ನಿಶಾ ಅಳುತ್ತಲೇ ಅಪ್ಪ ಬೆನ್ನು ತಟ್ಟುತ್ತಿದ್ದರಿಂದ ಮತ್ತವಳಿನ್ನೂ ತುಂಬ ಪುಟ್ಟವಳಾಗಿರುವ ಕಾರಣ ಅಪ್ಪನ ಹೆಗಲಿನ ಮೇಲೆಯೇ ನಿದ್ರೆಗೆ ಜಾರಿಕೊಂಡಿದ್ದರೂ ಅಪ್ಪನ ಶರ್ಟನ್ನು ಬಿಗಿಯಾಗಿ ಹಿಡಿದಿದ್ದಳು. ಸುಭಾಷ್ ಮೇಲೆ ಬಂದಾಗ ಹರೀಶ ಸೈಲೆಂಟಾಗಿರಲು ತಿಳಿಸಿ ನಿಧಿ ಮಲಗಿರುವ ರೂಮಿಗೆ ಹೋಗುವಂತೇಳಿ ಕಳುಹಿಸಿದನು.
ಒಂದು ಕಡೆ ಜೀವನವನ್ನೇ ಬಂಗಾರವಾಗಿದ್ದ ಮಡದಿ ಜೀವನ ಮರಣದ ಹೋರಾಟದಲ್ಲಿ ಜೂಜಾಡುತ್ತಿದ್ದರೆ ಹಿರಿಯ ಮಗಳು ಅಮ್ಮನಿಗೆ ಒದಗಿ ಬಂದಿರುವ ಸ್ಥಿತಿಯನ್ನು ಕಂಡು ಪ್ರಜ್ಞೆ ಕಳೆದುಕೊಂಡಿದ್ದಳು. ಇಲ್ಲಿಯವರೆಗೂ ಸದಾ ನಗುನಗುತ್ತ ಕೀಟಲೆ ಮಾಡಿಕೊಂಡು ಫುಲ್ ಜಾಲಿಯಾಗಿರುತ್ತಿದ್ದ ನಿಶಾ ಅಮ್ಮನಿಗಾಗಿ ಒಂದೇ ಸಮ ಅಳುತ್ತಲೇ ಮಲಗಿ ಬಿಟ್ಟಿದ್ದಳು. ಹರೀಶನ ಹೃದಯ— ಮನಸ್ಸಿನೊಳಗೆ ಏದ್ದಿದ್ದ ಅಸಹನೀಯ ವೇದನೆಯನ್ನು ಯಾರೂ ಕೂಡ ಊಹಿಸಲಿಕ್ಕೂ ಸಹ ಸಾಧ್ಯವಿರಲಿಲ್ಲ.
ರಾತ್ರಿ ಹತ್ತು ಘಂಟೆ ಹೊತ್ತಿಗೆ ನಿಧಿ ಎಚ್ಚರಗೊಂಡು ನಾನೀಗಲೇ ಅಮ್ಮನನ್ನು ನೋಡಬೇಕೆಂದು ಹಠ ಹಿಡಿದಿದ್ದು ಯಾರೇ ಸಮಾಧಾನ ಮಾಡಿದರೂ ಸುಮ್ಮನಾಗುತ್ತಿರಲಿಲ್ಲ. ರಜನಿ...ಅನುಷ....ವರ್ಧನ್ ಅವಳಿಗೆ ತಿಳಿ ಹೇಳುತ್ತಿದ್ದರೂ ಕೇಳದೆ ಅಮ್ಮನನ್ನು ನೋಡಲೇಬೇಕು ಎನ್ನುತ್ತಿದ್ದಾಗ ರೂಮಿನೊಳಗೆ ಬಂದ ಸುಭಾಷ್ ತಂಗಿಯನ್ನು ಬಿಗಿಯಾಗಿ ತಬ್ಬಿಕೊಂಡಾಗ ನಿಧಿ ಧುಕ್ಕುಡಿಸಿಕೊಂಡು ಜೋರಾಗಿ ಅಳಲಾರಂಭಿಸಿದಳು. ಕೊನೆಗೆಲ್ಲರೂ ಸೇರಿ ಅವಳಿಗೆ ಸಮಾಧಾನ ಮಾಡಿದಾಗ.........
ನಿಧಿ......ಅಮ್ಮ ಎಲ್ಲಿದ್ದಾರೆ ಆಂಟಿ ? ಅವರಿಗೇನೂ ಆಗಿಲ್ಲ ತಾನೇ ?
ರಜನಿ.......ಎರಡು ಗುಂಡು ಬಿದ್ದಿದೆ ಕಣಮ್ಮ ಡಾಕ್ಟರ್ ಗುಂಡನ್ನಂತು ತೆಗೆದಿದ್ದಾಗಿದೆ ಆದರಿನ್ನೂ ಅವಳು ಆಪರೇಷನ್ ಥಿಯೇಟರಿನಲ್ಲೇ ಇದ್ದಾಳೆ. ನೀನು ಅಳಬೇಡ ಕಣಮ್ಮ ನಿಮ್ಮಮ್ಮನಿಗೇನೂ ಆಗಲ್ಲ.
ನಿಧಿ.......ಅಪ್ಪ ಚಿನ್ನಿ ಎಲ್ಲಿ ?
ಅನುಷ.......ಇಬ್ಬರೂ ಹೊರಗಿದ್ದಾರೆ ಕಣಮ್ಮ ಚಿನ್ನಿಯೂ ತುಂಬಾ ಅಳುತ್ತಿದ್ದು ಈಗ ಮಲಗಿಕೊಂಡಿದ್ದಾಳೆ.
ವರ್ಧನ್......ನಿಧಿ ನೀನಿಲ್ಲೇ ಮಲಗಿರಮ್ಮ ಅನು ಹೋಗಿ ಚಿನ್ನಿನೂ ಕರೆದುಕೊಂಡು ಬಾರಮ್ಮ ಅವಳೂ ಪಕ್ಕದ ಬೆಡ್ಡಲ್ಲಿ ಮಲಗಲಿ.
ರಜನಿ.......ಮನೆಯವರಿಗೆ ಈ ವಿಷಯ ಹೇಗೆ ಹೇಳುವುದೆಂಬುದೇ ತಿಳಿಯುತ್ತಿಲ್ಲ ಎಲ್ಲರೂ ಫೋನ್ ಮಾಡ್ತಿದ್ರು ಈಗಷ್ಟೆ ನಿಂತಿದೆ.
ಸುಭಾಷ್........ಅವರಿಗೂ ವಿಷಯ ಗೊತ್ತಾಗಿದೆ ಆಂಟಿ ಇನ್ನೇನು ಅವರೆಲ್ಲರೂ ತಲುಪಲಿದ್ದಾರೆ.
ನಿಧಿ.......ಆಂಟಿ ಪ್ಲೀಸ್ ಅಮ್ಮನ ಹತ್ತಿರ ಕರೆದುಕೊಂಡೋಗಿ.
ರಜನಿ......ಅಲ್ಲಿಗ್ಯಾರನ್ನೂ ಬಿಡ್ತಿಲ್ಲ ಕಣಮ್ಮ ಬೆಳಗ್ಗಿನವರೆಗೂ ಸ್ವಲ್ಪ ತಾಳ್ಮೆಯಿಂದಿರು ಡಾಕ್ಟರ್ ಅವರ ಕೆಲಸ ಮಾಡ್ತಿದ್ದಾರೆ.
ನಿಶಾಳನ್ನೆತ್ತಿಕೊಂಡು ಬಂದ ಅನುಷ ಪಕ್ಕದ ಬೆಡ್ಡಿನಲ್ಲಿ ಮಲಗಿಸುತ್ತ ತಾನೂ ಅವಳ ಪಕ್ಕ ಕುಳಿತಳು. ನಿಶಾ ಕಣ್ಣಿನಿಂದ ಹರಿದಿದ್ದ ಕಣ್ಣೀರು ಅವಳ ಕೆನ್ನೆಗಳ ಮೇಲೆಲ್ಲಾ ಗುರುತು ಮೂಡಿಸಿದ್ದು ಅವಳ ಮುಖ ಬಾಡಿ ಹೋಗಿರುವುದನ್ನು ಕಂಡು ಎಲ್ಲರಿಗೂ ದುಃಖವಾಗುತ್ತಿತ್ತು.
