಲ್ಲಾ ನಿಮ್ಮ ಹೊಸ ಖಾತೆಗೆ ವರ್ಗಾವಣೆ ಮಾಡಿಸಿದ್ದೇನೆ. ಅದರ ಜೊತೆ ಅಣ್ಣನ ಸೂಚನೆಯ ಮೇರೆಗೆ ಸಂಸ್ಥಾನದ ಅಧೀನಕ್ಕೆ ಬರುವ ಎಲ್ಲಾ ಕಂಪನಿಗಳಲ್ಲಿನ ಹಣದ ವ್ವವಹಾರಗಳನ್ನು ನೀವೇ ನಿರ್ವಹಿಸಲು ಅನುವಾಗುವಂತಹ ಅಧಿಕಾರದ ಪತ್ರಗಳಿದೆ ಅವನ್ನು ಇಂದು ರಿಜಿಸ್ಟರ್ ಮಾಡಿಸಿ ನಿಧಿ ಮತ್ತು ನಿಶಾ ಇಬ್ಬರ ಬೆರಳಚ್ಚನ್ನು ಹಾಕಿಸಿಬಿಟ್ಟರೆ ಹಣಕಾಸಿನ ಸಮಸ್ತ ಅಧಿಕಾರವೂ ನಿಮ್ಮ ಕೆಳಗಡೆ ಬಂದು ಬಿಡುತ್ತೆ ಅಕ್ಕ.

ನಿಧಿ....ಥಾಂಕ್ಯೂ ಚಿಕ್ಕಪ್ಪ ನೀವೆಂತಾ ದೊಡ್ಡ ಕೆಲಸ ಮಾಡಿದ್ದೀರೆಂದು ನಿಮಗೇ ಗೊತ್ತಿಲ್ಲ.

ವರ್ಧನ್......ನಾನು ಅಂಥದ್ದೇನಮ್ಮ ಮಾಡಿರೋದು ?

ನಿಧಿ.....ಚಿಕ್ಕಪ್ಪ ನನಗೆ ಐದು ವರ್ಷವಿದ್ದಾಗ ಇಲ್ಲಿಂದ ಆಶ್ರಮಕ್ಕೆ ಹೊರಟುಹೋದೆ ಅಲ್ಲಿನ ದಿನಚರಿಗಳನ್ನೇ ನಾನು ಜೀವನದುದ್ದಕ್ಕೂ ಅಳವಡಿಸಿಕೊಂಡು ಹದಿನಾಲ್ಕು ವರ್ಷ ಜೀವಿಸುತ್ತ ಬಂದಿರುವೆ. ಈಗ ತಾನೇ ನಾನೂ ಕೂಡ ಹೊರಗಿನ ಪ್ರಪಂಚದಲ್ಲಿ ನನ್ನದೇ ಆದ ಸ್ನೇಹಿತರ ಜೊತೆ ನಗುನಗುತ್ತ ಖುಷಿಯಿಂದ ಕಾಲ ಕಳೆಯುವುದಕ್ಕೆ ಅವಕಾಶ ಸಿಕ್ಕಿದೆ. ಇಲ್ಲಿನ ಅಧಿಕಾರ ವಹಿಸಿಕೊಂಡ ನಂತರ ನಾನೆಲ್ಲಿ ಸಂಸ್ಥಾನದ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತ ಜೀವನದಲ್ಲಿನ ಅಮೂಲ್ಯ ದಿನಗಳನ್ನು ಕಳೆಯಬೇಕಾಗುತ್ತೋ ಎಂದು ತುಂಬಾನೇ ಯೋಚಿಸುತ್ತಿದ್ದೆ. ಈಗ ನನಗೆ ನಿಶ್ಚಿಂತೆಯಾಗಿದೆ ಎಲ್ಲಾ ಜವಾಬ್ದಾರಿ ಅಮ್ಮನ ಹೆಗಲಿಗೆ ಹೊರೆಸಿದ್ದು ಅಪ್ಪ ನನ್ನ ಚಿಂತೆಗಳನ್ನೆಲ್ಲಾ ದೂರ ಮಾಡಿದ್ದಾರೆ ಅದಕ್ಕೆ ಬೇಕಾದ ಪತ್ರಗಳನ್ನು ನೀವು ಸಿದ್ದಪಡಿಸಿ ತಂದಿದ್ದೀರ ಅದಕ್ಕೆ ನಿಮಗೆ ವಿಶೇಷವಾಗಿ ಥಾಂಕ್ಸ್ ಹೇಳ್ತಿದ್ದೀನಿ.

