Total Pageviews

Tuesday, 18 February 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 283

ವರ್ಧನ್ ಜೊತೆ ಮಾತನಾಡುತ್ತ ನೀತು ಮುಂದೆ ಹೋಗುತ್ತಿದ್ದರೆ ಅವಳ ಹಿಂದೆ ನಿಶಾಳನ್ನೆತ್ತಿಕೊಂಡು ನಿಧಿ ಅವಳ ಪಕ್ಕ ರಜನಿ ಮತ್ತು ಅನುಷ ಬರುತ್ತಿದ್ದರು. ಮಕ್ಕಳ ಹಿಂದೆ ಹರೀಶ...ರಾಣಾ ಮತ್ತಿತರರು ಬರುತ್ತಿದ್ದು ಹರೀಶ ಮಗಳಿಗೆ ಆನೆ ಸವಾರಿ ಮಾಡಿಸುವೆ ಮೊದಲು ಫ್ರೆಶಾಗಿ ಹಾಲು ಕುಡಿ ಅಂತ ಸಮಾಧಾನ ಮಾಡಿಕೊಂಡು ಬರ್ತಿದ್ದ. ಅರಮನೆ ಹೊರಗಿನ ಅಂಗಳವನ್ನು ಆರು ಜನ ಸೇವಕಿಯರು ಕ್ಲೀನ್ ಮಾಡುತ್ತಿರುವುದನ್ನು ನೋಡಿ ಅದರ ಬಗ್ಗೆ ಅಷ್ಟಾಗಿ ಯೋಚಿಸದೆ ಮುಂದಕ್ಕೆ ಹೆಜ್ಜೆಯಿಡುತ್ತಿದ್ದ ನೀತು ಕಣ್ಣಿಗೆ ಆ ದೃಶ್ಯವು ಕಾಣಿಸಿತು. 

ಆರು ಜನ ಸೇವಕಿಯರಲ್ಲೊಬ್ಬಳು ಸೊಂಟದಲ್ಲಿ ಕೈ ತೂರಿಸುತ್ತಿದ್ದು ಹೊರತೆಗೆದಾಗ ಕೈಯಲ್ಲಿ ಪಿಸ್ತೂಲಿರುವುದನ್ನು ನೋಡಿ ಕೈಯಲ್ಲಿಡಿದ ಫೈಲ್ಸ್ ಮತ್ತು ಫೋನ್ ಬಿಟ್ಟ ನೀತು ಚಿನ್ನಿ...ಎಂದು ಕೂಗುತ್ತ ಇಬ್ಬರು ಮಕ್ಕಳಿಗೆ ಅಡ್ಡಲಾಗಿ ನಿಂತಳು. ಅದೇ ಸಮಯಕ್ಕೆ ಯಶೋಮತಿ ಕೈಲಿದ್ದ ಪಿಸ್ತೂಲಿನಿಂದ ಮೂರು ಗುಂಡುಗಳು ಹಾರಿತು. ಇದೆಲ್ಲವೂ ಕೇವಲ 3—5 ಸೆಕೆಂಡುಗಳಲ್ಲಿ ನಡೆದು ಹೋಗಿದ್ದು ಯಾರಿಗೂ ಸಹ ಪ್ರತಿಕ್ರಿಯಿಸಲಿಕ್ಕೂ ಸಮಯವೇ ಸಿಗಲಿಲ್ಲ. 

ಮೊದಲನೇ ಗುಂಡು ನೀತು ಎಡಗಡೆ ತೋಳಿನಲ್ಲಿ ನುಗ್ಗಿದರೆ ಎರಡನೆಯ ಗುಂಡು ಅವಳ ಬೆನ್ನಿನ ಮೂಲಕ ಹೃದಯವನ್ನು ನಾಟಿತ್ತು. ಆದರೆ ಮೂರನೆಯ ಗುಂಡಿಗೆ ಅಡ್ಡಲಾಗಿ ಬಂದ ವೀರ ಸಿಂಗ್ ಹೊಟ್ಟೆಯ ಎಡಭಾಗದಲ್ಲಿ ಹೊಕ್ಕಿತು. ರಾಣಾ ಕತ್ತಿ ಹಿರಿದು ಮಿಂಚಿನಂತೆ ನುಗ್ಗಿ ಯಶೋಮತಿಯ ಕಡೆ ಕತ್ತಿ ಬೀಸಿದಾಗದು ಅವಳ ಬಲ ಮುಂಗೈಯನ್ನೇ ಕತ್ತರಿಸಿದ್ದು ಮುಂಗೈ ಪಿಸ್ತೂಲಿನ ಸಮೇತ ನೆಲಕ್ಕೆ ಬಿತ್ತು. ಎದೆ ಭಾಗಕ್ಕೆ ಗುಂಡು ಬಿದ್ದಿದ್ದ ನೀತು ಮಕ್ಕಳಿಬ್ಬರೂ ಸುರಕ್ಷಿತವಾಗಿ ಇರುವುದನ್ನು ಕಂಡು ಮುಗುಳ್ನಗೆಯೊಂದಿಗೆ ನೆಲಕ್ಕುರುಳಿ ಕಣ್ಮುಚ್ಚಿಕೊಂಡಳು. 

ಹರೀಶ... ರಜನಿ...ಅನುಷ....ವರ್ಧನ್ ಗರಬಡಿದವರಂತಾಗಿ ಹೋಗಿ ನಿಂತ ಜಾಗದಲ್ಲೇ ಕಲ್ಲಾಗಿ ಹೋಗಿದ್ದರು. ಆದರೆ ಸಮಯಕ್ಕನುಗುಣವಾಗಿ ಪ್ರತಿಕ್ರಿಸಿಯಿದ ರಾಣಾ ಹಾಗು ವಿಕ್ರಂ ಸಿಂಗ್ ತಕ್ಷಣ ನೀತುವಿನ ಬೆನ್ನು ಭಾಗದಲ್ಲಿ ಸುರಿಯುತ್ತಿರುವ ರಕ್ತ ತಡೆಯಲು ಬಟ್ಟೆಯನ್ನೊತ್ತಿಡಿದು ಅವಳನ್ನು ಹೆಲಿಕಾಪ್ಟರಿನಲ್ಲಿ ಸಂಸ್ಥಾನದ ಆಸ್ಪತ್ರೆಗೆ ಕೊಂಡೊಯ್ದರು.