* *
* *
ರಾತ್ರಿ 11:30......
ಕಾಮಾಕ್ಷಿಪುರದಿಂದ ಮನೆಯವರೆಲ್ಲರೂ ಆಸ್ಪತ್ರೆಗೆ ತಲುಪಿದ್ದು ಹರೀಶನ ಬಳಿ ಬಂದು ನೀತುಳ ಆರೋಗ್ಯ ವಿಚಾರಿಸಿದರು. ಸುರೇಶ ಅಪ್ಪನನ್ನು ಬಿಗಿಯಾಗಿ ತಬ್ಬಿಕೊಂಡು ಅಳಲಾರಂಭಿಸಿದರೆ ನಯನ ಅವನಿಗೆ ಸಮಾಧಾನ ಮಾಡುತ್ತ ತಾನೂ ಅಳುತ್ತಿದ್ದಳು. ರಶ್ಮಿ...ದೃಷ್ಟಿ ನಮಿತಾ...ನಿಕಿತಾ ಮತ್ತು ಹೆಂಗಸರನ್ನು ನಿಧಿಯಿರುವ ರೂಮಿಗೆ ಕಳುಹಿಸಿದ್ದು ವರ್ಧನ್ ಎಲ್ಲರಿಗೂ ಕೈಮುಗಿದು.....
ವರ್ಧನ್.......ದೆಹಲಿ...ಬಾಂಬೆಯಿಂದ ಸ್ಪೆಷಲಿಸ್ಟುಗಳು ಬಂದಿದ್ದಾರೆ ಏನೂ ಭಯಪಡಬೇಡಿ ದೇವರಿದ್ದಾನೆ ಅಕ್ಕನಿಗೇನೂ ಆಗೋಲ್ಲ.
ಗಿರೀಶ ಅಕ್ಕನ ರೂಮಿಗೆ ಬಂದಾಗ ಪುಟ್ಟ ತಂಗಿಯ ಮುಖವನ್ನೊಡಿ ಆತನ ದುಃಖ ಉಮ್ಮಡಿಸಿ ಅಕ್ಕನನ್ನು ತಬ್ಬಿಕೊಂಡರೆ ನಿಧಿ ಕೂಡ ತಮ್ಮನನ್ನು ಬಿಗಿಯಾಗಿ ಅಪ್ಪಿಕೊಂಡು ಅಳತೊಡಗಿದಳು. ಅವರ ಕಣ್ಣೀರು ನೋಡಿ ಉಳಿದವರೂ ಅಳುತ್ತ ದೇವರಲ್ಲಿ ನೀತುವಿನ ಆರೋಗ್ಯದ ಬಗ್ಗೆ ಪ್ರಾರ್ಥನೆ ಮಾಡುತ್ತ ಇಡೀ ರಾತ್ರಿ ಎಚ್ಚರವಾಗೇ ಕಳೆದರು.
* *
* *
ಶನಿವಾರ ಮುಂಜಾನೆ......
ಸುಭಾಷ್ ಬಲವಂತ ಮಾಡಿ ಎಲ್ಲರಿಗೂ ಕಾಫಿ ತರಿಸಿ ಕುಡಿಸುತ್ತಿದ್ದರೆ ಪಾವನ ಆತನಿಗೆ ಜೊತೆ ನೀಡುತ್ತಿದ್ದಳು. ಇಬ್ಬರಿಗೂ ಒಬ್ಬರೊಬ್ಬರು ಯಾರೆಂಬುದು ಗೊತ್ತಿಲ್ಲದಿದ್ದರೂ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಇತರರ ದುಃಖವನ್ನು ಕಡಿಮೆ ಮಾಡುವುದಕ್ಕೆ ಒಟ್ಟಿಗೆ ಪ್ರಯತ್ನವನ್ನು ಮಾಡುತ್ತಿದ್ದರು. ವರ್ಧನ್ ಕೂಡ ತನ್ನ ಅಫಿಷಿಯಲ್ ಕೆಲಸಗಳನ್ನು ಮುಂದೂಡಿ ನೀತು ಎಚ್ಚರಗೊಳ್ಳುವ ತನಕ ಇಲ್ಲೇ ಉಳಿಯುವುದಕ್ಕೆ ನಿರ್ಧಾರ ಮಾಡಿದ್ದನು.
ಹರೀಶ.......ವರ್ಧನ್ ಇಲ್ಲಿ ನಾವೆಲ್ಲರೂ ಇದ್ದೀವಿ ಯಾರಿಂದಲೇನೂ ಮಾಡಲಿಕ್ಕಾಗಲ್ಲ ಆದರೆ ದೇಶದ ಹಿತರಕ್ಷಣೆ ಮತ್ತು ಕೋಟ್ಯಾಂತರ ಜನರ ಯೋಗಕ್ಷೇಮ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಈಗ ನೀನಿಲ್ಲಿಯೇ ದುಃಖಿಸುತ್ತ ಕುಳಿತರೆ ದೇಶದ ಜನತೆಗಳ ಕಷ್ಟಸುಖ ಯಾರು ನೋಡ್ತಾರೆ ನೀನೋಗಿ ನಿನ್ನ ಕರ್ತವ್ಯ ನಿಭಾಯಿಸು.
ವರ್ಧನ್........ಆದರೆ ಭಾವ ಇಲ್ಲಿ ಅಕ್ಕ......
ನಿಧಿ ಅಪ್ಪನನ್ನು ತಬ್ಬಿಕೊಂಡು ನಿಲ್ಲುತ್ತ........ಚಿಕ್ಕಪ್ಪ ಅಪ್ಪ ಹೇಳಿದ್ದು.. ಸರಿಯಾಗಿದೆ ಇಲ್ಲಿನ ವಿಷಯಗಳನ್ನು ನಾವು ಆಗಾಗ ತಿಳಿಸುತ್ತಲೇ ಇರ್ತೀವಿ ನೀವೂ ಫೋನ್ ಮಾಡ್ತಿರಿ. ನಮ್ಮ ಕಣ್ಣೀರನ್ನೊರೆಸುತ್ತ ನೀವು ದೇಶದ ಜನರನ್ನು ಕಡೆಗಣಿಸಿ ಕೂರುವುದು ಸರಿಯಲ್ಲ.
ಇಬ್ಬರೂ ಹೇಗೋ ಒಪ್ಪಿಸಿದ ನಂತರ ಅವರಿಬ್ಬರ ಮಾತಿಗೆ ವರ್ಧನ್ ದೆಹಲಿಯತ್ತ ಪ್ರಯಾಣ ಬೆಳೆಸಿದನು. ರಾಣಾನನ್ನು ಹತ್ತಿರ ಕರೆದು.....
ರಾಣಾ.......ಅವಳೇ ಯಶೋಮತಿ. ಮಹಾರಾಜರು ಮರಣಿಸಿದ ಬಳಿಕ ಅರಮನೆಯಲ್ಲಿ ಸಹಾಯಕಿಯಾಗಿ ಸೇರಿಕೊಂಡಿದ್ದಾಳೆ. ಯಶೋಮತಿ ಹೇಗಿದ್ದಾಳೆಂಬುದು ಇಲ್ಲಿವರೆಗೆ ನಮ್ಮಲ್ಲಿ ಯಾರಿಗೂ ತಿಳಿದಿರಲಿಲ್ಲ ಜೊತೆಗೆ ಚಂಚಲಾದೇವಿಗೆ ಮಗಳಿದ್ದಾಳೆಂಬ ವಿಷಯ ಕೂಡ ಆರಾಧನ ಬಾಯ್ತೆರೆಯುವ ತನಕ ಗೊತ್ತಿರಲಿಲ್ಲ.
ಹರೀಶ.......ಅವಳ ಕೈಗೆ ಗನ್ ಹೇಗೆ ಬಂತು ?