ನೀತು......ಆಯ್ತು ಜಾಸ್ತಿ ಸಂತೋಷಪಡುವ ಅವಶ್ಯಕತೆಯಿಲ್ಲ ಅಣ್ಣ ತಮ್ಮ ಇಬ್ಬರೂ ಸೇರಿ ನನ್ಮೇಲೆ ಇಷ್ಟು ದೊಡ್ಡ ಜವಾಬ್ದಾರಿಗಳನ್ನು ಹೊರಿಸಿದ್ದಾರೆ ನಾನೆಷ್ಟರ ಮಟ್ಟಿಗೆ ನಿಭಾಯಿಸಲು ಸಮರ್ಥಳೋ ಅಂತ ಭಯವಾಗ್ತಿದೆ.

ವರ್ಧನ್......ಅಕ್ಕ ನಿಮಗೆ ಅರ್ಹತೆ ಮತ್ತು ನಿಭಾಯಿಸುವ ಛಾತಿ ಹಾಗು ಯೋಗ್ಯತೆಯಿದೆ ಎಂದು ಗುರುಗಳಿಗೆ ತಿಳಿದಿರುವುದಕ್ಕಾಗಿ ತಾನೇ ಅಣ್ಣನಿಗೆ ಆದೇಶ ನೀಡಿ ಸಂಸ್ಥಾನದ ಸಮಸ್ತ ಆಡಳಿತವನ್ನು ನೀವೇ ವಹಿಸಿಕೊಳ್ಳುವಂತೆ ಉಯಿಲನ್ನು ಬರೆಸಿರುವುದು. ನಿಶಾ ಮತ್ತು ನಿಧಿ ಹೆಸರಿಗೆ ಸಂಸ್ಥಾನದ ವಾರಸುದಾರರು ಮತ್ತು ಇಲ್ಲಿನ ರಾಜಕುಮಾರಿಯರಷ್ಟೆ ಆದರೆ ಸಂಸ್ಥಾನದಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳಬೇಕಿದ್ದರೂ ಅವರಿಬ್ಬರಿಗೆ ನಿಮ್ಮ ಅನುಮತಿಯನ್ನು ಪಡೆದುಕೊಳ್ಳುವುದು ಅತ್ಯಂತ ಅವಶ್ಯಕ. ನಡೀರಿ ತಿಂಡಿ ಮುಗಿಸಿ ರಿಜಿಸ್ಟರ್ ಕಛೇರಿಗೆ ಹೊರಡೋಣ ಇಂದು ಅಲ್ಲಿನ ಕಛೇರಿಯಲ್ಲಿ ನಮ್ಮ ಕೆಲಸ ಬಿಟ್ಟು ಬೇರಾವುದೇ ಕೆಲಸಗಳೂ ನಡೆಯದಂತೆ ನಾನು ವ್ಯವಸ್ಥೆ ಮಾಡಿಸಿಯಾಗಿದೆ.