ನಿಶಾ ಮಮ್ಮ....ಎಂದು ಕೂಗಿಕೊಂಡು ಅಳಲಾರಂಭಿಸಿದಾಗಲೇ ನಾಲ್ವರೂ ಎಚ್ಚೆತ್ತು ಹರೀಶ ಮಗಳನ್ನು ಎತ್ತಿಕೊಂಡರೆ ಅಷ್ಟೊತ್ತೂ ತಂಗಿಯನ್ನು ತೋಳಿನಲ್ಲಿ ಬಿಗಿಯಾಗಿ ಹಿಡಿದುಕೊಂಡು ನಿಂತಿದ್ದ ನಿಧಿ ನಿಂತಲ್ಲಿಯೇ ಕುಸಿದು ಬಿದ್ದಳು.

ಅಜಯ್ ಸಿಂಗ್..........ಸರ್ ಯುವರಾಣಿಯವರಿಗೆ ಯಾವುದೇ ಗುಂಡು ಬಿದ್ದಲ್ಲ ಗಾಬರಿಯಾಗ್ಬೇಡಿ ಮಾತೆಯವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ನಾವು ಯುವರಾಣಿಯನ್ನೂ ಅಲ್ಲಿಗೆ ಕರೆದೊಯ್ಯೋಣ ನಡೀರಿ.

ಶಾಕಿನಿಂದ ಕಲ್ಲಾಗಿ ಹೋಗಿದ್ದ ನಾಲ್ವರೂ ಸಹಜತೆಗೆ ಮರಳಿದ್ದು ನಿಧಿಯನ್ನು ಅಜಯ್ ಸಿಂಗ್ ಹೊತ್ಕೊಂಡು ಮುಂದೋಡಿದರೆ ಆತನ ಹಿಂದೆ ಎಲ್ಲರೂ ಹೆಲಿಕಾಪ್ಟರ್ ಏರಿಕೊಂಡರು. ರಕ್ಷಕರು ವೀರ್ ಸಿಂಗ್ ಹೊಟ್ಟೆಗೆ ಬಟ್ಟೆ ಕಟ್ಟಿ ಆತನನ್ನು ಸಹ ಆಸ್ಪತ್ರೆಗೆ ರವಾನಿಸಿದ್ದು ಗುಂಡು ಹಾರಿಸಿದ ಯಶೋಮತಿಯನ್ನು ಬಂಧಿಸಿ ಒಂದು ರೂಮಲ್ಲಿ ಕೂಡಿ ಹಾಕಿದರು.

ಸಂಸ್ಥಾನದ ಆಸ್ಪತ್ರೆಯ ಮುಖ್ಯ ದ್ವಾರದ ಬಳಿಯೇ ಹೆಲಿಕಾಪ್ಟರ್ ಇಳಿಯುತ್ತಿರುವುದನ್ನು ನೋಡಿ ಇದು ಸಂಸ್ಥಾನದ್ದೆಂದು ಗಮನಿಸಿದ ಕೆಲವು ವಾರ್ಡ್ ಬಾಯ್ಸ್ ಸ್ಟ್ರೆಚರ್ ತಳ್ಳಿಕೊಂಡು ಓಡೋಡಿ ಬಂದ್ರು. ನೀತುಳನ್ನು ಅದರ ಮೇಲೆ ಮಲಗಿಸಿದ ರಾಣಾ ಆಸ್ಪತ್ರೆಯೊಳಗಡೆ ತಾನೇ ತಳ್ಳಿಕೊಂಡು ಹೊರಟರೆ ಅಲ್ಲಿನ ಸ್ಟಾಫುಗಳಿಗೆ ತಕ್ಷಣ ಎಲ್ಲಾ ಪ್ರಮುಖ ವೈದ್ಯರನ್ನು ಆಪರೇಷನ್ ಥಿಯೇಟರಿಗೆ ಬರಲು ತಿಳಿಸೆಂದು ವಿಕ್ರಂ ಸಿಂಗ್ ಸೂಚಿಸಿದನು. ಹತ್ತು ನಿಮಿಷಕ್ಕೂ ಮುನ್ನವೇ ನೀತು ಆಪರೇಷನ್ ಥಿಯೇಟರಿನಲ್ಲಿದ್ದು ಹತ್ತು ಜನ ಸೀನಿಯರ್ ಸರ್ಜನ್ ಆಪರೇಷನ್ನಿನ ತಯಾರಿ ನಡೆಸುವುದರ ಜೊತೆಗೆ ಬೆನ್ನಿನ ಭಾಗದಲ್ಲಿ ಸುರಿಯುತ್ತಿದ್ದ ರಕ್ತವನ್ನು ನಿಲ್ಲಿಸುವ ಪ್ರಯತ್ನದಲ್ಲಿದ್ದರು. 