ವಿಕ್ರಂ ಸಿಂಗ್......ಕೆಲಸಗಾರರ ಬಳಿ ಗನ್ ಇರುವುದಿಲ್ಲ ಅರಮನೆ ಆವರಣದಿಂದ ಅವರಿಗೆ ಹೊರಗೆ ಹೋಗುವುದಕ್ಕೂ ಅವಕಾಶವೇ ಇರಲ್ಲ. ಯಶೋಮತಿಯ ಬಳಿ ಗನ್ ಬರುವುದಕ್ಕೆ ನಮ್ಮ ಅನಿಸಿಕೆ ಪ್ರಕಾರ ಭಾನುಪ್ರತಾಪ್ ಅವರೇ ಸಹಾಯ ಮಾಡಿರಬಹುದು. ಈಕೆ ಮತ್ತು ಭಾನುಪ್ರತಾಪ್ ಮಾತನಾಡುತ್ತಿದ್ದುದನ್ನು ನೋಡಿದವರೂ ಇದ್ದಾರೆ. ಆದರೆ ಅವರಿಬ್ಬರ ಬೇಟಿ ಅನುಮಾನಾಸ್ಪದವಾಗಿ ಎಲ್ಲೂ ನಡೆದಿಲ್ಲ ಅಂತ ರಕ್ಷಕರೂ ಹೇಳಿದ್ದಾರೆ. ಅವರಿಬ್ಬರೂ ಬೇಟಿಯೂ ಸಹ ಅರಮನೆಯಲ್ಲಿ ಅಥವ ಹೊರಗಿನ ಆವರಣದಲ್ಲಿ ಆಗುತ್ತಿತು.
ಹರೀಶ......ವೀರ್ ಸಿಂಗ್ ಹೇಗಿದ್ದಾನೆ ? ಅವನಿಗೂ ಸಹ ಗುಂಡು ಬಿದ್ದಿತ್ತಲ್ಲವಾ ?
ರಾಣಾ....ಬುಲೆಟ್ ಹೊಟ್ಟೆಯ ತುದಿಗೆ ಬಿದ್ದಿತ್ತು ತೆಗೆದು ಬ್ಯಾಂಡೇಜ್ ಮಾಡಿದ್ದಾರೆ ಈಗೇನೂ ಭಯವಿಲ್ಲ. ಮಾತೆಯ ಬದಲು ನಮ್ಮಲ್ಲಿ ಯಾರಿಗೇ ಗುಂಡು ಬಿದ್ದಿದ್ದರೂ ನಮಗೆ ಹೆಮ್ಮೆಯಾಗುತ್ತಿತ್ತು ಆದರೆ ಮಾತೆಗೇ ಬಿದ್ದಿದೆ. ಅವರು ಆರೋಗ್ಯವಂತರಾದರೆ ಅಷ್ಟೇ ಸಾಕು.
ರಾತ್ರಿ ಸ್ವಲ್ಪ ಕಸಿವಿಸಿಗೊಂಡು ಎಚ್ಚರಗೊಳ್ಳುತ್ತಿದ್ದ ನಿಶಾಳನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡ ಸುಮ ತಟ್ಟುತ್ತ ನಿದ್ರೆಗೆ ಜಾರಿಸಿದಳು. ಬೆಳಿಗ್ಗೆ ಎಚ್ಚರಗೊಂಡು ತಾನು ಅತ್ತೆಯ ಮಡಿಲಿನಲ್ಲಿ ಮಲಗಿದ್ದನ್ನು ಕಂಡ ನಿಶಾ ಕಿರುಬೆರಳು ತೋರಿಸಿದಳು. ಸವಿತ ಅವಳನ್ನೆತ್ತಿಕೊಂಡು ಫ್ರೆಶ್ ಮಾಡಿಸಿ ಕರೆತರುವಷ್ಟರಲ್ಲಿ ಸುಭಾಷ್ ತಂಗಿಗಾಗಿ ಕಾಂಪ್ಲಾನ್ ತಂದಿದ್ದನು. ನಿಶಾ ಕುಡಿಯಲ್ಲ ಎಂದು ಹಠ ಮಾಡಿ ರೂಮಿನಿಂದ ಹೊರಗೋಡಿ ಬಂದು ಆಪರೇಷನ್ ಥಿಯೇಟರಿನ ಬಾಗಿಲ ಮುಂದೆ ನಿಂತಳು. ಗಿರೀಶ ತಂಗಿಯನ್ನೆತ್ತಿಕೊಂಡಾಗ ಅಣ್ಣನನ್ನು ನೋಡಿ ಬಾಗಿಯಾಗಿ ತಬ್ಬಿಕೊಂಡು ಅಳುತ್ತ........
ನಿಶಾ......ಅಣ್ಣ ನನ್ನಿ ಮಮ್ಮ ಬೇಕು ನಾನಿ ಮಮ್ಮ ಹತ್ತ ಹೋತೀನಿ.
ಗಿರೀಶ ತಾನು ಅಳುತ್ತಿದ್ದರೂ ತಂಗಿಯನ್ನು ಸಮಾಧಾನಿಸುತ್ತ....... ಅಮ್ಮಂಗೆ ಹುಷಾರಿಲ್ಲ ಚಿನ್ನಿ ಡಾಕ್ಟರ್ ಆಂಟಿ ನೋಡ್ಕೊತಿದ್ದಾರೆ ನೀನು ಅಳ್ಬೇಡ ಕಣಮ್ಮ ಈಗ ಲಾಲ ಕುಡಿ ಆಮೇಲೆ ನಿನ್ನ ಅಮ್ಮನ ಹತ್ತಿರ ಕರ್ಕೊಂಡ್ ಹೋಗ್ತೀನಿ.
ನಿಶಾ ತಲೆ ಅಳ್ಳಾಡಿಸುತ್ತ.......ನನ್ನಿ ಲಾಲ ಬೇಲ ಮಮ್ಮ ಬೇಕು.
ಅಪ್ಪ...ಅಕ್ಕಂದಿರು...ಅತ್ತೆ ಆಂಟಿಯರು ಯಾರೇ ಬಂದು ನಿಶಾಳಿಗೆ ಸಮಾಧಾನ ಮಾಡಿದರೂ ಅವಳು ಸುತಾರಾಂ ಒಪ್ಪದೆ ಅಮ್ಮನನ್ನು ನೋಡಲೇಬೇಕೆಂದು ಹಠ ಹಿಡಿದುಬಿಟ್ಟಳು. ರೂಮಿನೊಳಗಡೆಯೇ ದುಃಖಿಸುತ್ತ ಕುಳಿತಿದ್ದ ಸುರೇಶ ತಂಗಿಯ ಕಿರುಚಾಟ ಕೇಳಿ ಹೊರಗೆ ಬಂದು ಅವಳನ್ನೆತ್ತಿ ತಬ್ಬಿಕೊಂಡನು.
ಸುರೇಶ.......ಚಿನ್ನಿ ಹೀಗೆಲ್ಲ ಹಠ ಮಾಡಬಾರದು ಕಂದ ಅಮ್ಮನಿಗೆ ಜ್ವರ ಬಂದು ತಾಚಿ ಮಾಡ್ತಿದೆ ನೀನು ಗಲಾಟೆ ಮಾಡಿದ್ರೆ ಅಮ್ಮ....
ನಿಶಾ......ಅಣ್ಣ ನನ್ನಿ ಮಮ್ಮ ಬೇಕು.
ಸುರೇಶ......ನೀನು ಲಾಲ ಕುಡಿಯದೆ ತಿಂಡಿ ತಿನ್ನಲಿಲ್ಲ ಅಂದ್ರೆ ಅಮ್ಮ ತುಂಬ ಬೇಜಾರು ಮಾಡ್ಕೊಂಡು ಅಳುತ್ತ ಅಮ್ಮ ಅಳಬೇಕಾ ಚಿನ್ನಿ.
ನಿಶಾ.......ಬೇಲ ಮಮ್ಮ ಅಬೇಲ...ಮಮ್ಮ ಅಬೇಲ.
ಸುರೇಶ.....ಮತ್ತೆ ನೀನು ಲಾಲ ಕುಡಿತೀಯ ತಾನೇ.
ನಿಶಾ......ನಾನಿ ಕುಲಿತೀನಿ ನನ್ನ ಮಮ್ಮ ಬೇಕು.
ಸುರೇಶ....ಮಮ್ಮ ಬರುತ್ತೆ ಚಿನ್ನಿ ಈಗ ನೀನು ಲಾಲ ಕುಡಿ.
ನೀತುವಿನ ಗುಣ ಸುರೇಶನಲ್ಲಿ ನೋಡುತ್ತಿದ್ದು ಎಲ್ಲರೂ ಅಣ್ಣ ತಂಗಿ ಭಾಂಧವ್ಯವನ್ನು ಕಣ್ತುಂಬಿಕೊಂಡರು.
10 ಘಂಟೆ.......