ಎಲ್ಲರೂ ರಿಜಿಸ್ಟರ್ ಕಛೇರಿಗೆ ಬಂದಾಗ ಅಲ್ಲಾಗಲೇ ಸಂಸ್ಥಾನದ ವಕೀಲರ ತಂಡದವರು ಹಾಜರಿದ್ದು ಅವರಿಗೆ ಹೊಸದಾಗಿ ವರ್ಧನ್ ಮಾಡಿಸಿಕೊಂಡು ತಂದಿದ್ದ ದಾಖಲೆಗಳನ್ನು ನೀಡಿ ಏನೇನು ಹೇಗೆ ಮಾಡಬೇಕೆಂದು ಸೂಚಿಸಲಾಯಿತು. ಮಹಾರಾಜ ರಾಣಾಪ್ರತಾಪ್ ಬರೆದಿದ್ದ ವಿಲ್ ಪ್ರಕಾರವಾಗಿ ಸೂರ್ಯವಂಶಿ ಸಂಸ್ಥಾನದ ಅಧೀನಕ್ಕೆ ಬರುವ ಎಲ್ಲಾ ಚಲ ಮತ್ತು ಅಚಲ ಆಸ್ತಿಗಳ ಮಾಲೀಕತ್ವಗಳನ್ನು ನಿಶಾ ಮತ್ತು ನಿಧಿಯ ಹೆಸರಿನಲ್ಲಿ ರಿಜಿಸ್ಟರ್ ಮಾಡಿಸಿದರೆ ಅವರಿಗೆ 25 ವರ್ಷ ತುಂಬುವವರೆಗೂ ಸಮಸ್ತ ಆಸ್ತಿಗಳ ಹೊಣೆಗಾರಿಕೆಯು ಹರೀಶ ಮತ್ತು ನೀತು ಇಬ್ಬರ ಜವಾಬ್ದಾರಿಯಾಗಿತ್ತು. 

ನಿಶಾ ಅಪ್ಪನ ತೋಳಿನಲ್ಲಿದ್ದು ತನ್ನ ಎಡಗೈ ಹೆಬ್ಬೆಟ್ಟನ್ನು ಇಂಕ್ ಪ್ಯಾಡಿನಲ್ಲಿ ಅದ್ದುತ್ತ ನೂರಾರು ಪತ್ರಗಳಲ್ಲಿ ಮುದ್ರೆಯೊತ್ತುವಷ್ಟರಲ್ಲೇ ಅವಳಿಗೆ ಚಿಟ್ಟಾಗಿ ಹೋಗಿತ್ತು. ಹರೀಶ ಮಗಳನ್ನು ಪೂತುಣಿಸುತ್ತ ಅವಳ ಹೆಬ್ಬೆಟ್ಟಿನ ಮುದ್ರೆಯೊತ್ತಿಸುವುದರ ಜೊತೆ ದಾಖಲೆಗಳಲ್ಲಿ ಅವಳ ಫೋಟೋ ಮೂಡಿಬರುವುದಕ್ಕೆ ಅವಳನ್ನು ವೆಬ್ ಕ್ಯಾಮಿನೆದುರು ನಿಲ್ಲಿಸುವ ಕೆಲಸ ಮಾಡುವಷ್ಟರಲ್ಲಿ ಸಾಕಾಗಿ ಹೋಗಿದ್ದನು. ಇದರ ಜೊತೆಯಲ್ಲಿ ಸಂಸ್ಥಾನದ ಅಧೀನದಲ್ಲಿ ಬರುವ ಎಲ್ಲಾ ಹಣಕಾಸಿನ ವ್ಯವಹಾರದ ಹೊಣೆಗಾರಿಕೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿ ನಿರ್ಣಯವನ್ನಾದರೂ ತೆಗೆದುಕೊಳ್ಳುವ ಅಧಿಕಾರವನ್ನು ನೀತುವಿನ ಅಧಿಕಾರದಡಿಯಲ್ಲಿ ಬರುವುದಕ್ಕೆ ಬೇಕಾಗಿರುವ ದಾಖಲೆಗಳನ್ನೂ ಸಹ ರಿಜಿಸ್ಟರ್ ಮಾಡಿಸಲಾಯಿತು.