ನಿಧಿಯನ್ನು ಕೂಡ ಆಸ್ಪತ್ರೆಗೆ ತರಲಾಗಿದ್ದು ಅವಳನ್ನು ಪರೀಕ್ಷಿಸಿದ ವೈದ್ಯರು ಶಾಕ್ ಆಗಿದ್ದರಿಂದ ಇವರಿಗೆ ಪ್ರಜ್ಞೆ ತಪ್ಪಿದೆ ಇಂಜಕ್ಷನ್ ಕೊಡುವುದಾಗೇಳಿ ನಾಲ್ಕೈದು ಘಂಟೆಗಳಲ್ಲಿ ಪ್ರಜ್ಞೆ ಬರುವುದೆಂದು ತಿಳಿಸಿದರು. ಇಬ್ಬರು ಪೇಷಂಟುಗಳೂ ಸೂರ್ಯವಂಶಿ ಸಂಸ್ಥಾನಕ್ಕೆ ಸಂಬಂಧಿಸಿದವರು ಅವರಲ್ಲೊಬ್ಬಳು ಯುವರಾಣಿ ಎಂದು ತಿಳಿದೊಡನೆ ಆಸ್ಪತ್ರೆಯ ಸ್ಟಾಫುಗಳೆಲ್ಲರೂ ಮತ್ತಷ್ಟು ಚುರುಕಾಗಿ ಕೆಲಸ ಮಾಡತೊಡಗಿದರು. ಅಪ್ಪನ ತೋಳಿನಲ್ಲಿದ್ದ ನಿಶಾ ಒಂದೇ ಸಮ ಅಳುತ್ತಿದ್ದು ಯಾರೆಷ್ಟೇ ಸಮಾಧಾನ ಮಾಡಿದರೂ ಸುಮ್ಮನಾಗದೆ ಅಮ್ಮ ಬೇಕು ಎಂದು ಬಿಕ್ಕಿ ಬಿಕ್ಕಿ ಅಳುತ್ತಲೇ ಇದ್ದಳು.

ಹರೀಶ......ಕಂದ ಅಮ್ಮಂಗೆ ಗಾಯ ಆಯ್ತಲ್ವಾ ಅದಕ್ಕೆ ಡಾಕ್ಟರ್ ಚುಚ್ಚಿ ಮಾಡಲು ಕರೆದುಕೊಂಡು ಹೋಗಿದ್ದಾರೆ. ಇನ್ನು ಸ್ವಲ್ಪ ಹೊತ್ತು ಅಮ್ಮ ಬರ್ತಾಳೆ ನೀನು ಅಳಬೇಡಮ್ಮ ಕಂದ. ನೀನು ಅಳುತ್ತಿದ್ದರೆ ಅಮ್ಮಂಗೂ ಬೇಜಾರಾಗಿ ಅಳು ಬರುತ್ತೆ ಅದಕ್ಕೆ ಅಳಬೇಡ ಚಿನ್ನಿ.

ನಿಶಾ ಅಳುವುದನ್ನು ನಿಲ್ಲಿಸಿದರೂ ಅವಳ ಕಣ್ಣಿನಿಂದ ಒಂದೇ ಸಮ ಕಣ್ಣೀರು ಹರಿಯುತ್ತಿದ್ದು ಅಪ್ಪನನ್ನು ಬಿಗಿಯಾಗಿ ತಬ್ಬಿಕೊಂಡಿದ್ದಳು. ನಿಧಿ ಕೂಡ ಪ್ರಜ್ಞೆತಪ್ಪಿ ಮಲಗಿದ್ದು ಅವಳಿಗೆ ಡ್ರಿಪ್ಸ್ ಹಾಕಲಾಗಿದ್ದು ಅವಳ್ಜೊತೆಯಲ್ಲಿ ರಜನಿ—ಅನುಷ ಕುಳಿತಿದ್ದರು. ನಿಧಿ ಸಂಸ್ಥಾನದ ಯುವರಾಣೆ ಎಂದರಿವಾದಾಗ ಅವಳಿದ್ದ ರೂಮಿನಲ್ಲಿ ನಾಲ್ಕು ಜನ ನರ್ಸ್ ಜೊತೆ ಇಬ್ಬರು ಲೇಡಿ ಡಾಕ್ಟರ್ಸ್ ಕೂಡ ಉಳಿದುಕೊಂಡರು. ಹರೀಶನ ಜೊತೆ ವರ್ಧನ್ ಕೂಡ ಕಣ್ಣೀರಿಡುತ್ತ ತನ್ನ ಅಕ್ಕ ಹಾಗು ಅಣ್ಣನ ಮಗಳು ಸಕುಶಲವಾಗಿ ಹುಷಾರಾಗಲೆಂದು ದೇವರ ಹತ್ತಿರ ಪ್ರಾಥಿಸುತ್ತಿದ್ದನು. 

ರಾಣಾ ಮತ್ತು ವಿಕ್ರಂ ಸಿಂಗ್ ಆಚಾರ್ಯರು ಮೊದಲೇ ನೀತು ಪ್ರಾಣಕ್ಕೆ ಸಂಚಕಾರವಿದೆ ಎಂಬುದರ ವಿಷಯದಲ್ಲಿ ಮುನ್ಸೂಚನೆ ನೀಡಿದ್ದರೂ ತಾವುಗಳು ಮಾತೆಯ ರಕ್ಷಣೆ ಮಾಡುವ ಕಾರ್ಯದಲ್ಲಿ ವಿಫಲರಾಗಿದ್ದಕ್ಕೆ ಕಣ್ಣೀರಿಡುತ್ತ ಸ್ವಲ್ಪ ದೂರ ನಿಂತಿದ್ರು. ಹತ್ತು ನಿಮಿಷದಲ್ಲೇ ಸುಮಾರು 200 ಜನ ರಕ್ಷಕರು ಆಸ್ಪತ್ರೆಯನ್ನು ಸುತ್ತುವರಿದಿದ್ದು ನೀತು ಮತ್ತು ನಿಧಿಯ ಚಿಕಿತ್ಸೆ ನಡೆಯುತ್ತಿರುವ ಫ್ಲೋರನ್ನು ಪೂರ್ತಿ ಸೀಲ್ ಮಾಡಿ ಬಿಟ್ಟಿದ್ದರು.