ಸ್ಪೆಷಲಿಸ್ಟ್ ಪ್ರತೀ ಅರ್ಧ ಘಂಟೆಗೂ ನೀತುಳನ್ನು ಮಾನಿಟರಿಂಗ್ ಮಾಡುತ್ತಿದ್ದು ಅವಳ ಹೃದಯಕ್ಕೆ ನಾಟಿದ್ದ ಬುಲೆಟ್ ಪರಿಣಾಮದಿ ಆಗಿರುವ ರಂಧ್ರದಿಂದ ನಿರಂತರ ಸೋರಿಕೆ ಆಗುತ್ತಿರುವ ರಕ್ತವನ್ನು ತಡೆಯಲು ಹರಸಾಹಸ ಮಾಡುತ್ತಿದ್ದರು. ಸರ್ಜನ್ ಹೊರಬಂದು....
ಹಿರಿಯ ಸ್ಪೆಷಲಿಸ್ಟ್ ಸರ್ಜನ್......ನಾವು ನಮ್ಮ ಪ್ರಯತ್ನಗಳನ್ನೆಲ್ಲಾ ಮಾಡ್ತಿದ್ದೀವಿ ಆದರೆ ಹೃದಯದಲ್ಲಿ ಆಗುತ್ತಿರುವ ಬ್ಲೀಡಿಂಗ್ ಸ್ವಲ್ಪ ಹೊತ್ತು ನಿಂತರೂ ಮತ್ತೆ ಪುನಃ ಬ್ಲೀಂಡಿಂಗ್ ಆಗುತ್ತಿದೆ. ನಾವೆಲ್ಲರೂ ರಕ್ತ ನಿಲ್ಲಿಸುವುದಕ್ಕೆ ಕಾರ್ಯತತ್ಪರರಾಗಿದ್ದೀವಿ. ಒಮ್ಮೆ ಹೃದಯದ ಬ್ಲೀಂಡಿಂಗ್ ನಿಂತ ಬಳಿಕವಷ್ಟೇ ನಾವೇನನ್ನಾದರೂ ಹೇಳಬಹುದು.
ನಿಧಿ.....ಬ್ಲೀಡಿಂಗ್ ನಿಂತರೆ ಅಮ್ಮನಿಗ್ಯಾವ ತೊಂದರೆಯಿಲ್ಲ ತಾನೇ.
ಸ್ಪೆಷಲಿಸ್ಟ್.......ಅವರಿಗೆ ಪ್ರಜ್ಞೆತಪ್ಪಿಲ್ಲ ಅಥವ ಅವರೇನೂ ಕೋಮಾ ಸ್ಥಿತಿಗೆ ಹೋಗಿಲ್ಲ ನಾವೇ ಅವರು ಎಚ್ಚರವಾಗಿದ್ದರೆ ಹಾರ್ಟ್ ಮೇಲೆ ಒತ್ತಡ ಜಾಸ್ತಿಯಾಗುತ್ತದೆಂದು ನಿದ್ದೆಗೆ ಇಂಜಕ್ಷನ್ ಕೊಟ್ಟಿದ್ದೀವಿ. ಅವರು ಎಚ್ಚರವಾಗಿದ್ದರೆ ಹೃದಯದಲ್ಲಿ ಆಗುತ್ತಿರುವ ಬ್ಲೀಡಿಂಗ್ ಪ್ರಮಾಣ ಜಾಸ್ತಿಯಾಗಬಹುದು ಹಾಗೇನಾದರೂ ಆದ ಪಕ್ಷದಲ್ಲಿ ಪರಿಸ್ಥಿತಿ ನಮ್ಮ ಕೈ ಮೀರಿ ಹೋಗುತ್ತೆ.
ರೇವಂತ್ ಕೈ ಮುಗಿದು......ಹೇಗಾದರೂ ನನ್ನ ತಂಗಿಯನ್ನು ಕಾಪಾಡಿ ನಮಗಿನ್ನೇನೂ ಬೇಡ.
ವೈದ್ಯರ ಬಳಿ ಮನೆಯವರೆಲ್ಲರೂ ಬೇಡಿಕೊಳ್ಳುತ್ತಿದ್ದು ಅವರಿಗೆಲ್ಲ ಸಮಾಧಾನ ಮಾಡಿ ಮುಂದೆ ಹೊರಟಿದ್ದ ಸರ್ಜನ್ ಕಾಲಿಗೆ ನಿಶಾ ಜೋತುಬಿದ್ದಳು. ಸರ್ಜನ್ ಅವಳ ತಲೆ ಸವರಿದಾಗ ನಿಶಾ ಅವರ ಮುಂದೆ ನಿಂತು ಕೈ ಮುಗಿದು......ನಾನಿ ಮಮ್ಮ ಹತ್ತ ಹೋತೀನಿ ಪೀಚ್...ನನ್ನಿ ಮಮ್ಮ ಬೇಕು....ಎಂದು ಕೇಳಿಕೊಳ್ಳುತ್ತಿರುವುದನ್ನು ನೋಡಿ ಅಲ್ಲಿದ್ದವರೆಲ್ಲರ ಹೃದಯ ಹಿಂಡಿದಂತಾಯಿತು.
ನಿಶಾಳ ತಲೆ ನೇವರಿಸಿದ ಸರ್ಜನ್ ದೂರಿದಿಂದ ನಿಶಾಳಿಗೆ ಅಮ್ಮನನ್ನು ನೋಡಲು ಅವಕಾಶ ನೀಡಿ ಅಲ್ಲಿಂದ ತೆರಳಿದರು. ನಿಶಾ ತಕ್ಷಣ ಸುರೇಶಣ್ಣನ ಕೈ ಹಿಡಿದು ಆಪರೇಷನ್ ಥಿಯೇಟರಿನ ಬಾಗಿಲ ಮುಂದೆ ನಿಂತಳು. ಒಳಗಿದ್ದ ವೈದ್ಯರಲ್ಲೊಬ್ಬರು ಬಂದು ಇಬ್ಬರನ್ನೂ ಒಳಗೆ ಕರೆದೊಯ್ದರೆ ಸುರೇಶ ತಂಗಿಯನ್ನೆತ್ತಿಕೊಂಡು ಒಳಗೆ ಕಾಲಿಟ್ಟನು. ಆಪರೇಷನ್ ಥಿಯೇಟರಿನ ಒಳಗೆ ಖಾಯಂ ಆಗಿ ನಾಲ್ವರು ವೈದ್ಯರು ಮತ್ತಾರು ಜನ ನರ್ಸ್ ಇದ್ದರು. ಸುವ್ಯವಸ್ಥಿತವಾದ ರೂಮಿನ ಮಂಚದ ಮೇಲೆ ನೀತು ಶಾಂತಳಾಗಿ ಮಲಗಿದ್ದು ಅವಳೊಂದು ಕೈಗೆ ಡ್ರಿಪ್ಸ್ ಹಾಕಿದ್ದರೆ ಮತ್ತೊಂದರಿಂದ ರಕ್ತವನ್ನು ಅವಳಿಗೆ ನೀಡಲಾಗುತ್ತಿತ್ತು.
ಮುಖದ ಮೇಲೆ ಆಕ್ಸಿಜನ್ ಮಾಸ್ಕಿದ್ದರೆ ಸುತ್ತಲೂ ಹಲವಾರು ಮಿಷಿನರಿಗಳು ಅವಳನ್ನು ಮಾನಿಟರಿಂಗ್ ಮಾಡುತ್ತಿದ್ದವು. ಸುರೇಶ ಅಮ್ಮನ ಸ್ಥಿತಿ ನೋಡಿ ಕಣ್ಣೀರಿಡುತ್ತಿದ್ದರೆ ನಿಶಾ ಅಮ್ಮ ತನ್ನೊಂದಿಗೆ ಮಾತಾನಾಡ್ತಿಲ್ಲ ತನ್ನನ್ನೆತ್ತಿ ಮುದ್ದಾಡದೆ ಹೀಗೆ ಮಲಗಿರುವುದನ್ನು ಕಂಡು ಅಣ್ಣನನ್ನು ಬಿಗಿಯಾಗಿ ತಬ್ಬಿಕೊಂಡು ಕಣ್ಣೀರು ಸುರಿಸತೊಡಗಿದಳು.