ಸಂಜೆ ತನಕವೂ ಇದೆಲ್ಲದರ ಪ್ರಕ್ರಿಯೆಗಳು ನಡೆಯುತ್ತಿದ್ದು ನಿಶಾಳಿಗಂತೂ ಅಲ್ಲಿಂದೆದ್ದು ಹೊರಗೆ ಓಡಿದರೆ ಸಾಕೆನಿಸುತ್ತಿತ್ತು. ಅಲ್ಲಿನ ಕೆಲಸಗಳನ್ನೆಲ್ಲಾ ಪೂರ್ಣಗೊಳಿಸಿ ಹೊರಬಂದಾಗ ವಕೀಲರ ತಂಡದವರು ನಾಳೆ ತಾವೇ ಖುದ್ದಾಗಿ ಅರಮನೆಗೆ ಬಂದು ಎಲ್ಲಾ ರಿಜಿಸ್ಟರ್ಡ್ ದಾಖಲೆಗಳನ್ನು ನೀಡುವ ಬಗ್ಗೆ ಹೇಳಿ ಅಲ್ಲಿಂದ ತೆರಳಿದರೆ ಉಳಿದವರು ಅರಮನೆಯ ಕಡೆಗೆ ಹಿಂದಿರುಗಿದರು.

ಅರಮೆನೆಯೊಳಗೆ ಹೋಗುವಾಗ ದಾರಿ ಮಧ್ಯದಲ್ಲಿ ಸಿಗುವಂತಹ ಪರಾಂಗಣದ ಸ್ಥಳವನ್ನು ಆರು ಜನ ಸೇವಕಿಯರು ಶುಭ್ರಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರೆ ಅವರಲ್ಲೊಬ್ಬಳು ಯಶೋಮತಿಯೇ ಆಗಿದ್ದಳು. ಅಕ್ಕನ ತೋಳಿನಲ್ಲಿದ್ದ ನಿಶಾ ಅಪ್ಪನಿಗೆ ಆನೆಯ ಹತ್ತಿರ ಕರೆದೊಯ್ಯುವಂತೆ ಕೇಳುತ್ತಿದ್ದರೆ ಹರೀಶ ಮೊದಲು ಫ್ರೆಶಾಗೋಣ ಆಮೇಲೆ ಆನೆ ಸವಾರಿ ಮಾಡಿಸುವುದಾಗಿ ಹೇಳುತ್ತಿದ್ದನು. ಈಗ ಸಿಕ್ಕಿರುವ ಅವಕಾಶಕ್ಕಿಂತಲೂ ಉತ್ತಮವಾದ ಅವಕಾಶವು ತನಗೆ ಸಿಗುವುದಿಲ್ಲವೆಂದು ಅರಿತಿದ್ದ ಯಶೋಮತಿ ಇಲ್ಲಿಗೆ ಬರುವುದಕ್ಕೂ ಮುಂಚೆಯೇ ಸೊಂಟದಲ್ಲಿ ಸೀರೆಯೊಳಗೆ ಗನ್ ಬಿಗಿದುಕೊಂಡು ಬಂದಿದ್ದು ಈಗದನ್ನೇ ಹೊರತೆಗೆದಳು. 