ರಜನಿ ಕಣ್ಣೀರು ಸುರಿಸುತ್ತ........ಸ್ವಲ್ಪ ಹೊತ್ತಿಗೂ ಮುಂಚಿನವರೆಗೂ ಎಲ್ಲರೂ ಎಷ್ಟು ಸಂತೋಷದಲ್ಲಿದ್ದೆವು ಇದ್ದಕ್ಕಿದ್ದಂತೆ ಪರಿಸ್ಥಿತಿಯೇ ಬದಲಾಗಿ ಹೋಯ್ತಲ್ಲೆ.

ಅನುಷ ಅಳುತ್ತ........ಮಕ್ಕಳಿಗೆ ಗುಂಡು ಬೀಳದಂತೆ ಕಾಪಾಡಲು ಅಕ್ಕ ಇವರಿಬ್ಬರಿಗೆ ಅಡ್ಡಲಾಗಿ ಮಧ್ಯೆ ನಿಂತು ಈಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಅವರ ಪರಿಸ್ಥಿತಿ ಹೇಗಿದೆಯೋ ? ಇಲ್ಲಿ ಅಮ್ಮನಿಗೆ ಗುಂಡೇಟು ಬಿದ್ದಿರುವುದನ್ನು ನೋಡಿ ನಿಧಿ ಪ್ರಜ್ಞೆತಪ್ಪಿ ಹೋಗಿದ್ದಾಳೆ. ದೇವರೇ ನಾವ್ಯಾರಿಗೂ ಅನ್ಯಾಯ ಮಾಡಿಲ್ಲ ನನ್ನ ಅಕ್ಕನನ್ನು ದಯವಿಟ್ಟು ಉಳಿಸಿಕೊಡು.

ರಜನಿ.......ಚಿನ್ನಿ ಹತ್ತಿರ ಹೋಗಿದ್ಯಾ ಪಾಪ ತುಂಬ ಅಳ್ತಿದ್ದಾಳೆ.

ಅನುಷ.......ಭಾವ ಹೇಗೋ ಅಳುವುದನ್ನು ನಿಲ್ಲಿಸಿದ್ದಾರೆ ಆದರಿನ್ನು ಕಣ್ಣಿಂದ ಕಂಬನಿ ಹರಿಯುವುದು ನಿಂತಿಲ್ಲ. ನಾನೂ ಕರೆದೆ ಅಪ್ಪನನ್ನು ಬಿಟ್ಟು ಬರಲ್ಲ ಅಂತಿದ್ದಾಳೆ ಅಕ್ಕನಿಗೇನೂ ಆಗಲ್ಲ ತಾನೇ ?

ರಜನಿ......ಏನೂ ಆಗಲ್ಲ ಕಣೆ ಮಕ್ಕಳನ್ನು ಹೀಗೆ ಅನಾಥರನ್ನಾಗಿ ಮಾಡಿ ಅವಳೆಲ್ಲಿಗೂ ಹೋಗಲ್ಲ ಕಣೆ ( ಮನಸ್ಸಿನಲ್ಲಿ ) ಇವಳಿಗೇನೊ ಹೇಳ್ಬಿಟ್ಟೆ ಆದರೆ ನನಗೇ ಭಯವಾಗ್ತಿದೆ ಪ್ಲೀಸ್ ಕಣೆ ನೀತು ಎಲ್ಲಿಗೂ ಹೋಗ್ಬೇಡ ಇಲ್ಲಿಗೆ ಬರುವಾಗ ನೀನು ಹೇಳಿದ ಮಾತನ್ನೀಗ ನೀನೇ ನಿಜ ಮಾಡಲು ಹೊರಟಿದ್ದೀಯಲ್ಲೆ. ದೇವರೇ ನನ್ನ ಪ್ರಾಣವನ್ನು ತೆಗೆದುಕೊಳ್ಳಿ ಆದರೆ ನನ್ನ ಗೆಳತಿಯನ್ನು ಬದುಕಿಸಿ ಕೊಡಿ......ಎಂದು ತನ್ನ ಪ್ರಾಣಗೆಳತಿಗಾಗಿ ಬೇಡಿಕೊಂಡಳು.
* *
* *
ಸತತ ಎರಡೂವರೆ ಘಂಟೆಗಳ ಆಪರೇಶನ್ ಬಳಿಕ ಡಾಕ್ಟರ್ಸ್ ಹೊರ ಬಂದಾಗ ಹರೀಶ—ವರ್ಧನ್ ಎದ್ದು ನಿಂತು.....

ವರ್ಧನ್.....ನಮ್ಮಕ್ಕ ಹೇಗಿದ್ದಾರೆ ಡಾಕ್ಟರ್ ?

ಸೀನಿಯರ್ ಸರ್ಜನ್......ಒಂದು ಗುಂಡು ಅವರ ಎಡ ಭುಜದಲ್ಲಿ ಬಿದ್ದಿದೆ ಅದರಿಂದ ಯಾವುದೇ ಅಪಾಯವಾಗಿಲ್ಲ ಆದರೆ ಬೆನ್ನಿನ ಕಡೆ ಬಿದ್ದ ಬುಲೆಟ್ ಅವರ ಅವರ ಹೃದಯಕ್ಕೆ ನಾಟಿತ್ತು ಅದೃಷ್ಟವಶಾತ್ ಹೃದಯವನ್ನು ಭೇಧಿಸಿಲ್ಲ. ಬುಲೆಟ್ ಪರಿಣಾಮ ಅವರ ಹೃದಯಕ್ಕೆ ಒಂದು ಸಣ್ಣ ರಂಧ್ರವಾಗಿ ಹೋಗಿದೆ ಅಲ್ಲಿಂದ ಸ್ವಲ್ಪ ಸ್ವಲ್ಪವೇ ರಕ್ತ ಸೋರಿಕೆಯಾಗ್ತಿದೆ. ಅದಿನ್ನೂ ನಿಂತಿಲ್ಲ ರಕ್ತ ನಿಲ್ಲುವವರೆಗೂ ನಾವು ಏನನ್ನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಧೈರ್ಯವಾಗಿರಿ ನಾವು ನಮ್ಮ ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ.