ಆ ದಿನವೂ ನೀತುವಿನ ಆರೋಗ್ಯದಲ್ಯಾವುದೇ ಬದಲಾವಣೆಗಳೂ ಆಗಲಿಲ್ಲ. ರಾತ್ರಿ ಹರೀಶನ ಬಲವಂತಕ್ಕೆ ಹೆಂಗಸರೆಲ್ಲರು ಅರಮನೆಗೆ ತೆರಳಿದರೆ ನಿಶಾ ಹೋಗುವುದಿಲ್ಲವೆಂದು ಹಠ ಮಾಡುತ್ತಿದ್ದು ಕಡೆಗೆ ಅಪ್ಪನ ಮಾತಿಗೊಪ್ಕೊಂಡು ಸುರೇಶಣ್ಣನನ್ನು ಕರೆದುಕೊಂಡು ತಾನು ಅರಮನೆಗೆ ತೆರಳಿದಳು. ಹರೀಶನ ಜೊತೆ ರೇವಂತ್....ಅಶೋಕ ಆಸ್ಪತ್ರೆಯಲ್ಲುಳಿದರೆ ಅಮ್ಮ ಹುಷಾರಾಗುವ ತನಕ ತಾನೆಲ್ಲಿಗೂ ಸಹ ಹೋಗುವುದಿಲ್ಲವೆಂದು ನಿಧಿ ಧೃಢವಾಗಿ ಅಲ್ಲೇ ಉಳಿದರೆ ನಿಕಿತಾ ಅಕ್ಕನಿಗೆ ಜೊತೆಯಾಗುಳಿದಳು.
ಭಾನುವಾರದ ಸಂಜೆ ತನಕವೂ ಪರಿಸ್ಥಿತಿ ಚಿಂತಾಜನಕವಾಗಿ ಮುಂದುವರಿದಿದ್ದು ನೀತು ಹೃದಯದಲ್ಲಿ ಬ್ಲೀಡಿಂಗ್ ನಿಂತು ನಿಂತು ಆಗುತ್ತಲೇ ಮುಂದುವರಿದಿತ್ತು. ರಾಜೀವ್ ರೇವತಿ ಇಬ್ಬರೂ ಮಗಳಿಗೆ ಒದಗಿ ಬಂದಿರುವ ಪರಿಸ್ಥಿತಿಗೆ ಮೂಕರೇ ಆಗಿ ಹೋಗಿದ್ದು ಮೌನವಾಗೇ ಕಣ್ಣೀರು ಹರಿಸುತ್ತಿದ್ದರು. ಮನೆಯ ಸದಸ್ಯರಲ್ಯಾರ ಮುಖದಲ್ಲಿಯೂ ಕೊಂಚವೂ ಗೆಲುವಿರದೆ ತಮ್ಮ ಜೀವನದ ಹೋರಾಟದಲ್ಲಿ ಸೋತಿರುವ ರೀತಿ ಭಾಸವಾಗುತ್ತಿತ್ತು. ಭಾನುವಾರ ಸಂಜೆ ಇಲ್ಲಿ ಕೆಲವರು ಮಾತ್ರವೇ ಉಳಿದು ಮಿಕ್ಕವರು ಕಾಮಾಕ್ಷಿಪುರಕ್ಕೆ ಹಿಂದಿರುಗುವಂತೆ ಹರೀಶ ಸಲಹೆ ನೀಡಿದ ತಕ್ಷಣ ಎಲ್ಲರೂ ಒಕ್ಕೊರಿಲಿನಿಂದ ಅದನ್ನು ತಿರಸ್ಕರಿಸಿಬಿಟ್ಟರು.
ಸೋಮವಾರವೂ ಕಳೆದು ಮಂಗಳವಾರ ಮುಂಜಾನೆ ಸ್ಪೆಷಲಿಸ್ಟ್ ನೀತುಳನ್ನು ಚೆಕಪ್ ಮಾಡಿ ಹೊರಬಂದಾಗ......
ಹರೀಶ.......ಸರ್ ನನ್ನ ಮಡದಿಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆಯಾ ? ಆವಳು ಗುಣಮುಖ ಆಗ್ತಾಳಲ್ಲವಾ ?
ಸ್ಪೆಷಲಿಸ್ಟ್ ನಿಟ್ಟುಸಿರು ಬಿಡುತ್ತ.......ನಾನೀಗೆ ಹೇಳುತ್ತಿರುವೆನೆಂದು ನೀವು ಅನ್ಯತಾ ಭಾವಿಸಬೇಡಿ ಸರ್ ಆದರೆ ಇದೊಂದು ರೀತಿಯ ಪವಾಡ ಇರಬೇಕು. ನಾಲ್ಕು ದಿನಗಳಿಂದ ಹೃದಯದಲ್ಲಿ ನಿರಂತರದಿ ರಕ್ತ ಬ್ಲೀಡಿಂಗ್ ಆಗುತ್ತಿದ್ದರೂ ಸಹ ನಿಮ್ಮ ಮಡದಿ ಸೋಲನ್ನೊಪ್ಪದೆ ಇನ್ನೂ ಜೀವನಕ್ಕಾಗಿ ಹೋರಾಡುತ್ತಿದ್ದಾರೆ. ಇಷ್ಟು ಸಮಯದಿಂದಲೂ ರಕ್ತ ಸೋರಿಕೆಯಾಗಿಯೂ ವ್ಯಕ್ತಿ ಜೀವಂತವಾಗಿರುವುದನ್ನು ನಾನು ಹಿಂದೆ ನೋಡಿರಲಿಲ್ಲ.
ಅವರ ಮಾನಸಿಕ ಸ್ಥೈರ್ಯ ತುಂಬಾನೇ ಗಟ್ಟಿಯಾಗಿದೆ ಆದರೆ ಅವರ ದೇಹ ನಾವು ನೀಡುತ್ತಿರುವ ಯಾವ ಚಿಕಿತ್ಸೆಗೂ ಸ್ಪಂಧಿಸುತ್ತಿಲ್ಲ. ಅವರ ಉಸಿರಾಟ ಸಾಮಾನ್ಯವಾಗಿರುವ ರೀತಿ ನಾವು ನೋಡಿಕೊಳ್ಳುತ್ತಿದ್ದೀವಿ ಆದರೆ ಅವರ ಹೃದಯದಲ್ಲಿನ ಬ್ಲೀಡಿಂಗ್ ಮಾತ್ರ ನಿಲ್ಲುತ್ತಿಲ್ಲ. ನಾವು ನೀಡುತ್ತಿರುವ ಮೆಡಿಸಿನ್ಸ್ ಪ್ರಭಾವದಿಂದ ಹಾರ್ಟಿನ ಬ್ಲೀಡಿಂಗ್ ನಿಲ್ಲಬೇಕಾಗಿತ್ತು ಆದರೆ ಹಾಗೆ ಆಗುತ್ತಿಲ್ಲ.
ರವಿ......ಡಾಕ್ಟರ್ ನನ್ನ ತಂಗಿಯಿನ್ನೂ ಅಪಾಯದಲ್ಲಿದ್ದಾಳಾ ಪ್ಲೀಸ್ ಸರ್ ಅವಳನ್ನು ಉಳಿಸಿಕೊಡಿ.
ವಿಕ್ರಂ......ಡಾಕ್ಟರ್ ನಿಮ್ಮ ಕಾಲಿಗೆ ಬೀಳ್ತೀನಿ ಆದರೆ ನನ್ನ ತಂಗಿಯ ಪ್ರಾಣ ಉಳಿಸಿರಿ.
ವರ್ಧನ್ ಕೂಡ ಹಿಂದಿರುಗಿ ಬಂದಿದ್ದು ಅವನನ್ನೂ ಸೇರಿಸಿ ಮನೆಯ ಹಿರಿಯರು ಮತ್ತು ಮಕ್ಕಳೆಲ್ಲರೂ ವೈದ್ಯರೆದುರಿಗೆ ಕೈ ಮುಗಿಯುತ್ತ ನೀತುಳನ್ನು ಉಳಿಸಿಕೊಡುವಂತೆ ಬೇಡಿಕೊಂಡರು. ಇಷ್ಟೊಂದು ಪ್ರೀತಿ ಆಪ್ಯಾಯತೆ ನೋಡಿ ವೈದ್ಯರ ತಂಡದವರು ದುಃಖಿತರಾಗಿ ಇವರಿಗಾಗಿ ತಾವೇನನ್ನೂ ಮಾಡಲಾಗುತ್ತಿಲ್ಲವಲ್ಲ ಎಂದು ತಮ್ಮನ್ನು ತಾನೇ ಅಸಹಾಯಕ ಸ್ಥಿತಿಯಲ್ಲಿ ನೋಡಿಕೊಳ್ಳುತ್ತಿದ್ದರು.