ರಕ್ಷಕರಲ್ಲಿ ಯಾರಾದರೂ ಪ್ರತಿಕ್ರಿಯೆ ನೀಡುವುದಕ್ಕೂ ಮುಂಚೆಯೇ ಯಶೋಮತಿ ಕೈಯಲ್ಲಿ ಹಿಡಿದಿದ್ದ ಗನ್ ನಿಶಾ ಮತ್ತು ನಿಧಿ ಇಬ್ಬರನ್ನು ಗುರಿಯಾಗಿಸಿಕೊಂಡು ಮೂರು ಬಾರಿ ಟ್ರಿಗರ್ ಅಮುಕಿದಳು. ಢಾಂ... ಢಾಂ... ಢಾಂ.... ಎಂದು ಸಿಡಿದ ಗುಂಡುಗಳು ಪಿಸ್ತೂಲಿನಿಂದ ಹೊರಬಂದಿದ್ದು ರಾಣಾ ಸಹ ಮಿಂಚಿನ ವೇಗದಲ್ಲಿ ಕತ್ತಿಯನ್ನಿರಿದು ಮುನ್ನುಗ್ಗಿದವನೇ ಅದನ್ನು ಬೀಸಿದಾಗ ಯಶೋಮತಿಯ ಬಲ ಮುಂಗೈ ಕತ್ತರಿಸಿ ನೆಲದ ಮೇಲೆ ಬಿದ್ದಿತು. ಆದರೆ ಅದಾಗಲೇ ಮೂರು ಗುಂಡುಗಳು ಮಾಡಬೇಕಾದ ಕಾರ್ಯ ಮಾಡಿದ್ದು ಆಗಬಾರದಂತ ಅನಾಹುತ ಘಟಿಸಿ ಹೋಗಿದ್ದು ಹರೀಶ..... ರಜನಿ..... ವರ್ಧನ್..... ಅನುಷ ನಿಂತ ಜಾಗದಲ್ಲಿಯೇ ಕಲ್ಲಾಗಿ ಹೋಗಿದ್ದರು.

5 comments:

  1. ಅಬ್ಬಾ ಏನು ಕಥೆ, ಮುಂದೆ ಏನು ಆಗುತ್ತೆ ಅನ್ನುವ ಕುತೂಹಲ

    ReplyDelete
  2. ಕತೆ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ದಯವಿಟ್ಟು ನಂದು ಒಂದು ವಿನಂತಿ ಆದಷ್ಟು ರಶ್ಮಿ ನಿಕಿತಾ ದೃಷ್ಟಿ ಗಿರೀಶ ನಿಧಿ-ವಿರೇಂದ್ರ ಅನುಷ ಪ್ರೀತಿ ಸುಮಾ ಇವರ ಬಗ್ಗೆ ಹೆಚ್ಚಾಗಿ ಬರೆಯಿರಿ ಆದಷ್ಟು ಬೇಗ ಬೇಗ ದಿನಕ್ಕೆ 2, 3, 4, 5, ಸ್ಟೋರಿ ಬರೆಯಿರಿ ಮತ್ತು ರಶ್ಮಿ-ಗಿರೀಶ-ದೃಷ್ಟಿ ದಿನ ಸ್ಟೋರಿ ಮಿಸ್ ಮಾಡದೆ ಅಪ್ಲೋಡ್ ಮಾಡ ರೀ ದಯವಿಟ್ಟು ನಂದು ಒಂದು ವಿನಂತಿ

    2 days story upload mada ri please bega bega story upload mada ri My humble request ri please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    ReplyDelete
  3. ದಯವಿಟ್ಟು ನಂದು ಒಂದು ವಿನಂತಿ ಆದಷ್ಟು ಹೆಚ್ಚಾಗಿ ರಶ್ಮಿ-ಗಿರೀಶ-ದೃಷ್ಟಿ-ನಿಕಿತಾ ಮತ್ತು ನಿಧಿ-ವಿರೇಂದ್ರ-ನಿಕಿತಾ ಇವರ ಬಗ್ಗೆ ಹೆಚ್ಚಾಗಿ ಸ್ಟೋರಿ ಬರೆಯಿರಿ daily daily 2, 3, 4, story upload mada ri bega bega please my personal humble request ri please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    ReplyDelete
  4. ರಶ್ಮಿ-ಗಿರೀಶ-ದೃಷ್ಟಿ-ನಿಕಿತಾ ಮತ್ತು ನಿಧಿ-ವಿರೇಂದ್ರ-ನಿಕಿತಾ ಇವರ ಬಗ್ಗೆ ಹೆಚ್ಚಾಗಿ ಸ್ಟೋರಿ ಬರೆಯಿರಿ 2 days story upload mada ri please bega bega story upload mada ri My humble request ri please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    ReplyDelete