ಹರೀಶ ಕೈಮುಗಿದು.......ಡಾಕ್ಟರ್ ಹೇಗಾದರೂ ನನ್ನ ಹೆಂಡತಿಯನ್ನು ಉಳಿಸಿಕೊಡಿ. ನನ್ನ ಮಗಳು ಇಲ್ಲಿವರೆಗೂ ಅತ್ತಿದ್ದೇ ಇಲ್ಲ ಆದರಿಂದು ಅಳುವನ್ನೇ ನಿಲ್ಲಿಸ್ತಿಲ್ಲ ಪ್ಲೀಸ್ ಡಾಕ್ಟರ್.

ಸರ್ಜನ್......ನಾವೆಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದ್ದೀವಿ ಸರ್ ಆಗಲೇ ದೆಹಲಿ ಮತ್ತು ಬಾಂಬೆಯಲ್ಲಿರುವ ಸ್ಪೆಷಲಿಸ್ಟುಗಳನ್ನು ಸಂಪರ್ಕಿಸಿ ಬರುವುದಕ್ಕೆ ಕೇಳಿದ್ದೀವಿ ಇನ್ನೇನು ಅವರೂ ಬರ್ತಿದ್ದಾರೆ. ನೀವು ಧೈರ್ಯವಾಗಿರಿ ನಮ್ಮಿಂದಾಗುವ ಎಲ್ಲಾ ಪ್ರಯತ್ನಗಳನ್ನೂ ನಾವು ಮಾಡ್ತೀವಿ ಭಗವಂತನ ಕೃಪೆಯಿದ್ದರೆ ಎಲ್ಲ ಒಳ್ಳೆಯದಾಗುತ್ತೆ.

ನಿಶಾ.....ನಾನಿ ಮಮ್ಮ ಹತ್ತ ಹೋತೀನಿ ಪಪ್ಪ.

ವರ್ಧನ್.......ಡಾಕ್ಟರ್ ದೂರದಿಂದಾದರೂ ಅಕ್ಕನನ್ನು ಮಗಳಿಗೆ ತೋರಿಸಬಹುದಾ ಪ್ಲೀಸ್.

ಡಾಕ್ಟರ್......ಈಗ ಬೇಡಿ ಸರ್ ದಯವಿಟ್ಟು ಅರ್ಥ ಮಾಡಿಕೊಳ್ಳಿರಿ ನಮಗೂ ಸ್ವಲ್ಪ ಟೈಂ ಕೊಡಿ ನಾವು ನಮ್ಮ ಶಕ್ತಿಮೀರಿ ಎಲ್ಲಾ ರೀತಿಯ ಪ್ರಯತ್ನವನ್ನು ಮಾಡ್ತಿದ್ದೀವಿ.

ನಿಶಾ ಪುನಃ ಅಪ್ಪನನ್ನು ಬಿಗಿದಪ್ಪಿಕೊಂಡು ಸದ್ದು ಮಾಡದೆ ಕಣ್ಣೀರು ಸುರಿಸತೊಡಗಿದರೆ ಹರೀಶ ಮಗಳನ್ನು ಸಮಾಧಾನ ಮಾಡುತ್ತಲೇ ತಾನೂ ಅಳುತ್ತಿದ್ದನು. ವರ್ಧನ್ ಅತ್ಯಂತ ದುಃಖಿತನಾಗಿ ಹರೀಶನಿಗೆ ಸಮಾಧಾನ ಮಾಡಿ ನಿಧಿ ಮಲಗಿದ್ದ ರೂಮಿಗೆ ಬಂದನು.

ರಜನಿ......ನೀತು ಹೇಗಿದ್ದಾಳೆ ? ಡಾಕ್ಟರ್ ಏನಂದರು ?

ಅನುಷ.......ಅಕ್ಕನ ಆರೋಗ್ಯ ಹೇಗಿದೆ ? ಏನೂ ಭಯವಿಲ್ಲವಲ್ಲ ?

ವರ್ಧನ್ ಕಣ್ಣೀರು ಸುರಿಸುತ್ತಲೇ ನೀತು ಆರೋಗ್ಯದ ಬಗ್ಗೆ ಹೇಳುತ್ತ ಇಬ್ಬರಿಗೂ ಸಮಾಧಾನ ಹೇಳಿ ಹೊರಬಂದನು.

ವರ್ಧನ್......ರಾಣಾ ಗುಂಡು ಹಾರಿಸಿದವಳ್ಯಾರೆಂದು ಗೊತ್ತಾಯ್ತಾ.

ರಾಣಾ.....ಅವಳೇ ಯಶೋಮತಿ ಸರ್.

ವರ್ಧನ್......ಅವಳಿಗ್ಯಾವುದೇ ತೊಂದರೆಯಾಗದಂತೆ ನೋಡ್ಕೊಳ್ಳಿ ಅಂತ ಎಲ್ಲರಿಗೂ ಹೇಳ್ಬಿಡು ನಿಧಿ ಎಚ್ಚರಗೊಂಡಾಗ ಅವಳೇ ಏನು ಮಾಡುವುದೆಂದು ಹೇಳ್ತಾಳೆ.
* *
* *
ಕಾಲೇಜು ಮುಗಿಸಿಕೊಂಡು ಮನೆಗೆ ಲೇಟಾಗಿ ಮರಳಿದ ನಿಕಿತಾ ಅಕ್ಕ ನಿಧಿಯ ನಂಬರಿಗೆ ಕರೆ ಮಾಡುತ್ತಿದ್ದರೆ ಅದನ್ಯಾರೂ ರಿಸೀವ್ ಸಹ ಮಾಡುತ್ತಿರಲಿಲ್ಲ. ಬೇಗನೇ ಫ್ರೆಶಾಗಿ ನೀತು ಮನೆಗೆ ಬಂದಾಗ ಅಲ್ಲಿ ಕೂಡ ಗಿರೀಶ ಅಪ್ಪ..ಅಮ್ಮ...ಎಲ್ಲರ ಮೊಬೈಲಿಗೂ ಟ್ರೈ ಮಾಡ್ತಿದ್ದು ಯಾರೊಬ್ಬರೂ ಅತ್ತಲಿಂದ ತೆಗೆಯುತ್ತಿರಲಿಲ್ಲ.