ಹಿರಿಯ ಸ್ಪೆಷಲಿಸ್ಟ್.......ನಾವು ನಿಮಗೆ ಏನೇನೋ ಹೇಳಿ ಸುಳ್ಳಿನ ಭರವನೆಗಳನ್ನು ನೀಡುವುದಿಲ್ಲ ಆದರೆ ನಾವೆಲ್ಲರೂ ನಮ್ಮ ಶಕ್ತಿ ಮೀರಿ ಪ್ರಯತ್ನ ಮಾಡ್ತಿದ್ದೀವಿ ಕೊನೆಯಲ್ಲಿ ನಾವೂ ಮನುಷ್ಯರಲ್ವಾ ನಮ್ಮಿಂದಾಗುವುದನ್ನು ಮಾಡಬಹುದು. ನಿಮ್ಮೆಲ್ಲರ ಸಂಕಟಗಳು ನಮಗೆ ಅರ್ಥವಾಗುತ್ತೆ ಆದರೆ ನಮ್ಮ ಮೆಡಿಸಿನ್ನುಗಳಿಗೆ ಅವರ ದೇಹ ಸ್ಪಂಧಿಸುತ್ತಲೇ ಇಲ್ಲ. ಇನ್ನು 24 ಘಂಟೆಗಳಲ್ಲಿ ರಕ್ತದ ಬ್ಲೀಡಿಂಗ್ ನಿಲ್ಲಬೇಕಿದೆ ಅವರ ಹಾರ್ಟ್ ಕೂಡ ಇದರಿಂದಾಗಿ ಒತ್ತಡದಲ್ಲಿದೆ. ಇದೇ ಪರಿಸ್ಥಿತಿ ಮುಂದಿನ ಮುಂದಿನ 48 ಘಂಟೆಗಳಲ್ಲಿಯೂ ಸಹ ಮುಂದುವರಿದರೆ ಅವರು ಬದುಕುಳಿಯುವ ಸಾಧ್ಯತೆ 1% ಗಿಂತಲೂ ಕಡಿಮೆ. ನಾವೆಲ್ಲರೂ ನಮ್ಮ ಕಡೆಯಿಂದೇನು ಮಾಡಬಹುದಿತ್ತೋ ಅದೆಲ್ಲವನ್ನೂ ಮಾಡುತ್ತಿದ್ದೇವೆ ಇನ್ನೇನಿದ್ದರೂ ದೇವರು ಪವಾಡವೇ ಮಾಡಬೇಕಾಗಿದೆ.
ವೈದ್ಯರ ಮಾತನ್ನು ಕೇಳಿ ಮನೆಯವರ ತಲೆಯ ಮೇಲೆ ಬರಸಿಡಿಲು ಬಡಿದಂತಾಗಿ ಪ್ರತಿಯೊಬ್ಬರೂ ದುಃಖಸಾಗರದಲ್ಲಿ ಮುಳುಗಿದರು.
ಮಂಗಳವಾರ ರಾತ್ರಿ ಹೊತ್ತಿನಷ್ಟೊತ್ತಿಗೆಲ್ಲ ಮನೆಯವರ ಮುಖದಲ್ಲಿ ನಿರಾಸೆ ಮತ್ತು ಘನಘೋರ ದುಃಖ ಛಾಯೆ ಮನೆಮಾಡಿತ್ತು. ಸವಿತಾಳ ಮಡಿಲಲ್ಲಿ ಸದ್ದು ಮಾಡದೆ ಕುಳಿತಿದ್ದ ನಿಶಾಳ ಮುಖದಲ್ಲಿ ಮೊದಲಿನ ಮುಗ್ದ ಸೌಂದರ್ಯವಿರದೆ ಕಳೆಗುಂದಿದ್ದು ಸಂಪೂರ್ಣ ಬಾಡಿ ಹೋಗಿ ಕಣ್ಣಿನಿಂದ ಕಂಬನಿ ಸುರಿಯುತ್ತಲಿತ್ತು. ಮನೆಯರು ಈ ದುಃಖಭರಿತ ಸಮಯದಲ್ಲಿ ಸರಿಯಾಗಿ ಊಟ ನಿದ್ರೆ ಮಾಡದೇ ತುಂಬ ಬಳಲಿ ಹೋದವರಂತೆ ಕಾಣಿಸುತ್ತಿದ್ದರು. ಘಟನೆಯು ನಡೆದ ನಾಲ್ಕು ದಿನಗಳ ನಂತರ ಗೋವಿಂದಾಚಾರ್ಯರು...ದೇವಾನಂದರು ಮತ್ತು ಶಿವರಾಮಚಂದ್ರರು ಆಸ್ಪತ್ರೆಗೆ ಆಗಮಿಸಿದರು. ಮೂವರಿಗೂ ಕೈ ಮುಗಿದು ಏನನ್ನಾದರೂ ಹೇಳುವ ಮುಂಚೆಯೇ.....
ಆಚಾರ್ಯರು......ನಮಗೆಲ್ಲವೂ ತಿಳಿದಿದೆ ಹರೀಶ ಸಾವು ಬದುಕಿನ ನಡುವೆ ಮಗಳು ನೀತು ನಾಲ್ಕು ದಿನಗಳಿಂದಲೂ ಹೋರಾಡ್ತಿದ್ದಾಳೆ ಆದರೆ ನಾವ್ಯಾವುದೇ ರೀತಿ ಸಹಾಯ ಮಾಡಲಾಗುತ್ತಿಲ್ಲ ಎಂಬಂತ ಕೊರಗೂ ನಮಗಿದೆ.
ರಾಜೀವ್......ಗುರುಗಳೇ ನೀವೇ ಹೀಗೆ ಹೇಳಿಬಿಟ್ಟರೆ ನಮಗಿನ್ಯಾರು ದಿಕ್ಕು ಹೇಗಾದರೂ ನನ್ನ ಮಗಳನ್ನು ಉಳಿಸಿಕೊಡಿ. ಈ ನನ್ನ ಕಂದನ ಮುಖ ನೋಡಿ ಗುರುಗಳೇ ನಾಲ್ಕು ದಿನಗಳಿಂದ ಸರಿಯಾಗಿ ಊಟ ನಿದ್ರೆಯನ್ನೂ ಮಾಡ್ತಿಲ್ಲ ಯಾವಾಗಲೂ ಅಮ್ಮ ಬೇಕೆಂದು ಕಣ್ಣೀರು ಸುರಿಸುತ್ತಾ ಅಳುತ್ತಿರುತ್ತಾಳೆ.
ಆಚಾರ್ಯರು......ನಮಗೆ ಅರಿವಿದೆ ಆದರೆ ನಮ್ಮ ಬಳಿ ನೀತುವಿನ ಪ್ರಾಣ ಉಣಿಸುವುದಕ್ಕೆ ಬೇಕಾಗಿರುವ ಔಷಧಿಗಳಿಲ್ಲ ಆದರೆ ಅದು ಯಾರ ಬಳಿ ಇದೆಯೆಂಬುದು ಮಾತ್ರ ತಿಳಿದಿದೆ.
ರೇವಂತ್.......ಗುರುಗಳೇ ಅದ್ಯಾರ ಬಳಿ ಇದೆಯಂತ ಹೇಳಿ ಅವರ ಕಾಲಿಗೆ ಬಿದ್ದು ಬೇಡಿಕೊಂಡಾದರೂ ತರುತ್ತೇನೆ.
ನಿಧಿ.....ಗುರುಗಳೇ ಎಷ್ಟೇ ಕಷ್ಟವಾದರೂ ಸರಿ ಅಮ್ಮನನ್ನು ನಾವು ಬದುಕಿಸಲೇಬೇಕು ನಾನೇನು ಮಾಡಬೇಕೆಂದು ಹೇಳಿ ನಾನು ನನ್ನ ಪ್ರಾಣವನ್ನಾದರೂ ನೀಡಲು ಸಿದ್ದಳಿರುವೆ.