ನಿಕಿತಾ.......ಅಕ್ಕ ಫೋನ್ ತೆಗೀತಿಲ್ಲ ನೀವ್ಯಾರಾದ್ರೂ ಮಾಡಿದ್ರಾ ?

ನಯನಾ....ಅಕ್ಕ ನಾವು ಸ್ಕೂಲಿನಿಂದ ಬರುವಾಗ ಸವಿತಾ ಆಂಟಿ ಫೋನ್ ಮಾಡಿ ಮಾತಾಡಿದ್ರು ಆಗ ಅತ್ತೆ ಮಿಕ್ಕವರು ರಿಜಿಸ್ಟರ್ ಆಫೀಸಿನಲ್ಲಿದ್ದರು ಆಮೇಲೆ ಮಾಡ್ತೀನಿ ಅಂದಿದ್ರು ಆದರೀಗ್ಯಾರೂ ಫೋನೇ ತೆಗೀತಿಲ್ಲ.

ಸುಮ ಗಂಡನಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ಮನೆಯ ಗಂಡಸರೆಲ್ಲರೂ ಮನೆಗಾಗಮಿಸಿ ಐವರ ನಂಬರಿಗೂ ಟ್ರೈ ಮಾಡುತ್ತ ಯಾರೂ ಫೋನ್ ರಿಸೀವ್ ಮಾಡದಿರುವುದನ್ನು ಕಂಡು ಎಲ್ಲರೂ ಟೆನ್ಷನ್ನಿಗೊಳಗಾದರು.

ಸವಿತಾ.....ನಿಮ್ಮಲ್ಯಾರ ಹತ್ತಿರವೂ ರಾಣಾ ಅಥವ ಬೇರೆಯವರ ನಂಬರ್ ಇಲ್ಲವಾ ?

ಅಶೋಕ.....ಇಲ್ಲ ತಾಳಿ ಹೊರಗಿರುವ ರಕ್ಷಕರನ್ನೇ ವಿಚಾರಿಸುತ್ತೀನಿ ಅವರ ಬಳಿ ನಂಬರ್ ಇದ್ದರೆ ಒಳ್ಳೆಯದು.

ಆಶೋಕ ಸ್ವಲ್ಪ ಹೊತ್ತಲ್ಲೇ ಹಿಂದಿರುಗಿ......ರಾಣಾ ಮತ್ತಿತರರು ಸಹ ಫೋನ್ ರಿಸೀವ್ ಮಾಡ್ತಿಲ್ಲ ಅಲ್ಲೇನೋ ನಡೆದಿದೆ ಅನುಸುತ್ತಿದೆ.

ಎಲ್ಲರೂ ಭಯ ಮತ್ತು ಆತಂಕದಿಂದಲೇ ಸಮಯ ಕಳೆಯುತ್ತಿದ್ದು ಏಳು ಘಂಟೆಯ ಹೊತ್ತಿಗೆ ಗಿರೀಶ ಅಪ್ಪನಿಗೆ ಪುನಃ ಕರೆ ಮಾಡಿದಾಗ ಹರೀಶ ರಿಸೀವ್ ಮಾಡಿದನು.

ಪ್ರೀತಿ.....ಶ್!!! ಯಾರೂ ಮಾತಾಡ್ಬೇಡಿ ಗಿರೀಶ ಫೋನ್ ಸ್ಪೀಕರಿಗೆ ಹಾಕಿ ಮಾತಾಡು.

ಗಿರೀಶ......ಅಪ್ಪ ಏನಾಗ್ತಿದೆ ನೀವ್ಯಾರೂ ಫೋನ್ಯಾಕೆ ರಿಸೀವ್ ಮಾಡ್ತಿಲ್ಲ ಅಮ್ಮ ಎಲ್ಲಿ ? ಅಕ್ಕನೂ ಫೋನ್ ತೆಗೀತಿಲ್ವಲ್ಲ.

ಹರೀಶ ದುಃಖ ತಡೆದುಕೊಳ್ಳುತ್ತ......ಏನೀಲ್ಲ ಕಣೋ ನಾವೆಲ್ಲ....

ಅಣ್ಣನ ಧ್ವನಿ ಕೇಳಿದ ತಕ್ಷಣವೇ ನಿಶಾ ಅಪ್ಪನ ಫೋನಿನತ್ತ ಬಾಗಿ..... ಅಣ್ಣ...ಅಣ್ಣ...ಲಿಲ್ಲಿ ಢಂ..ಢಂ..ಆತು ಮಮ್ಮ ಗಾಯ ಆತು ಮಮ್ಮ ಚುಚ್ಚಿ ಮಾತಾರೆ....ನನ್ನಿ ಮಮ್ಮ ನೋಲಿಲ್ಲ ಅಣ್ಣ ನಂಗಿ ಭಯ ಆತು ಅಣ್ಣ ಬಾ...ಬಾ..ಬಾ...ಅಣ್ಣ...