ಆಚಾರ್ಯರು.....ಯಾರೂ ಅಧೀರರಾಗಬೇಡಿ ತಾಳ್ಮೆಯಿಂದಿರಿ ಆ ಔಷಧಿ ಹೊಂದಿರುವವರು ಎಲ್ಲಿದ್ದಾರೆಂದು ನಮಗೆ ತಿಳಿದಿಲ್ಲ ಆದರೆ ಅವರನ್ನು ಸಂಪರ್ಕಿಸುವ ಮಾರ್ಗ ಗೊತ್ತಿದೆ. ಮಗಳೇ ಸುಮ ನಾಳೆ ಮುಂಜಾನೆ ನಾಲ್ಕು ಘಂಟೆ ಹೊತ್ತಿಗೆ ನಿಶಾಳನ್ನು ಶುಭ್ರಳಾಗಿಸಿ ಬಿಳೀ ಬಣ್ಣದ ವಸ್ತ್ರಧಾರಣೆ ಮಾಡಾಸಿ ಅರಮನೆಯಲ್ಲಿ ಮಂದಿರದೊಳಗೆ ಕರೆದುಕೊಂಡು ಬಾರಮ್ಮ.
ಅಲ್ಲಿ ನಿಶಾಳಿಂದಲೇ ಒಂದು ಕಾರ್ಯ ಮಾಡಿಸಬೇಕಿದೆ ಆಗಲೇ ನೀತುವಿನ ಪ್ರಾಣ ರಕ್ಷಿಸುವವರನ್ನು ನಾವು ಸಂಪರ್ಕಿಸಲು ಸಾಧ್ಯವಾಗೋದು. ಮಂದಿರದಲ್ಲಿ ನಾವು ಮತ್ತು ನಿಶಾಳನ್ನು ಬಿಟ್ಟು ಬೇರಾರಿಗೂ ಪ್ರವೇಶವಿರುವುದಿಲ್ಲ. ಎಲ್ಲರೂ ಪರಮಶಿವ ಮತ್ತು ಜಗನ್ಮಾತೆಯನ್ನು ಆರಾಧಿಸಿಕೊಳ್ಳಿ ಮುಂಜಾನೆ ಎಲ್ಲವೂ ಶುಭವಾಗಲೆಂದು. ಹರೀಶ ಮಹಿಳೆಯರನ್ನು ಅರಮನೆಗೆ ಕಳುಹಿಸಿಬಿಡು ಅವರಿಲ್ಲೇ ಉಳಿಯುವ ಅವಶ್ಯಕತೆಯಿಲ್ಲ.
ನಿಧಿ.......ಅಮ್ಮ ಗುಣಮುಖಳಾಗುವ ತನಕ ನಾನಿಲ್ಲಿಂದ ಹೊರಗೆ ಕದಲುವುದಿಲ್ಲ ಗುರುಗಳೇ ಕ್ಷಮಿಸಿ ನಿಮ್ಮಾಜ್ಞೆಯನ್ನು ಮೀರುತ್ತಿದ್ದೀನಿ.
ಆಚಾರ್ಯರು.......ಆಗಲಿ ಮಗಳೇ ನಿನ್ನಿಚ್ಚೆ. ನೀತು ನಿನ್ನ ಪ್ರಾಣ ಸ್ನೇಹಿತೆ ಎಂಬುದು ಗೊತ್ತಿದೆ ಶೀಲಾ ಆದರೆ ಯಾವ ಮಗುವು ಈ ಭೂಮಿಗೆ ಬರುವುದಕ್ಕೆ ನಿನ್ನ ಗೆಳತಿ ಕಾರಣಳಾಗಿರುವವಳೋ ಆ ಮಗುವನ್ನೇ ನೀನಿಂತಹ ಸಮಯದಲ್ಲಿ ನಿರ್ಲಕ್ಷಿಸಿದರೆ ನಿನ್ನ ಗೆಳತಿಗೆ ಸಂತೋಷವಾಗುತ್ತಾ ? ನಾಳೆ ನೀನು ಸುಕನ್ಯಾ ಆಸ್ಪತ್ರೆಗೆ ಬರುವ ಬದಲಿಗೆ ಅರಮನೆಯಲ್ಲೇ ಉಳಿದುಕೊಳ್ಳುವುದು ಸೂಕ್ತ ಇವರಿಬ್ಬರ ಜೊತೆ ನೀವೂ ಕೂಡ......ಎಂದು ರೇವತಿಯವರಿಗೆ ಸೂಚಿಸಿದರು.
* *
* *
ಬುಧವಾರ......
ಮುಂಜಾನೆ ಮೂರುವರೆ ಹೊತ್ತಿಗೆ ಸುಮ ಏಬ್ಬಿಸಿದಾಗ ಸ್ವಲ್ಪವೂ ತಂಟೆ ಮಾಡದೆ ಶುಭ್ರಳಾಗಿ ಅತ್ತೆ ಜೊತೆ ಸ್ನಾನ ಮುಗಿಸಿ ರೆಡಿಯಾದ ನಿಶಾ ಅರಮನೆಯ ದೇವಸ್ಥಾನಕ್ಕೂ ಬಂದಳು ಆಚಾರ್ಯರು ತಮ್ಮ ಏದುರಿನ ಆಸನದಲ್ಲಿ ನಿಶಾಳನ್ನು ಕೂರಿಸಿ ಹೊರಗಿರುವಂತೇಳಿದಾಗ
ನಿಶಾಳನ್ನು ಕೂರಿಸಿದ ಸುಮ........ಕಂದ ಇಲ್ಲಿ ಕೂತು ಮಾಮಿಯ ಪೂಜೆ ಮಾಡು ಗುರುಗಳೇನು ಹೇಳ್ತಾರೋ ಹಾಗೆ ಮಾಡು ಕಂದ ನಾನು ಆಚೆ ಇರ್ತೀನಿ.
ನಿಶಾ ಮೌನವಾಗಿಯೇ ತಲೆಯಾಡಿಸಿದರೆ ಸುಮ ಅಲ್ಲಿಂದ ಹೊರಗೆ ಬಂದು ಪರಾಂಗಣ ತಲುಪಿದಾಗಲ್ಲಿ ರೇವತಿ....ಅನುಷ...ರಜನಿ... ಪ್ರೀತಿ....ಶೀಲಾ....ಸವಿತಾ ಮೊದಲೇ ಕುಳಿತಿದ್ದರು.
ಆಚಾರ್ಯರು.......ನಿನ್ನ ಅಮ್ಮನಿಗೆ ಹುಷಾರಿಲ್ಲವಾ ಮಗಳೇ
ನಿಶಾ ಕಣ್ಣೀರು ಸುರಿಸುತ್ತ.......ನನ್ನಿ ಮಮ್ಮ ಬೇಕು.
ಆಚಾರ್ಯರು ಮಗುವಾನ ಕಣ್ಣೀರನ್ನೊರೆಸಿ ಅವಳ ಬಲಗೈಯಲ್ಲಿನ ಅಂಗೈನಲ್ಲಿ ನಿಶಾಳ ಕೊರಳಿನಲ್ಲಿರುವ ॐ ಕಾರದ ಡಾಲರನ್ನಿಟ್ಟು..... ಇದನ್ನು ಭದ್ರವಾಗಿ ಹಿಡಿದುಕೊಂಡು ॐ ನಮಃ ಶಿವಾಯಃ ಅಂತ ಹೇಳ್ತಿರು ಕಂದ ಅಮ್ಮ ಬೇಗ ಹುಷಾರಾಗ್ತಾಳೆ.
ನಿಶಾ ಸರಿಯೆಂದು ತಲೆಯಾಡಿಸಿ ಬಲಗೈ ಮುಷ್ಠಿಯಲ್ಲಿ ಡಾಲರನ್ನು ಹಿಡಿದುಕೊಂಡು ಜೋರಾಗಿ ॐ ನಮಃ ಶಿವಾಯಃ ಹೇಳತೊಡಗಿದರೆ ಅವಳ ಎಡಗೈ ಹಸ್ತವನ್ನು ತಮ್ಮೆರಡೂ ಕೈಗಳಲ್ಲಿ ತೆಗೆದುಕೊಂಡು ಆಚಾರ್ಯರು ಅವಳ ಮೂಲಕ ಔಷಧಿ ಹೊಂದಿರುವವರನ್ನು ಸಂರ್ಪಕಿಸಲು ಮಂತ್ರೋಚ್ಚಾರ ಮಾಡುತ್ತ ಪ್ರಯತ್ನಿಸುತ್ತಿದ್ದರು. ಕೆಲ ಹೊತ್ತಿನ ನಂತರ ಆಚಾರ್ಯರ ಮುಖದಲ್ಲಿ ಮುಗುಳ್ನಗೆ ಮೂಡಿದ್ದು ನಿಶಾಳನ್ನು ಕರೆದುಕೊಂಡು ದೇವರ ಗುಡಿಯಿಂದಾಚೆ ಬಂದಾಗ.......