ನಿಶಾಳ ಅಳುತ್ತಿರುವ ಧ್ವನಿ ಅವಳಾಡುತ್ತಿದ್ದ ಮಾತುಗಳನ್ನು ಕೇಳಿ ಮನೆಯಲ್ಲಿದ್ದವರಿಗೆ ಕೈಕಾಲುಗಳೇ ನಡುಗಲಾರಂಭಿಸಿ ಅವರೆಲ್ಲರ ದೇಹ ತಣ್ಣಗಾಗಿ ಹೋದಂತೆ ಭಾಸವಾಗುತ್ತಿತ್ತು.

ಶೀಲಾ ತಕ್ಷಣ ಫೋನ್ ಪಡೆದು......ರೀ ಏನಿದು ಚಿನ್ನಿ ಹೇಳ್ತಿರೋದು ಅಲ್ಲೇನಾಗ್ತಿದೆ ಹೇಳಿ ಚಿನ್ನಿ ಮೇಲಾಣೆ ನಿಜ ಹೇಳಿ.

ಹರೀಶ ಧೀರ್ಘವಾಗಿ ಉಸಿರನ್ನೆಳೆದುಕೊಂಡು......ಮನೆಯಲ್ಯಾರೂ ಗಾಬರಿಯಾಗ್ಬೇಡಿ ಹೇಳುವ ತನಕ ಸಮಾಧಾನವಾಗಿರಿ. ಸಂಜೆಯ ಹೊತ್ತಿಗೆ ನಾವು ಅರಮನೆಗೆ ಹಿಂದಿರುಗಿ ಬಂದಾಗ ನಿಶಾ ನಿಧಿಯನ್ನು ಸಾಯಿಸುವ ಉದ್ದೇಶದಿಂದ ಒಬ್ಬಾಕೆ ಗುಂಡು ಹಾರಿಸಿದಳು ಆದರೆ ಮಕ್ಕಳ ರಕ್ಷಣೆಗೆ ನೀತು ಅಡ್ಡವಾಗಿದ್ದಳು. ಅವಳಿಗೆರಡು ಗುಂಡು ಬಿದ್ದಿದೆ ಈಗ ನಾವೆಲ್ಲರೂ ಆಸ್ಪತ್ರೆಯಲ್ಲಿದ್ದೀವಿ ನೀತು ಆಪರೇಷನ್ ಥಿಯೇಟರಿನಲ್ಲಿದ್ದಾಳೆ. ಅಮ್ಮನಿಗೆ ಗುಂಡು ಬಿದ್ದಿದ್ದನ್ನು ನೋಡಿ ನಿಧಿ ಕೂಡ ಪ್ರಜ್ಞೆ ಕಳೆದುಕೊಂಡು ಮಲಗಿದ್ದಾಳೆ ಅನು—ರಜನಿ ಅವಳ ಜೊತೆಯಲ್ಲಿದ್ದಾರೆ.

ಹರೀಶ ಹೇಳಿದ್ದನ್ನು ಕೇಳಿ ಮನೆಯವರೆಲ್ಲರ ಎದೆ ಧಸಕ್ಕೆಂದಿದ್ದು ಸ್ವಲ್ಪ ಚೇತರಿಕೆಯಲ್ಲಿದ್ದ ಅಶೋಕ......ಹರೀಶ ನಾವೀಗಲೇ ಹೊರಡ್ತೀವಿ ಎಲ್ಲಿಗೆ ಬರಬೇಕೆಂದು ಹೇಳು ?

ಹರೀಶ.....ಒಂದ್ನಿಮಿಷ ಅಶೋಕ ಲೈನಲ್ಲಿರು ( ರಾಣಾನನ್ನು ಹತ್ತಿರ ಕರೆದು ಏನೋ ಹೇಳಿ ) ನೀವು ರೆಡಿಯಾಗಿರಿ ಅಲ್ಲಿಗೆ ಹೆಲಿಕಾಪ್ಟರ್ ಬರ್ತಿದೆ ಡಾಕ್ಟರ್ ಬಂದ್ರು ನಾನಾಮೇಲೆ ಮಾತಾಡ್ತೀನಿ.

ಅಮ್ಮನಿಗೆ ಗುಂಡು ಬಿದ್ದಿರುವ ವಿಷಯ ತಿಳಿಯುತ್ತಲೇ ಸುರೇಶನಿಗೆ ಅಘಾತವಾಗಿ ಗೋಡೆಗೊರಗಿ ಮಂಡಿಯಲ್ಲಿ ಮುಖ ಹುದುಗಿಸುತ್ತ ದುಕ್ಕುಡಿಸಿಕೊಂಡು ಅಳತೊಡಗಿದನು. ಯಾವಾಗ್ಲೂ ಅವನೊಟ್ಟಿಗೆ ಜಗಳವಾಡಲು ತುದಿಗಾಲಲ್ಲಿ ನಿಂತಿರುತ್ತಿದ್ದ ನಯನ ಇಂದು ಪೂರ್ತಿ ತಧ್ವಿರುದ್ದವಾಗಿ ಸುರೇಶನನ್ನು ತಬ್ಬಿಕೊಂಡು ತಾನೂ ಜೋರಾಗಿ ಅಳುತ್ತಿದ್ದಳು. ರಶ್ಮಿ...ದೃಷ್ಟಿ...ನಿಕಿತಾ...ನಮಿತಾ ಒಬ್ಬರನ್ನೊಬ್ಬರು ಅಪ್ಪಿಕೊಂಡು ದುಃಖದಿಂದ ಅಳುತ್ತಿದ್ದರೆ ಮನೆಯ ಹೆಂಗಸರ ಕಣ್ಣಲ್ಲಿ ಕಣ್ಣೀರಿನ ಕೋಡಿಯೇ ಹರಿಯತೊಡಗಿತು.

ಅಶೋಕ.......ಈಗ್ಯಾರೆಲ್ಲ ಹೊರಡೋದು ?