ಶೀಲಾ.......ಏನಾಯ್ತು ಗುರುಗಳೇ ಅವರನ್ನು ಸಂಪರ್ಕಿಸುವುದಕ್ಕೆ ಸಾಧ್ಯವಾಯಿತಾ ?
ಆಚಾರ್ಯರು.......ನೀತುವಿನ ಅನಾರೋಗ್ಯದ ಬಗ್ಗೆ ನಾನ್ಯಾರಿಗೆ ಸುದ್ದಿ ತಲುಪಿಸಲು ಪ್ರಯತ್ನಿಸುತ್ತಿದ್ದೆನೋ ಆ ಋಷಿ ಮುನಿಗಳಿಗೆ ನಾಲ್ಕು ದಿನಗಳ ಹಿಂದೆಯೇ ನಿಶಾಳ ಮೂಲಕ ಸುದ್ದಿಯು ತಲುಪಿದೆ. ಇವಳು ಅವರನ್ನೇಗೆ ಸಂಪರ್ಕಿಸಿದಳೆಂಬುದು ನಮಗೆ ತಿಳಿಯಲಿಲ್ಲ ಆದರೆ ಅವರಿಗೆ ವಿಷಯ ತಿಳಿಯುತ್ತಲೇ ತಮ್ಮ ಶಿಷ್ಯನ ಜೊತೆಗೂಡಿ ಕೆಲವು ಗಿಡಮೂಲಿಕೆ ಮತ್ತು ಬೇರುಗಳನ್ನು ಹುಡುಕಿತಂದು ನೀತು ಪ್ರಾಣರಕ್ಷಣೆಗೆ ಬೇಕಾದ ಔಷಧಿಯನ್ನು ತಯಾರಿಸಿ ನಮ್ಮ ಕಡೆಗೇ ಪ್ರಸ್ಥಾನಿಸಿದ್ದಾರೆ. ಅವರು ಆಸ್ಪತ್ರೆಗೆ ಬಂದಾಗ ಅಲ್ಲಿ ನಿಶಾ ಇರ್ಬೇಕು ಈ ಮಗುವಿಗೋಸ್ಕರ ಇವಳ ತಾಯಿಯನ್ನು ಕಾಪಾಡಲು ಅವರು ಬರುತ್ತಿರುವುದು.
ಸವಿತಾ......ಗುರುಗಳು ನೀವು ಅಪ್ಪಣೆ ನೀಡಿದರೆ ನಾನೀಗಲೇ ನಿಶಾ ಜೊತೆ ಆಸ್ಪತ್ರೆಗೆ ತೆರೆಳುವೆ.
ಸುಮೇರ್ ಸಿಂಗ್......ಗುರುಗಳೇ ಕಾರು ಸಿದ್ದವಾಗಿದೆ ಬನ್ನಿ.
ನಿಶಾ.....ತಮ್ಮ ತಾಚಿ ಮಾತು ಮಮ್ಮ.....ಎಂದು ಶೀಲಾಳ ಮುಂದೆ ನಿಂತು ಕೇಳಿದಾಗವಳು ಮಗಳನ್ನೆತ್ತಿಕೊಂಡು ಕಣ್ಣೀರಿಟ್ಟರೆ ನಿಶಾಳೂ ಅವಳನ್ನು ಬಿಗಿದಪ್ಪಿಕೊಂಡು ಒಂದೆರಡು ನಿಮಿಷ ಅತ್ತಳು.
ನಿಶಾಳ ಜೊತೆ ಸುಮ... ಸವಿತಾ ಹಾಗು ಆಚಾರ್ಯರು ಆಸ್ಪತ್ರೆಗೆ ತೆರಳಿದ್ದು ಬರುತ್ತಿರುವ ಋಕ್ಷಿ ಮುನಿಗಳ ಬಗ್ಗೆ ರಕ್ಷಕರಿಗೆ ಸೂಚೆನೆಯ ಕೊಟ್ಟು ಅವರನ್ನು ಆದರದಿಂದ ಒಳಗೆ ಬಿಡುವಂತೇಳಿದರು. ಇವರು ಆಸ್ಪತ್ರೆ ತಲುಪಿದ ಕೆಲ ಹೊತ್ತಿನಲ್ಲೇ ದಿವ್ಯ ತೇಜಸ್ಸುಳ್ಳ 95—100 ವರ್ಷದವರಾಗಿದ್ದ ಋಷಿ ಮುನಿವರ್ಯಯಾದ ವ್ಯಕ್ತಿ ತಮ್ಮ ಶಿಷ್ಯನ ಜೊತೆ ಆಗಮಿಸಿದರು. ಎಲ್ಲರೂ ಮುನಿವರ್ಯರಿಗೆ ವಂಧಿಸಿದಾಗ ಅವರು ಗೋವಿಂದಾಚಾರ್ಯರನ್ನು ನೋಡಿ ಮುಗುಳ್ನಕ್ಕು ಏನೂ ಆಗಲ್ಲವೆಂದು ಭರವಸೆಯನ್ನು ನೀಡಿದರು. ಅಪ್ಪನ ತೋಳಿನಲ್ಲಿದ್ದ ನಿಶಾಳ ತಲೆ ಮೇಲೆ ಕೈಯಿಟ್ಟು ಆಶೀರ್ವಧಿಸುತ್ತ.......
ಮುನಿವರ್ಯ.......ನಿನ್ನ ತಾಯಿಗೋಸ್ಕರ ನಮ್ಮನ್ನು ಕಾಡಿನಿಂದ ಈ ನಾಡಿಗೆ ಬರುವುದಕ್ಕೆ ವಿವಶರನ್ನಾಗಿ ಮಾಡಿಬಿಟ್ಟೆಯಾ ಮಗಳೇ. ಕೀರ್ತಿವಂತೆ...ಬುದ್ದಿವಂತೆ....ಆರೋಗ್ಯವಂತೆ ಮತ್ತು ಯಶಸ್ವಿಯಾಗಿ ಸುಖ ಸಂತೋಷ ಸಮೃದ್ದಿಯಿಂದ ಬಾಳಮ್ಮ. ಗೋವಿಂದಾಚಾರ್ಯ ಈ ಮಗುವಿನ ತಾಯಿಗೆ ನಾವು ಔಷಧಿ ನೀಡುವ ಸಮಯದಲ್ಲಿ ಈ ಮಗು ಸಹ ಜೊತೆಯಲ್ಲಿರಬೇಕಾದದ್ದು ಅವಶ್ಯಕ.
ಆಚಾರ್ಯರು......ನಿಮ್ಮ ಆದೇಶದ ಪಾಲನೆಯಾಗುತ್ತೆ ಮುನಿಗಳೇ ನಿಶಾಳನ್ನು ಒಳಗೆ ಹೋಗುವುದಕ್ಕೆ ಕಳುಹಿಸು ಹರೀಶ.
ಹರೀಶ.......ಕಂದ ಇವರ ಜೊತೆ ಅಮ್ಮನ ಹತ್ತಿರ ಹೋಗಮ್ಮ ಇವರೇನು ಹೇಳ್ತಾರೋ ಹಾಗೇ ಮಾಡು.
ನಿಶಾ ತಲೆಯಾಡಿಸಿ ಆತು ಪಪ್ಪ ಎಂದೇಳಿ ಮುನಿಗಳು ಮತ್ತವರ ಶಿಷ್ಯನ ಜೊತೆ ನೀತುವಿನ ಚಿಕಿತ್ಸೆ ನಡೆಯುತ್ತಿದ್ದ ಐಸಿಯು ಒಳಗಡೆ ಹೋದಳು.
ಕಥೆ ಅಂತು ರೋಚಕ, ದಯವಿಟ್ಟು ಮುಂದುವರಿಯಲಿ
ReplyDelete