ಶೀಲಾ......ಯಾರೆಲ್ಲ ಎಂದರೇನು ಅಶೋಕ್ ? ಅಲ್ಲಿ ನನ್ನ ಗೆಳತಿ ಜೀವನದ ಹೋರಾಟ ನಡೆಸುತ್ತಿದ್ದಾಳೆ ನಾವೆಲ್ಲರೂ ಹೋಗೋದೇ.

ರಾಜೀವ್......ಚಿಕ್ಕ ಮಗು ಕಣಮ್ಮ ಶೀಲಾ ಜೊತೆಗೆ ಸುಕನ್ಯಾ ಸಹ ತುಂಬು ಗರ್ಭಿಣಿ........

ಸುಕನ್ಯಾ ಅಳುತ್ತಲೇ.....ನನಗೇನೂ ಆಗ್ತಿಲ್ಲ ಅಂಕಲ್ ಈ ಮಗು ನನ್ನ ಮಡಿಲಿಗೆ ಬರುವುದಕ್ಕೇ ನೀತು ಕಾರಣ ಅವಳ ಬಳಿ ನಾನು ಹೋಗಲೇ ಬೇಕು.

ಕೊನೆಗೆ ಮನೆಯವರೆಲ್ಲರೂ ಹೊರಡುವುದೆಂದು ನಿರ್ಧಾರವಾಗಿದ್ದು ಹೊರಗಿರುವ ರಕ್ಷಕರಿಗೆ ಎರಡೂ ಮನೆಯ ಕೀ ಕೊಟ್ಟು ನಾಯಿಗಳ ಜೊತೆ ಇತರೆ ಪ್ರಾಣಿ ಪಕ್ಷಿಗಳನ್ನೂ ನೋಡಿಕೊಳ್ಳುವಂತೆ ಹೇಳಿದರು.

ರಕ್ಷಕನೊಬ್ಬ.......ಸರ್ ಏನಾಯ್ತೆಂದು ಕೇಳಬಹುದಾ ?

ರೇವಂತ್ ಅಳುತ್ತಲೇ....ನಿಮ್ಮ ರಾಜಕುಮಾರಿಯವರ ಮೇಲೆ ದಾಳಿ ನಡೆಯಿತಂತೆ ಅವರಿಗಡ್ಡಲಾಗಿ ಬಂದ ನಿಮ್ಮ ಮಾತೆಗೆರಡು ಗುಂಡು ಬಿದ್ದಿದೆ ಅಂತಷ್ಟೇ ಗೊತ್ತಾಯ್ತು ಮಿಕ್ಕಂತೆ ಅಲ್ಲಿನ ಪರಿಸ್ಥಿತಿ ಹೇಗಿದೆ ಅಂತ ಕೂಡ ಗೊತ್ತಿಲ್ಲ.

ಅವನ ಉತ್ತರ ಕೇಳಿ ರಕ್ಷಕರಿಗೂ ಆಘಾತವಾಗಿದ್ದು ಎಲ್ಲರೂ ನೀತು ಸಕುಶಲವಾಗಿ ಹಿಂದಿರುಗಲೆಂದು ಬೇಡಿಕೊಂಡರು. ಅಷ್ಟರಲ್ಲೇ ಅಶೋಕನಿಗೆ ಕರೆ ಮಾಡಿ ಅತ್ತಲಿಂದ.......

ಸುಭಾಷ್......ಅಂಕಲ್ ಬೆಂಗಳೂರಿನಿಂದ ಮೂರು ಹೆಲಿಕಾಪ್ಟರ್ ಊರಿಗೆ ಹೊರಟಿದೆ ಇನ್ನರ್ಧ ಘಂಟೆಯಲ್ಲಿ ಫುಡ್ ಯೂನಿಟ್ಟನ್ನು ತಲುಪುತ್ತೆ ನೀವೆಲ್ಲರೂ ಅಲ್ಲಿಗೆ ಹೊರಟು ಬನ್ನಿ.

ಅಶೋಕ......ನೀನಲ್ಲೇ ಇದ್ದೀಯಾ ? ನೀತು ಹೇಗಿದ್ದಾಳೆ ? ಅಲ್ಲೇನು ನಡೆಯುತ್ತಿದೆಯೋ ?

ಸುಭಾಷ್......ನಾನೂ ಈಗಷ್ಟೇ ಬಂದೆ ಅಂಕಲ್ ಪೂರ್ತಿ ವಿಷಯ ನನಗೂ ಗೊತ್ತಿಲ್ಲ. ಬೆಳಿಗ್ಗೆ ನಿಧಿ ಫೋನ್ ಮಾಡಿ ಬರುವಂತೇಳಿದಳು ಅದಕ್ಕೆ ನಾನಿಲ್ಲಿಗೆ ತಲುಪಿದೆ ಈಗಿನ್ನೂ ಆಸ್ಪತ್ರೆಯ ಹೊರಗೆ ರಾಣಾ ಜೊತೆಯಲ್ಲಿದ್ದೀನಿ ಒಳಗಡೆ ಹೋಗಿಲ್ಲ ನೀವು ಹೊರಡಿ.

ರಾಜೀವ್.......ಶೀಲಾ ಮಗು ಹುಷಾರಾಗಿ ಎತ್ತಿಕೊಳ್ಳಮ್ಮ ಸುಕನ್ಯಾ ನೀನೂ ಹುಷಾರಾಗಿ ಕಣಮ್ಮ. ಮಕ್ಕಳೇ ಕೆಲವು ಬಟ್ಟೆ ತೆಗೆದುಕೊಳ್ಳಿ ಬೇಗ ಹೊರಡೋಣ.
* *
* *

2 comments:

  1. ನೀತು ಕಥೆ ಪ್ರತಿ ದಿನ ಕೊಡಿ

    ReplyDelete
  2. Story thumbha chanagide.. nithuge yenu aguthe antha tension.. ennu swalpa samaya neetu na sex story erudula antha bejaru agtha ede

    ReplyDelete